ಬೆಂಗಳೂರು: ನೆಡ್ಲೆ ಶ್ರೀ ರಾಮಚಂದ್ರ ಭಟ್ ಮತ್ತು ಕಲಾರಾಮ ವಿಭಾಗದ ಪ್ರಾಯೋಜಕತ್ವದಲ್ಲಿ ದಿನಾಂಕ 16.12.18ರಂದು ಸಂಜೆ 6.30ರಿಂದ 9 ಗಂಟೆಯವರೆಗೆ ಭಕ್ತಿಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಶ್ರೀ ಸಿದ್ದಾರ್ಥ ಬೆಳ್ಮಣ್ಣು ಅವರ ಸುಶ್ರಾವ್ಯ ಗಾಯನಕ್ಕೆ ಹಾರ್ಮೋನಿಯಂನಲ್ಲಿ ಪಂಡಿತ್ ಶ್ರೀ ನರಸಿಂಹ ಕುಲಕರ್ಣಿ, ತಬಲದಲ್ಲಿ ಶ್ರೀ ರೂಪಕ್ ಕಲ್ಲೂರ್ಕರ್, ಪಕ್ವಾಜ್ ನಲ್ಲಿ ಶ್ರೀ ಶ್ರೀದತ್ತ ಜೋಶಿ, ತಾಳದಲ್ಲಿ ಶ್ರೀ ಶ್ರೀವತ್ಸ ಸಹಕರಿಸಿದರು.