ಬಿಜೆಪಿ ಮುಖಂಡರು ಗೋಶಾಲೆಯಲ್ಲಿ ಮಾಡಿದ್ದೇನು?

ಸುದ್ದಿ

ಮಾಲೂರು: ಶ್ರೀ ರಾಘವೇಂದ್ರ ಗೋಆಶ್ರಮದಲ್ಲಿ ಗೋವುಗಳ ಮಧ್ಯದಲ್ಲಿ ಬಿಜೆಪಿ ಮುಖಂಡರೊಬ್ಬರು ತಮ್ಮ ಹುಟ್ಟು ಹಬ್ಬವನ್ನು ಮಂಗಳವಾರ ವಿಶೇಷವಾಗಿ ಆಚರಿಸಿಕೊಂಡಿದ್ದಾರೆ.

 

ಮಾಲೂರು ಬಿಜೆಪಿ ಮುಖಂಡರಾದ ಹೂಡಿ ವಿಜಯಕುಮಾರ್ ಅವರು ಜನ್ಮದಿನದ ಅಂಗವಾಗಿ ಶ್ರೀ ರಾಘವೇಂದ್ರ ಗೋಆಶ್ರಮಕ್ಕೆ ಮೂವತ್ತಕ್ಕೂ ಹೆಚ್ಚು ತಮ್ಮ ಬೆಂಬಲಿಗರೊಂದಿಗೆ ಬೇಟಿ ನೀಡಿದರು.

ವಿಶೇಷವಾಗಿ ಜನ್ಮದಿನ ಆಚರಿಸಿಕೊಳ್ಳುವ ಹಂಬಲ ವ್ಯಕ್ತ ಪಡಿಸಿದ ಇವರು ಗೋಪೂಜೆ ಹಾಗೂ ಶ್ರೀ ಸಿದ್ಧಾಂಜನೇಯ ಸ್ವಾಮಿಗೆ ಪೂಜೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಗೋವುಗಳಿಗೆ ಮೇವು ನೀಡುವ ಕಾರ್ಯಕ್ಕೆ ಮುಂದಾಗಿರುವ ಇವರು ಲಕ್ಷಕೂ ಅಧಿಕ ಮೌಲ್ಯದ ೧೦೦ ಚೀಲ ಪಶುಆಹಾರವನ್ನು ನೀಡಿದರು.

ಗೋಶಾಲೆಯ ವತಿಯಿಂದ ಎಲ್ಲರಿಗೂ ಲಘು ಉಪಹಾರವನ್ನು ವ್ಯವಸ್ಥೆ ಮಾಡಲಾಗಿತ್ತು. ಮಾಲೂರಿನ ಯುವ ಮುಖಂಡ ವೆಂಕಟೇಶ ಗೌಡ, ಗೋಆಶ್ರಮದ ರಾಮಚಂದ್ರ ಅಜ್ಜಕಾನ, ಕೃಷ್ಣ ಭಟ್, ಲಕ್ಷ್ಮೀಶ, ಅನಂತ ಹೆಗಡೆ ಉಪಸ್ಥಿತರಿದ್ದರು.

Author Details


Srimukha

Leave a Reply

Your email address will not be published. Required fields are marked *