ಫಕೀರೇಶ್ವರ ಸಂಸ್ಥಾನಮಠದ ಶ್ರೀಗಳ ಬೇಟಿ

ಸುದ್ದಿ

ಹೊಸನಗರ: ಶ್ರೀರಾಮಚಂದ್ರಾಪುರಮಠದ ವತಿಯಿಂದ ಭಾರತೀಯ ಗೋತಳಿಗಳ ಸಂವರ್ಧನಾ ಕೇಂದ್ರವಾದ ಮಹಾನಂದಿ ಗೋಲೋಕಕ್ಕೆ ಗದಗ ಜಿಲ್ಲೆಯ ಶಿರಹಟ್ಟಿ ಶ್ರೀ ಫಕೀರೇಶ್ವರ ಸಂಸ್ಥಾನಮಠದ ಶ್ರೀ ಫಕೀರ ಸಿದ್ಧರಾಮ ಸ್ವಾಮಿಗಳು ಬೇಟಿ ನೀಡಿದರು.

 

ಈ ಸಂದರ್ಭದಲ್ಲಿ ಮಾತನಾಡಿದ ಅವರು ಗೊಶಾಲೆಯಲ್ಲಿ ಕಾಲ ಕಳೆದದ್ದು ಸಂತಸವನ್ನು ತಂದಿದೆ. ಇಲ್ಲಿರುವ ಉತ್ಪನ್ನಕ್ಕಿಂತ ಶ್ರಮವೇ ಜಾಸ್ತಿ ಇದೆ. ಭಾರತೀಯ ಗೋಸಂತತಿಗಳನ್ನ ಉಳಿಸಿ ಬೆಳೆಸುವ ಶ್ರೀಗಳವರ ಪ್ರಯತ್ನ ಬಹು ಶ್ಲಾಘನೀಯ ಎಂದು ತಿಳಿಸಿದ್ದಾರೆ.

 

ಮಹಾನಂದಿ ಗೋಲೋಕದ ಉಸ್ತುವಾರಿ ಕೆ. ಪಿ. ಎಡಪ್ಪಾಡಿ, ಗೋಶಾಲೆಯ ಜಿ. ಟಿ. ದಿವಾಕರ್ ಅವರು ಗೋಶಾಲೆಗಳ ಮಾಹಿತಿಯನ್ನು ನೀಡಿದರು.

Author Details


Srimukha

1 thought on “ಫಕೀರೇಶ್ವರ ಸಂಸ್ಥಾನಮಠದ ಶ್ರೀಗಳ ಬೇಟಿ

Leave a Reply

Your email address will not be published. Required fields are marked *