ತೂಕದ ಮಾತು, ಮಾತಿನೊಳಗಿನ ಧಾಟಿ

ಮಗುವೊಂದು ಜೋರಾಗಿ ಅಳುತ್ತಿದೆ. ಅದು ಹಸಿವಾಗಿ ಅಳುತ್ತಿದೆಯೋ, ಹೊಟ್ಟೆ ನೋವಿನಿಂದ ಅಳುತ್ತಿದೆಯೋ ಅಥವಾ ನಿದ್ರೆ ಬಂತೆಂದು ಅಳುತ್ತಿದೆಯೋ ಎಂದು ಕೂಡಲೇ ಅದರಮ್ಮನಿಗೆ ತಿಳಿಯುತ್ತದೆ. ಇನ್ನೂ ಜಗತ್ತನ್ನು ಸರಿಯಾಗಿ ನೋಡದ ಮಗು, ಟಿ. ವಿ. ಯಲ್ಲಿ ಬರುವ ಸಿನೆಮಾವನ್ನು ನೋಡುವಾಗ ಇವನು ಕೆಟ್ಟವನು, ಇವನು ಒಳ್ಳೆಯವನು ಎಂದು ಸರಿಯಾಗಿ ಗುರುತಿಸುತ್ತದೆ. ಬೆಳಿಗ್ಗೆ ಹೇಳುವ ಒಂದು “ಗುಡ್ ಮಾರ್ನಿಂಗ್” ಬಾಸ್ ನ ಮೂಡ್ ಆಫೀಸಿಗೆ ಬಂದ ಕೂಡಲೇ  ಅದನ್ನು ತಿಳಿಸಿಬಿಡುತ್ತದೆ. ಗಂಡ ಸಂಜೆ ಆಫೀಸಿನಿಂದ ಬಂದ ಕೂಡಲೇ, ಬಿಸಿ ಬಿಸಿ […]

Continue Reading

ನಾಳೆ ಬಾ

ಪ್ರೀತಿಯ ಕಂದನನ್ನು ಗಟ್ಟಿಯಾಗಿ ತಬ್ಬಿಕೊಂಡು ಸವಿನಿದ್ರೆಯಲ್ಲಿದ್ದೆ ಒಂದಿರುಳು. ಯಾರದೋ ಹೆಜ್ಜೆಯ ಸದ್ದು. ಕಣ್ಣು ಬಿಟ್ಟೆ. ಕತ್ತಲು ಕಾಣಿಸಲಿಲ್ಲ. ಪುನಃ ಕಣ್ಮುಚ್ಚಿದೆ. “ಬೇಗ ಏಳು. ಸಮಯವಾಯಿತು, ಬಾ” ಎಂದು ಎಳೆದರು ಯಾರೋ. ಸವಿನಿದ್ರೆಯನ್ನು ಕೆಡಿಸಿದ ಕೋಪ. ಸಿಡಿಮಿಡಿಗೊಳ್ಳುತ್ತಾ “ನೀವಾರು? ಏನು ಬೇಕಿತ್ತು?” ಎಂದೆ. “ನಿನ್ನ ಸಮಯ ಮುಗಿಯಿತು.” ಎನ್ನುತ್ತಾ ಎಳೆದುಕೊಂಡು ಹೊರಟುಬಿಟ್ಟರು. ಗಾಬರಿಯಿಂದ ಗಂಡನಿಗಾಗಿ ಕೈಚಾಚಿದೆ. ಸಿಕ್ಕುತ್ತಿಲ್ಲ. ಜೋರಾಗಿ ಕರೆದೆ. ಅವರಿಗೆ ಕೇಳಿಸುತ್ತಲೇ ಇಲ್ಲ. ಕೊನೆಯ ಸಾರಿ ಮಗನನ್ನು ಮುದ್ದುಗರೆದು ಬರುತ್ತೇನೆ, ಬಿಡಿ ಎಂದೆ. ಕೇಳಲಿಲ್ಲ. ನಿಮ್ಮನ್ನು ತುಂಬಾ […]

Continue Reading

ಸ್ವೇಚ್ಛೆಗೊಂದು ಎಲ್ಲೆಯಿರಲಿ

ಸಂಸ್ಕೃತದಲ್ಲಿ ಪ್ರತಿ ಅಕ್ಷರಗಳಿಗೂ ಅವುಗಳದೇ ಆದ ಒಂದು ಮಿತಿ. ಅಂದರೆ ಕೆಲವು ಓಷ್ಠದಿಂದ. ಕೆಲವು ಕಂಠದಿಂದ. ಕೆಲವು ಮೂರ್ಧನಿಯಿಂದ. ಕೆಲವು ದಂತದಿಂದ. ಇನ್ನು ಕೆಲವು ನಾಭಿಯಿಂದ. ಆ ಸ್ಥಾನವನ್ನು ಬಿಟ್ಟು ಬೇರೆ ಸ್ಥಾನದಿಂದ ನುಡಿದರೆ, ಅದು ಅಪಭ್ರಂಶವಾಗುತ್ತದೆ. ನೋಡುತ್ತಾ ಹೋದರೆ ಸೃಷ್ಟಿಯೇ ಹಾಗೆ. ಗ್ರಹಗಳಿಗೆ ಅವುಗಳದೇ ಆದ ಒಂದು ದಾರಿಯಿದೆ. ಆ ಕಕ್ಷೆಯನ್ನು ಬಿಟ್ಟು ಬೇರೆಡೆಗೆ ಸಾಗಿದರೆ ಪ್ರಕೃತಿ ವಿಕೋಪಗಳಾಗಬಹುದು. ನದಿ-ನದಗಳಿಗೊಂದು ಪರಿಧಿಯಿದೆ. ಅದನ್ನು ದಾಟಿ ಹರಿದರೆ, ಪ್ರವಾಹಗಳಾಗಬಹುದು. ಎಲ್ಲೆಯೇ ಇಲ್ಲದಂತೆ ಕಾಣುವ ವಿಶಾಲ ಶರಧಿಗೂ ಒಂದು […]

Continue Reading

ನಾಳೆಗೊಂಚಂಬ್ ನೀರಿರ್ಲಿ ಗೋವಿಂದ

ನನ್ನ ಮಗನ ಶಾಲೆಯ ಬಳಿ ಕೆಲವು ಜೋಪಡಿಗಳಿವೆ. ಎದುರಿಗೆ ಒಂದು ಚಪ್ಪಡಿ ಕಲ್ಲು. ಒಂದು ದಿನ ಅದರ ಮೇಲೆ ಒಂದು ಬಕೆಟ್ ಅಲ್ಲಿ ಅರೆಕೆಂಪು ಬಣ್ಣದ ನೀರು ಇಟ್ಟುಕೊಂಡು, ತುದಿಕಾಲಿನಲ್ಲಿ ಕುಳಿತು ಆಕೆ ಕೈಯಲ್ಲಿ ಚೂರು ಚೂರೇ ನೀರು ಹಾಕುತ್ತಾ, ಮಸಿ ಹಿಡಿದ ಪಾತ್ರೆಯನ್ನು ತಿಕ್ಕುತ್ತಿದ್ದಳು. ಮತ್ತೊಂದು ದಿನ ಹಾಗೆಯೇ ಕೈಯಲ್ಲಿ ಚೂರು ಚೂರೇ ನೀರು ಹಾಕುತ್ತಾ ಬಟ್ಟೆಗಳನ್ನು ತೊಳೆಯುತ್ತಿದ್ದಳು. ಇನ್ನೊಂದು ದಿನ ತನ್ನ ಮಗುವಿನ ಮೈಯನ್ನು ಒಂದೇ ಚಂಬು ನೀರಿನಿಂದ ತೊಳೆದು ಒರೆಸುತ್ತಿದ್ದಳು. ಈ ದೃಶ್ಯಗಳು […]

Continue Reading

ಇನ್ನೊಂದು ಯಾವಾಗ?

ನನ್ನ ಹತ್ತಿರದವರ ವಾಟ್ಸಾಪ್ ಗ್ರೂಪ್ ಒಂದಿದೆ. ಆ ಕುಟುಂಬಕ್ಕೆ ಮದುವೆಯಾಗಿ ಬಂದ ಹೆಣ್ಣುಮಕ್ಕಳೂ, ಆ ಮನೆತನದ ಹೆಣ್ಣುಮಕ್ಕಳನ್ನು ಮದುವೆಯಾದ ಹುಡುಗರೂ ಆ ಗುಂಪಿಗೆ ಸೇರ್ಪಡೆಯಾಗುತ್ತಾರೆ. ಒಬ್ಬೊಬ್ಬರ ಆಸಕ್ತಿ ಒಂದೊಂದರಲ್ಲಿ. ಅದು ಸಹಜವೇ. ಹಾಗೆಯೇ ಆಯ್ಕೆ ಮಾಡಿಕೊಂಡ ವೃತ್ತಿಯೂ ಬೇರೆ ಬೇರೆ. ಕೆಲವು ಜನ ವೈದ್ಯರು, ಕೆಲವು ಜನ ಎಂಜಿನೀಯರ್ ಗಳು, ಕೆಲವು ಜನ ಅಧ್ಯಾಪಕರು ಹೀಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಅಲ್ಲಿ ನಿತ್ಯವೂ ಒಂದಲ್ಲ ಒಂದು ವಿಷಯದ ಬಗ್ಗೆ ಮಾತುಕತೆ ನಡೆದಿರುತ್ತದೆ.   ಹೊಸತಾಗಿ […]

Continue Reading

ಇಲ್ಲಿ ಯಾರೂ ಅಮುಖ್ಯರಲ್ಲ

ಮನೆಯಲ್ಲಿ ಒಂದು ಮದುವೆಯಿದೆ ಅಂದುಕೊಳ್ಳಿ. ಕೆಲಸಗಳು ಒಂದೇ ಎರಡೇ? ಪಟ್ಟಿ ಮಾಡಿದರೂ ಮುಗಿಯದ ಕೆಲಸ. ಮನೆ ತುಂಬಾ ನೆಂಟರು, ಗ್ರಾಮಸ್ಥರು. ಮನೆಯ ಯಜಮಾನನಿಂದ ಹಿಡಿದು, ಊರಿನ ಕೊನೆ ಮನೆಯವರೆಗೆ ಎಲ್ಲರೂ ಒಂದಿಲ್ಲೊಂದು ಕೆಲಸ ಮಾಡುವವರೇ. ಬಣ್ಣ ಬಳಿಯುವ ಕೆಲಸ, ಅಂಗಳ ಸಾರಿಸುವ ಕೆಲಸ, ಚಪ್ಪರ ಹಾಕುವ ಕೆಲಸ, ತೋರಣ ಕಟ್ಟುವ ಕೆಲಸ, ಅಡುಗೆ ಕೆಲಸ, ತರತರದ ತಿಂಡಿಗಳನ್ನು ಮಾಡುವ ಕೆಲಸ, ಬೇಕಾದಷ್ಟು ಹಾಲು, ಮೊಸರು, ತುಪ್ಪ, ಮಜ್ಜಿಗೆಗಳ ವ್ಯವಸ್ಥೆ ಮಾಡುವ ಕೆಲಸ, ತರಕಾರಿ ಹೆಚ್ಚುವ ಕೆಲಸ, ಹೂವು […]

Continue Reading

ಮಗನ ಕಣ್ಣೀರೂ, ನೆನಪಾದ ಮೋಹಿನಿಯೂ

ಒಬ್ಬ ಕಳ್ಳ. ಅರಮನೆಯ ಖಜಾನೆಯನ್ನೇ ಕದಿಯಲು ಹೋಗಿ ಸಿಕ್ಕಿಹಾಕಿಕೊಂಡ. ತುಂಬ ಕಟ್ಟುನಿಟ್ಟಿನ ರಾಜ. ಅಲ್ಲಿ ಕದ್ದವರಿಗೆ ಗಲ್ಲುಶಿಕ್ಷೆ. ಇವನಿಗೂ ಅದೇ ಆಯಿತು. ಕೊನೆಯಾಸೆ ಕೇಳಿದರು ಕಳ್ಳನ ಬಳಿ. ನನ್ನ ಅಮ್ಮನನ್ನು ಭೇಟಿಯಾಗಬೇಕು ಎಂದ. ಕರೆಸಿದರು ಅವನ ತಾಯಿಯನ್ನು. ಅಮ್ಮನನ್ನು ಕಂಡವನೇ ತಾಯಿಯ ಕಿವಿಯನ್ನು ಕಚ್ಚಿ ಹರಿದುಬಿಟ್ಟ. “ಸಣ್ಣವನಿದ್ದಾಗ ಎಲ್ಲಿಂದಲೋ ಒಂದು  ಹಣ್ಣನ್ನು ಕದ್ದು ತಂದಿದ್ದೆ. ಇದೇ ಕಿವಿಯಲ್ಲಿ ನಿನಗೆ ಗುಟ್ಟು ಹೇಳಿದ್ದೆ. ನೀನು ಅಂದು ಬೆನ್ನು ತಟ್ಟುವ ಬದಲು ಶಿಕ್ಷಿಸಿದ್ದರೆ, ಇಂದು ಈ ಸ್ಥಿತಿ ಬರುತ್ತಿರಲಿಲ್ಲ” ಎಂದನಂತೆ […]

Continue Reading

ನಮ್ಮೂರೇ ವಾಸಿ

ಬೆಳ್ಳಂಬೆಳಗ್ಗೆ ದಡಬಡಿಸಿ ಎದ್ದು, ಹಾಲಿನ ಪ್ಯಾಕೆಟ್ ಕತ್ತರಿಸಿ ಹಾಲನ್ನು ಪಾತ್ರೆಗೆ ಬಗ್ಗಿಸುವಾಗ, ದಿನವೂ ಆಗತಾನೆ ಹಟ್ಟಿಯಿಂದ ಕರೆದುತಂದ ನೊರೆಹಾಲಿನಲ್ಲಿ ಮಾಡುವ ಫಿಲ್ಟರ್ ಕಾಫಿಯ ಪರಿಮಳ ಮೂಗಿಗೆ ಬಡಿದಂತಾಗುವುದು. ತರಕಾರಿ ಸಿಪ್ಪೆಯನ್ನು, ಅಳಿದುಳಿದ ಪದಾರ್ಥಗಳನ್ನು ಕಸದ ತೊಟ್ಟಿಗೆ ಸುರಿವಾಗ, ಅಲ್ಲಿದ್ದರೆ ಗೊಬ್ಬರದ ಗುಂಡಿಗೆ ಹಾಕಬಹುದಿತ್ತು ಎಂದೆನಿಸುವುದು. ಅಕ್ಕಿ-ಬೇಳೆ ತೊಳೆದ ನೀರನ್ನು ಸಿಂಕ್ ಗೆ ಚೆಲ್ಲುವಾಗ, ಅಲ್ಲಿ ಕೊಟ್ಟಿಗೆಯಲ್ಲಿರುವ ನಂದಿನಿ, “ಚೆಲ್ಲುವ ಬದಲು ನನಗಾದರೂ ಕೊಟ್ಟಿದ್ದರೆ ಖುಷಿಯಿಂದ ಕುಡಿಯುತ್ತಿದ್ದೆ ಕಣೇ” ಎಂದಂತೆನಿಸಿ, ಅಲ್ಲಿ ಅಡುಗೆಮನೆಯ ಮೂಲೆಯಲ್ಲಿಡುವ ಅಕ್ಕಚ್ಚಿನ ಬಕೆಟ್ ನ […]

Continue Reading

ಒರಟು ಬೊಗಸೆಯ ತುಂಬಾ ಆರೆಂಜ್ ಪೆಪ್ಪರ್ಮೆಂಟು

ಸ್ವಂತಕ್ಕಾಗಿ ಏನನ್ನೂ ಬಯಸದೇ ನಿರಂತರ ದುಡಿಯುವ ನಿಸ್ವಾರ್ಥಿಯವನು. ತುಂಬಾ ಓದಬೇಕು, ತುಂಬಾ ಬರೆಯಬೇಕು ಎಂಬ ಆಸೆ ಎದೆಯೊಳಗಿದ್ದರೂ, ಹುದುಗಿಸಿಕೊಂಡು ಸಂಸಾರರಥದ ಹಗ್ಗ ಹಿಡಿದವನು. ತನಗೆಷ್ಟೇ ನೋವಿದ್ದರೂ, ರಾತ್ರಿಯಾದಾಗ ಮಕ್ಕಳ ಪಾದಕ್ಕೆ ಎಣ್ಣೆ ಸವರಿ ನಕ್ಕವನು. ಮಕ್ಕಳ ಶಾಲೆಯಲ್ಲಿ ಕಾರ್ಯಕ್ರಮವಿದ್ದಾಗ, ಕೆಲಸಗಳನ್ನೆಲ್ಲ ಬದಿಗೊತ್ತಿ, ಶ್ರದ್ಧೆಯಿಂದ ಕವನ ಇಲ್ಲವೇ ಭಾಷಣಗಳನ್ನು ಬರೆದುಕೊಟ್ಟವನು. ದೂರದ ಊರಿಗೆ ಓದಲೆಂದು ಹೋಗಿದ್ದಾಗ ಉದ್ದುದ್ದ ಹಾಳೆಗಳಲ್ಲಿ ಪತ್ರ ಬರೆದವನು.ಹಾಸ್ಟೆಲ್ನಿಂದ ರಜೆಗೆಂದು ಮನೆಗೆ ಬಂದಾಗ, ಮಗಳಿಗಿಷ್ಟ ಎಂದು ಡೈರಿಗೆ ಕೊಡದೇ ಹಾಲನ್ನು ತೆಗೆದಿರಿಸುತ್ತಿದ್ದವನು.   ಮಗಳ ಮದುವೆ […]

Continue Reading