ಗೋಪರಿವಾರದಿಂದ ಮುಂದುವರಿದ ಪರಿಹಾರ ವಿತರಣೆ

ಸುದ್ದಿ

ಹೊಸನಗರ: ಶ್ರೀರಾಮಚಂದ್ರಾಪುರಮಠದ ಭಾರತೀಯ ಗೋಪರಿವಾರ ಸಂಯೋಜನೆಯಲ್ಲಿ ಶಿವಮೊಗ್ಗ ಜಿಲ್ಲೆಯ ವಿವಿಧ ನೆರೆ ಸಂತ್ರಸ್ತ ಕುಟುಂಬಗಳ ಗೋವುಗಳಿಗೆ ವಿತರಣೆ ಮಾಡುವ ಕಾರ್ಯ ಮಹಾನಂದಿ ಗೋಲೋಕದಲ್ಲಿ ನಡೆಯಿತು.

 

ರಾಯಚೂರು ಜಿಲ್ಲೆ ಹಾಗೂ ಕೆ. ಆರ್. ನಗರದಿಂದ ಸುಮಾರು ೯ ಟನ್ ಪೌಷ್ಟಿಕ ಪಶು ಆಹಾರವನ್ನು ತರಿಸಿ ಮಹಾನಂದಿ ಗೋಲೋಕ ಹೊಸನಗರ ಹಾಗೂ ಗೋಸ್ವರ್ಗ ಭಾನ್ಕುಳಿ ಇವರ ಸಹಕಾರದೊಂದಿಗೆ ವಿತರಣೆ ಮಾಡಲಾಯಿತು. ಮೈಸೂರು ಭಾರತೀಯ ಗೋಪರಿವಾರದ ಮುಖ್ಯ ಸಂಚಾಲಕ ಕೆ. ಆರ್. ನಗರದ ಐಸಿರಿ ಮಹೇಶ್ ಮತ್ತು ಶ್ರೀರಾಮಚಂದ್ರಾಪುರಮಠ ಪ್ರಾಯೋಜಿಸಿದ್ದರು.

ರಾಮಚಂದ್ರಾಪುರ ಗ್ರಾಮ ಪಂಚಾಯತ್ ಕಾರ್ಯದರ್ಶಿ ಗೋಪಾಲ್, ಭಾರತೀಯ ಗೋಪರಿವಾರದ ಶ್ರೀಸಂಯೋಜಕ ಆರ್. ಕೆ. ಭಟ್, ಮಹಾನಂದಿ ಗೋಲೋಕದ ಪದಾಧಿಕಾರಿಗಳಾದ ರಾಮಮೂರ್ತಿ ಹೆದ್ಲಿ, ಛಾಯಾ ರಾಮಮೂರ್ತಿ, ಗೋಲೋಕದ ವ್ಯವಸ್ಥಾಪಕರಾದ ರಾಮಚಂದ್ರ ಭಟ್ ಪಂಜಾಜೆ, ಅಶೋಕ ಹೆಗಡೆ ಗುಂಡೂಮನೆ, ಸುಬ್ರಹ್ಮಣ್ಯ ಹೆದ್ಲಿ ಹಾಜರಿದ್ದರು.

Author Details


Srimukha

Leave a Reply

Your email address will not be published. Required fields are marked *