|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಗೋ ಆಶ್ರಮದಲ್ಲಿ ತಂತ್ರಜ್ಞರಿಂದ ಶ್ರಮ ಸೇವೆ.

ಮಾಲೂರು: ತಾಲೂಕಿನ ಗಂಗಾಪುರ ಶ್ರೀ ರಾಘವೇಂದ್ರ ಗೋ ಆಶ್ರಮದಲ್ಲಿ ಅಂತರಾಷ್ಟ್ರೀಯ ಸಂಸ್ಥೆ ಡೆಲ್ – ಇಎಂಸಿ ಗೋಪಾಲ್ಸ್ ಸ್ವಯಂಸೇವಕರು ಗುರುವಾರ ಶ್ರಮ ಸೇವೆ ನಡೆಸಿದರು.

 

ಸೋಮವಾರ ಸುರಿದ ಬಾರಿ ಮಳೆಯಿಂದ ಗೋಆಶ್ರಮದ ಕೊಟ್ಟಿಗೆಯೊಂದರ ಗೋಡೆ ಭಾಗಶಃ ಕುಸಿದಿದ್ದು, ಇದರ ಕಲ್ಲುಗಳ ಸ್ಥಳಾಂತರಿಸಿ, ಸ್ವಚ್ಛ ಮಾಡಿದರು.

 

ಗೋಶಾಲೆಯಲ್ಲಿರುವ ಸುಮಾರು ಎಂಟು ಗೋತಳಿಗಳ ವಿಶೇಷತೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಗೋಶಾಲೆಯ ಆವರಣದಲ್ಲಿ ವರ್ಷದ ಹಿಂದೆ ತಾವು ನೆಟ್ಟ ಗಿಡಗಳ ನಡುವೆ ಬೆಳೆದ ಕಳೆಗಳನ್ನು ಕಿತ್ತು ಸ್ವಚ್ಛ ಗೊಳಿಸಿದರು.

ಡೆಲ್ ಇಎಂಸಿ ಯ ಸೀನಿಯರ್ ಕನ್ಸಲ್ಟೆಂಟ್ ಮತ್ತು ಸಿ ಎಸ್ ಆರ್ ಸಂಯೋಜಕ ಅಬ್ದುಲ್ ಮತೀನ್ ನೇತೃತ್ವದಲ್ಲಿ ಅಮಿತ್, ಸತೀಶ್ ಸೇರಿ ಇಪ್ಪತ್ತಕ್ಕೂ ಹೆಚ್ಚು ಸ್ವಯಂಸೇವಕರು ಭಾಗವಹಿಸಿದ್ದರು.

 

ಗೋಪಾಲ್ಸ್ ತಂಡದ ಕಿರಣ್, ರಾಮ್ ಸುಬ್ರಹ್ಮಣ್ಯನ್, ಗೋಆಶ್ರಮದ ವಿಶೇಷಕರ್ತವ್ಯಾಧಿಕಾರಿ ರಾಮಚಂದ್ರ ಅಜ್ಜಕಾನ, ಕೃಷ್ಣ ಭಟ್, ಅನಂತ ಹೆಗಡೆ, ಲಕ್ಷ್ಮೀಶ್ ಮತ್ತಿತರರು ಉಪಸ್ಥಿತರಿದ್ದರು.