ಶಂಕರಶ್ರೀ ವಸಂತ ವೇದಪಾಠಶಾಲೆ

ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯಾನುಗ್ರಹಗಳೊಂದಿಗೆ ಮೂರನೇ ವರ್ಷದ ಶಂಕರಶ್ರೀ ವಸಂತ ವೇದ ಪಾಠಶಾಲೆ ಭಾರತೀ ಎಜುಕೇಶನ್ ಟ್ರಸ್ಟ್ ಆಶ್ರಯದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಿಂದ ಮಾನ್ಯತೆಯನ್ನು ಪಡೆದಿರುವ ಗೋಕರ್ಣದ ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಹಯೋಗದೊಂದಿಗೆ 2026ನೇ ಎಪ್ರಿಲ್ 15 ಬುಧವಾರದಿಂದ ಮೇ 17 ಆದಿತ್ಯವಾರದವರೆಗೆ ಮಂಗಳೂರಿನ ನಂತೂರು ಶ್ರೀಭಾರತೀ ಕಾಲೇಜು ಆವರಣದಲ್ಲಿರುವ ಶಂಕರಶ್ರೀ ಸಭಾಭವನದಲ್ಲಿ ವೇದ ಪಾಠ ಶಿಬಿರವು ನಡೆಯಲಿರುವುದು. ಈ ಶಿಬಿರದಲ್ಲಿ ಸಂಧ್ಯಾವಂದನೆ, ಸೂಕ್ತ, ಸಂಸ್ಕೃತ ಶ್ಲೋಕಗಳ ಕಲಿಕೆಯ ಜೊತೆಗೆ ಯೋಗ, ವ್ಯಕ್ತಿತ್ತ್ವ ವಿಕಸನದ […]

ವೀಣಾ-ಮೃದಂಗ ವೈಭವ

  ಕೈರಂಗಳ: ಪುಣ್ಯಕೋಟಿನಗರದ ಅಮೃತಧಾರಾ ಗೋಶಾಲೆಯಲ್ಲಿ ಮಕರ ಸಂಕ್ರಾಂತಿಯಂದು (ಜನವರಿ 14) ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಆರಂಭವಾದ ‘ಗೋಸೇವಾ ಮಾಸಾಚರಣೆ’ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಗೋಸೇವೆ ಹಾಗೂ ಭಜನೆ ಸೇವೆ ಕಾರ್ಯಕ್ರಮಗಳು ನಡೆಯುತ್ತಿವೆ. ಇದರ ಅಂಗವಾಗಿ ಮಾಘ ಕೃಷ್ಣ ಸಪ್ತಮಿಯಂದು (ಫೆಬ್ರವರಿ 8) ‘ವೀಣಾ-ಮೃದಂಗ ವೈಭವ’ ಕಾರ್ಯಕ್ರಮ ಜರುಗಿತು. ‘ಸಂಗೀತ ಕಲಾ ದಂಪತಿ’ ಎಂದೇ ವಿಖ್ಯಾತರಾದ ವಿದುಷಿ ವೈ. ಜಿ. ಶ್ರೀಲತಾ ನಿಕ್ಷಿತ್ ಮತ್ತು ವಿದ್ವಾನ್‌ ಪುತ್ತೂರು ನಿಕ್ಷಿತ್ ಇವರು ಈ ಕಾರ್ಯಕ್ರಮವನ್ನು […]