ಸಕ್ಕರೆ ನಾಡಲ್ಲಿ ಹೊಸಾಡಿನ ಕಾರ್ಯ

ಮಂಡ್ಯ: ಮಲೆನಾಡು ಗಿಡ್ಡ ಸಂರಕ್ಷಣೆ ಮತ್ತು ಸಂವರ್ಧನ ಅಭಿಯಾನದ ವತಿಯಿಂದ ಜೂನ್ – ಜುಲೈ ತಿಂಗಳುಗಳಲ್ಲಿ ‘ಜೋಡೆತ್ತು ಅಭಿಯಾನ’ ನಡೆಸಲು ಘೋಷಿಸಲಾಗಿದೆ. ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಕೆಂಗೇರಿ ಇದರ ಶ್ರೀಶ್ರೀನಿಶ್ಚಲಾನಂದ ಸ್ವಾಮೀಜಿಗಳವರ ನೇತೃತ್ವದಲ್ಲಿ, ರೈತ ಶಾಲೆ ಮಂಡ್ಯ ಇವರ ಉಸ್ತುವಾರಿಯಲ್ಲಿ, ಸಾವಯವ ಕೃಷಿ – ಗೋ-ಆಧಾರಿತ ಕೃಷಿ – ವಿಷಮುಕ್ತ ಆಹಾರ – ಸಾಂಪ್ರದಾಯಿಕ ಜೋಡೆತ್ತಿನ ಅಭಿಯಾನವನ್ನು ನಡೆಸಲಾಗುತ್ತಿದೆ. ಈ ಅಭಿಯಾನದ ಮೊದಲ ಹಂತದ ಕಾರ್ಯಕ್ರಮದಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಆಶೀರ್ವಾದದೊಂದಿಗೆ ಹೊಸಾಡದ ಭಾರತೀಯ […]

ಕೆಕ್ಕಾರಿನಲ್ಲಿ ‘ಬನ್ನಂಜೆ 90 ವಿಶ್ವನಮನ’

ಹೊನ್ನಾವರ: ‘ಬನ್ನಂಜೆ ಗೋವಿಂದಾಚಾರ್ಯರ ಮಾತು ಗಂಗಾ ಪ್ರವಾಹದಂತೆ. ಅವರ ವ್ಯಕ್ತಿತ್ವ ಮತ್ತು ಚಿಂತನೆಗಳು ಕಥೆಯಾಗಿ ಉಳಿದು ಮುಂದಿನ ತಲೆಮಾರುಗಳಿಗೆ ದಾರಿದೀಪವಾಗಬೇಕು’ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಹೇಳಿದರು. ಶ್ರೀರಾಮಚಂದ್ರಾಪುರ ಮಠದ ಕೆಕ್ಕಾರು ಶಾಖೆಯಾದ ಶ್ರೀರಘೂತ್ತಮ ಮಠದ ಶ್ರೀವಿದ್ಯಾರಣ್ಯ ಸಂಸ್ಕೃತ ಪಾಠಶಾಲಾ ಸಭಾಂಗಣದಲ್ಲಿ ಶ್ರೀರಾಮಚಂದ್ರಾಪುರ ಮಠ – ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ – ಶ್ರೀಮಠದ ಹೊನ್ನಾವರ ಮತ್ತು ಕುಮಟಾ ಮಂಡಲಗಳ ಸಂಯುಕ್ತ ಆಶ್ರಯದಲ್ಲಿ ನಡೆದ ‘ಬನ್ನಂಜೆ 90 ವಿಶ್ವನಮನ’ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ […]