ಗುರ್ವನುಗ್ರಹ ಪಡೆದ ಗೋಮಾಂತಕ ಸಮಾಜ
ಅಶೋಕೆ: ನಿಜ ಜ್ಯೇಷ್ಠ ಶುಕ್ಲ ಪಾಡ್ಯದಂದು (16-06-2026) ಗೋಮಾಂತಕ ಸಮಾಜದ ಅನೇಕ ಶಿಷ್ಯರು ಅಶೋಕೆಗೆ ಆಗಮಿಸಿ ಪರಮಪೂಜ್ಯ ಶ್ರೀಸಂಸ್ಥಾನದವರ ಆಶೀರ್ವಾದ-ಮಂತ್ರಾಕ್ಷತೆಗಳನ್ನು ಪಡೆದರು. ಈ ಹಿಂದೆ, ಗೋಮಾಂತಕ ಸಮಾಜದವರು ತಮ್ಮ ಸಮಾಜಕ್ಕೆ ಗುರುಪೀಠವಾಗಿ ಶ್ರೀರಾಮಚಂದ್ರಾಪುರ ಮಠ ಇರಬೇಕು ಎಂದು ಶ್ರೀಮಠದ ೩೫ನೇ ಪೀಠಾಧಿಪತಿಗಳಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಂದ್ರಭಾರತೀ ಮಹಾಸ್ವಾಮಿಗಳವರಲ್ಲಿ ಪ್ರಾರ್ಥಿಸಿ ಅನುಗ್ರಹ ಮಂತ್ರಾಕ್ಷತೆ ಪಡೆದಿದ್ದರು. ಅಂದಿನಿಂದಲೂ ಗೋಮಾಂತಕ ಸಮಾಜ ಶ್ರೀಮಠದ ಶಿಷ್ಯರಾಗಿ ನಡೆದುಕೊಳ್ಳುತ್ತಿದೆ. ಆದರೆ ಸಮಾಜಬಾಂಧವರು ರಾಜ್ಯದ ವಿವಿಧೆಡೆ ನೆಲೆಸಿರುವ ಕಾರಣ, ಸಾಮೂಹಿಕವಾಗಿ ಬಂದು ಸೇವೆಗೈಯ್ಯಲು ಸಾಧ್ಯವಾಗಿರಲಿಲ್ಲ. ಇದೀಗ […]
‘ಅನ್ನಬ್ರಹ್ಮ ಚಾತುರ್ಮಾಸ್ಯ’ ಆಮಂತ್ರಣ ಲೋಕಾರ್ಪಣೆ
ಅಶೋಕೆ: ನಿಜ ಜ್ಯೇಷ್ಠ ಶುಕ್ಲ ತದಿಗೆಯಂದು (17-06-2026) ಪರಮಪೂಜ್ಯ ಶ್ರೀಸಂಸ್ಥಾನದರು ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಆಮಂತ್ರಣ ಪತ್ರಿಕೆಯನ್ನು ಸೇವಾಸೌಧದಲ್ಲಿ ಲೋಕಾರ್ಪಣೆಗೊಳಿಸಿದರು. ಈ ಸಮಯದಲ್ಲಿ ಶ್ರೀಮಠದ ಕೇಂದ್ರ ಕಾರ್ಯಾಲಯ – ಶಾಸನತಂತ್ರ – ಮಹಾಮಂಡಲ – ಅಂಗಸಂಸ್ಥೆಗಳ ಪದಾಧಿಕಾರಿಗಳು, ಶ್ರೀಸವಾರಿಯ ಸದಸ್ಯರು, ಶಿಷ್ಯಭಕ್ತರು ಉಪಸ್ಥಿತರಿದ್ದರು. ಶ್ರೀಸಂಸ್ಥಾನದವರು ತಮ್ಮ ಮೂವತ್ತಮೂರನೆಯ ಚಾತುರ್ಮಾಸ್ಯವನ್ನು ‘ಅನ್ನಬ್ರಹ್ಮ ಚಾತುರ್ಮಾಸ್ಯ’ ಎಂಬ ಅಭಿಧಾನದಲ್ಲಿ, ಅಶೋಕೆಯಲ್ಲಿ, ಆಷಾಢ ಶುಕ್ಲ ಪೂರ್ಣಿಮೆಯಿಂದ ಭಾದ್ರಪದ ಶುಕ್ಲ ಪೂರ್ಣಿಮೆಯವರೆಗೆ (29-07-2026 ರಿಂದ 26-09-2026 ರ ವರೆಗೆ) ಆಚರಿಸಲಿದ್ದಾರೆ. ತಮ್ಮ ಚಾತುರ್ಮಾಸ್ಯಗಳನ್ನು ಸಮೂಹದ ಒಳಿತಿಗೆ […]