ಸಾರ್ಥಕ ಜೀವನಕ್ಕೆ ಸಂದ ‘ಹವ್ಯಕ ವಿಭೂಷಣ’

ಹೊನ್ನಾವರ: ಹವ್ಯಕ ವಿಭೂಷಣ ಪ್ರಶಸ್ತಿಗೆ ಭಾಜನರಾದ ಪ್ರೊ| ಎಸ್. ಶಂಭು ಭಟ್ಟ ಕಡತೋಕಾ ಇವರಿಗೆ ಕುಮಟಾ ಮಂಡಲದ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು. ಅಧಿಕ ಜ್ಯೇಷ್ಠ ಹುಣ್ಣಿಮೆಯಂದು (31-05-2026) ಶ್ರೀಮಠದ ಕೆಕ್ಕಾರು ಶಾಖೆ ಶ್ರೀರಘೂತ್ತಮ ಮಠದ ‘ಜಯಗುರು’ ಮಂದಿರದದಲ್ಲಿ ಈ ಕಾರ್ಯಕ್ರಮ ಸಂಪನ್ನಗೊಂಡಿತು. ಕುಮಟಾ ಮಂಡಲದ ಅಧ್ಯಕ್ಷರಾದ ಸೀತಾರಾಮ ಹೆಗಡೆಯವರು ಪ್ರಾಸ್ತಾವಿಕ ನುಡಿಗಳನ್ನಾಡಿ ಶಂಭು ಭಟ್ಟರ ವ್ಯಕ್ತಿತ್ವವನ್ನು, ಸಂಘಟನೆಯಲ್ಲಿ ಅವರ ಪಾತ್ರವನ್ನು ಕೊಂಡಾಡಿದರು. ಪ್ರಾಂತ ಉಪಾಧ್ಯಕ್ಷರಾದ ಜಿ. ಎಸ್ ಹೆಗಡೆಯವರು ಮಾತನಾಡುತ್ತಾ ಸೀಮಾ ಪರಿಷತ್ತು, ಮಂಡಲ ಹಾಗೂ […]

ಭುಕ್ತಿಮುಕ್ತಿಪ್ರದಾತಾ

ನಮ್ಮ ಬದುಕಿಗೆ, ಭವಿಷ್ಯಕ್ಕೆ ಮಾರ್ಗದರ್ಶಿ ಶ್ರೀಗುರು. ಈ ಲೋಕದಲ್ಲಿ ಸಾಂಸಾರಿಕವಾದ ಸುಖ ಗುರುವಿನಿಂದ. ಜೀವಿಯ ಜನನ ಮರಣಚಕ್ರಭ್ರಮಣವನ್ನು ಇಲ್ಲವಾಗಿಸುವವನೂ ಗುರುವೇ. ಜ್ಞಾನಶಕ್ತಿಸಮಾರೂಢಃ ತತ್ತ್ವಮಾಲಾವಿಭೂಷಿತಃ | ಭುಕ್ತಿಮುಕ್ತಿಪ್ರದಾತಾ ಚ ತಸ್ಮೈ ಶ್ರೀಗುರವೇ ನಮಃ || ಇದು ಗುರುವಿನ ಕುರಿತಾದ ಪ್ರಾಜ್ಞರ ನುಡಿ. ನನ್ನ ಹೆತ್ತ ತಾಯಿ. ವಯಸ್ಸು 93 ವರ್ಷ. ಕಳೆದ ಐದು ವರ್ಷಗಳಿಂದ ಪರಾಧೀನಳಾಗಿ ಹಾಸಿಗೆ ಹಿಡಿದವಳು. ಅನ್ನಾಹಾರಾದಿಗಳನ್ನು ಸೇವಿಸುತ್ತ ಆರೋಗ್ಯವಾಗಿಯೇ ಇದ್ದವಳು. ಅಂತಿಮದಿನದ ಮೊದಲ ಮೂರುದಿನಗಳಲ್ಲಿ ಸ್ವಲ್ಪ ವ್ಯತ್ಯಾಸ. ಹಿಂದಿನ ದಿನವಷ್ಟೇ ಪೂಜ್ಯಶ್ರೀ ಸನ್ನಿಧಾನದವರು ಆಕೆಯ […]