ವಸಂತ ವೇದ ಶಿಬಿರದ ಸಮಾರೋಪ
ಮಂಗಳೂರು: ‘ಮನುಷ್ಯರಾಗಿ ಹುಟ್ಟಿದ ಮೇಲೆ ಭಗವಂತನ ಅನುಗ್ರಹ ಪಡೆಯಬೇಕು. ಆಗ ಮಾತ್ರ ಜೀವನ ಸಾರ್ಥಕಗೊಳ್ಳುತ್ತದೆ. ವೇದಾಧ್ಯಯನದ ಮೂಲಕ ವಟುಗಳು ಉತ್ತಮ ಜೀವನ ನಡೆಸುವಂತಾಗಬೇಕು’ ಎಂದು ಕೊಲ್ಲೂರು ಶ್ರೀಮೂಕಾಂಬಿಕಾ ಕ್ಷೇತ್ರದ ಪ್ರಧಾನ ಅರ್ಚಕ ವೇ| ಮೂ| ಕೆ. ವಿ. ಶ್ರೀಧರ ಅಡಿಗ ಹೇಳಿದರು. ಅವರು ನಂತೂರಿನ ಶ್ರೀಭಾರತೀ ಸಮೂಹ ಸಂಸ್ಥೆಯಲ್ಲಿ ಅಧಿಕ ಜ್ಯೇಷ್ಠ ಬಿದಿಗೆಯಂದು (17-05-2026) ವಿಷ್ಣುಗುಪ್ತ ವಿಶ್ವವಿದ್ಯಾಪೀಠ – ಭಾರತೀ ಎಜುಕೇಷನ್ ಟ್ರಸ್ಟ್ – ಶಂಕರಶ್ರೀ ವಸಂತ ವೇದಪಾಠಶಾಲೆ ಸಮಿತಿ ಮತ್ತು ಸಂಘ ಸಂಸ್ಥೆಗಳ […]
ಶನಿನಮನ – ತಾಪಶಮನ: ಶನಿಜಯಂತೀ ವಿಶೇಷ ಕಾರ್ಯಕ್ರಮ
ಪೆರ್ಲ: ಬಜಕ್ಕೂಡ್ಲಿನ ಅಮೃತಧಾರಾ ಗೋಶಾಲೆಯಲ್ಲಿ ವೈಶಾಖ ಅಮಾವಾಸ್ಯೆಯಂದು (16-05-2026) ‘ಶನಿನಮನ -ತಾಪಶಮನ’ ವಿಶೇಷ ಕಾರ್ಯಕ್ರಮ ಸಂಪನ್ನಗೊಂಡಿತು. ಅಮಾವಾಸ್ಯೆ-ಶನಿವಾರಗಳ ಸಂಗಮವಾದ ಈ ಶನಿಜಯಂತಿಯ ಕಾಲ ಅಪರೂಪದಲ್ಲಿ ಅಪರೂಪ. ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನ-ಆಶೀರ್ವಾದಗಳೊಂದಿಗೆ ಶನೈಶ್ಚರನ ಈ ಮಹೋಪಾಸನೆ ನೆರವೇರಿತು. ಗುರುವಂದನೆಯೊಂದಿಗೆ ಆರಂಭಗೊಂಡು ಸ್ವಸ್ತಿ ಪುಣ್ಯಾಹ, ಬಾಲಗಣಪತಿ ಹವನ ನಡೆದವು. ಬೆಳಗ್ಗೆ 6:06 ಗಂಟೆಯಿಂದ ಗಣಪತಿ ಅಥರ್ವಶಿರ್ಷ ಪಾರಾಯಣ ಪ್ರಾರಂಭಗೊಂಡಿತು. 24 ಗಂಟೆಗಳ ನಿರಂತರ ಪಾರಾಯಣ ಮರುದಿನದ ಬೆಳಗ್ಗೆ ಸೂರ್ಯೋದಯಕ್ಕೆ ಸಮಾಪನಗೊಂಡಿತು. ಗಣಪತಿ ಅಥರ್ವಶೀರ್ಷ ಹವನ, ಶನಿ […]