‘ಪ್ರತಿರುದ್ರ’ ಪಥದಲ್ಲಿ ೩೦೦ನೇ ಹೆಜ್ಜೆ
ಪಳ್ಳತ್ತಡ್ಕ: ನಿಜ ಜ್ಯೇಷ್ಠ ಶುಕ್ಲ ತ್ರಯೋದಶೀ (27-06-2026) ಎಂಬುದು ಪಳ್ಳತಡ್ಕ ವಲಯದ ಕಾರ್ಯಕರ್ತರ ಸುಮಾರು 12 ವರ್ಷಗಳ ನಿರಂತರ ಪ್ರಯತ್ನದ ಸಾಫಲ್ಯದ ಒಂದು ದಿನ. ಪರಮಪೂಜ್ಯ ಶ್ರೀಸಂಸ್ಥಾನದವರ ದಿವ್ಯ ಆಶೀರ್ವಾದದೊಂದಿಗೆ ಸಂಪನ್ನವಾದ ಕೋಟಿರುದ್ರ ಎಂಬ ಕಾರ್ಯಕ್ರಮದ ಅನಂತರ, ‘ಇದು ವಲಯಗಳ ಪ್ರತೀ ಶಿಷ್ಯ ಭಕ್ತನ ಮನೆಯಲ್ಲೂ ಮುಂದುವರಿಯಬೇಕು’ ಎಂಬ ಗುರುವಚನವನ್ನು ಶಿರಸಾ ವಹಿಸಿ ಪಾಲಿಸಿದವರು ಪಳ್ಳತ್ತಡ್ಕ ವಲಯದ ಕಾರ್ಯಕರ್ತರು. ‘ಪ್ರತಿರುದ್ರ’ ಎಂಬ ಗುರುಗಳಿತ್ತ ಅಭಿಧಾನದೊಂದಿಗೆ ಮುಂಬರಿದು ಇಂದು ಮುನ್ನೂರನೇ ಪ್ರತಿರುದ್ರವೆಂಬ ಒಂದು ಘಟ್ಟವನ್ನು ಯಶಸ್ವಿಯಾಗಿ ತಲುಪಿದರು. ಪ್ರತೀ […]
‘ಸತ್ಪಥ’: ಅರಳುವ ಮನಸ್ಸುಗಳಿಗೆ ಸನ್ಮಾರ್ಗದರ್ಶಕ
ಬೆಂಗಳೂರು: ಹವ್ಯಕ ಮಹಾಮಂಡಲದ ವೈವಾಹಿಕ, ವಿದ್ಯಾರ್ಥಿವಾಹಿನೀ ಹಾಗೂ ಮಾತೃ ವಿಭಾಗಗಳು ಜಂಟಿಯಾಗಿ ಆಯೋಜಿಸಿದ್ದ ‘ಸತ್ಪಥ’ ಪ್ರಥಮ ಕಾರ್ಯಾಗಾರವು ಯಶಸ್ವಿಯಾಗಿ ನಿಜ ಜ್ಯೇಷ್ಠ ಶುಕ್ಲ ಚತುರ್ದಶಿಯಂದು (28-06-2026) ವಿಜಯನಗರದ ಶ್ರೀಭಾರತೀ ವಿದ್ಯಾಲಯದಲ್ಲಿ ನೆರವೇರಿತು. ಮಕ್ಕಳ ಸರ್ವತೋಮುಖ ಬೆಳವಣಿಗೆ, ಉತ್ತಮ ವ್ಯಕ್ತಿತ್ವ ನಿರ್ಮಾಣ ಹಾಗೂ ಸದ್ಗುಣ-ಸದಾಚಾರಗಳನ್ನು ಬೆಳೆಸುವ ಮೂಲಕ ಅವರ ಭವಿಷ್ಯವನ್ನು ಸನ್ಮಾರ್ಗದತ್ತ ರೂಪಿಸುವ ಹಾಗೂ ಸುಖೀ ಕುಟುಂಬದ ಉದ್ದೇಶದಿಂದ ಹಮ್ಮಿಕೊಳ್ಳಲಾದ ಈ ಕಾರ್ಯಾಗಾರದಲ್ಲಿ ಬೆಂಗಳೂರು ಪ್ರಾಂತದ ವಿವಿಧ ಭಾಗಗಳಿಂದ ಆಗಮಿಸಿದ್ದ 130ಕ್ಕೂ ಹೆಚ್ಚು ಮಕ್ಕಳು ಹಾಗೂ ಪೋಷಕರು ಉತ್ಸಾಹದಿಂದ […]