ಸಭಾಭವನದ ಭೂಮಿ ಪೂಜೆ

ವಿಟ್ಲ: ಶ್ರೀರಾಮಚಂದ್ರಾಪುರ ಮಠಕ್ಕೆ ಸೇರಿದ ಮುಳಿಯ ನಿವೇಶನದಲ್ಲಿ ತಿಮ್ಮಪ್ಪಯ್ಯ ಕಟ್ಟಡ ಕ್ರಿಯಾ ಸಮಿತಿ ವತಿಯಿಂದ ನಿರ್ಮಾಣವಾಗಲಿರುವ ನೂತನ ಸಭಾಭವನದ ಭೂಮಿ ಪೂಜೆ ಆಷಾಢ ಶುಕ್ಲ ಪಾಡ್ಯದಂದು (15-07-2026) ನಡೆಯಿತು. ವೇದಮೂರ್ತಿಗಳಾದ ಕುರೂವುಮೂಲೆ ಚಂದ್ರಶೇಖರ ಉಪಾಧ್ಯಾಯ ಹಾಗೂ ಶಿವಪ್ರಸಾದ್ ಭಟ್ ಅಮೈ ಅವರ ನೇತೃತ್ವದಲ್ಲಿ ವಿಧಿಗಳು ನಡೆದವು. ಹವ್ಯಕ ಮಹಾಮಂಡಲದ ಅಧ್ಯಕ್ಷ ಹರಿಪ್ರಸಾದ ಪೆರಿಯಪ್ಪು, ಮುಳಿಯ ತಿಮ್ಮಪ್ಪಯ್ಯ ಸ್ಮಾರಕ ಕಟ್ಟಡ ಕ್ರಿಯಾ ಸಮಿತಿಯ ಅಧ್ಯಕ್ಷ ಮೋಹನ ಎ., ಹವ್ಯಕ ಮಹಾಮಂಡಲದ ಉಪಾಧ್ಯಕ್ಷ ಶಿವಶಂಕರ ಭಟ್, ಮಂಗಳೂರು ಮಂಡಲದ ಉಪಾಧ್ಯಕ್ಷ […]

ಚಿಣ್ಣರೊಂದಿಗೆ ಚಿನ್ಮಯಮೂರುತಿ

ಬೆಂಗಳೂರು: ನಿಜ ಜ್ಯೇಷ್ಠ ಏಕಾದಶಿಯಿಂದ ಚತುರ್ದಶಿಯವರೆಗೆ (10-07-2026 ಇಂದ 13-07-2026) ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯವು ವಿಜಯನಗರದಲ್ಲಿರುವ ಶ್ರೀಭಾರತೀ ವಿದ್ಯಾಲಯಕ್ಕೆ ಲಭಿಸಿದ್ದು, ಶಾಲೆಯ ಇತಿಹಾಸದಲ್ಲಿ ಚಿರಸ್ಮರಣೀಯವಾದ ಆಧ್ಯಾತ್ಮಿಕ ಅಧ್ಯಾಯವಾಗಿ ಉಳಿಯಿತು. ನಾಲ್ಕು ದಿನಗಳ ಕಾಲ ನಡೆದ ‘ಜ್ಞಾನಯಾನ’ ಕಾರ್ಯಕ್ರಮವು ಶಾಲೆಯ ಸಮಗ್ರ ವಾತಾವರಣವನ್ನು ಭಕ್ತಿ, ಸಂಸ್ಕಾರ ಹಾಗೂ ಜ್ಞಾನಪ್ರಕಾಶದಿಂದ ಆವರಿಸಿತು. ಜುಲೈ 10ರಂದು ಪರಮಪೂಜ್ಯ ಶ್ರೀಸಂಸ್ಥಾನದವರನ್ನು ಪೂರ್ಣಕುಂಭದೊಂದಿಗೆ ಭಕ್ತಿಪೂರ್ವಕವಾಗಿ ಸ್ವಾಗತಿಸಲಾಯಿತು. ಆಡಳಿತ ಮಂಡಳಿ, ಶಿಕ್ಷಕರು, ಸಿಬ್ಬಂದಿ ಹಾಗೂ ಭಕ್ತವೃಂದದ ಉಪಸ್ಥಿತಿಯಲ್ಲಿ ನಡೆದ ಧೂಳಿ ಪಾದುಕಾಪೂಜೆಯೊಂದಿಗೆ […]