‘ಧನ್ಯಜನನೀ’ ವಿಶೇಷ ಪುರಸ್ಕಾರ ಪ್ರದಾನ
ಹೊಸನಗರ: ಪ್ರಧಾನ ಮಠದಲ್ಲಿ ನಡೆಯುತ್ತಿರುವ ‘ಶ್ರೀರಾಮೋತ್ಸವ’ದಲ್ಲಿ ಫಾಲ್ಗುನ ಶುಕ್ಲ ಅಷ್ಟಮಿಯಂದು (26-03-2026) ಮಾತೃಸಮಾವೇಶದಲ್ಲಿ ಪರಮಪೂಜ್ಯ ಶ್ರೀಸಂಸ್ಥಾನದವರು ‘ಧನ್ಯಜನನೀ’ ಪುರಸ್ಕಾರವನ್ನು ಅನುಗ್ರಹಿಸಿದರು. ಒಟ್ಟು 87 ಮಾತೆಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸನಾತನಧರ್ಮದ ಸಂರಕ್ಷಣೆಯ ದಿಶೆಯಲ್ಲಿ, ಸಮಾಜಕ್ಷಯವನ್ನು ತಡೆಯುವ ನಿಟ್ಟಿನಲ್ಲಿ ಶ್ರೀಸಂಸ್ಥಾನದವರು ಉದ್ಘೋಷಿಸಿದ್ದ ಈ ಪುರಸ್ಕಾರವು ಮೂರು ಅಥವಾ ಅದಕ್ಕೂ ಅಧಿಕ ಮಕ್ಕಳನ್ನು ಪಡೆದ ಮಾತೆಯರಿಗೆ ನೀಡುವ ಅನುಪಮ ಗೌರವ. ಶ್ರೀಸಂಸ್ಥಾನದವರು ಶ್ರೀಸಂದೇಶವನ್ನು ಅನುಗ್ರಹಿಸುತ್ತಾ ‘ಸಂತಾನವೇ ಸಂಪತ್ತು. ಮಕ್ಕಳು ಬೇಡ ಎಂಬ ಆಧುನಿಕ ಚಿಂತನೆ ದೇಶದ ವಿನಾಶಕ್ಕೆ ಕಾರಣವಾಗಬಹುದಾಗಿದೆ. ಮಿತ […]
ಸ್ಮಾರ್ಟ್ ತರಗತಿ ಉದ್ಘಾಟನೆ
ನಂತೂರು: ಫಾಲ್ಗುನ ಕೃಷ್ಣ ನವಮಿಯಂದು (12-03-2026) ಶ್ರೀಭಾರತೀ ಸಮೂಹ ಸಂಸ್ಥೆಯಲ್ಲಿ ಸ್ಮಾರ್ಟ್ ತರಗತಿ ಉದ್ಘಾಟಿಸಲಾಯಿತು. ಮಂಗಳೂರು ಆರ್.ಆರ್.ವಿ.ಎಸ್. ಮತ್ತು ಕೋ ಎಲ್.ಎಲ್.ಪಿ. ಚಾರ್ಟರ್ಡ್ ಅಕೌಂಟೆಂಟ್ಸ್ ಪಾಲುದಾರ ವಿಘ್ನೇಶ ಎಮ್. ಅವರು ಉದ್ಘಾಟಿಸಿ ‘ಇದು ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತ ಮತ್ತು ಆವಶ್ಯಕ. ಪರಿಣಾಮಕಾರಿ ಶಿಕ್ಷಣಕ್ಕೆ ಒತ್ತು ನೀಡಿದ ಆಡಳಿತ ಮಂಡಳಿ ಉತ್ತಮ ಭವಿಷ್ಯ ರೂಪಿಸುವ ಕೈಂಕರ್ಯ ಮಾಡಿದೆ’ ಎಂದು ಹೇಳಿದರು. ಸಂಸ್ಥೆಯ ಕಾರ್ಯಾಧ್ಯಕ್ಷ ಗಣೇಶಮೋಹನ ಕಾಶಿಮಠ ಅಧ್ಯಕ್ಷತೆ ವಹಿಸಿ ‘ಈ ತಾಂತ್ರಿಕ ವ್ಯವಸ್ಥೆಯನ್ನು ಶಿಕ್ಷಕರು ಬಳಸಿ, ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಲು […]