ಗೋಧೂಳಿಯಲ್ಲಿ ಗಾನಲಹರೀ
ಮಾಲೂರು: ಶ್ರೀರಾಘವೇಂದ್ರ ಗೋಆಶ್ರಮದಲ್ಲಿ ನಿಜ ಜ್ಯೇಷ್ಠ ಶುಕ್ಲ ಚತುರ್ದಶಿಯಂದು (28-06-2026) ಆಶ್ರಮದ ವೈದಿಕ ಪ್ರಮುಖರಾದ ಸುಕುಮಾರ ಜೋಯಿಸ ಕರುವಜೆ ಅವರ ಸಹೋದರ ವಿಘ್ನೇಶ ಮತ್ತು ಸೌಮ್ಯಾ ದಂಪತಿಗಳಿಂದ ‘ಶ್ರೇಯಸ್ಕರೀ ಯಾಗಶಾಲೆ’ಯಲ್ಲಿ ಶ್ರೀಸತ್ಯನಾರಾಯಣ ಪೂಜೆ ನಡೆಯಿತು. ಇನ್ನೂ ಹೆಚ್ಚಿನ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ, ಅವರ ಆರತಕ್ಷತೆಯನ್ನು ಕರುವಜೆ ಕುಟುಂಬ ಏರ್ಪಡಿಸಿತ್ತು. ಶ್ರೀಸಿದ್ಧಾಂಜನೇಯ ಸ್ವಾಮಿ ದೇವರ ಸನ್ನಿಧಿಯಲ್ಲಿ ವಿಶೇಷ ಸೇವೆಯನ್ನು ಕರುವಜೆ ಸುಕುಮಾರ ಜೋಯಿಸರ ಕುಟುಂಬದವರು ಸಲ್ಲಿಸಿದರು. ಇದೇ ಸಂದರ್ಭದಲ್ಲಿ ವಿದುಷಿ ಧನ್ಯಾಶ್ರೀ ಕಾಂಚನ ಅವರ ತಂಡದವರು ಸುಶ್ರಾವ್ಯವಾಗಿ ದೇವರ […]
ವಿದ್ಯೆ-ವಾತ್ಸಲ್ಯಗಳ ವಿಶೇಷ ಬೆಸುಗೆ
ಅಶೋಕೆ: ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಹಲವು ತಿಂಗಳಿಂದ ಪ್ರತಿ ತಿಂಗಳು ಮಾತೃವಂದನೆ-ಛಾತ್ರಭಿಕ್ಷೆ ನಡೆಯುತ್ತಿದೆ. ಗುರುಕುಲದ ವಿದ್ಯಾರ್ಥಿಗಳು ಸಮಾಜದ ಅನೇಕ ಮಾತೆಯರನ್ನು ಪೂಜಿಸಿ ಅವರಿಂದ ಛಾತ್ರಭಿಕ್ಷೆ ಸ್ವೀಕರಿಸುವ ಅಪೂರ್ವ ಕಾರ್ಯಕ್ರಮವಿದು. ಪರಮಪೂಜ್ಯ ಶ್ರೀಸಂಸ್ಥಾನದವರ ದಿವ್ಯನಿರ್ದೇಶನದಂತೆ ನಡೆಯುತ್ತಿರುವ ಈ ಸಮ್ಮಿಲನ ವಿದ್ಯೆ-ವಾತ್ಸಲ್ಯಗಳ ವಿಶೇಷ ಬೆಸುಗೆ. ಈ ವರ್ಷದ ಮೊದಲ ಮಾತೃವಂದನೆ-ಛಾತ್ರಭಿಕ್ಷೆ ಕಾರ್ಯಕ್ರಮ ದಿನಾಂಕ ನಿಜ ಜ್ಯೇಷ್ಠ ಕೃಷ್ಣ ಪಾಡ್ಯದಂದು (30-06-2026) ಗುರುದೃಷ್ಟಿ ಭವನದಲ್ಲಿ ನಡೆಯಿತು. ಪರಂಪರಾ ಗುರುಕುಲದ ವಿದ್ಯಾರ್ಥಿಗಳಿಗೆ ಹೊನ್ನಾವರ ಮಂಡಲದ ಮಾತೆಯರು ಛಾತ್ರಭಿಕ್ಷೆಯನ್ನಿತ್ತರು. ೭೪ ಮಾತೆಯರು ಭಾಗವಹಿಸಿದ್ದರು. ಸುಧನ್ವ ಆರ್ಯ […]