ವಿದ್ಯೆ-ವಾತ್ಸಲ್ಯಗಳ ವಿಶೇಷ ಬೆಸುಗೆ

ಅಶೋಕೆ: ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಹಲವು ತಿಂಗಳಿಂದ ಪ್ರತಿ ತಿಂಗಳು ಮಾತೃವಂದನೆ-ಛಾತ್ರಭಿಕ್ಷೆ ನಡೆಯುತ್ತಿದೆ. ಗುರುಕುಲದ ವಿದ್ಯಾರ್ಥಿಗಳು ಸಮಾಜದ ಅನೇಕ ಮಾತೆಯರನ್ನು ಪೂಜಿಸಿ ಅವರಿಂದ ಛಾತ್ರಭಿಕ್ಷೆ ಸ್ವೀಕರಿಸುವ ಅಪೂರ್ವ ಕಾರ್ಯಕ್ರಮವಿದು. ಪರಮಪೂಜ್ಯ ಶ್ರೀಸಂಸ್ಥಾನದವರ ದಿವ್ಯನಿರ್ದೇಶನದಂತೆ ನಡೆಯುತ್ತಿರುವ ಈ ಸಮ್ಮಿಲನ ವಿದ್ಯೆ-ವಾತ್ಸಲ್ಯಗಳ ವಿಶೇಷ ಬೆಸುಗೆ. ಈ ವರ್ಷದ ಮೊದಲ ಮಾತೃವಂದನೆ-ಛಾತ್ರಭಿಕ್ಷೆ ಕಾರ್ಯಕ್ರಮ ದಿನಾಂಕ ನಿಜ ಜ್ಯೇಷ್ಠ ಕೃಷ್ಣ ಪಾಡ್ಯದಂದು (30-06-2026) ಗುರುದೃಷ್ಟಿ ಭವನದಲ್ಲಿ ನಡೆಯಿತು. ಪರಂಪರಾ ಗುರುಕುಲದ ವಿದ್ಯಾರ್ಥಿಗಳಿಗೆ ಹೊನ್ನಾವರ ಮಂಡಲದ ಮಾತೆಯರು ಛಾತ್ರಭಿಕ್ಷೆಯನ್ನಿತ್ತರು. ೭೪ ಮಾತೆಯರು ಭಾಗವಹಿಸಿದ್ದರು. ಸುಧನ್ವ ಆರ್ಯ […]

ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

ಮುಜುಂಗಾವು: ಶ್ರೀಭಾರತೀ ವಿದ್ಯಾಪೀಠದಲ್ಲಿ ನಿಜ ಜ್ಯೇಷ್ಠ ಕೃಷ್ಣ ಪಾಡ್ಯದಂದು (30-06-2026) ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಸಹಯೋಗದಿಂದ ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆಯನ್ನು ಅಂತರ್ಜಾಲ ಮೂಲಕ ನಡೆದ ಕಾರ್ಯಕ್ರಮದ ದ್ವಾರಾ ಆಚರಿಸಲಾಯಿತು. ಶ್ರೀಕ್ಷೇತ್ರ ಧರ್ಮಸ್ಥಳದ ಶ್ರೀಮಂಜುನಾಥಸ್ವಾಮಿ ದೇವಸ್ಥಾನದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಡಾ. ಹೇಮಾವತಿ ಅಮ್ಮನವರು ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನವನ್ನು ನೀಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಬೆಂಗಳೂರಿನ ಸ್ಪೆಷಲ್ ಪೊಲೀಸ್ ಆಫೀಸರ್ ಡಾ. ವೆಂಕಟೇಶ್ ಪ್ರಸನ್ನ […]