ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ
ಮುಜುಂಗಾವು: ಶ್ರೀಭಾರತೀ ವಿದ್ಯಾಪೀಠದಲ್ಲಿ ನಿಜ ಜ್ಯೇಷ್ಠ ಕೃಷ್ಣ ಪಾಡ್ಯದಂದು (30-06-2026) ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಸಹಯೋಗದಿಂದ ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆಯನ್ನು ಅಂತರ್ಜಾಲ ಮೂಲಕ ನಡೆದ ಕಾರ್ಯಕ್ರಮದ ದ್ವಾರಾ ಆಚರಿಸಲಾಯಿತು. ಶ್ರೀಕ್ಷೇತ್ರ ಧರ್ಮಸ್ಥಳದ ಶ್ರೀಮಂಜುನಾಥಸ್ವಾಮಿ ದೇವಸ್ಥಾನದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಡಾ. ಹೇಮಾವತಿ ಅಮ್ಮನವರು ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನವನ್ನು ನೀಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಬೆಂಗಳೂರಿನ ಸ್ಪೆಷಲ್ ಪೊಲೀಸ್ ಆಫೀಸರ್ ಡಾ. ವೆಂಕಟೇಶ್ ಪ್ರಸನ್ನ […]
‘ಪ್ರತಿರುದ್ರ’ ಪಥದಲ್ಲಿ ೩೦೦ನೇ ಹೆಜ್ಜೆ
ಪಳ್ಳತ್ತಡ್ಕ: ನಿಜ ಜ್ಯೇಷ್ಠ ಶುಕ್ಲ ತ್ರಯೋದಶೀ (27-06-2026) ಎಂಬುದು ಪಳ್ಳತಡ್ಕ ವಲಯದ ಕಾರ್ಯಕರ್ತರ ಸುಮಾರು 12 ವರ್ಷಗಳ ನಿರಂತರ ಪ್ರಯತ್ನದ ಸಾಫಲ್ಯದ ಒಂದು ದಿನ. ಪರಮಪೂಜ್ಯ ಶ್ರೀಸಂಸ್ಥಾನದವರ ದಿವ್ಯ ಆಶೀರ್ವಾದದೊಂದಿಗೆ ಸಂಪನ್ನವಾದ ಕೋಟಿರುದ್ರ ಎಂಬ ಕಾರ್ಯಕ್ರಮದ ಅನಂತರ, ‘ಇದು ವಲಯಗಳ ಪ್ರತೀ ಶಿಷ್ಯ ಭಕ್ತನ ಮನೆಯಲ್ಲೂ ಮುಂದುವರಿಯಬೇಕು’ ಎಂಬ ಗುರುವಚನವನ್ನು ಶಿರಸಾ ವಹಿಸಿ ಪಾಲಿಸಿದವರು ಪಳ್ಳತ್ತಡ್ಕ ವಲಯದ ಕಾರ್ಯಕರ್ತರು. ‘ಪ್ರತಿರುದ್ರ’ ಎಂಬ ಗುರುಗಳಿತ್ತ ಅಭಿಧಾನದೊಂದಿಗೆ ಮುಂಬರಿದು ಇಂದು ಮುನ್ನೂರನೇ ಪ್ರತಿರುದ್ರವೆಂಬ ಒಂದು ಘಟ್ಟವನ್ನು ಯಶಸ್ವಿಯಾಗಿ ತಲುಪಿದರು. ಪ್ರತೀ […]