‘ವನಜೀವನ ಯಜ್ಞ’ದ ಪ್ರೇರಣೆ

ಉಜಿರೆ: ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹಲವು ವರ್ಷಗಳ ಹಿಂದೆ ಸಂಕಲ್ಪಿಸಿ ಮಾರ್ಗದರ್ಶಿಸಿದ ಯೋಜನೆ ‘ವನಜೀವನ-ಯಜ್ಞ’. ಸಸ್ಯ-ವೃಕ್ಷ ಸಂಪತ್ತನ್ನು ಉಳಿಸಿ-ಬೆಳೆಸಿ ಪ್ರಕೃತಿಯ ಸಂರಕ್ಷಣೆ ಮೂಲಕ ಭಗವಂತನನ್ನು ಸಂಪ್ರೀತಗೊಳಿಸುವ ವಿಶೇಷ ‘ಯಜ್ಞ’ ಇದು. ಕುಕ್ಕಿನಕಟ್ಟೆಯ ರಾಮಕೃಷ್ಣ ಭಟ್ ಬೈಪದವು ಹಾಗೂ ಮನೆಯವರು ‘ವನಜೀವನ ಯಜ್ಞ’ದ ಆಶಯವನ್ನು ಹೃದ್ಗತವಾಗಿಸಿಕೊಂಡು ಹಲವು ವರ್ಷಗಳಿಂದ ಹಲವೆಡೆ ಸಸಿವಿತರಣೆಯನ್ನು ಮಾಡುತ್ತಿದ್ದಾರೆ. ಮಾಣಿ ಮಠದಲ್ಲಿ ನಡೆದ ವಿಜಯ ಚಾತುರ್ಮಾಸ್ಯದ ಸಂದರ್ಭದಿಂದ ಆರಂಭಿಸಿ ಪ್ರತಿವರ್ಷವೂ ನೂರಾರು ಸಸಿಗಳನ್ನು ಸೇವಾರೂಪದಲ್ಲಿ ನೀಡುತ್ತಿದ್ದಾರೆ. ಹೊಸನಗರದ ಶ್ರೀಚಂದ್ರಮೌಳೀಶ್ವರ ದೇವಸ್ಥಾನಕ್ಕೆ ಬಿಲ್ವಪತ್ರ ಸಸಿಗಳ […]

‘ಗೋವು-ಮಣ್ಣು-ಅಡಿಕೆ’ ಮಾಹಿತಿ ಶಿಬಿರ ಸಂವಾದ

ಸಿದ್ದಾಪುರ: ಅಧಿಕ ಜ್ಯೇಷ್ಠ ಕೃಷ್ಣ ಅಮಾವಾಸ್ಯೆಯಂದು (15.06.2026) ಗೋಸ್ವರ್ಗದ ಸಂಶೋಧನಾ ಕೇಂದ್ರದಲ್ಲಿ ಶ್ರೀರಾಮಚಂದ್ರಾಪುರ ಮಠದ ಸಂಶೋಧನಾ ಖಂಡ, ಕಾಮದುಘಾ ಟ್ರಸ್ಟ್, ಗೋಫಲ ಟ್ರಸ್ಟ್, ಗೋಸ್ವರ್ಗ, ಶ್ರೀರಾಮದೇವ ಮಠ ಬಾನ್ಕಳಿ ಮತ್ತು ಮಾತೃತ್ವಮ್ ಇವರ ಜಂಟಿ ಆಶ್ರಯದಲ್ಲಿ ‘ಗೋವು-ಮಣ್ಣು-ಅಡಿಕೆ’ ಕುರಿತ ಮಾಹಿತಿ ಶಿಬಿರ ಮತ್ತು ಕೃಷಿ ಸಂವಾದ ಕಾರ್ಯಕ್ರಮವು ವಿಜಯವಾಗಿ ನೆರವೇರಿತು.   ಕೃಷಿ ಇಲಾಖೆ ಸಿದ್ದಾಪುರ, ಕೆ.ವಿ.ಕೆ. ಶಿರಸಿ ಹಾಗೂ ತೋಟಗಾರಿಕೆ ಇಲಾಖೆ ಸಹಕಾರದೊಂದಿಗೆ ವನಮಹೋತ್ಸವದ ಮೂಲಕ ಆರಂಭಗೊಂಡ ಈ ಕಾರ್ಯಕ್ರಮದಲ್ಲಿ ಸಂಶೋಧನಾ ಖಂಡದ ಸಂಯೋಜಕ ಡಾ. […]