‘ಬೋಧಶ್ರೀ ಸಭಾಭವನ’ ಲೋಕಾರ್ಪಣೆ

ಮಂಗಳೂರು: ಪರಮಪೂಜ್ಯ ಶ್ರೀಸಂಸ್ಥಾನದವರು 05-07-2026 ರಂದು ನಂತೂರಿನ ಶ್ರೀಭಾರತೀ ಸಮೂಹ ಸಂಸ್ಥೆಗೆ ಚಿತ್ತೈಸಿದ್ದರು. ಈ ಸಂದರ್ಭದಲ್ಲಿ ಸಂಸ್ಥೆಯಲ್ಲಿ ನವೀಕೃತಗೊಂಡ ಸಭಾಭವನವನ್ನು ಲೋಕಾರ್ಪಣೆಗೊಳಿಸಿ ಆಶೀರ್ವದಿಸಿದರು. ಸಭಾಭವನಕ್ಕೆ ‘ಬೋಧಶ್ರೀ ಸಭಾಭವನ’ ಎಂಬ ಹೆಸರನ್ನು ಅನುಗ್ರಹಿಸಿದರು. ‘ಈ ಸಭಾಭವನ ಎಲ್ಲರನ್ನೂ ಆಹ್ವಾನಿಸುತ್ತಿದೆ. ಉತ್ತಮವಾಗಿ ರೂಪುಗೊಂಡಿದೆ. ವಿದ್ಯಾರ್ಥಿಗಳು, ಶಿಕ್ಷಕ-ಶಿಕ್ಷಕೇತರ ವೃಂದದವರು ಸಮಿತಿ ಪದಾಧಿಕಾರಿಗಳು ಈ ಸಭಾಭವನ ನವೀಕರಣ ಕಾರ್ಯದಲ್ಲಿ ಶ್ರಮಪಟ್ಟಿರುವುದು ಕಂಡುಬರುತ್ತದೆ. ಕೆಲ ಕೆಲಸಗಳು ಧನವ್ಯಯ ಮಾಡಿದರೂ ಇಷ್ಟು ಸುಂದರವಾಗಿ ಮೂಡಿಬರುವುದಿಲ್ಲ. ಹಾಗಾಗಿ ಇದು ಶ್ರೇಷ್ಠವಾಗಿದೆ. ಶ್ರಮವಹಿಸಿದವರೆಲ್ಲರಿಗೂ ಸಹಕರಿಸಿದವರೆಲ್ಲರಿಗೂ ಆಶೀರ್ವಾದಗಳು’ ಎಂದು ಅವರು […]

ಶ್ರೀಭಾರತೀ ವಿದ್ಯಾಪೀಠದಲ್ಲಿ ಶ್ರೀಸಾನ್ನಿಧ್ಯ

ಬದಿಯಡ್ಕ: ನಿಜ ಜ್ಯೇಷ್ಠ ಕೃಷ್ಣ ಪಂಚಮಿಯಂದು (05-07-2026) ಶ್ರೀಭಾರತೀ ವಿದ್ಯಾಪೀಠಕ್ಕೆ ಪರಮಪೂಜ್ಯ ಶ್ರೀಸಂಸ್ಥಾನದವರು ಪಾದಬೆಳೆಸಿದ ಪುಣ್ಯಸಂದರ್ಭ. ಪರಮಪೂಜ್ಯರನ್ನು ಪೂರ್ಣಕುಂಭದೊಡನೆ ಸ್ವಾಗತಿಸಲಾಯಿತು. ಷಷ್ಠಿಯಂದು ಶಾಲೆಯ ವತಿಯಿಂದ ಶ್ರೀಗುರುಭಿಕ್ಷಾಸೇವೆ ನಡೆಯಿತು. ಶಾಲಾ ನಿರ್ದೇಶಕ ಜಯಪ್ರಕಾಶ ಪಜಿಲ ದಂಪತಿಗಳು ಶ್ರೀಗುರುಭಿಕ್ಷಾಸೇವೆ ನೆರವೇರಿಸಿದರು.   ಇತ್ತೀಚೆಗೆ ಉದ್ಘಾಟನೆಗೊಂಡ ಮಕ್ಕಳ ನಿತ್ಯಭೋಜನ ವ್ಯವಸ್ಥೆಗೆ ಅನುಕೂಲಕರ ಸೌಕರ್ಯಗಳನ್ನೊಳಗೊಂಡ ‘ಅನ್ನಮಯೀ’ ಕಟ್ಟಡವನ್ನು ಪರಮಪೂಜ್ಯರು ವೀಕ್ಷಿಸಿ ಆಶೀರ್ಮಂತ್ರಾಕ್ಷತೆಯನ್ನು ನೀಡಿ ಹರಸಿದರು. ಶಾಲಾ ಕಟ್ಟಡಗಳನ್ನು ವೀಕ್ಷಿಸಿ ನೂತನ ಆಡಳಿತ ಮಂಡಳಿಯ ಸದಸ್ಯರನ್ನು ಆಶೀರ್ವದಿಸಿದರು. ಶಾಲೆಯ ಮುಂದಿನ ಚಟುವಟಿಕೆಗಳ ಬಗ್ಗೆ ಮಾರ್ಗದರ್ಶನವನ್ನಿತ್ತರು.