ಶಕಟಪುರದಲ್ಲಿ ಶ್ರೀಪೂರ್ಣಾಭಿಷೇಕ
ಶಕಟಪುರ: ಫಾಲ್ಗುನ ಶುಕ್ಲ ಪಂಚಮಿಯಂದು (22-02-2026) ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಶ್ರೀಕ್ಷೇತ್ರ ಶಕಟಪುರದ ಶ್ರೀವಿದ್ಯಾಪೀಠದ ಪರಮಪೂಜ್ಯ ಶ್ರೀಜಗದ್ಗುರು ಬದರೀ ಶಂಕರಾಚಾರ್ಯ ಶ್ರೀವಿದ್ಯಾಭಿನವ ಶ್ರೀಶ್ರೀಕೃಷ್ಣಾನಂದತೀರ್ಥ ಮಹಾಸ್ವಾಮಿಗಳವರ ಶ್ರೀವಿದ್ಯಾಮಹಾಸನಾರೋಹಣದ ಶ್ರೀಪೂರ್ಣಾಭಿಷೇಕವನ್ನು ನೆರವೇರಿಸಿದರು. ಅನಂತರ ಧರ್ಮಸಭೆಯಲ್ಲಿ ಆಶೀರ್ವಚನವನ್ನು ಅನುಗ್ರಹಿಸಿದರು. ‘ಇದು ಜಗತ್ತಿನ ಎಲ್ಲ ಆಸ್ತಿಕರು ಹೆಮ್ಮೆ ಪಡಬೇಕಾದ ಕಾರ್ಯಕ್ರಮ. ಎಲ್ಲ ಸಂತರೂ ಸಮಾಧಾನ ಪಡುವ ಕಾರ್ಯಕ್ರಮ’ ಎಂದು ವೈಭವೋಪೇತವಾಗಿ ನಡೆದ ಶ್ರೀಪೂರ್ಣಾಭಿಷೇಕದ ಬಗ್ಗೆ ನುಡಿದರು. ‘ಇಲ್ಲಿನ ಸಿಂಹಾಸನ ಬಹಳ ದೊಡ್ಡದು. ಏಕೆಂದರೆ ಈ ಪರಂಪರೆಯೂ ಬಹಳ ದೊಡ್ಡದು. ಬದರಿಯಿಂದ ಇಲ್ಲಿಗೆ […]
ಅಂಗಸಂಸ್ಥೆಗಳಲ್ಲಿ ಶಿವಾರಾಧನೆ
ವಿಶ್ವಾವಸು ಸಂವತ್ಸರದ ಮಾಘ ಕೃಷ್ಣ ಚತುರ್ದಶಿಯಂದು (15-02-2026) ಶಿವರಾತ್ರಿ ಹಬ್ಬ ಜಗದಗಲ ವಿವಿಧ ರೀತಿಯಲ್ಲಿ ಆಚರಿಸಲ್ಪಟ್ಟಿದೆ. ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಅನುಗ್ರಹ ಹಾಗೂ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಶ್ರೀರಾಮಚಂದ್ರಾಪುರ ಮಠದ ವಿವಿಧ ಅಂಗಸಂಸ್ಥೆಗಳಲ್ಲಿಯೂ ಸಡಗರದಿಂದ ಶಿವರಾತ್ರಿ ಮಹಾರಾಧನೆ ನಡೆಸಲಾಯಿತು. ಮಹಾಶಿವರಾತ್ರಿಯ ದಿನದಂದು ಅಶೋಕೆಯ ಶ್ರೀಮಲ್ಲಿಕಾರ್ಜುನ ದೇವರ ಸನ್ನಿಧಿಯಲ್ಲಿ ಮೃತ್ಯುಂಜಯ ಶಾಂತಿ-ರುದ್ರಹವನಗಳಲ್ಲದೇ, ವಿಶೇಷವಾಗಿ ರಾತ್ರಿ ನಾಲ್ಕು ಯಾಮಗಳಲ್ಲಿ ರುದ್ರಪಠನ ನಡೆಯಿತು. ಸಂಗೀತ, ಯಕ್ಷಗಾನ, ಭರತನಾಟ್ಯದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮರ್ಪಿತಗೊಂಡವು. ಪರಮಪೂಜ್ಯ ಶ್ರೀಸಂಸ್ಥಾನದವರು ಶ್ರೀಗಣಪತಿ ಮತ್ತು ಶ್ರೀಮಲ್ಲಿಕಾರ್ಜುನ ಸಾನ್ನಿಧ್ಯಗಳ […]