ವರ್ಷಾಕಾಲದ ವನಮಹೋತ್ಸವ

ಕೊಲಾಡ: ಹವ್ಯಕ ಮಹಾಮಂಡಲಾಂತರ್ಗತ ಭಾರತ ಮಂಡಲ – ಮುಂಬಯಿ ವಲಯದ ರಾಯಗಡ ಜಿಲ್ಲೆಯ ಕೊಲಾಡಿನಲ್ಲಿರುವ ಅಮೃತಧಾರಾ ಗೋಶಾಲೆಯ ಪರಿಸರದಲ್ಲಿ ಪರಮಪೂಜ್ಯ ಶ್ರೀಸಂಸ್ಥಾನದವರ ಆಶೀರ್ವಾದದಿಂದ ಪ್ರತಿ ವರ್ಷದಂತೆ ಈ ವರ್ಷವೂ ವನಮಹೋತ್ಸವವನ್ನು ನಿಜ ಜ್ಯೇಷ್ಠ ಕೃಷ್ಣ ಪಂಚಮಿಯಂದು (05-07-2026) ನಡೆಯಿತು. ಈ ಸಂದರ್ಭದಲ್ಲಿ ಮುಂಬೈ ವೆಲ್ಫೇರ್ ಟ್ರಸ್ಟಿನ ಅಧ್ಯಕ್ಷ ವಿಷ್ಣು ಭಾಗವತ, ಮುಂಬೈ ವಲಯದ ಅಧ್ಯಕ್ಷ ಗಣಪತಿ ಹೆಗಡೆ, ಕಾರ್ಯದರ್ಶಿ ಯು. ಟಿ. ಕೃಷ್ಣಮೂರ್ತಿ, ಮಾರಾಷ್ಟ್ರ ಪ್ರತಿಷ್ಠಾನದ ಅಧ್ಯಕ್ಷ ಕೃಷ್ಣ ಭಟ್, ಕಾರ್ಯದರ್ಶಿ ಜ್ಯೋತಿ ಅನಂತ ಭಟ್, ಖಜಾಂಚಿ […]

ಗುರುವಾಯೂರಿನಲ್ಲಿ ಗುರುವರರು

ತ್ರಿಶೂರು: ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಗುರುವಾಯೂರು ಕ್ಷೇತ್ರಕ್ಕೆ ಚಿತ್ತೈಸಿ ಶ್ರೀಕೃಷ್ಣ ದರ್ಶನ ಮಾಡಿದರು. ಶ್ರೀಕೃಷ್ಣ ಸನ್ನಿಧಾನಕ್ಕೆ ಶುದ್ಧ ನವನೀತದಿಂದ ಪರಮಪೂಜ್ಯ ಶ್ರೀಸಂಸ್ಥಾನದವರ ತುಲಾಭಾರದ ಸೇವೆ ನಡೆಯಿತು. ನವನೀತಪ್ರಿಯ ಶ್ರೀಕೃಷ್ಣನೆದುರಿನಲ್ಲಿ ನವನೀತದೊಂದಿಗೆ ಶ್ರೀಗುರುಗಳ ತುಲಾಭಾರ ಎಂಬ ಸಂಕಲ್ಪವನ್ನೀಡೇರಿಸುವ ಸಲುವಾಗಿ ಗೋಕರ್ಣ ಮಂಡಲಾದ್ಯಂತ ಮನೆ‌ಮನೆಗಳಿಂದ ನವನೀತ ಸಂಗ್ರಹವೆಂಬ ಗುರುಸೇವಾ ಕೈಂಕರ್ಯಕ್ಕೆ ನಿರೀಕ್ಷೆಗೂ ಮೀರಿದ ಫಲವೇ ದೊರಕಿತು. ವಿಶ್ವಗುರುವೆನಿಸಿದ ದೇವನ ಸನ್ನಿಧಿಯಾದ ಗುರುವಾಯೂರಿನ ಪುಣ್ಯಕ್ಷೇತ್ರದಲ್ಲಿ ಜಗದ್ಗುರು ಶ್ರೀಸಂಸ್ಥಾನದವರ ತುಲಾಭಾರವೆಂದು ಸಂಕಲ್ಪವನ್ನರಿತಾಗ ೧೦೦ ಕಿಲೋ ಬೆಣ್ಣೆ ಸಂಗ್ರಹವಾಗಬೇಕು ಎಂಬುದು ಕಾರ್ಯಕರ್ತರ […]