ಸಹಸ್ರ-ಸುವಾಸಿನೀ-ಪೂಜೆ

  ಕುಮಟಾ: ‘ಸುವಾಸಿನೀ – ಸುವಾಸಿನ್ಯರ್ಚನಪ್ರೀತಾ’ ತಾಯಿ ಲಲಿತಾಂಬಿಕೆಯು ಸುವಾಸಿನಿಯ ರೂಪದಲ್ಲಿದ್ದು, ಸುವಾಸಿನಿಯರ ಪೂಜೆಯಿಂದ ಸಂಪ್ರೀತಳಾಗುವವಳು ಎಂದು ಲಲಿತಾ ಸಹಸ್ರನಾಮದಲ್ಲಿ ಹೇಳಲಾಗಿದೆ. ಅಂತಹ ಸಹಸ್ರಾಧಿಕ ಸುವಾಸಿನಿಯರಿಗೆ ಪೂಜೆ ಹಾಗೂ ಅನ್ನಸಂತರ್ಪಣೆ ಸಲ್ಲಿಸುವ ಪವಿತ್ರ ಕಾರ್ಯಕ್ರಮವು ಅಧಿಕಜ್ಯೇಷ್ಠ ಶುಕ್ಲ ತದಿಗೆಯಂದು (19-05-2026) ಹೊಳೆಗದ್ದೆಯ ಶ್ರೀಶಾಂತಿಕಾ ಪರಮೇಶ್ವರೀ ದೇವಿಯ ಸನ್ನಿಧಿಯಲ್ಲಿ ಸಂಪನ್ನಗೊಂಡಿತು. ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯಸಂಕಲ್ಪ ಹಾಗೂ ಮಾರ್ಗದರ್ಶನದಂತೆ, ಹವ್ಯಕ ಮಹಾಮಂಡಲದ ಸಂಯೋಜನೆಯಲ್ಲಿ ಶಾಸ್ತ್ರೋಕ್ತ ವಿಧಾನದಲ್ಲಿ ಈ ಮಹಾಪೂಜೆ-ಮಹಾಸಂತರ್ಪಣೆ ನಡೆಯಿತು. ಮಹಾಮಂಡಲದ ಮಾತೃಪ್ರಧಾನರ ಮುಖಾಂತರ ಶ್ರೀಸಂಸ್ಥಾನದವರ […]

ವಸಂತ ವೇದ ಶಿಬಿರದ ಸಮಾರೋಪ

  ಮಂಗಳೂರು: ‘ಮನುಷ್ಯರಾಗಿ ಹುಟ್ಟಿದ ಮೇಲೆ ಭಗವಂತನ ಅನುಗ್ರಹ ಪಡೆಯಬೇಕು. ಆಗ ಮಾತ್ರ ಜೀವನ ಸಾರ್ಥಕಗೊಳ್ಳುತ್ತದೆ. ವೇದಾಧ್ಯಯನದ ಮೂಲಕ ವಟುಗಳು ಉತ್ತಮ ಜೀವನ ನಡೆಸುವಂತಾಗಬೇಕು’ ಎಂದು ಕೊಲ್ಲೂರು ಶ್ರೀಮೂಕಾಂಬಿಕಾ ಕ್ಷೇತ್ರದ ಪ್ರಧಾನ ಅರ್ಚಕ ವೇ| ಮೂ| ಕೆ. ವಿ. ಶ್ರೀಧರ ಅಡಿಗ ಹೇಳಿದರು.   ಅವರು ನಂತೂರಿನ ಶ್ರೀಭಾರತೀ ಸಮೂಹ ಸಂಸ್ಥೆಯಲ್ಲಿ ಅಧಿಕ ಜ್ಯೇಷ್ಠ ಬಿದಿಗೆಯಂದು (17-05-2026) ವಿಷ್ಣುಗುಪ್ತ ವಿಶ್ವವಿದ್ಯಾಪೀಠ – ಭಾರತೀ ಎಜುಕೇಷನ್ ಟ್ರಸ್ಟ್ – ಶಂಕರಶ್ರೀ ವಸಂತ ವೇದಪಾಠಶಾಲೆ ಸಮಿತಿ ಮತ್ತು ಸಂಘ ಸಂಸ್ಥೆಗಳ […]