ಗೋ ಸಹಿತ ಬದುಕು ಬದುಕಬೇಕು- ಶ್ರೀಸಂಸ್ಥಾನ

ಗೋವು ಶೂನ್ಯ ಬದುಕು ನಮ್ಮದಾಗಬಾರದು. ಗೋ ಸಹಿತ ಬದುಕು ಬದುಕಬೇಕು ಎಂದು ಶ್ರೀಸಂಸ್ಥಾನ ಗೋಕರ್ಣ ಶ್ರೀರಾಮಚಂದ್ರಾಪುರ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಹೇಳಿದರು. ಅವರು ಗೋಸ್ವರ್ಗದಲ್ಲಿ ಕಾಮದುಘಾ ಟ್ರಸ್ಟ್ ಹಾಗೂ ಮುಂಬಯಿ ದಿನೇಶ್ ಶಹರಾ ಪೌಂಡೇಶನ್ ಆಶ್ರಯದಲ್ಲಿ ಅನುಪಮ ಗೋಸೇವಕರಿಗಾಗಿ ನೀಡಲ್ಪಡುವ ರಾಜ್ಯ ಮಟ್ಟದ ಗೋಪಾಲ ಗೌರವ ಪ್ರಶಸ್ತಿ ಪ್ರಧಾನ ಮಾಡಿ ಆಶೀರ್ವಚನ ನೀಡಿದರು. ಪ್ರಶಸ್ತಿ ಪ್ರಧಾನ ಮಾಡಿದ ಮುಂಬಯಿ ದಿನೇಶ್ ಶಹರಾ ಪೌಂಡೇಶನ್ ಮುಖ್ಯಸ್ಥ ದಿನೇಶ್ ಶಹರಾ ಮಾತನಾಡಿ ಗೋವುಗಳು ಕುರಿತು ತಳುವಳಿಕೆ […]

Continue Reading

ಮಾತೃತ್ವಮ್ ಸಂಘಟನೆಯಿಂದ ಮೇವು ಸಮರ್ಪಣೆ

    ಮಾಲೂರು: ಮುಂದಿನ ಪೀಳಿಗೆಗಾಗಿ ಗೋವಿಗಳನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಮಾತೆಯರೆಲ್ಲರೂ ಗೋಸೇವೆಗೆ ಮುಂದಾದಾಗ ಎಲ್ಲಾ ಗೋಶಾಲೆಗಳು ಸಮೃದ್ಧತೆಯಿಂದ ಕೂಡಿರುತ್ತದೆ ಎಂದು ಮಾತೃತ್ವಮ್ ನ ಕೇಂದ್ರ ಕಾರ್ಯದರ್ಶಿ ನಾಗರತ್ನ ಜಿ. ಶರ್ಮ ಹೇಳಿದರು.   ಅವರು ಮಾಲೂರು ಗಂಗಾಪುರದ ಶ್ರೀ ರಾಘವೇಂದ್ರ ಗೋಆಶ್ರಮಕ್ಕೆ ಗೋವಿಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಮಾತೃತ್ವಮ್ ಸಂಘಟನೆಯ ಮಾಸದ ಮಾತೆಯರು ಆಗಮಿಸಿ ಮೇವು ಸಮರ್ಪಣೆ ಮಾಡಿದ ಬಳಿಕ ಮಾತನಾಡಿದರು.   ಗೋಆಶ್ರಮ ಸಮಿತಿ ಅಧ್ಯಕ್ಷ ಡಾ. ಶ್ಯಾಮಪ್ರಸಾದ ಮಾತನಾಡಿ ಬದುಕಿನಲ್ಲಿ […]

Continue Reading

ಪೇಜಾವರ ಶ್ರೀ ಗೋಆಶ್ರಮಕ್ಕೆ ಭೇಟಿ

ಪೇಜಾವರ ಮಠಾಧೀಶರಾದ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು ಮಾಲೂರು ಗಂಗಾಪುರದ ಶ್ರೀ ರಾಘವೇಂದ್ರ ಗೋಆಶ್ರಮಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಟೀಮ್ ಗೋಪಾಲ್ಸ್ ನವರು ಸಂಘಟಿಸಿದ ಗೋ ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ‌ ನೀಡಿದ ಶ್ರೀಗಳವರು ‘ಜೀವನ ಪೂರ್ತಿ ಹಾಲು ನೀಡಿ ನಮ್ಮನ್ನು ಸಲಹುವ ಗೋಮಾತೆಯನ್ನು ರಕ್ಷಿಸುವುದು ನಮ್ಮ ಆದ್ಯ ಕರ್ತವ್ಯವಾಗಬೇಕು. ಪ್ರತಿದಿನ‌ ನಾವು ಊಟ ಮಾಡುವ ಮೊದಲು ಗೋಗ್ರಾಸ ನೀಡಬೇಕು. ಇಂದಿನ‌ ಜೀವನ ಶೈಲಿಯಲ್ಲಿ ಇದು ಸಮಸ್ಯೆಯಾದರೆ ಮನೆಯಲ್ಲಿ ಹುಂಡಿ ಇಟ್ಟು ಊಟದ ಮೊದಲು […]

Continue Reading

ಮಾಲೂರು ಆಂಜನೇಯನ ವಿಗ್ರಹ ಬಾಲಾಲಯ

ಗಂಗಾಪುರ ಶ್ರೀ ರಾಘವೇಂದ್ರ ಗೋಆಶ್ರಮದಲ್ಲಿರುವ ಶ್ರೀ ಸಿದ್ಧಾಂಜನೇಯ ಸ್ವಾಮಿ ನೂತನ ಮಂದಿರ ನಿರ್ಮಾಣದ ಅಂಗವಾಗಿ ಗೋಕರ್ಣ ಪರಮೇಶ್ವರ ಭಟ್ಟ ಮಾರ್ಕಾಂಡೆ ಅವರ ನೇತೃತ್ವದಲ್ಲಿ ಕಲಾ ಸಂಕೋಚ ಹವನ, ಕಲಶಾಭಿಷೇಕ ನಡೆಸಿ, ಆಂಜನೇಯನ ವಿಗ್ರಹವನ್ನು ಬಾಲಾಲಯದಲ್ಲಿ ಸ್ಥಾಪಿಸಲಾಯಿತು. ಶ್ರೀಸಂಸ್ಥಾನ ಗೋಕರ್ಣ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿಯವರ ದಿವ್ಯಅನುಗ್ರಹ ಮಾರ್ಗದರ್ಶನದಲ್ಲಿ ದೇವಸ್ಥಾನದ ಪುನರ್ ನಿರ್ಮಾಣ ಕಾರ್ಯವನ್ನು ಆರಂಭಿಸಲಾಗಿದೆ. ಗೋವಿಂದ ಭಟ್ ವಳಕ್ಕುಂಜ ದಂಪತಿಗಳು ವಿಧಿವಿಧಾನಗಳನ್ನು ನಡೆಸಿದರು. ಶೀಘ್ರವಾಗಿ ಮಂದಿರ ನಿರ್ಮಾಣ ಹಾಗೂ ಗೋವುಗಳ ಕ್ಷೇಮಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಗೋಪ್ರೇಮಿಗಳಾದ […]

Continue Reading

ಆಚಾರ್ಯಭವನ ಮತ್ತು ಪುಣ್ಯಕೋಟಿ ಗೋಸ್ವರ್ಗ ಲೋಕಾರ್ಪಣೆ

ಮುರ್ಡೇಶ್ವರದಲ್ಲಿ ನೂತನವಾಗಿ ನಿರ್ಮಿಸಿರುವ ಆಚಾರ್ಯಭವನ ಮತ್ತು ಪುಣ್ಯಕೋಟಿ ಗೋಸ್ವರ್ಗವನ್ನು ಶ್ರೀಗಳವರು ಲೋಕಾರ್ಪಣ ಗೊಳಿಸಿದರು. ಈ ಸಂದರ್ಭದಲ್ಲಿ ಶಾಸಕ ಸುನಿಲ್ ನಾಯ್ಕ್, ಮಾಜಿ ಶಾಸಕ ಮಂಕಾಳು ವೈದ್ಯ ಮತ್ತು ಕಟ್ಟಡದ ನಿರ್ಮಾತೃ ಬಲಸೆ ಕೃಷ್ಣಾನಂದಭಟ್ ಉಪಸ್ಥಿತರಿದ್ದರು.

Continue Reading

ಬಲಿಪಾಡ್ಯಮಿ ಪ್ರಯುಕ್ತ ಗೋ ಪೂಜಾ ಕಾರ್ಯಕ್ರಮ

ಅಮೃತಧಾರಾ ಗೋಶಾಲೆ ಹೊಸಾಡು ಕುಮಟಾದಲ್ಲಿ ಬಲಿಪಾಡ್ಯಮಿ ಪ್ರಯುಕ್ತ ಗೋ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನೂರಾರು ಗೋಬಂಧುಗಳು ಕುಟುಂಬ ಸಮೇತಗೋ ಶಾಲೆಗೆ ಆಗಮಿಸಿ ಗೋವುಗಳಿಗೆ ಗೋಗ್ರಾಸ ನೀಡಿ ಧನ್ಯರಾದರು. ಜೊತೆಗೆ ಗೋಪೂಜೆ ಕಾಮಧೇನು ಪೂಜೆಯನ್ನು ನೆರವೇರಿಸಲಾಯಿತು. ಲಾಸಾ ಫೌಂಡೇಶನ್ ಮುಂಬಯಿ ನಿರ್ದೇಶಕರಾದ ಶಿವಾನಂದ ಹೆಗಡೆಯವರು ಕುಟುಂಬ ಸಮೇತ ಉಪಸ್ಥಿತರಿದ್ದು ಗೋ ಕುಟುಂಬದೊಡನೆ ಒಡನಾಡಿದರು. ಕಾಮಧೇನು ಪೂಜೆಯಲ್ಲಿ ಭಾಗವಹಿಸಿ ಪುಣ್ಯ ಭಾಜನರಾದರು. ಗೋಶಾಲೆಯ ಸ್ವಚ್ಛತೆ, ಆಹಾರ ಪೂರೈಕೆ. ವಿತರಿಸುವ ವಿಧಾನ ಇತ್ಯಾದಿಗಳನ್ನು ಗಮನಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಲಾಸ ಫೌಂಡೇಶನ್ ಮುಂಬೈ […]

Continue Reading

ಗೋಗ್ರಾಸ ಸೇವೆ

  ಮಾಣಿ ಮಠದ ಗೋಶಾಲೆಗೆ ದರ್ಬೆವಲಯ ಮುಕ್ರಂಪಾಡಿಯ ಮಧುರಕಾನ ಗಣಪತಿ ಭಟ್ಟರಿಂದ ೧,೬೦೦ ಸೂಡಿ ಬೈಹುಲ್ಲು ಕೊಡುಗೆಯಾಗಿ ನೀಡುವ ಮೂಲಕ ದೀಪಾವಳಿ ಗೋಪೂಜೆ ಯನ್ನು ಗೋಗ್ರಾಸದ ಸೇವೆಯೊಂದಿಗೆ ಅನ್ವರ್ಥವಾಗಿ ಆಚರಿಸಿದರು.

Continue Reading

೨೫ ವರ್ಷದ ಗೋವಿನ ಜತೆ ಮಹಾ ದಾನಿ

ಜೇಡ್ಲ ಗೋಶಾಲೆಯ ಜಾಗ ಹಾಗೂ ಐವತ್ತು ಮಲೆನಾಡು ಗಿಡ್ಡ ಗೋವುಗಳನ್ನು ಶ್ರೀಮಠಕ್ಕೆ ದಾನ ಮಾಡಿದ ಎನ್ ವೆಂಕಟರಾಮಯ್ಯ ಅವರು ೨೫ ವರ್ಷದ ಪಾರ್ವತಿ ಎನ್ನುವ ಗೋವಿಗೆ ಬೆಲ್ಲ ತಿನ್ನಿಸಿ ಸಂಭ್ರಮಿಸಿದರು.

Continue Reading

ಸೇವಾ ಅರ್ಘ್ಯದೊಂದಿಗೆ ಹುಟ್ಟು ಹಬ್ಬದ ಆಚರಣೆ

  ಪೆರಡಾಲ ವಲಯ ಮೀಸೆ ಬಯಲು ಘಟಕದ ಮಿಂಚಿನಡ್ಕ ರವೀಂದ್ರನಾಥ ಹಾಗೂ ವಿದ್ಯಾ ದಂಪತಿಯರು ಮಗ ಅನಘ ಶರ್ಮಾನ ಹುಟ್ಟು ಹಬ್ಬವನ್ನು  ಗೋವಿಗಾಗಿ ಮೇವು-ಮೇವಿಗಾಗಿ ನಾವು ಸೇವಾ ಅರ್ಘ್ಯದ ನೇತೃತ್ವ ವಹಿಸುವುದರ  ಮೂಲಕ ಆಚರಿಸಿದರು. ಹುಟ್ಟುಹಬ್ಬದಂದು ಸಾಮಾನ್ಯವಾಗಿ ಮಕ್ಕಳು  ಹೊಸ ಉಡುಗೆ ತೊಟ್ಟು ಸಂಭ್ರಮಿದರೆ ಈ ಹುಡುಗನ ವೇಷವೇ ಬೇರೆ. ಹುಲ್ಲು ಕತ್ತರಿಸುವ ಯಂತ್ರವನ್ನು ಹೆಗಲಿಗೇರಿಸಿ ಸ್ವಯಂ ತಯಾರಿಸಿದ ರಕ್ಷಣಾ ಪೋಷಾಕು!!! ಅನಘ ಶರ್ಮಾನ ಉತ್ಸಾಹವನ್ನು ಬಂದು ಗೋಕಿಂಕರರೆಲ್ಲರೂ ಕೊಂಡಾಡಿದರು. ನವೆಂಬರ್ 12 ಹಾಗೂ 13ರಂದು ನಡೆದ […]

Continue Reading

ಅಮೃತಧಾರಾ ಗೋಶಾಲೆ ಬಜಕೂಡ್ಲಿನಲ್ಲಿ ಹುಟ್ಟು ಹಬ್ಬ

ಮಾವಿನಕಟ್ಟೆಯ ಸದಾಶಿವ ಶರ್ಮ, ಸೌಮ್ಯ ದಂಪತಿಗಳ ಮಗಳು ಸಾನ್ವಿಯ ಹುಟ್ಟಿದ ದಿನವನ್ನು ಜಕೂಡ್ಲುಗೋಶಾಲೆಯಲ್ಲಿ ಆಚರಿಸಿದರು. ಭಜನೆ, ದೇವರಿಗೆ ವಂದನೆ, ಗೋಪೂಜೆ ಹಾಗೂ ಗೋಗ್ರಾಸ ಸಮರ್ಪಣೆ ಇತ್ಯಾದಿ ಎಲ್ಲ ನಡೆದು ಪುಟ್ಟಿ ಸಾನ್ವಿಯ ಹುಟ್ಟುಹಬ್ಬ ದೊಡ್ಡ ಸಂದೇಶವನ್ನು ಕೊಟ್ಟಿದೆ. ಗೋಗ್ರಾಸಕ್ಕೆ ಎಂದು ಚೀಲ ಭರ್ತಿ ಹಿಂಡಿಯನ್ನೂ ಮನೆಯವರು ಸಮರ್ಪಿಸಿದರು.

Continue Reading

ಸ್ಮರಣಾರ್ಥ ಹೋಸಾಡ ಗೋಶಾಲೆಗೆ ದೇಣಿಗೆ

  ಪರಮಯ್ಯ ಗಣೇಶ ಹೆಗಡೆ (ಮಾಬ್ಲ ಹೆಗಡೆ ಮನೆ ಕರ್ಕಿ) ಇವರು ತಮ್ಮ ತಂದೆ ದಿವಂಗತ ಗಣೇಶ ಹೆಗಡೆ ಮತ್ತು ತಾಯಿ ದಿವಂಗತ ಗಣಪಿ ಹೆಗಡೆ ಇವರ ಸ್ಮರಣಾರ್ಥ ಹೋಸಾಡ ಗೋಶಾಲೆಯ ಗೋವಿನ ಮೇವಿಗೆ ಒಂದು ಲಕ್ಷ ರೂಪಾಯಿಗಳನ್ನು ಸಮರ್ಪಿಸಿದರು.

Continue Reading

“ಸೇವಾ ಅರ್ಘ್ಯ” ಕಾರ್ಯಕ್ರಮ

ಬಜಕೂಡ್ಲು ಅಮೃತಧಾರಾ ಗೋಶಾಲೆ ಗೋವುಗಳ ಮೇವಿಗಾಗಿ ಹಸಿ ಹುಲ್ಲು ಸಂಗ್ರಹಿಸುವ “ಸೇವಾ ಅರ್ಘ್ಯ” ಕಾರ್ಯಕ್ರಮ ಅ.೧೧ ಮುಳ್ಳೇರಿಯಾ ಮಂಡಲ ಕುಂಬ್ಳೆ ವಲಯದ ನಾಣಿಹಿತ್ತಲು ಕೇಶವ ಪ್ರಸಾದ ಮನೆಯಲ್ಲಿ ಜರಗಿತು. ಮುಳ್ಳೇರಿಯಾ ಮಂಡಲ ಸಂಘಟನಾ ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ, ವಿದ್ಯಾರ್ಥಿವಾಹಿನೀ ಪ್ರಧಾನ ಗುರುಮೂರ್ತಿ ಮೇಣ, ಮುಷ್ಟಿ ಭಿಕ್ಷೆ ವಿಭಾಗ ಪ್ರಧಾನ ಡಾ ಡಿ ಪಿ ಭಟ್, ಕುಂಬ್ಳೆ ವಲಯ ಅಧ್ಯಕ್ಷ ಬಾಲಕೃಷ್ಣ ಶರ್ಮ, ಕಾರ್ಯದರ್ಶಿ ಗೋಪಾಲಕೃಷ್ಣ ಭಟ್ಟ, ನಾರಾಯಣ ಜಿ ಹೆಗಡೆ, ಮಹಾಬಲ ಶರ್ಮ, ವೆಂಕಟಕೃಷ್ಣ ಸಿ […]

Continue Reading

ಗೋಗ್ರಾಸ ಸಮರ್ಪಣೆ

ಪಳ್ಳತಡ್ಕ ವಲಯದ ಗುರಿಕಾರ ಶ್ರೀಕೃಷ್ಣ ಭಟ್ ಮುಣ್ಚಿಕಾನ ಮತ್ತು ಮನೆಯವರು ಬಜಕೂಡ್ಲು ಅಮೃತಧಾರಾ ಗೋಶಾಲೆಗೆ ಬಂದು ೧೦೮ ಗೋಗ್ರಾಸ ಸಮರ್ಪಣೆ ನಡೆಸಿ, ದೇಣಿಗೆಯನ್ನು ನೀಡಿದರು.

Continue Reading

ವೇಟ್ ಲಿಫ್ಟರ್ ಕೊಡುಗೆ

ಹೊಸಾಡಿನ ಅಮೃತಧಾರಾ ಗೋಶಾಲೆಗೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ವೆಟರ್ನರಿ ಆಸ್ಪತ್ರೆಯಿಂದ ಅನಾರೋಗ್ಯ ದನಗಳನ್ನು ಮೇಲೆತ್ತಲು ಮತ್ತು ಸ್ಥಳ ಬದಲಾವಣೆ ಮಾಡಲು ವೇಟ್ ಲಿಫ್ಟರ್ ನ್ನು ನೀಡಲಾಯಿತು.

Continue Reading

ಪೆರಾಜೆ ಗೋಶಾಲೆಯಲ್ಲಿ ಗೋವರ್ಧನಧಾರಿ ಗೋಪಾಲಕೃಷ್ಣ

ಪೆರಾಜೆ ಶ್ರೀರಾಮಚಂದ್ರಾಪುರ ಮಠದ ಅಮೃತಧಾರ ಗೋಶಾಲೆಯಲ್ಲಿ ಪ್ರತಿ ವರ್ಷ ಶ್ರಾವಣ ಮಾಸದ ಶ್ರವಣ ನಕ್ಷತ್ರಕ್ಕೆ ಜರಗುವ ಗೋವರ್ಧನಧಾರಿ ಗೋಪಾಲಕೃಷ್ಣ ಪೂಜೆ,ಗೋಪೂಜೆ ಯು ಸೋಮವಾರ ವೇ.ಮೂ ಮಿತ್ತೂರು ತಿರುಮಲೇಶ್ವರ ಭಟ್ ರವರ ನೇತೃತ್ವದಲ್ಲಿ ನಡೆಯಿತು. ಶೀಮಠದ ಮ್ಯಾನೇಜರ್ ಶಿವಪ್ರಸಾದ್ ರವರು ಪೂಜಾಕೈಂಕರ್ಯ ವನ್ನು ನೆರವೇರಿಸಿದರು. ಸೇವಾಸಮಿತಿ ಯ ಅಧ್ಯಕ್ಷರಾದ ಹಾರಕರೆ ನಾರಾಯಣ ಭಟ್ ರವರು ಈ ಕಾರ್ಯಕ್ರಮ ದಲ್ಲಿ ಬಾಗವಹಿಸಿದರು.

Continue Reading

ಶ್ರಾವಣ ಮಾಸದ ವಿಶೇಷ ಕಾಮಧೇನು ಪೂಜೆ

ಅಮೃತಧಾರ ಗೋಶಾಲೆ ಹೊಸಾಡಿನಲ್ಲಿ ನಡೆದ ಸಕಲರ ಕ್ಷೇಮಾರ್ಥವಾಗಿ ಶ್ರಾವಣ ಮಾಸದ ವಿಶೇಷ ಕಾಮಧೇನು ಪೂಜೆಯಂದು ಭರತ ಕೃಷ್ಣ ಭಂಡಾರಕರ ಇವರು ಆಗಮಿಸಿ ಪ್ರಸಾದ ಸ್ವೀಕರಿಸಿದರು.

Continue Reading

ಮೇವು ಸಂಸ್ಕರಣಾ ಘಟಕ ಲೋಕಾರ್ಪಣೆ

ಗೋವುಗಳನ್ನು ತಮ್ಮ ಮನೆಯ ಸದಸ್ಯರಂತೆ, ಗೋಪಾಲಕರನ್ನು ತಮ್ಮ ಮಕ್ಕಳಂತೆ ಕಾಣುವ ಅಪರೂಪದ ಅಪ್ಪಟ ಗೋಪ್ರೇಮಿ ಮತ್ತು ಭಾರತೀಯ ಗೋತಳಿಯ ಮಹಾಸಂರಕ್ಷಕರಾದ ಹೊಸಾಡ ಗೋಶಾಲೆಯ ಮಾನ್ಯ ಗೌರವಾಧ್ಯಕ್ಷರಾದ ಹುಬ್ಬಳ್ಳಿಯ ಭಾರತಿ ಗಂಗಾಧರ ಪಾಟೀಲ್ ಮತ್ತು ಕುಟುಂಬದವರ ಆರ್ಥಿಕ ನೆರವಿನೊಂದಿಗೆ ರೂಪಿತವಾದ ಬಾಲ ಮುಕುಂದ ಕೃಪಾ ಹೆಸರಿನ ನೂತನ ಮೇವು ಸಂಸ್ಕರಣಾ ಘಟಕವು ಕಾಮಧೇನುವಿನ ವಿಶೇಷ ಪೂಜೆಯೊಂದಿಗೆ ಗೋಪಾಲಕರ ಸಮ್ಮುಖದಲ್ಲಿ ಲೋಕಾರ್ಪಣೆಗೊಂಡಿತು. ವಯಸ್ಸಾದ ಮತ್ತು ಸಣ್ಣ ವಯಸ್ಸಿನ ಗೋವುಗಳಿಗೆ ಹಸಿರು ಹುಲ್ಲುಗಳ ಸತ್ವವನ್ನು ಸಂಪೂರ್ಣವಾಗಿ ಸೇವಿಸಲು ಸುಲಭವಾಗುವಂತೆ ಹಸಿರು ಹುಲ್ಲಿನ […]

Continue Reading

ಗೋವಿಗಾಗಿ ಮೇವು ಮೇವಿಗಾಗಿ ನಾವು

ಮುಳ್ಳೇರಿಯಾ ಮಂಡಲ ಪೆರಡಾಲ ವಲಯದ ಸಂಪತಿಲ ಶಿವರಾಮ ಭಟ್ ಹುಲ್ಲಿನ ಪ್ಲಾಟ್ ನಲ್ಲಿದ್ದ ಒಂದು ಪಿಕ್ ಅಪ್ ಸಂಪೂರ್ಣ ಜಾತಿಯ ಹುಲ್ಲನ್ನು ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಅದಿನದಲ್ಲಿ ಇರವ ಬಜಕೂಡ್ಲು ಅಮೃತಧಾರ ಗೋಶಾಲೆಯ ಗೋವುಗಳಿಗೆ ನೀಡಿದ್ದಾರೆ. ಕಾಮದುಘಾ ಕಾರ್ಯದರ್ಶಿ ವೈ ವಿ ಕೃಷ್ಣ ಮೂರ್ತಿ, ಮಂಡಲ ಸಂಘಟನಾ ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ, ಮಂಡಲ ಕೋಶಾಧಿಕಾರಿ ಹರಿ ಪ್ರಸಾದ ಪೆರ್ಮುಖ, ಪೆರಡಾಲ ವಲಯ ಕಾರ್ಯದರ್ಶಿ ವಿಷ್ಣು ಪ್ರಸಾದ, ಶ್ರಮದಾನದ ಮುಖಾಂತರ ಕಟಾವು, ಕಟ್ಟ […]

Continue Reading

ಕರೊನಾ ನಡುವೆಯೂ ಗೋಶಾಲೆಯ ಕಾಮಗಾರಿ

ಮಾಲೂರು ಶ್ರೀ ರಾಘವೇಂದ್ರ ಗೋ ಆಶ್ರಮದ ಜನವರಿಯಲ್ಲಿ ಮಳೆಯ ಸಮಯದಲ್ಲಿ ಗೋಶಾಲೆಯ ಗೋಡೆಯೊಂದು ಕುಸಿದು ಗೋವುಗಳಿಗೆ ಛಾವಣಿ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ದಾನಿಗಳ ಸಹಾಯದಿಂದ ಕರೊನಾ ಸಂಕಷ್ಟದ ನಡುವೆಯೂ ಕಾಮಗಾರಿಗಳು ಭರದಿಂದ ಸಾಗುತ್ತಿದೆ. ಹಳೆ ಎರಡು ಗೋಶಾಲೆಗಳ ರಿಪೇರಿ ಹಾಗೂ ಹೊಸ ಎರಡು ಗೋಶಾಲೆಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ನೀರಿನ ತೀವ್ರ ಅಭಾವ ಉಂಟಾಗುತ್ತಿದ್ದ ಹಿನ್ನಲೆಯಲ್ಲಿ ಹೊಸ ಬೋರ್ ವೆಲ್ ನಿರ್ಮಾಣದ ಕಾರ್ಯ ಯಶಸ್ವಿಯಾಗಿ ನಡೆದಿದೆ. ಗೋಆಶ್ರಮದ ಅಭಿಮಾನಿ ಗೋಪ್ರೇಮಿಗಳು ಸದಾ ಸಹಕಾರವನ್ನು ನೀಡುತ್ತಿದ್ದು, ಮುಂದಿನ ಕೆಲಸಕಾರ್ಯಗಳಿಗೆ […]

Continue Reading

ಗೋವುಗಳಿಗೆ ಗೋಗ್ರಾಸ

ಸಿದ್ದಾಪುರ ನಿವಾಸಿ ಗುರುಮನೆಯ ಗುರುಭಕ್ತ ನಾಗರಾಜಭಟ್ ಕೆಕ್ಕಾರು ಇವರು ಗೋಸ್ವರ್ಗದ ಗೋವುಗಳಿಗೆ ಗೋಗ್ರಾಸರೂಪದಲ್ಲಿ ಒಂದು ಲೋಡು ಕಲ್ಲಂಗಡಿ ಹಣ್ಣನ್ನು ನೀಡಿದರು.

Continue Reading