ಹಾರ್ಮೋನಿಯಂ ನೀಡಿ ಕಲಾವಿದೆಯನ್ನು ಹರಸಿದ ಶ್ರೀಸಂಸ್ಥಾನ

ಬೆಂಗಳೂರು: ರಾಜ್ಯಮಟ್ಟದ ಗಜಲ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ, ವಿದ್ಯಾರ್ಥಿ ಪುರಸ್ಕಾರಕ್ಕೆ ಭಾಜನರಾದ, ಶ್ರೀಮತಿ ದಿವ್ಯಾ ಪಾದೆಕಲ್ಲು ಮತ್ತು ಶ್ರೀ ಕುಮಾರ ಸುಬ್ರಹ್ಮಣ್ಯ ದಂಪತಿಗಳ ಸುಪುತ್ರಿ ಕು. ಶ್ರೀವಿದ್ಯಾ ಪಾದೆಕಲ್ಲು ಇವರಿಗೆ ಮುಂದಿನ ಸಂಗೀತ ಸಾಧನೆಗಾಗಿ ಶ್ರೀಸಂಸ್ಥಾನದವರು ಆಶೀರ್ವಾದಪೂರ್ವಕವಾಗಿ ಹಾರ್ಮೋನಿಯಂ ನೀಡಿ, ಹರಸಿದರು.  

Continue Reading

ರಾಮಕಥೆಯ ಕವಿ ಡಾ| ಗಜಾನನಶರ್ಮಾ ಹುಕ್ಲು ಇವರ ಕಾದಂಬರಿ ಲೋಕಾರ್ಪಣೆ. ಲಿಂಗನಮಕ್ಕಿ ಅಣೆಕಟ್ಟೆಯಲ್ಲಿ ಮುಳುಗಿದ ಬದುಕಿನ ಬವಣೆಯ ಕಥಾನಕ.

Continue Reading

ಆದಿಗುರು ಶಂಕರರ ಚಿತ್ರರಚನೆ ಸಮರ್ಪಿಸಿದ ಚಿತ್ರಕಾರ ರವೀಂದ್ರ ಹೆಗಡೆ

ಬೆಂಗಳೂರು: ಸಿದ್ದಾಪುರ ಮಂಡಲದ ಮುಗದೂರಿನ ಚಿತ್ರ ಕಲಾವಿದ ಶ್ರೀ ರವೀಂದ್ರ ಹೆಗಡೆಯವರು ಆದಿಗುರು ಶಂಕರಾಚಾರ್ಯ ಅವರ ತ್ವರಿತ ಚಿತ್ರ (ಸ್ಪೀಡ್ ಪೈಂಟ್) ಬಿಡಿಸಿ ಗಿರಿನಗರದ ರಾಮಾಶ್ರಮದಲ್ಲಿ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳಿಗೆ ಸಮರ್ಪಿಸಿ ಪ್ರಶಂಸೆ ಹಾಗೂ ಆಶೀರ್ವಾದ ಪಡೆದರು.   ಹೊಸನಗರದ ಗುರುಕುಲದಲ್ಲಿ ವಿದ್ಯಾರ್ಥಿಯಾಗಿದ್ದ ರವೀಂದ್ರ ಶ್ರೀ ರಾಮಕೃಷ್ಣ ಹೆಗಡೆಯವರ ಪುತ್ರ. ಸದ್ಯ ಡಿಪ್ಲೊಮಾ ಅಭ್ಯಾಸ ಮಾಡುತ್ತಿದ್ದು, ಸ್ವತಃ ತಾನೇ ಸ್ಪೀಡ್ ಪೈಂಟ್ ಕಲೆಯನ್ನು ಕಲಿತಿದ್ದರು.   ಆದಿಗುರು ಶಂಕರಾಚಾರ್ಯರ ಅಂದವಾದ ಚಿತ್ರ […]

Continue Reading

ರಾಮಪದಕ್ಕೊಂದು ಅಲ್ಪವಿರಾಮ

  ಪ್ರತಿ ಜೀವದ ಕೊನೆಯ ಗುರಿಯಾದ ಮುಕ್ತಿಯ ಮೊದಲ ಹಂತ ಸತ್ಸಂಗ. ಸತ್ಸಂಗ ಮಾಡಲು ಏಕಾದಶಿಯ ಹರಿದಿನಕ್ಕಿಂತ ಶ್ರೇಷ್ಠ ಪರ್ವಕಾಲ ಯಾವುದಿರಬಹುದು! ರಾಮನ ಪದಗಳನ್ನು, ರಾಗದಲ್ಲಿ ಪೋಣಿಸಿ ಭಾವದ ಸುಗಂಧ ಬೀರುವ ‘ರಾಮಪದ’ ವೆಂಬ ವಿನೂತನ ಸತ್ಸಂಗವನ್ನು ಶ್ರೀಸಂಸ್ಥಾನದವರು ಅಂತಹ ಪರ್ವಕಾಲವಾದ ಪ್ರತಿ ಏಕಾದಶಿಯಂದು ಅನುಗ್ರಹಿಸಿದರು. ಶಾಸನತಂತ್ರದ ಕಲಾರಾಮ ವಿಭಾಗದ ಅಡಿಯಲ್ಲಿ ಈ ರಾಮಪದವೆಂಬ ಸತ್ಸಂಗ ಆಯೋಜಿತಗೊಂಡಿತು.   ಹೇಮಲಂಬ ಸಂವತ್ಸರದ ರಾಮನವಮಿ (04-04-2017)ಯಿಂದ ಈ ವಿಶಿಷ್ಟ ರಾಮಪದವು ಹೊಸನಗರದ ಪ್ರಧಾನಮಠದಲ್ಲಿ ಪ್ರಾರಂಭಗೊಂಡಿತು. ನುರಿತ ಕಲಾವಿದರಿಂದ ಮೊದಲ್ಗೊಂಡು […]

Continue Reading

ರಾಮಾಶ್ರಮದಲ್ಲಿ ಭಕ್ತಿಸಂಗೀತದಲೆ

ಬೆಂಗಳೂರು: ನೆಡ್ಲೆ ಶ್ರೀ ರಾಮಚಂದ್ರ ಭಟ್ ಮತ್ತು ಕಲಾರಾಮ ವಿಭಾಗದ ಪ್ರಾಯೋಜಕತ್ವದಲ್ಲಿ ದಿನಾಂಕ 16.12.18ರಂದು ಸಂಜೆ 6.30ರಿಂದ 9 ಗಂಟೆಯವರೆಗೆ ಭಕ್ತಿಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು.   ಶ್ರೀ ಸಿದ್ದಾರ್ಥ ಬೆಳ್ಮಣ್ಣು ಅವರ ಸುಶ್ರಾವ್ಯ ಗಾಯನಕ್ಕೆ ಹಾರ್ಮೋನಿಯಂನಲ್ಲಿ ಪಂಡಿತ್ ಶ್ರೀ ನರಸಿಂಹ ಕುಲಕರ್ಣಿ, ತಬಲದಲ್ಲಿ ಶ್ರೀ ರೂಪಕ್ ಕಲ್ಲೂರ್ಕರ್, ಪಕ್ವಾಜ್ ನಲ್ಲಿ ಶ್ರೀ ಶ್ರೀದತ್ತ ಜೋಶಿ, ತಾಳದಲ್ಲಿ ಶ್ರೀ ಶ್ರೀವತ್ಸ ಸಹಕರಿಸಿದರು.  

Continue Reading

ವಿದ್ವಾನ್ ಉಮಾಕಾಂತ್ ಭಟ್ಟರಿಗೆ ಶ್ರೀರಾಘವೇಂದ್ರ ಭಾರತೀ ಪಾಂಡಿತ್ಯ ಪುರಸ್ಕಾರ

ಶ್ರೀರಾಮಚಂದ್ರಾಪುರಮಠದ ಅವಿಚ್ಚಿನ್ನ ಗುರುಪರಂಪರೆಯ 35ನೇ ಯತಿಗಳಾದ ಬ್ರಹ್ಮೈಕ್ಯ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಂದ್ರಭಾರತೀ ಮಹಾಸ್ವಾಮಿಗಳ ಆರಾಧನಾ ಮಹೋತ್ಸವ ಶ್ರೀಮಠದ ಬೆಂಗಳೂರಿನ ಗಿರಿನಗರದ ಶಾಖಾಮಠದಲ್ಲಿ ದಿನಾಂಕ 15.12.2018 ಶನಿವಾರದಂದು ನಡೆಯಲಿದ್ದು, ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯದಲ್ಲಿ ತೀರ್ಥರಾಜ ಪೂಜೆ ಇತ್ಯಾದಿ ಮಠೀಯ ಪದ್ಧತಿಯಂತೆ ಪೂರ್ವಾಚಾರ್ಯರ ಆರಾಧನೆ ಸಂಪನ್ನವಾಗಲಿದೆ.   ಆನಂತರ ಧರ್ಮಸಭೆ ನಡೆಯಲಿದ್ದು, ಶ್ರೀರಾಘವೇಂದ್ರ ಭಾರತೀ ಪಾಂಡಿತ್ಯ ಪುರಸ್ಕಾರ ಹಾಗೂ ಶ್ರೀಗುರುಪರಂಪರಾನುಗ್ರಹ ಕಾರ್ಯಕ್ರಮಗಳು ಸಂಪನ್ನವಾಗಲಿವೆ.   ‘ಶ್ರೀರಾಘವೇಂದ್ರ ಭಾರತೀ ಪಾಂಡಿತ್ಯ ಪುರಸ್ಕಾರ’ : ಪೂರ್ವಾಚಾರ್ಯರಾದ […]

Continue Reading

ಮಂಗಲಗೋಯಾತ್ರೆಯ ಸ್ಮರಣಸಂಚಿಕೆ ‘ಸನ್ಮಂಗಲ’ ಶ್ರೀಸಂಸ್ಥಾನದವರಿಂದ ಲೋಕಾರ್ಪಣೆ

ಬೆಂಗಳೂರು: ಮಂಗಲಗೋಯಾತ್ರೆಯ ವಿವರಗಳನ್ನೊಳಗೊಂಡ ‘ಸನ್ಮಂಗಲ’ ಗಿರಿನಗರದ ಶ್ರೀರಾಮಾಶ್ರಮದಲ್ಲಿ ಇಂದು, 1.12.2018 ರಂದು, ಲೋಕಾರ್ಪಣೆಗೊಂಡಿತು.   ಭಾರತೀಯ ಗೋತಳಿಗಳ ಸಂರಕ್ಷಣೆಗಾಗಿ ಶ್ರೀಸಂಸ್ಥಾನದವರು ಯೋಜಿಸಿದ ಮಹತ್ತಾದ ಹಲವು ಕಾರ್ಯಗಳಲ್ಲಿ ಗೋಯಾತ್ರೆಗಳು ಪ್ರಮುಖವಾದುವು. ಗೋವಿನ ಕಾರಣದಿಂದ ಆರಂಭವಾದ ಮೊದಲ ಸ್ವಾತಂತ್ರ್ಯಸಂಗ್ರಾಮಕ್ಕೆ ಮಂಗಲಪಾಂಡೆಯ ಸ್ಮರಣಾರ್ಥ ‘ಮಂಗಲಗೋಯಾತ್ರೆ’ ಎಂದ ಕರೆಯಲ್ಪಟ್ಟ ಈ ಯಾತ್ರೆಯು 2016 ನವೆಂಬರಿನಿಂದ 2017 ಜನವರಿಯ ವರೆಗೆ ರಾಜ್ಯಾದ್ಯಾಂತ ಸಂಚರಿಸಿ, 2017 ಜನವರಿ 27ರಿಂದ 29ರ ತನಕ ಮಂಗಳೂರಿನ ಮಂಗಲಭೂಮಿಯಲ್ಲಿ ಮಹಾಮಂಗಲದೊಂದಿಗೆ ಮುಕ್ತಾಯಗೊಂಡಿತು. ಅದರ ನೆನಪನ್ನು ಶಾಶ್ವತವಾಗಿಡುವ ನಿಟ್ಟಿನಲ್ಲಿ ಮಂಗಲಯಾತ್ರೆಯ ಸ್ಮರಣಸಂಚಿಕೆ […]

Continue Reading

ಈ ಸಲದ ಧರ್ಮಭಾರತಿಯಲ್ಲಿ…

ಅಯ್ಯಪ್ಪ, ಅಯ್ಯನಾರ್, ಅಯ್ಯನ್, ಬೇಟೆ ಅಯ್ಯಪ್ಪ ಎಂದೆಲ್ಲ ಗುರುತಿಸಿಕೊಳ್ಳುವ; ವೈದಿಕಕ್ಕೂ ಜನಪದಕ್ಕೂ ಸಲ್ಲುವ ದೈವ ಶಾಸ್ತಾರನ ಕುರಿತು ಡಾ. ಮನೋರಮಾ ಬಿ. ಎನ್. ಅವರ ಮಾಹಿತಿಪೂರ್ಣ ಬರಹ.   ಆಧುನಿಕ ಕಾಲದಲ್ಲಿ, ಮಹಿಳೆಯರ ಆರೋಗ್ಯ ಸಮಸ್ಯೆಗಳಲ್ಲಿ ಮುಂಚೂಣಿಯಲ್ಲಿರುವ PCOS ಬಗ್ಗೆ ಡಾ.ಸುವರ್ಣಿನೀ ಕೊಣಲೆಯವರ ಲೇಖನ.   ಪ್ರಜೆ ಹೊರಟ. ಮಾರಾಪು ಕಟ್ಟಿಕೊಂಡು. ರಾಜನನ್ನು ಕಾಣಲು. ಗೊತ್ತಿಲ್ಲದ ದಾರಿಯಲ್ಲಿ ಹದಿಮೂರು ದಿನದ ಪಯಣ. ನಡೆದೇ ನಡೆದನವ‌. ಮುಂದೇನಾಯಿತು? ಶ್ರೀಗೋಪಾಲಕೃಷ್ಣ ಕುಂಟಿನಿಯವರ ಕಥೆಯಲ್ಲಿ. ದಿವ್ಯಸನ್ನಿಧಿಯಲ್ಲಿ ಶ್ರೀಸಂಸ್ಥಾನದವರ ಪ್ರವಚನಾಮೃತ – ನಲಿವಿನ […]

Continue Reading

ಬೆಂಗಳೂರು ಉತ್ತರ ಮಂಡಲದಲ್ಲಿ ಕಾರ್ತಿಕ ದೀಪೋತ್ಸವ ಹಾಗೂ ಭಜನಾಕಾರ್ಯಕ್ರಮ

ಬೆಂಗಳೂರು: ಬೆಂಗಳೂರು ಉತ್ತರ ಮಂಡಲದ ಕಾರ್ಯದರ್ಶಿ ಶ್ರೀ ಗೋಪಾಲಕೃಷ್ಣ ಅವರ ಮನೆ ‘ಸಾಕ್ಷಾತ್ಕಾರ ಕಲಾನಿಕೇತನದಲ್ಲಿ’ ಕಾರ್ತಿಕ ದೀಪೋತ್ಸವ ಹಾಗೂ ಭಜನಾ ಕಾರ್ಯಕ್ರಮ ನವೆಂಬರ್ 22ರಂದು ಯಶಸ್ವಿಯಾಗಿ ನಡೆಯಿತು.   ಮಂಡಲದ ಅಧ್ಯಕ್ಷರಾದ ಶ್ರೀ ಜಿ. ಜಿ. ಹೆಗಡೆಯವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಕಾರ್ತಿಕಮಾಸದ ಶುಭದಿನದಂದು ಮಕ್ಕಳೊಂದಿಗೆ ಇಂತಹ ಕಾರ್ಯಕ್ರಮದಲ್ಲಿ ಸೇರಿದ್ದೇವೆ. ಇಂತಹ ಕಾರ್ಯಕ್ರಮದಿಂದ ಮಕ್ಕಳ ಕೌಶಲ್ಯಕ್ಕೆ ಅವಕಾಶ ನೀಡಿದಂತಾಗುವುದು ಅಲ್ಲದೇ ನಮ್ಮ ಸಂಘಟನೆ ಬಲಗೊಳ್ಳುವುದು, ಎಂದ ಅವರು ಕಾರ್ಯಕ್ರಮ ಯಶಸ್ವಿಯಾಗಲೆಂದು […]

Continue Reading

ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ ಸಂಪ್ರತಿಷ್ಠಾನದಿಂದ ಶ್ರೀಮದ್ವಾಲ್ಮೀಕಿರಾಮಾಯಣ ಪಾರಾಯಣ : ಶ್ರೀಸಂಸ್ಥಾನದಿಂದ ಅನುಗ್ರಹ ಪಡೆದ ವೈದಿಕರು

ಬೆಂಗಳೂರು: ಬ್ರಹ್ಮರ್ಷಿ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ ಸಂಪ್ರತಿಷ್ಠಾನವು ಇದೇ ಬರುವ 12-11-2018, ಸೋಮವಾರದಿಂದ 20-11-2018, ಮಂಗಳವಾರದವರೆಗೆ ಶ್ರೀಮದ್ವಾಲ್ಮೀಕಿರಾಮಾಯಣ ಪಾರಾಯಣ ಹಮ್ಮಿಕೊಂಡಿದೆ.   ರಾಮಾಶ್ರಮದಲ್ಲಿ ಶ್ರೀಸಂಸ್ಥಾನದವರನ್ನು ಭೇಟಿ ಮಾಡಿದ ಸಂಪ್ರತಿಷ್ಠಾನದ‌‌‌ ಸದಸ್ಯರು, ಹಮ್ಮಿಕೊಂಡಿರುವ ಪಾರಾಯಣದ ವಿಚಾರ ಅರುಹಿ‌ ಮಂತ್ರಾಕ್ಷತೆ ಪಡೆದುಕೊಂಡರು. ಇದೇ ಸಂದರ್ಭದಲ್ಲಿ ಡಾ.ಪಾದೆಕಲ್ಲು ವಿಷ್ಣು ಭಟ್ ಹಾಗೂ ಮಿತ್ತೂರು ಪುರೋಹಿತ ಶ್ರೀ ತಿರುಮಲೇಶ್ವರ್ ಭಟ್ ಸಂಪಾದಿಸಿದ ‘ಮಿತ್ತೂರು ಪುರೋಹಿತ ಶಂಕರನಾರಾಯಣ ಭಟ್ಟ ಹಾಗೂ ಮೈಕೆ ಶಂಕರನಾರಾಯಣ ಭಟ್ಟ ಜನ್ಮಶತಮಾನ ಸ್ಮರಣಸಂಪುಟ’ ಗ್ರಂಥವನ್ನು ಶ್ರೀಸಂಸ್ಥಾನದವರಿಗೆ ಅರ್ಪಿಸಿ ಆಶೀರ್ವಾದ […]

Continue Reading

ಶ್ರೀಮಠದ ಶಿಷ್ಯ, ಹಿನ್ನೆಲೆ ಧ್ವನಿ ಕಲಾವಿದ, ನಿರೂಪಕ ಶ್ರೀ ಪ್ರದೀಪ ಬಡೆಕ್ಕಿಲ ಅವರಿಗೆ ‘ಸೃಷ್ಟಿ ಕಲೋಪಾಸಕ ಪ್ರಶಸ್ತಿ’

ಬೆಂಗಳೂರು: ಜಯನಗರದ ಜೆ‌.ಎಸ್.ಎಸ್. ಆಡಿಟೋರಿಯಂನಲ್ಲಿ ಶನಿವಾರ ನಡೆದ ಸೃಷ್ಟಿ ಕಲಾವಿದ್ಯಾಲಯದ ಸಂಗೀತ-ನೃತ್ಯೋತ್ಸವ ಸಮಾರಂಭದಲ್ಲಿ ಚಲನಚಿತ್ರ-ಕಿರುತೆರೆ‌ ನಟ, ಟಿವಿ ನಿರೂಪಕ, ಲೇಖಕ, ಶ್ರೀರಾಮಚಂದ್ರಾಪುರ‌ಮಠದ ಹಲವು ಪ್ರಸ್ತುತಿಗಳ ಧ್ವನಿ ಕಲಾವಿದರಾಗಿರುವ, ಶ್ರೀಮಠದ ಶಿಷ್ಯರೂ ಆಗಿರುವ ಶ್ರೀ ಪ್ರದೀಪ‌ ಬಡೆಕ್ಕಿಲ ಅವರಿಗೆ ಸೃಷ್ಟಿ ಕಲೋಪಾಸಕ ಪ್ರಶಸ್ತಿ ಪ್ರದಾನ ಮಾಡಲಾಯಿತು.   ಕಿರುತೆರೆಯ‌ ಹಲವು ಜನಪ್ರಿಯ ಕಾರ್ಯಕ್ರಮಗಳಿಗೆ ಹಿನ್ನೆಲೆ ಧ್ವನಿ ನೀಡಿರುವ ಇವರು ಮೆಟ್ರೋ ರೈಲಿನ ಉದ್ಘೋಷಗಳಿಗೂ ಧ್ವನಿಯಾಗಿದ್ದಾರೆ. ಶ್ರೀಯುತರಿಗೆ ಸಂದ ಗೌರವಕ್ಕೆ ಶ್ರೀಸಂಸ್ಥಾನ ಹಾಗೂ ಶಿಷ್ಯವೃಂದದವರು ಹರ್ಷ ವ್ಯಕ್ತಪಡಿಸಿದ್ದಾರೆ.   ಇದೇ […]

Continue Reading

ಶ್ರೀಮಠದ ಶಿಷ್ಯೆ ಸಂಗೀತ ವಿದುಷಿ ಶ್ರೀಮತಿ ವಸುಧಾಶರ್ಮಾಗೆ ಪ್ರಶಸ್ತಿ : ರಾಷ್ಟ್ರೀಯ ಯುವ ಸಂಗೀತೋತ್ಸವದಲ್ಲಿ ಸನ್ಮಾನ

ಮೈಸೂರು: ಮೈಸೂರಿನಲ್ಲಿ ನವೆಂಬರ್ 1ರಿಂದ 4ರ ವರೆಗೆ ನಾಲ್ಕು ದಿನಗಳ ಕಾಲ ನಡೆದ ‘ರಾಷ್ಟ್ರೀಯ ಯುವ ಸಂಗೀತೋತ್ಸವ – 2018’ ಕಾರ್ಯಕ್ರಮದಲ್ಲಿ ಶ್ರೀರಾಮಚಂದ್ರಾಪುರಮಠದ ಶಿಷ್ಯೆ ಸಂಗೀತ ವಿದುಷಿ ಶ್ರೀಮತಿ ವಸುಧಾಶರ್ಮಾ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.   ಮೈಸೂರಿನ ಅವಧೂತ ದತ್ತಪೀಠ ಶ್ರೀಗಣಪತಿ ಸಚ್ಚಿದಾನಂದ ಆಶ್ರಮ ಹಾಗೂ ಸಂಸ್ಕಾರ ಭಾರತಿಯ ಸಹಯೋಗದೊಂದಿಗೆ ನಾದಮಂಟಪದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸಂಗೀತೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರನ್ನು ಗೌರವಿಸಲಾಗಿದ್ದು ಇದರಲ್ಲಿ ಶ್ರೀಮತಿ ವಸುಧಾಶರ್ಮಾವರಿಗೂ ಸನ್ಮಾನ ಹಾಗೂ ಪ್ರಶಸ್ತಿ ಸಂದಿರುವುದು […]

Continue Reading

ಶ್ರೀರಾಮಾಶ್ರಮದಲ್ಲಿ ಸಂಗೀತ ಸೇವೆ

ಬೆಂಗಳೂರು:- ದೇವರಿಗೆ ಹರಕೆ ರೂಪದಲ್ಲಿ‌ ಹೂವು-ಹಣ್ಣು ಕಾಣಿಕೆ‌ ಸಮರ್ಪಿಸುವಂತೆ ಸಂಗೀತ ಕಲಾವಿದರಾದ ಶ್ರೀರಘುನಂದನ ಬೇರ್ಕಡವುರವರು ಶ್ರೀಕರಾರ್ಚಿತ ದೇವರ ಸಮ್ಮುಖದಲ್ಲಿ ತಮ್ಮ ಗಾನಸುಧೆಯ ಮೂಲಕ ಹರಕೆ ಸಲ್ಲಿಸಿದರು.   ಗುರುವಾರ(೧-೧೧-೨೦೧೮) ಗಿರಿನಗರದ ಶ್ರೀರಾಮಾಶ್ರಮದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಅವರು ನಡೆಸಿಕೊಟ್ಟರು. ರಾಗ ನಾಟದಿಂದ ಆರಂಭಿಸಿ, ಬಹುದಾರಿ, ದೇವಗಾಂಧಾರಿ, ರೀತಿಗೌಳ, ದರ್ಬಾರ್, ಪಂತುವರಾಳಿ, ಕಾನಡ, ಸಿಂಧುಬೈರವಿ, ದುರ್ಗಾ, ಮಿಶ್ರ ಪಹಾಡಿ, ಮೋಹನ, ಕಲ್ಯಾಣಿ, ಸೌರಾಷ್ಟ್ರ ರಾಗದಲ್ಲಿ ಹಾಡಿ ಶ್ರೀರಾಮನಿಗೆ ಕಲಾಸೇವೆಗೈದರು.   ಶ್ರೀಸಂಸ್ಥಾನದವರ ಆಶೀರ್ವಾದ ಹಾಗೂ ಸೂಚನೆಯ ಮೇರೆಗೆ […]

Continue Reading

ಈ ಸಲದ ಧರ್ಮಭಾರತಿಯಲ್ಲಿ

ಭಾರತೀಯರ ಮನಸ್ಸು, ಸಂಪ್ರದಾಯ, ಪರಂಪರೆಗಳನ್ನು ಭಗವದ್ಭಕ್ತಿಯ ಮೂಲಕ ನೆಲೆಗೊಳಿಸಿ ಉಳಿಸಿ ಬೆಳೆಸುವಲ್ಲಿ ಶ್ರೀತ್ಯಾಗರಾಜರ ಕೊಡುಗೆ ಅಪಾರ. ಅವರು ರಚಿಸಿದ ಉತ್ಸವಸಂಪ್ರದಾಯ ಕೀರ್ತನೆಗಳ ಬಗೆಗಿನ ಕಾಂಚನ ರೋಹಿಣಿ ಸುಬ್ಬರತ್ನಂ ಅವರ ಸವಿವರ ಬರಹ. ‘ಈ ರಾಜ್ಯದ ಕುರಿತು ಹೇಳಜ್ಜೀ’ ಎಂದ ರಾಜ. ‘ಅದನ್ನು ನೀನು ಕೇಳಬಾರದು. ನಾನು ಹೇಳಲೂ ಬಾರದು’ ಎಂದಳು ಅಜ್ಜಿ. ಕಥೆಯೇನು ಅಡಗೂಲಜ್ಜಿಯ ರಾಜ್ಯದ್ದು? ಶ್ರೀಗೋಪಾಲಕೃಷ್ಣ ಕುಂಟಿನಿಯವರ ಕಥೆಯಲ್ಲಿ. ದಿವ್ಯಸನ್ನಿಧಿಯಲ್ಲಿ ಶ್ರೀಸಂಸ್ಥಾನದವರ ಪ್ರವಚನಾಮೃತ – ನಲಿವಿನ ನೆಲೆಗೆ ನಲವತ್ತು ಮೆಟ್ಟಿಲು. ಶ್ರೀಸಂಸ್ಥಾನದವರ ಲೇಖನಾಮೃತ – ರಾಮರಶ್ಮಿ. […]

Continue Reading

ಶನಿವಾರ ರಾಮಾಶ್ರಮದಲ್ಲಿ ರಾಮಪದ ಸತ್ಸಂಗ

ಬೆಂಗಳೂರು:- ಏಕಾದಶಿಯ ಹರಿದಿನದಂದು ಶ್ರೀಸಂಸ್ಥಾನದವರು ಶಿಷ್ಯರೊಡಗೂಡಿ ರಾಮಪದಗಳನ್ನು ಹಾಡುವ ರಾಮಪದ ಸಹಜ ಸತ್ಸಂಗ ಕಾರ್ಯಕ್ರಮ ಶನಿವಾರ(೩-೧೧-೨೦೧೮) ದಂದು ಸಂಜೆ ೬ ರಿಂದ ೮ ಗಂಟೆಯವರೆಗೆ ನಡೆಯಲಿದೆ. ಗಿರಿನಗರದ ಶ್ರೀರಾಮಾಶ್ರಮದಲ್ಲಿ ನಡೆಯಲಿರುವ ಈ ರಾಮಪದದಲ್ಲಿ ಪ್ರತಿಬಾರಿಯಂತೆ ಶ್ರೀಸಂಸ್ಥಾನ ರಾಮಪದತಲದಲ್ಲಿ ಕುಳಿತು ಶ್ರೀರಾಮನ ಹಾಡುಗಳನ್ನು ಹಾಡುತ್ತ‌ ಶ್ರೀರಾಮನ ಗುಣವಿಶೇಷಗಳನ್ನು ಪರಿಚಯಿಸುತ್ತ ಸತ್ಸಂಗ ನಡೆಸಲಿದ್ದಾರೆ. ಈ ಬಾರಿಯ ರಾಮಪದ ಕಾರ್ಯಕ್ರಮದಲ್ಲಿ ಗಾಯಕರಾಗಿ ಹಿಂದೂಸ್ಥಾನಿ ಸಂಗೀತಕ್ಷೇತ್ರದ ಉದಯೋನ್ಮುಖ‌ ಕಲಾವಿದ ಸಿದ್ಧಾರ್ಥ ಬೆಳ್ಮಣ್ಣು ಪಾಲ್ಗೊಳ್ಳಲಿದ್ದಾರೆ. ಕಲಾರಾಮ ಅರ್ಪಿಸುವ ಈ ಅಪರೂಪದ ರಾಮಪದ ಕಾರ್ಯಕ್ರಮದಲ್ಲಿ ನೀವೆಲ್ಲರೂ […]

Continue Reading