ವಿದ್ಯೆ-ವಾತ್ಸಲ್ಯಗಳ ವಿಶೇಷ ಬೆಸುಗೆ

ಅಶೋಕೆ: ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಹಲವು ತಿಂಗಳಿಂದ ಪ್ರತಿ ತಿಂಗಳು ಮಾತೃವಂದನೆ-ಛಾತ್ರಭಿಕ್ಷೆ ನಡೆಯುತ್ತಿದೆ. ಗುರುಕುಲದ ವಿದ್ಯಾರ್ಥಿಗಳು ಸಮಾಜದ ಅನೇಕ ಮಾತೆಯರನ್ನು ಪೂಜಿಸಿ ಅವರಿಂದ ಛಾತ್ರಭಿಕ್ಷೆ ಸ್ವೀಕರಿಸುವ ಅಪೂರ್ವ ಕಾರ್ಯಕ್ರಮವಿದು. ಪರಮಪೂಜ್ಯ ಶ್ರೀಸಂಸ್ಥಾನದವರ ದಿವ್ಯನಿರ್ದೇಶನದಂತೆ ನಡೆಯುತ್ತಿರುವ ಈ ಸಮ್ಮಿಲನ ವಿದ್ಯೆ-ವಾತ್ಸಲ್ಯಗಳ ವಿಶೇಷ ಬೆಸುಗೆ. ಈ ವರ್ಷದ ಮೊದಲ ಮಾತೃವಂದನೆ-ಛಾತ್ರಭಿಕ್ಷೆ ಕಾರ್ಯಕ್ರಮ ದಿನಾಂಕ ನಿಜ ಜ್ಯೇಷ್ಠ ಕೃಷ್ಣ ಪಾಡ್ಯದಂದು (30-06-2026) ಗುರುದೃಷ್ಟಿ ಭವನದಲ್ಲಿ ನಡೆಯಿತು. ಪರಂಪರಾ ಗುರುಕುಲದ ವಿದ್ಯಾರ್ಥಿಗಳಿಗೆ ಹೊನ್ನಾವರ ಮಂಡಲದ ಮಾತೆಯರು ಛಾತ್ರಭಿಕ್ಷೆಯನ್ನಿತ್ತರು. ೭೪ ಮಾತೆಯರು ಭಾಗವಹಿಸಿದ್ದರು. ಸುಧನ್ವ ಆರ್ಯ […]

Continue Reading

ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

ಮುಜುಂಗಾವು: ಶ್ರೀಭಾರತೀ ವಿದ್ಯಾಪೀಠದಲ್ಲಿ ನಿಜ ಜ್ಯೇಷ್ಠ ಕೃಷ್ಣ ಪಾಡ್ಯದಂದು (30-06-2026) ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಸಹಯೋಗದಿಂದ ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆಯನ್ನು ಅಂತರ್ಜಾಲ ಮೂಲಕ ನಡೆದ ಕಾರ್ಯಕ್ರಮದ ದ್ವಾರಾ ಆಚರಿಸಲಾಯಿತು. ಶ್ರೀಕ್ಷೇತ್ರ ಧರ್ಮಸ್ಥಳದ ಶ್ರೀಮಂಜುನಾಥಸ್ವಾಮಿ ದೇವಸ್ಥಾನದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಡಾ. ಹೇಮಾವತಿ ಅಮ್ಮನವರು ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನವನ್ನು ನೀಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಬೆಂಗಳೂರಿನ ಸ್ಪೆಷಲ್ ಪೊಲೀಸ್ ಆಫೀಸರ್ ಡಾ. ವೆಂಕಟೇಶ್ ಪ್ರಸನ್ನ […]

Continue Reading

‘ಪ್ರತಿರುದ್ರ’ ಪಥದಲ್ಲಿ ೩೦೦ನೇ ಹೆಜ್ಜೆ

ಪಳ್ಳತ್ತಡ್ಕ: ನಿಜ ಜ್ಯೇಷ್ಠ ಶುಕ್ಲ ತ್ರಯೋದಶೀ (27-06-2026) ಎಂಬುದು ಪಳ್ಳತಡ್ಕ ವಲಯದ ಕಾರ್ಯಕರ್ತರ ಸುಮಾರು 12 ವರ್ಷಗಳ ನಿರಂತರ ಪ್ರಯತ್ನದ ಸಾಫಲ್ಯದ ಒಂದು ದಿನ. ಪರಮಪೂಜ್ಯ ಶ್ರೀಸಂಸ್ಥಾನದವರ ದಿವ್ಯ ಆಶೀರ್ವಾದದೊಂದಿಗೆ ಸಂಪನ್ನವಾದ ಕೋಟಿರುದ್ರ ಎಂಬ ಕಾರ್ಯಕ್ರಮದ ಅನಂತರ, ‘ಇದು ವಲಯಗಳ ಪ್ರತೀ ಶಿಷ್ಯ ಭಕ್ತನ ಮನೆಯಲ್ಲೂ ಮುಂದುವರಿಯಬೇಕು’ ಎಂಬ ಗುರುವಚನವನ್ನು ಶಿರಸಾ ವಹಿಸಿ ಪಾಲಿಸಿದವರು ಪಳ್ಳತ್ತಡ್ಕ ವಲಯದ ಕಾರ್ಯಕರ್ತರು. ‘ಪ್ರತಿರುದ್ರ’ ಎಂಬ ಗುರುಗಳಿತ್ತ ಅಭಿಧಾನದೊಂದಿಗೆ ಮುಂಬರಿದು ಇಂದು ಮುನ್ನೂರನೇ ಪ್ರತಿರುದ್ರವೆಂಬ ಒಂದು ಘಟ್ಟವನ್ನು ಯಶಸ್ವಿಯಾಗಿ ತಲುಪಿದರು. ಪ್ರತೀ […]

Continue Reading

‘ಸತ್ಪಥ’: ಅರಳುವ ಮನಸ್ಸುಗಳಿಗೆ ಸನ್ಮಾರ್ಗದರ್ಶಕ

ಬೆಂಗಳೂರು: ಹವ್ಯಕ ಮಹಾಮಂಡಲದ ವೈವಾಹಿಕ, ವಿದ್ಯಾರ್ಥಿವಾಹಿನೀ ಹಾಗೂ ಮಾತೃ ವಿಭಾಗಗಳು ಜಂಟಿಯಾಗಿ ಆಯೋಜಿಸಿದ್ದ ‘ಸತ್ಪಥ’ ಪ್ರಥಮ ಕಾರ್ಯಾಗಾರವು ಯಶಸ್ವಿಯಾಗಿ ನಿಜ ಜ್ಯೇಷ್ಠ ಶುಕ್ಲ ಚತುರ್ದಶಿಯಂದು (28-06-2026) ವಿಜಯನಗರದ ಶ್ರೀಭಾರತೀ ವಿದ್ಯಾಲಯದಲ್ಲಿ ನೆರವೇರಿತು. ಮಕ್ಕಳ ಸರ್ವತೋಮುಖ ಬೆಳವಣಿಗೆ, ಉತ್ತಮ ವ್ಯಕ್ತಿತ್ವ ನಿರ್ಮಾಣ ಹಾಗೂ ಸದ್ಗುಣ-ಸದಾಚಾರಗಳನ್ನು ಬೆಳೆಸುವ ಮೂಲಕ ಅವರ ಭವಿಷ್ಯವನ್ನು ಸನ್ಮಾರ್ಗದತ್ತ ರೂಪಿಸುವ ಹಾಗೂ ಸುಖೀ ಕುಟುಂಬದ ಉದ್ದೇಶದಿಂದ ಹಮ್ಮಿಕೊಳ್ಳಲಾದ ಈ ಕಾರ್ಯಾಗಾರದಲ್ಲಿ ಬೆಂಗಳೂರು ಪ್ರಾಂತದ ವಿವಿಧ ಭಾಗಗಳಿಂದ ಆಗಮಿಸಿದ್ದ 130ಕ್ಕೂ ಹೆಚ್ಚು ಮಕ್ಕಳು ಹಾಗೂ ಪೋಷಕರು ಉತ್ಸಾಹದಿಂದ […]

Continue Reading

ಸ್ವರಾರ್ಪಣ ಸಂಗೀತೋತ್ಸವ

ಕುಮಟಾ: ಹೊಳೆಗದ್ದೆಯ ಶ್ರೀಶಾಂತಿಕಾ ಪರಮೇಶ್ವರೀ ದೇವಸ್ಥಾನದಲ್ಲಿ, ದೇವಸ್ಥಾನ ಹಾಗೂ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸ್ವರಾತ್ಮ ಗುರುಕುಲಮ್ ಆಶ್ರಯದಲ್ಲಿ ಆಯೋಜಿಸಿದ್ದ ‘ಸ್ವರಾರ್ಪಣ ಸಂಗೀತೋತ್ಸವ’ ನಡೆಯಿತು. ನಿಜ ಜ್ಯೇಷ್ಠ ಶುಕ್ಲ ಚತುರ್ದಶಿಯಂದು (28-06-2026) ನಡೆದ ಈ ಸಂಗೀತೋತ್ಸವದಲ್ಲಿ ಭಕ್ತಿ-ಸಂಸ್ಕೃತಿ-ಶಾಸ್ತ್ರೀಯ ಸಂಗೀತಗಳ ಸಮ್ಮಿಲನ ಏರ್ಪಟ್ಟಿತು. ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಜೈರಾಮ ಭಟ್ಟ ಗುಡಬಳ್ಳಿ, ಅನಂತರಾಮ ಭಟ್ಟ ಬೆತ್ತಗೇರಿ, ಮಂಜುನಾಥ ಭಟ್ಟ ಸುವರ್ಣಗದ್ದೆ, ಡಾ. ಹರೀಶ ಹೆಗಡೆ, ಎಸ್. ವಿ. ಹೆಗಡೆ ಭದ್ರನ್, ಶ್ರೀಧರ ಭಟ್ಟ ಗುಡಬಳ್ಳಿ, ನಾಗರಾಜ ಜೋಷಿ ಹಾಗೂ ಕೃಷ್ಣಾನಂದ ಭಟ್ಟ […]

Continue Reading

‘ವನಜೀವನ ಯಜ್ಞ’ದ ಪ್ರೇರಣೆ

ಉಜಿರೆ: ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹಲವು ವರ್ಷಗಳ ಹಿಂದೆ ಸಂಕಲ್ಪಿಸಿ ಮಾರ್ಗದರ್ಶಿಸಿದ ಯೋಜನೆ ‘ವನಜೀವನ-ಯಜ್ಞ’. ಸಸ್ಯ-ವೃಕ್ಷ ಸಂಪತ್ತನ್ನು ಉಳಿಸಿ-ಬೆಳೆಸಿ ಪ್ರಕೃತಿಯ ಸಂರಕ್ಷಣೆ ಮೂಲಕ ಭಗವಂತನನ್ನು ಸಂಪ್ರೀತಗೊಳಿಸುವ ವಿಶೇಷ ‘ಯಜ್ಞ’ ಇದು. ಕುಕ್ಕಿನಕಟ್ಟೆಯ ರಾಮಕೃಷ್ಣ ಭಟ್ ಬೈಪದವು ಹಾಗೂ ಮನೆಯವರು ‘ವನಜೀವನ ಯಜ್ಞ’ದ ಆಶಯವನ್ನು ಹೃದ್ಗತವಾಗಿಸಿಕೊಂಡು ಹಲವು ವರ್ಷಗಳಿಂದ ಹಲವೆಡೆ ಸಸಿವಿತರಣೆಯನ್ನು ಮಾಡುತ್ತಿದ್ದಾರೆ. ಮಾಣಿ ಮಠದಲ್ಲಿ ನಡೆದ ವಿಜಯ ಚಾತುರ್ಮಾಸ್ಯದ ಸಂದರ್ಭದಿಂದ ಆರಂಭಿಸಿ ಪ್ರತಿವರ್ಷವೂ ನೂರಾರು ಸಸಿಗಳನ್ನು ಸೇವಾರೂಪದಲ್ಲಿ ನೀಡುತ್ತಿದ್ದಾರೆ. ಹೊಸನಗರದ ಶ್ರೀಚಂದ್ರಮೌಳೀಶ್ವರ ದೇವಸ್ಥಾನಕ್ಕೆ ಬಿಲ್ವಪತ್ರ ಸಸಿಗಳ […]

Continue Reading

‘ಗೋವು-ಮಣ್ಣು-ಅಡಿಕೆ’ ಮಾಹಿತಿ ಶಿಬಿರ ಸಂವಾದ

ಸಿದ್ದಾಪುರ: ಅಧಿಕ ಜ್ಯೇಷ್ಠ ಕೃಷ್ಣ ಅಮಾವಾಸ್ಯೆಯಂದು (15.06.2026) ಗೋಸ್ವರ್ಗದ ಸಂಶೋಧನಾ ಕೇಂದ್ರದಲ್ಲಿ ಶ್ರೀರಾಮಚಂದ್ರಾಪುರ ಮಠದ ಸಂಶೋಧನಾ ಖಂಡ, ಕಾಮದುಘಾ ಟ್ರಸ್ಟ್, ಗೋಫಲ ಟ್ರಸ್ಟ್, ಗೋಸ್ವರ್ಗ, ಶ್ರೀರಾಮದೇವ ಮಠ ಬಾನ್ಕಳಿ ಮತ್ತು ಮಾತೃತ್ವಮ್ ಇವರ ಜಂಟಿ ಆಶ್ರಯದಲ್ಲಿ ‘ಗೋವು-ಮಣ್ಣು-ಅಡಿಕೆ’ ಕುರಿತ ಮಾಹಿತಿ ಶಿಬಿರ ಮತ್ತು ಕೃಷಿ ಸಂವಾದ ಕಾರ್ಯಕ್ರಮವು ವಿಜಯವಾಗಿ ನೆರವೇರಿತು.   ಕೃಷಿ ಇಲಾಖೆ ಸಿದ್ದಾಪುರ, ಕೆ.ವಿ.ಕೆ. ಶಿರಸಿ ಹಾಗೂ ತೋಟಗಾರಿಕೆ ಇಲಾಖೆ ಸಹಕಾರದೊಂದಿಗೆ ವನಮಹೋತ್ಸವದ ಮೂಲಕ ಆರಂಭಗೊಂಡ ಈ ಕಾರ್ಯಕ್ರಮದಲ್ಲಿ ಸಂಶೋಧನಾ ಖಂಡದ ಸಂಯೋಜಕ ಡಾ. […]

Continue Reading

ಗುರ್ವನುಗ್ರಹ ಪಡೆದ ಗೋಮಾಂತಕ ಸಮಾಜ

ಅಶೋಕೆ: ನಿಜ ಜ್ಯೇಷ್ಠ ಶುಕ್ಲ ಪಾಡ್ಯದಂದು (16-06-2026) ಗೋಮಾಂತಕ ಸಮಾಜದ ಅನೇಕ ಶಿಷ್ಯರು ಅಶೋಕೆಗೆ ಆಗಮಿಸಿ ಪರಮಪೂಜ್ಯ ಶ್ರೀಸಂಸ್ಥಾನದವರ ಆಶೀರ್ವಾದ-ಮಂತ್ರಾಕ್ಷತೆಗಳನ್ನು ಪಡೆದರು. ಈ ಹಿಂದೆ, ಗೋಮಾಂತಕ ಸಮಾಜದವರು ತಮ್ಮ ಸಮಾಜಕ್ಕೆ ಗುರುಪೀಠವಾಗಿ ಶ್ರೀರಾಮಚಂದ್ರಾಪುರ ಮಠ ಇರಬೇಕು ಎಂದು ಶ್ರೀಮಠದ ೩೫ನೇ ಪೀಠಾಧಿಪತಿಗಳಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಂದ್ರಭಾರತೀ ಮಹಾಸ್ವಾಮಿಗಳವರಲ್ಲಿ ಪ್ರಾರ್ಥಿಸಿ ಅನುಗ್ರಹ ಮಂತ್ರಾಕ್ಷತೆ ಪಡೆದಿದ್ದರು. ಅಂದಿನಿಂದಲೂ ಗೋಮಾಂತಕ ಸಮಾಜ ಶ್ರೀಮಠದ ಶಿಷ್ಯರಾಗಿ ನಡೆದುಕೊಳ್ಳುತ್ತಿದೆ. ಆದರೆ ಸಮಾಜಬಾಂಧವರು ರಾಜ್ಯದ ವಿವಿಧೆಡೆ ನೆಲೆಸಿರುವ ಕಾರಣ, ಸಾಮೂಹಿಕವಾಗಿ ಬಂದು ಸೇವೆಗೈಯ್ಯಲು ಸಾಧ್ಯವಾಗಿರಲಿಲ್ಲ. ಇದೀಗ […]

Continue Reading

‘ಅನ್ನಬ್ರಹ್ಮ ಚಾತುರ್ಮಾಸ್ಯ’ ಆಮಂತ್ರಣ ಲೋಕಾರ್ಪಣೆ

ಅಶೋಕೆ: ನಿಜ ಜ್ಯೇಷ್ಠ ಶುಕ್ಲ ತದಿಗೆಯಂದು (17-06-2026) ಪರಮಪೂಜ್ಯ ಶ್ರೀಸಂಸ್ಥಾನದರು ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಆಮಂತ್ರಣ ಪತ್ರಿಕೆಯನ್ನು ಸೇವಾಸೌಧದಲ್ಲಿ ಲೋಕಾರ್ಪಣೆಗೊಳಿಸಿದರು. ಈ ಸಮಯದಲ್ಲಿ ಶ್ರೀಮಠದ ಕೇಂದ್ರ ಕಾರ್ಯಾಲಯ – ಶಾಸನತಂತ್ರ – ಮಹಾಮಂಡಲ – ಅಂಗಸಂಸ್ಥೆಗಳ ಪದಾಧಿಕಾರಿಗಳು, ಶ್ರೀಸವಾರಿಯ ಸದಸ್ಯರು, ಶಿಷ್ಯಭಕ್ತರು ಉಪಸ್ಥಿತರಿದ್ದರು. ಶ್ರೀಸಂಸ್ಥಾನದವರು ತಮ್ಮ ಮೂವತ್ತಮೂರನೆಯ ಚಾತುರ್ಮಾಸ್ಯವನ್ನು ‘ಅನ್ನಬ್ರಹ್ಮ ಚಾತುರ್ಮಾಸ್ಯ’ ಎಂಬ ಅಭಿಧಾನದಲ್ಲಿ, ಅಶೋಕೆಯಲ್ಲಿ, ಆಷಾಢ ಶುಕ್ಲ ಪೂರ್ಣಿಮೆಯಿಂದ ಭಾದ್ರಪದ ಶುಕ್ಲ ಪೂರ್ಣಿಮೆಯವರೆಗೆ (29-07-2026 ರಿಂದ 26-09-2026 ರ ವರೆಗೆ) ಆಚರಿಸಲಿದ್ದಾರೆ. ತಮ್ಮ ಚಾತುರ್ಮಾಸ್ಯಗಳನ್ನು ಸಮೂಹದ ಒಳಿತಿಗೆ […]

Continue Reading

ಸಕ್ಕರೆ ನಾಡಲ್ಲಿ ಹೊಸಾಡಿನ ಕಾರ್ಯ

ಮಂಡ್ಯ: ಮಲೆನಾಡು ಗಿಡ್ಡ ಸಂರಕ್ಷಣೆ ಮತ್ತು ಸಂವರ್ಧನ ಅಭಿಯಾನದ ವತಿಯಿಂದ ಜೂನ್ – ಜುಲೈ ತಿಂಗಳುಗಳಲ್ಲಿ ‘ಜೋಡೆತ್ತು ಅಭಿಯಾನ’ ನಡೆಸಲು ಘೋಷಿಸಲಾಗಿದೆ. ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಕೆಂಗೇರಿ ಇದರ ಶ್ರೀಶ್ರೀನಿಶ್ಚಲಾನಂದ ಸ್ವಾಮೀಜಿಗಳವರ ನೇತೃತ್ವದಲ್ಲಿ, ರೈತ ಶಾಲೆ ಮಂಡ್ಯ ಇವರ ಉಸ್ತುವಾರಿಯಲ್ಲಿ, ಸಾವಯವ ಕೃಷಿ – ಗೋ-ಆಧಾರಿತ ಕೃಷಿ – ವಿಷಮುಕ್ತ ಆಹಾರ – ಸಾಂಪ್ರದಾಯಿಕ ಜೋಡೆತ್ತಿನ ಅಭಿಯಾನವನ್ನು ನಡೆಸಲಾಗುತ್ತಿದೆ. ಈ ಅಭಿಯಾನದ ಮೊದಲ ಹಂತದ ಕಾರ್ಯಕ್ರಮದಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಆಶೀರ್ವಾದದೊಂದಿಗೆ ಹೊಸಾಡದ ಭಾರತೀಯ […]

Continue Reading

ಕೆಕ್ಕಾರಿನಲ್ಲಿ ‘ಬನ್ನಂಜೆ 90 ವಿಶ್ವನಮನ’

ಹೊನ್ನಾವರ: ‘ಬನ್ನಂಜೆ ಗೋವಿಂದಾಚಾರ್ಯರ ಮಾತು ಗಂಗಾ ಪ್ರವಾಹದಂತೆ. ಅವರ ವ್ಯಕ್ತಿತ್ವ ಮತ್ತು ಚಿಂತನೆಗಳು ಕಥೆಯಾಗಿ ಉಳಿದು ಮುಂದಿನ ತಲೆಮಾರುಗಳಿಗೆ ದಾರಿದೀಪವಾಗಬೇಕು’ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಹೇಳಿದರು. ಶ್ರೀರಾಮಚಂದ್ರಾಪುರ ಮಠದ ಕೆಕ್ಕಾರು ಶಾಖೆಯಾದ ಶ್ರೀರಘೂತ್ತಮ ಮಠದ ಶ್ರೀವಿದ್ಯಾರಣ್ಯ ಸಂಸ್ಕೃತ ಪಾಠಶಾಲಾ ಸಭಾಂಗಣದಲ್ಲಿ ಶ್ರೀರಾಮಚಂದ್ರಾಪುರ ಮಠ – ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ – ಶ್ರೀಮಠದ ಹೊನ್ನಾವರ ಮತ್ತು ಕುಮಟಾ ಮಂಡಲಗಳ ಸಂಯುಕ್ತ ಆಶ್ರಯದಲ್ಲಿ ನಡೆದ ‘ಬನ್ನಂಜೆ 90 ವಿಶ್ವನಮನ’ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ […]

Continue Reading

‘ಮಂಡಲೋತ್ಸವ’: ಭಕ್ತಿ-ಸೇವೆ-ಸಾಧನೆಗಳ ಸಂಗಮ

ಬೆಂಗಳೂರು: ದಕ್ಷಿಣ ಬೆಂಗಳೂರು ಹವ್ಯಕ ಮಂಡಲದ ಮಂಡಲೋತ್ಸವವು ಅಧಿಕ ಜೇಷ್ಠ ಕೃಷ್ಣ ಸಪ್ತಮಿಯಂದು (07-06-2026) ಶ್ರೀಮಠದ ಬೆಂಗಳೂರು ಶಾಖೆ ಶ್ರೀರಾಮಾಶ್ರಮದ ಪುನರ್ವಸು ಭವನದಲ್ಲಿ ಪರಮಪೂಜ್ಯ ಶ್ರೀಸಂಸ್ಥಾನದವರ ದಿವ್ಯಾಶೀರ್ವಾದದೊಂದಿಗೆ ಸುಗಮವಾಗಿ ನೆರವೇರಿತು. ಪೂರ್ವಾಹ್ಣದಲ್ಲಿ ಶ್ರೀರಾಮತಾರಕ ಹವನ, ಅರುಣ ಪ್ರಶ್ನೆ ಪಾರಾಯಣ ಹಾಗೂ ಸ್ವರ್ಣಪಾದುಕಾ ಪೂಜೆಗಳು ಶ್ರದ್ಧೆಯಿಂದ ಜರುಗಿದವು. ಮಾತೆಯರು ಸಾಮೂಹಿಕ ಕುಂಕುಮಾರ್ಚನೆ ಹಾಗೂ ಅರ್ಧನಾರೀಶ್ವರ ಸ್ತೋತ್ರ ಪಠನವನ್ನು ಮನೋಜ್ಞವಾಗಿ ನೆರವೇರಿಸಿದರು. ಮಧ್ಯಾಹ್ನದಲ್ಲಿ ಸಕಲ ಭಕ್ತರಿಗೆ ಪ್ರಸಾದ ಭೋಜನದ ಸುವ್ಯವಸ್ಥೆಯನ್ನು ಮಾಡಲಾಗಿತ್ತು. ಅಪರಾಹ್ಣದಲ್ಲಿ ಧ್ವಜಾರೋಹಣ, ಶಂಖನಾದ, ಗುರುವಂದನೆ ಮತ್ತು ದೀಪಜ್ವಲನಗಳೊಂದಿಗೆ […]

Continue Reading

ಹಲಸಿನ ಹಬ್ಬದಿ ಹಬ್ಬಿದ ಖುಷಿ 

  ಮಂಗಳೂರು: ಹಲಸಿನ ಹಣ್ಣಿನ ಪಾಯಸ, ಬೆರಟಿ ಪಾಯಸ, ಹಲಸಿನ‌ ಬೀಜ ಪಾಯಸ, ಹಲಸಿನ ಹಣ್ಣಿನ ದೋಸೆ.. ನಿಜ ಹೇಳಿ, ಇದನ್ನು ಓದಿ ನಿಮ್ಮ ಬಾಯಲ್ಲಿ ನೀರೂರುತ್ತಿದೆಯಲ್ಲವೇ?! ಇವು ಕೇವಲ ಕೆಲವು ಹೆಸರುಗಳಷ್ಟೇ. ನಂತೂರಿನ ಶ್ರೀಭಾರತೀ ಸಮೂಹ ಸಂಸ್ಥೆಯಲ್ಲಿ ನಡೆದ ಆಹಾರೋತ್ಸವದಲ್ಲಿ ಜನರು ಸವಿದ ಹಲವಾರು ಖಾದ್ಯಗಳಲ್ಲಿ ಇವು ಕೆಲವು ಅಷ್ಟೇ. ಇನ್ನೂ ಅನೇಕ ಪಾರಂಪರಿಕ ಆಹಾರಗಳನ್ನು ತಯಾರಿಸಿ ೧೫ ಸಾವಿರಕ್ಕೂ ಅಧಿಕ ಜನರಿಗೆ ಸಂತೃಪ್ತಿ ಉಂಟುಮಾಡಿದ, ಪಾರಂಪರಿಕ ಖಾದ್ಯಗಳ ಬಗ್ಗೆ ಜಾಗೃತಿ ಉಂಟುಮಾಡಿದ ‘ಹಲಸು ಮೇಳ […]

Continue Reading

ಜ್ಞಾನಸಂವತ್ಸರ: ಪ್ರಕಾಶನದಿಂದ ಪುಸ್ತಕಪ್ರದಾನ

ಬೆಂಗಳೂರು: ಪರಾಭವ ಸಂವತ್ಸರದ ಯುಗಾದಿಯಂದು ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಈ ಸಂವತ್ಸರವನ್ನು ‘ಜ್ಞಾನಸಂವತ್ಸರ’ವನ್ನಾಗಿ ಆಚರಿಸುವಂತೆ, ಜ್ಞಾನಪ್ರಸರಣ ನಡೆಸುವಂತೆ ನಿರ್ದೇಶಿಸಿದ್ದರು. ಪರಮಪೂಜ್ಯರೇ ಜ್ಞಾನಪ್ರಸರಣಕ್ಕಾಗಿ ಸಂಸ್ಥಾಪಿಸಿದ ಶ್ರೀಭಾರತೀ ಪ್ರಕಾಶನವು ಈ ಕಾರ್ಯಕ್ಕೆ ತನ್ನ ಸೇವೆಯನ್ನು ಸಲ್ಲಿಸಲು ತೊಡಗಿದೆ. ತತ್ಪ್ರಯುಕ್ತವಾಗಿ ಶ್ರೀಮಠದ ಬೆಂಗಳೂರು ಶಾಖೆಯ ಪುನರ್ವಸು ಭವನದಲ್ಲಿ 200ಕ್ಕೂ ಹೆಚ್ಚು ಪುಸ್ತಕಗಳನ್ನು ಕೊಡುಗೆಯಾಗಿ ನೀಡುವ ಮೂಲಕ ಶುಭಾರಂಭಗೊಂಡಿತು. ಶಾಸನತಂತ್ರದ ಅಧ್ಯಕ್ಷರಾದ ಮೋಹನ ಭಾಸ್ಕರ ಹೆಗಡೆ ಅವರು ಮೊದಲ‌ ಪುಸ್ತಕವನ್ನು ಜಿ. ಎಮ್. ಹೆಗಡೆ ಚಾಮರಾಜನಗರ ಇವರಿಗೆ ನೀಡಿದರು. ಶಾಸನತಂತ್ರದ […]

Continue Reading

ಹಿರಿಯರ ಗೋಸೇವೆ ಸರ್ವರಿಗೂ ಮಾದರಿ

ಕೋಲಾರ: ಅಧಿಕ ಜ್ಯೇಷ್ಠ ಶುಕ್ಲ ದ್ವಾದಶಿಯಂದು (28-05-2026) ಮಾಲೂರಿನ ಶ್ರೀರಾಘವೇಂದ್ರ ಗೋ ಆಶ್ರಮಕ್ಕೆ ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಅಧಿಕಾರಿಗಳ ತಂಡ ಭೇಟಿ ನೀಡಿ ಗೋಶಾಲೆಯಲ್ಲಿ ನೆಲೆಸಿರುವ ಶ್ರೀ ಸಿದ್ಧಾಂಜನೇಯಸ್ವಾಮಿ ಪೂಜೆಯಲ್ಲಿ ಪಾಲ್ಗೊಂಡು, ₹85,000 ಮೌಲ್ಯದ (65 ಚೀಲ) ಹಿಂಡಿ ದಾನ ನೀಡಿದರು. ಗೋವುಗಳಿಗೆ ಸ್ವತಃ ಗ್ರಾಸ ನೀಡಿ ಗೋಶಾಲೆ ಪರಿಸರದಲ್ಲಿದ್ದು ಸಂತೋಷ ಪಟ್ಟರು. ದೇಶದ ಅಪೂರ್ವ ಗೋಸಂಪತ್ತನ್ನು ಉಳಿಸುವ ಮಹಾಕಾರ್ಯದಲ್ಲಿ ಹಿರಿಯರ ಈ ಗೋಸೇವೆ ಎಲ್ಲರಿಗೂ ಮಾದರಿಯಾಗಿದೆ.

Continue Reading

ಸ್ವಾಗತ ಭಾರತೀ

ಮುಜುಂಗಾವು: ಅಧಿಕ ಜ್ಯೇಷ್ಠ ಕೃಷ್ಣ ಪಾಡ್ಯದಂದು (01-06-2026) ಶ್ರೀಭಾರತೀ ವಿದ್ಯಾಪೀಠದಲ್ಲಿ 2026- 27ನೇ ಶೈಕ್ಷಣಿಕ ವರ್ಷದ ಪ್ರವೇಶೋತ್ಸವ ಕಾರ್ಯಕ್ರಮ ಜರುಗಿತು. ಮುಖ್ಯ ಅತಿಥಿಗಳಾಗಿ ಕ್ಯಾಂಪ್ಕೋ ಸಂಸ್ಥೆಯ ಉಪಾಧ್ಯಕ್ಷರಾದ ಪದ್ಮರಾಜ ಪಟ್ಟಾಜೆಯವರು ಆಗಮಿಸಿ ‘ಸಂಸ್ಕೃತಿ ಸಂಸ್ಕಾರಯುತ ಶಿಕ್ಷಣ ಇಂದಿನ ಆವಶ್ಯಕತೆಗಳಲ್ಲಿ ಒಂದು. ವಿದ್ಯಾಪೀಠ ಇಂತಹ ಶಿಕ್ಷಣ ನೀಡುವುದರಲ್ಲಿ ಮುಂದಿದೆ. ವಿದ್ಯಾರ್ಥಿಗಳು ಈ ಶಿಕ್ಷಣ ಪದ್ಧತಿಯನ್ನು ಪಡೆದು ವಿಕಸಿತ ಭಾರತದ ಕಲ್ಪನೆಯನ್ನು ಸಾಕರಗೊಳಿಸುವಂತಾಗಲಿ’ ಎಂದು ತಮ್ಮ ಮಾತಿನಿಂದ ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷರಾದ ಸುಬ್ರಹ್ಮಣ್ಯ ಭಟ್ ಬೆಜಪ್ಪೆ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. […]

Continue Reading

ಸಾರ್ಥಕ ಜೀವನಕ್ಕೆ ಸಂದ ‘ಹವ್ಯಕ ವಿಭೂಷಣ’

ಹೊನ್ನಾವರ: ಹವ್ಯಕ ವಿಭೂಷಣ ಪ್ರಶಸ್ತಿಗೆ ಭಾಜನರಾದ ಪ್ರೊ| ಎಸ್. ಶಂಭು ಭಟ್ಟ ಕಡತೋಕಾ ಇವರಿಗೆ ಕುಮಟಾ ಮಂಡಲದ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು. ಅಧಿಕ ಜ್ಯೇಷ್ಠ ಹುಣ್ಣಿಮೆಯಂದು (31-05-2026) ಶ್ರೀಮಠದ ಕೆಕ್ಕಾರು ಶಾಖೆ ಶ್ರೀರಘೂತ್ತಮ ಮಠದ ‘ಜಯಗುರು’ ಮಂದಿರದದಲ್ಲಿ ಈ ಕಾರ್ಯಕ್ರಮ ಸಂಪನ್ನಗೊಂಡಿತು. ಕುಮಟಾ ಮಂಡಲದ ಅಧ್ಯಕ್ಷರಾದ ಸೀತಾರಾಮ ಹೆಗಡೆಯವರು ಪ್ರಾಸ್ತಾವಿಕ ನುಡಿಗಳನ್ನಾಡಿ ಶಂಭು ಭಟ್ಟರ ವ್ಯಕ್ತಿತ್ವವನ್ನು, ಸಂಘಟನೆಯಲ್ಲಿ ಅವರ ಪಾತ್ರವನ್ನು ಕೊಂಡಾಡಿದರು. ಪ್ರಾಂತ ಉಪಾಧ್ಯಕ್ಷರಾದ ಜಿ. ಎಸ್ ಹೆಗಡೆಯವರು ಮಾತನಾಡುತ್ತಾ ಸೀಮಾ ಪರಿಷತ್ತು, ಮಂಡಲ ಹಾಗೂ […]

Continue Reading

ಭುಕ್ತಿಮುಕ್ತಿಪ್ರದಾತಾ

ನಮ್ಮ ಬದುಕಿಗೆ, ಭವಿಷ್ಯಕ್ಕೆ ಮಾರ್ಗದರ್ಶಿ ಶ್ರೀಗುರು. ಈ ಲೋಕದಲ್ಲಿ ಸಾಂಸಾರಿಕವಾದ ಸುಖ ಗುರುವಿನಿಂದ. ಜೀವಿಯ ಜನನ ಮರಣಚಕ್ರಭ್ರಮಣವನ್ನು ಇಲ್ಲವಾಗಿಸುವವನೂ ಗುರುವೇ. ಜ್ಞಾನಶಕ್ತಿಸಮಾರೂಢಃ ತತ್ತ್ವಮಾಲಾವಿಭೂಷಿತಃ | ಭುಕ್ತಿಮುಕ್ತಿಪ್ರದಾತಾ ಚ ತಸ್ಮೈ ಶ್ರೀಗುರವೇ ನಮಃ || ಇದು ಗುರುವಿನ ಕುರಿತಾದ ಪ್ರಾಜ್ಞರ ನುಡಿ. ನನ್ನ ಹೆತ್ತ ತಾಯಿ. ವಯಸ್ಸು 93 ವರ್ಷ. ಕಳೆದ ಐದು ವರ್ಷಗಳಿಂದ ಪರಾಧೀನಳಾಗಿ ಹಾಸಿಗೆ ಹಿಡಿದವಳು. ಅನ್ನಾಹಾರಾದಿಗಳನ್ನು ಸೇವಿಸುತ್ತ ಆರೋಗ್ಯವಾಗಿಯೇ ಇದ್ದವಳು. ಅಂತಿಮದಿನದ ಮೊದಲ ಮೂರುದಿನಗಳಲ್ಲಿ ಸ್ವಲ್ಪ ವ್ಯತ್ಯಾಸ. ಹಿಂದಿನ ದಿನವಷ್ಟೇ ಪೂಜ್ಯಶ್ರೀ ಸನ್ನಿಧಾನದವರು ಆಕೆಯ […]

Continue Reading

ವಿದ್ಯಾರಂಭ – ಶುಭಾರಂಭ

ಮಂಗಳೂರು: ‘ವಿದ್ಯಾರ್ಥಿಗಳಿಗೆ ಸಂಸ್ಕಾರ ಮತ್ತು ಸಂಸ್ಕೃತಿಯುಕ್ತ ಶಿಕ್ಷಣ ನೀಡಿದಾಗ ಪರಿಪೂರ್ಣವಾಗುತ್ತದೆ. ಮಕ್ಕಳಿಗೆ ಶಿಸ್ತು, ಉತ್ತಮ ನಡವಳಿಕೆ, ಜೀವನ ಮೌಲ್ಯ- ಇವುಗಳ ಪಾಠ ಸಿಗಬೇಕು’ ಎಂದು ಮೂಡಬಿದರೆಯ ಆಳ್ವಾಸ್ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ವಿನಾಯಕ ಭಟ್ ಗಾಳಿಮನೆ ಹೇಳಿದರು. ಅವರು ನಂತೂರಿನ ಶ್ರೀಭಾರತೀ ಸಮೂಹ ಸಂಸ್ಥೆಯ ಪಿ.ಯು.ಸಿ ವಿಭಾಗದ ‘ಎ ವೈಬ್ರೆಂಟ್ ಬಿಗಿನಿಂಗ್’ ಕಾರ್ಯಕ್ರಮದಲ್ಲಿ ಮಾತನಾಡಿದರು. ಪುಣೆಯ ‘ರಾಮ ಕೃಷಿ ರಸಾಯನ ಸಂಸ್ಥೆ’ಯ ಲೆಕ್ಕ ಮತ್ತು ಆರ್ಥಿಕ ಮುಖ್ಯಸ್ಥ ಅರವಿಂದ ರೈ ಅರ್ಪಿಣಿಗುತ್ತು ಅವರು ಮಾತನಾಡಿ […]

Continue Reading