ಶ್ರೀರಾಮಚಂದ್ರಾಪುರ ಮಠದ ಐತಿಹಾಸಿಕ ಮಹಾಯಜ್ಞ: ಅಡಿಕೆ ಎಲೆಚುಕ್ಕಿ ರೋಗ ನಿವಾರಣೆಗೆ “ಆವಹಂತೀ ಹವನ” ಮತ್ತು “ಬಿಂದು ಜಯ” ಲೋಕಾರ್ಪಣೆ

  ಮಲೆನಾಡಿನ ಹಸಿರು ತೋಟಗಳನ್ನು ಶೃಂಗರಿಸುವ ಪ್ರಮುಖ ವಾಣಿಜ್ಯ ಬೆಳೆ ಎಂದರೆ ಅಡಿಕೆ. ಅಡಿಕೆ ಬೆಳೆ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ಲಕ್ಷಾಂತರ ಕುಟುಂಬಗಳ ಆರ್ಥಿಕ ಬೆನ್ನೆಲುಬಾಗಿದೆ. ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಧಿ-ವಿಧಾನಗಳಲ್ಲಿ ಅಡಿಕೆಗೆ ಅಗ್ರಸ್ಥಾನವಿದೆ. “ಅಡಿಕೆ ಇದ್ದರೆ ಅದೃಷ್ಟ, ಇಲ್ಲದಿದ್ದರೆ ಕಷ್ಟ” ಎಂಬ ಮಾತು ಕನ್ನಡಿಗರಿಗೆ ಚಿರಪರಿಚಿತ. ಆದರೆ, ಇತ್ತೀಚಿನ ವರ್ಷಗಳಲ್ಲಿ ಈ ಪುನೀತ ವೃಕ್ಷವು ಭೀಕರ ಸಂಕಷ್ಟವನ್ನು ಎದುರಿಸುತ್ತಿದೆ.     ‘ಎಲೆಚುಕ್ಕಿ ರೋಗ’ […]

Continue Reading

ಸೋರುವ ಮನೆಗೆ ಸುರಿದ ಶ್ರೀಗುರುಕಾರುಣ್ಯದ ಮಳೆ

​ ​ಬದುಕು ಒಮ್ಮೊಮ್ಮೆ ಅಂಧಕಾರದ ಕೂಪದಲ್ಲಿರುವಾಗ, ದೈವಿಕ ಸಂಕಲ್ಪವೊಂದು ಯಾವ ರೀತಿ ಬೆಳಕಾಗಿ ಬಂದು ಬದುಕಿನ ಕತ್ತಲನ್ನು ದೂರ ಸರಿಸಬಲ್ಲದು ಎನ್ನುವುದಕ್ಕೆ ಮುಳ್ಳೇರಿಯ ಹವ್ಯಕ ಮಂಡಲ ಗುಂಪೆ ವಲಯದ ಶ್ರಾವಣಕೆರೆ ಘಟಕದ ಪುತ್ತಿಗೆ ಕೃಷ್ಣ ಹೆಬ್ಬಾರರ ಕುಟುಂಬವೇ ನಿದರ್ಶನ. ‘ ಅಸಾಧ್ಯವನ್ನು ಸಾಧ್ಯವಾಗಿಸುವ ಗುರುಕರುಣೆಯ ಅನುಗ್ರಹ ‘ ಯಾವ ರೀತಿ ಗುರುಭಕ್ತರಿಗೆ ಒಲಿದು ಬರುತ್ತದೆ ಎನ್ನುವುದನ್ನು ನಾವು ಇಲ್ಲಿ ಕಣ್ಣಾರೆ ಕಾಣಬಹುದು. ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯಾನುಗ್ರಹದೊಂದಿಗೆ, ಶಿಷ್ಯಭಕ್ತರ ಸಹಕಾರದ ಫಲವಾಗಿ ಇಂದು ಹೆಬ್ಬಾರರ ಶಿಥಿಲಗೊಂಡಿದ್ದ […]

Continue Reading

ಗುರುಸೇವೆಯ ಗೃಹಲಕ್ಷ್ಮಿ – ಉಷಾ ಮೋಹನ ಭಾಸ್ಕರ ಹೆಗಡೆ ಬೆಂಗಳೂರು

  ​ಒಂದು ಕುಟುಂಬದ ಸದಸ್ಯರೆಲ್ಲರೂ ಸಂಪೂರ್ಣವಾಗಿ ಶ್ರೀಮಠದ ಸೇವೆಯಲ್ಲಿ ನಿರತರಾದಾಗ ಆ ಮನೆಯಲ್ಲಿ ಒಂದು ಸುಸಂಸ್ಕೃತ ವಾತಾವರಣ ನಿರ್ಮಾಣವಾಗುತ್ತದೆ. ಇಂತಹ ಸೇವಾ ಪರಂಪರೆಯ ಕೇಂದ್ರ ಬಿಂದು ಯಾವಾಗಲೂ ಮನೆಯ ಗೃಹಲಕ್ಷ್ಮಿಯೇ ಆಗಿರುತ್ತಾಳೆ. ಶ್ರೀರಾಮಚಂದ್ರಾಪುರಮಠದ ಶಾಸನತಂತ್ರದ ಅಧ್ಯಕ್ಷರಾಗಿರುವ ಮೋಹನ ಭಾಸ್ಕರ ಹೆಗಡೆ ಅವರ ಪತ್ನಿಯಾಗಿರುವ ಉಷಾ ಹೆಗಡೆಯವರು ಈ ಸಾಲಿಗೆ ಸೇರುವ ಮಾಸದ ಮಾತೆಯರಲ್ಲೊಬ್ಬರು. ಬೆಂಗಳೂರು ದಕ್ಷಿಣ ಮಂಡಲ ಗಿರಿನಗರ ವಲಯದ ಶ್ರೀನಿವಾಸನಗರದಲ್ಲಿರುವ ​ಉಷಾ ಹೆಗಡೆಯವರು ಹೊಸನಗರದ ಸಮೀಪದ ವಡ್ಡಿನಬೈಲಿನ ಗೋಪಾಲಕೃಷ್ಣ ಎಚ್. ಮತ್ತು ಕುಸುಮಾಕ್ಷಿ ದಂಪತಿಗಳ ಪುತ್ರಿ. […]

Continue Reading

ಹವಿ ಸವಿ ತೋರಣ – ೨೭ ಹಾಸಿಗೆ ಇಪ್ಪಷ್ಟೇ ಕಾಲು ನೀಡುವನಾ…

‘ಹಾಸಿಗೆ ಇಪ್ಪಷ್ಟೇ ಕಾಲು ನೀಡೆಕು ‘ ಹೇಳುವ ಗಾದೆ ನಮಗೆಲ್ಲ ಗೊಂತಿದ್ದು. ನಮ್ಮ ಮನೆಗಳ ಒಂದು ಶಿಸ್ತಿನ ಬದುಕಿನ ಸುರುವಾಣ ಮೆಟ್ಲು ಅದು. ಮದಲಿಂಗೆ ಮನೆಯ ಹಿರಿಯರು ಮಾತಾಡುಗ ಅದೆಷ್ಟು ಗಾದೆಗೊ, ನುಡಿಕಟ್ಟುಗಳ ಹೇಳುಗು. ಈಗ ಹಾಂಗೆ ಮಾತಾಡುವವು ಕಮ್ಮಿಯಾಗಿ ನವಗೆ ಜೀವನದ ಪಾಠಂಗಳ ಹೇಳಿ ಕೊಡುವವು ಕಮ್ಮಿ ಆಯಿದವು ನಾವೀಗ ಹಾಸಿಗೆ ಇಪ್ಪಷ್ಟೇ ಕಾಲು ನೀಡೆಕು ‘ ಹೇಳುವ ವಿಶಯಲ್ಲಿ ಮಾತಾಡುವ°. ಮದಲಿಂಗೆಲ್ಲ ನಮ್ಮ ಸಮಾಜಲ್ಲಿ ತುಂಬಾ ಸರಳವಾಗಿ ಬದ್ಕುವವೇ ಇದ್ದದು. ನವಗೆ ಎಷ್ಟು ಸಂಪಾದನೆ […]

Continue Reading

ಸ್ತೋತ್ರಾನುಗ್ರಹದ ಭಕ್ತಿರಸ ವೈಭವ – ಶ್ರೀಶಂಕರಪಂಚಮೀ ಉತ್ಸವ

​ಧರ್ಮವೆಂಬ ಸೂರ್ಯನಿಗೆ ಅಧರ್ಮದ ಕಾರ್ಮೋಡಗಳು ಕವಿದು, ಮೈಮನಗಳೆಲ್ಲವೂ ಮಸುಕಾಗಿದ್ದ ಕಾಲವೊಂದಿತ್ತು. ಅದು ಕ್ರಿ.ಶ. ಎಂಟನೇ ಶತಮಾನದ ಪ್ರಥಮ ದಶಕದ ಸಮಯ. ವೇದೋಕ್ತವಾದ ಆಚರಣೆಗಳು ಕೇವಲ ಹೆಸರಿಗಷ್ಟೇ ಉಳಿದು, ಸಮಾಜವು ತನ್ನ ಮೂಲ ಸಂಸ್ಕಾರಗಳಿಂದ ವಿಮುಖವಾಗಿ ವೈದಿಕ ಮಾರ್ಗದಿಂದ ದೂರ ಸರಿಯುತ್ತಿತ್ತು. ಇಂತಹ ಕತ್ತಲೆಯ ಸಮಯದಲ್ಲಿ, ಧರ್ಮದ ಪುನರುತ್ಥಾನಕ್ಕಾಗಿ ಸಹಜವಾದ ಜೀವಂತ ಹಂಬಲವೊಂದು ಸಮಾಜದಲ್ಲಿ ಮೊಳಕೆಯೊಡೆಯಿತು. “ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ” ಎಂಬ ಪರಮಾತ್ಮನ ಸಂಕಲ್ಪ ಮತ್ತೊಮ್ಮೆ ಕಾರ್ಯರೂಪಕ್ಕೆ ಬರಲು ವೇದಿಕೆ ಸಿದ್ಧವಾಗಿತ್ತು. ಭಾರತದ ಬಾಂದಳದಲ್ಲಿ ದಿವ್ಯ ಪ್ರಭೆಯೊಂದರ […]

Continue Reading

ಸಾರ್ಥಕ ಬದುಕಿನ ಆಶಾಕಿರಣ ಗುರುಸೇವೆ – ಜ್ಯೋತಿ ಪ್ರಕಾಶ್ ಭಟ್ ,ಮುರುಡೇಶ್ವರ

    ” ಗುರುಗಳ ಮಾರ್ಗದರ್ಶನ ಹಾಗೂ ಗೋಸೇವೆಯಲ್ಲಿ ತೊಡಗಿಸಿಕೊಂಡವರಿಗೆ ಬದುಕಿನಲ್ಲಿ ನೆಮ್ಮದಿ , ಶಾಂತಿ ಸಹಜವಾಗಿ ದೊರಕುತ್ತದೆ. ಸಾರ್ಥಕ ಬದುಕಿಗೆ ದಿವ್ಯಸಂಜೀವಿನಿ ಗುರುಸೇವೆ ” ಎನ್ನುವವರು ಹೊನ್ನಾವರ ಮಂಡಲ, ಭಟ್ಕಳ ವಲಯದ ಮುರುಡೇಶ್ವರದ ‘ ಕಲ್ಪತರು ‘ ನಿವಾಸಿಗಳಾಗಿರುವ ಪ್ರಕಾಶ್ ಆರ್. ಭಟ್ ಅವರ ಪತ್ನಿ ಜ್ಯೋತಿ ಪ್ರಕಾಶ್ ಭಟ್.   ಕುಂದಾಪುರದ ಚಂದ್ರಶೇಖರ ಉಡುಪ, ಸುಶೀಲಾ ದಂಪತಿಗಳ ಪುತ್ರಿಯಾದ ಇವರು ಬಾಲ್ಯದಿಂದಲೇ ಹಸುಗಳ ಒಡನಾಟದಲ್ಲಿ ಬೆಳೆದವರು.   ‘ ಗೋಮಾತೆಯ ಒಡನಾಟ ಮನಸ್ಸಿಗೆ ತುಂಬಾ […]

Continue Reading

ಹವಿ ಸವಿ ತೋರಣ – ೨೬ ವಿಷು ಕಣಿಯ ಸಂಭ್ರಮ

ಹಬ್ಬಂಗೊ, ಆಯನಂಗೊ, ವ್ರತಂಗೊ, ನಮ್ಮ ಹಿರಿಯರು ನಮಗೆ ಬಳುವಳಿಯಾಗಿ ಕೊಟ್ಟ ಕೆಲವು ಆಚರಣೆಗೊ ಇದೆಲ್ಲವೂ ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗಂಗೊ. ತಲೆತಲಾಂತರಂದ ನಮ್ಮ ಹಿರಿಯರು ನಡೆಸಿಕೊಂಡು ಬಂದ ಕೆಲವು ಸಂಭ್ರಮದ ಆಚರಣೆಗೊ ಮಂಗಳಕರ ನಿಯಮಂಗೊ ಇದೆಲ್ಲವನ್ನು ನಾವು ತುಂಬಾ ಪೂಜ್ಯ ಭಾವನೆಯಿಂದ ಕಾಣ್ತು. ಅಷ್ಟೇ ಶ್ರದ್ಧೆoದ ಆಚರಿಸುತ್ತಾ ಇದ್ದು. ‘ ಬದುಕಿಲ್ಲಿ ಸುಖ – ದುಃಖ, ಏಳು – ಬೀಳು ತುಂಬಾ ಸಹಜವಾಗಿ ಇಪ್ಪದು. ಅದರ ನಾವು ಒಂದೇ ರೀತಿಯಲ್ಲಿ ಸ್ವೀಕರಿಸೆಕು ‘ ಹೇಳುವ ಸಂದೇಶ ಹೊತ್ತು […]

Continue Reading

ಸಂಸ್ಕಾರದ ಹಾದಿಯಲ್ಲಿ ಸೇವೆಯ ಬೆಳಕು: ವೇದಾವತಿ ಗಾಂಧೀನಗರ, ಸಾಗರ

  ​ ಸಾಗರ ಮಂಡಲ ಪೂರ್ವ ವಲಯದ ಗಾಂಧಿನಗರ ನಿವಾಸಿಯಾಗಿರುವ ವೇದಾವತಿ ಅವರು, ವೃತ್ತಿಯಿಂದ ಅಧ್ಯಾಪಿಕೆಯಾಗಿ ನೂರಾರು ಮಕ್ಕಳಿಗೆ ಜ್ಞಾನದ ಬೆಳಕನ್ನು ನೀಡಿದವರು. ಪ್ರಸ್ತುತ ನಿವೃತ್ತ ಜೀವನದ ಪ್ರತಿ ಕ್ಷಣವನ್ನು ಅವರು ಶ್ರೀರಾಮಚಂದ್ರಾಪುರ ಮಠದ ವಿವಿಧ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡು, ಗೋಸೇವೆ ಮತ್ತು ಶ್ರೀಮಠದ ಸೇವೆಯ ಮೂಲಕ ನೆಮ್ಮದಿಯನ್ನು ಕಂಡುಕೊಂಡಿದ್ದಾರೆ.   ​ಆವಿನಹಳ್ಳಿಯ ದುರ್ಗಾ ಭಟ್ ಮತ್ತು ಜಯಲಕ್ಷ್ಮಿ ಅಮ್ಮ ದಂಪತಿಗಳ ಪುತ್ರಿಯಾಗಿ ಜನಿಸಿದ ವೇದಾವತಿ ಅವರು, ಸಾಗರ ಗಾಂಧೀನಗರದ ಬಿ.ಕೆ. ರಾಮಣ್ಣ ಅವರ ಪತ್ನಿ. ಚಿಕ್ಕಂದಿನಿಂದಲೇ […]

Continue Reading

ಬಾಳಿಗೆ ಸಂಜೀವಿನಿಯಾದ ಶ್ರೀಗುರು ಅನುಗ್ರಹ – ಗೌರಿ ರಾಮ ಭಟ್, ಮುಲಾರು, ಕಲ್ಲಡ್ಕ

  ‘ ​ಬದುಕಿನ ಹಾದಿಯಲ್ಲಿ ಎದುರಾಗುವ ಕಷ್ಟ-ಕಾರ್ಪಣ್ಯಗಳ ಸುಳಿಯಿಂದ ಪಾರಾಗಲು ಭಗವಂತನ ನಾಮಸ್ಮರಣೆ ಎಷ್ಟು ಮುಖ್ಯವೋ, ಗುರುವಿನ ಅನುಗ್ರಹವೂ ಅಷ್ಟೇ ಅಮೂಲ್ಯ ಎಂಬುದು ಉಪ್ಪಿನಂಗಡಿ ಮಂಡಲ ಮಾಣಿ ವಲಯದ ಕಡೆಂಗೋಡ್ಲು ಮೂಲದ, ಪ್ರಸ್ತುತ ಕಲ್ಲಡ್ಕದ ಮುಲಾರು ‘ಶಿವಾನುಗ್ರಹ’ ನಿವಾಸಿಗಳಾಗಿರುವ ಗೌರಿ ರಾಮ ಭಟ್ ಅವರ ಜೀವನದಲ್ಲಿ ಅನುಭವಕ್ಕೆ ಬಂದ ಸತ್ಯ ಜಲ್ಲಿ ಮೂಲದ ಸವಣಾಲು ಸಮೀಪದ ಕೋಡಿಮೊಗೆರು ತಿಮ್ಮಣ್ಣ ಭಟ್ ಮತ್ತು ದೇವಕಿ ಅಮ್ಮ ದಂಪತಿಗಳ ಸುಪುತ್ರಿಯಾಗಿ ಜನಿಸಿದ ಇವರು, ಕಲ್ಲಡ್ಕದ ರಾಮ ಭಟ್ ಅವರ ಪತ್ನಿ. […]

Continue Reading

ಹವಿ ಸವಿ ತೋರಣ – ೨೫ ನಮ್ಮ ಸಂಸ್ಕೃತಿ ಒಳುಶುವ°

  ನಮ್ಮ ಸಂಸ್ಕೃತಿ ಹೇಳಿದರೆ ಸಮಾಜದ ಆತ್ಮ ಹೇಳಿ ಹೇಳ್ಲಕ್ಕು. ಹಿರಿಯರಿಂದ ನಮಗೆ ಬಳುವಳಿಯಾಗಿ ಬಂದ ಹಳೆಯ ಆಚರಣೆಗೂ, ಕೆಲವು ನಂಬಿಕೆಗೊ, ರೂಢಿಲಿ ಬಂದ ಜೀವನದ ಸಂಸ್ಕಾರಂಗೊ, ಭಾಶೆ, ಕಲೆ ಇದೆಲ್ಲವನ್ನು ಸೇರಿಸಿ ನಾವು ಸಂಸ್ಕೃತಿ ಹೇಳುದು. ನಮ್ಮ ವ್ಯಕ್ತಿತ್ವ ರೂಪಿಸುದು ಈ ಸಂಸ್ಕೃತಿ. ನಮ್ಮ ಜೀವನಕ್ಕೆ ದಿಕ್ಕು ತೋರಿಸುವ ಸಂಸ್ಕಾರಂಗೋ ಈ ಸಂಸ್ಕೃತಿಯ ಒಳ ಇದ್ದು. ಸಂಸ್ಕೃತಿ ಹೇಳಿದರೆ ಒಂದು ಮರದ ಬೇರಿನ ಹಾಂಗೆ. ನಮ್ಮ ಹಿರಿಯರು ತುಂಬಾ ಕಷ್ಟಪಟ್ಟು ಒಳ್ಳೆಯ ಸಂಸ್ಕಾರಂಗಳ, ಒಳ್ಳೆಯ ಚಿಂತನೆಗಳ […]

Continue Reading

ಸೇವಾಪಥದ ಸುಸಂಸ್ಕೃತ ಹೆಜ್ಜೆಗಳು: ಸೌಂದರ್ಯ ಕೊಲ್ಲಂಪಾರೆ 

ಸುಸಂಸ್ಕೃತ ಕುಟುಂಬದಲ್ಲಿ ಜನಿಸಿ, ಆಧುನಿಕ ಶಿಕ್ಷಣವನ್ನು ಪಡೆದು, ವೃತ್ತಿಕ್ಷೇತ್ರದಲ್ಲಿ ಸಕ್ರಿಯವಾಗಿ ಸಾಧನೆ ಮಾಡುತ್ತಿರುವಾಗಲೂ ತಮ್ಮ ಮೂಲ ಬೇರುಗಳನ್ನು ಮರೆಯದೆ ಸಂಪ್ರದಾಯ ಮತ್ತು ಸೇವೆಯಲ್ಲಿ ನೆಮ್ಮದಿ ಕಾಣುವ ವ್ಯಕ್ತಿಗಳು ಅಪರೂಪ. ಇಂತಹ ಅಪರೂಪದ ಸಾಲಿಗೆ ಸೇರಿದವರು ಸೌಂದರ್ಯ ಕೊಲ್ಲಂಪಾರೆ. ಮುಳ್ಳೇರಿಯ ಮಂಡಲ ನೀರ್ಚಾಲು ವಲಯದ ಉಪ್ಪಿನೆ ನಿವಾಸಿಗಳಾಗಿರುವ ಡಾ. ಗೌತಮ್ ಅವರ ಪತ್ನಿ ಸೌಂದರ್ಯ, ಕೊಲ್ಲಂಪಾರೆಯ ನಾರಾಯಣ ಭಟ್ ಮತ್ತು ಪಾರ್ವತಿ ದಂಪತಿಗಳ ಪುತ್ರಿ.   ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಬಯೋಕೆಮಿಸ್ಟ್ರಿ ವಿಭಾಗದಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಇವರಿಗೆ ಬಾಲ್ಯದಿಂದಲೇ […]

Continue Reading

ಹವಿ ಸವಿ ತೋರಣ – ೨೪ ನೆಂಟ್ರಮನೆಯ ಪ್ರೀತಿ ಸೆಲೆ

  ಮಾರ್ಚ್ ತಿಂಗಳು ಮುಗುದು ಎಪ್ರಿಲ್ ತಿಂಗಳು ಬತ್ತಾಯಿದ್ದು ಹೇಳಿದರೆ ಸಾಕು, ಶಾಲೆಗೆ ಹೋಪ ಮಕ್ಕಳ ಮನಸ್ಸು ಅಜ್ಜನ ಮನೆಯ ಕಡೆoಗೆ ಓಡ್ಲೆ ಸುರುವಾವುತ್ತು. ಶಾಲೆಯ ಪರೀಕ್ಷೆ ಮುಗಿದು ದೊಡ್ಡ ರಜೆ ಸುರುವಾದರೆ, ಮಾರಾಪು ಕಟ್ಟಿಂಡು ಬಸ್ಸು ಹತ್ತಿ ಅಜ್ಜನ ಮನೆಗೆ ಹೋಪ ಆ ಸಂಭ್ರಮ ಇದ್ದಲ್ಲದಾ, ಅದು ಈಗಾಣ ಯೇವದೇ ಪೇಟೆಯ ದೊಡ್ಡ ದೊಡ್ಡ ವಾಣಿಜ್ಯ ಮಳಿಗೆಗಳಲ್ಲಿ ತಿರುಗಿರೂ ಸಿಕ್ಕ . ನಮ್ಮ ಬಾಲ್ಯದ ಚಿನ್ನದ ಹಾಂಗಿದ್ದ ದಿನಂಗೊ ಅದೆಲ್ಲ. ಆ ದಿನಂಗೊ ಬರೀ ಅಜ್ಜನ […]

Continue Reading

‘ ​ಗುರುಕೃಪೆಯ ಅಮೃತಧಾರೆಗೆ ಸಾಕ್ಷಿಯಾದ ಬದುಕು ನಮ್ಮದು’ – ಸೀತಾರತ್ನ ಗಿರಿನಗರ

  ” ​ಜೀವನವೆಂಬ ಸುಖ – ದುಃಖಗಳ ಅವಿರತ ಪಯಣದಲ್ಲಿ ಶ್ರಿಗುರುಚರಣಗಳನ್ನು ಅಚಲವಾಗಿ ನಂಬಿದವರು ಶ್ರೀಗುರುಕೃಪೆಯ ಪ್ರತ್ಯಕ್ಷ ಅನುಭವವನ್ನು ಪಡೆಯುತ್ತಾರೆ ಎಂಬುದಕ್ಕೆ ನಾವೇ ಸಾಕ್ಷಿ ” ಎನ್ನುತ್ತಾರೆ ಬೆಂಗಳೂರು ದಕ್ಷಿಣ ಮಂಡಲ ಗಿರಿನಗರ ವಲಯದಲ್ಲಿ ಗುರಿಕ್ಕಾರರಾಗಿ ಸೇವೆ ಸಲ್ಲಿಸುತ್ತಿರುವ ವಿಘ್ನೇಶ್ ಬಳ್ಳಮಜಲು ಅವರ ಪತ್ನಿ ಸೀತಾರತ್ನ. ಕನ್ಯಾನ ಪಿಲಿಂಗುಳಿ ಮೂಲದ ಪೆರಾಜೆ ಗಂಗಾರಾಮ ನಿವಾಸದ ಗಣನಾಥ ಭಟ್ ಮತ್ತು ಸರಸ್ವತಿ ಜಿ. ಭಟ್ ಅವರ ಸುಪುತ್ರಿಯಾಗಿ ಜನಿಸಿದ ಇವರು, ದಕ್ಷಿಣ ಕನ್ನಡ ಮೂಲದ ವಿಘ್ನೇಶ್ ಬಳ್ಳಮಜಲು ಅವರನ್ನು […]

Continue Reading

ಹವಿ ಸವಿ ತೋರಣ – ೨೩ ‘ ಪರಾಭವ’ ಸಂವತ್ಸರ ತರಲಿ ಸದಾ ವಿಜಯ

​ ​ಮಾವಿನ ಬೇವಿನ ತೋರಣ ಕಟ್ಟು ಬೇವು ಬೆಲ್ಲಗಳನು ಒಟ್ಟಿಗೆ ಕುಟ್ಟು ಜೀವನವೆಲ್ಲಾ ಬೇವು ಬೆಲ್ಲ ಎರಡೂ ಸವಿವವನೇ ಕಲಿ ಮಲ್ಲ.. ​ ರಾಷ್ಟ್ರಕವಿ ಕುವೆಂಪು ಅವರ ಚೆಂದದ ಸಾಲುಗಳ ನೆಂಪು ಮಾಡುವ ಹಾಂಗೆ ಮತ್ತೊಂದು ಯುಗಾದಿ ಹಬ್ಬ ಸಂಭ್ರಮದೊಟ್ಟಿಂಗೆ ಬಂತೇ ಬಂತಿದಾ..! ​ಚಾಂದ್ರಮಾನ ಪದ್ಧತಿಯ ಪಂಚಾಂಗದ ಪ್ರಕಾರ ಚೈತ್ರ ಶುದ್ಧ ಪ್ರತಿಪದೆಯ ನಾವು ಹೊಸ ವರ್ಷ ಹೇಳಿ ಆಚರಿಸುತ್ತು. ಯುಗ ಯುಗಂಗಳ ಮೊದಲು ಬ್ರಹ್ಮದೇವರು ಸೃಷ್ಟಿ ಕಾರ್ಯ ಸುರು ಮಾಡಿದ ದಿನ ಇದು ಹೇಳಿ ಸಣ್ಣಾದಿಪ್ಪಗ […]

Continue Reading

ಶ್ರೀಗುರು ​ಸೇವೆಯೇ ಬದುಕಿನ ಸೌಭಾಗ್ಯ: ವಿಶಾಲಾಕ್ಷಿ ರಾಮಕೃಷ್ಣ ಹೆಗಡೆ ಹರಿಕೇರಿ

​ ” ​ಜೀವನದ ಸಾರ್ಥಕತೆ ಇರುವುದು ಸೇವೆಯಲ್ಲಿ. ಅದರಲ್ಲೂ ಶ್ರೀಗುರು ಸೇವೆ ಹಾಗೂ ಗೋ ಸೇವೆಯಿಂದ ಬದುಕಿನಲ್ಲಿ ನೆಮ್ಮದಿ ಶಾಂತಿ ನೆಲೆಸುತ್ತದೆ. ಇಂತಹ ಸೇವೆಯಲ್ಲಿ ತೊಡಗಿಸಿಕೊಳ್ಳುವುದಕ್ಕೂ ದೇವರ ಅನುಗ್ರಹ ಬೇಕು ” ಎಂದವರು ಹೊನ್ನಾವರ ಸಮೀಪದ ಹರಿಕೇರಿಯ ಪ್ರಸ್ತುತ ಹೊಸಪೇಟೆ ನಿವಾಸಿಗಳಾಗಿರುವ ರಾಮಕೃಷ್ಣ ಹೆಗಡೆಯವರ ಪತ್ನಿ ವಿಶಾಲಾಕ್ಷಿ ಹೆಗಡೆ. ಹೊನ್ನಾವರದ ಖರ್ವಾ ಗ್ರಾಮದ ಗಣಪತಿ ಹೆಗಡೆ ಮತ್ತು ಸುಭದ್ರಾ ಹೆಗಡೆ ದಂಪತಿಗಳ ಪುತ್ರಿ ವಿಶಾಲಾಕ್ಷಿಯವರು ಬಾಲ್ಯದಿಂದಲೇ ಹಸುಗಳ ಒಡನಾಟದಲ್ಲಿ ಬೆಳೆದವರು. ಪತಿಯ ಮನೆಯಲ್ಲಿಯೂ ಸುಮಾರು ೧೫-೨೦ ಹಸುಗಳನ್ನು […]

Continue Reading

ಶ್ರೀಶಂಕರರ ಪರ್ವಕ್ಕೆ ಶುಭಾಕ್ಷತೆಯ ಆರಂಭ

ಸಿದ್ದಾಪುರ: ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರು ಧರೆಗವತರಿಸಿದ ಪುಣ್ಯದಿನ ವೈಶಾಖ ಶುಕ್ಲ‌ ಪಂಚಮೀ. ತದಂಗವಾಗಿ ‘ಶಂಕರಪಂಚಮೀ’ ಕಾರ್ಯಕ್ರಮವು 20-04-2026 ರಿಂದ 22-04-2026ರ ವರೆಗೆ ಶ್ರೀರಾಮದೇವ ಭಾನ್ಕುಳಿಮ~ಗೋಸ್ವರ್ಗದಲ್ಲಿ ನಡೆಯಲಿದೆ. ಪ್ರತಿವರ್ಷದಂತೆ ಈ ವರ್ಷವೂ ಪರಮಪೂಜ್ಯ ಶ್ರೀಸಂಸ್ಥಾನದವರ ದಿವ್ಯ ಉಪಸ್ಥಿತಿ-ಮಾರ್ಗದರ್ಶನಗಳೊಂದಿಗೆ ಪರಮಗುರುಗಳನ್ನು-ಜಗದ್ಗುರುಗಳನ್ನು ಆರಾಧಿಸುವ ಪುಣ್ಯಕಾರ್ಯಗಳು ನಡೆಯಲಿವೆ. ಅಕ್ಕಿಕಾಳು ಅರಸಿನ – ಕುಂಕುಮಗಳೊಂದಿಗೆ ಚೆನ್ನಾಗಿ ಬೆರೆತರೆ ಮಾತ್ರ ಅಕ್ಷತೆಯಾಗಬಲ್ಲುದು. ಆ ಹದ ನೋಡಿ ಅದನ್ನು ಕಲಸಿ ಅಕ್ಕಿ ಕಾಳನ್ನು ಅಕ್ಷತೆಯಾಗಿಸುವುದೇ ಒಂದು ಮಂಗಲಕಾರ್ಯ. ಶುಭಕಾರ್ಯಕ್ಕೆ ಬಳಸುವ ಅಕ್ಷತೆಯನ್ನು ಮಾಡಲು ಶುದ್ಧಾಂತರಂಗ ಬೇಕು. […]

Continue Reading

ಹವಿ ಸವಿ ತೋರಣ – ೨೨ ಸಂಸ್ಕಾರದ ಪ್ರತಿಬಿಂಬ ನಮ್ಮ ವಸ್ತ್ರಸಂಹಿತೆ

  ನಮ್ಮ ಸಮಾಜಲ್ಲಿ ಹೆಮ್ಮಕ್ಕೊಗೆ ಯೇವಗಲೂ ವಿಶೇಷ ಗೌರವ ಇದ್ದು ಹೇಳಿ ನಮಗೆ ಗೊಂತಿದ್ದು. ನಮ್ಮ ಹಿರಿಯರು ಹೇಳುವ ಹಾಂಗೆ ‘ ಎಲ್ಲಿ ಹೆಮ್ಮಕ್ಕೋಗೆ ಗೌರವ ಸಿಕ್ಕುತ್ತೋ ಅಲ್ಲಿ ದೇವತೆಗೋ ನೆಲೆಸಿರ್ತ್ತವಡ’. ಹಾಂಗಾಗಿಯೇ ಹೆಮ್ಮಕ್ಕಳ ಗೃಹಲಕ್ಷ್ಮಿ ಹೇಳಿ ಲಕ್ಷ್ಮೀದೇವಿಗೆ ಹೋಲಿಸುದು. ಕೂಸುಗಳ ಅಂತೂ ಭಾಗ್ಯಲಕ್ಷ್ಮಿ ಹೇಳಿಯೇ ಹೇಳುದು. ಈ ಸರ್ತಿ ಲಕ್ಷ್ಮೀ ದೇವಿಯರ ಹಾಂಗೆ ಇಪ್ಪ ಹೆಮ್ಮಕ್ಕಳ ವಸ್ತ್ರ ವಿನ್ಯಾಸದ ವಿಶಯವ ಆಲೋಚನೆ ಮಾಡುವ° ಹೆಮ್ಮಕ್ಕಳ ದೇಹ ಹೇಳಿದರೆ ದೇವಸ್ಥಾನದಷ್ಟೇ ಪವಿತ್ರ ಹೇಳಿ ನಮ್ಮ ಹಿರಿಯರು ಹೇಳಿದ್ದವು. […]

Continue Reading

ಗುರುಭಕ್ತಿ ಮತ್ತು ಗೋಸೇವೆಯ ಸಮನ್ವಯ – ವಿಜಯಲಕ್ಷ್ಮಿ ಸೊಂದಿ

ಶ್ರೀರಾಮಚಂದ್ರಾಪುರ ಮಠದ ಸಕ್ರಿಯ ಕಾರ್ಯಕರ್ತೆಯಾಗಿ, ಗೋಮಾತೆಯ ಸೇವೆ ಮಾಡುತ್ತಾ ಬದುಕನ್ನು ಸಾರ್ಥಕಪಡಿಸಿಕೊಳ್ಳುತ್ತಿರುವವರು ಮಂಗಳೂರು ಮಂಡಲ, ಬಾಯಾರು ವಲಯದ ಶಿವ ಶರ್ಮ ಸೊಂದಿ ಇವರ ಪತ್ನಿ ವಿಜಯಲಕ್ಷ್ಮಿ ಸೊಂದಿ. ಹಿಳ್ಳೆಮನೆ ಎಚ್.ಎಸ್. ಮಹಾಲಿಂಗ ಭಟ್ ಮತ್ತು ಗಂಗಮ್ಮ ದಂಪತಿಗಳ ಪುತ್ರಿಯಾಗಿ ಸಂಸ್ಕಾರಯುತ ವಾತಾವರಣದಲ್ಲಿ ಜನಿಸಿದ ಇವರು, ಬಾಲ್ಯದಿಂದಲೇ ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಮೈಗೂಡಿಸಿಕೊಂಡವರು. ​ವಿಜಯಲಕ್ಷ್ಮಿ ಅವರಿಗೆ ಗೋವುಗಳೆಂದರೆ ತುಂಬಾ ಪ್ರೀತಿ. ಅವು ದೈವಸ್ವರೂಪಿಗಳು ಎಂದು ಅವರ ನಂಬಿಕೆ. ಚಿಕ್ಕಂದಿನಿಂದಲೇ ಹಸುಗಳೊಂದಿಗೆ ಬೆಳೆದ ಇವರು, ತಮ್ಮ ಬಾಲ್ಯದ ದಿನಗಳಲ್ಲಿ […]

Continue Reading

ಯುವ ಜನತೆ ಕೃಷಿಯ ಕೊಶಿಯ ತಿಳಿಯೆಕು

ಕೃಷಿ ತೋ ನಾಸ್ತಿ ದುರ್ಭಿಕ್ಷಂ ಜಪತೋ ನಾಸ್ತಿ ಪಾತಕಂ ‘ ಹೇಳಿ ನಮ್ಮ ಹೆರಿಯವು ಹೇಳಿದ್ದು ಕೃಷಿಯ ಮಹತ್ವದ ಬಗ್ಗೆ. ಕೃಷಿ ಇಪ್ಪವ° ಎಂದೂ ಬಡವ° ಅಲ್ಲ. ‘ ಬೇಸಾಯಗಾರ° ಬೇಗ ಸಾಯ° ‘ ಹೇಳುವ ಗಾದೆಮಾತು ಬಪ್ಪಲೆ ಕಾರಣವೂ ಕೃಷಿಕರ ಮೇಗೆ ಇಪ್ಪ ಗೌರವಂದಲೇ. ಮೊದ್ಲಾಣ ಕಾಲಲ್ಲಿ ಜನರ ಶ್ರೀಮಂತಿಕೆಯ ಅಳಕೊಂಡಿದ್ದದೇ ತೋಟ,ಗದ್ದೆ,ಹಟ್ಟಿಲಿಪ್ಪ ದನಗಳ ಸಂಖ್ಯೆಯ ಲೆಕ್ಕ ಹಾಕಿಕ್ಕಿ. ಆದರೆ ಇಂದು ಆ ಸ್ಥಿತಿ ಬದಲಾಯಿದು. ನಮ್ಮ ದೇಶದ ಬೆನ್ನೆಲುಬಾಗಿದ್ದ ಕೃಷಿಯ ಬೆಳೆಗೊಕ್ಕೆ ಇಂದು ಸರಿಯಾದ […]

Continue Reading

ನಮ್ಮ ಮನೆ ಹವ್ಯಕಭವನ

  (ಶ್ರೀಸಂಸ್ಥಾನದವರ ಅನುಗ್ರಹದಿಂದ ಕಾರ್ಯನಿರ್ವಹಿಸುತ್ತಿರುವ ಗುರುವಾಯನಕೆರೆಯ ‘ನಮ್ಮ ಮನೆ’ ಅಂಗಸಂಸ್ಥೆಯಲ್ಲಿ ಬರುವ ಮಾರ್ಚ್ ೪ ರಂದು ಶ್ರೀಮಠದ ೩೪ನೇ ಪೀಠಾಧಿಪತಿಗಳಾದ ಬ್ರಹ್ಮೈಕ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಮಚಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಮಹೋತ್ಸವ ನಡೆಯಲಿದೆ. ತನ್ನಿಮಿತ್ತ ‘ನಮ್ಮ ಮನೆ’ಯ ಪರಿಚಯ.)     ಮಂಗಳೂರು ಹೋಬಳಿಯು (ಪ್ರಾಂತ್ಯ) ಗೋಕರ್ಣ ಮಹಾಮಂಡಲದ ಮೂರು ಹೋಬಳಿಗಳಲ್ಲಿ ಒಂದು. ಈಗಿನ ದಕ್ಷಿಣ ಕನ್ನಡ, ಉಡುಪಿ, ಮಡಿಕೇರಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಈ ಹೋಬಳಿಯು ಹಬ್ಬಿದೆ. ಇದರಲ್ಲಿ ಉಪ್ಪಿನಂಗಡಿ, ಮಂಗಳೂರು ಮತ್ತು ಮುಳ್ಳೇರಿಯ ಮಂಡಲಗಳು ಇವೆ. […]

Continue Reading