ಅಪೂರ್ವ ಸೇವಾವಸರವಿದು ಪ್ರಧಾನಮಠಕೆ…

  ಹೊಸನಗರ: ಸಹಸ್ರಮಾನದ ಇತಿಹಾಸ ನಿರ್ಮಾಣದ ಯೋಗ ಒದಗಿ ಬಂದಿದೆ. ಶ್ರೀಸಂಸ್ಥಾನದವರ ದಿವ್ಯಸಂಕಲ್ಪದ ಸುವರ್ಣಯೋಗವೇ ಪ್ರಧಾನಮಠದ ಪುನರ್ನಿರ್ಮಾಣ. ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ, ವಿಶ್ವಾವಸು ಫಾಲ್ಗುನ ಶುದ್ಧ ದಶಮಿಯಂದು, (26-02-2026) ವೃಷಭ ಲಗ್ನದ ಶುಭಮುಹೂರ್ತದಲ್ಲಿ ಪ್ರಧಾನಮಠದಲ್ಲಿ ಶ್ರೀರಾಮ ಸಾನ್ನಿಧ್ಯದ ಶಿಲಾನ್ಯಾಸವು ನಡೆಯಲಿದೆ. ತನ್ಮೂಲಕ ಈ ಪುಣ್ಯ ಕಾರ್ಯಕ್ಕೆ ಶುಭಾರಂಭವು ಸಿಗಲಿದೆ. “ರಾಮ ಪರಿವಾರದ ನೆಲೆಯಾಗಲಿದೆ ಶಿಲೆ; ಕಲೆತು ಬೆರೆಯಲಿದೆ ನಾನಾ ಸೇವೆ; ಅಳಿಲಾಗೋಣ ದಿವ್ಯಸೇವೆಯಲ್ಲಿ ಅಮರವಾಗಲಿ ಸದ್ಭಾವವಿಲ್ಲಿ” ಎಂಬ ಭಾವದಲ್ಲಿ ಶಿಷ್ಯ-ಭಕ್ತರೆಲ್ಲರೂ ಅಜರಾಮರ […]

Continue Reading

” ಶ್ರೀಗುರುಕೃಪೆಯ ಸ್ಪರ್ಶದಿಂದ ಬದುಕಿಗೆ ಹೊಸ ಬೆಳಕು ” – ಚಿತ್ರಾ ಭಟ್ ಬೆಕ್ಕುತ್ತೆ

  ” ಶ್ರೀಮಠದ ಸಂಪರ್ಕಕ್ಕೆ ಬಂದ ಬಳಿಕ ನನ್ನ ಬದುಕಿನ ಪಥವೇ ಬದಲಾಗಿದೆ. ಕಷ್ಟದ ಸಮಯದಲ್ಲಿ ಶ್ರೀಗುರು ಚರಣಗಳಿಗೆ ಶರಣಾದರೆ ಬೆಳಕಿನ ದಾರಿ ತಾನಾಗಿಯೇ ತೆರೆದುಕೊಳ್ಳುತ್ತದೆ ಎಂಬುದನ್ನು ನಾನು ನನ್ನ ಜೀವನದಲ್ಲೇ ಅನುಭವಿಸಿದ್ದೇನೆ ” ಎಂದು ಭಾವಪೂರ್ಣವಾಗಿ ನುಡಿಯುತ್ತಾರೆ ಹೊನ್ನಾವರ ಮಂಡಲ ಮುಗ್ವಾ ವಲಯದ ಬೆಕ್ಕುತ್ತೆ ರಾಯಭಟ್ರ ಮನೆಯ ಗಣಪತಿ ಭಟ್ ಅವರ ಪತ್ನಿ ಚಿತ್ರಾ ಭಟ್. ಹೊನ್ನಾವರದ ನಾರಾಯಣ ಭಟ್ – ಮಾದೇವಿ ಭಟ್ ದಂಪತಿಗಳ ಪುತ್ರಿಯಾದ ಚಿತ್ರಾ ಭಟ್ ಅವರು ಕಳೆದ ೧೫ ವರ್ಷಗಳಿಂದ […]

Continue Reading

ಶಿಲಾನ್ಯಾಸ – ಅದಕ್ಕೇನು ಇಷ್ಟು ಮಹತ್ತ್ವ?

  ನ್ಯಾಸವೆಂಬುದರ ಸಾಮಾನ್ಯ ಅಭಿಪ್ರಾಯ ಇಡುವುದು. ಶಿಲಾನ್ಯಾಸವೆಂದರೆ ಶಿಲೆಯನ್ನಿಡುವುದು ಎಂದರ್ಥ. ಅದಕ್ಕೇನು ಇಷ್ಟು ಮಹತ್ವ? ದೇವಾಲಯ ನಿರ್ಮಾಣದಲ್ಲಿ ಶಿಲಾನ್ಯಾಸ, ನಿಧಿಕಲಶ ಸ್ಥಾಪನೆ,ಷಡಾಧಾರ,ಗರ್ಭನ್ಯಾಸ ಇವುಗಳು ಒಂದೊಂದು ಹಂತದ ಪ್ರಾರಂಭದ ಕಾರ್ಯಕ್ರಮಗಳೆಂದು ಶಾಸ್ತ್ರಗಳಲ್ಲಿ ಉಲ್ಲೇಖಿತವಾಗಿದೆ. ಆಯಾ ಪ್ರಾರಂಭದ ಕಾರ್ಯಗಳಿಗೆ ಒಂದು ಪ್ರಾಮುಖ್ಯ ವೂ ಶಾಸ್ತ್ರಗಳಲ್ಲಿ ಹೇಳಿದ್ದಿದೆ. ಪ್ರಸ್ತುತ ಪ್ರಧಾನ ಮಠ ಶ್ರೀರಾಮಚಂದ್ರಾಪುರ, ಹೊಸನಗರ ಇದರ ಪುನರ್ನಿರ್ಮಾಣ ಕಾರ್ಯದಲ್ಲಿ ಶಿಲಾನ್ಯಾಸವನ್ನು ಮಾಡಲಾಗುತ್ತಿದೆ. ಹೇಗೆ ಸಣ್ಣ ಬೀಜದಲ್ಲಿ ಇಡೀ ವೃಕ್ಷವು ಅಡಕವಾಗಿರುತ್ತದೆಯೋ,ಆ ಸಣ್ಣ ವೃಕ್ಷವು ಮುಂದೆ ಹೆಮ್ಮರವಾಗಿ ಬೆಳೆಯುತ್ತದೆಯೋ ಹಾಗೆಯೇ ಇಲ್ಲಿ ನ್ಯಾಸ […]

Continue Reading

ಹವಿ ಸವಿ – ತೋರಣ ೧೯ ದೇವರ ಸ್ವಂತ ಊರಿಲ್ಲಿ ಒಂದು ಕುಂಭಮೇಳ

  ನಮ್ಮ ಆದಿಗುರು ಶಂಕರಾಚಾರ್ಯರು ಹುಟ್ಟಿದ ಪುಣ್ಯದ ಜಾಗೆ ಕೇರಳವ ದೇವರ ಸ್ವಂತ ಊರು ಹೇಳಿಯೇ ಹೇಳ್ತವು. ಪರಶುರಾಮ ಸೃಷ್ಟಿಯ ಭೂಮಿ ಈ ಕೇರಳ. ಇಂತಹ ಪಾವನ ಊರಿಲ್ಲಿ ಒಂದು ವಿಶೇಷವಾದ ಕಾರ್ಯಕ್ರಮ ನಡೆದ್ದದು ಹೆಚ್ಚಿನವಕ್ಕೂ ಗೊಂತಾಯಿದಿಲ್ಲೆ ಕಾಣ್ತು. ಕೇರಳದ ಮಲಪುರಂ ಜಿಲ್ಲೆಯ ತಿರುನಾವಾಯ ಹೇಳುವ ಪವಿತ್ರ ಕ್ಷೇತ್ರದಲ್ಲಿ ಭಾರತಹೊಳೆಯ ಕರೇಲಿ ಜನವರಿ ೧೮ ರಿಂದ ಫೆಬ್ರವರಿ ೩ ರ ವರೆಗೆ ಈ ಮಾಘ ಮಹೋತ್ಸವ ಅಥವಾ ಕೇರಳ ಕುಂಭಮೇಳ ಗೌಜಿಲಿ ಕಳುದತ್ತು. ತುಂಬಾ ವರ್ಷ ಮೊದಲು […]

Continue Reading

ಶ್ರೀಮಠದ ಸೇವೆ ಆತ್ಮ ಸಂತೋಷಕ್ಕೆ ದಾರಿ – ಮಹಾದೇವಿ ಸಿ. ಭಟ್ ಶಿರಸಿ

  ” ಗೋಮಾತೆ ನಮ್ಮ ಸಂಸ್ಕೃತಿಯ ಜೀವಾಳ. ಧರ್ಮ, ಸಂಸ್ಕಾರ, ಜೀವನ ಮೌಲ್ಯಗಳೆಲ್ಲವೂ ಗೋವಿನೊಂದಿಗೆ ಬೆಸೆದುಕೊಂಡಿದೆ. ಬದುಕಿನಲ್ಲಿ ಗೋಸೇವೆಗೆ ಅವಕಾಶ ದೊರೆತರೆ ಅದುವೇ ನಮ್ಮ ಜೀವನದ ಸಾರ್ಥಕತೆ ” ಎಂದು ಶ್ರದ್ಧಾಭಕ್ತಿಗಳಿಂದ ನುಡಿದವರು ಸಿದ್ಧಾಪುರ ಮಂಡಲದ ಅಂಬಾಗಿರಿ ವಲಯದ ಶಿರಸಿಯ ಚಂದ್ರಶೇಖರ ಭಟ್ ಅವರ ಪತ್ನಿ ಮಹಾದೇವಿ ಭಟ್. ಮೂಲತಃ ಕುಮಟಾ ಸಮೀಪ ದೇವನೀ ಮಠ ಬಾಡದ ಅನಂತ ಭಟ್ – ಯಮುನಾ ದಂಪತಿಗಳ ಪುತ್ರಿಯಾದ ಮಹಾದೇವಿ ಭಟ್ ಬಾಲ್ಯದಿಂದಲೇ ಧಾರ್ಮಿಕ ವಾತಾವರಣದಲ್ಲಿ ಬೆಳೆದವರು. ತಂದೆ ವೈದಿಕರಾಗಿದ್ದ […]

Continue Reading

ಹವಿಸವಿ ತೋರಣ – ೧೮ ಜಡೆ ಹೆಣೆಯುವ ಬಾರೇ……

  ಕೆಲವು ವರ್ಷದ ನಂತರ ಒಂದು ಹಳೇ ಹಾಡು ಕೇಳಿದೆ. ‘ ಜಡೆ ಹೆಣೆಯುವ ಬಾರೇ….. ಪಾರ್ವತಿಗೆ ಜಡೆ ಹೆಣೆಯುವ ಬಾರೇ…..’ ಎಷ್ಟು ಚೆಂದದ ಹಾಡಿದು. ಆ ಹಾಡು ಕೇಳ್ಯಪ್ಪಗ ಮನಸ್ಸು ಒಂದರಿ ಬಾಲ್ಯದ ನೆಂಪುಗಳ ಹೊಡೆಂಗೆ ಓಡಿತ್ತು. ತಲೆಯ ನಡೂಕೆ ಬೈತಲೆ ತೆಗದು ತಲೆಕಸವಿನ ಎರಡೂ ಹೊಡೆಂಗೆ ಹಾಕಿ, ಕಿಮಿಯ ಹತ್ತರೆ ಎರಡು ಜೆಡೆ ಹಾಕಿ ಅದಕ್ಕೆ ಹೂಗು ಹೂಗಿಪ್ಪ ಬಣ್ಣದ ಲಾಡಿ ಸೇರ್ಸಿ ಮಡ್ಸಿ ಕಟ್ಟಿಂಡಿದ್ದ ಚೆಂದದ ಬಾಲ್ಯ ಎನ್ನದು. ಎಲ್ಲಿಗೆ ಹೋವ್ತರೂ ಆ […]

Continue Reading

ಗೋಸೇವೆಯ ಪಥಕ್ಕೆ ಗುರುಕೃಪೆಯೇ ದೀಪ – ಶೈಲಜಾ ಸುಬ್ರಹ್ಮಣ್ಯ ದಂಬೆಮೂಲೆ

  ಬದುಕು ಅರ್ಥಪೂರ್ಣವಾಗುವುದು ಗೋಸೇವೆ, ಗುರುಸೇವೆಯ ಮೂಲಕವೇ ಎನ್ನುವ ನಂಬಿಕೆಯನ್ನು ತಮ್ಮ ನಿತ್ಯದ ಜೀವನದಲ್ಲಿ ಸಾಕಾರಗೊಳಿಸುತ್ತಿರುವವರು ಮುಳ್ಳೇರಿಯ ಮಂಡಲ ಸುಳ್ಯ ವಲಯದ ಶೈಲಜಾ ಸುಬ್ರಹ್ಮಣ್ಯ ಭಟ್. ಗೋಮಾತೆಯ ಸೇವೆ ಹಾಗೂ ಶ್ರೀಮಠದ ಸೇವೆ ಇವೆರಡೂ ಇವರ ಬದುಕಿನ ಅವಿಭಾಜ್ಯ ಅಂಗವಾಗಿದೆ. ಈಂದುಗುಳಿ ಡಾ. ಗೋಪಾಲಕೃಷ್ಣ ಭಟ್ ಹಾಗೂ ಶಶಿಕಲಾ ದಂಪತಿಗಳ ಪುತ್ರಿಯಾದ ಶೈಲಜಾ ಮೂಲತಃ ಮುಳ್ಳೇರಿಯ ಮಂಡಲದ ಉಕ್ಕಿನಡ್ಕ ಸಮೀಪದ ದಂಬೆಮೂಲೆಯವರಾದ, ಪ್ರಸ್ತುತ ಸುಳ್ಯ ವಲಯದ ಕುದುಪಾಜೆಯಲ್ಲಿ ನೆಲೆಸಿರುವ ಸುಬ್ರಹ್ಮಣ್ಯ ಭಟ್ಟರ ಪತ್ನಿ. ತಾಯಿಯ ತವರುಮನೆಯಲ್ಲಿ ಅಜ್ಜ […]

Continue Reading

ಗುರುಕೃಪೆಯ ಅಮೃತ ಸಲಿಲದಲ್ಲಿ ಪುನೀತವಾದ ಕ್ಷಣ

ಗುರು ಕೃಪಾಸಾಗರವೇ ನಮ್ಮ ಬಳಿಗೆ ಹರಿದು ಬಂದಂತಹ ಅನುಭೂತಿ ಮೂಡಿಸಿದ ಈ ಪಾವನ ಕ್ಷಣಗಳನ್ನು ಕೇವಲ ಅಕ್ಷರಗಳಲ್ಲಿ ಹಿಡಿದಿರಿಸುವುದು ಸುಲಭ ಸಾಧ್ಯವಲ್ಲ. ಗುರುಕೃಪಾವರ್ಷದಲ್ಲಿ ಪುನೀತಗೊಂಡವರಿಗೆ ಮಾತ್ರ ಅರಿವಾಗುವ ದಿವ್ಯಾನುಭವವಿದು. ಮಾಣಿ ಮಠದ ವಾರ್ಷಿಕೋತ್ಸವದ ಶುಭ ಸಂದರ್ಭದಲ್ಲಿ ಧರ್ಮ, ಶ್ರದ್ಧೆ, ಭಕ್ತಿ ಮತ್ತು ಕೃಪೆಯ ಅಪೂರ್ವ ಸಂಗಮದ ವಾತಾವರಣ ನೆಲೆಸಿತ್ತು. ಈ ಪವಿತ್ರ ವಾತಾವರಣದಲ್ಲಿ ಮನಸ್ಸು ಶ್ರೀಗುರುಸ್ಮರಣೆಯಲ್ಲಿ ತಲ್ಲೀನವಾಗಿತ್ತು. ಬೆಳಗ್ಗೆ ೧೧.೩೦ ರ ಸುಮಾರಿಗೆ ಪರಮಪೂಜ್ಯ ಶ್ರೀಸಂಸ್ಥಾನದವರು ಆಗಮಿಸಿದ ಕ್ಷಣವೇ ಶಿಷ್ಯರ ಹೃದಯಗಳಲ್ಲಿ ಭಕ್ತಿ, ಶ್ರದ್ಧೆಗಳ ಭಾವ ಮೂಡಿತು. […]

Continue Reading

ಮಂತ್ರಾಕ್ಷತೆ !!!ಏನಿದರ ಪವಾಡ !!

ಅಚ್ಚರಿ ಆದರೂ ಇದು ನಿಜ !!ಮಾಣಿ ಮಠದ ವಾರ್ಷಿಕೋತ್ಸವ . ಬೆಳಗ್ಗೆ ಹತ್ತುಗಂಟೆಗಾಗಲೇ ತುಂಬಿ ತುಳುಕಿದ ಜನ ಭವನ ! ನಿತ್ಯ ಪೂಜೆ , ಅನುಷ್ಠಾನ ಪೂರೈಸಿ ವೇದಿಕೆಯತ್ತ ಗುರುಗಳ ಆಗಮನ . ಮತ್ತೆರಡು ಜನಭವನ ತುಂಬುವಷ್ಟು ಶಿಷ್ಯರು ಹೊರಾಂಗಣದಲ್ಲಿ !! ಗುರುಗಳನ್ನು ಕಣ್ಣಲ್ಲಿ ತುಂಬಿಕೊಳ್ಳಲು ಕಾತರ , ಮಂತ್ರಾಕ್ಷತೆ ಪಡಕೊಳ್ಳುವ ಆತುರ ! ಎಲ್ಲರ ಬಾಯಲ್ಲೂ ಮಂತ್ರಾಕ್ಷತೆ ಎಷ್ಟು ಹೊತ್ತಿಗೆ ಎಂಬ ಪ್ರಶ್ನೆ !! ಮಂತ್ರಾಕ್ಷತೆಗೆ ಸರತಿಯ ಸಾಲಿಗೆ ಬನ್ನಿ ಎಂಬ ಕರೆ ಬಂದಾಗ ಎಲ್ಲರ […]

Continue Reading

ಶ್ರೀಗುರುಗಳ ಅಭಯ ಬದುಕಿನ ಭರವಸೆ – ಅನಸೂಯಾ ಗಣಪತಿ ಅವಧಾನಿ ಹೊನ್ನಾವರ

  ಗೋಮಾತೆಯ ಸೇವೆಯ ಜೊತೆಗೆ ಶ್ರೀಮಠದ ಸೇವೆಯಲ್ಲಿಯೂ ತೊಡಗಿಸಿಕೊಂಡು, ಸಮರ್ಪಣಾ ಭಾವದಿಂದ, ಸದ್ದಿಲ್ಲದ ಸೇವೆಯಲ್ಲಿ ನಿರತರಾಗಿ ಪುನೀತಭಾವ ತಳೆದವರು ಕುಮಟಾ ಮಂಡಲ, ಹೊನ್ನಾವರ ವಲಯದ ಉದಯಗಿರಿಯ ಗಣಪತಿ ಅವಧಾನಿಯವರ ಪತ್ನಿ ಅನಸೂಯಾ ಅವಧಾನಿ. ಕುಮಟಾ ಸಮೀಪ ಅಂತರವಳ್ಳಿಯ ಪರಮೇಶ್ವರ ಹೆಗಡೆ, ಯೆಂಕಿಯಮ್ಮ ಅವರ ಪುತ್ರಿಯಾದ ಅನಸೂಯಾ ಅವಧಾನಿ ಶ್ರೀಮಠದ ಸೇವೆಯನ್ನು ಜೀವನದ ಒಂದು ಭಾಗವಾಗಿ ಪರಿಗಣಿಸಿದವರು.   ಬಾಲ್ಯದಿಂದಲೇ ಹಸುಗಳ ಒಡನಾಟದಲ್ಲಿ ಬೆಳೆದ ಇವರಿಗೆ ಗೋಮಾತೆಯ ಮೇಲೆ ವಿಶೇಷ ಪ್ರೀತಿ. ಮಾತೃತ್ವಮ್ ಯೋಜನೆಯ ಮೂಲಕ ಗೋಮಾತೆಯ ಸೇವೆಯನ್ನು […]

Continue Reading

ಹವಿ ಸವಿ ತೋರಣ – ೧೭ ಸೂರ್ಯ ದೇವರ ಆರಾಧನೆಯ ಪುಣ್ಯಪರ್ವ – ಮಕರ ಸಂಕ್ರಾಂತಿ

ನಮ್ಮ ಭಾರತೀಯ ಸಂಸ್ಕೃತಿಲಿ ಹಬ್ಬಂಗೊ ಹೇಳಿದರೆ ಬರೀ ಸಂಭ್ರಮದ ದಿನoಗೊ ಅಲ್ಲ, ಸಂತೋಷದ ಪ್ರದರ್ಶನ ಅಲ್ಲ, ನಮ್ಮ ನಿತ್ಯ ಜೀವನ, ಪ್ರಕೃತಿ ಮತ್ತೆ ನಮ್ಮ ಧರ್ಮ. ಈ ಮೂರುದೆ ಒಟ್ಟಿಂಗೆ ಸೇರಿಬಪ್ಪ ಧಾರ್ಮಿಕ ಆಚರಣೆ. ನವರಾತ್ರಿ, ದೀಪಾವಳಿ ಎಲ್ಲ ಇಪ್ಪಾಂಗೆ ಸಂಕ್ರಾಂತಿ ಹಬ್ಬವುದೆ ಒಂದು ಹಬ್ಬ. ನಮ್ಮ ಇತ್ಲಾಗಿ ಮೊದಲಿಂಗೆ ಈ ಆಚರಣೆ ಕಮ್ಮಿಯಾದರೂ ಇಂದು ನಮಗೂ ಈ ಹಬ್ಬದ ಮಹತ್ವ ಗೊಂತಿದ್ದು. ಬೆಣಚ್ಚು, ಭೂಮಿ, ಗೋಮಾತೆ, ಕೃಷಿ ಇದಕ್ಕೆಲ್ಲ ಸಂಬಂಧಪಟ್ಟ ಹಬ್ಬ ಇದು. ಸಂಕ್ರಾಂತಿ ಹೇಳಿದರೆ […]

Continue Reading

‘ಗೋಮಾತೆಯ ಸೇವೆಯಲ್ಲಿ ಗುರುಕೃಪೆಯ ಧನ್ಯತೆ’ – ಪ್ರೀತಿಶ್ರೀ ಮಂಜುನಾಥ್ ಉಡುಪಿ

  ” ಶ್ರೀಮಠದ ಸೇವೆ ನಮ್ಮ ಉಸಿರಲ್ಲಿ ಬೆರೆತು ಹೋಗಿದೆ. ಶ್ರೀಮಠದ ಎಲ್ಲಾ ಸೇವೆಗಳಿಗೂ ನಾವು ಕೈಜೋಡಿಸುತ್ತೇವೆ. ಗುರುಸೇವೆ ಮತ್ತು ಗೋಸೇವೆ ನಮ್ಮ ಜೀವನದ ಒಂದು ಭಾಗವಾಗಿದೆ. ಗುರುಕೃಪೆಯೇ ನಮ್ಮ ಬದುಕಿಗೆ ಆಧಾರ. ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಎಲ್ಲವೂ ದೊರಕಿದ್ದು ಗುರು ಅನುಗ್ರಹದಿಂದ ” ಎಂದು ಹೃದಯ ತುಂಬಿ ನುಡಿದವರು ಹೊನ್ನಾವರ ಸಮೀಪದ ಕೊಂಡದಕುಳಿಯ ಪ್ರಸ್ತುತ ಮಂಗಳೂರು ಮಂಡಲ ಉಡುಪಿ ವಲಯ ನಿವಾಸಿಗಳಾಗಿರುವ ಮಂಜುನಾಥ ಹೆಗಡೆಯವರ ಪತ್ನಿ ಪ್ರೀತಿಶ್ರೀ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಸಮೀಪ […]

Continue Reading

ಶ್ರೀಗುರುಸೇವೆಯ ಹಾದಿಯಲ್ಲಿ ನೆಮ್ಮದಿ ಕಂಡ ಬದುಕು – ಪುಷ್ಪಾ ಖಂಡಿಗೆ

” ಗೋಸೇವೆ, ಶ್ರೀಮಠದ ಸೇವೆ ಎಂಬುದು ಪ್ರಸಿದ್ಧಿಗಾಗಿ ಅಲ್ಲ, ಮನದ ನೆಮ್ಮದಿಗಾಗಿ. ಸಾರ್ಥಕ ಭಾವಕ್ಕಾಗಿ. ಶ್ರೀಗುರುಗಳ ಅನುಗ್ರಹದ ಚೈತನ್ಯದ ಬೆಳಕಿನಲ್ಲಿ ಗೋಮಾತೆಯ ಸೇವೆ ಮಾಡಿದೆ. ಇದರಿಂದಾಗಿ ಬದುಕಿನಲ್ಲಿ ನೆಮ್ಮದಿ, ಶಾಂತಿ ನೆಲೆಸಿದೆ. ಸಮಾಜದ ಒಳಿತನ್ನೇ ಬದುಕಿನ ಧ್ಯೇಯವನ್ನಾಗಿರಿಸಿದ ಶ್ರೀಗುರುಗಳ ಮಾರ್ಗದರ್ಶನವೇ ಬದುಕಿಗೆ ಪ್ರೇರಣೆ ” ಎಂದವರು ಮಂಗಳೂರು ಮಂಡಲ ದಕ್ಷಿಣ ವಲಯದ ಕದ್ರಿ ಸಮೀಪದ ಡಾ. ಕೃಷ್ಣ ಭಟ್ ಖಂಡಿಗೆ ಇವರ ಪತ್ನಿ ಪುಷ್ಪಾ. ಪುತ್ತೂರು ಸಮೀಪದ ಕಾನಾವು ನರಸಿಂಹ ಭಟ್, ಶಾರದಮ್ಮ ದಂಪತಿಗಳ ಪುತ್ರಿಯಾದ ಇವರು […]

Continue Reading

ಹವಿ ಸವಿ ತೋರಣ – ೧೬ ನೀರೆಯ ನೀರಿನ ಪ್ರಪಂಚ

  ಉದಿಯಪ್ಪಗ ಬೇಗ ಎದ್ದು ಸೂರ್ಯೋದಯದ ಹೊತ್ತಿಂಗೆ ಒಂದರಿಯಾಣ ಕೆಲಸ ಮುಗಿಶಿಕ್ಕಿ ಬಾವಿಂದ ನೀರೆಳವದು ಎನ್ನ ಅಭ್ಯಾಸ. ಅಷ್ಟೊತ್ತಿಂಗೆ ಸೂಯ೯ ಉದಿಸಿ ಬಂದಿರ್ತಾಯಿಲ್ಲೆ. ಆ ಹೊತ್ತಿಂಗೆ ಮೂಡ ಹೊಡೆಯಾಣ ಆಕಾಶ ನೋಡ್ಲೆ ಅದೆಷ್ಟು ಚೆಂದ..! ಕೆಂಪು, ಅರಶಿನ, ನೀಲಿ, ಕೇಸರಿ ಹೇಳಿ ಬೇರೆ ಬೇರೆ ಬಣ್ಣಂಗೊ ಒಟ್ಟಿಂಗೆ ಆಕಾಶಲ್ಲಿ ಹೊಳವದು ಕಾಂಬಗ ಸೂರ್ಯ ದೇವರ ಎದುರುಗೊಂಬಲೆ ಆಕಾಶದ ಬಾಗಿಲ ಬುಡಲ್ಲಿ ರಂಗೋಲಿ ಹಾಕಿದಾಂಗೆ ಕಾಂಬದು. ಬಾವಿಗೆ ಕೊಡಪ್ಪಾನ ಇಳಿಶಿಕ್ಕಿ ರಜ ರಜ ಹೊತ್ತು ಅತ್ಯಾಗಿತ್ಲಾಗಿ ನೋಡುದು ದಿನಚರಿಯ […]

Continue Reading

” ಗೋಮಾತೆಯ ಸೇವೆಯಲ್ಲಿ ಧನ್ಯತಾಭಾವವಿದೆ ” – ವಿಜಯಲಕ್ಷ್ಮೀ ಕಾಯರ್ಮಜಲು

  ” ಗೋವು ನಮ್ಮ ಜೀವನದ ಅವಿಭಾಜ್ಯ ಅಂಗ. ಗೋವನ್ನು ಆಧರಿಸಿದ ಜೀವನ ಕ್ರಮ ನಮ್ಮ ಸಂಸ್ಕೃತಿಯಲ್ಲಿ ಸೇರಿಕೊಂಡಿದೆ. ಆದರೆ ಇಂದು ಮನೆಗಳಲ್ಲಿ ಗೋವನ್ನು ಸಾಕುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಮಕ್ಕಳಿಗೆ ಗೋವಿನ ಬಗ್ಗೆ ಪ್ರೀತಿ ಇದ್ದರೂ ಅವುಗಳ ಜೊತೆ ಒಡನಾಡುವ ಅವಕಾಶ ದೊರಕುತ್ತಿಲ್ಲ. ಶ್ರೀಗುರುಗಳ ಮಹತ್ವಪೂರ್ಣ ಯೋಜನೆಯಾದ ಮಾತೃತ್ವಮ್ ಮೂಲಕ ಗೋಪ್ರೇಮಿಗಳಿಗೆ ದೇಶೀಯ ಹಸುಗಳ ಸೇವೆ ಮಾಡಲು ಸುಲಭವಾಗಿ ಅವಕಾಶ ಒದಗಿ ಬಂದಿದೆ. ಅದನ್ನು ಸಮರ್ಪಕವಾಗಿ ಬಳಸಿಕೊಂಡು ಗೋಮಾತೆಯ ಸೇವೆಯನ್ನು ಮಾಡಿ ಧನ್ಯತೆಯನ್ನು ಪಡೆಯಬಹುದು ” ಎಂದವರು […]

Continue Reading

ಹವಿ ಸವಿ ತೋರಣ – ೧೫ ಚಳಿಗಾಲದ ಬೆಚ್ಚನೆಯ ನೆಂಪುಗೊ

  ಚಳಿಕಾಲ ಹೇಳಿ ಹೇಳುಗಳೇ ಮನಸ್ಸಿಂಗೆ ಒಂದುರೀತಿಯ ತಂಪು ತಂಪು ಅನುಭವ ಅಪ್ಪದು. ಹಳೆ ನೆಂಪುಗಳ ಪೆಟ್ಟಿಗೆಯ ಮುಚ್ಚಲು ತೆಗದರೆ ಚಳಿಕಾಲದ ಕತೆಗೊ ಸುಮಾರಿದ್ದು. ಚಳಿಕಾಲ ಹೇಳಿದರೆ ಧನು ಮಕರ ತಿಂಗಳಿನ ಸಮಯ. ತೋಟದ ಅಡಕ್ಕೆ ಎಲ್ಲ ಹಣ್ಣಾಗಿ ಬೀಳುವ ಕಾಲ. ಚಳಿಯ ಹನಿ ಪರದೆಯ ನಡೂಕೆ ಬೆಚ್ಚಂಗೆ ಕಂಬಳಿ ಹೊದಕೊಂಡು ಮನುಗುಲೆ ಮನಸ್ಸು ಆಶೆಪಡುವ ಉದೆಕಾಲದ ಹೊತ್ತಿನ ನೆಂಪೇ ಒಂದು ಮಧುರ ಅನುಭೂತಿ. ಹೊಗೆ ತುಂಬಿದ ಹಾಂಗೆ ಕಾಂಬ ಹನಿಯ ಪರದೆಯ ಎಡೇಲಿ ಸೂರ್ಯನ ಚಿನ್ನದ […]

Continue Reading

‘ ಗೋ ಉತ್ಪನ್ನಗಳ ಬಳಕೆಯಿಂದ ಪರಿಸರ ಸಂರಕ್ಷಣೆ ಸಾಧ್ಯ ‘ – ಕಮಲಾ ಮಂಜುನಾಥ ಹೆಗಡೆ ಕಡತೋಕ

  ” ಗೋಮಾತೆಯ ಒಡನಾಟ ನಮ್ಮಲ್ಲಿ ಸದಾ ಧನಾತ್ಮಕ ಅನುಭೂತಿಯನ್ನು ತುಂಬುತ್ತದೆ. ಗೋಮಾತೆಯ ಉತ್ಪನ್ನಗಳೆಲ್ಲವೂ ಮಂಗಳದಾಯಕ. ಪವಿತ್ರ ಹಾಗೂ ಪರಿಶುದ್ಧತೆಯ ಭಾವದಿಂದ ಅದನ್ನು ಬಳಸಬೇಕು. ದೇಶೀ ಗೋ ಉತ್ಪನ್ನಗಳ ನಿತ್ಯ ಉಪಯೋಗದಿಂದ ನಮ್ಮ ಪರಿಸರವೂ ಪರಿಶುದ್ಧಿಯಿಂದ ಕೂಡಿರುತ್ತದೆ. ಮಾತೃತ್ವಮ್ ಯೋಜನೆಯ ಮೂಲಕ ಶ್ರೀಗುರುಗಳು ತೋರಿದ ಗೋಮಾತೆಯ ಸೇವೆಯಲ್ಲಿ ಕೈಜೋಡಿಸುವ ಅವಕಾಶ ದೊರಕಿದ್ದು ಸುಕೃತ. ಮಾತೃತ್ವಮ್ ಯೋಜನೆಯಿಂದ ದೇಶೀಯ ಹಸುಗಳ ಮಹತ್ವವನ್ನು ಜನರು ಅರಿತು ಕೊಳ್ಳುತ್ತಿದ್ದಾರೆ ” ಎಂದವರು ಕುಮಟಾ ಮಂಡಲ, ಕೆಕ್ಕಾರು ವಲಯದ ಕಡತೋಕ ಹೆಗಡೆ ಮನೆಯ […]

Continue Reading

ಹವಿ – ಸವಿ ತೋರಣ ೧೪ ಧನು ತಿಂಗಳ ವಿಶೇಷ

  ನಮ್ಮ ಸಂಸ್ಕೃತಿಲಿ ಪ್ರತಿಯೊಂದು ತಿಂಗಳಿಂಗು ಒಂದೊಂದು ವಿಶೇಷತೆಗೊ ಇದ್ದು. ಅಂದರೂ ಧನು ತಿಂಗಳಿಂಗೆ ಮತ್ತೂ ವಿಶೇಷತೆ ಇದ್ದು. ಚಾಂದ್ರಮಾನ ತಿಂಗಳಿನ ಮಾರ್ಗಶಿರದ ಹಾಂಗೇ ಸೌರಮಾನದ ಧನು ತಿಂಗಳು. ಶ್ರೀಕೃಷ್ಣ ದೇವರು ಅರ್ಜುನಂಗೆ ಗೀತೋಪದೇಶ ಮಾಡಿ ಮಾರ್ಗಶಿರ ಮಾಸ ಅತ್ಯಂತ ಪವಿತ್ರ ಹೇಳಿ ಗೀತೆಲಿ ಹೇಳಿದ್ದ°. ಚಾಂದ್ರಮಾನದ ಮಾರ್ಗಶಿರ ಮಾಸವುದೆ ಸೌರಮಾನದ ಧನು ತಿಂಗಳುದೆ ಸಾಧಾರಣ ಒಟ್ಟೊಟ್ಟಿಂಗೆ ಬತ್ತು. ಹಾಂಗೇ ಧನು ತಿಂಗಳುದೇ ದೇವರ ಆರಾಧನೆಗೆ ವಿಶೇಷ. ಆಧ್ಯಾತ್ಮಿಕ ಸಾಧನೆಗೊಕ್ಕೆ, ಆತ್ಮಶುದ್ದಿಗೆ ಆದ್ಯತೆ ಕೊಡುವ ತಿಂಗಳಿದು. ಧನು […]

Continue Reading

‘ ಜನಮಾನಸದಲ್ಲಿ ಗೋವಿನ ಬಗ್ಗೆ ಸದ್ಭಾವ ಮೂಡಿಸಿದ ಯೋಜನೆ ಮಾತೃತ್ವಮ್ ‘ : ಶೈಲಜಾ ಮಾಂಬಾಡಿ

” ಸಮಾಜದ ಏಳಿಗೆಯನ್ನೇ ಗುರಿಯಾಗಿರಿಸಿಕೊಂಡು ನಮ್ಮ ಶ್ರೀಗುರುಗಳು ಕೈಗೊಂಡಿರುವ ವಿವಿಧ ಯೋಜನೆಗಳಲ್ಲಿ ಭಾಗಿಯಾಗುವುದು ಮನಸ್ಸಿಗೆ ಆನಂದದಾಯಕ ವಿಚಾರ. ಶ್ರೀಗುರು ಕರುಣೆಯ ಅಮೃತದ ಸವಿ ನಮ್ಮನ್ನು ಮತ್ತಷ್ಟು ಸೇವೆ ಮಾಡಲು ಪ್ರೇರೇಪಿಸುತ್ತದೆ ” ಎಂದವರು ಉಪ್ಪಿನಂಗಡಿ ಮಂಡಲ, ಪುತ್ತೂರು ವಲಯ ಕರ್ಮಲ ನಿವಾಸಿಗಳಾಗಿರುವ ವೇಣುಗೋಪಾಲ ಭಟ್ ಮಾಂಬಾಡಿ ಇವರ ಪತ್ನಿ ಶೈಲಜಾ. ತೆಂಕಬೈಲು ಚಕ್ರಕೋಡಿ ತಿರುಮಲೇಶ್ವರ ಶಾಸ್ತ್ರಿ, ಸರಸ್ವತಿ ದಂಪತಿಗಳ ಪುತ್ರಿಯಾಗಿರುವ ಇವರು ಈಗಾಗಲೇ ಐದು ಗೋವುಗಳ ಪೋಷಣೆಯ ಗುರಿ ತಲುಪಿದ ಮಾಸದ ಮಾತೆಯಾಗಿದ್ದಾರೆ. ” ಶ್ರೀ ಮಠದ […]

Continue Reading

ಹವಿ – ಸವಿ ತೋರಣ ೧೩ ಅಟ್ಟುಂಬೊಳದ ಸುದ್ದಿ

ಅಟ್ಟುಂಬೊಳ ಹೇಳಿದರೆ ಅಡಿಗೊಳ ಹೇಳಿ ನಮಗೆಲ್ಲ ಗೊಂತಿದ್ದು. ಅಟ್ಟು ( ಅಡಿಗೆ ಮಾಡಿ ) ಉಂಬ ಒಳ ಹೇಳುವ ಕಾರಣಕ್ಕೆ ಆ ಉಗ್ರಾಣಕ್ಕೆ ಅಟ್ಟುಂಬೊಳ ಹೇಳುವ ಹೆಸರು ಬಂದದು ಹೇಳ್ತವು. ಇಂದು ನಾವು ಬದಲಾವಣೆ ಆವ್ತಾ ಇಪ್ಪ ಅಟ್ಟುಂಬೊಳದ ಸುದ್ದಿ ಮಾತಾಡುವ°. ಊಟ ಬಲ್ಲವನಿಗೆ ರೋಗ ಇಲ್ಲ ‘ ಹೇಳುವ ಗಾದೆಮಾತಿನ ನಾವೆಲ್ಲ ಕೇಳಿದ್ದು. ನಮ್ಮೆಲ್ಲರ ಆರೋಗ್ಯದ ಗುಟ್ಟು ಈ ಅಟ್ಟುಂಬೊಳವೇ ಇಪ್ಪದು. ಮೊದಲಿಂಗೆ ಕೂಡು ಕುಟುಂಬ ಇಪ್ಪಗ ಹಳೇ ಕಾಲದ ಮನೆಗಳಲ್ಲಿ ಸೌದಿ ಒಲೆಗಳಲ್ಲಿ ಮಣ್ಣಳಗೆಲಿ […]

Continue Reading