ಗುರುಭಕ್ತಿ ಮತ್ತು ಗೋಸೇವೆಯ ಸಮನ್ವಯ – ವಿಜಯಲಕ್ಷ್ಮಿ ಸೊಂದಿ
ಶ್ರೀರಾಮಚಂದ್ರಾಪುರ ಮಠದ ಸಕ್ರಿಯ ಕಾರ್ಯಕರ್ತೆಯಾಗಿ, ಗೋಮಾತೆಯ ಸೇವೆ ಮಾಡುತ್ತಾ ಬದುಕನ್ನು ಸಾರ್ಥಕಪಡಿಸಿಕೊಳ್ಳುತ್ತಿರುವವರು ಮಂಗಳೂರು ಮಂಡಲ, ಬಾಯಾರು ವಲಯದ ಶಿವ ಶರ್ಮ ಸೊಂದಿ ಇವರ ಪತ್ನಿ ವಿಜಯಲಕ್ಷ್ಮಿ ಸೊಂದಿ. ಹಿಳ್ಳೆಮನೆ ಎಚ್.ಎಸ್. ಮಹಾಲಿಂಗ ಭಟ್ ಮತ್ತು ಗಂಗಮ್ಮ ದಂಪತಿಗಳ ಪುತ್ರಿಯಾಗಿ ಸಂಸ್ಕಾರಯುತ ವಾತಾವರಣದಲ್ಲಿ ಜನಿಸಿದ ಇವರು, ಬಾಲ್ಯದಿಂದಲೇ ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಮೈಗೂಡಿಸಿಕೊಂಡವರು. ವಿಜಯಲಕ್ಷ್ಮಿ ಅವರಿಗೆ ಗೋವುಗಳೆಂದರೆ ತುಂಬಾ ಪ್ರೀತಿ. ಅವು ದೈವಸ್ವರೂಪಿಗಳು ಎಂದು ಅವರ ನಂಬಿಕೆ. ಚಿಕ್ಕಂದಿನಿಂದಲೇ ಹಸುಗಳೊಂದಿಗೆ ಬೆಳೆದ ಇವರು, ತಮ್ಮ ಬಾಲ್ಯದ ದಿನಗಳಲ್ಲಿ […]
Continue Reading