ಹವಿ ಸವಿ ತೋರಣ – ೧೫ ಚಳಿಗಾಲದ ಬೆಚ್ಚನೆಯ ನೆಂಪುಗೊ

  ಚಳಿಕಾಲ ಹೇಳಿ ಹೇಳುಗಳೇ ಮನಸ್ಸಿಂಗೆ ಒಂದುರೀತಿಯ ತಂಪು ತಂಪು ಅನುಭವ ಅಪ್ಪದು. ಹಳೆ ನೆಂಪುಗಳ ಪೆಟ್ಟಿಗೆಯ ಮುಚ್ಚಲು ತೆಗದರೆ ಚಳಿಕಾಲದ ಕತೆಗೊ ಸುಮಾರಿದ್ದು. ಚಳಿಕಾಲ ಹೇಳಿದರೆ ಧನು ಮಕರ ತಿಂಗಳಿನ ಸಮಯ. ತೋಟದ ಅಡಕ್ಕೆ ಎಲ್ಲ ಹಣ್ಣಾಗಿ ಬೀಳುವ ಕಾಲ. ಚಳಿಯ ಹನಿ ಪರದೆಯ ನಡೂಕೆ ಬೆಚ್ಚಂಗೆ ಕಂಬಳಿ ಹೊದಕೊಂಡು ಮನುಗುಲೆ ಮನಸ್ಸು ಆಶೆಪಡುವ ಉದೆಕಾಲದ ಹೊತ್ತಿನ ನೆಂಪೇ ಒಂದು ಮಧುರ ಅನುಭೂತಿ. ಹೊಗೆ ತುಂಬಿದ ಹಾಂಗೆ ಕಾಂಬ ಹನಿಯ ಪರದೆಯ ಎಡೇಲಿ ಸೂರ್ಯನ ಚಿನ್ನದ […]

Continue Reading

‘ ಗೋ ಉತ್ಪನ್ನಗಳ ಬಳಕೆಯಿಂದ ಪರಿಸರ ಸಂರಕ್ಷಣೆ ಸಾಧ್ಯ ‘ – ಕಮಲಾ ಮಂಜುನಾಥ ಹೆಗಡೆ ಕಡತೋಕ

  ” ಗೋಮಾತೆಯ ಒಡನಾಟ ನಮ್ಮಲ್ಲಿ ಸದಾ ಧನಾತ್ಮಕ ಅನುಭೂತಿಯನ್ನು ತುಂಬುತ್ತದೆ. ಗೋಮಾತೆಯ ಉತ್ಪನ್ನಗಳೆಲ್ಲವೂ ಮಂಗಳದಾಯಕ. ಪವಿತ್ರ ಹಾಗೂ ಪರಿಶುದ್ಧತೆಯ ಭಾವದಿಂದ ಅದನ್ನು ಬಳಸಬೇಕು. ದೇಶೀ ಗೋ ಉತ್ಪನ್ನಗಳ ನಿತ್ಯ ಉಪಯೋಗದಿಂದ ನಮ್ಮ ಪರಿಸರವೂ ಪರಿಶುದ್ಧಿಯಿಂದ ಕೂಡಿರುತ್ತದೆ. ಮಾತೃತ್ವಮ್ ಯೋಜನೆಯ ಮೂಲಕ ಶ್ರೀಗುರುಗಳು ತೋರಿದ ಗೋಮಾತೆಯ ಸೇವೆಯಲ್ಲಿ ಕೈಜೋಡಿಸುವ ಅವಕಾಶ ದೊರಕಿದ್ದು ಸುಕೃತ. ಮಾತೃತ್ವಮ್ ಯೋಜನೆಯಿಂದ ದೇಶೀಯ ಹಸುಗಳ ಮಹತ್ವವನ್ನು ಜನರು ಅರಿತು ಕೊಳ್ಳುತ್ತಿದ್ದಾರೆ ” ಎಂದವರು ಕುಮಟಾ ಮಂಡಲ, ಕೆಕ್ಕಾರು ವಲಯದ ಕಡತೋಕ ಹೆಗಡೆ ಮನೆಯ […]

Continue Reading

ಹವಿ – ಸವಿ ತೋರಣ ೧೪ ಧನು ತಿಂಗಳ ವಿಶೇಷ

  ನಮ್ಮ ಸಂಸ್ಕೃತಿಲಿ ಪ್ರತಿಯೊಂದು ತಿಂಗಳಿಂಗು ಒಂದೊಂದು ವಿಶೇಷತೆಗೊ ಇದ್ದು. ಅಂದರೂ ಧನು ತಿಂಗಳಿಂಗೆ ಮತ್ತೂ ವಿಶೇಷತೆ ಇದ್ದು. ಚಾಂದ್ರಮಾನ ತಿಂಗಳಿನ ಮಾರ್ಗಶಿರದ ಹಾಂಗೇ ಸೌರಮಾನದ ಧನು ತಿಂಗಳು. ಶ್ರೀಕೃಷ್ಣ ದೇವರು ಅರ್ಜುನಂಗೆ ಗೀತೋಪದೇಶ ಮಾಡಿ ಮಾರ್ಗಶಿರ ಮಾಸ ಅತ್ಯಂತ ಪವಿತ್ರ ಹೇಳಿ ಗೀತೆಲಿ ಹೇಳಿದ್ದ°. ಚಾಂದ್ರಮಾನದ ಮಾರ್ಗಶಿರ ಮಾಸವುದೆ ಸೌರಮಾನದ ಧನು ತಿಂಗಳುದೆ ಸಾಧಾರಣ ಒಟ್ಟೊಟ್ಟಿಂಗೆ ಬತ್ತು. ಹಾಂಗೇ ಧನು ತಿಂಗಳುದೇ ದೇವರ ಆರಾಧನೆಗೆ ವಿಶೇಷ. ಆಧ್ಯಾತ್ಮಿಕ ಸಾಧನೆಗೊಕ್ಕೆ, ಆತ್ಮಶುದ್ದಿಗೆ ಆದ್ಯತೆ ಕೊಡುವ ತಿಂಗಳಿದು. ಧನು […]

Continue Reading

‘ ಜನಮಾನಸದಲ್ಲಿ ಗೋವಿನ ಬಗ್ಗೆ ಸದ್ಭಾವ ಮೂಡಿಸಿದ ಯೋಜನೆ ಮಾತೃತ್ವಮ್ ‘ : ಶೈಲಜಾ ಮಾಂಬಾಡಿ

” ಸಮಾಜದ ಏಳಿಗೆಯನ್ನೇ ಗುರಿಯಾಗಿರಿಸಿಕೊಂಡು ನಮ್ಮ ಶ್ರೀಗುರುಗಳು ಕೈಗೊಂಡಿರುವ ವಿವಿಧ ಯೋಜನೆಗಳಲ್ಲಿ ಭಾಗಿಯಾಗುವುದು ಮನಸ್ಸಿಗೆ ಆನಂದದಾಯಕ ವಿಚಾರ. ಶ್ರೀಗುರು ಕರುಣೆಯ ಅಮೃತದ ಸವಿ ನಮ್ಮನ್ನು ಮತ್ತಷ್ಟು ಸೇವೆ ಮಾಡಲು ಪ್ರೇರೇಪಿಸುತ್ತದೆ ” ಎಂದವರು ಉಪ್ಪಿನಂಗಡಿ ಮಂಡಲ, ಪುತ್ತೂರು ವಲಯ ಕರ್ಮಲ ನಿವಾಸಿಗಳಾಗಿರುವ ವೇಣುಗೋಪಾಲ ಭಟ್ ಮಾಂಬಾಡಿ ಇವರ ಪತ್ನಿ ಶೈಲಜಾ. ತೆಂಕಬೈಲು ಚಕ್ರಕೋಡಿ ತಿರುಮಲೇಶ್ವರ ಶಾಸ್ತ್ರಿ, ಸರಸ್ವತಿ ದಂಪತಿಗಳ ಪುತ್ರಿಯಾಗಿರುವ ಇವರು ಈಗಾಗಲೇ ಐದು ಗೋವುಗಳ ಪೋಷಣೆಯ ಗುರಿ ತಲುಪಿದ ಮಾಸದ ಮಾತೆಯಾಗಿದ್ದಾರೆ. ” ಶ್ರೀ ಮಠದ […]

Continue Reading

ಹವಿ – ಸವಿ ತೋರಣ ೧೩ ಅಟ್ಟುಂಬೊಳದ ಸುದ್ದಿ

ಅಟ್ಟುಂಬೊಳ ಹೇಳಿದರೆ ಅಡಿಗೊಳ ಹೇಳಿ ನಮಗೆಲ್ಲ ಗೊಂತಿದ್ದು. ಅಟ್ಟು ( ಅಡಿಗೆ ಮಾಡಿ ) ಉಂಬ ಒಳ ಹೇಳುವ ಕಾರಣಕ್ಕೆ ಆ ಉಗ್ರಾಣಕ್ಕೆ ಅಟ್ಟುಂಬೊಳ ಹೇಳುವ ಹೆಸರು ಬಂದದು ಹೇಳ್ತವು. ಇಂದು ನಾವು ಬದಲಾವಣೆ ಆವ್ತಾ ಇಪ್ಪ ಅಟ್ಟುಂಬೊಳದ ಸುದ್ದಿ ಮಾತಾಡುವ°. ಊಟ ಬಲ್ಲವನಿಗೆ ರೋಗ ಇಲ್ಲ ‘ ಹೇಳುವ ಗಾದೆಮಾತಿನ ನಾವೆಲ್ಲ ಕೇಳಿದ್ದು. ನಮ್ಮೆಲ್ಲರ ಆರೋಗ್ಯದ ಗುಟ್ಟು ಈ ಅಟ್ಟುಂಬೊಳವೇ ಇಪ್ಪದು. ಮೊದಲಿಂಗೆ ಕೂಡು ಕುಟುಂಬ ಇಪ್ಪಗ ಹಳೇ ಕಾಲದ ಮನೆಗಳಲ್ಲಿ ಸೌದಿ ಒಲೆಗಳಲ್ಲಿ ಮಣ್ಣಳಗೆಲಿ […]

Continue Reading

‘ ದುಃಖದ ಕಾರ್ಮೋಡ ಸರಿಸುವ ಶಕ್ತಿ ಗೋಮಾತೆಯ ಸೇವೆಗಿದೆ ‘ : ಯಶೋದಾ ರಾಮಚಂದ್ರ ಭಟ್ ಶಿರಸಿ

  ” ಗೋ ಸೇವೆ, ಶ್ರೀಮಠದ ಸೇವೆ ಮಾಡಲು ಜನ್ಮಾಂತರದ ಪುಣ್ಯ ಬೇಕು. ಶ್ರೀರಾಮದೇವರ ಅನುಗ್ರಹದಿಂದ ನನಗೆ ಅಂತಹ ಸದವಕಾಶ ದೊರಕಿದೆ. ಬದುಕಿನ ನೋವುಗಳಲ್ಲಿ ಸಾಂತ್ವನದ ತಂಪಾಗಿ ಜೊತೆಗೆ ಇದ್ದಿದ್ದು ಶ್ರೀಗುರುಗಳ ಅನುಗ್ರಹ. ಆ ದುಃಖದಿಂದ ಹೊರ ಬರುವಂತೆ ಮಾಡಿ ಜೀವನೋತ್ಸಾಹ ಮೂಡಿಸಿದ್ದು ಗೋಮಾತೆಯ ಸೇವೆ ” ಎಂದವರು ಸಿದ್ದಾಪುರ ಮಂಡಲ ಅಂಬಾಗಿರಿ ವಲಯದ ಶಿರಸಿ ನಿವಾಸಿಗಳಾಗಿರುವ ರಾಮಚಂದ್ರ ಭಟ್ ಅವರ ಪತ್ನಿ ಯಶೋದಾ.   ಹೊನ್ನಾವರ ಕರ್ಕಿಯ ವಿಠಲ ಹೆಗಡೆ, ಲಕ್ಷ್ಮಿ ದಂಪತಿಗಳ ಪುತ್ರಿಯಾದ ಯಶೋದಾ […]

Continue Reading

ಶ್ರೀಗುರುಗಳ ಅನುಗ್ರಹ ಬದುಕಿಗೆ ಶ್ರೀ ರಕ್ಷೆ – ಉಮಾ ವಿಘ್ನೇಶ್ವರ ಕತಗಾಲ್

  ” ಶ್ರೀಗುರು ಕರುಣೆಯ ಅಮೃತದ ಸವಿ ಅನುಭವಿಸಿದವರು ಮಾತ್ರ ಬಲ್ಲರು. ಗುರು ಸ್ಮರಣೆ ಮಾತ್ರದಿಂದಲೇ ಬದುಕಿನ ಅಂಧಕಾರ ದೂರವಾಗುತ್ತದೆ. ಭಾವಪೂರ್ಣ ತನ್ಮಯತೆಯಿಂದ ಪ್ರಾರ್ಥಿಸಿದರೆ ನಮ್ಮ ಪ್ರಾರ್ಥನೆ ಫಲಿಸುತ್ತದೆ ” ಎಂದವರು ಕುಮಟಾ ಮಂಡಲ ಉಪ್ಪಿನಪಟ್ಟಣ ವಲಯದ ಉಮಾ ವಿಘ್ನೇಶ್ವರ ಕತಗಾಲ್ ಹೊನ್ನಾವರ ಸಮೀಪದ ಕಡ್ಲೆ ಗಜಾನನ ರಾಮ ಹೆಗಡೆ ಹಾಗೂ ಭಾಗೀರಥಿ ಗಜಾನನ ಹೆಗಡೆ ದಂಪತಿಗಳ ಪುತ್ರಿಯಾದ ಉಮಾ ಎರಡು ಗೋವುಗಳ ಗುರಿ ತಲುಪಿದ ಮಾಸದಮಾತೆಯಾಗಿದ್ದಾರೆ. ” ಈಶ್ವರಿ ಅಕ್ಕನ ಮಾತುಗಳಿಂದ ಮಾತೃತ್ವಮ್ ಬಗ್ಗೆ ಆಸಕ್ತಿ […]

Continue Reading

ಹವಿ – ಸವಿ ತೋರಣ ೧೨ ಮರುಕಳಿಸಲಿ ಮನೆಮಾತು

ಭಾಷೆ ಹೇಳಿದರೆ ಬರೀ ಮಾತಾಡ್ಲೆ ಮಾಂತ್ರ ಇಪ್ಪದಲ್ಲ. ಅದರೊಟ್ಟಿಂಗೆ ತುಂಬಾ ಚೆಂದದ ಸಂಸ್ಕೃತಿಯೂ ಜೋಡಿಂಡಿದ್ದು. ನಮ್ಮ ಭಾಷೆ, ಸ೦ಸ್ಕೃತಿ ಒಳಿಯೆಕಾದರೆ ಮನೆಭಾಷೆಯ ಮಹತ್ವ ಗೊಂತಾಯೆಕು. ನಾವು ಮಾತಾಡುವ ಭಾಷೆಯೇ ಮನೆಭಾಷೆ ಅಥವಾ ಅಬ್ಬೆ ಭಾಷೆ ( ಮಾತೃ ಭಾಷೆ). ಅಬ್ಬೆಯತ್ರೆ ನಮಗೆ ಎಷ್ಟು ಪ್ರೀತಿಯೋ, ಅಷ್ಟೇ ಪ್ರೀತಿ, ಗೌರವ, ಅಭಿಮಾನ ಅಬ್ಬೆ ಭಾಷೆಯತ್ರೂ ಬೇಕು. ನಮಗೆಲ್ಲ ಅಬ್ಬೆ ಭಾಷೆಯ ಮಹತ್ವ ಅರಡಿಯೆಕು ಹೇಳುವ ಕಾರಣಕ್ಕೇ ನಮ್ಮ ಗುರುಗೊ ಕಳೆದ ಚಾತುರ್ಮಾಸ್ಯವನ್ನೇ ಸ್ವಭಾಷಾ ಚಾತುರ್ಮಾಸ್ಯ ಹೇಳುವ ಹೆಸರು ಮಡುಗಿ […]

Continue Reading

ಕರಗಳಲ್ಲಿ ಕಲೆ ಅರಳಿಸುವ ಶ್ರೀಮಾತೆ – ಅರ್ಚನಾ ಸುಬ್ರಹ್ಮಣ್ಯ ಕಾನುಗೋಡು

  ಕಲೆ, ಕಸೂತಿ, ಹೂವಿನ ಹಾರ, ರಂಗೋಲಿಯೇ ಮೊದಲಾದ ಕಲೆಗಳಲ್ಲಿ ವಿಶೇಷ ಪರಿಣತಿ ಪಡೆದು, ವೈಶಿಷ್ಟ್ಯಮಯ ವಿನ್ಯಾಸಗಳಿಂದಲೇ ಅವುಗಳಲ್ಲಿ ತಮ್ಮ ಛಾಪು ಒತ್ತಿರುವ ಅಪರೂಪದ, ಆಕರ್ಷಕ ವ್ಯಕ್ತಿತ್ವದ ಒಡತಿಯಾಗಿರುವ ಮಾಸದ ಮಾತೆ ಅರ್ಚನಾ ಸುಬ್ರಹ್ಮಣ್ಯ. ರಾಮಚಂದ್ರಾಪುರ ಮಂಡಲದ ಕಾನುಗೋಡು ವಲಯದ ಮಾತೃ ಪ್ರಧಾನೆಯೂ ಆಗಿರುವ ಅರ್ಚನಾ ಶಿರಸಿಯ ಸಮೀಪದ ವಡ್ಡಿನಕೊಪ್ಪ ದತ್ತಾತ್ರೇಯ ರಾಯ್ಸದ್ ಹಾಗೂ ಜಯಾ ರಾಯ್ಸದ್ ದಂಪತಿಗಳ ಪುತ್ರಿ. ” ಮದುವೆಯಾದ ಆರಂಭದಲ್ಲಿ ಹಳ್ಳಿಮನೆ ಸೇರಬೇಕಾಗಿ ಬಂತಲ್ಲಾ, ಹಸುಗಳ ಕೆಲಸ, ಹಟ್ಟಿ ಕೆಲಸ ಮಾಡಬೇಕಲ್ಲಾ ಎಂದೆನಿಸುತ್ತಿತ್ತು. […]

Continue Reading

“ಶ್ರೀಮಠದ ಸೇವೆ – ಗೋ ಸೇವೆ ಬದುಕಿನ ಅವಿಭಾಜ್ಯ ಅಂಗ ” – ಸ್ವಾತಿ ಯು. ಯಸ್. ಭಟ್ ಮಿತ್ತೂರು

” ಗೋವು ನಮ್ಮ ಜೀವನದ ಅವಿಭಾಜ್ಯ ಅಂಗ. ಗೋವಿನ ಜೊತೆ ಬಾಂಧವ್ಯವಿಲ್ಲದೆ ನಮ್ಮ ಬದುಕು ಸಂಪೂರ್ಣವಲ್ಲ. ದೇಶಿ ಗೋವಿನ ಉತ್ಪನ್ನಗಳು ನಮ್ಮ ಆರೋಗ್ಯವನ್ನು ಸಂರಕ್ಷಿಸುತ್ತವೆ. ಅನೇಕ ರೋಗಗಳಿಗೂ ಔಷಧವಾಗಿವೆ. ಇಂತಹ ಗೋವುಗಳನ್ನು ಸಂರಕ್ಷಿಸುವ ಮಹತ್ಕಾರ್ಯದ ದೀಕ್ಷೆ ತೊಟ್ಟಿರುವ ನಮ್ಮ ಗುರುಗಳ ಮಹತ್ವಪೂರ್ಣ ಯೋಜನೆಗೆ ಕೈಜೋಡಿಸುವ ಅವಕಾಶ ದೊರಕಿದ್ದು ಪೂರ್ವ ಜನ್ಮದ ಸುಕೃತ ” ಎನ್ನುತ್ತಾರೆ ಮಂಗಳೂರು ಮಂಡಲ, ಮಂಗಳೂರು ಮಧ್ಯ ವಲಯದ ಮಿತ್ತೂರು ಉದಯಶಂಕರ್ ಭಟ್ ಅವರ ಪತ್ನಿ ಸ್ವಾತಿ ಯು ಎಸ್ ಭಟ್. ಮೀಯಪದವು ನಾರಾಯಣ […]

Continue Reading

ಹವಿ ಸವಿ ತೋರಣ – ೧೧ ‘ಜೋ..ಜೋ.. ಕೃಷ್ಣಾ ಪರಮಾನಂದಾ….’

  ಜೋಗುಳ, ಲಾಲಿ’ ಈ ಪದಂಗೊಕ್ಕೆ ಎಂತಹ ಆಕರ್ಷಣೆ..! ನಾವೆಲ್ಲ ಸಣ್ಣಾದಿಪ್ಪಗ ಜೋಗುಳ ಕೇಳಿಂಡೇ ಒರಗಿಂಡಿದ್ದದಲ್ಲದೋ. ಪುಟ್ಟು ಪಾಪುವಿನ ತೊಟ್ಲಿಲ್ಲಿ ಮನುಶಿ ಜೋ.. ಜೋ..’ ಹೇಳುವ ಚೆಂದದ ಒಂದು ನೋಟ ಮನಸ್ಸಿಂಗೆ ಅದೆಷ್ಟು ಕೊಶಿ ಕೊಡ್ತು. ತೊಟ್ಲು ಅಥವಾ ತೊಟ್ಟಿಲು ಹೇಳುವ ಮಕ್ಕಳ ಮನುಶುವ ಉಯ್ಯಾಲೆಲಿ ಮಕ್ಕಳ ಒಪ್ಪಕೆ ಮನುಶಿ ಅಬ್ಬೆ ‘ಜೋ..ಜೋ..ಕೃಷ್ಣಾ….ಪರಮಾನಂದಾ….ಜೋ…ಜೋ..ದೇವಕಿ ಕಂದ ಮುಕುಂದಾ…ಜೋ…ಜೋ….’ ಹೇಳಿ ಜೋಗುಳ ಹಾಡಿದರೆ ಎಷ್ಟು ಗೆಂಟು ತರ್ಕ ಮಾಡಿ ಕೂಗುವ ಮಕ್ಕೊ ಕೂಡ ಕಣ್ಣು ಮುಚ್ಚಿ ಮನುಗುತ್ತವು. ತೊಟ್ಲಿಂಗು, ಜೋಗುಳಕ್ಕು […]

Continue Reading

” ಶ್ರೀಗುರು ಸೇವೆಯಿಂದ ಅನನ್ಯ ಫಲ ದೊರಕುತ್ತದೆ ” ಪರಮೇಶ್ವರಿ ಭಟ್ ಮಾನಸವನ

    ” ಶ್ರೀಮಠದ ಸೇವೆಯಲ್ಲಿ ಅಪಾರ ಶ್ರದ್ದೆ ಇರುವ ಕುಟುಂಬ ನಮ್ಮದು. ಶ್ರೀಗುರುಗಳು ಮೂರು ಬಾರಿ ನಮ್ಮ ಮನೆಗೆ ಚಿತ್ತೈಸಿದ್ದಾರೆ. ಶ್ರೀಮಠದ ವಿವಿಧ ಯೋಜನೆಗಳಲ್ಲಿ ನಮ್ಮ ಮನೆಯ ಸದಸ್ಯರೆಲ್ಲ ಒಂದಲ್ಲ ಒಂದು ರೀತಿಯಲ್ಲಿ ತೊಡಗಿಸಿಕೊಂಡಿದ್ದೇವೆ. ನಮ್ಮವರು ಗುರಿಕ್ಕಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನನ್ನ ಮಗಳು, ಸೊಸೆ ಇಬ್ಬರೂ ಮಾಸದ ಮಾತೆಯರಾಗಿದ್ದಾರೆ. ಶ್ರೀಗುರು ಸೇವೆಯಿಂದ ಅನನ್ಯ ಫಲ ದೊರಕುತ್ತದೆ ಎಂಬುದು ನಮ್ಮ ಜೀವನದ ಅನುಭವ ” ಎಂದವರು ಉಪ್ಪಿನಂಗಡಿ ಮಂಡಲ, ಬೆಳ್ಳಾರೆ ವಲಯದ ಪೆರ್ಲಂಪಾಡಿ ಸಮೀಪದ ಅಲೆಕ್ಕಾಡಿ ಮಾನಸವನದ […]

Continue Reading

ಹವಿ ಸವಿ ತೋರಣ – ೧೦ ಅಜ್ಜಿ ಹೇಳುವ ಕಥೆಗೊ

  ಅಜ್ಜಿ ಹೇಳುಗ ಮನಸ್ಸಿಂಗೆ ಬಪ್ಪದೇ ಪ್ರೀತಿ ವಾತ್ಸಲ್ಯದ ಪ್ರತಿರೂಪದ ನೆಂಪು. ಅಜ್ಜ° ಅಜ್ಜಿಯ ಪ್ರೀತಿಗೆ ಸಮವಾದ್ದು ಯೇವದು ಇಲ್ಲೆ. ಪುಳ್ಳಿಯಕ್ಕಳ ಸುತ್ತುದೆ ಕೂರ್ಸಿ ಅವು ಕಥೆ ಹೇಳುವ ಚೆಂದವ ವರ್ಣಿಸುಲೆ ಎಡಿಯ. ಮಕ್ಕೋಗೆ ಕಥೆ ಕೇಳ್ಲೆ ಎಷ್ಟು ಕೊದಿ ಇರ್ತೋ ಅಷ್ಟೇ ಪ್ರೀತಿಲಿ ಅಜ್ಜಿ, ಅಜ್ಜ° ಕಥೆ ಹೇಳ್ತವು. ಮದಲಿಂಗೆ ಅಜ್ಜಿಯ ಕಥೆ ಕೇಳದ್ದೆ ದೊಡ್ಡಾದ ಮಕ್ಕೊ ತುಂಬಾ ಕಮ್ಮಿ ಇಕ್ಕಷ್ಟೇ. ಅಜ್ಜಿಯ ಕಥೆ ಕೇಳುವ ಪುಳ್ಳಿಯಕ್ಕಳ ಸಂಭ್ರಮ ಒಂದು ಬೇರೆಯೇ. ಎಲೆ ಬಾಯಿಗೆ ಹಾಕಿಂಡು, […]

Continue Reading

” ಗೋಮಾತೆಯ ಸೇವೆ ಪುಣ್ಯಪ್ರದ ” – ಸರಸ್ವತಿ ಸುಬ್ರಹ್ಮಣ್ಯ ಹೆಗಡೆ ಕುಮಟಾ

  ” ಗೋಮಾತೆ ದೇವತೆಗೆ ಸಮಾನ. ಆಕೆಯ ಹಾಲು ಅಮೃತ ತುಲ್ಯ . ಆಕೆಯ ಸೇವೆ ಪುಣ್ಯಪ್ರದ. ಗೋಸೇವೆಯಿಂದ ಬದುಕಿನಲ್ಲಿ ನೆಮ್ಮದಿ ಶಾಂತಿ ನೆಲೆಸಿದೆ ” ಎಂದವರು ಕುಮಟಾ ಮಂಡಲ, ಕುಮಟಾ ವಲಯದ ಪೋಸ್ಟಲ್ ಕಾಲನಿ ನಿವಾಸಿಗಳಾಗಿರುವ ಸುಬ್ರಹ್ಮಣ್ಯ ಹೆಗಡೆಯವರ ಪತ್ನಿ ಸರಸ್ವತಿ ಹೆಗಡೆ   ಕಡತೋಕ ಸುಬ್ರಾಯ ಭಾಗ್ವತ್, ಮಾದೇವಿ ದಂಪತಿಗಳ ಪುತ್ರಿಯಾದ ಸರಸ್ವತಿ ಸುಬ್ರಹ್ಮಣ್ಯ ಹೆಗಡೆಯವರು ಸುಮಾರು ಎರಡು ದಶಕಗಳಿಂದ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡವರು. ಅಂಚೆ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದ ಪತಿ ಸುಬ್ರಹ್ಮಣ್ಯ ಹೆಗಡೆ ನಿವೃತ್ತಿಯ […]

Continue Reading

ಹವಿ ಸವಿ ತೋರಣ – ೯ – ಬಾಲ್ಯದೊಟ್ಟಿಂಗೆ ಬೆಳೆಯಲಿ ಜೀವನ ಮೌಲ್ಯಂಗೊ

  ಪ್ರತಿಯೊಬ್ಬನ ಬದ್ಕಿಲ್ಲಿಯೂ ಬಾಲ್ಯ ಹೇಳಿದರೆ ವಿಶೇಶ ಮಹತ್ವದ ಕಾಲ. ಅವನ ಮುಂದಾಣ ಜೀವನವ ರೂಪಿಸುವ ಸಮಯ ಹೇಳಿ ಬೇಕಾದರೂ ಹೇಳ್ಲಕ್ಕು. ಅದಕ್ಕೆ ಬೇಕಾಗಿಯೇ ನಮ್ಮ ಹಿರಿಯರು ಸಣ್ಣದಿಪ್ಪಗಲೇ ಮಕ್ಕೊಗೆ ಒಳ್ಳೆಯ ಸಂಸ್ಕಾರ ಕೊಡೆಕು ಹೇಳುದು. ಬಾಲ್ಯ ಹೇಳಿದರೆ ಹನ್ನೆರಡು ವರ್ಷದ ಒಳಾಣ ಸಮಯ. ನಮ್ಮ ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರಂಗಳ ಕೊಡ್ಲೆ ತುಂಬಾ ಒಳ್ಳೆಯ ಕಾಲ ಅದು. ಹಸಿ ಮಣ್ಣಿನ ಹಾಂಗಿದ್ದ ಮನಸ್ಸಿನ ಬೇಕಾದ ಆಕೃತಿಗೆ ತಿದ್ದಲೆ ತುಂಬ ಸುಲಭ. ಮೊದಲಾಗಿದ್ದರೆ ಅಜ್ಜ, ಅಜ್ಜಿ, ದೊಡ್ಡಪ್ಪ, ದೊಡ್ಡಬ್ಬೆ […]

Continue Reading

ವಿಶ್ವಜನನಿ ಗೋ ಮಾತೆಯ ಸೇವೆ ನಿತ್ಯ ನಿರಂತರ – ಗಾಯತ್ರಿ ಭಾಗ್ವತ್

” ಗೋವು ನಮ್ಮ ಜೀವನಾಧಾರ. ಗೋವಿಲ್ಲದಿದ್ದರೆ ನಾವಿಲ್ಲ. ಆದರೆ ಇಂದಿನ ನಗರದ ಜೀವನದ ಒತ್ತಡದ ನಡುವೆ ಗೋ ಸೇವೆ ಮಾಡಬೇಕೆಂಬ ಅಭಿಲಾಷೆ ಇದ್ದರೂ ಅದೆಷ್ಟೋ ಮಂದಿಗೆ ಅದು ಸಾಧ್ಯವಾಗುವುದಿಲ್ಲ. ಶ್ರೀಗುರುಗಳ ಮಾತೃತ್ವಮ್ ಯೋಜನೆಯ ಮೂಲಕ ಆ ಅಭಿಲಾಷೆ ಈಗ ಕೈಗೊಡಿದೆ. ಇದರಿಂದ ಬದುಕಿನಲ್ಲಿ ತುಂಬಾ ಬದಲಾವಣೆಗಳಾಗಿವೆ. ಮನಸ್ಸಿಗೆ ನೆಮ್ಮದಿ ದೊರಕಿದೆ ” ಎನ್ನುವವರು ತೀರ್ಥಹಳ್ಳಿ ತಾಲೂಕಿನ ಗನವಳ್ಳಿ ಮನೆತನದ ಸುಳೋಗೊಡು ಜಿ ಎಲ್ ಶ್ರೀನಿವಾಸಮೂರ್ತಿ, ಮೂಕಾಂಬಿಕಾ ದಂಪತಿಗಳ ಪುತ್ರಿಯಾದ ಗಾಯತ್ರಿ ಭಾಗ್ವತ್. ಮೂಲತಃ ಕುಮಟಾ ತಾಲೂಕು ಚಂದಾವರ […]

Continue Reading

ಹವಿ – ಸವಿ ತೋರಣ ೮ ಬೆಣಚ್ಚಿನ ಹಬ್ಬ ದೀಪಾವಳಿ

  ದೀಪಾವಳಿ ಹೇಳುಗ ಮನಸ್ಸಿಂಗೆ ನೆಂಪಪ್ಪದೇ ಸಾಲು ಸಾಲು ದೀಪಂಗೊ, ಕೆಮಿಗೆ ಬಡಿವ ಪಟಾಕಿಯ ಶಬ್ದಂಗೊ, ದುರುಸು, ನಕ್ಷತ್ರ ಕಡ್ಡಿಗಳ ಸುರುಸುರು ಅಜನೆ (ಶಬ್ದ), ಬಲಿಯೇಂದ್ರನ ಪ್ರತಿಕೃತಿ, ಅದಕ್ಕೆ ಪೂಜೆ, ಗೋಪೂಜೆಯ ಸಂಭ್ರಮ, ಉದ್ದಿನ ಮೂಡೆ ಕೊಟ್ಟಿಗೆ, ಮುಳ್ಳುಸೌತೆ ಕೊಟ್ಟಿಗೆ, ಸೇಮಗೆ, ಕಾಯಾಲು, ರಸಾಯನ ಹೇಳಿ ಎಲ್ಲ ಒಟ್ಟು ಗೌಜಿಯೋ ಗೌಜಿ. ಅದಕ್ಕೇ ಆಗಿಕ್ಕು ಬೇರೆ ಎಷ್ಟು ಹಬ್ಬಂಗೋ ದೀಪಾವಳಿಗೆ ಮಾಂತ್ರ ಹಬ್ಬ ಹೇಳುದು. ಹಾಂಗಾಗಿಯೇ ಬೇರೆ ಹಬ್ಬಗಳಿಂದ ಹೆಚ್ಚು ಮಹತ್ವ ಈ ದೀಪಾವಳಿ ಹಬ್ಬಕ್ಕೆ. ಮಳೆಕಾಲ […]

Continue Reading

ಗೋ ಸೇವೆಯಿಂದ ದೊರಕುವ ನೆಮ್ಮದಿ ಅನುಪಮ – ಶಾರದಾ ಶ್ಯಾಮಪ್ರಸಾದ್

  ಗೋ ಸೇವೆಯಿಂದ, ಗೋ ಉತ್ಪನ್ನಗಳ ಬಳಕೆಯಿಂದ ನಾವು ಆರೋಗ್ಯಪೂರ್ಣ ಜೀವನವನ್ನು ಪಡೆಯಲು ಸಾಧ್ಯವಿದೆ. ಬಾಲ್ಯದಿಂದಲೇ ಗೋವುಗಳ ಒಡನಾಟದಲ್ಲಿ ಬೆಳೆದವಳು ನಾನು. ಈ ಕಾರಣಕ್ಕಾಗಿ ಗೋಮಾತೆ ಎಂದರೆ ವಿಶೇಷ ಮಮತೆ. ಈ ನಗರದ ಜೀವನದಲ್ಲಿ ಗೋವುಗಳನ್ನು ಸಾಕಲು ಎಲ್ಲರಿಗೂ ಸಾಧ್ಯವಿಲ್ಲ. ಅಂತಹ ಸಂದರ್ಭದಲ್ಲಿ ಗೋಶಾಲೆಗಳಿಗೆ ಸಹಕಾರ ನೀಡುವ ಮೂಲಕ ಗೋಸೇವೆಯ ಪುಣ್ಯ ಪಡೆಯಲು ಸಾಧ್ಯವಿದೆ ” ಎನ್ನುವವರು ಕಾಸರಗೋಡು, ಏಳ್ಕಾನ ಮೂಲದ ಪ್ರಸ್ತುತ ಬೆಂಗಳೂರು ಉತ್ತರ ಮಂಡಲ, ಸರ್ವಜ್ಞ ವಲಯ ನಿವಾಸಿಗಳಾಗಿರುವ ಶಾರದಾ ಶ್ಯಾಮಪ್ರಸಾದ್ ಮೂಲತಃ ಕಾಸರಗೋಡು […]

Continue Reading

ಹವಿ – ಸವಿ ತೋರಣ ೭ – ದೀಪ – ಜ್ಞಾನದ ರೂಪ

  ದೀಪಕ್ಕೂ ನಮಗೂ ತುಂಬಾ ಹತ್ರಾಣ ಸಂಬಂಧ. ಭಾರತೀಯ ಸಂಪ್ರದಾಯಲ್ಲಿ ದೀಪಕ್ಕೆ ಸುರುವಾಣ ಸ್ಥಾನ. ನಮ್ಮ ದೇಶದ ಹೆಸರಿನ ಸುರುವಾಣ ಅಕ್ಷರವೇ ಭಾ. ‘ ಭಾ ‘ ಹೇಳಿದರೆ ಬೆಣಚ್ಚು, ದೀಪ ಹೇಳುವ ಅರ್ಥ. ಅದು ಜ್ಞಾನದ ರೂಪ. ದೀಪ ನಮ್ಮ ಬದುಕಿನ ಇಹ – ಪರ ಎರಡನ್ನೂ ಪ್ರತಿನಿಧಿಸುತ್ತು. ಸುಮಂಗಲೆಯರಾದ ಹೆಮ್ಮಕ್ಕೊ ಅಗ್ನಿ ಸ್ವರೂಪಿಣಿಯರು ಹೇಳಿ ಹಿರಿಯರು ಹೇಳುಗು. ಪ್ರತಿ ಮನೆಲೂ ಅಗ್ನಿಯ ಆರಾಧನೆಯಪ್ಪದು ಹೆಮ್ಮಕ್ಕಳ ಮೂಲಕವೇ.   ಹೆಚ್ಚಿನ ಮನೆಗಳಲ್ಲೂ ದಿನ ಸುರುವಪ್ಪದೇ ಆ […]

Continue Reading

ಗೋಮಾತೆಯ ಸೇವೆಯಲ್ಲಿ ಪೂರ್ಣತೆ ಕಂಡ ಶ್ರೀಮಾತೆ – ದೇವಕಿ ಕೂಡೂರು

ಮನುಕುಲದ ಉಳಿವಿನ ಮೂಲವೆನಿಸಿದ ವಿಶ್ವ ಜನನಿ ಗೋಮಾತೆಯ ಸಂರಕ್ಷಣೆಯ ಹೊಣೆಯನ್ನು ಸ್ವೀಕರಿಸಿ, ತಮ್ಮ ಮನೆಯಲ್ಲೂ ಹತ್ತಾರು ದೇಶಿಯ ಹಸುಗಳನ್ನು ಸಾಕುವ ಜೊತೆಗೆ ಶ್ರೀಮಠದ ಮಾತೃತ್ವಮ್ ಯೋಜನೆಯಲ್ಲಿಯೂ ತೊಡಗಿಸಿಕೊಂಡು, ಎರಡು ಹಸುಗಳ ಗುರಿ ತಲುಪಿದ ಮಾಸದ ಮಾತೆ ದೇವಕಿ ಕೂಡೂರು ಉಪ್ಪಿನಂಗಡಿ ಮಂಡಲ, ಕಡಬ ವಲಯದ ಬಲ್ಯ ನಿವಾಸಿಗಳಾಗಿರುವ ‘ ಶ್ರೀಪೂರ್ಣ ‘ ಆಯುರ್ವೇದ ಚಿಕಿತ್ಸಾಲಯದ ಡಾಕ್ಟರ್ ಸುರೇಶ್ ಕುಮಾರ್ ಕೂಡೂರು ಅವರ ಪತ್ನಿಯಾದ ದೇವಕಿ ಅವರು, ಕೂಳೂರು ಗಣಪತಿ ಭಟ್ ಮತ್ತು ವೆಂಕಟೇಶ್ವರಿ ದಂಪತಿಗಳ ಪುತ್ರಿ. ” […]

Continue Reading