ಹವಿ – ಸವಿ ತೋರಣ – ೩ – ದಧಿಯ ಮಥಿಸುವ ಸಮಯ

  ನಮ್ಮ ಹಿರಿಯರು ನಮಗೆ ದಿನಚರಿ ಹೇಂಗಿದ್ದರೆ ಒಳ್ಳೆದು ಹೇಳಿ ಒಂದಿಷ್ಟು ಚೆಂದದ ಪಾಠ ಕಲಿಶಿದ್ದವು. ಅದರ ಈಗಾಣವಕ್ಕೆ ಅನುಸರಿಸಲೆ ಬಂಙವೇ ಆವ್ತು ಹೇಳಿ ಕಂಡರೂ ಅದೆಂತರಾಳಿ ನೋಡಿಂಡು ಬಪ್ಪೊ°. ಒಂದೊಂದು ಮನೆಯ ಕ್ರಮಲ್ಲಿ ರಜ ರಜಾ ವೆತ್ಯಾಸಂಗೊ ಇದ್ದರೂ ಮನೆಯ ಹೆರಿಯರು ಹೇಳುವ ಪಾಠ ಸಾಧಾರಣ ಒಂದೇ ಆಗಿಕ್ಕು. ಹಾಸಿಗೆಂದ ಏಳುಗಳೇ ದೇವರ ಸ್ಮರಣೆ ಮಾಡಿ ಎದ್ದಿಕ್ಕಿ , ಮತ್ತೆ ಮಂಗಳಕರವಾದ ಸುವಸ್ತುಗಳ ನೋಡೆಕು ಹೇಳಿಯೇ ಮದಲಾಣವು ಹೇಳುದು. ಮಂಗಲಕರ ಹೇಳಿದರೆ ಎಂತರ ಗೊಂತಿದ್ದನ್ನೇ ? […]

Continue Reading

ಪ್ರಯೋಗಸಮವೇತ ಅರ್ಥಸ್ಮಾರಕಾಃ ಮಂತ್ರಾಃ

ವೇದವು ಕೈದೋರುವ ಪರಮಪುರುಷನ ಆರಾಧನೆಗಾಗಿ ಸಂಚಾರವನ್ನು ಬಿಟ್ಟು ಯತಿಗಳು ಒಂದೆಡೆ ನೆಲೆನಿಂತು, ಮನಸ್ಸನ್ನು ಭಗವಂತನಲ್ಲಿಯೇ ನೆಲೆನಿಲ್ಲಿಸಿ ಆತ್ಮಕಲ್ಯಾಣವನ್ನು ಸಾಧಿಸುವ, ಶಿಷ್ಯರನ್ನು ಆ ದಿಕ್ಕಿನಲ್ಲಿ ಬರುವಂತೆ ಅನುಗ್ರಹಿಸುವ ಪರಮಪವಿತ್ರವಾದ ಕಾಲ ಚಾತುರ್ಮಾಸ್ಯ ಕಾಲ. ಪರಮಪೂಜ್ಯ ಶ್ರೀಸಂಸ್ಥಾನದವರು ಹೀಗೆ ಚಾತುರ್ಮಾಸ್ಯವನ್ನು ಸಂಕಲ್ಪಿಸಿ, ವೇದವೇದ್ಯನ ಆರಾಧನೆಯಲ್ಲಿ ನಿರತರಾಗಿರುವಾಗ, ಆ ವೇದಪುರುಷನ ಆಶಯವೇನು, ಅವನ ಶಾಸನವೇನು ಎಂದು ಪೂರ್ಣವಾಗಿ ತಿಳಿಸುವ ಅನುಪಮ ಸಾಹಿತ್ಯವಾದ ವೇದಮಂತ್ರಗಳ ಪಾರಾಯಣ, ಅನುಸಂಧಾನ, ಯಾಗಗಳು ನಡೆಯುವುದು ಒಂದು ರೀತಿಯಲ್ಲಿ ಗುರುವಿನ ಹೆಜ್ಜೆಗೆ ಗೆಜ್ಜೆಯಾದಂತೆ. ಹಾಗೆ ಗುರುವಿನ ಜೊತೆ ಸಾಗಲು […]

Continue Reading

ಹವಿ – ಸವಿ ತೋರಣ – ಉದಯಕಾಲದೊಳ್ ಎದ್ದು – ೨

  ‘ ಉದಯ ಕಾಲದೊಳ್ ಎದ್ದು ಗೋಪಿಯು ದಧಿಯ ಮಥಿಸುವೆನೆಂಬ ಸಮಯದಿ….’ ಅಪ್ಪು.. ಅದು ಅಜ್ಜಿದೆ ದೆನಿ. ಉದೆಕಾಲಕ್ಕೆ ಎದ್ದು ಅಜ್ಜಿ ಮೊಸರು ಕಡವ ಗೌಜಿ.. ಮನೆ ಹೆಮ್ಮಕ್ಕೊ ಪ್ರತಿ ದಿನವೂ ಬೇಗ ಏಳುವ ಸಂಪ್ರದಾಯ ನಮ್ಮಲ್ಲಿ ರೂಢಿಗೆ ಬಯಿಂದು. ಹೆಮ್ಮಕ್ಕೊ ಮಾಂತ್ರಲ್ಲ, ಇದು ಎಲ್ಲರಿಂಗೂ ಅನ್ವಯ ಆವ್ತು. ‘ ಬ್ರಾಹ್ಮಿ ಮುಹೂರ್ತದಲ್ಲಿ ಭಾಗ್ಯಲಕ್ಷ್ಮಿ ಬಂದು ನಮ್ಮ ಏಳ್ಸುತ್ತಾಡ. ಅಜ್ಜಿ ಯೇವಗಲೂ ಹೇಳುವ ಮಾತಿದು. ಆ ಹೊತ್ತಿಂಗೆ ನಾವು ಎದ್ದರೆ ನವಗೆ ಬದುಕಿಲ್ಲಿ ಎಲ್ಲಾ ಸೌಭಾಗ್ಯಂಗಳು ಸಿಕ್ಕುತ್ತಡ. […]

Continue Reading

ಶತಕಂಠ ಗಾಯನ

ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮೀಜಿಗಳ ಸ್ವಭಾಷಾ ಚಾತುರ್ಮಾಸ್ಯದ ಸೀಮೋಲ್ಲಂಘನ ಕಾರ್ಯಕ್ರಮದ ಅಂಗವಾಗಿ ವಿಷ್ಣುಗುಪ್ತ ವಿಶ್ವವಿದ್ಯಾಲಯ ಅಶೋಕೆ, ಗೋಕರ್ಣದ ವಿದ್ಯಾರ್ಥಿಗಳು ವಿ. ವಿ. ವಿಯ ಗುರುದೃಷ್ಟಿ ಸಭಾಭವನದಲ್ಲಿ ಶತಕಂಠ ಗಾಯನ ಕಾರ್ಯಕ್ರಮವನ್ನು ವಿಜ್ರಂಭಣೆಯಿಂದ ನಡೆಸಿಕೊಟ್ಟರು. ಶ್ರೀ ಸಂಸ್ಥಾನದವರ ದಿವ್ಯ ಉಪಸ್ಥಿತಿಯಲ್ಲಿ ಅವರೇ ರಚಿಸಿದ, ರಾಜೀವ ಪೀಠದಲಿ ರಾರಾಜಿಸುವ ನಮ್ಮ ರಾಜಾಧಿರಾಜ ರಘುನಾಯಕನ ಕಂಡೆ ಮತ್ತು ಪುರಂದರದಾಸರಿಂದ ರಚಿತವಾದ ರಾಮ ನಾಮವ ಹಿಡಿ ಹಿಡಿ ಕಾಮಕ್ರೋಧಗಳ ಬಿಡಿ ಬಿಡಿ ಎಂಬ ಹಾಡುಗಳನ್ನು 150ಕ್ಕೂ ಅಧಿಕ […]

Continue Reading

ಚಂದ್ರಗ್ರಹಣ

  ಭಾದ್ರಪದ ಮಾಸದ ಶುಕ್ಲ ಪೂರ್ಣಿಮಾ ತಿಥಿಯಂದು ದಿನಾಂಕ 7-9-25 ರವಿವಾರ ರಾತ್ರಿ ಖಗ್ರಾಸ ಚಂದ್ರಗ್ರಹಣ ಭಾರತದಾದ್ಯಂತ ಗೋಚರವಿರುವುದರಿಂದ ಗ್ರಹಣಾಚರಣೆ ಇದೆ.   ಭೋಜನವನ್ನು ಎಲ್ಲರೂ ಮಧ್ಯಾಹ್ನ 12.30 ರ ಒಳಗಾಗಿ ಮಾಡಬೇಕು, ನಂತರ ಭೋಜನ ನಿಶಿದ್ಧ   ವೃದ್ಧರು,ಮಕ್ಕಳು, ಗರ್ಭಿಣಿಯರು, ಅಶಕ್ತರು, ರೋಗಿಗಳು ಸಾಯಂಕಾಲ 4.30 ರ ಒಳಗೆ ಭೋಜನ ಮಾಡಬೇಕು   ಪೌರ್ಣಿಮೆ ಶ್ರಾದ್ಧಾದಿಗಳನ್ನು ಮಾಡುವವರು ಉಪವಾಸವಿದ್ದು ಮರುದಿನಮಾಡುವುದು   ಗ್ರಹಣ ಸ್ಪರ್ಶ ರಾತ್ರಿ ಗಂಟೆ 9.57 ಸಮ್ಮೀಲನ ಕಾಲ ರಾತ್ರಿ ಗಂಟೆ 11.01 […]

Continue Reading

ಹವಿ – ಸವಿ ತೋರಣ – ಮನಗೊಂದಜ್ಜಿ – ೧

ನಮ್ಮ ಗುರುಗೊ ಮನ್ನೆ ನಮ್ಮ ಭಾಷೆಯ ಬಗ್ಗೆ ” ಹವಿಗನ್ನಡ ಮಾಧುರ್ಯವೂ ಅಪ್ಪು, ಮಾಂಗಲ್ಯವೂ ಅಪ್ಪು. ಅದರ ಒಳಿಶಿ ಬೆಳೆಶೆಕು ” ಹೇಳುದು ಕೇಳಿಯಪ್ಪಗ ಕೊಶೀ ಆತು. ನಿಜ, ಅಷ್ಟು ಚಂದದ ನಮ್ಮ ಭಾಷೆಯ ಒಳಿಶಿ ಬೆಳೆಶುದು ನಮ್ಮ ಕರ್ತವ್ಯ. ನಮ್ಮ ಭಾಷೆಯ ನಾವು ಉಪಯೋಗಿಸದ್ರೆ ಬೇರೆ ಆರು ಉಪಯೋಗಿಸುತ್ತವಲ್ಲದಾ ? ಹಾಂಗಾಗಿ ಹವ್ಯಕ ಭಾಷೆಲಿ ‘ ಹೀಂಗೊಂದು ಸ್ವಗತ’ ಬರವ ಬಗ್ಗೆ ಆಲೋಚನೆ ಮಾಡಿದೆ. ಹವ್ಯಕ ಭಾಷೆಲಿ ಬರದರೆ ಮನಸ್ಸಿಗೆ ಆಪ್ತ ಆವ್ತು. ಓದಲೆ ಕೊಂಗಾಟ […]

Continue Reading

” ಮನದ ಪ್ರಾರ್ಥನೆಯ ಮೂಲಕವೇ ಸಂಕಲ್ಪಸಿದ್ಧಿ ” ಪ್ರಗತಿ ಲಕ್ಷ್ಮೀನಾರಾಯಣ, ಸಾಗರ

  ” ಶ್ರದ್ಧಾಭಕ್ತಿಯಿಂದ ಶ್ರೀಗುರು ಸೇವೆ ಮಾಡುತ್ತಾ ಇದ್ದರೆ ನಮ್ಮ ಮ‌ನಃಸಂಕಲ್ಪ ಮಾತ್ರದಿಂದಲೇ ಉದ್ದೇಶಿತ ಕಾರ್ಯ ಕೈಗೂಡಲು ಶ್ರೀಗುರು ಕಾರುಣ್ಯ ದೊರಕುತ್ತದೆ. ಗುರುಸೇವೆಗೆ ನಮ್ಮನ್ನು ನಾವು ಪೂರ್ತಿಯಾಗಿ ಸಮರ್ಪಿಸಿದಾಗ ದೊರಕುವ ಅನುಭೂತಿಯೇ ಆನಂದದಾಯಕ.‌ ಇದನ್ನು ವಿವರಿಸಲು ಅಸಾಧ್ಯ, ಅನುಭವಿಸಿಯೇ ತಿಳಿಯಬೇಕಷ್ಟೆ ” ಎಂದು ಶ್ರೀಗುರುಗಳ ಮಹತ್ವದ ಬಗ್ಗೆ ಶ್ರದ್ಧಾಭಕ್ತಿಗಳಿಂದ ನುಡಿದವರು ಸಾಗರ ಮಂಡಲ, ಪೂರ್ವ ವಲಯದ ವಿಜಯನಗರ ‘ ಸೌರಭ ‘ ಮನೆ ನಿವಾಸಿಗಳಾಗಿರುವ ಲಕ್ಷ್ಮೀನಾರಾಯಣ ಅವರ ಪತ್ನಿ ಪ್ರಗತಿ. ಸಾಗರದ ಹುಲೀಮನೆ ವೆಂಕಟಗಿರಿ ರಾವ್ ಎಚ್.ಕೆ, […]

Continue Reading

” ಬದುಕಿನ ಪೂರ್ಣತೆ ಗುರುಸೇವೆಯಲ್ಲಿ ” : ಅಕ್ಷತಾ ನಿತೇಶ್ ಮೋಂತಿಮಾರು

  ” ಶ್ರೀಗುರುಗಳ ಕೃಪಾದೃಷ್ಟಿ ಎಂಬ ದಿವ್ಯಾನುಗ್ರಹ ದೊರೆತವರ ಬದುಕು ಪಾವನವಾಗುತ್ತದೆ. ಗುರುಸೇವೆಯಂಬ ಪುಣ್ಯ ದೊರಕಲು ಪೂರ್ವ ಜನ್ಮದ ಸುಕೃತ ಬೇಕು. ಬದುಕಿನಲ್ಲಿ ಪರಿಪೂರ್ಣತೆ ಎಂಬುದು ದೊರಕುವುದು ಶ್ರೀಗುರುಸೇವೆಯಿಂದ ಮಾತ್ರ, ಗೋಮಾತೆಯ ಸೇವೆ, ಶ್ರೀಗುರುಗಳ ಸೇವೆಯಲ್ಲಿ ನಿರತರಾದವರಿಗೆ ಬದುಕಿನಲ್ಲಿ ಉನ್ನತಿ, ಯಶಸ್ಸು ಪೂರ್ಣರೂಪದಲ್ಲಿ ಸಿಗುತ್ತದೆ ” ಎಂದವರು ಬೆಂಗಳೂರು ದಕ್ಷಿಣ ಮಂಡಲ ಅನ್ನಪೂರ್ಣೇಶ್ವರಿ ವಲಯದ ನಿತೇಶ್ ಮೋಂತಿಮಾರು ಅವರ ಪತ್ನಿ ಅಕ್ಷತಾ ಪಿ   ಪೆರ್ವೊಡಿ ನಾರಾಯಣ ಭಟ್ ಸುಮಾ ಎನ್ ಭಟ್ ದಂಪತಿಗಳ ಪುತ್ರಿಯಾದ ಇವರು […]

Continue Reading

” ದೇವನೇ ಗುರುವಾಗಿ ಬಂದಂತೆ ನಮ್ಮ ಗುರುದೇವರು ” : ಶಶಿಕಲಾ ಹೆಗಡೆ ಬೆಂಗಳೂರು

    ” ಬದುಕಿನಲ್ಲಿ ಎದುರಾಗುವ ಯಾವುದೇ ಸಮಸ್ಯೆ ಇರಲಿ, ಸಂಕಷ್ಟಗಳಿರಲಿ , ಶ್ರೀಗುರುಗಳನ್ನು ಮನಸಾರೆ ಪ್ರಾರ್ಥಿಸಿದರೆ ಆ ಕಷ್ಟದ ಬೆಟ್ಟಗಳು ಮಂಜಿನಂತೆ ಕರಗಿ ಹೋಗಿ ಬದುಕಿನಲ್ಲಿ ನೆಮ್ಮದಿ, ಶಾಂತಿ ನೆಲೆಸುತ್ತದೆ. ಇದು ನಮ್ಮ ಜೀವನದ ಅನುಭವ. ನಮ್ಮ ಗುರುಗಳೆಂದರೆ ಆ ಭಗವಂತನೇ ಗುರು ಸ್ವರೂಪಿಯಾಗಿ ಧರೆಗಿಳಿದು ಬಂದಂತೆ ಎಂಬುದು ನಮ್ಮ ಅಚಲ ನಂಬಿಕೆ ” ಈ ಶ್ರದ್ಧಾಭಕ್ತಿಯ ನುಡಿಗಳು ಹೊನ್ನಾವರ ಮಂಡಲ ಬಾಳ್ಕೋಡು ಇಡಗುಂಜಿಯ ಹೊಸಮನೆಯ ಪ್ರಸ್ತುತ ಬೆಂಗಳೂರು ನಿವಾಸಿಗಳಾಗಿರುವ ಕೃಷ್ಣ ಮಂಜುನಾಥ ಹೆಗಡೆಯವರ ಪತ್ನಿ […]

Continue Reading

” ಸಾಟಿಯಿಲ್ಲದ ಸಂತಸ ದೊರಕುವುದು ಶ್ರೀಮಠದ ಸೇವೆಯಿಂದ ” : ಚಂದ್ರಕಲಾ ವಡ್ವ

” ನನ್ನ ಬಾಲ್ಯದಲ್ಲಿ ತವರುಮನೆಗೆ ಹಿರಿಯ ಗುರುಗಳ ಆಗಮನವಾಗಿತ್ತು. ಮದುವೆಯಾಗಿ ಸೇರಿದ್ದು ಗುರಿಕ್ಕಾರರ ಮನೆತನಕ್ಕೆ. ಹಾಗಾಗಿ ಶ್ರೀಮಠದ ಸಂಪರ್ಕ ಸಹಜವಾಗಿಯೇ ನನಗೆ ಲಭಿಸಿತು. ನಮ್ಮ ಯಜಮಾನರಿಗೂ ಹಿರಿಯ ಗುರುಗಳಿಗೂ ಬಹಳ ಆತ್ಮೀಯತೆ ಇತ್ತು. ಹಿರಿಯ ಗುರುಗಳ ಚಾತುರ್ಮಾಸ್ಯದ ಸಂದರ್ಭದಲ್ಲಿ ನಾವು ತೀರ್ಥಹಳ್ಳಿಗೂ ಹೋಗಿದ್ದೇವೆ.೩೬ ನೇ ಪೀಠಾಧಿಪತಿಗಳಾದ ಶ್ರೀ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ನಿಜಕ್ಕೂ ಶ್ರೀಶಂಕರರ ಅವತಾರವೆಂದೇ ನನ್ನ ನಂಬಿಕೆ. ಹಾಗಾಗಿಯೇ ಈ ಇಳಿ ವಯಸ್ಸಿನಲ್ಲೂ ಶ್ರೀಮಠದ ಸೇವೆಗೆ ನನ್ನ ಮೊದಲ ಆದ್ಯತೆ ” ಎಂದವರು ಮಂಗಳೂರು ಮಂಡಲ, ಕೇಪು […]

Continue Reading

” ಆತ್ಮಹರ್ಷಕ್ಕೆ ರಹದಾರಿ ಗೋಮಾತೆಯ ಸೇವೆ ” : ಯಶೋದಾ ಜಿ. ಭಟ್ ಎಕ್ಕಡ್ಕ

  ” ಅನೇಕ ವರ್ಷಗಳಿಂದ ನಮ್ಮ ಮನೆಯಲ್ಲಿ ಹಸುಗಳನ್ನು ಸಾಕುತ್ತಿದ್ದೇವೆ. ಈಗಲೂ ಹತ್ತು ಹನ್ನೆರಡು ಹಸುಗಳಿವೆ. ಹಸು ಸಾಕಣೆ ಹೊರೆ ಎಂದು ತೋರಿದರೂ ಗೋಮಾತೆಯನ್ನು ಪ್ರೀತಿಸುವವರಿಗೆ ಅದು ಹೊರೆಯಲ್ಲ. ಆತ್ಮ ಸಂತೋಷದ ಹಾದಿ ಇದು ” ಎಂದವರು ಉಪ್ಪಿನಂಗಡಿ ಮಂಡಲ ಬೆಳ್ಳಾರೆ ವಲಯದ ಎಕ್ಕಡ್ಕ ಗಣಪತಿ ಭಟ್ ಅವರ ಪತ್ನಿ ಯಶೋದಾ ಭಟ್.   ಪುರುಷಬೆಟ್ಟು ಗೋವಿಂದ ಭಟ್ ,ಕಮಲಾವತಿ ದಂಪತಿಗಳ ಪುತ್ರಿಯಾದ ಇವರು ಮಾತೃತ್ವಮ್ ಯೋಜನೆಯ ಮೂಲಕ ಒಂದು ವರ್ಷದ ಗುರಿ ತಲುಪಿದ ಮಾಸದಮಾತೆಯಾಗಿದ್ದಾರೆ.   […]

Continue Reading

” ನಮ್ಮ ಸಂಸ್ಕೃತಿಯ ಮೂಲಾಧಾರ ಗೋಮಾತೆ ” : ಪಾರ್ವತಿ ಎಸ್.ಭಟ್ ದರ್ಭೆ

  ” ನಮ್ಮ ಪುರಾಣಗ್ರಂಥಗಳಲ್ಲಿ ಗೋಮಾತೆಯ ಮಹಿಮೆಯನ್ನು ಸಾರಲಾಗಿದೆ. ಮಾನವನ ಜೀವನದುದ್ದಕ್ಕೂ ಗೋವಿನ ಸ್ಥಾನ ಹಿರಿದು. ನಮ್ಮ ಅನೇಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಗೋವಿನ ಅಗತ್ಯತೆ ಇದೆ. ಸನಾತನ ಸಂಸ್ಕೃತಿಯಲ್ಲಿ ಗೋಗ್ರಾಸ ನೀಡುವ ವಿಚಾರ ಹಾಗೂ ಅದರ ಮಹತ್ವದ ಬಗ್ಗೆ ಬಣ್ಣಿಸಲಾಗಿದೆ. ಗೋವಿನ ಉತ್ಪನ್ನಗಳನ್ನು ಔಷಧಿಯಾಗಿಯೂ ಬಳಸಲಾಗುತ್ತಿದೆ. ಇತರ ಸಾಕುಪ್ರಾಣಿಗಳಿಗಿಂತ ಅದೆಷ್ಟೋ ಪಾಲು ಗೌರವಾನ್ವಿತ ಸ್ಥಾನ ಹೊಂದಿರುವ ಪೂಜನೀಯಳಾದ ಗೋಮಾತೆಯ ಸೇವೆ ಮಾಡುವುದು ಸಹಾ ಪುಣ್ಯಪ್ರದ ಎಂಬ ನಂಬಿಕೆ ನನ್ನದು ” ಎಂದವರು ಉಪ್ಪಿನಂಗಡಿ ಮಂಡಲ ಬೆಟ್ಟಂಪಾಡಿ ವಲಯದ […]

Continue Reading

” ಮಾತೃತ್ವದ ಸವಿ ಉಣಿಸುವ ಗೋಮಾತೆಯ ಸೇವೆಯಲ್ಲಿ ಸಂತೃಪ್ತಿಯಿದೆ ” : ಸೌಮ್ಯ ಹೆಬ್ಬಾರ್ ಕುಮಟಾ”

ಆರ್ಥಿಕ ವ್ಯವಸ್ಥೆಯನ್ನು ಮುಂದಿಟ್ಟುಕೊಂಡು ನಮ್ಮ ಸಮಾಜವು ವಿದೇಶೀ ತಳಿಯ ಗೋವುಗಳನ್ನು ಸಾಕುವ ಸಂದರ್ಭದಲ್ಲಿ ದೇಶೀಯ ಹಸುಗಳ ಮಹತ್ವವನ್ನು ಸಮಾಜಕ್ಕೆ ತಿಳಿಸಿ ಅನೇಕ ಗೋಯಾತ್ರೆಗಳ ಮೂಲಕ ಜನಜಾಗೃತಿ ಮೂಡಿಸಿದ ಹಿರಿಮೆ ನಮ್ಮ ಗುರುಗಳದ್ದು. ಅಮೃತದಂತಹ ಹಾಲು ನೀಡಿ ನಮ್ಮನ್ನು ಪೊರೆಯುವ ಗೋಮಾತೆಯ ಸೇವೆಯಲ್ಲಿ ತೊಡಗಿಸಿಕೊಳ್ಳಲು ಶ್ರೀಸಂಸ್ಥಾನದವರ ಮಹತ್ವಾಕಾಂಕ್ಷೆಯ ಯೋಜನೆ ಮಾತೃತ್ವಮ್ ಮೂಲಕ ಗೋಸೇವೆ ಮಾಡುವ ವಿಶಿಷ್ಟ ಅವಕಾಶ ಮಾತೆಯರಿಗೆ ಒದಗಿಬಂದಿದೆ. ಮನೆಯಲ್ಲಿ ಹಸುಗಳನ್ನು ಸಾಕಲು ಅವಕಾಶವಿಲ್ಲದವರಿಗೂ ಈ ಯೋಜನೆಯ ಮೂಲಕ ಗೋಮಾತೆಯ ಸೇವೆ ಮಾಡುವ ಅವಕಾಶ ದೊರಕಿದೆ. ‌ಮಾತೆಯಂತೆ […]

Continue Reading

” ಶ್ರೀಗುರುಕೃಪಾ ದೃಷ್ಟಿಯಿಂದ ಪುನೀತರಾದವರು ನಾವು ” : ಪೂರ್ಣಿಮಾ ಉಂಡಿಲ”

ಈ ಜಗತ್ತಿನ ಒಳಿತಿಗಾಗಿ ಗೋಮಾತೆಯ ಸಂರಕ್ಷಣೆಯ ಹಾದಿಯನ್ನು ತೋರಿದ ಶ್ರೀಗುರುಗಳ ಕೃಪಾದೃಷ್ಟಿಯಿಂದಲೇ ನಮ್ಮ ಬದುಕು ಪಾವನವಾಗಿದೆ . ಸುಸಂಸ್ಕೃತ ಸಮಾಜದ ನಿರ್ಮಾಣಕ್ಕಾಗಿಯೇ ಶ್ರೀಸಂಸ್ಥಾನದವರು ಅನೇಕ ಅನುಷ್ಠಾನಗಳ, ಯೋಜನೆಗಳ ಅವಕಾಶಗಳನ್ನು ನಮಗೆ ಒದಗಿಸಿದ್ದಾರೆ . ಎಲ್ಲರಿಗೂ ಸುಲಭವಾಗಿ ಸರಳವಾಗಿ ಶ್ರೀಮಠದ ಸೇವೆ ಮಾಡುವ ಭಾಗ್ಯವನ್ನೂ ಕರುಣಿಸಿರುವ ಶ್ರೀಗುರುಗಳ ಕೃಪೆ ಎಂದರೆ ಅದು ಸಾಗರದಂತೆ ಅನಂತ. ಬದುಕಿನ ದುರಿತ ಪರ್ವತಗಳನ್ನು ದೂರ ಮಾಡಲು ಗುರುಕೃಪೆಗೆ ಮಾತ್ರ ಸಾಧ್ಯ ” ಎಂದವರು ಉಪ್ಪಿನಂಗಡಿ ಮಂಡಲ ಪಂಜ ವಲಯದ ಗೋಪಾಲಕೃಷ್ಣ ಭಟ್ ಉಂಡಿಲ […]

Continue Reading

” ಬದುಕಿನ ಶ್ರೇಷ್ಠತೆ ಗೋಸೇವೆಯಲ್ಲಿದೆ ಎಂದು ತಿಳಿದಿದ್ದು ಶ್ರೀಗುರುಗಳ ಮೂಲಕ ” : ಸುಮನಾ ಗಣೇಶ ಹೆಗಡೆ ಕೆಕ್ಕಾರು

  ” ಶ್ರೀಮಠದ ಸಂಪರ್ಕಕ್ಕೆ ಬಂದ ಆರಂಭದಲ್ಲಿ ಮಠಕ್ಕೆ ಹೋದಾಗಲೆಲ್ಲ ತುಳಸೀಹಾರ ಕಟ್ಟುತ್ತಿದ್ದೆ. ನಂತರ ಇತರ ಕಾರ್ಯಗಳಲ್ಲಿ ಕೈಜೋಡಿಸತೊಡಗಿದೆ. ಶ್ರೀಗುರು ಸೇವೆಯಲ್ಲಿ ನಿರತವಾದಾಗ ದೊರಕುವ ಆತ್ಮತೃಪ್ತಿಯ ಆನಂದವನ್ನು ಅರಿತ ಮೇಲೆ ಮನಸ್ಸು ಸದಾ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳಲು ಹಾತೊರೆಯತೊಡಗಿತು. ಶ್ರೀಗುರುಗಳ ಪ್ರವಚನಗಳನ್ನು ಸದಾ ಕೇಳುವುದರಿಂದ ಗೋಮಾತೆಯ ಶ್ರೇಷ್ಠತೆ ಅರ್ಥವಾಗಿದೆ. ಮನೆಯಲ್ಲಿಯೂ ಭಾರತೀಯ ಗೋತಳಿಗಳನ್ನೇ ಸಾಕುತ್ತಿದ್ದೇವೆ ” ಎಂದವರು ಕುಮಟಾ ಮಂಡಲ ಕೆಕ್ಕಾರು ವಲಯದ ಗಣೇಶ ಹೆಗಡೆಯವರ ಪತ್ನಿ ಸುಮನಾ ಹೆಗಡೆ.   ಮುಗುವ ಚೀನ್ ಕೋಡು ಪರಮೇಶ್ವರ […]

Continue Reading

” ಶ್ರೀಗುರುಗಳು ತೋರಿದ ಸ್ವಾವಲಂಬನೆಯ ಹಾದಿಯಲ್ಲಿ ಮುನ್ನಡೆದೆ ” : ಸವಿತಾ ಎಸ್. ಭಟ್ ಅಡ್ವಾಯಿ

  ” ಮಾತೆಯರ ಸ್ವಾವಲಂಬಿ ಬದುಕಿಗಾಗಿ ಶ್ರೀಗುರುಗಳು ತೋರಿದ ಹಾದಿಯಲ್ಲಿ ಮುನ್ನಡೆದವಳು ನಾನು. ಮುಳ್ಳೇರಿಯ ಮಂಡಲದ ಬದಿಯಡ್ಕದಲ್ಲಿರುವ ‘ ಮಹಿಳೋದಯ ‘ ಸಂಸ್ಥೆಯಂತೆ ನಮ್ಮ ಮಂಗಳೂರು ಮಂಡಲದಲ್ಲೂ ಒಂದು ಸಂಸ್ಥೆಯನ್ನು ಸ್ಥಾಪಿಸಬೇಕೆಂಬ ಅಭಿಲಾಷೆಯಿದ್ದರೂ ಅನೇಕ ಕಾರಣಗಳಿಂದಾಗಿ ಆ ಯೋಜನೆ ಫಲಿಸಲಿಲ್ಲ. ಆದರೆ ನಾನು ಮಾತ್ರ ಉಪ್ಪಿನಕಾಯಿ, ಸೆಂಡಿಗೆ, ಹಪ್ಪಳಗಳನ್ನು ತಯಾರಿಸಿ ಮಾರಾಟ ಮಾಡಿ ಶ್ರೀಗಳು ತೋರಿದ ಆದರ್ಶದ ಪಥದಲ್ಲಿ ಮುನ್ನಡೆಯುತ್ತಿದ್ದೇನೆ. ಇದು ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ ” ಎಂದವರು ಮಂಗಳೂರು ಮಂಡಲ ಕನ್ಯಾನ ವಲಯದ ಅಡ್ವಾಯಿ ಸುಬ್ಬಣ್ಣ […]

Continue Reading

ಪ್ರತಿಯೊಂದು ಗೋವಿನಲ್ಲೂ ಪುಣ್ಯಕೋಟಿಯ ಸಾನ್ನಿಧ್ಯವಿದೆ : ಸುಭದ್ರಾ ವೆಂಕಟಸುಬ್ಬ ಹೆಗಡೆ, ಬಿಜ್ಜಾಳ

  ” ತನ್ನ ಜೀವನದುದ್ದಕ್ಕೂ ಪರೋಪಕಾರಿಯಾಗಿ ನಮ್ಮ ಬದುಕಿಗೆ ಆಧಾರವಾಗಿರುವ ಪ್ರತಿಯೊಂದು ಗೋವೂ ಪುಣ್ಯಕೋಟಿಯ ಪ್ರತಿನಿಧಿ ಎಂದೇ ನನ್ನ ಭಾವನೆ. ಅಳಿವಿನಂಚಿನಲ್ಲಿರುವ ದೇಶೀಯ ತಳಿಯ ಹಸುಗಳ ಉಳಿವಿನ ಅವಶ್ಯಕತೆಯನ್ನು ಸಮಾಜಕ್ಕೆ ಮನದಟ್ಟು ಮಾಡಿಸಲು ನಮ್ಮ ಗುರುಗಳು ಕೈಗೊಂಡ ಯೋಜನೆಗಳಲ್ಲಿ ಭಾಗಿಯಾಗುವ ಅವಕಾಶ ದೊರಕಿದ್ದು ನನ್ನ ಸುಕೃತ . ಗೋಮಾತೆಯ ಒಡನಾಟದಲ್ಲಿರುವವರಿಗೆ ಮಾತ್ರ ಗೋಸೇವೆಯಿಂದ ದೊರಕುವ ನೆಮ್ಮದಿಯನ್ನು ಸಂಪೂರ್ಣವಾಗಿ ಅನುಭವಿಸಲು ಸಾಧ್ಯ” ಎಂದವರು ಸಿದ್ಧಾಪುರ ಮಂಡಲ ಇಟಗಿ ವಲಯದ ಬಿಜ್ಜಾಳ ವೆಂಕಟಸುಬ್ಬ ಹೆಗಡೆಯವರ ಪತ್ನಿ ಸುಭದ್ರಾ.   ಶಿರಸಿ […]

Continue Reading

” ಗೋಮಾತೆ ನಮ್ಮ ಬದುಕಿಗೆ ಹತ್ತಿರವಾಗಬೇಕು ” : ವೀಣಾ ನಾರಾಯಣ ಭಟ್ ಹೊಸಮನೆ

    ” ನಮ್ಮ ದೇಶದ ಸಂಸ್ಕೃತಿಯ ಭಾಗ ಗೋಮಾತೆ. ಗೋ ಉತ್ಪನ್ನಗಳ ನಿತ್ಯ ಬಳಕೆಯಿಂದ ಮೈ ಮನಸ್ಸು ಉಲ್ಲಸಿತವಾಗುತ್ತದೆ. ಆಧುನಿಕ ಜೀವನದ ಜಂಜಾಟದ ನಡುವೆ ಗೋಸಾಕಣಿಗೆ ಎಲ್ಲರಿಂದಲೂ ಸಾಧ್ಯವಿಲ್ಲ. ಆದರೆ ಅಮೃತ ನೀಡುವ ಗೋಮಾತೆಯನ್ನು ಸಂರಕ್ಷಿಸುವ ಯೋಜನೆಯಾದ ಮಾತೃತ್ವಮ್ ನಿಂದಾಗಿ ಅನೇಕ ಮಂದಿಗೆ ಗೋಸೇವೆಯ ಸೌಭಾಗ್ಯ ಒದಗಿಬಂದಿದೆ. ಗೋಮಾತೆ ಮತ್ತೆ ನಮ್ಮೆಲ್ಲರ ಬದುಕಿಗೆ ಹತ್ತಿರವಾಗಿದ್ದಾಳೆ. ಶ್ರೀಗುರುಗಳ ಈ ಒಂದು ಯೋಜನೆ ಗೋಜಾಗೃತಿಯಲ್ಲಿ ಹೊಸಪಥವನ್ನು ಸೃಷ್ಟಿಸುತ್ತಿದೆ ” ಎಂದವರು ಮಂಗಳೂರು ಮಂಡಲ ಬಾಯಾರು ವಲಯದ ಮೂಲತಃ ಪೈವಳಿಕೆ […]

Continue Reading

” ಗೋ ಸಂರಕ್ಷಣೆ ಮನುಕುಲದ ಅಸ್ತಿತ್ವಕ್ಕೆ ಅನಿವಾರ್ಯ ” : ಡಾ. ಚಿತ್ರಾ ಎ ಉಡುಪಿ

  ” ಗೋವು ನಮ್ಮ ಬದುಕಿಗೆ ಅನಿವಾರ್ಯ. ಗೋ ಉತ್ಪನ್ನಗಳ ನಿತ್ಯ ಬಳಕೆಯಿಂದ ಆರೋಗ್ಯ ವೃದ್ಧಿಸುತ್ತದೆ. ಗೋ ಶಕ್ತಿಗೆ ಅವಲಂಬಿತರಾಗಿ ಗೋ ಆಧಾರಿತ ಆರ್ಥಿಕತೆಯು ನವೀಕರಣದಿಂದ ಸುಭದ್ರ ಸಮಾಜ ನಿರ್ಮಾಣ ಸಾಧ್ಯವಿದೆ ” ಎಂಬ ಮಾತುಗಳು ಮಂಗಳೂರು ಮಂಡಲ ಉಡುಪಿ ವಲಯದ ಹಿಳ್ಳೆಮನೆ ಮೂಲದ ಬೊಟ್ರಂಪಾಡಿ ನಿವಾಸಿಗಳಾಗಿರುವ ಡಾ. ವೆಂಕಟಾಚಲಂ ಅವರ ಪತ್ನಿ ಡಾ. ಚಿತ್ರಾ ಅರಮನಡ್ಕ ಅವರದ್ದು.   ಮಣಿಪಾಲ ಡೆಂಟಲ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿರುವ ಚಿತ್ರಾ ಅರಮನಡ್ಕದ ಮಹಾಲಿಂಗ ಭಟ್, ಚಂದ್ರಕಲಾ ದಂಪತಿಗಳ ಪುತ್ರಿ. […]

Continue Reading

” ಅಲ್ಪದಿಂದ ಅನಂತವಾದುದನ್ನು ಪಡೆದಿದ್ದು ಶ್ರೀಗುರು ಸೇವೆಯಿಂದ ” : ಮಹಾಲಕ್ಷ್ಮಿ ಎಂ. ಭಟ್ ಮಿತ್ತೂರು

  ” ಶ್ರೀಗುರುಗಳಿಗೆ, ದೇವರಿಗೆ ನಾವು ಏನು ನೀಡುತ್ತೇವೆಯೋ ಅದರ ಜೊತೆ ಭಕ್ತಿಭಾವವನ್ನು ಸೇರಿಸಿ ಸಮರ್ಪಿಸಿದರೆ ಅಲ್ಪವೂ ಮಹತ್ತಾಗುತ್ತದೆ. ಅಲ್ಪದಿಂದ ಅನಂತವಾದುದನ್ನು ಪಡೆಯಲು ಅಂತರಂಗದಲ್ಲಿ ಭಕ್ತಿ ಭಾವ ತುಂಬಿರಬೇಕು ‘ ಎಂಬುದು ಶ್ರೀಗುರುಗಳ ವಚನ. ಇದೇ ಮಾತುಗಳು ನನ್ನ ಗೋಸೇವೆಗೆ, ಶ್ರೀಮಠದ ಸೇವೆಗೆ ಪ್ರೇರಣೆ, ಶ್ರೀಗುರುಗಳ ಆಶೀರ್ವಚನದ ನುಡಿಗಳನ್ನು ಸಾಧ್ಯವಿದ್ದಷ್ಟು ಚೆನ್ನಾಗಿ ಪರಿಪಾಲಿಸುವುದರಿಂದಲೇ ನಮ್ಮ ಬದುಕಿನಲ್ಲಿ ನೆಮ್ಮದಿ, ಶಾಂತಿ ನೆಲೆಸಿದೆ. ಬದುಕಿನ ಯಾವುದೇ ಕಷ್ಟಸುಖಗಳಲ್ಲೂ ನಾವು ಆಶ್ರಯಿಸುವುದು ಶ್ರೀಗುರು ಚರಣಗಳನ್ನು. ಇದರಿಂದ ನಮ್ಮ ಜೀವನದಲ್ಲಿ ಒಳಿತಾಗಿದೆ ” […]

Continue Reading