ಬಲಿಪಾಡ್ಯಮಿ ಪ್ರಯುಕ್ತ ಗೋ ಪೂಜಾ ಕಾರ್ಯಕ್ರಮ

ಗೋಶಾಲಾ

ಅಮೃತಧಾರಾ ಗೋಶಾಲೆ ಹೊಸಾಡು ಕುಮಟಾದಲ್ಲಿ ಬಲಿಪಾಡ್ಯಮಿ ಪ್ರಯುಕ್ತ ಗೋ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ನೂರಾರು ಗೋಬಂಧುಗಳು ಕುಟುಂಬ ಸಮೇತಗೋ ಶಾಲೆಗೆ ಆಗಮಿಸಿ ಗೋವುಗಳಿಗೆ ಗೋಗ್ರಾಸ ನೀಡಿ ಧನ್ಯರಾದರು. ಜೊತೆಗೆ ಗೋಪೂಜೆ ಕಾಮಧೇನು ಪೂಜೆಯನ್ನು ನೆರವೇರಿಸಲಾಯಿತು.

ಲಾಸಾ ಫೌಂಡೇಶನ್ ಮುಂಬಯಿ ನಿರ್ದೇಶಕರಾದ ಶಿವಾನಂದ ಹೆಗಡೆಯವರು ಕುಟುಂಬ ಸಮೇತ ಉಪಸ್ಥಿತರಿದ್ದು ಗೋ ಕುಟುಂಬದೊಡನೆ ಒಡನಾಡಿದರು. ಕಾಮಧೇನು ಪೂಜೆಯಲ್ಲಿ ಭಾಗವಹಿಸಿ ಪುಣ್ಯ ಭಾಜನರಾದರು. ಗೋಶಾಲೆಯ ಸ್ವಚ್ಛತೆ, ಆಹಾರ ಪೂರೈಕೆ. ವಿತರಿಸುವ ವಿಧಾನ ಇತ್ಯಾದಿಗಳನ್ನು ಗಮನಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಲಾಸ ಫೌಂಡೇಶನ್ ಮುಂಬೈ ಈ ಸಂಸ್ಥೆ ಈಗಾಗಲೇ ಹೊಸಾಡು ಗೋ ಬ್ಯಾಂಕಿನ ೫೦ ಗೋವುಗಳನ್ನು ದತ್ತು ತೆಗೆದುಕೊಂಡು ಸಂಪೂರ್ಣ ನಿರ್ವಹಣಾ ಹೊಣೆಹೊತ್ತ ದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಗೋ ಬ್ಯಾಂಕ್ ಅಧ್ಯಕ್ಷರಾದ ಮುರಳಿಧರ್ ಪ್ರಭು, ಕಾರ್ಯದರ್ಶಿ ಸುಬ್ರಾಯ ಭಟ್, ಗೋಶಾಲಾ ಕಮಿಟಿಯ ಸದಾನಂದ ಮಡಿವಾಳ, ರಾಘವೇಂದ್ರ ಹೆಗಡೆ, ಸದಸ್ಯರುಗಳು, ಗೋ ಬಂಧುಗಳು ಹಾಜರಿದ್ದರು.

Author Details


Srimukha

Leave a Reply

Your email address will not be published. Required fields are marked *