ಮಾಲೂರು ಆಂಜನೇಯನ ವಿಗ್ರಹ ಬಾಲಾಲಯ

ಗೋಶಾಲಾ

ಗಂಗಾಪುರ ಶ್ರೀ ರಾಘವೇಂದ್ರ ಗೋಆಶ್ರಮದಲ್ಲಿರುವ ಶ್ರೀ ಸಿದ್ಧಾಂಜನೇಯ ಸ್ವಾಮಿ ನೂತನ ಮಂದಿರ ನಿರ್ಮಾಣದ ಅಂಗವಾಗಿ ಗೋಕರ್ಣ ಪರಮೇಶ್ವರ ಭಟ್ಟ ಮಾರ್ಕಾಂಡೆ ಅವರ ನೇತೃತ್ವದಲ್ಲಿ ಕಲಾ ಸಂಕೋಚ ಹವನ, ಕಲಶಾಭಿಷೇಕ ನಡೆಸಿ, ಆಂಜನೇಯನ ವಿಗ್ರಹವನ್ನು ಬಾಲಾಲಯದಲ್ಲಿ ಸ್ಥಾಪಿಸಲಾಯಿತು.

ಶ್ರೀಸಂಸ್ಥಾನ ಗೋಕರ್ಣ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿಯವರ ದಿವ್ಯಅನುಗ್ರಹ ಮಾರ್ಗದರ್ಶನದಲ್ಲಿ ದೇವಸ್ಥಾನದ ಪುನರ್ ನಿರ್ಮಾಣ ಕಾರ್ಯವನ್ನು ಆರಂಭಿಸಲಾಗಿದೆ. ಗೋವಿಂದ ಭಟ್ ವಳಕ್ಕುಂಜ ದಂಪತಿಗಳು ವಿಧಿವಿಧಾನಗಳನ್ನು ನಡೆಸಿದರು. ಶೀಘ್ರವಾಗಿ ಮಂದಿರ ನಿರ್ಮಾಣ ಹಾಗೂ ಗೋವುಗಳ ಕ್ಷೇಮಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಗೋಪ್ರೇಮಿಗಳಾದ ರಾಮಕೃಷ್ಣ ರಾವ್, ಮೋಹನ್ ಕೃಷ್ಣ, ವಂಶಿ ಕೃಷ್ಣ, ಶ್ರೀರಾಮಚಂದ್ರಾಪುರಮಠದ ಗೋಶಾಲಾ ಶ್ರೀಸಂಯೋಜಕ ತಿರುಮಲೇಶ್ವರ ಪ್ರಸನ್ನ, ಸನ್ನಿಧಿ ಸಂಸ್ಥೆಗಳ ಶ್ರೀಸಂಯೋಜಕ ರಾಮಚಂದ್ರ ಭಟ್ ಕೆಕ್ಕಾರು, ಗೋಆಶ್ರಮದ ಕಾರ್ಯದರ್ಶಿ ಶ್ರೀಕಾಂತ ಹೆಗಡೆ ಯಲಹಂಕ, ಕೋಶಾಧ್ಯಕ್ಷ ರಾಮಕೃಷ್ಣ ಹೆಗಡೆ ಕಲ್ಲಬ್ಬೆ, ಗೋಶಾಲೆ ಪ್ರಮುಖರಾದ ಜಿ. ಬಿ. ಚಂದ್ರಶೇಖರ, ಕೃಷ್ಣ ಭಟ್, ಲಕ್ಷ್ಮೀಶ, ಅನಂತ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.

Author Details


Srimukha

Leave a Reply

Your email address will not be published. Required fields are marked *