‘ ಗೋ ಉತ್ಪನ್ನಗಳ ಬಳಕೆಯಿಂದ ಪರಿಸರ ಸಂರಕ್ಷಣೆ ಸಾಧ್ಯ ‘ – ಕಮಲಾ ಮಂಜುನಾಥ ಹೆಗಡೆ ಕಡತೋಕ

  ” ಗೋಮಾತೆಯ ಒಡನಾಟ ನಮ್ಮಲ್ಲಿ ಸದಾ ಧನಾತ್ಮಕ ಅನುಭೂತಿಯನ್ನು ತುಂಬುತ್ತದೆ. ಗೋಮಾತೆಯ ಉತ್ಪನ್ನಗಳೆಲ್ಲವೂ ಮಂಗಳದಾಯಕ. ಪವಿತ್ರ ಹಾಗೂ ಪರಿಶುದ್ಧತೆಯ ಭಾವದಿಂದ ಅದನ್ನು ಬಳಸಬೇಕು. ದೇಶೀ ಗೋ ಉತ್ಪನ್ನಗಳ ನಿತ್ಯ ಉಪಯೋಗದಿಂದ ನಮ್ಮ ಪರಿಸರವೂ ಪರಿಶುದ್ಧಿಯಿಂದ ಕೂಡಿರುತ್ತದೆ. ಮಾತೃತ್ವಮ್ ಯೋಜನೆಯ ಮೂಲಕ ಶ್ರೀಗುರುಗಳು ತೋರಿದ ಗೋಮಾತೆಯ ಸೇವೆಯಲ್ಲಿ ಕೈಜೋಡಿಸುವ ಅವಕಾಶ ದೊರಕಿದ್ದು ಸುಕೃತ. ಮಾತೃತ್ವಮ್ ಯೋಜನೆಯಿಂದ ದೇಶೀಯ ಹಸುಗಳ ಮಹತ್ವವನ್ನು ಜನರು ಅರಿತು ಕೊಳ್ಳುತ್ತಿದ್ದಾರೆ ” ಎಂದವರು ಕುಮಟಾ ಮಂಡಲ, ಕೆಕ್ಕಾರು ವಲಯದ ಕಡತೋಕ ಹೆಗಡೆ ಮನೆಯ […]

Continue Reading

‘ ಜನಮಾನಸದಲ್ಲಿ ಗೋವಿನ ಬಗ್ಗೆ ಸದ್ಭಾವ ಮೂಡಿಸಿದ ಯೋಜನೆ ಮಾತೃತ್ವಮ್ ‘ : ಶೈಲಜಾ ಮಾಂಬಾಡಿ

” ಸಮಾಜದ ಏಳಿಗೆಯನ್ನೇ ಗುರಿಯಾಗಿರಿಸಿಕೊಂಡು ನಮ್ಮ ಶ್ರೀಗುರುಗಳು ಕೈಗೊಂಡಿರುವ ವಿವಿಧ ಯೋಜನೆಗಳಲ್ಲಿ ಭಾಗಿಯಾಗುವುದು ಮನಸ್ಸಿಗೆ ಆನಂದದಾಯಕ ವಿಚಾರ. ಶ್ರೀಗುರು ಕರುಣೆಯ ಅಮೃತದ ಸವಿ ನಮ್ಮನ್ನು ಮತ್ತಷ್ಟು ಸೇವೆ ಮಾಡಲು ಪ್ರೇರೇಪಿಸುತ್ತದೆ ” ಎಂದವರು ಉಪ್ಪಿನಂಗಡಿ ಮಂಡಲ, ಪುತ್ತೂರು ವಲಯ ಕರ್ಮಲ ನಿವಾಸಿಗಳಾಗಿರುವ ವೇಣುಗೋಪಾಲ ಭಟ್ ಮಾಂಬಾಡಿ ಇವರ ಪತ್ನಿ ಶೈಲಜಾ. ತೆಂಕಬೈಲು ಚಕ್ರಕೋಡಿ ತಿರುಮಲೇಶ್ವರ ಶಾಸ್ತ್ರಿ, ಸರಸ್ವತಿ ದಂಪತಿಗಳ ಪುತ್ರಿಯಾಗಿರುವ ಇವರು ಈಗಾಗಲೇ ಐದು ಗೋವುಗಳ ಪೋಷಣೆಯ ಗುರಿ ತಲುಪಿದ ಮಾಸದ ಮಾತೆಯಾಗಿದ್ದಾರೆ. ” ಶ್ರೀ ಮಠದ […]

Continue Reading

‘ ದುಃಖದ ಕಾರ್ಮೋಡ ಸರಿಸುವ ಶಕ್ತಿ ಗೋಮಾತೆಯ ಸೇವೆಗಿದೆ ‘ : ಯಶೋದಾ ರಾಮಚಂದ್ರ ಭಟ್ ಶಿರಸಿ

  ” ಗೋ ಸೇವೆ, ಶ್ರೀಮಠದ ಸೇವೆ ಮಾಡಲು ಜನ್ಮಾಂತರದ ಪುಣ್ಯ ಬೇಕು. ಶ್ರೀರಾಮದೇವರ ಅನುಗ್ರಹದಿಂದ ನನಗೆ ಅಂತಹ ಸದವಕಾಶ ದೊರಕಿದೆ. ಬದುಕಿನ ನೋವುಗಳಲ್ಲಿ ಸಾಂತ್ವನದ ತಂಪಾಗಿ ಜೊತೆಗೆ ಇದ್ದಿದ್ದು ಶ್ರೀಗುರುಗಳ ಅನುಗ್ರಹ. ಆ ದುಃಖದಿಂದ ಹೊರ ಬರುವಂತೆ ಮಾಡಿ ಜೀವನೋತ್ಸಾಹ ಮೂಡಿಸಿದ್ದು ಗೋಮಾತೆಯ ಸೇವೆ ” ಎಂದವರು ಸಿದ್ದಾಪುರ ಮಂಡಲ ಅಂಬಾಗಿರಿ ವಲಯದ ಶಿರಸಿ ನಿವಾಸಿಗಳಾಗಿರುವ ರಾಮಚಂದ್ರ ಭಟ್ ಅವರ ಪತ್ನಿ ಯಶೋದಾ.   ಹೊನ್ನಾವರ ಕರ್ಕಿಯ ವಿಠಲ ಹೆಗಡೆ, ಲಕ್ಷ್ಮಿ ದಂಪತಿಗಳ ಪುತ್ರಿಯಾದ ಯಶೋದಾ […]

Continue Reading

ಶ್ರೀಗುರುಗಳ ಅನುಗ್ರಹ ಬದುಕಿಗೆ ಶ್ರೀ ರಕ್ಷೆ – ಉಮಾ ವಿಘ್ನೇಶ್ವರ ಕತಗಾಲ್

  ” ಶ್ರೀಗುರು ಕರುಣೆಯ ಅಮೃತದ ಸವಿ ಅನುಭವಿಸಿದವರು ಮಾತ್ರ ಬಲ್ಲರು. ಗುರು ಸ್ಮರಣೆ ಮಾತ್ರದಿಂದಲೇ ಬದುಕಿನ ಅಂಧಕಾರ ದೂರವಾಗುತ್ತದೆ. ಭಾವಪೂರ್ಣ ತನ್ಮಯತೆಯಿಂದ ಪ್ರಾರ್ಥಿಸಿದರೆ ನಮ್ಮ ಪ್ರಾರ್ಥನೆ ಫಲಿಸುತ್ತದೆ ” ಎಂದವರು ಕುಮಟಾ ಮಂಡಲ ಉಪ್ಪಿನಪಟ್ಟಣ ವಲಯದ ಉಮಾ ವಿಘ್ನೇಶ್ವರ ಕತಗಾಲ್ ಹೊನ್ನಾವರ ಸಮೀಪದ ಕಡ್ಲೆ ಗಜಾನನ ರಾಮ ಹೆಗಡೆ ಹಾಗೂ ಭಾಗೀರಥಿ ಗಜಾನನ ಹೆಗಡೆ ದಂಪತಿಗಳ ಪುತ್ರಿಯಾದ ಉಮಾ ಎರಡು ಗೋವುಗಳ ಗುರಿ ತಲುಪಿದ ಮಾಸದಮಾತೆಯಾಗಿದ್ದಾರೆ. ” ಈಶ್ವರಿ ಅಕ್ಕನ ಮಾತುಗಳಿಂದ ಮಾತೃತ್ವಮ್ ಬಗ್ಗೆ ಆಸಕ್ತಿ […]

Continue Reading

ಕರಗಳಲ್ಲಿ ಕಲೆ ಅರಳಿಸುವ ಶ್ರೀಮಾತೆ – ಅರ್ಚನಾ ಸುಬ್ರಹ್ಮಣ್ಯ ಕಾನುಗೋಡು

  ಕಲೆ, ಕಸೂತಿ, ಹೂವಿನ ಹಾರ, ರಂಗೋಲಿಯೇ ಮೊದಲಾದ ಕಲೆಗಳಲ್ಲಿ ವಿಶೇಷ ಪರಿಣತಿ ಪಡೆದು, ವೈಶಿಷ್ಟ್ಯಮಯ ವಿನ್ಯಾಸಗಳಿಂದಲೇ ಅವುಗಳಲ್ಲಿ ತಮ್ಮ ಛಾಪು ಒತ್ತಿರುವ ಅಪರೂಪದ, ಆಕರ್ಷಕ ವ್ಯಕ್ತಿತ್ವದ ಒಡತಿಯಾಗಿರುವ ಮಾಸದ ಮಾತೆ ಅರ್ಚನಾ ಸುಬ್ರಹ್ಮಣ್ಯ. ರಾಮಚಂದ್ರಾಪುರ ಮಂಡಲದ ಕಾನುಗೋಡು ವಲಯದ ಮಾತೃ ಪ್ರಧಾನೆಯೂ ಆಗಿರುವ ಅರ್ಚನಾ ಶಿರಸಿಯ ಸಮೀಪದ ವಡ್ಡಿನಕೊಪ್ಪ ದತ್ತಾತ್ರೇಯ ರಾಯ್ಸದ್ ಹಾಗೂ ಜಯಾ ರಾಯ್ಸದ್ ದಂಪತಿಗಳ ಪುತ್ರಿ. ” ಮದುವೆಯಾದ ಆರಂಭದಲ್ಲಿ ಹಳ್ಳಿಮನೆ ಸೇರಬೇಕಾಗಿ ಬಂತಲ್ಲಾ, ಹಸುಗಳ ಕೆಲಸ, ಹಟ್ಟಿ ಕೆಲಸ ಮಾಡಬೇಕಲ್ಲಾ ಎಂದೆನಿಸುತ್ತಿತ್ತು. […]

Continue Reading

“ಶ್ರೀಮಠದ ಸೇವೆ – ಗೋ ಸೇವೆ ಬದುಕಿನ ಅವಿಭಾಜ್ಯ ಅಂಗ ” – ಸ್ವಾತಿ ಯು. ಯಸ್. ಭಟ್ ಮಿತ್ತೂರು

” ಗೋವು ನಮ್ಮ ಜೀವನದ ಅವಿಭಾಜ್ಯ ಅಂಗ. ಗೋವಿನ ಜೊತೆ ಬಾಂಧವ್ಯವಿಲ್ಲದೆ ನಮ್ಮ ಬದುಕು ಸಂಪೂರ್ಣವಲ್ಲ. ದೇಶಿ ಗೋವಿನ ಉತ್ಪನ್ನಗಳು ನಮ್ಮ ಆರೋಗ್ಯವನ್ನು ಸಂರಕ್ಷಿಸುತ್ತವೆ. ಅನೇಕ ರೋಗಗಳಿಗೂ ಔಷಧವಾಗಿವೆ. ಇಂತಹ ಗೋವುಗಳನ್ನು ಸಂರಕ್ಷಿಸುವ ಮಹತ್ಕಾರ್ಯದ ದೀಕ್ಷೆ ತೊಟ್ಟಿರುವ ನಮ್ಮ ಗುರುಗಳ ಮಹತ್ವಪೂರ್ಣ ಯೋಜನೆಗೆ ಕೈಜೋಡಿಸುವ ಅವಕಾಶ ದೊರಕಿದ್ದು ಪೂರ್ವ ಜನ್ಮದ ಸುಕೃತ ” ಎನ್ನುತ್ತಾರೆ ಮಂಗಳೂರು ಮಂಡಲ, ಮಂಗಳೂರು ಮಧ್ಯ ವಲಯದ ಮಿತ್ತೂರು ಉದಯಶಂಕರ್ ಭಟ್ ಅವರ ಪತ್ನಿ ಸ್ವಾತಿ ಯು ಎಸ್ ಭಟ್. ಮೀಯಪದವು ನಾರಾಯಣ […]

Continue Reading

” ಶ್ರೀಗುರು ಸೇವೆಯಿಂದ ಅನನ್ಯ ಫಲ ದೊರಕುತ್ತದೆ ” ಪರಮೇಶ್ವರಿ ಭಟ್ ಮಾನಸವನ

    ” ಶ್ರೀಮಠದ ಸೇವೆಯಲ್ಲಿ ಅಪಾರ ಶ್ರದ್ದೆ ಇರುವ ಕುಟುಂಬ ನಮ್ಮದು. ಶ್ರೀಗುರುಗಳು ಮೂರು ಬಾರಿ ನಮ್ಮ ಮನೆಗೆ ಚಿತ್ತೈಸಿದ್ದಾರೆ. ಶ್ರೀಮಠದ ವಿವಿಧ ಯೋಜನೆಗಳಲ್ಲಿ ನಮ್ಮ ಮನೆಯ ಸದಸ್ಯರೆಲ್ಲ ಒಂದಲ್ಲ ಒಂದು ರೀತಿಯಲ್ಲಿ ತೊಡಗಿಸಿಕೊಂಡಿದ್ದೇವೆ. ನಮ್ಮವರು ಗುರಿಕ್ಕಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನನ್ನ ಮಗಳು, ಸೊಸೆ ಇಬ್ಬರೂ ಮಾಸದ ಮಾತೆಯರಾಗಿದ್ದಾರೆ. ಶ್ರೀಗುರು ಸೇವೆಯಿಂದ ಅನನ್ಯ ಫಲ ದೊರಕುತ್ತದೆ ಎಂಬುದು ನಮ್ಮ ಜೀವನದ ಅನುಭವ ” ಎಂದವರು ಉಪ್ಪಿನಂಗಡಿ ಮಂಡಲ, ಬೆಳ್ಳಾರೆ ವಲಯದ ಪೆರ್ಲಂಪಾಡಿ ಸಮೀಪದ ಅಲೆಕ್ಕಾಡಿ ಮಾನಸವನದ […]

Continue Reading

” ಗೋಮಾತೆಯ ಸೇವೆ ಪುಣ್ಯಪ್ರದ ” – ಸರಸ್ವತಿ ಸುಬ್ರಹ್ಮಣ್ಯ ಹೆಗಡೆ ಕುಮಟಾ

  ” ಗೋಮಾತೆ ದೇವತೆಗೆ ಸಮಾನ. ಆಕೆಯ ಹಾಲು ಅಮೃತ ತುಲ್ಯ . ಆಕೆಯ ಸೇವೆ ಪುಣ್ಯಪ್ರದ. ಗೋಸೇವೆಯಿಂದ ಬದುಕಿನಲ್ಲಿ ನೆಮ್ಮದಿ ಶಾಂತಿ ನೆಲೆಸಿದೆ ” ಎಂದವರು ಕುಮಟಾ ಮಂಡಲ, ಕುಮಟಾ ವಲಯದ ಪೋಸ್ಟಲ್ ಕಾಲನಿ ನಿವಾಸಿಗಳಾಗಿರುವ ಸುಬ್ರಹ್ಮಣ್ಯ ಹೆಗಡೆಯವರ ಪತ್ನಿ ಸರಸ್ವತಿ ಹೆಗಡೆ   ಕಡತೋಕ ಸುಬ್ರಾಯ ಭಾಗ್ವತ್, ಮಾದೇವಿ ದಂಪತಿಗಳ ಪುತ್ರಿಯಾದ ಸರಸ್ವತಿ ಸುಬ್ರಹ್ಮಣ್ಯ ಹೆಗಡೆಯವರು ಸುಮಾರು ಎರಡು ದಶಕಗಳಿಂದ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡವರು. ಅಂಚೆ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದ ಪತಿ ಸುಬ್ರಹ್ಮಣ್ಯ ಹೆಗಡೆ ನಿವೃತ್ತಿಯ […]

Continue Reading

ವಿಶ್ವಜನನಿ ಗೋ ಮಾತೆಯ ಸೇವೆ ನಿತ್ಯ ನಿರಂತರ – ಗಾಯತ್ರಿ ಭಾಗ್ವತ್

” ಗೋವು ನಮ್ಮ ಜೀವನಾಧಾರ. ಗೋವಿಲ್ಲದಿದ್ದರೆ ನಾವಿಲ್ಲ. ಆದರೆ ಇಂದಿನ ನಗರದ ಜೀವನದ ಒತ್ತಡದ ನಡುವೆ ಗೋ ಸೇವೆ ಮಾಡಬೇಕೆಂಬ ಅಭಿಲಾಷೆ ಇದ್ದರೂ ಅದೆಷ್ಟೋ ಮಂದಿಗೆ ಅದು ಸಾಧ್ಯವಾಗುವುದಿಲ್ಲ. ಶ್ರೀಗುರುಗಳ ಮಾತೃತ್ವಮ್ ಯೋಜನೆಯ ಮೂಲಕ ಆ ಅಭಿಲಾಷೆ ಈಗ ಕೈಗೊಡಿದೆ. ಇದರಿಂದ ಬದುಕಿನಲ್ಲಿ ತುಂಬಾ ಬದಲಾವಣೆಗಳಾಗಿವೆ. ಮನಸ್ಸಿಗೆ ನೆಮ್ಮದಿ ದೊರಕಿದೆ ” ಎನ್ನುವವರು ತೀರ್ಥಹಳ್ಳಿ ತಾಲೂಕಿನ ಗನವಳ್ಳಿ ಮನೆತನದ ಸುಳೋಗೊಡು ಜಿ ಎಲ್ ಶ್ರೀನಿವಾಸಮೂರ್ತಿ, ಮೂಕಾಂಬಿಕಾ ದಂಪತಿಗಳ ಪುತ್ರಿಯಾದ ಗಾಯತ್ರಿ ಭಾಗ್ವತ್. ಮೂಲತಃ ಕುಮಟಾ ತಾಲೂಕು ಚಂದಾವರ […]

Continue Reading

ಗೋ ಸೇವೆಯಿಂದ ದೊರಕುವ ನೆಮ್ಮದಿ ಅನುಪಮ – ಶಾರದಾ ಶ್ಯಾಮಪ್ರಸಾದ್

  ಗೋ ಸೇವೆಯಿಂದ, ಗೋ ಉತ್ಪನ್ನಗಳ ಬಳಕೆಯಿಂದ ನಾವು ಆರೋಗ್ಯಪೂರ್ಣ ಜೀವನವನ್ನು ಪಡೆಯಲು ಸಾಧ್ಯವಿದೆ. ಬಾಲ್ಯದಿಂದಲೇ ಗೋವುಗಳ ಒಡನಾಟದಲ್ಲಿ ಬೆಳೆದವಳು ನಾನು. ಈ ಕಾರಣಕ್ಕಾಗಿ ಗೋಮಾತೆ ಎಂದರೆ ವಿಶೇಷ ಮಮತೆ. ಈ ನಗರದ ಜೀವನದಲ್ಲಿ ಗೋವುಗಳನ್ನು ಸಾಕಲು ಎಲ್ಲರಿಗೂ ಸಾಧ್ಯವಿಲ್ಲ. ಅಂತಹ ಸಂದರ್ಭದಲ್ಲಿ ಗೋಶಾಲೆಗಳಿಗೆ ಸಹಕಾರ ನೀಡುವ ಮೂಲಕ ಗೋಸೇವೆಯ ಪುಣ್ಯ ಪಡೆಯಲು ಸಾಧ್ಯವಿದೆ ” ಎನ್ನುವವರು ಕಾಸರಗೋಡು, ಏಳ್ಕಾನ ಮೂಲದ ಪ್ರಸ್ತುತ ಬೆಂಗಳೂರು ಉತ್ತರ ಮಂಡಲ, ಸರ್ವಜ್ಞ ವಲಯ ನಿವಾಸಿಗಳಾಗಿರುವ ಶಾರದಾ ಶ್ಯಾಮಪ್ರಸಾದ್ ಮೂಲತಃ ಕಾಸರಗೋಡು […]

Continue Reading

ಗೋಮಾತೆಯ ಸೇವೆಯಲ್ಲಿ ಪೂರ್ಣತೆ ಕಂಡ ಶ್ರೀಮಾತೆ – ದೇವಕಿ ಕೂಡೂರು

ಮನುಕುಲದ ಉಳಿವಿನ ಮೂಲವೆನಿಸಿದ ವಿಶ್ವ ಜನನಿ ಗೋಮಾತೆಯ ಸಂರಕ್ಷಣೆಯ ಹೊಣೆಯನ್ನು ಸ್ವೀಕರಿಸಿ, ತಮ್ಮ ಮನೆಯಲ್ಲೂ ಹತ್ತಾರು ದೇಶಿಯ ಹಸುಗಳನ್ನು ಸಾಕುವ ಜೊತೆಗೆ ಶ್ರೀಮಠದ ಮಾತೃತ್ವಮ್ ಯೋಜನೆಯಲ್ಲಿಯೂ ತೊಡಗಿಸಿಕೊಂಡು, ಎರಡು ಹಸುಗಳ ಗುರಿ ತಲುಪಿದ ಮಾಸದ ಮಾತೆ ದೇವಕಿ ಕೂಡೂರು ಉಪ್ಪಿನಂಗಡಿ ಮಂಡಲ, ಕಡಬ ವಲಯದ ಬಲ್ಯ ನಿವಾಸಿಗಳಾಗಿರುವ ‘ ಶ್ರೀಪೂರ್ಣ ‘ ಆಯುರ್ವೇದ ಚಿಕಿತ್ಸಾಲಯದ ಡಾಕ್ಟರ್ ಸುರೇಶ್ ಕುಮಾರ್ ಕೂಡೂರು ಅವರ ಪತ್ನಿಯಾದ ದೇವಕಿ ಅವರು, ಕೂಳೂರು ಗಣಪತಿ ಭಟ್ ಮತ್ತು ವೆಂಕಟೇಶ್ವರಿ ದಂಪತಿಗಳ ಪುತ್ರಿ. ” […]

Continue Reading

” ಸತ್ಕರ್ಮದ ಸಂಕಲ್ಪಕ್ಕೆ ಪ್ರೇರಣೆ ನನ್ನಮ್ಮ ” : ರೂಪಶ್ರೀ ಸುರೇಶ್ ಕೋಡಿಮೂಲೆ

  ಹಸುಗಳು ಸ್ವತಂತ್ರವಾಗಿ ವಿಹರಿಸುವ ಪುಟ್ಟ ಗೋಸ್ವರ್ಗದಂತಹ ವಾತಾವರಣವನ್ನು ತಮ್ಮ ಮನೆಯಲ್ಲೇ ನಿರ್ಮಿಸಿದ ಅಪ್ರತಿಮ ಗೋಪ್ರೇಮಿಗಳು ಹಾಗೂ ಕೃಷಿಕಾರ್ಯಗಳಿಗಾಗಿ ರಾಜ್ಯ, ಜಿಲ್ಲಾ ಮಟ್ಟಗಳಲ್ಲಿ ಅನೇಕ ಪ್ರಶಸ್ತಿಗಳನ್ನು ಗಳಿಸಿರುವ ಕಲ್ಲಕಟ್ಟ ವಿಜಯಲಕ್ಷ್ಮಿ, ನಾರಾಯಣ ಭಟ್ ದಂಪತಿಗಳ ಪುತ್ರಿಯಾದ ರೂಪಶ್ರೀ ಅವರಿಗೆ ಸಹಜವಾಗಿಯೇ ಗೋವುಗಳ ಮೇಲೆ ತುಂಬಾ ಮಮತೆ. ” ಅಮ್ಮ ಮಾಡುವ ಶ್ರೀಮಠದ ಸೇವೆ, ಗೋಸೇವೆಗಳನ್ನು ನೋಡುತ್ತಾ ಬೆಳೆದವಳು ನಾನು. ಹಸುಗಳ ಒಡನಾಟದಲ್ಲಿ ಬೆಳೆದ ನನಗೆ ಧಾರ್ಮಿಕ ವಿಚಾರಗಳ ಸೂಕ್ತ ಬೋಧನೆಯನ್ನು ನೀಡಿ ಎಲ್ಲಾ ಸತ್ಕರ್ಮಗಳ ಸಂಕಲ್ಪಕ್ಕೆ ಪ್ರೇರಣೆಯಾದವರು […]

Continue Reading

ಶ್ರೀಸಂಸ್ಥಾನದವರ ಅನುಗ್ರಹದ ನೆರಳಿನಲ್ಲಿರುವುದು ಪೂರ್ವಜನ್ಮದ ಸುಕೃತ : ಅನಘಾ ಹೆಗಡೆ, ತುಂಬೆಮನೆ

ಶ್ರೀಮಠದ ಮಹತ್ವಪೂರ್ಣ ಯೋಜನೆಗಳಲ್ಲೊಂದಾದ ‘ ಮಾತೃತ್ವಮ್ ‘ ಮೂಲಕ ಗೋಮಾತೆಯ ಸೇವೆಯಲ್ಲಿ ನಿರತರಾಗಿರುವ ಮಾತೆಯರು ನೂರಾರು. ಶ್ರೀಮಠದ ಸಂಪರ್ಕದಿಂದ, ಸ್ವಯಂ ಪ್ರೇರಣೆಯಿಂದ ಅನೇಕ ಮಂದಿ ಮಾತೆಯರು ಗೋಸೇವೆಗೆ ಮುಂದೆ ಬಂದರೆ , ಹಿರಿಯರ ಮಾರ್ಗದರ್ಶನದ ಮೂಲಕ ಮಾತೃತ್ವಮ್ ಸೇವೆಯಲ್ಲಿ ಕೈಜೋಡಿಸುವ ಮಾತೆಯರು ಅನೇಕ. ಅನಘಾ ಹೆಗಡೆ ತುಂಬೆಮನೆ ಇವರಲ್ಲಿ ಒಬ್ಬರು. ” ಅಜ್ಜ ಆರ್ ಎಸ್ ಹೆಗಡೆ ಹರಗಿಯವರ ಮೂಲಕ ನನಗೆ ಶ್ರೀಮಠದ ಸಂಪರ್ಕ ದೊರಕಿತು. ಅಪ್ಪ ಅಮ್ಮನ ಪ್ರೋತ್ಸಾಹ ನನಗೆ ಪ್ರೇರಣೆಯಾಯಿತು. ಎಳವೆಯಿಂದಲೇ ಶ್ರೀಮಠಕ್ಕೆ ಹೋಗುತ್ತಿದ್ದೇನೆ. […]

Continue Reading

” ಮನದ ಪ್ರಾರ್ಥನೆಯ ಮೂಲಕವೇ ಸಂಕಲ್ಪಸಿದ್ಧಿ ” ಪ್ರಗತಿ ಲಕ್ಷ್ಮೀನಾರಾಯಣ, ಸಾಗರ

  ” ಶ್ರದ್ಧಾಭಕ್ತಿಯಿಂದ ಶ್ರೀಗುರು ಸೇವೆ ಮಾಡುತ್ತಾ ಇದ್ದರೆ ನಮ್ಮ ಮ‌ನಃಸಂಕಲ್ಪ ಮಾತ್ರದಿಂದಲೇ ಉದ್ದೇಶಿತ ಕಾರ್ಯ ಕೈಗೂಡಲು ಶ್ರೀಗುರು ಕಾರುಣ್ಯ ದೊರಕುತ್ತದೆ. ಗುರುಸೇವೆಗೆ ನಮ್ಮನ್ನು ನಾವು ಪೂರ್ತಿಯಾಗಿ ಸಮರ್ಪಿಸಿದಾಗ ದೊರಕುವ ಅನುಭೂತಿಯೇ ಆನಂದದಾಯಕ.‌ ಇದನ್ನು ವಿವರಿಸಲು ಅಸಾಧ್ಯ, ಅನುಭವಿಸಿಯೇ ತಿಳಿಯಬೇಕಷ್ಟೆ ” ಎಂದು ಶ್ರೀಗುರುಗಳ ಮಹತ್ವದ ಬಗ್ಗೆ ಶ್ರದ್ಧಾಭಕ್ತಿಗಳಿಂದ ನುಡಿದವರು ಸಾಗರ ಮಂಡಲ, ಪೂರ್ವ ವಲಯದ ವಿಜಯನಗರ ‘ ಸೌರಭ ‘ ಮನೆ ನಿವಾಸಿಗಳಾಗಿರುವ ಲಕ್ಷ್ಮೀನಾರಾಯಣ ಅವರ ಪತ್ನಿ ಪ್ರಗತಿ. ಸಾಗರದ ಹುಲೀಮನೆ ವೆಂಕಟಗಿರಿ ರಾವ್ ಎಚ್.ಕೆ, […]

Continue Reading

” ಬದುಕಿನ ಪೂರ್ಣತೆ ಗುರುಸೇವೆಯಲ್ಲಿ ” : ಅಕ್ಷತಾ ನಿತೇಶ್ ಮೋಂತಿಮಾರು

  ” ಶ್ರೀಗುರುಗಳ ಕೃಪಾದೃಷ್ಟಿ ಎಂಬ ದಿವ್ಯಾನುಗ್ರಹ ದೊರೆತವರ ಬದುಕು ಪಾವನವಾಗುತ್ತದೆ. ಗುರುಸೇವೆಯಂಬ ಪುಣ್ಯ ದೊರಕಲು ಪೂರ್ವ ಜನ್ಮದ ಸುಕೃತ ಬೇಕು. ಬದುಕಿನಲ್ಲಿ ಪರಿಪೂರ್ಣತೆ ಎಂಬುದು ದೊರಕುವುದು ಶ್ರೀಗುರುಸೇವೆಯಿಂದ ಮಾತ್ರ, ಗೋಮಾತೆಯ ಸೇವೆ, ಶ್ರೀಗುರುಗಳ ಸೇವೆಯಲ್ಲಿ ನಿರತರಾದವರಿಗೆ ಬದುಕಿನಲ್ಲಿ ಉನ್ನತಿ, ಯಶಸ್ಸು ಪೂರ್ಣರೂಪದಲ್ಲಿ ಸಿಗುತ್ತದೆ ” ಎಂದವರು ಬೆಂಗಳೂರು ದಕ್ಷಿಣ ಮಂಡಲ ಅನ್ನಪೂರ್ಣೇಶ್ವರಿ ವಲಯದ ನಿತೇಶ್ ಮೋಂತಿಮಾರು ಅವರ ಪತ್ನಿ ಅಕ್ಷತಾ ಪಿ   ಪೆರ್ವೊಡಿ ನಾರಾಯಣ ಭಟ್ ಸುಮಾ ಎನ್ ಭಟ್ ದಂಪತಿಗಳ ಪುತ್ರಿಯಾದ ಇವರು […]

Continue Reading

” ದೇವನೇ ಗುರುವಾಗಿ ಬಂದಂತೆ ನಮ್ಮ ಗುರುದೇವರು ” : ಶಶಿಕಲಾ ಹೆಗಡೆ ಬೆಂಗಳೂರು

    ” ಬದುಕಿನಲ್ಲಿ ಎದುರಾಗುವ ಯಾವುದೇ ಸಮಸ್ಯೆ ಇರಲಿ, ಸಂಕಷ್ಟಗಳಿರಲಿ , ಶ್ರೀಗುರುಗಳನ್ನು ಮನಸಾರೆ ಪ್ರಾರ್ಥಿಸಿದರೆ ಆ ಕಷ್ಟದ ಬೆಟ್ಟಗಳು ಮಂಜಿನಂತೆ ಕರಗಿ ಹೋಗಿ ಬದುಕಿನಲ್ಲಿ ನೆಮ್ಮದಿ, ಶಾಂತಿ ನೆಲೆಸುತ್ತದೆ. ಇದು ನಮ್ಮ ಜೀವನದ ಅನುಭವ. ನಮ್ಮ ಗುರುಗಳೆಂದರೆ ಆ ಭಗವಂತನೇ ಗುರು ಸ್ವರೂಪಿಯಾಗಿ ಧರೆಗಿಳಿದು ಬಂದಂತೆ ಎಂಬುದು ನಮ್ಮ ಅಚಲ ನಂಬಿಕೆ ” ಈ ಶ್ರದ್ಧಾಭಕ್ತಿಯ ನುಡಿಗಳು ಹೊನ್ನಾವರ ಮಂಡಲ ಬಾಳ್ಕೋಡು ಇಡಗುಂಜಿಯ ಹೊಸಮನೆಯ ಪ್ರಸ್ತುತ ಬೆಂಗಳೂರು ನಿವಾಸಿಗಳಾಗಿರುವ ಕೃಷ್ಣ ಮಂಜುನಾಥ ಹೆಗಡೆಯವರ ಪತ್ನಿ […]

Continue Reading

” ಸಾಟಿಯಿಲ್ಲದ ಸಂತಸ ದೊರಕುವುದು ಶ್ರೀಮಠದ ಸೇವೆಯಿಂದ ” : ಚಂದ್ರಕಲಾ ವಡ್ವ

” ನನ್ನ ಬಾಲ್ಯದಲ್ಲಿ ತವರುಮನೆಗೆ ಹಿರಿಯ ಗುರುಗಳ ಆಗಮನವಾಗಿತ್ತು. ಮದುವೆಯಾಗಿ ಸೇರಿದ್ದು ಗುರಿಕ್ಕಾರರ ಮನೆತನಕ್ಕೆ. ಹಾಗಾಗಿ ಶ್ರೀಮಠದ ಸಂಪರ್ಕ ಸಹಜವಾಗಿಯೇ ನನಗೆ ಲಭಿಸಿತು. ನಮ್ಮ ಯಜಮಾನರಿಗೂ ಹಿರಿಯ ಗುರುಗಳಿಗೂ ಬಹಳ ಆತ್ಮೀಯತೆ ಇತ್ತು. ಹಿರಿಯ ಗುರುಗಳ ಚಾತುರ್ಮಾಸ್ಯದ ಸಂದರ್ಭದಲ್ಲಿ ನಾವು ತೀರ್ಥಹಳ್ಳಿಗೂ ಹೋಗಿದ್ದೇವೆ.೩೬ ನೇ ಪೀಠಾಧಿಪತಿಗಳಾದ ಶ್ರೀ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ನಿಜಕ್ಕೂ ಶ್ರೀಶಂಕರರ ಅವತಾರವೆಂದೇ ನನ್ನ ನಂಬಿಕೆ. ಹಾಗಾಗಿಯೇ ಈ ಇಳಿ ವಯಸ್ಸಿನಲ್ಲೂ ಶ್ರೀಮಠದ ಸೇವೆಗೆ ನನ್ನ ಮೊದಲ ಆದ್ಯತೆ ” ಎಂದವರು ಮಂಗಳೂರು ಮಂಡಲ, ಕೇಪು […]

Continue Reading

” ಆತ್ಮಹರ್ಷಕ್ಕೆ ರಹದಾರಿ ಗೋಮಾತೆಯ ಸೇವೆ ” : ಯಶೋದಾ ಜಿ. ಭಟ್ ಎಕ್ಕಡ್ಕ

  ” ಅನೇಕ ವರ್ಷಗಳಿಂದ ನಮ್ಮ ಮನೆಯಲ್ಲಿ ಹಸುಗಳನ್ನು ಸಾಕುತ್ತಿದ್ದೇವೆ. ಈಗಲೂ ಹತ್ತು ಹನ್ನೆರಡು ಹಸುಗಳಿವೆ. ಹಸು ಸಾಕಣೆ ಹೊರೆ ಎಂದು ತೋರಿದರೂ ಗೋಮಾತೆಯನ್ನು ಪ್ರೀತಿಸುವವರಿಗೆ ಅದು ಹೊರೆಯಲ್ಲ. ಆತ್ಮ ಸಂತೋಷದ ಹಾದಿ ಇದು ” ಎಂದವರು ಉಪ್ಪಿನಂಗಡಿ ಮಂಡಲ ಬೆಳ್ಳಾರೆ ವಲಯದ ಎಕ್ಕಡ್ಕ ಗಣಪತಿ ಭಟ್ ಅವರ ಪತ್ನಿ ಯಶೋದಾ ಭಟ್.   ಪುರುಷಬೆಟ್ಟು ಗೋವಿಂದ ಭಟ್ ,ಕಮಲಾವತಿ ದಂಪತಿಗಳ ಪುತ್ರಿಯಾದ ಇವರು ಮಾತೃತ್ವಮ್ ಯೋಜನೆಯ ಮೂಲಕ ಒಂದು ವರ್ಷದ ಗುರಿ ತಲುಪಿದ ಮಾಸದಮಾತೆಯಾಗಿದ್ದಾರೆ.   […]

Continue Reading

” ನಮ್ಮ ಸಂಸ್ಕೃತಿಯ ಮೂಲಾಧಾರ ಗೋಮಾತೆ ” : ಪಾರ್ವತಿ ಎಸ್.ಭಟ್ ದರ್ಭೆ

  ” ನಮ್ಮ ಪುರಾಣಗ್ರಂಥಗಳಲ್ಲಿ ಗೋಮಾತೆಯ ಮಹಿಮೆಯನ್ನು ಸಾರಲಾಗಿದೆ. ಮಾನವನ ಜೀವನದುದ್ದಕ್ಕೂ ಗೋವಿನ ಸ್ಥಾನ ಹಿರಿದು. ನಮ್ಮ ಅನೇಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಗೋವಿನ ಅಗತ್ಯತೆ ಇದೆ. ಸನಾತನ ಸಂಸ್ಕೃತಿಯಲ್ಲಿ ಗೋಗ್ರಾಸ ನೀಡುವ ವಿಚಾರ ಹಾಗೂ ಅದರ ಮಹತ್ವದ ಬಗ್ಗೆ ಬಣ್ಣಿಸಲಾಗಿದೆ. ಗೋವಿನ ಉತ್ಪನ್ನಗಳನ್ನು ಔಷಧಿಯಾಗಿಯೂ ಬಳಸಲಾಗುತ್ತಿದೆ. ಇತರ ಸಾಕುಪ್ರಾಣಿಗಳಿಗಿಂತ ಅದೆಷ್ಟೋ ಪಾಲು ಗೌರವಾನ್ವಿತ ಸ್ಥಾನ ಹೊಂದಿರುವ ಪೂಜನೀಯಳಾದ ಗೋಮಾತೆಯ ಸೇವೆ ಮಾಡುವುದು ಸಹಾ ಪುಣ್ಯಪ್ರದ ಎಂಬ ನಂಬಿಕೆ ನನ್ನದು ” ಎಂದವರು ಉಪ್ಪಿನಂಗಡಿ ಮಂಡಲ ಬೆಟ್ಟಂಪಾಡಿ ವಲಯದ […]

Continue Reading

” ಮಾತೃತ್ವದ ಸವಿ ಉಣಿಸುವ ಗೋಮಾತೆಯ ಸೇವೆಯಲ್ಲಿ ಸಂತೃಪ್ತಿಯಿದೆ ” : ಸೌಮ್ಯ ಹೆಬ್ಬಾರ್ ಕುಮಟಾ”

ಆರ್ಥಿಕ ವ್ಯವಸ್ಥೆಯನ್ನು ಮುಂದಿಟ್ಟುಕೊಂಡು ನಮ್ಮ ಸಮಾಜವು ವಿದೇಶೀ ತಳಿಯ ಗೋವುಗಳನ್ನು ಸಾಕುವ ಸಂದರ್ಭದಲ್ಲಿ ದೇಶೀಯ ಹಸುಗಳ ಮಹತ್ವವನ್ನು ಸಮಾಜಕ್ಕೆ ತಿಳಿಸಿ ಅನೇಕ ಗೋಯಾತ್ರೆಗಳ ಮೂಲಕ ಜನಜಾಗೃತಿ ಮೂಡಿಸಿದ ಹಿರಿಮೆ ನಮ್ಮ ಗುರುಗಳದ್ದು. ಅಮೃತದಂತಹ ಹಾಲು ನೀಡಿ ನಮ್ಮನ್ನು ಪೊರೆಯುವ ಗೋಮಾತೆಯ ಸೇವೆಯಲ್ಲಿ ತೊಡಗಿಸಿಕೊಳ್ಳಲು ಶ್ರೀಸಂಸ್ಥಾನದವರ ಮಹತ್ವಾಕಾಂಕ್ಷೆಯ ಯೋಜನೆ ಮಾತೃತ್ವಮ್ ಮೂಲಕ ಗೋಸೇವೆ ಮಾಡುವ ವಿಶಿಷ್ಟ ಅವಕಾಶ ಮಾತೆಯರಿಗೆ ಒದಗಿಬಂದಿದೆ. ಮನೆಯಲ್ಲಿ ಹಸುಗಳನ್ನು ಸಾಕಲು ಅವಕಾಶವಿಲ್ಲದವರಿಗೂ ಈ ಯೋಜನೆಯ ಮೂಲಕ ಗೋಮಾತೆಯ ಸೇವೆ ಮಾಡುವ ಅವಕಾಶ ದೊರಕಿದೆ. ‌ಮಾತೆಯಂತೆ […]

Continue Reading