ಶ್ರೀಗುರು ​ಸೇವೆಯೇ ಬದುಕಿನ ಸೌಭಾಗ್ಯ: ವಿಶಾಲಾಕ್ಷಿ ರಾಮಕೃಷ್ಣ ಹೆಗಡೆ ಹರಿಕೇರಿ

​ ” ​ಜೀವನದ ಸಾರ್ಥಕತೆ ಇರುವುದು ಸೇವೆಯಲ್ಲಿ. ಅದರಲ್ಲೂ ಶ್ರೀಗುರು ಸೇವೆ ಹಾಗೂ ಗೋ ಸೇವೆಯಿಂದ ಬದುಕಿನಲ್ಲಿ ನೆಮ್ಮದಿ ಶಾಂತಿ ನೆಲೆಸುತ್ತದೆ. ಇಂತಹ ಸೇವೆಯಲ್ಲಿ ತೊಡಗಿಸಿಕೊಳ್ಳುವುದಕ್ಕೂ ದೇವರ ಅನುಗ್ರಹ ಬೇಕು ” ಎಂದವರು ಹೊನ್ನಾವರ ಸಮೀಪದ ಹರಿಕೇರಿಯ ಪ್ರಸ್ತುತ ಹೊಸಪೇಟೆ ನಿವಾಸಿಗಳಾಗಿರುವ ರಾಮಕೃಷ್ಣ ಹೆಗಡೆಯವರ ಪತ್ನಿ ವಿಶಾಲಾಕ್ಷಿ ಹೆಗಡೆ. ಹೊನ್ನಾವರದ ಖರ್ವಾ ಗ್ರಾಮದ ಗಣಪತಿ ಹೆಗಡೆ ಮತ್ತು ಸುಭದ್ರಾ ಹೆಗಡೆ ದಂಪತಿಗಳ ಪುತ್ರಿ ವಿಶಾಲಾಕ್ಷಿಯವರು ಬಾಲ್ಯದಿಂದಲೇ ಹಸುಗಳ ಒಡನಾಟದಲ್ಲಿ ಬೆಳೆದವರು. ಪತಿಯ ಮನೆಯಲ್ಲಿಯೂ ಸುಮಾರು ೧೫-೨೦ ಹಸುಗಳನ್ನು […]

Continue Reading

ಗುರುಭಕ್ತಿ ಮತ್ತು ಗೋಸೇವೆಯ ಸಮನ್ವಯ – ವಿಜಯಲಕ್ಷ್ಮಿ ಸೊಂದಿ

ಶ್ರೀರಾಮಚಂದ್ರಾಪುರ ಮಠದ ಸಕ್ರಿಯ ಕಾರ್ಯಕರ್ತೆಯಾಗಿ, ಗೋಮಾತೆಯ ಸೇವೆ ಮಾಡುತ್ತಾ ಬದುಕನ್ನು ಸಾರ್ಥಕಪಡಿಸಿಕೊಳ್ಳುತ್ತಿರುವವರು ಮಂಗಳೂರು ಮಂಡಲ, ಬಾಯಾರು ವಲಯದ ಶಿವ ಶರ್ಮ ಸೊಂದಿ ಇವರ ಪತ್ನಿ ವಿಜಯಲಕ್ಷ್ಮಿ ಸೊಂದಿ. ಹಿಳ್ಳೆಮನೆ ಎಚ್.ಎಸ್. ಮಹಾಲಿಂಗ ಭಟ್ ಮತ್ತು ಗಂಗಮ್ಮ ದಂಪತಿಗಳ ಪುತ್ರಿಯಾಗಿ ಸಂಸ್ಕಾರಯುತ ವಾತಾವರಣದಲ್ಲಿ ಜನಿಸಿದ ಇವರು, ಬಾಲ್ಯದಿಂದಲೇ ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಮೈಗೂಡಿಸಿಕೊಂಡವರು. ​ವಿಜಯಲಕ್ಷ್ಮಿ ಅವರಿಗೆ ಗೋವುಗಳೆಂದರೆ ತುಂಬಾ ಪ್ರೀತಿ. ಅವು ದೈವಸ್ವರೂಪಿಗಳು ಎಂದು ಅವರ ನಂಬಿಕೆ. ಚಿಕ್ಕಂದಿನಿಂದಲೇ ಹಸುಗಳೊಂದಿಗೆ ಬೆಳೆದ ಇವರು, ತಮ್ಮ ಬಾಲ್ಯದ ದಿನಗಳಲ್ಲಿ […]

Continue Reading

​ಗುರುಪಥದ ಮೌನಾನುರಾಗಿ: ಭಾಗ್ಯ ಅಶೋಕ್ ಗಡಿಕಟ್ಟೆ 

  ​ಗುರುಭಕ್ತಿಗೆ ಶರಣಾದ ಬದುಕು ಮೌನವಾಗಿದ್ದರೂ ಅರ್ಥಪೂರ್ಣವಾಗುತ್ತದೆ ಎಂಬುದಕ್ಕೆ ರಾಮಚಂದ್ರಾಪುರ ಮಂಡಲದ ಪುರಪ್ಪೆಮನೆ ವಲಯದ ಹೆಗ್ಗೋಡು ಸಮೀಪದ ಗಡಿಕಟ್ಟೆಯ ಅಶೋಕ ಅವರ ಧರ್ಮಪತ್ನಿ ಭಾಗ್ಯ ಅಶೋಕ್ ಅವರ ಜೀವನವೇ ಮಾದರಿ.   ಮಣಗೋಡು ಮಹಾಬಲೇಶ್ವರ–ಪಾರ್ವತಿ ದಂಪತಿಗಳ ಪುತ್ರಿಯಾಗಿ ಜನಿಸಿದ ಭಾಗ್ಯ ಅವರು, ಚಿಕ್ಕಂದಿನಿಂದಲೇ ಆಧ್ಯಾತ್ಮಿಕ ಸಂಸ್ಕಾರಗಳಲ್ಲಿ ಬೆಳೆದವರು. ತಾಯಿಯ ತವರು ಮನೆಯಿಂದಲೇ ಅವರಿಗೆ ಶ್ರೀಮಠದ ಬಗ್ಗೆ, ಶ್ರೀಗುರುಗಳ ಬಗ್ಗೆ ಅರಿವು ಮೂಡಿತು. ಅವರ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಇದು ಮಹತ್ವದ ಪಾತ್ರ ವಹಿಸಿತು. ಮದುವೆಗೆ ಮುನ್ನವೇ ಅವರ ತವರುಮನೆಗೆ […]

Continue Reading

ನಿಷ್ಠೆಯ ಸೇವೆಗೆ ಒಲಿದ ಗುರುಕಾರುಣ್ಯ – ಭಾಗ್ಯಲಕ್ಷ್ಮಿ ವಿ. ಭಟ್, ಬೆಳ್ಳಾರೆ

  ‘​ ಶ್ರದ್ಧೆ ಮತ್ತು ಭಕ್ತಿಯಿಂದ ಗೋಸೇವೆ, ಗುರುಸೇವೆ ಮಾಡಿದರೆ ಗುರುಕೃಪೆ ತಾನಾಗಿ ಒಲಿದು ಬರುತ್ತದೆ ‘ ಎನ್ನುತ್ತಾ ಶ್ರೀಮಠದ ಸೇವೆ ಹಾಗೂ ಗೋಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಉಪ್ಪಿನಂಗಡಿ ಮಂಡಲ ಬೆಳ್ಳಾರೆ ವಲಯದ ಭಾಗ್ಯಲಕ್ಷ್ಮಿ ವಿ. ಭಟ್ ಅವರ ಗುರುಸೇವೆ ಎಲ್ಲರಿಗೂ ಸ್ಫೂರ್ತಿಯ ಸೆಲೆ. ಮೂಲತಃ ಉಳುವಾನದ ವಿಟ್ಲ ನಿವಾಸಿಗಳಾದ ಈಶ್ವರ ಭಟ್ ಮತ್ತು ಹೈಮಾವತಿ ದಂಪತಿಗಳ ಪುತ್ರಿಯಾದ ಇವರಿಗೆ ಬಾಲ್ಯದಿಂದಲೇ ಮನೆಯಲ್ಲಿನ ಧಾರ್ಮಿಕ ವಾತಾವರಣ, ಹಿರಿಯರ ಮಾರ್ಗದರ್ಶನ ಸಂಸ್ಕಾರದ ಮೂಲ ಮಂತ್ರವನ್ನು ಕಲಿಸಿತು. ಮುಂದೆ ಮೂಲತಃ […]

Continue Reading

‘ಗುರುಕೃಪೆ ಜೀವನಪಥದ ಅಮೃತವರ್ಷ ‘ – ಕುಸುಮಾ ಪೆರ್ಮುಖ

” ಗುರುಕೃಪೆಯೊಂದಿದ್ದರೆ ಜೀವನದಲ್ಲಿ ಎಲ್ಲವೂ ಸಾಧ್ಯ. ನೋವು, ಸಂಕಷ್ಟ ಎಲ್ಲವೂ ಗುರುಚರಣ ಸ್ಮರಣೆಯ ಮುಂದೆ ಮಂಜಿನಂತೆ ಕರಗಿ ಹೋಗುತ್ತವೆ. ಬದುಕಿನ ಪ್ರತಿಯೊಂದು ಹಂತದಲ್ಲೂ ಗುರುಗಳ ಅನುಗ್ರಹ ನಮ್ಮ ಮೇಲೆ ಇದೆ ಎಂಬ ಭರವಸೆಯೇ ನಮ್ಮ ಜೀವನದ ಬಹುದೊಡ್ಡ ಭಾಗ್ಯ ” ಎಂದು ಭಾವಪೂರ್ಣವಾಗಿ ನುಡಿಯುವವರು ಮುಳ್ಳೇರಿಯ ಮಂಡಲ ಪಳ್ಳತ್ತಡ್ಕ ವಲಯದ ಪೆರ್ಮುಖ ಈಶ್ವರ ಭಟ್ ಅವರ ಪತ್ನಿ ಕುಸುಮಾ ಪೆರ್ಮುಖ. ಬಾಯಾರು ಕೆರೆಮೂಲೆ ತಿರುಮಲೇಶ್ವರ ಭಟ್, ವಿಜಯಲಕ್ಷ್ಮಿ ದಂಪತಿಗಳ ಪುತ್ರಿಯಾದ ಕುಸುಮಾ ಅವರು ಬಾಲ್ಯದಿಂದಲೇ ಧಾರ್ಮಿಕ ಸಂಸ್ಕಾರ, […]

Continue Reading

” ಶ್ರೀಗುರುಕೃಪೆಯ ಸ್ಪರ್ಶದಿಂದ ಬದುಕಿಗೆ ಹೊಸ ಬೆಳಕು ” – ಚಿತ್ರಾ ಭಟ್ ಬೆಕ್ಕುತ್ತೆ

  ” ಶ್ರೀಮಠದ ಸಂಪರ್ಕಕ್ಕೆ ಬಂದ ಬಳಿಕ ನನ್ನ ಬದುಕಿನ ಪಥವೇ ಬದಲಾಗಿದೆ. ಕಷ್ಟದ ಸಮಯದಲ್ಲಿ ಶ್ರೀಗುರು ಚರಣಗಳಿಗೆ ಶರಣಾದರೆ ಬೆಳಕಿನ ದಾರಿ ತಾನಾಗಿಯೇ ತೆರೆದುಕೊಳ್ಳುತ್ತದೆ ಎಂಬುದನ್ನು ನಾನು ನನ್ನ ಜೀವನದಲ್ಲೇ ಅನುಭವಿಸಿದ್ದೇನೆ ” ಎಂದು ಭಾವಪೂರ್ಣವಾಗಿ ನುಡಿಯುತ್ತಾರೆ ಹೊನ್ನಾವರ ಮಂಡಲ ಮುಗ್ವಾ ವಲಯದ ಬೆಕ್ಕುತ್ತೆ ರಾಯಭಟ್ರ ಮನೆಯ ಗಣಪತಿ ಭಟ್ ಅವರ ಪತ್ನಿ ಚಿತ್ರಾ ಭಟ್. ಹೊನ್ನಾವರದ ನಾರಾಯಣ ಭಟ್ – ಮಾದೇವಿ ಭಟ್ ದಂಪತಿಗಳ ಪುತ್ರಿಯಾದ ಚಿತ್ರಾ ಭಟ್ ಅವರು ಕಳೆದ ೧೫ ವರ್ಷಗಳಿಂದ […]

Continue Reading

ಶ್ರೀಮಠದ ಸೇವೆ ಆತ್ಮ ಸಂತೋಷಕ್ಕೆ ದಾರಿ – ಮಹಾದೇವಿ ಸಿ. ಭಟ್ ಶಿರಸಿ

  ” ಗೋಮಾತೆ ನಮ್ಮ ಸಂಸ್ಕೃತಿಯ ಜೀವಾಳ. ಧರ್ಮ, ಸಂಸ್ಕಾರ, ಜೀವನ ಮೌಲ್ಯಗಳೆಲ್ಲವೂ ಗೋವಿನೊಂದಿಗೆ ಬೆಸೆದುಕೊಂಡಿದೆ. ಬದುಕಿನಲ್ಲಿ ಗೋಸೇವೆಗೆ ಅವಕಾಶ ದೊರೆತರೆ ಅದುವೇ ನಮ್ಮ ಜೀವನದ ಸಾರ್ಥಕತೆ ” ಎಂದು ಶ್ರದ್ಧಾಭಕ್ತಿಗಳಿಂದ ನುಡಿದವರು ಸಿದ್ಧಾಪುರ ಮಂಡಲದ ಅಂಬಾಗಿರಿ ವಲಯದ ಶಿರಸಿಯ ಚಂದ್ರಶೇಖರ ಭಟ್ ಅವರ ಪತ್ನಿ ಮಹಾದೇವಿ ಭಟ್. ಮೂಲತಃ ಕುಮಟಾ ಸಮೀಪ ದೇವನೀ ಮಠ ಬಾಡದ ಅನಂತ ಭಟ್ – ಯಮುನಾ ದಂಪತಿಗಳ ಪುತ್ರಿಯಾದ ಮಹಾದೇವಿ ಭಟ್ ಬಾಲ್ಯದಿಂದಲೇ ಧಾರ್ಮಿಕ ವಾತಾವರಣದಲ್ಲಿ ಬೆಳೆದವರು. ತಂದೆ ವೈದಿಕರಾಗಿದ್ದ […]

Continue Reading

ಗೋಸೇವೆಯ ಪಥಕ್ಕೆ ಗುರುಕೃಪೆಯೇ ದೀಪ – ಶೈಲಜಾ ಸುಬ್ರಹ್ಮಣ್ಯ ದಂಬೆಮೂಲೆ

  ಬದುಕು ಅರ್ಥಪೂರ್ಣವಾಗುವುದು ಗೋಸೇವೆ, ಗುರುಸೇವೆಯ ಮೂಲಕವೇ ಎನ್ನುವ ನಂಬಿಕೆಯನ್ನು ತಮ್ಮ ನಿತ್ಯದ ಜೀವನದಲ್ಲಿ ಸಾಕಾರಗೊಳಿಸುತ್ತಿರುವವರು ಮುಳ್ಳೇರಿಯ ಮಂಡಲ ಸುಳ್ಯ ವಲಯದ ಶೈಲಜಾ ಸುಬ್ರಹ್ಮಣ್ಯ ಭಟ್. ಗೋಮಾತೆಯ ಸೇವೆ ಹಾಗೂ ಶ್ರೀಮಠದ ಸೇವೆ ಇವೆರಡೂ ಇವರ ಬದುಕಿನ ಅವಿಭಾಜ್ಯ ಅಂಗವಾಗಿದೆ. ಈಂದುಗುಳಿ ಡಾ. ಗೋಪಾಲಕೃಷ್ಣ ಭಟ್ ಹಾಗೂ ಶಶಿಕಲಾ ದಂಪತಿಗಳ ಪುತ್ರಿಯಾದ ಶೈಲಜಾ ಮೂಲತಃ ಮುಳ್ಳೇರಿಯ ಮಂಡಲದ ಉಕ್ಕಿನಡ್ಕ ಸಮೀಪದ ದಂಬೆಮೂಲೆಯವರಾದ, ಪ್ರಸ್ತುತ ಸುಳ್ಯ ವಲಯದ ಕುದುಪಾಜೆಯಲ್ಲಿ ನೆಲೆಸಿರುವ ಸುಬ್ರಹ್ಮಣ್ಯ ಭಟ್ಟರ ಪತ್ನಿ. ತಾಯಿಯ ತವರುಮನೆಯಲ್ಲಿ ಅಜ್ಜ […]

Continue Reading

ಶ್ರೀಗುರುಗಳ ಅಭಯ ಬದುಕಿನ ಭರವಸೆ – ಅನಸೂಯಾ ಗಣಪತಿ ಅವಧಾನಿ ಹೊನ್ನಾವರ

  ಗೋಮಾತೆಯ ಸೇವೆಯ ಜೊತೆಗೆ ಶ್ರೀಮಠದ ಸೇವೆಯಲ್ಲಿಯೂ ತೊಡಗಿಸಿಕೊಂಡು, ಸಮರ್ಪಣಾ ಭಾವದಿಂದ, ಸದ್ದಿಲ್ಲದ ಸೇವೆಯಲ್ಲಿ ನಿರತರಾಗಿ ಪುನೀತಭಾವ ತಳೆದವರು ಕುಮಟಾ ಮಂಡಲ, ಹೊನ್ನಾವರ ವಲಯದ ಉದಯಗಿರಿಯ ಗಣಪತಿ ಅವಧಾನಿಯವರ ಪತ್ನಿ ಅನಸೂಯಾ ಅವಧಾನಿ. ಕುಮಟಾ ಸಮೀಪ ಅಂತರವಳ್ಳಿಯ ಪರಮೇಶ್ವರ ಹೆಗಡೆ, ಯೆಂಕಿಯಮ್ಮ ಅವರ ಪುತ್ರಿಯಾದ ಅನಸೂಯಾ ಅವಧಾನಿ ಶ್ರೀಮಠದ ಸೇವೆಯನ್ನು ಜೀವನದ ಒಂದು ಭಾಗವಾಗಿ ಪರಿಗಣಿಸಿದವರು.   ಬಾಲ್ಯದಿಂದಲೇ ಹಸುಗಳ ಒಡನಾಟದಲ್ಲಿ ಬೆಳೆದ ಇವರಿಗೆ ಗೋಮಾತೆಯ ಮೇಲೆ ವಿಶೇಷ ಪ್ರೀತಿ. ಮಾತೃತ್ವಮ್ ಯೋಜನೆಯ ಮೂಲಕ ಗೋಮಾತೆಯ ಸೇವೆಯನ್ನು […]

Continue Reading

‘ಗೋಮಾತೆಯ ಸೇವೆಯಲ್ಲಿ ಗುರುಕೃಪೆಯ ಧನ್ಯತೆ’ – ಪ್ರೀತಿಶ್ರೀ ಮಂಜುನಾಥ್ ಉಡುಪಿ

  ” ಶ್ರೀಮಠದ ಸೇವೆ ನಮ್ಮ ಉಸಿರಲ್ಲಿ ಬೆರೆತು ಹೋಗಿದೆ. ಶ್ರೀಮಠದ ಎಲ್ಲಾ ಸೇವೆಗಳಿಗೂ ನಾವು ಕೈಜೋಡಿಸುತ್ತೇವೆ. ಗುರುಸೇವೆ ಮತ್ತು ಗೋಸೇವೆ ನಮ್ಮ ಜೀವನದ ಒಂದು ಭಾಗವಾಗಿದೆ. ಗುರುಕೃಪೆಯೇ ನಮ್ಮ ಬದುಕಿಗೆ ಆಧಾರ. ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಎಲ್ಲವೂ ದೊರಕಿದ್ದು ಗುರು ಅನುಗ್ರಹದಿಂದ ” ಎಂದು ಹೃದಯ ತುಂಬಿ ನುಡಿದವರು ಹೊನ್ನಾವರ ಸಮೀಪದ ಕೊಂಡದಕುಳಿಯ ಪ್ರಸ್ತುತ ಮಂಗಳೂರು ಮಂಡಲ ಉಡುಪಿ ವಲಯ ನಿವಾಸಿಗಳಾಗಿರುವ ಮಂಜುನಾಥ ಹೆಗಡೆಯವರ ಪತ್ನಿ ಪ್ರೀತಿಶ್ರೀ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಸಮೀಪ […]

Continue Reading

ಶ್ರೀಗುರುಸೇವೆಯ ಹಾದಿಯಲ್ಲಿ ನೆಮ್ಮದಿ ಕಂಡ ಬದುಕು – ಪುಷ್ಪಾ ಖಂಡಿಗೆ

” ಗೋಸೇವೆ, ಶ್ರೀಮಠದ ಸೇವೆ ಎಂಬುದು ಪ್ರಸಿದ್ಧಿಗಾಗಿ ಅಲ್ಲ, ಮನದ ನೆಮ್ಮದಿಗಾಗಿ. ಸಾರ್ಥಕ ಭಾವಕ್ಕಾಗಿ. ಶ್ರೀಗುರುಗಳ ಅನುಗ್ರಹದ ಚೈತನ್ಯದ ಬೆಳಕಿನಲ್ಲಿ ಗೋಮಾತೆಯ ಸೇವೆ ಮಾಡಿದೆ. ಇದರಿಂದಾಗಿ ಬದುಕಿನಲ್ಲಿ ನೆಮ್ಮದಿ, ಶಾಂತಿ ನೆಲೆಸಿದೆ. ಸಮಾಜದ ಒಳಿತನ್ನೇ ಬದುಕಿನ ಧ್ಯೇಯವನ್ನಾಗಿರಿಸಿದ ಶ್ರೀಗುರುಗಳ ಮಾರ್ಗದರ್ಶನವೇ ಬದುಕಿಗೆ ಪ್ರೇರಣೆ ” ಎಂದವರು ಮಂಗಳೂರು ಮಂಡಲ ದಕ್ಷಿಣ ವಲಯದ ಕದ್ರಿ ಸಮೀಪದ ಡಾ. ಕೃಷ್ಣ ಭಟ್ ಖಂಡಿಗೆ ಇವರ ಪತ್ನಿ ಪುಷ್ಪಾ. ಪುತ್ತೂರು ಸಮೀಪದ ಕಾನಾವು ನರಸಿಂಹ ಭಟ್, ಶಾರದಮ್ಮ ದಂಪತಿಗಳ ಪುತ್ರಿಯಾದ ಇವರು […]

Continue Reading

” ಗೋಮಾತೆಯ ಸೇವೆಯಲ್ಲಿ ಧನ್ಯತಾಭಾವವಿದೆ ” – ವಿಜಯಲಕ್ಷ್ಮೀ ಕಾಯರ್ಮಜಲು

  ” ಗೋವು ನಮ್ಮ ಜೀವನದ ಅವಿಭಾಜ್ಯ ಅಂಗ. ಗೋವನ್ನು ಆಧರಿಸಿದ ಜೀವನ ಕ್ರಮ ನಮ್ಮ ಸಂಸ್ಕೃತಿಯಲ್ಲಿ ಸೇರಿಕೊಂಡಿದೆ. ಆದರೆ ಇಂದು ಮನೆಗಳಲ್ಲಿ ಗೋವನ್ನು ಸಾಕುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಮಕ್ಕಳಿಗೆ ಗೋವಿನ ಬಗ್ಗೆ ಪ್ರೀತಿ ಇದ್ದರೂ ಅವುಗಳ ಜೊತೆ ಒಡನಾಡುವ ಅವಕಾಶ ದೊರಕುತ್ತಿಲ್ಲ. ಶ್ರೀಗುರುಗಳ ಮಹತ್ವಪೂರ್ಣ ಯೋಜನೆಯಾದ ಮಾತೃತ್ವಮ್ ಮೂಲಕ ಗೋಪ್ರೇಮಿಗಳಿಗೆ ದೇಶೀಯ ಹಸುಗಳ ಸೇವೆ ಮಾಡಲು ಸುಲಭವಾಗಿ ಅವಕಾಶ ಒದಗಿ ಬಂದಿದೆ. ಅದನ್ನು ಸಮರ್ಪಕವಾಗಿ ಬಳಸಿಕೊಂಡು ಗೋಮಾತೆಯ ಸೇವೆಯನ್ನು ಮಾಡಿ ಧನ್ಯತೆಯನ್ನು ಪಡೆಯಬಹುದು ” ಎಂದವರು […]

Continue Reading

‘ ಗೋ ಉತ್ಪನ್ನಗಳ ಬಳಕೆಯಿಂದ ಪರಿಸರ ಸಂರಕ್ಷಣೆ ಸಾಧ್ಯ ‘ – ಕಮಲಾ ಮಂಜುನಾಥ ಹೆಗಡೆ ಕಡತೋಕ

  ” ಗೋಮಾತೆಯ ಒಡನಾಟ ನಮ್ಮಲ್ಲಿ ಸದಾ ಧನಾತ್ಮಕ ಅನುಭೂತಿಯನ್ನು ತುಂಬುತ್ತದೆ. ಗೋಮಾತೆಯ ಉತ್ಪನ್ನಗಳೆಲ್ಲವೂ ಮಂಗಳದಾಯಕ. ಪವಿತ್ರ ಹಾಗೂ ಪರಿಶುದ್ಧತೆಯ ಭಾವದಿಂದ ಅದನ್ನು ಬಳಸಬೇಕು. ದೇಶೀ ಗೋ ಉತ್ಪನ್ನಗಳ ನಿತ್ಯ ಉಪಯೋಗದಿಂದ ನಮ್ಮ ಪರಿಸರವೂ ಪರಿಶುದ್ಧಿಯಿಂದ ಕೂಡಿರುತ್ತದೆ. ಮಾತೃತ್ವಮ್ ಯೋಜನೆಯ ಮೂಲಕ ಶ್ರೀಗುರುಗಳು ತೋರಿದ ಗೋಮಾತೆಯ ಸೇವೆಯಲ್ಲಿ ಕೈಜೋಡಿಸುವ ಅವಕಾಶ ದೊರಕಿದ್ದು ಸುಕೃತ. ಮಾತೃತ್ವಮ್ ಯೋಜನೆಯಿಂದ ದೇಶೀಯ ಹಸುಗಳ ಮಹತ್ವವನ್ನು ಜನರು ಅರಿತು ಕೊಳ್ಳುತ್ತಿದ್ದಾರೆ ” ಎಂದವರು ಕುಮಟಾ ಮಂಡಲ, ಕೆಕ್ಕಾರು ವಲಯದ ಕಡತೋಕ ಹೆಗಡೆ ಮನೆಯ […]

Continue Reading

‘ ಜನಮಾನಸದಲ್ಲಿ ಗೋವಿನ ಬಗ್ಗೆ ಸದ್ಭಾವ ಮೂಡಿಸಿದ ಯೋಜನೆ ಮಾತೃತ್ವಮ್ ‘ : ಶೈಲಜಾ ಮಾಂಬಾಡಿ

” ಸಮಾಜದ ಏಳಿಗೆಯನ್ನೇ ಗುರಿಯಾಗಿರಿಸಿಕೊಂಡು ನಮ್ಮ ಶ್ರೀಗುರುಗಳು ಕೈಗೊಂಡಿರುವ ವಿವಿಧ ಯೋಜನೆಗಳಲ್ಲಿ ಭಾಗಿಯಾಗುವುದು ಮನಸ್ಸಿಗೆ ಆನಂದದಾಯಕ ವಿಚಾರ. ಶ್ರೀಗುರು ಕರುಣೆಯ ಅಮೃತದ ಸವಿ ನಮ್ಮನ್ನು ಮತ್ತಷ್ಟು ಸೇವೆ ಮಾಡಲು ಪ್ರೇರೇಪಿಸುತ್ತದೆ ” ಎಂದವರು ಉಪ್ಪಿನಂಗಡಿ ಮಂಡಲ, ಪುತ್ತೂರು ವಲಯ ಕರ್ಮಲ ನಿವಾಸಿಗಳಾಗಿರುವ ವೇಣುಗೋಪಾಲ ಭಟ್ ಮಾಂಬಾಡಿ ಇವರ ಪತ್ನಿ ಶೈಲಜಾ. ತೆಂಕಬೈಲು ಚಕ್ರಕೋಡಿ ತಿರುಮಲೇಶ್ವರ ಶಾಸ್ತ್ರಿ, ಸರಸ್ವತಿ ದಂಪತಿಗಳ ಪುತ್ರಿಯಾಗಿರುವ ಇವರು ಈಗಾಗಲೇ ಐದು ಗೋವುಗಳ ಪೋಷಣೆಯ ಗುರಿ ತಲುಪಿದ ಮಾಸದ ಮಾತೆಯಾಗಿದ್ದಾರೆ. ” ಶ್ರೀ ಮಠದ […]

Continue Reading

‘ ದುಃಖದ ಕಾರ್ಮೋಡ ಸರಿಸುವ ಶಕ್ತಿ ಗೋಮಾತೆಯ ಸೇವೆಗಿದೆ ‘ : ಯಶೋದಾ ರಾಮಚಂದ್ರ ಭಟ್ ಶಿರಸಿ

  ” ಗೋ ಸೇವೆ, ಶ್ರೀಮಠದ ಸೇವೆ ಮಾಡಲು ಜನ್ಮಾಂತರದ ಪುಣ್ಯ ಬೇಕು. ಶ್ರೀರಾಮದೇವರ ಅನುಗ್ರಹದಿಂದ ನನಗೆ ಅಂತಹ ಸದವಕಾಶ ದೊರಕಿದೆ. ಬದುಕಿನ ನೋವುಗಳಲ್ಲಿ ಸಾಂತ್ವನದ ತಂಪಾಗಿ ಜೊತೆಗೆ ಇದ್ದಿದ್ದು ಶ್ರೀಗುರುಗಳ ಅನುಗ್ರಹ. ಆ ದುಃಖದಿಂದ ಹೊರ ಬರುವಂತೆ ಮಾಡಿ ಜೀವನೋತ್ಸಾಹ ಮೂಡಿಸಿದ್ದು ಗೋಮಾತೆಯ ಸೇವೆ ” ಎಂದವರು ಸಿದ್ದಾಪುರ ಮಂಡಲ ಅಂಬಾಗಿರಿ ವಲಯದ ಶಿರಸಿ ನಿವಾಸಿಗಳಾಗಿರುವ ರಾಮಚಂದ್ರ ಭಟ್ ಅವರ ಪತ್ನಿ ಯಶೋದಾ.   ಹೊನ್ನಾವರ ಕರ್ಕಿಯ ವಿಠಲ ಹೆಗಡೆ, ಲಕ್ಷ್ಮಿ ದಂಪತಿಗಳ ಪುತ್ರಿಯಾದ ಯಶೋದಾ […]

Continue Reading

ಶ್ರೀಗುರುಗಳ ಅನುಗ್ರಹ ಬದುಕಿಗೆ ಶ್ರೀ ರಕ್ಷೆ – ಉಮಾ ವಿಘ್ನೇಶ್ವರ ಕತಗಾಲ್

  ” ಶ್ರೀಗುರು ಕರುಣೆಯ ಅಮೃತದ ಸವಿ ಅನುಭವಿಸಿದವರು ಮಾತ್ರ ಬಲ್ಲರು. ಗುರು ಸ್ಮರಣೆ ಮಾತ್ರದಿಂದಲೇ ಬದುಕಿನ ಅಂಧಕಾರ ದೂರವಾಗುತ್ತದೆ. ಭಾವಪೂರ್ಣ ತನ್ಮಯತೆಯಿಂದ ಪ್ರಾರ್ಥಿಸಿದರೆ ನಮ್ಮ ಪ್ರಾರ್ಥನೆ ಫಲಿಸುತ್ತದೆ ” ಎಂದವರು ಕುಮಟಾ ಮಂಡಲ ಉಪ್ಪಿನಪಟ್ಟಣ ವಲಯದ ಉಮಾ ವಿಘ್ನೇಶ್ವರ ಕತಗಾಲ್ ಹೊನ್ನಾವರ ಸಮೀಪದ ಕಡ್ಲೆ ಗಜಾನನ ರಾಮ ಹೆಗಡೆ ಹಾಗೂ ಭಾಗೀರಥಿ ಗಜಾನನ ಹೆಗಡೆ ದಂಪತಿಗಳ ಪುತ್ರಿಯಾದ ಉಮಾ ಎರಡು ಗೋವುಗಳ ಗುರಿ ತಲುಪಿದ ಮಾಸದಮಾತೆಯಾಗಿದ್ದಾರೆ. ” ಈಶ್ವರಿ ಅಕ್ಕನ ಮಾತುಗಳಿಂದ ಮಾತೃತ್ವಮ್ ಬಗ್ಗೆ ಆಸಕ್ತಿ […]

Continue Reading

ಕರಗಳಲ್ಲಿ ಕಲೆ ಅರಳಿಸುವ ಶ್ರೀಮಾತೆ – ಅರ್ಚನಾ ಸುಬ್ರಹ್ಮಣ್ಯ ಕಾನುಗೋಡು

  ಕಲೆ, ಕಸೂತಿ, ಹೂವಿನ ಹಾರ, ರಂಗೋಲಿಯೇ ಮೊದಲಾದ ಕಲೆಗಳಲ್ಲಿ ವಿಶೇಷ ಪರಿಣತಿ ಪಡೆದು, ವೈಶಿಷ್ಟ್ಯಮಯ ವಿನ್ಯಾಸಗಳಿಂದಲೇ ಅವುಗಳಲ್ಲಿ ತಮ್ಮ ಛಾಪು ಒತ್ತಿರುವ ಅಪರೂಪದ, ಆಕರ್ಷಕ ವ್ಯಕ್ತಿತ್ವದ ಒಡತಿಯಾಗಿರುವ ಮಾಸದ ಮಾತೆ ಅರ್ಚನಾ ಸುಬ್ರಹ್ಮಣ್ಯ. ರಾಮಚಂದ್ರಾಪುರ ಮಂಡಲದ ಕಾನುಗೋಡು ವಲಯದ ಮಾತೃ ಪ್ರಧಾನೆಯೂ ಆಗಿರುವ ಅರ್ಚನಾ ಶಿರಸಿಯ ಸಮೀಪದ ವಡ್ಡಿನಕೊಪ್ಪ ದತ್ತಾತ್ರೇಯ ರಾಯ್ಸದ್ ಹಾಗೂ ಜಯಾ ರಾಯ್ಸದ್ ದಂಪತಿಗಳ ಪುತ್ರಿ. ” ಮದುವೆಯಾದ ಆರಂಭದಲ್ಲಿ ಹಳ್ಳಿಮನೆ ಸೇರಬೇಕಾಗಿ ಬಂತಲ್ಲಾ, ಹಸುಗಳ ಕೆಲಸ, ಹಟ್ಟಿ ಕೆಲಸ ಮಾಡಬೇಕಲ್ಲಾ ಎಂದೆನಿಸುತ್ತಿತ್ತು. […]

Continue Reading

“ಶ್ರೀಮಠದ ಸೇವೆ – ಗೋ ಸೇವೆ ಬದುಕಿನ ಅವಿಭಾಜ್ಯ ಅಂಗ ” – ಸ್ವಾತಿ ಯು. ಯಸ್. ಭಟ್ ಮಿತ್ತೂರು

” ಗೋವು ನಮ್ಮ ಜೀವನದ ಅವಿಭಾಜ್ಯ ಅಂಗ. ಗೋವಿನ ಜೊತೆ ಬಾಂಧವ್ಯವಿಲ್ಲದೆ ನಮ್ಮ ಬದುಕು ಸಂಪೂರ್ಣವಲ್ಲ. ದೇಶಿ ಗೋವಿನ ಉತ್ಪನ್ನಗಳು ನಮ್ಮ ಆರೋಗ್ಯವನ್ನು ಸಂರಕ್ಷಿಸುತ್ತವೆ. ಅನೇಕ ರೋಗಗಳಿಗೂ ಔಷಧವಾಗಿವೆ. ಇಂತಹ ಗೋವುಗಳನ್ನು ಸಂರಕ್ಷಿಸುವ ಮಹತ್ಕಾರ್ಯದ ದೀಕ್ಷೆ ತೊಟ್ಟಿರುವ ನಮ್ಮ ಗುರುಗಳ ಮಹತ್ವಪೂರ್ಣ ಯೋಜನೆಗೆ ಕೈಜೋಡಿಸುವ ಅವಕಾಶ ದೊರಕಿದ್ದು ಪೂರ್ವ ಜನ್ಮದ ಸುಕೃತ ” ಎನ್ನುತ್ತಾರೆ ಮಂಗಳೂರು ಮಂಡಲ, ಮಂಗಳೂರು ಮಧ್ಯ ವಲಯದ ಮಿತ್ತೂರು ಉದಯಶಂಕರ್ ಭಟ್ ಅವರ ಪತ್ನಿ ಸ್ವಾತಿ ಯು ಎಸ್ ಭಟ್. ಮೀಯಪದವು ನಾರಾಯಣ […]

Continue Reading

” ಶ್ರೀಗುರು ಸೇವೆಯಿಂದ ಅನನ್ಯ ಫಲ ದೊರಕುತ್ತದೆ ” ಪರಮೇಶ್ವರಿ ಭಟ್ ಮಾನಸವನ

    ” ಶ್ರೀಮಠದ ಸೇವೆಯಲ್ಲಿ ಅಪಾರ ಶ್ರದ್ದೆ ಇರುವ ಕುಟುಂಬ ನಮ್ಮದು. ಶ್ರೀಗುರುಗಳು ಮೂರು ಬಾರಿ ನಮ್ಮ ಮನೆಗೆ ಚಿತ್ತೈಸಿದ್ದಾರೆ. ಶ್ರೀಮಠದ ವಿವಿಧ ಯೋಜನೆಗಳಲ್ಲಿ ನಮ್ಮ ಮನೆಯ ಸದಸ್ಯರೆಲ್ಲ ಒಂದಲ್ಲ ಒಂದು ರೀತಿಯಲ್ಲಿ ತೊಡಗಿಸಿಕೊಂಡಿದ್ದೇವೆ. ನಮ್ಮವರು ಗುರಿಕ್ಕಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನನ್ನ ಮಗಳು, ಸೊಸೆ ಇಬ್ಬರೂ ಮಾಸದ ಮಾತೆಯರಾಗಿದ್ದಾರೆ. ಶ್ರೀಗುರು ಸೇವೆಯಿಂದ ಅನನ್ಯ ಫಲ ದೊರಕುತ್ತದೆ ಎಂಬುದು ನಮ್ಮ ಜೀವನದ ಅನುಭವ ” ಎಂದವರು ಉಪ್ಪಿನಂಗಡಿ ಮಂಡಲ, ಬೆಳ್ಳಾರೆ ವಲಯದ ಪೆರ್ಲಂಪಾಡಿ ಸಮೀಪದ ಅಲೆಕ್ಕಾಡಿ ಮಾನಸವನದ […]

Continue Reading

” ಗೋಮಾತೆಯ ಸೇವೆ ಪುಣ್ಯಪ್ರದ ” – ಸರಸ್ವತಿ ಸುಬ್ರಹ್ಮಣ್ಯ ಹೆಗಡೆ ಕುಮಟಾ

  ” ಗೋಮಾತೆ ದೇವತೆಗೆ ಸಮಾನ. ಆಕೆಯ ಹಾಲು ಅಮೃತ ತುಲ್ಯ . ಆಕೆಯ ಸೇವೆ ಪುಣ್ಯಪ್ರದ. ಗೋಸೇವೆಯಿಂದ ಬದುಕಿನಲ್ಲಿ ನೆಮ್ಮದಿ ಶಾಂತಿ ನೆಲೆಸಿದೆ ” ಎಂದವರು ಕುಮಟಾ ಮಂಡಲ, ಕುಮಟಾ ವಲಯದ ಪೋಸ್ಟಲ್ ಕಾಲನಿ ನಿವಾಸಿಗಳಾಗಿರುವ ಸುಬ್ರಹ್ಮಣ್ಯ ಹೆಗಡೆಯವರ ಪತ್ನಿ ಸರಸ್ವತಿ ಹೆಗಡೆ   ಕಡತೋಕ ಸುಬ್ರಾಯ ಭಾಗ್ವತ್, ಮಾದೇವಿ ದಂಪತಿಗಳ ಪುತ್ರಿಯಾದ ಸರಸ್ವತಿ ಸುಬ್ರಹ್ಮಣ್ಯ ಹೆಗಡೆಯವರು ಸುಮಾರು ಎರಡು ದಶಕಗಳಿಂದ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡವರು. ಅಂಚೆ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದ ಪತಿ ಸುಬ್ರಹ್ಮಣ್ಯ ಹೆಗಡೆ ನಿವೃತ್ತಿಯ […]

Continue Reading