ಶ್ರೀಗುರುಸೇವೆ ಮತ್ತು ಗೋಸೇವೆಯಲ್ಲಿಯೇ ಬದುಕಿನ ಆನಂದ – ಕುಸುಮಾ ಬಾಲಚಂದ್ರ ಹೆಗಡೆ, ಬಾನ್ಕುಳಿ
‘ ಶ್ರೀಗುರುಚರಣಗಳಲ್ಲಿ ಅಪರಿಮಿತ ಶ್ರದ್ಧೆ ಮತ್ತು ಗೋಮಾತೆಯ ಮೇಲಿನ ಮಮತೆ ಜೊತೆ ಸೇರಿದಾಗ ಜೀವನ ಆನಂದಮಯವಾಗುತ್ತದೆ. ಶ್ರೀಗುರುಗಳ ಅನುಗ್ರಹವಿದ್ದರೆ ಬದುಕು ಬಂಗಾರವಾಗುತ್ತದೆ ‘ ಎಂದು ಭಾವಪೂರ್ಣವಾಗಿ ನುಡಿದವರು, ಸಿದ್ದಾಪುರ ಮಂಡಲ ಬಾನ್ಕುಳಿ ವಲಯದ ಬಾಲಚಂದ್ರ ಹೆಗಡೆಯವರ ಪತ್ನಿ ಕುಸುಮಾ ಹೆಗಡೆ. ಶ್ರೀರಾಮಚಂದ್ರಾಪುರ ಮಠದ ನಿಷ್ಠಾವಂತ ಸೇವಕರಾದ ಅವರಿಗೆ ತಮ್ಮ ಬದುಕಿನ ಪ್ರತಿಯೊಂದು ಯಶಸ್ಸು ಹಾಗೂ ನೆಮ್ಮದಿಯ ಹಿಂದೆ ಶ್ರೀಗುರುಗಳ ದಿವ್ಯ ಆಶೀರ್ವಾದವಿದೆ ಎಂದು ದೃಢವಾದ ನಂಬಿಕೆಯಿದೆ. ಕುಸುಮಾ ಅವರ ಧಾರ್ಮಿಕ ಮತ್ತು ಸಾತ್ತ್ವಿಕ ಬದುಕಿಗೆ ಪ್ರೇರಣೆ […]
Continue Reading