ಮುಜುಂಗಾವು: ಶ್ರೀಭಾರತೀ ವಿದ್ಯಾಪೀಠದಲ್ಲಿ ಶ್ರಾವಣ ಶುದ್ಧ ನವಮಿಯಂದು (21-08-2026) ಓಣಂ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ಸುಂದರವಾದ ಪೂಕಳಂ ರಚಿಸಿದರು. ಓಣಂ ಹಬ್ಬದ ವಿಶೇಷತೆಯಾದ ಓಣಂ ಸದ್ಯವನ್ನು ಹ್ಯಾಪಿ ಹವ್ಯಕ ಕಾಸರಗೋಡು ಇವರ ಪ್ರಾಯೋಜಕತ್ವದಲ್ಲಿ ಆಯೋಜಿಸಲಾಯಿತು. ಎಲ್ಲರೂ ಸಾಂಪ್ರದಾಯಿಕವಾಗಿ ಹಬ್ಬದ ಸಂಭ್ರಮವನ್ನು ಹಂಚಿಕೊಂಡರು. ಮಹಾಬಲಿ ಚಕ್ರವರ್ತಿಯ ಸ್ಮರಣೆಯೊಂದಿಗೆ ಓಣಂನ ಮಹತ್ತ್ವ ಮತ್ತು ಸಂದೇಶವನ್ನು ತಿಳಿಸಲಾಯಿತು.
ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಬ್ರಹ್ಮಣ್ಯ ಭಟ್ ಬೆಜಪ್ಪೆ, ಮುಖ್ಯೋಪಾಧ್ಯಾಯರಾದ ಶ್ಯಾಮ್ ಭಟ್ ದರ್ಬೆಮಾರ್ಗ, ಆಡಳಿತ ಸಮಿತಿಯ ಸದಸ್ಯರು, ಅಧ್ಯಾಪಕರು, ರಕ್ಷಕರು ಹಾಗೂ ಹ್ಯಾಪಿ ಹವ್ಯಕ ಕಾಸರಗೋಡು ಇದರ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ಕಾರ್ಯಕ್ರಮವು ಎಲ್ಲರಲ್ಲೂ ಸಂತೋಷ, ಸೌಹಾರ್ದತೆ ಮತ್ತು ಒಗ್ಗಟ್ಟಿನ ಭಾವನೆಯನ್ನು ಮೂಡಿಸಿತು.
‘ಈ ಓಣಂ ಎಲ್ಲರಿಗೂ ಸಂತೋಷ, ಸಮೃದ್ಧಿ ಮತ್ತು ಒಗ್ಗಟ್ಟನ್ನು ತರಲಿ’ ಎಂಬ ಶುಭಾಶಯದೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಚರಿಸಲಾಯಿತು.




