ಚಂದ್ರಗಿರಿ ವಲಯದಲ್ಲಿ ಪ್ರದೋಷರುದ್ರ ಪಠಣ

  ಮುಳ್ಳೇರಿಯಾ ಹವ್ಯಕ ಮಂಡಲ ಚಂದ್ರಗಿರಿ ವಲಯದಲ್ಲಿನ ಮುಳ್ಳೇರಿಯಾ “ಅನಘಾ” ನಿವಾಸಿ ಶ್ರೀಮತಿ ಗೀತಾಲಕ್ಷ್ಮೀ ಮತ್ತು ಶ್ರೀ ದಿನೇಶ ಭಟ್ ಅವರಲ್ಲಿ ದಿನಾಂಕ 20-12-2018ರಂದು ಪ್ರದೋಷರುದ್ರ ಪಠಣ ನಡೆಯಿತು.   ವಲಯ ವೈದಿಕ ಪ್ರಧಾನ ಪಯ ಶ್ರೀ ನರಸಿಂಹರಾಜರ ನೇತೃತ್ವದಲ್ಲಿ 22 ಮಂದಿ ರುದ್ರಾಧ್ಯಾಯಿಗಳ ಸಹಯೋಗದಲ್ಲಿ ಪ್ರದೋಷರುದ್ರ ಅಭಿಷೇಕ ಪೂಜೆ ಹಾಗೂ ಮಾತೆಯರು ಮಕ್ಕಳು ಜತೆಗೂಡಿ 18 ಮಂದಿ ಭಜನ ರಾಮಾಯಣ ಪಾರಾಯಣವನ್ನು ನೆರವೇರಿಸಿದರು.

Continue Reading

ರಾಮಾಶ್ರಮದಲ್ಲಿ ಭಕ್ತಿಸಂಗೀತದಲೆ

ಬೆಂಗಳೂರು: ನೆಡ್ಲೆ ಶ್ರೀ ರಾಮಚಂದ್ರ ಭಟ್ ಮತ್ತು ಕಲಾರಾಮ ವಿಭಾಗದ ಪ್ರಾಯೋಜಕತ್ವದಲ್ಲಿ ದಿನಾಂಕ 16.12.18ರಂದು ಸಂಜೆ 6.30ರಿಂದ 9 ಗಂಟೆಯವರೆಗೆ ಭಕ್ತಿಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು.   ಶ್ರೀ ಸಿದ್ದಾರ್ಥ ಬೆಳ್ಮಣ್ಣು ಅವರ ಸುಶ್ರಾವ್ಯ ಗಾಯನಕ್ಕೆ ಹಾರ್ಮೋನಿಯಂನಲ್ಲಿ ಪಂಡಿತ್ ಶ್ರೀ ನರಸಿಂಹ ಕುಲಕರ್ಣಿ, ತಬಲದಲ್ಲಿ ಶ್ರೀ ರೂಪಕ್ ಕಲ್ಲೂರ್ಕರ್, ಪಕ್ವಾಜ್ ನಲ್ಲಿ ಶ್ರೀ ಶ್ರೀದತ್ತ ಜೋಶಿ, ತಾಳದಲ್ಲಿ ಶ್ರೀ ಶ್ರೀವತ್ಸ ಸಹಕರಿಸಿದರು.  

Continue Reading

ಏಕಾದಶಿಯ ಹರಿದಿನದಂದು, ಹರಿ ಕಾಪಾಡಿದ ಕಥೆ! ರಾಮ ಪದದ ಪ್ರಸಾದ : ರಮ್ಯಾ ಸುರೇಶ್ ಮಾಬಲಡ್ಕ

ರಾಮಪದ ಕೇಳಿ ಮರಳುತ್ತಿದ್ದುದರಿಂದ, ಸರಗಳ್ಳರು ಕೊರಳಿಗೆ ಕೈಹಾಕಿದ ಅರೆಕ್ಷಣ ಕೊರಳಲ್ಲಿ ಸರವೇ ಇಲ್ಲದಾಯಿತು, ಮೊದಲೂ ಇತ್ತು, ಮತ್ತೆಯೂ ಇತ್ತು, ಆ ದುಷ್ಟರು ಕೊರಳಿಗೆ ಕೈ ಹಾಕಿ ತೆಗೆಯಲು ಯತ್ನಿಸಿದಷ್ಟು ಹೊತ್ತು, ಶ್ರೀ ರಾಮನ ಕೈಯಲ್ಲಿ ಭದ್ರವಾಗಿತ್ತು, ಪವಾಡದ ಕಥೆಯನ್ನು ಓದಿ ನೋಡಿ.   ನವೆಂಬರ್ 3, 2018, ಏಕಾದಶಿಯ ಹರಿದಿನ. ಏಕಾದಶಿಯಂದು ಸಂಜೆ 6 ರಿಂದ 8 ರ ವರೆಗೆ ಶ್ರೀರಾಮಚಂದ್ರಾಪುರಮಠದಲ್ಲಿ ಶ್ರೀಸಂಸ್ಥಾನದವರು ಶಿಷ್ಯರಿಗಾಗಿ ನಡೆಸಿ ಕೊಡುವ ರಾಮಪದ; ರಾಮನೆದುರು, ರಾಮನ ಪದವನ್ನು ಹಾಡುತ್ತಾ, ರಾಮನ ಕಥೆ […]

Continue Reading

ಮೊಬೈಲ್ ಮಾಯೆಯ ಜಾಗದಲ್ಲಿ ಮಠ ಪ್ರವೇಶ ಮಾಡಲಿ – ಶ್ರೀಸಂಸ್ಥಾನ : ಇಂದಿನ ಗುರುಗಳೂ ಆದಿಶಂಕರರು – ವಿದ್ವಾನ್ ಉಮಾಕಾಂತ  ಭಟ್

ಬೆಂಗಳೂರು: ಪೂರ್ವಾಚಾರ್ಯರಾದ ಶ್ರೀರಾಘವೇಂದ್ರಭಾರತೀ ಮಹಾಸ್ವಾಮಿಗಳು ವಿದ್ಯಾಪ್ರೀತರಾಗಿದ್ದರು. ವೇದ, ವೇದಾಂಗಗಳಲ್ಲಿ ಅತಿಶಯವಾದ ಆಸಕ್ತಿಯನ್ನು ಹೊಂದಿದವರಾಗಿದ್ದರು. ಹಾಗಾಗಿ ಪ್ರತಿವರ್ಷ ಅವರ ಆರಾಧನೆಯ ಪುಣ್ಯದಿನದಂದು ನಾಡಿನ ಶ್ರೇಷ್ಠ ವಿದ್ವಾಂಸರೊಬ್ಬರಿಗೆ ಪುರಸ್ಕಾರ ನೀಡಿ ‘ದೊಡ್ಡ ಗುರುಗಳನ್ನು’ ನೆನಪಿಸಿಕೊಳ್ಳುವ ಕಾರ್ಯ ನಡೆಯುತ್ತಿದೆ ಎಂದು ಶ್ರೀಸಂಸ್ಥಾನದವರು ಹೇಳಿದರು.   ಗಿರಿನಗರದ ಶ್ರೀರಾಮಾಶ್ರಮದಲ್ಲಿ ನಡೆದ ಬ್ರಹ್ಮೈಕ್ಯ ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಂದ್ರಭಾರತೀ ಮಹಾಸ್ವಾಮಿಗಳ ಆರಾಧನಾ ಮಹೋತ್ಸವದಲ್ಲಿ ದಿವ್ಯಸಾನ್ನಿಧ್ಯವಹಿಸಿ, ಕೆರೆಕೈ ಉಮಾಕಾಂತ ಭಟ್ಟರಿಗೆ ‘ಪಾಂಡಿತ್ಯ ಪುರಸ್ಕಾರ’ವನ್ನು ಅನುಗ್ರಹಿಸಿ ಮಾತನಾಡಿದ ಶ್ರೀಸಂಸ್ಥಾನದವರು, ವಿದ್ವಾನ್ ಉಮಾಕಾಂತ ಭಟ್ಟರು ಮೈಸೂರಿನ ರಾಮಭದ್ರಾಚಾರ್ಯರಲ್ಲಿ ಸಂಪೂರ್ಣ ಅಭ್ಯಾಸವನ್ನು ಮಾಡಿದವರು. ನಾವು ಕೂಡ […]

Continue Reading

ಶ್ರೀರಾಮಾಶ್ರಮ ಬೆಂಗಳೂರಿನಲ್ಲಿ ೧೫೦ ಜನ ರುದ್ರಾಧ್ಯಾಯಿಗಳ ಕೂಡುವಿಕೆಯಲ್ಲಿ ಶ್ರೀಕರಾರ್ಚಿತ ದೇವರಿಗೆ ಮಹಾರುದ್ರ ಪಠಣ ಸಮರ್ಪಣೆ

Continue Reading

ಕನ್ಯಾಸಂಸ್ಕಾರ – ಒಂದು ಸ್ವಾನುಭವ : ಕು. ಅಂಕಿತಾ ನೀರ್ಪಾಜೆ

ಹೆಣ್ಣೊಬ್ಬಳು ಕಲಿತರೆ ಶಾಲೆಯೊಂದು ತೆರೆದಂತೆ! ಹೆಣ್ಣೊಬ್ಬಳು ಸಂಸ್ಕಾರವಂತಳಾದರೆ ಸಮಾಜವೇ ಸಂಸ್ಕಾರ ಪಡೆದಂತೆ! ಈ ಮಾತು ಹಿರಿಯರದು. ಆದರೆ ಅದು ಇಂದಿಗೂ ಎಂದೆಂದಿಗೂ ಪ್ರಸ್ತುತವೇ! ಕೂಡು ಕುಟುಂಬದ ಚಿಂತನೆ ಬದಲಾಗಿರಬಹುದು. ಹೆಣ್ಣಿನ ಸ್ಥಾನ-ಮಾನಗಳು, ಪುರುಷರಿಗೆ ಸಮಾನವೆನ್ನುವ ಮನೋಭಾವ ಬೆಳೆದಿರಬಹುದು. ಅದು ಮಹಿಳೆಯ ಜವಾಬ್ದಾರಿಗಳನ್ನು ಹೆಚ್ಚಿಸಿದೆ ಮತ್ತು ಎಲ್ಲಾ ದಿಕ್ಕುಗಳಿಂದ ಎಸೆಯುವ ಬಾಣಗಳನ್ನು ಎದುರಿಸುವ ಮನೋಬಲ, ಚೈತನ್ಯ, ವಿವೇಚನೆಯಿರಬೇಕಾದುದು ಅನಿವಾರ್ಯ ಎಂದು ಹೇಳಲಾಗುತ್ತದೆ. ತಪ್ಪು ಒಪ್ಪುಗಳನ್ನು ಅರ್ಥೈಸಿಕೊಳ್ಳುವ ಅರಿವಿರಬೇಕು, ಸರಿಯಾದ ಪಥದಲ್ಲಿ ನಡೆಯುವ ಸಾಮರ್ಥ್ಯ ಬೇಕು, ಮಕ್ಕಳಿಗೂ ಉತ್ತಮ ನಡವಳಿಕೆ […]

Continue Reading

ಸ್ವಾನುಭವ – ಯು. ಗೋಪಾಲಕೃಷ್ಣ ಭಟ್ಟ (ಯು.ಜಿ.ಕೆ) 

ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀಮಹಾಸ್ವಾಮಿಗಳವರ ದಿವ್ಯಚರಣಾರವಿಂದಗಳಲ್ಲಿ ಮಂಗಳೂರು ಮಂಡಲಾಂತರ್ಗತ, ಮಂಗಳೂರು ದಕ್ಷಿಣವಲಯದ ಪಡೀಲುಘಟಕ (ಸಂ.೧೦೦೧) ವ್ಯಾಪ್ತಿಯ ನಿವಾಸಿಯಾದ ಗೋಪಾಲಕೃಷ್ಣ ಭಟ್ಟನು ಮಾಡಿಕೊಳ್ಳುವ ವಿಜ್ಞಾಪನೆಗಳು. ಪೂಜ್ಯರೇ.   ನಾನು ೨೦೧೫ನೇ ಇಸವಿಯ ಕೊನೆಯ ಭಾಗದಲ್ಲಿ ಅರ್ಬುದ ವ್ಯಾಧಿಗೆ ತುತ್ತಾದ ಸಂಗತಿಯನ್ನೂ, ದೀರ್ಘಾವಧಿ ಚಿಕಿತ್ಸೆಯ ಕಾರಣದಿಂದ ಗುರಿಕ್ಕಾರ ಜವಾಬ್ದಾರಿಯನ್ನು ನಿರ್ವಹಣೆ ಮಾಡಲಾಗದ ಸ್ಥಿತಿಯನ್ನೂ ವಲಯಾಧ್ಯಕ್ಷರ ಮೂಲಕ ಬಿನ್ನವಿಸಿಕೊಂಡಿದ್ದೆ. ಆ ಬಳಿಕ, ಶಸ್ತ್ರಚಿಕಿತ್ಸೆಗೆ ಒಳಗಾಗುವ ಮೊದಲು ಶ್ರೀಮಠಕ್ಕೆ (ಗಿರಿನಗರ) ಬಂದು ಶ್ರೀಕರಾರ್ಚಿತ ದೇವರುಗಳ ಸನ್ನಿಧಿಯಲ್ಲಿ ಆರೋಗ್ಯ ಪ್ರಾಪ್ತಿಗಾಗಿ ಪ್ರಾರ್ಥನೆಯನ್ನು […]

Continue Reading

ಗೋಸ್ವರ್ಗದಲ್ಲಿ ಗೋಮಾತೆಯನ್ನು ಪೂಜಿಸಿ ಗೋಗ್ರಾಸವಿತ್ತ ಮಾತೆಯರು

ಭಾನ್ಕುಳಿ: ಸಹಸ್ರ ಗೋವುಗಳು ಸ್ವಚ್ಛಂದವಾಗಿ ವಿಹರಿಸುವ ಗೋಸ್ವರ್ಗದಲ್ಲಿ, ಸಿದ್ದಾಪುರ ಮಂಡಲದ ಮಾತೃವಿಭಾಗದ ಮಾತೆಯರು 2.12.2018ರಂದು ಗೋಪೂಜೆ, ಗೋಗ್ರಾಸ ಮತ್ತು ಶ್ರೀರಾಮದೇವರಿಗೆ ದೀಪೋತ್ಸವ ಸೇವೆಗಳನ್ನು ನೆರವೇರಿಸಿದರು. ಬಳಿಕ ಸಾಮೂಹಿಕವಾಗಿ ಭಜನರಾಮಾಯಣ ಪಠಿಸಿದರು.

Continue Reading

ಮಂಗಲಗೋಯಾತ್ರೆಯ ಸ್ಮರಣಸಂಚಿಕೆ ‘ಸನ್ಮಂಗಲ’ ಶ್ರೀಸಂಸ್ಥಾನದವರಿಂದ ಲೋಕಾರ್ಪಣೆ

ಬೆಂಗಳೂರು: ಮಂಗಲಗೋಯಾತ್ರೆಯ ವಿವರಗಳನ್ನೊಳಗೊಂಡ ‘ಸನ್ಮಂಗಲ’ ಗಿರಿನಗರದ ಶ್ರೀರಾಮಾಶ್ರಮದಲ್ಲಿ ಇಂದು, 1.12.2018 ರಂದು, ಲೋಕಾರ್ಪಣೆಗೊಂಡಿತು.   ಭಾರತೀಯ ಗೋತಳಿಗಳ ಸಂರಕ್ಷಣೆಗಾಗಿ ಶ್ರೀಸಂಸ್ಥಾನದವರು ಯೋಜಿಸಿದ ಮಹತ್ತಾದ ಹಲವು ಕಾರ್ಯಗಳಲ್ಲಿ ಗೋಯಾತ್ರೆಗಳು ಪ್ರಮುಖವಾದುವು. ಗೋವಿನ ಕಾರಣದಿಂದ ಆರಂಭವಾದ ಮೊದಲ ಸ್ವಾತಂತ್ರ್ಯಸಂಗ್ರಾಮಕ್ಕೆ ಮಂಗಲಪಾಂಡೆಯ ಸ್ಮರಣಾರ್ಥ ‘ಮಂಗಲಗೋಯಾತ್ರೆ’ ಎಂದ ಕರೆಯಲ್ಪಟ್ಟ ಈ ಯಾತ್ರೆಯು 2016 ನವೆಂಬರಿನಿಂದ 2017 ಜನವರಿಯ ವರೆಗೆ ರಾಜ್ಯಾದ್ಯಾಂತ ಸಂಚರಿಸಿ, 2017 ಜನವರಿ 27ರಿಂದ 29ರ ತನಕ ಮಂಗಳೂರಿನ ಮಂಗಲಭೂಮಿಯಲ್ಲಿ ಮಹಾಮಂಗಲದೊಂದಿಗೆ ಮುಕ್ತಾಯಗೊಂಡಿತು. ಅದರ ನೆನಪನ್ನು ಶಾಶ್ವತವಾಗಿಡುವ ನಿಟ್ಟಿನಲ್ಲಿ ಮಂಗಲಯಾತ್ರೆಯ ಸ್ಮರಣಸಂಚಿಕೆ […]

Continue Reading

ಮಕ್ಕಳಿಂದ ಮಾತಾಪಿತರಿಗೆ ಪೂಜೆ : ಶ್ರೀಭಾರತೀ ವಿದ್ಯಾಪೀಠದಲ್ಲಿ ಮಾದರಿ ಕಾರ್ಯಕ್ರಮ

ಮುಜುಂಗಾವು: ಇಲ್ಲಿನ ಶ್ರೀಭಾರತೀ ವಿದ್ಯಾಪೀಠದ ಮಕ್ಕಳಿಂದ ಮಾತಾಪಿತೃ ಪೂಜೆ ನೆರವೇರಿತು. ವಿದ್ಯಾಪೀಠ ಶಾಲೆಯಲ್ಲಿ 26.11.2018ರ ಸೋಮವಾರರಂದು ನಡೆದ ಕಾರ್ಯಕ್ರಮವು ದೀಪಪ್ರಜ್ವಲನ, ಗಣಪತಿ ಸ್ತುತಿ, ಗುರುವಂದನೆಗಳೊಂದಿಗೆ ಆರಂಭವಾಯಿತು. ಬಳಿಕ ಮಕ್ಕಳು ಅವರವರ ಮಾತಾಪಿತೃಗಳಿಗೆ ಆರತಿ ಅಕ್ಷತೆಯೊಂದಿಗೆ ಪೂಜೆ ನೆರವೇರಿಸಿದರು. ಅನಂತರ ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಬಳಿಕ ಮಾತನಾಡಿದ ಆಡಳಿತಾಧಿಕಾರಿ ಶ್ರೀ ಶ್ಯಾಮ ಭಟ್ ದರ್ಬೆಮಾರ್ಗ, ‘ಇಳೆಗೆ ಇಳಿಸಿದ ನಮ್ಮ ಮಾತಾಪಿತರು ಜಗತ್ತಿನ ತಂದೆತಾಯಿಯರಾದ ಪಾರ್ವತಿಪರಮೇಶ್ವರರಿಗೆ ಸಮಾನರು. ವೃದ್ಧಾಪ್ಯದಲ್ಲಿ ಅವರ ಬೇಕುಬೇಡಗಳನ್ನು ನಾವು ಪೂರೈಸಿ ಸೇವೆಯನ್ನು ಮಾಡಬೇಕು’ ಎಂದು ಕಿವಿಮಾತು […]

Continue Reading

ಗೋವಾ ಹವ್ಯಕ ವಲಯದಲ್ಲಿ ಕಾರ್ತಿಕ ದೀಪೋತ್ಸವ; ಕುಂಕುಮಾರ್ಚನೆ, ಅಷ್ಟಾವಧಾನ ಸೇವೆಯ ಜೊತೆಗೆ ಆಹಾರೋತ್ಸವದ ಸಡಗರ

ಗೋವಾ: ಗೋವಾ ಹವ್ಯಕವಲಯವು ಕಾರ್ತಿಕ ದೀಪೋತ್ಸವವನ್ನು ಬಹಳ ವಿಶೇಷವಾಗಿ ಆಚರಿಸಿದೆ. ದಿನಾಂಕ 24.11.2018ರ ಶನಿವಾರ ಮಡಗಾಂವ್ ನ ಗಜಾನನ ಮಹಾರಾಜರ ಮಠದಲ್ಲಿ ಹಮ್ಮಿಕೊಂಡಿದ್ದ ಕಾರ್ತಿಕ ದೀಪೋತ್ಸವದ ಪ್ರಯುಕ್ತ ಕುಂಕುಮಾರ್ಚನೆ, ಅಷ್ಟಾವಧಾನ ಸೇವೆ, ದೀಪಾರಾಧನೆ ಹಾಗೂ ಆಹಾರೋತ್ಸವಗಳನ್ನು ಏರ್ಪಡಿಸಲಾಗಿತ್ತು.   ಗುರುವಂದನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ವಲಯದ ಮಾತೃ ವಿಭಾಗ ಪ್ರಧಾನೆ ಶ್ರೀಮತಿ ಮಮತಾ ಹೆಗಡೆ ಹಾಗೂ ಕಾರ್ಯದರ್ಶಿ ಶ್ರೀಮತಿ ರೇಖಾ ಹೆಗಡೆ ಇವರ ನೇತೃತ್ವದಲ್ಲಿ ಹದಿನೈದು ಮಹಿಳೆಯರು ಕುಂಕುಮಾರ್ಚನೆ ನಡೆಸಿದರು. ವಲಯದ ಸಂಸ್ಕಾರ ಪ್ರಧಾನ ಶ್ರೀ ಮಹಾಬಲ ಭಟ್ […]

Continue Reading

ಈ ಸಲದ ಧರ್ಮಭಾರತಿಯಲ್ಲಿ…

ಅಯ್ಯಪ್ಪ, ಅಯ್ಯನಾರ್, ಅಯ್ಯನ್, ಬೇಟೆ ಅಯ್ಯಪ್ಪ ಎಂದೆಲ್ಲ ಗುರುತಿಸಿಕೊಳ್ಳುವ; ವೈದಿಕಕ್ಕೂ ಜನಪದಕ್ಕೂ ಸಲ್ಲುವ ದೈವ ಶಾಸ್ತಾರನ ಕುರಿತು ಡಾ. ಮನೋರಮಾ ಬಿ. ಎನ್. ಅವರ ಮಾಹಿತಿಪೂರ್ಣ ಬರಹ.   ಆಧುನಿಕ ಕಾಲದಲ್ಲಿ, ಮಹಿಳೆಯರ ಆರೋಗ್ಯ ಸಮಸ್ಯೆಗಳಲ್ಲಿ ಮುಂಚೂಣಿಯಲ್ಲಿರುವ PCOS ಬಗ್ಗೆ ಡಾ.ಸುವರ್ಣಿನೀ ಕೊಣಲೆಯವರ ಲೇಖನ.   ಪ್ರಜೆ ಹೊರಟ. ಮಾರಾಪು ಕಟ್ಟಿಕೊಂಡು. ರಾಜನನ್ನು ಕಾಣಲು. ಗೊತ್ತಿಲ್ಲದ ದಾರಿಯಲ್ಲಿ ಹದಿಮೂರು ದಿನದ ಪಯಣ. ನಡೆದೇ ನಡೆದನವ‌. ಮುಂದೇನಾಯಿತು? ಶ್ರೀಗೋಪಾಲಕೃಷ್ಣ ಕುಂಟಿನಿಯವರ ಕಥೆಯಲ್ಲಿ. ದಿವ್ಯಸನ್ನಿಧಿಯಲ್ಲಿ ಶ್ರೀಸಂಸ್ಥಾನದವರ ಪ್ರವಚನಾಮೃತ – ನಲಿವಿನ […]

Continue Reading

ತಾಯಿ ಶರಾವತಿಯಲ್ಲಿಯ ದ್ವೀಪ ಹೈಗುಂದದ ಮಾತೆ ದುರ್ಗಾಂಬಾ ಅಮ್ಮನವರಿಗೆ ಅಲ್ಲಿಬೆಳೆಯುವ ಅಪರೂಪದ ಪರಿಮಳ ಸಣ್ಣಕ್ಕಿಯ ಭತ್ತದತೆನೆಯ ಅಲಂಕಾರ

Continue Reading

ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ ಭಟ್ಟ ಸಂಪ್ರತಿಷ್ಠಾನದಿಂದ ಶ್ರೀಮದ್ವಾಲ್ಮೀಕಿರಾಮಾಯಣ ಪಾರಾಯಣ

ಉಪ್ಪಿನಂಗಡಿ: ಶ್ರೀಸಂಸ್ಥಾನದವರ ಮಹೋನ್ನತ ಸಂಕಲ್ಪ ಹಾಗೂ ಆಶಯದಂತೆ ನವಾಹ ಪದ್ಧತಿಯಂತೆ ನಡೆಯುತ್ತಿರುವ ಶ್ರೀಮದ್ವಾಲ್ಮೀಕಿ ರಾಮಾಯಣದ ಮೂರು ಪಾರಾಯಣವು ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ ಭಟ್ಟ ಸಂಪ್ರತಿಷ್ಠಾನದ ಸಹಯೋಗದಲ್ಲಿ ನ. 12ರಂದು ಆರಂಭಗೊಂಡು ನ. 20ರಂದು ಸಮಾಪನಗೊಂಡಿತು.   ನ. 12ರಂದು ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ರಮೇಶ ಭಟ್ ಬೈಪದವು ಅವರ ಮನೆಯಲ್ಲಿ ಪಾರಾಯಣ ಪ್ರಾರಂಭಗೊಂಡಿತು. ನ. 13ರಂದು ವೇ.ಬ್ರ. ಬಡಜ ಶ್ರೀ ಜಯರಾಮ ಜೋಯಿಸ, 14ರಂದು ಸಂಪ್ರತಿಷ್ಠಾನದ ಕಾರ್ಯದರ್ಶಿ ಶ್ರೀ ಎಮ್.ಎಚ್. ರಮೇಶ ಭಟ್, 15ರಂದು ಶ್ರೀ […]

Continue Reading

ಮಾಲೂರು ಶ್ರೀ ರಾಘವೇಂದ್ರ ಗೋಆಶ್ರಮದಲ್ಲಿ ಉತ್ಥಾನ ದ್ವಾದಶೀ ಆಚರಣೆ : ತುಳಸೀ ಪೂಜೆ ಸಂಪನ್ನ

ಮಾಲೂರು: ಇಲ್ಲಿನ ಗಂಗಾವತಿಯ ಶ್ರೀ ರಾಘವೇಂದ್ರ ಗೋಆಶ್ರಮದಲ್ಲಿ ಉತ್ಥಾನದ್ವಾದಶಿಯ ಪರ್ವ ದಿನದಂದು ತುಳಸೀ ಪೂಜೆ ಸಂಪನ್ನಗೊಂಡಿತು. ತುಳಸೀ ವಿವಾಹದ ಅಂಗವಾಗಿ ನವೆಂಬರ್ 20, ಮಂಗಳವಾರ ಶ್ರೀ ಲಕ್ಷ್ಮೀಶ ಇವರ ನೇತೃತ್ವದಲ್ಲಿ ತುಳಸೀ ಪೂಜೆಯನ್ನು ನೆರವೇರಿಸಲಾಯಿತು.   ಈ ಕಾರ್ಯಕ್ರಮದಲ್ಲಿ ಶ್ರೀರಾಮಚಂದ್ರಾಪುರಮಠದ ಗೋಬಂಧು ವಿಭಾಗದ ಸಹಕಾರ್ಯದರ್ಶಿಗಳಾದ ಶ್ರೀ ಶ್ರೀಕಾಂತ್ ಹೆಗಡೆ ಸಹಿತ ಗೋಶಾಲೆಯ ಹಲವಾರು ಕಾರ್ಯಕರ್ತರು ಹಾಗೂ ಗೋ ಪ್ರೇಮಿಗಳು ಉಪಸ್ಥಿತರಿದ್ದರು.

Continue Reading

ಬೆಂಗಳೂರು ಉತ್ತರ ಮಂಡಲದಲ್ಲಿ ಕಾರ್ತಿಕ ದೀಪೋತ್ಸವ ಹಾಗೂ ಭಜನಾಕಾರ್ಯಕ್ರಮ

ಬೆಂಗಳೂರು: ಬೆಂಗಳೂರು ಉತ್ತರ ಮಂಡಲದ ಕಾರ್ಯದರ್ಶಿ ಶ್ರೀ ಗೋಪಾಲಕೃಷ್ಣ ಅವರ ಮನೆ ‘ಸಾಕ್ಷಾತ್ಕಾರ ಕಲಾನಿಕೇತನದಲ್ಲಿ’ ಕಾರ್ತಿಕ ದೀಪೋತ್ಸವ ಹಾಗೂ ಭಜನಾ ಕಾರ್ಯಕ್ರಮ ನವೆಂಬರ್ 22ರಂದು ಯಶಸ್ವಿಯಾಗಿ ನಡೆಯಿತು.   ಮಂಡಲದ ಅಧ್ಯಕ್ಷರಾದ ಶ್ರೀ ಜಿ. ಜಿ. ಹೆಗಡೆಯವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಕಾರ್ತಿಕಮಾಸದ ಶುಭದಿನದಂದು ಮಕ್ಕಳೊಂದಿಗೆ ಇಂತಹ ಕಾರ್ಯಕ್ರಮದಲ್ಲಿ ಸೇರಿದ್ದೇವೆ. ಇಂತಹ ಕಾರ್ಯಕ್ರಮದಿಂದ ಮಕ್ಕಳ ಕೌಶಲ್ಯಕ್ಕೆ ಅವಕಾಶ ನೀಡಿದಂತಾಗುವುದು ಅಲ್ಲದೇ ನಮ್ಮ ಸಂಘಟನೆ ಬಲಗೊಳ್ಳುವುದು, ಎಂದ ಅವರು ಕಾರ್ಯಕ್ರಮ ಯಶಸ್ವಿಯಾಗಲೆಂದು […]

Continue Reading