ಶ್ರೀರಾಮಾಶ್ರಮದಲ್ಲಿ ವೈಭವದ ಸೀತಾರಾಮ ಕಲ್ಯಾಣೋತ್ಸವ
ಗಿರಿನಗರ: ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಸ್ಥಾಪನೆಯ ಸಂಕಲ್ಪಸಿದ್ಧಿಗಾಗಿ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿಯವರು ನಡೆಸುತ್ತಿರುವ ಧಾರಾ ರಾಮಾಯಣ ಪ್ರವಚನದ ಅಂಗವಾಗಿ ಜುಲೈ ೧೦ರಂದು ಶ್ರೀರಾಮಾಶ್ರಮದಲ್ಲಿ ವೈಭವದ ಸೀತಾರಾಮ ಕಲ್ಯಾಣೋತ್ಸವ ಆಯೋಜಿಸಲಾಗಿದೆ. ಸೀತಾರಾಮ ಕಲ್ಯಾಣದೊಂದಿಗೆ ಸ್ವಾಮೀಜಿಯವರ ಪ್ರವಚನದ ಬಾಲಕಾಂಡ ಸಮಾಪ್ತಿಗೊಳ್ಳಲಿದ್ದು, ಈ ತಿಂಗಳ ೧೫ರಿಂದ ಅಯೋಧ್ಯಾಕಾಂಡ ಪ್ರವಚನ ಆರಂಭವಾಗಲಿದೆ. ೧೦ರಂದು ಸಂಜೆ ೬ಕ್ಕೆ ಕಲ್ಯಾಣೋತ್ಸವ ಪೂರ್ವವಿಧಿಗಳು ಆರಂಭವಾಗಲಿದ್ದು, ೭ಕ್ಕೆ ಮುಹೂರ್ತ ವಾಚನ ಮತ್ತು ವೈದಿಕರಿಂದ ಮಂಗಲಾಷ್ಟಕ ಸೇರಿದಂತೆ ಧಾರ್ಮಿಕ ವಿಧಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಅಮೃತವರ್ಷಿಣಿ ಸಂಗೀತ ವಿದ್ಯಾಲಯದ ವಿದುಷಿ […]
Continue Reading