ಮಾಲೂರು ಗೋಶಾಲೆಯಲ್ಲಿ ಮಕರ ಸಂಕ್ರಾಂತಿ : ಗೋವುಗಳಿಗೆ ವಿಶೇಷ ಪೂಜೆ

ಗೋವು

ಮಾಲೂರು: ಮಕರ ಸಂಕ್ರಾಂತಿ ಹಬ್ಬದ ದಿನ
ಕೆ. ಆರ್. ಪುರಂ, ಹೊಸಕೋಟೆ, ಮಾಲೂರು ಭಾಗದ ನೂರಾರು ಗೋಭಕ್ತರು ಮಾಲೂರಿನ ಶ್ರೀ ರಾಘವೇಂದ್ರ ಗೋಆಶ್ರಮಕ್ಕೆ ಆಗಮಿಸಿದ್ದರು.
ಎಲ್ಲರೂ ಸೇರಿ ಗೋಶಾಲೆಯ ಗೋವುಗಳಿಗೆ ವಿಶೇಷ ಗೋಪೂಜೆಯನ್ನು ಸಲ್ಲಿಸಿ, ಮೇವು ನೀಡಿದರು.

 

ಗೋಶಾಲೆಗೆ ಆರ್ಥಿಕ ಸಹಾಯ:
ಬೆಂಗಳೂರಿನ ಗಾಯತ್ರಿ ಪರಿವಾರದ ನೂರಕ್ಕೂ ಹೆಚ್ಚಿನ‌ ಜನರ ತಂಡವು ಗೋಪ್ರೇಮಿಗಳಿಂದ ಸಂಗ್ರಹಿಸಿದ ಒಂದು ಲಕ್ಷಕ್ಕೂ ಅಧಿಕ ಮೊತ್ತವನ್ನು ಗೋಶಾಲೆಗೆ ಹಸ್ತಾಂತರಿಸಿದರು. ಅನಂತರ
ಹನುಮನ ಗುಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ, ಭಜನೆಯನ್ನು ನೆರವೇರಿಸಿದರು. ಇದರೊಂದಿಗೇ ಮಕ್ಕಳಿಗೆ ಆಟೋಟಗಳನ್ನೂ ಆಯೋಜಿಸಿ ಸಂಭ್ರಮಿಸಿದರು.

 

ಕಾರ್ಯಕ್ರಮದಲ್ಲಿ ಬೆಂಗಳೂರು ಗಾಯತ್ರಿ ಪರಿವಾರದ ಶ್ರೀ ಅನಿಲ್ ಪಾಂಡ್ಯ, ಶ್ರೀ ವಿನೋದ್ ವೋರ, ಶ್ರೀ ರಾಘವೇಂದ್ರ ಗೋಆಶ್ರಮ ನಿರ್ವಹಣಾ ಸಮಿತಿ ಅಧ್ಯಕ್ಷ ಶ್ರೀ ಮುರಳಿ ಕೃಷ್ಣ ಹೊಸಕೋಟೆ, ಕೋಶಾಧಿಕಾರಿ ಶ್ರೀ ಕೃಷ್ಣ ಭಟ್ ಟಿ., ಸದಸ್ಯರಾದ ಶ್ರೀ ಚಂದ್ರಶೇಖರ್, ಶ್ರೀ ಶಿವಕುಮಾರ್, ಶ್ರೀ ಶಶಿಧರ, ಶ್ರೀ ಕಮಲಾಕರ, ಶ್ರೀ ಲಕ್ಷ್ಮೀಶ, ಶ್ರೀ ರಘು, ಗೋಶಾಲೆಯ ವಿಶೇಷ ಕರ್ತವ್ಯಾಧಿಕಾರಿ, ರಾಮಚಂದ್ರಾಪುರಮಠದ ಮಾಧ್ಯಮ ಕಾರ್ಯದರ್ಶಿ ಶ್ರೀ ರಾಮಚಂದ್ರ ಅಜ್ಜಕಾನ, ಆಂದೋಲನ ವಿಭಾಗದ ಶ್ರೀ ತಿರುಮಲೇಶ್ವರ ಪ್ರಸನ್ನ, ಶ್ರೀ ನಿಶಾಂತ ನಾರಾಯಣ, ಶ್ರೀ ಚಿನ್ಮಯ ಕೆ. ಹೆಗಡೆ, ಮತ್ತಿತರರು ಉಪಸ್ಥತರಿದ್ದರು.

 

Author Details


Srimukha

Leave a Reply

Your email address will not be published. Required fields are marked *