ಗುಂಪೆ ವಲಯದ ಶಿಷ್ಯ ಬಾಂಧವರ ಭಜನಾ ಕಾರ್ಯಕ್ರಮ

ಇತರೆ

ಮುಳ್ಳೇರಿಯ: ಶ್ರೀ ಮಜ್ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ದಿವ್ಯ ಮಾರ್ಗದರ್ಶನದಲ್ಲಿ ಕಾರ್ಯಾಚರಿಸುತ್ತಿರುವ ಪೊಸಡಿ ಗುಂಪೆಯ ಶ್ರೀ ಶಂಕರ ಧ್ಯಾನ ಮಂದಿರದಲ್ಲಿ ಪ್ರತೀ ತಿಂಗಳ ಪರ್ವ ದಿನಗಳಲ್ಲಿ ನಡೆಸುವ ಭಜನಾ ಕಾರ್ಯಕ್ರಮವನ್ನು ಗೋ ದಿನದ ಅಂಗವಾಗಿ ಜ.೧೪ ರಂದು ಗುಂಪೆ ವಲಯದ ಶಿಷ್ಯ ಬಾಂಧವರ ನೇತೃತ್ವದಲ್ಲಿ ನಡೆಸಲಾಯಿತು.

ಮುಳ್ಳೇರಿಯ ಮಂಡಲ ಸಂಘಟನಾ ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ ಧ್ವಜಾರೋಹಣ ಗೈದರು. ಗುರುವಂದನೆ,  ರಾಮತಾರಕ ಜಪದೊಂದಿಗೆ ಆರಂಭವಾದ ಭಜನಾ ಕಾರ್ಯಕ್ರಮವನ್ನು ಶಾಂತಿ ಮಂತ್ರದೊಂದಿಗೆ ಕೊನೆಗೊಳಿಸಲಾಯಿತು.

ವಲಯದ ಬಿಂದು ಸಿಂಧು ವಿಭಾಗದ ಸಂಚಾಲಕರಾದ ಗುಂಪೆ ಶಂಕರನಾರಾಯಣನ್, ವಿನಯಶಂಕರ ಚೆಕ್ಕೆಮನೆ, ಪುಟಾಣಿ ಶ್ರೀರಾಮ ಶರ್ಮಾ ಎಡಕ್ಕಾನ ಮೊದಲಾದ  ಗುರು ಭಕ್ತರು ಕಾರ್ಯಕ್ರಮಲ್ಲಿ ಪಾಲ್ಗೊಂಡರು.

Author Details


Srimukha

Leave a Reply

Your email address will not be published. Required fields are marked *