ಸಮರ್ಥ್ ರಾವ್ ಎಂಬ ಚೆಸ್ ರಂಗದ ಅದ್ಭುತ!

ಹುಟ್ಟುವ ಸಂದsದಲ್ಲೇ ಸೆಲೆಬ್ರಲ್ ಪಾಲ್ಸಿ ಎಂಬ ಅಂಗವೈಕಲ್ಯತೆಗೆ ತುತ್ತಾದ ಪರಿಣಾಮ ಸ್ವತಂತ್ರವಾಗಿ ನಿಲ್ಲಲು ಅಥವಾ ನಡೆಯಲು ಸಾಧ್ಯವಿಲ್ಲ. ದೇಹದ ಸಮತೋಲನ ಇಲ್ಲದ ಇವರಿಗೆ ೭೫% ಕ್ಕಿಂತಲೂ ಅಧಿಕ ಅಂಗವೈಕಲ್ಯತೆ ಆವರಿಸಿದೆ. ದೈನಂದಿನ ಚಟುವಟಿಕೆ ನಡೆಸಲು ಕೂಡ ಬೇರೆಯವರನ್ನು ಅವಲಂಬಿಸಿದ್ದಾರೆ. ಆದರೆ ಈ ಎಲ್ಲದರ ನಡುವೆಯೂ ತನ್ನ ಅವಿರತ ಪರಿಶ್ರಮದಿಂದ ಇಂದು ಚದುರಂಗ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಹೆಸರನ್ನು ಅಚ್ಚೊತ್ತಿದ್ದಾರೆ. ಅಂದಹಾಗೆ ಇವರ ಹೆಸರು ಸಮರ್ಥ್ ಜೆ. ರಾವ್. ಮೂಲತಃ ಕುಂದಾಪುರದ ಬಸ್ರೂರಿನ ಸದ್ಯ ಹೊನ್ನಾವರದಲ್ಲಿ ನೆಲೆಸಿರುವ […]

Continue Reading

ಬಹುಮುಖ ಪ್ರತಿಭೆ ಸಾನ್ವಿ ರಾವ್

ಭರತನಾಟ್ಯ, ಸಂಗೀತ, ಚೆಸ್, ಟೇಬಲ್ ಟೆನ್ನಿಸ್, ಏಕಪಾತ್ರಾಭಿನಯ, ಭಾಷಣ, ಚಿತ್ರಕಲೆ, ಕೈಬರಹ, ದೇಶಭಕ್ತಿಗೀತೆ, ಜನಪದ ಗೀತೆ, ಛದ್ಮವೇಷ…. ಹೀಗೆ ಹತ್ತಾರು ಕ್ಷೇತ್ರದಲ್ಲಿ ಮಿಂಚುತ್ತಿದ್ದಾಳೆ ಹದಿನಾಲ್ಕರ ಹರೆಯದ ಪ್ರತಿಭೆ. ಇವಳೇ ಹೊನ್ನಾವರದ ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿ ಜಗದೀಶ ರಾವ್ ಬಿ.ಎಸ್. ಹಾಗೂ ವಿನುತಾ ಭಟ್ ದಂಪತಿಯ ಪುತ್ರಿ ಸಾನ್ವಿ ರಾವ್. ಹೊನ್ನಾವರದ ಎಂಪಿಇ ಸೊಸೈಟಿಯ ಸೆಂಟ್ರಲ್ ಸ್ಕೂಲ್‌ನ ೯ನೇ ತರಗತಿ ವಿದ್ಯಾರ್ಥಿನಿಯಾದ ಈಕೆ, ವಿವಿಧ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸುತ್ತಿದ್ದಾಳೆ. ಸಂಗೀತ ಸಾಧಕಿ: ವಿ.ಸೌಮ್ಯ ಭಟ್ ಅವರ […]

Continue Reading

ಕಲಾ ಸಾಧನೆಯ ಯುವ ಪ್ರತಿಭೆ ರವೀಂದ್ರ ಹೆಗಡೆ

ಕಲೆ ಎನ್ನುವುದು ಭಾವನೆಗಳು ಅಥವಾ ಅರಿವಿನ ಮೇಲೆ ಪರಿಣಾಮವಾಗುವ ಹಾಗೆ ಬುದ್ಧಿ ಪೂರ್ವಕವಾಗಿ ಜೋಡಿಸಲಾದ ಅಂಶಗಳ ರೂಪ. ಕಲಾ ಲೋಕದಲ್ಲಿ ಸ್ವ ಪರಿಶ್ರಮದಿಂದ ಅಧ್ಯಯನ ನಡೆಸಿ ಛಾಪು ಮೂಡಿಸುತ್ತಿರುವ ಪ್ರತಿಭೆಯೇ ಸಿದ್ದಾಪುರದ ರಾಮಕೃಷ್ಣ ಹೆಗಡೆ ಮತ್ತು ರೇಖಾ ದಂಪತಿ ಪುತ್ರ ರವೀಂದ್ರ ಹೆಗಡೆ. ಮಣ್ಣಾಟದಿಂದ ಕುಂಚದವರೆಗೆ….: ‘ಬಾಲ್ಯದ ದಿನಗಳಲ್ಲಿ ದಿನವಿಡೀ ಮಣ್ಣಿನಲ್ಲೇ ಆಟ ಆಡುತ್ತಿದ್ದೆ. ಮಣ್ಣಿನಿಂದ ಬಟ್ಟೆಗಳನ್ನು ಕಲೆ ಮಾಡಿಕೊಳ್ಳುತ್ತಿದ್ದೆ. ಇದನ್ನು ತಪ್ಪಿಸುವ ಉದ್ದೇಶದಿಂದ ನನ್ನ ತಾಯಿ ಬಣ್ಣದ ಬ್ರಶ್ ಕೊಟ್ಟು ಕೂರಿಸುತ್ತಿದ್ದರು. ಅಂದು ಬಟ್ಟೆ ಕಲೆ […]

Continue Reading

ರಂಗೋಲಿ ಕಲೆಯ ಏಕಲವ್ಯ!

ಆತ ಡಿಪ್ಲೋಮಾ ಅಧ್ಯಯನ ಮಾಡುತ್ತಿರುವ ಕಿಶೋರ. ಈತ ರಂಗೋಲಿ ಪುಡಿಯನ್ನು ಹಿಡಿದರೆ ಸರಾಗವಾಗಿ ವಿವಿಧ ಕಲಾಕೃತಿಗಳನ್ನು ಚಿತ್ರಿಸಬಲ್ಲ. ಕ್ಲೇ ಮಾಡೆಲಿಂಗ್‌ನಲ್ಲೂ ಹಲವಾರು ಕಲಾಕೃತಿ ಮತ್ತು ಎಕ್ರೆಲಿಕ್ ಪೇಂಟ್ ಮೂಲಕ ಚಿತ್ರ ಬಿಡಿಸುವ ವಿಶಿಷ್ಟ ಕಲೆಯನ್ನು ಒಲಿಸಿಕೊಂಡಿದ್ದಾನೆ. ಕಲಾ ಲೋಕದಲ್ಲಿ ಅಸಾಧಾರಣ ಸಾಧನೆ ಮಾಡುತ್ತಿರುವ ವಿನಾಯಕ ಹೆಬ್ಬಾರ್ ಈ ಕಲಾ ಸಾಧಕ. ಉತ್ತರಕನ್ನಡ ಜಿಲ್ಲೆಯ ಕುಮಟಾ ಪಟ್ಟಣದ ಮಣಕಿ ಗ್ರಾಮದ ರಾಮಚಂದ್ರ ಹೆಬ್ಬಾರ್ ಮತ್ತು ವಿನೋದಿನಿ ಹೆಬ್ಬಾರ ದಂಪತಿಗಳ ಪುತ್ರ ವಿನಾಯಕ ತನ್ನ ಅವಿರತ ಶ್ರಮದ ಮೂಲಕ ಕಲಾ […]

Continue Reading

ಲಾಕ್‌ಡೌನ್ ಸಮಯ ಸದ್ಭಳಕೆ: ಮನೆಯಲ್ಲೇಯಕ್ಷಗಾನ ಮುಖವರ್ಣಿಕೆ ಬಿಡಿಸಿ ಹೆಜ್ಜೆ ಹಾಕುತ್ತಿದ್ದಾನೆ ೧೪ ರ ಪೋರ!

ಕಳೆದ ೩-೪ ತಿಂಗಳುಗಳಿಂದ ಎಲ್ಲಿ ನೋಡಿದರೂಕೊರೊನಾದ್ದೇ ಸುದ್ದಿ. ಮನೆಯಿಂದ ಹೊರಬಂದರೂಅದೇ ಸುದ್ದಿ. ಸರ್ಕಾರದ ಜಾರಿಗೊಳಿಸಿದ್ದ ಲಾಕ್‌ಡೌನ್ ಬಹುತೇಕ ಸಡಿಲಿಕೆಆಗುತ್ತಾ ಬಂದರೂ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸುವಕುರಿತು ಸರ್ಕಾರ ಮೀನಾಮೇಷಎಣಿಸುತ್ತಿದೆ. ಆದರೆಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಈ ಪೋರತಾನೇ ಸ್ವತಃಯಕ್ಷಗಾನ ಮುಖವರ್ಣಿಕೆ ಬರೆದುಕೊಂಡು ಮನೆಯಲ್ಲೇಯಕ್ಷಗಾನ ಮಾಡುತ್ತಿದ್ದಾನೆ. ಈತನ ನೃತ್ಯಕ್ಕೆ ಇವನ ಪಾಲಕರೇ ಪ್ರೇಕ್ಷಕರು! ಅಷ್ಟೇಅಲ್ಲದೇಕ್ರಾಫ್ಟ್, ಪೇಂಟಿಂಗ್‌ಗಳನ್ನು ಮಾಡುತ್ತಾ ಲಾಕ್‌ಡೌನ್ ಸಮಯವನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದಾನೆ. ಈತನ ಹೆಸರು ಸ್ವಸ್ತಿಕ ಶರ್ಮಾ. ಗಡಿನಾಡುಕಾಸರಗೋಡುಜಿಲ್ಲೆಯ ಮುಳ್ಳೇರಿಯಾದ ಪಳ್ಳತ್ತಡ್ಕದ ಕೇಶವ ಶರ್ಮಾ ಮತ್ತು ದಿವ್ಯಾದಂಪತಿಯ ಪುತ್ರನಾದಈತ ಬದಿಯಡ್ಕದ ಶ್ರೀಭಾರತೀ ವಿದ್ಯಾಪೀಠದಲ್ಲಿ ೯ನೇ […]

Continue Reading

ಚದುರಂಗ ಚತುರೆ ದೀಪ್ತಿಲಕ್ಷ್ಮೀ

ದೀಪ್ತಿಲಕ್ಷ್ಮೀ ಕನ್ನೆಪ್ಪಾಡಿ, ಇದು ಪುತ್ತೂರು ಭಾಗದಲ್ಲಿ ಆಗ್ಗಿದ್ದಾಂಗೆ ಕೇಳಿ ಬರುವ ಹೆಸರು. ಚದುರಂಗ (ಚೆಸ್) ಆಟದಲ್ಲಿ ಆಗ್ಗಾಗೆ ತನ್ನದೇ ಆದ ಹೊಸ ಇತಿಹಾಸ ಬರೆಯುತ್ತಿರುವ ಅಸಾಧಾರಣ ಗ್ರಾಮೀಣ ಪ್ರತಿಭೆ. ಪುತ್ತೂರು ತಾಲೂಕಿನ ಚಿಕ್ಕಮುಂಡೇಲು ನಿವಾಸಿ ಶಂಕರಪ್ರಸಾದ್ ಮತ್ತು ಉಷಾ ಪ್ರಸಾದ್ ದಂಪತಿಯ ಮಗಳು ದೀಪ್ತಿಲಕ್ಷ್ಮೀ ಈಗಾಗಲೇ ರಾಷ್ಟ್ರ, ರಾಜ್ಯ, ಜಿಲ್ಲಾ ಮಟ್ಟದಲ್ಲಿ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾಳೆ. ಈವರೆಗೆ ಹಲವಾರು ಟೂರ್ನಿಯಲ್ಲಿ ಭಾಗವಹಿಸಿದ್ದಾಳೆ. ಅಣ್ಣನೇ ಸ್ಪೂರ್ತಿ: ಸಣ್ಣವಳಿದ್ದಾಗ ಅಣ್ಣ ಶ್ಯಾಮ್‌ಪ್ರಸಾದ್‌ನೊಂದಿಗೆ ಪ್ರತಿದಿನ ಚೆಸ್ ಆಡುತ್ತಿದ್ದ ದೀಪ್ತಿಲಕ್ಷ್ಮೀಗೆ, ದಿನ ಕಳೆದಂತೆ […]

Continue Reading

ಯೋಗಸಾಗರಿ ಸಂಧ್ಯಾ ಹಿರಿಯರಿಗೂಯೋಗ ಕಲಿಸುವ ಸಾಧಕಿ!

ಈಕೆ ಇನ್ನೂ ಹದಿನೇಳರ ಪೋರಿ. ವಿಶೇಷಎಂದರೆ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು, ಪ್ರಾಧ್ಯಾಪಕರುಕೂಡಈಕೆಯನ್ನುತಮ್ಮ ಶಿಕ್ಷಕಿಯೆಂದು ಪರಿಗಣಿಸಿ, ಗೌರವಿಸುತ್ತಾರೆ! ಅಷ್ಟೇಅಲ್ಲಈಕೆಯ ಶಿಷ್ಯರಾಗಿ ಯೋಗಕಲಿಯಲು ಶಿರಸಿ, ಹೊಸನಗರ, ನಾಗರಕೋಡಿಗೆ…. ಹೀಗೆ ದೂರದೂರದ ಊರುಗಳಿಂದಲೂ ವಿದ್ಯಾರ್ಥಿಗಳು ಆಗಮಿಸುತ್ತಾರೆ. ಯೋಗದಲ್ಲಿಇಷ್ಟುಚಿಕ್ಕ ವಯಸ್ಸಿಗೇ ಅಸಾಧಾರಣ ಸಾಧನೆ ಮಾಡಿದ ಸಂಧ್ಯಾಎಂ.ಎಸ್. ಯೋಗ ಸಾಧಕಿ. ಈಗಾಗಲೇ ’ಯೋಗಗುರು’ ಎಂಬ ಅಭಿದಾನಕ್ಕೂ ಪಾತ್ರಳಾಗಿದ್ದಾಳೆ. ತನಗಿಂತಲೂ ಹಿರಿಯ ಮತ್ತುಕಿರಿಯಆಸಕ್ತರಿಗೆಯೋಗಾಸನ ಕಲಿಸುತ್ತಿದ್ದಾಳೆ. ಬಡತನದ ಹಿನ್ನೆಲೆಯಿಂದ ಬರುವ ವಿದ್ಯಾರ್ಥಿಗಳಿಗೆ ಯೋಗವನ್ನು ಕಲಿಸುವ ಉದ್ದೇಶದಿಂದ ಸಾಗರದಲ್ಲಿ ’ಶ್ರೀ ಗುರುಕುಲಂಯೋಗಕೇಂದ್ರ’ ಆರಂಭಿಸಿದ್ದಾಳೆ. ಆ ಮೂಲಕ ಅತ್ಯಂತಕಿರಿಯ […]

Continue Reading