ಸಂಗೀತ ಸಾಧಕ ಶ್ರೀಚರಣ ನೀರಮೂಲೆ

9ನೇ ವಯಸ್ಸಿಗೇ ಸಂಗೀತ ಕಲೆಯತ್ತ ಆಕರ್ಷಣೆಗೊಂಡ ಈ ಪ್ರತಿಭೆ ಇಂದು ಸಂಗೀತ ಲೋಕದಲ್ಲಿ ತನ್ನದೇ ಆದ ಹೆಜ್ಜೆ ಗುರುತನ್ನು ಮೂಡಿಸುತ್ತಿದ್ದಾನೆ. ಕಲ್ಲಡ್ಕದ ನೀರಮೂಲೆಯ ಪ್ರವೀಣ್ ಕುಮಾರ್ ಮತ್ತು ಜಯಶ್ರೀ ನೀರಮೂಲೆ ದಂಪತಿಯ ಪುತ್ರ ಶ್ರೀಚರಣ ನೀರಮೂಲೆ ಸಂಗೀತ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆಗೈಯ್ಯುತ್ತಿದ್ದಾನೆ. 4ನೇ ತರಗತಿಯಲ್ಲಿದ್ದಾಗ ಕುಲದೀಪ ಎಂ. ಪೈ ಅವರ ‘ವಂದೇ ಗುರು ಪರಂಪರಾಂ’ ಸರಣಿಯಲ್ಲಿ ಹಾಡುವ ಮೂಲಕ ಸಂಗೀತ ಪಯಣ ಆರಂಭಿಸಿದ ಶ್ರೀಚರಣ್, ಈವರೆಗೆ ವಿವಿಧ ಕಡೆಗಳಲ್ಲಿ 20ಕ್ಕೂ ಅಧಿಕ ಶಾಸ್ತ್ರೀಯ ಸಂಗೀತ ಕಚೇರಿಗಳನ್ನು ನೀಡಿದ್ದಾನೆ. […]

Continue Reading

ಶಿಕ್ಷಣ ಮತ್ತು ಸಾಂಸ್ಕೃತಿಕ ಸಾಧಕ ಶ್ರೀಗಣೇಶ ಹೆಗಡೆ

  ಶಿಕ್ಷಣ, ಯಕ್ಷಗಾನ, ಸಾಹಿತ್ಯ, ಭಾಷಣ, ಚರ್ಚಾಕೂಟ ಹೀಗೆ ವಿವಿಧ ರಂಗಗಳಲ್ಲಿ ತೊಡಗಿಸಿಕೊಂಡು ಬಹುಮುಖ ಪ್ರತಿಭೆ ಎನಿಸಿಕೊಂಡವರು ಶ್ರೀಗಣೇಶ ಹೆಗಡೆ. ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಾಗೋಡಿನ ಕೃಷಿ ಕುಟುಂಬದ ಹಿನ್ನೆಲೆಯ ಸುಬ್ರಾಯ ಹೆಗಡೆ ಮತ್ತು ಮಹಾಲಕ್ಷ್ಮೀ ದಂಪತಿಗಳ ಪುತ್ರ ಶ್ರೀಗಣೇಶ ಹೆಗಡೆ ಅಪರೂಪದ ಸಾಧಕರಲ್ಲೊಬ್ಬರು. ಕುಮಟಾದ ಡಾ.ಎ.ವಿ. ಬಾಳಿಗಾ ಮಹಾವಿದ್ಯಾಲಯದಲ್ಲಿ ಬಿಎ‌ಸ್ಸಿ ಪದವಿ ಪಡೆದ ಇವರು, ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ರಸಾಯನಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅಲ್ಲದೇ ಪುಣೆಯ ಭಾರತೀಯ ವಿಜ್ಞಾನ ಶಿಕ್ಷಣ ಹಾಗೂ […]

Continue Reading

ಅಪರೂಪದ ಬಹುಮುಖ ಪ್ರತಿಭಾವಂತ ಅಭಿನವರಾಮ್

10 ರ ಹರೆಯದ ಈ ಪೋರನಿಗೆ ಜಾದೂ ಅಂದರೆ ಅತ್ಯಂತ ಖುಷಿ. ಜಾದುವಿನ ಹಲವು ತಂತ್ರ, ಕೈಚಳಕ ಈತನಿಗೆ ಕರಗತವಾಗಿದೆ. ಜೊತೆಗೆ ಚಿತ್ರಕಲೆ, ಕ್ರಾಫ್ಟ್, ಕಲಿಕಾ ಮಾದರಿಯ ತಯಾರಿಕೆ, ವಿಜ್ಞಾನ ಮಾದರಿಯ ತಯಾರಿಕೆಯಲ್ಲೂ ಈತ ಎತ್ತಿದ ಕೈ! ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಪಾತೂರಿನ ಸದ್ಯ ಕೊಪ್ಪಳದ ನಿವಾಸಿ ಕೆ.ರಾಘವೇಂದ್ರ ಭಟ್ ಮತ್ತು ಪ್ರಮೀಳಾ ಭಟ್ ದಂಪತಿಯ ಪುತ್ರ ಕೆ.ಆರ್.ಅಭಿನವ್‌ರಾಮ್ ಭಟ್ ಈ ಬಹುಮುಖ ಪ್ರತಿಭಾವಂತ. ಕೊಪ್ಪಳದ ಎಸ್.ಎಫ್.ಎಸ್‌. ಶಾಲೆಯಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಈತ, […]

Continue Reading

ಮನಮೋಹನನ ಕುಂಚದಲ್ಲಿ ಅರಳಿದ ಚಂದದ ಕಲಾಕೃತಿಗಳು

  ಪುತ್ತೂರಿನ ಯುವ ಕಲಾವಿದ ಪಿ.ಎಂ.ಮನಮೋಹನ ತನ್ನ ಕುಂಚದಲ್ಲಿ ಪ್ರತಿದಿನವೂ ವಿಭಿನ್ನ ಚಿತ್ರಗಳನ್ನು ಬಿಡಿಸುವ ಮೂಲಕ ಜನಮನ್ನಣೆ ಪಡೆಯುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಕಲೆಯ ಬಗ್ಗೆ ಅಪಾರವಾದ ಆಸಕ್ತಿ ಹೊಂದಿದ್ದ ಮನಮೋಹನ, ಚಿಕ್ಕಂದಿನಿಂದಲೇ ಬೇರೆ ಬೇರೆ ಪುಸ್ತಕಗಳನ್ನು ನೋಡಿ ಚಿತ್ರ ಬಿಡಿಸುವ, ಬಣ್ಣ ಹಚ್ಚುವ ಅಭ್ಯಾಸ ಮಾಡುತ್ತಾ ಅಂದಿನಿಂದಲೇ ಕಲೆಯ ಬಲೆಯಲ್ಲಿ ಬಂಧಿಯಾದರು. ಮೂಲತಃ ಪುತ್ತೂರು ತಾಲೂಕಿನ ಕಾವು ಪಾಲಾಶತಡ್ಕದ ಪಿ.ವಿ.ಮುರಳಿನರಸಿಂಹ ಮತ್ತು ವಿದ್ಯಾಭಾರತೀ ದಂಪತಿಯ ಪುತ್ರ ಮನಮೋಹನ, ಈಶ್ವರಮಂಗಲದ ಗಜಾನನ ವಿದ್ಯಾಸಂಸ್ಥೆಯಲ್ಲಿ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದಲ್ಲಿ […]

Continue Reading

ಚದುರಂಗದ ಭರವಸೆಯ ಪ್ರತಿಭೆ ಇಶಾ ಶರ್ಮಾ

11 ನೇ ವಯಸ್ಸಿನಲ್ಲಿಯೇ ಚೆಸ್ ಆಟಕ್ಕೆ ಪಾದಾರ್ಪಣೆ ಈ ಪ್ರತಿಭೆ ಕೆಲಕಾಲ ವಿದ್ಯಾಭ್ಯಾಸವನ್ನೂ ನಿಲ್ಲಿಸಬೇಕಾಯಿತು. ಚದುರಂಗದಲ್ಲಿ ಏನಾದರೂ ಸಾಧಿಸಬೇಕೆಂಬ ಆಕೆಯ ಕನಸಿಗೆ ಪೋಷಕರ ಬೆಂಬಲವೂ ದೊರೆಯಿತು. ಇದೀಗ ತನ್ನ ಅವಿರತ ಪರಿಶ್ರಮದಿಂದ ಕರ್ನಾಟಕದ ಪ್ರಥಮ ಮಹಿಳಾ ಅಂತಾರಾಷ್ಟ್ರೀಯ ಮಾಸ್ಟರ್ ಆಗಿ ಗುರುತಿಸಿಕೊಂಡಿದ್ದಾರೆ! ಇವರು ಇಶಾ ಶರ್ಮಾ. ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿಯ ಡಾ. ಶ್ರೀಹರಿ ಹಾಗೂ ಡಾ.ವಿದ್ಯಾ ದಂಪತಿ ಪುತ್ರಿ. ಉಜಿರೆಯ ಎಸ್‌ಡಿಎಂ ಪದವಿ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಇಶಾ, ಈಗಾಗಲೇ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿ […]

Continue Reading

ಭರವಸೆಯ ಯುವ ಚಿತ್ರ ಕಲಾವಿದ ಹರ್ಷ ಭಟ್ಟ….

ಕಲೆ ಎನ್ನುವುದು ಭಾವನೆಗಳು ಅಥವಾ ಅರಿವಿನ ಮೇಲೆ ಪರಿಣಾಮವಾಗುವಂತೆ ಬುದ್ದಿ ಪೂರ್ವಕವಾಗಿ ಜೋಡಿಸಲಾದ ಅಂಶಗಳ ರೂಪ. ಹೀಗೆ ಕಲೆಯಲ್ಲಿ ಬಂಧಿಯಾಗಿ ಕಲಾ ಲೋಕದಲ್ಲಿ ಹೆಜ್ಜೆ ಮೂಡಿಸುತ್ತಿರುವ ಪ್ರತಿಭೆ ಹರ್ಷ ಭಟ್ಟ ಕುಂಠಿಕಾನ. ಶಿಕಾರಿಪುರದಲ್ಲಿ ವಾಸವಾಗಿರುವ ಹರ್ಷ ಭಟ್ಟ, ಗಣಪತಿ ಭಟ್ ಮತ್ತು ಶಾಲಿನಿ ಭಟ್ ದಂಪತಿಗಳ ಪುತ್ರ. ಚಿಕ್ಕಂದಿನಿಂದಲೂ ಚಿತ್ರಕಲೆಯ ಕುರಿತು ವ್ಯಾಮೋಹ ಹೊಂದಿದ್ದ ಈ ಪ್ರತಿಭೆ ಇಂದು ತನ್ನ ಸತತ ಪ್ರಯತ್ನದ ಮೂಲಕ ಗಮನ ಸೆಳೆದಿದ್ದಾನೆ. ಪ್ರಾರಂಭದಲ್ಲಿ ಸ್ವ ಅಧ್ಯಯನದ ಮೂಲಕ ಚಿತ್ರಕಲೆಯನ್ನು ಸಿದ್ಧಿಸಿಕೊಂಡಾ ಈತ […]

Continue Reading

ವಿಕ್ರಮ್‌ಗೆ ಒಲಿದ ಸಂಗೀತ…..

ಪ್ರಪಂಚದಲ್ಲಿ ನಾನಾ ಕಲೆಗಳಿದ್ದರೂ ಸಂಗೀತದ ಆಕರ್ಷಣೆಯೇ ವಿಭಿನ್ನ. ಇಂತಹ ಸಂಗೀತದ ವಿವಿಧ ಪ್ರಕಾರಗಳನ್ನು ಒಲಿಸಿಕೊಂಡಿರುವ ವಿಶಿಷ್ಟ ಪ್ರತಿಭೆ ಕೊಳ್ಯೂರಿನ ವಿಕ್ರಮ್ ಭಾರಧ್ವಾಜ್.ಮಂಗಳೂರು ಮಂಡಲದ ಕೊಳ್ಯೂರು ವಲಯದ ವೆಂಕಟೇಶ ಪ್ರಸಾದ್ ಮತ್ತು ಸ್ವಪ್ನಾ ಎಂ. ದಂಪತಿಯ ಪುತ್ರ ವಿಕ್ರಮ್ ಭಾರದ್ವಾಜ್ ಚಿಕ್ಕ ವಯಸ್ಸಿನಲ್ಲಿಯೇ ಯಶಸ್ಸಿನ ಮೆಟ್ಟಿಲೇರಿದ್ದಾನೆ.ಹಲವಾರು ಟಿವಿ ಶೋಗಳು, ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿರುವ ವಿಕ್ರಮ್, ವಿ.ಶಿಲ್ಪಾ ಭಟ್ ಅವರಲ್ಲಿ ಶಾಸ್ತ್ರೀಯ ಸಂಗೀತವನ್ನು ಮತ್ತು ವಿ.ಎಂ.ಟಿ.ಗಿರಿ ಅವರ ಬಳಿ ಭಾವಗೀತೆ, ಚಿತ್ರಗೀತೆ ಅಭ್ಯಾಸ ನಡೆಸಿದ್ದಾನೆ. ¶ ಶಾಲೆಯ ಸಾಂಸ್ಕೃತಿಕ ಚಟುವಟಿಕೆಗಳೇ […]

Continue Reading

ಚಿತ್ರಕಲೆ, ಸಂಗೀತ ಸಾಧನೆಯತ್ತ ಭಾವನಾ ಯಾನ

ಚಿಕ್ಕಂದಿನಿಂದಲೂ ಸಂಗೀತವನ್ನು ಕೇಳುತ್ತಲೇ ಬೆಳೆದ ಈ ಪ್ರತಿಭೆ ಇಂದು ಸಂಗೀತ ಕ್ಷೇತ್ರದಲ್ಲಿ ತನ್ನದೇ ಆದ ಹೆಜ್ಜೆ ಗುರುತನ್ನು ಮೂಡಿಸಿದ್ದಾಳೆ. ಬೆಂಗಳೂರಿನ ವಿದ್ಯಾರಣ್ಯಪುರದ ಬಾಲಚಂದ್ರ ಹೆಗಡೆ ಮತ್ತು ನಾಗರತ್ನ ಹೆಗಡೆ ದಂಪತಿಯ ಪುತ್ರಿ ಭಾವನಾ ಬಾಲಚಂದ್ರ ಹೆಗಡೆ ಇಂದಿನ ‘ಅಂಕುರ’ ದ ಅಪರೂಪದ ಸಾಧಕಿ. ಚಿಕ್ಕವಳಿದ್ದಾಗ ಅಮ್ಮ ಮನೆಯಲ್ಲಿ ಭಜನೆಯನ್ನು ಹೇಳಿಕೊಡುತ್ತಿದ್ದಳು. ಊರಿನ ದೇವಸ್ಥಾನಗಳಲ್ಲಿ ನಡೆಯುತ್ತಿದ್ದ ಭಜನಾ ಕಾರ್ಯಕ್ರಮಗಳಲ್ಲಿ ತಂದೆ, ಅಜ್ಜ ಎಲ್ಲಾ ಭಾಗವಹಿಸುತ್ತಿದ್ದರು. ಹೀಗೆ ನಾನೂ ಕೂಡಾ ಸಂಗೀತ ಕಲಿಯಲು ಆರಂಭಿಸಿದೆ ಎನ್ನುತ್ತಾಳೆ ಭಾವನಾ. ವಿ. ಉಮಾ […]

Continue Reading

ಬಹುಮುಖ ಪ್ರತಿಭೆ ಅಭಿಜ್ಞಾ ಭಟ್

  ಸಂಗೀತ, ಯಕ್ಷಗಾನ, ಭರತನಾಟ್ಯ, ಹರಿಕಥೆ, ಸಾಹಿತ್ಯ… ಹೀಗೆ ವಿವಿಧ ಕ್ಷೇತ್ರಗಳಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದ ಪ್ರತಿಭೆ ಅಭಿಜ್ಞಾ ಭಟ್ ಬೊಳುಂಬು. ಈಕೆ ಬದಿಯಡ್ಕದ ದಿನೇಶ ಬಿ. ಮತ್ತು ಗಾನಲತಾ ಎನ್. ದಂಪತಿಗಳ ಮಗಳು. ಅಗಲ್ಪಾಡಿಯ SAPHSS ಶಾಲೆಯಲ್ಲಿ 9 ನೇ ತರಗತಿ ವ್ಯಾಸಂಗ ಮಾಡುತ್ತಿರುವ ಈಕೆ ವಿವಿಧ ಕಲೆಗಳಲ್ಲಿ ಗುರುತಿಸಿಕೊಂಡಿದ್ದಾಳೆ. ಅಭಿಜ್ಞಾಳ ತಾಯಿ ಗಾನಲತಾ ಅವರಿಗೆ ಯಕ್ಷಗಾನವೆಂದರೆ ಅಚ್ಚುಮೆಚ್ಚು. ಇದರಿಂದಾಗಿ ಅಭಿಜ್ಞಾ 3ನೇ ವರ್ಷದವಳಿದ್ದಾಗಲೇ ಯಕ್ಷಗಾನವನ್ನು ನೋಡಿ ಅನುಕರಣೆ ಮಾಡಲು ತೊಡಗಿದ್ದಳು. ಮಗಳ […]

Continue Reading

ಅಪ್ರತಿಮ ಸಂಗೀತ ಸಾಧಕಿ ದೀಪ್ತಿ

ಚಿಕ್ಕಂದಿನಿಂದಲೂ ಈಕೆಗೆ ಸಂಗೀತವೆಂದರೆ ಅದೇನೋ ಆಕರ್ಷಣೆ. ಅಂದೇ ನಾನು ಕೂಡಾ ಪ್ರಸಿದ್ಧ ಗಾಯಕಿಯಾಗಬೇಕೆಂದು ನಿರ್ಧರಿಸಿದ್ದ ಈ ಪ್ರತಿಭೆ ಇಂದು ತನ್ನ ಶ್ರದ್ಧೆ, ಸತತ ಅಭ್ಯಾಸ, ಗುರುಗಳ ಮಾರ್ಗದರ್ಶನದಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದಿದ್ದಾಳೆ. ಬೆಂಗಳೂರಿನ ನಿವಾಸಿ ರಾಮಕೃಷ್ಣ ಭಟ್ ಮತ್ತು ಜಯಲಕ್ಷ್ಮಿ ಭಟ್ ದಂಪತಿಯ ಸುಪುತ್ರಿ ದೀಪ್ತಿ ಆರ್. ಭಟ್ ಈ ಸಂಗೀತ ಸಾಧಕಿ. ಸುಮಧುರ ಸಿರಿಕಂಠ ದೀಪ್ತಿಗೆ ದೈವದತ್ತವಾಗಿ ಒಲಿದ ವರ‌‌. ರಾಮಚಂದ್ರಾಪುರ ಮಠದ ಶ್ರೀಭಾರತೀ ವಿದ್ಯಾಲಯದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಆರಂಭಿಸಿದ ಇವಳು ಆ ದಿನಗಳಲ್ಲೇ ಸಂಗೀತ […]

Continue Reading

ಕೃಷ್ಣ ನಗರಿಯ ಬಹುಮುಖ ಪ್ರತಿಭೆ ಸಂಹಿತಾ

ಈಕೆಯ ವಯಸ್ಸು ಕೇವಲ 13. ಆದರೆ ಸಾಧನೆ ಮಾತ್ರ ಅಗಾಧವಾದದ್ದು. ಶಾಸ್ತ್ರೀಯ ಸಂಗೀತ, ಭರತನಾಟ್ಯ, ಯಕ್ಷಗಾನ, ಚಿತ್ರಕಲೆ, ನಾಟಕ, ಭಾಷಣ, ನಟನೆ…. ಅಬ್ಬಾ! ಒಂದೋ ಎರಡೋ. ವಿವಿಧ ರಂಗದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿದ್ದಾಳೆ. ಕನ್ನಡದ ಪ್ರಸಿದ್ಧ ವಾಹಿಸಿ ಝೀ ಕನ್ನಡ ನಡೆಸುವ ಜನಪ್ರಿಯ ಶೋ ‘ಕನ್ನಡದ ಕಣ್ಮಣಿ’ ಸ್ಪರ್ಧೆಯಲ್ಲೂ ಪ್ರಥಮ ಸ್ಥಾನ ಪಡೆದ ಹೆಗ್ಗಳಿಕೆ ಈಕೆಯದ್ದು‌. ಅಂದಹಾಗೆ ಈ ಪ್ರತಿಭೆಯ ಹೆಸರು ಸಂಹಿತಾ ಜಿ.ಪಿ. ಮಣಿಪಾಲದ ಪರ್ಕಳದ ನಿವಾಸಿ, ಅದಮಾರಿನ ಪೂರ್ಣಪ್ರಜ್ಞ ಕಾಲೇಜಿನ ಶಿಕ್ಷಕ […]

Continue Reading

ಕಾಮಿಡಿ ಲೋಕದ ಪ್ರಚಂಡ ಅನೂಪ್

ದಕ್ಷಿಣ ಭಾರತದ ಪ್ರಸಿದ್ಧ ವಾಹಿನಿ ಜೀ ಕನ್ನಡ ವಾಹಿನಿ ನಡೆಸುವ ಜನಪ್ರಿಯ ಕಾಮಿಡಿ ಶೋ ‘ಡ್ರಾಮಾ ಜ್ಯೂನಿಯರ್ಸ್’. ಇಂತಹ ಜನಪ್ರಿಯ ಶೋನಲ್ಲಿ ತನ್ನ ಹಾಸ್ಯದ ಮೂಲಕ ಗಮನ ಸೆಳೆದ ಪ್ರತಿಭೆ ಅನೂಪ್ ರಮಣ ಎನ್.ಎಂ. ಗಡಿನಾಡು ಕಾಸರಗೋಡಿನ ಮುಳ್ಳೇರಿಯಾದ ಮಹಾಲಿಂಗೇಶ್ವರ ಎನ್. ಮತ್ತು ಪದ್ಮಾ ಕೆ. ದಂಪತಿಯ ಪುತ್ರ ಅನೂಪ್ ರಮಣ ಈ ಅಪರೂಪದ ಸಾಧಕ. ಅವಕಾಶವೇ ಅನಿರೀಕ್ಷಿತ! ಚಿಕ್ಕವನಿದ್ದಾಗಲೇ ಯಕ್ಷಗಾನ ಕಲೆಯತ್ತ ಆಕರ್ಷಿತನಾಗಿದ್ದ ಅನೂಪ್, ಆಗಲೇ ಯಕ್ಷಗಾನದ ಹಾಸ್ಯ ಪ್ರಸಂಗಗಳನ್ನು ಅನುಕರಿಸಲು ತೊಡಗಿದ್ದ. ಶ್ರೀಭಾರತೀ ವಿದ್ಯಾಪೀಠದ […]

Continue Reading

ಗಡಿನಾಡಿನ ಸಹೋದರಿಯರ ‘ರಾಮಕಥಾ’ ಗಾನಪಯಣ..

  ಧಾರ್ಮಿಕ-ಸಾಂಸ್ಕೃತಿಕ- ಸಾಮಾಜಿಕ-ಮೌಲ್ಯಗಳನ್ನೊಳಗೊಂಡ ವಿಶಿಷ್ಟವಾದ ಸಂಕಥನ ‘ರಾಮಕಥಾ’. ಶ್ರೀರಾಘವೇಶ್ವರ ಶ್ರೀಗಳು ಸಮಷ್ಟಿಗಾಗಿ ರೂಪಿಸಿದ ಹೊಸದೊಂದು ರಾಮಸೇವಾವಿಧಾನವೇ ಭಾರತ ದೇಶದಲ್ಲಿಯೇ ಅಪರೂಪ-ಅತಿವಿಶೇಷವಾದ ರಾಮಕಥಾ. ಇಂತಹ ವಿಶಿಷ್ಟವಾದ ರಾಮಕಥೆಯಲ್ಲಿ ಸಹಗಾಯನದ ಮೂಲಕ ಗಾಯನ ಕ್ಷೇತ್ರದಲ್ಲಿ ಗುರುತಿಸಿಕೊಂಡ ಸಹೋದರಿಯರು ಪೂಜಾ ಭಟ್ ಕೆ. ಮತ್ತು ಪ್ರಿಯಾಂಕಾ ಭಟ್ ಕೆ. ಮೂಲತಃ ಗಡಿನಾಡು ಕಾಸರಗೋಡಿನವರಾದ ಸದ್ಯ ಬೆಂಗಳೂರಿನ ಗಿರಿನಗರದಲ್ಲಿ ವಾಸವಾಗಿರುವ ಕೆ.ಗೋವಿಂದರಾಜ್ ಮತ್ತು ಇಂದಿರಾ ಜ್ಯೋತಿ ದಂಪತಿಯ ಪುತ್ರಿಯರಾದ ಪೂಜಾ ಮತ್ತು ಪ್ರಿಯಾಂಕಾ ಇವರೇ ಈ ಪ್ರತಿಭೆಗಳು. ಬಾಲ್ಯದಿಂದಲೇ ಮಠದ ಒಡನಾಟದಲ್ಲಿಯೇ ಬೆಳೆದ […]

Continue Reading

ಯಕ್ಷಗಾನದ ಬಾಲ ಪ್ರತಿಭೆ ಸಾನಿಕಾ

ವೇದಿಕೆಯ ಮೇಲೆ ಪುಟ್ಟ ಪುಟ್ಟ ಹೆಜ್ಜೆ ಹಾಕುತ್ತಾ, ಎದುರಿಗೆ ಕುಳಿತ ಸಭಿಕರನ್ನು ಬೆರಗುಗೊಳಿಸುವ ಈ ಪ್ರತಿಭೆಯ ಹೆಸರು ಸಾನಿಕಾ ಬಿ.ಎಸ್. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಭಾಸಿಯ ಶ್ರೀಕಾಂತ್ ಮತ್ತು ವೀಣಾ ದಂಪತಿಯ ಪುತ್ರಿ ಸಾನಿಕಾ ಕಿರಿಯ ವಯಸ್ಸಿನಲ್ಲೇ ಕೇವಲ ಯಕ್ಷಗಾನವನ್ನಲ್ಲದೇ ಹರಿವಾಣ ನೃತ್ಯ, ಕೊಡದ ಮೇಲಿನ ನೃತ್ಯ, ಭರತನಾಟ್ಯದಲ್ಲಿಯೂ ಗಮನ ಸೆಳೆದಿದ್ದಾಳೆ. 6 ನೇ ತರಗತಿಯಲ್ಲಿರುವಾಗಲೇ ನಿಟ್ಟೂರಿನ ಡಿ.ಎಸ್.ಸುಬ್ರಹ್ಮಣ್ಯ ಭಟ್ ಅವರಲ್ಲಿ ಯಕ್ಷಗಾನ ಕಲಿಯಲು ಪ್ರಾರಂಭಿಸಿದ ಸಾನಿಕಾ, ಹಲವಾರು ವೇದಿಕೆಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡಿದ್ದಾಳೆ. ಯಕ್ಷಗಾನದ […]

Continue Reading

ಗಡಿನಾಡಿನ ಈ ಕುವರಿಕಥಾಪ್ರಸಂಗದ ಪ್ರತಿಭೆ!

ಹರಿಕಥೆ. ಹಿಂದೂಧಾರ್ಮಿಕ ಪ್ರವಚನದಒಂದುರೂಪಎಂದು ಪರಿಗಣಿತವಾದ, ಕಥೆ, ಕಾವ್ಯ, ಸಂಗೀತ, ನಾಟಕ, ನೃತ್ಯ ಮತ್ತುತತ್ವಶಾಸ್ತ್ರ ಸೇರಿರುವಒಂದು ಸಂಯುಕ್ತ ಕಲೆ. ಇಂತಹಒಂದುಅಪರೂಪದಕಲೆಯಲ್ಲಿತಮ್ಮದೇಆದ ವಿಶಿಷ್ಟ ಛಾಪು ಮೂಡಿಸಿ, ಗಮನ ಸೆಳೆದವರು ಶೃದ್ಧಾ ಭಟ್ ನಾಯರ್ಪಳ್ಳ. ಮೂಲತಃಕಾಸರಗೋಡಿನ ನಾಯರ್ಪಳ್ಳದ ವೈದಿಕ, ಕೃಷಿಕ ಗೋಪಾಲಕೃಷ್ಣ ಭಟ್ ಮತ್ತು ಮಾಲತಿ ಭಟ್ ದಂಪತಿಗಳ ಪುತ್ರಿ ಶೃದ್ಧಾ ಈ ಅಪರೂಪದ ಸಾಧಕಿ. ೮ನೆ ವಯಸ್ಸಿಗೇ ಹರಿಕಥೆಗೆ ಶರಣು: ಪ್ರಸ್ತುತಕಾಸರಗೋಡಿನ ಸರ್ಕಾರಿಕಾಲೇಜಿನಲ್ಲಿಕನ್ನಡ ಎಂ.ಎ. ವ್ಯಾಸಂಗ ಮಾಡುತ್ತಿರುವ ಶೃದ್ಧಾ, ಮೂರನೇತರಗತಿಯಲ್ಲಿರುವಾಗಲೇ ಶಾಲೆಯ ವಾರ್ಷಿಕೋತ್ಸವದಲ್ಲಿಕಥಾಪ್ರಸಂಗ ಹಾಡುವ ಮೂಲಕ ಹರಿಕಥೆ ಹಾಡಲು ಪ್ರಾರಂಭಿಸಿದಳು. […]

Continue Reading

ಭರತನಾಟ್ಯದಅನರ್ಘ್ಯರತ್ನ ಸಿಂಧೂರಲಕ್ಷ್ಮೀ…

’ಭರತನಾಟ್ಯ’- ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಶಾಸ್ತ್ರೀಯ ನೃತ್ಯ ಪ್ರಕಾರಗಳಲ್ಲೊಂದು. ನವರಸಗಳನ್ನೊಳಗೊಂಡ ಭರತನಾಟ್ಯರಂಗದಲ್ಲಿಗೆಜ್ಜೆಕಟ್ಟಿಕುಣಿದು ಅಭಿಮಾನಿಗಳ ಹೃದಯಗೆದ್ದಅಪರೂಪದ ಪ್ರತಿಭೆ ಸಿಂಧೂರಲಕ್ಷ್ಮೀ ಕನ್ನೆಪ್ಪಾಡಿ. ಕಡಲಿನ ಒಡಲುದಕ್ಷಿಣಕನ್ನಡದಕನ್ನೆಪ್ಪಾಡಿಯ ಶಿವರಾಮ ಭಟ್ ಮತ್ತು ಸಂಧ್ಯಾದಂಪತಿಯ ಪುತ್ರಿ ಸಿಂಧೂರಲಕ್ಷ್ಮೀ ಕನ್ನೆಪ್ಪಾಡಿ. ಮಂಗಳೂರಿನ ತ್ರಿಶಾಕಾಲೇಜ್‌ಆಫ್‌ ಕಾಮರ್ಸ್ & ಮ್ಯಾನೆಜ್‌ಮೆಂಟ್‌ಕಾಲೇಜಿನಲ್ಲಿ ದ್ವಿತೀಯ ಬಿಕಾಂ ಮುಗಿಸಿ ಸಿಎ ಇಂಟರ್ ಮೀಡಿಯೇಟ್ ಪರೀಕ್ಷೆಯತಯಾರಿ ನಡೆಸುತ್ತಿರುವ ಈಕೆ ಒಂಭತ್ತನೆಯ ವಯಸ್ಸಿಗೇ ಭರತನಾಟ್ಯರಂಗವನ್ನು ಪ್ರವೇಶಿಸಿದಳು. ಪುತ್ತೂರಿನ ಶ್ರೀಮೂಕಾಂಬಿಕಾ ನೃತ್ಯಾಲಯದ ವಿ.ಬಿ. ದೀಪಕ್‌ಕುಮಾರ್‌ಅವರ ಬಳಿಯಲ್ಲಿ ಅಧ್ಯಯನ ನಡೆಸಿರುವ ಸಿಂಧೂರಲಕ್ಷ್ಮೀ ಭರತನಾಟ್ಯ ಸೀನಿಯರ್ ಪರೀಕ್ಷೆಯಲ್ಲಿರಾಜ್ಯಕ್ಕೆ ಏಳನೇ […]

Continue Reading

ವಿಜ್ಞಾನ ಲೋಕದಅತ್ಯುತ್ತಮ ಬರಹಗಾರ ಪ್ರಗುಣ್

ಒಬ್ಬ ಹದಿನೈದು ವರ್ಷದ ಪೋರ ವಿಜ್ಞಾನ ವಿಷಯಗಳ ಕುರಿತಾದ ಲೇಖನಗಳನ್ನು ಬರೆಯುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ್ದಾನೆಂದರೆಅದು ಸುಲಭದ ಮಾತಲ್ಲ. ಈಗಾಗಲೇ ಈ ಯುವ ಪ್ರತಿಭೆಯ ಲೇಖನಗಳು ಇಂದುರಾಷ್ಟ್ರ ಮಟ್ಟದ ವಿವಿಧ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿದ್ದು, ವಿಜ್ಞಾನ ಲೋಕದ ಬರವಣಿಗೆಯಲ್ಲಿಛಾಪು ಮೂಡಿಸಿದ್ದಾನೆ. ಹೆಸರು ಪ್ರಗುಣ್ ಪುದಕೋಳಿ. ಬೆಂಗಳೂರಿನ ನಿವಾಸಿ ಉದಯಶಂಕರ ಪುದಕೋಳಿ ಮತ್ತು ವಿದ್ಯಾದಂಪತಿಯ ಪುತ್ರನಾದಈತ ಬೆಂಗಳೂರಿನ ಶಿಶುಗೃಹ ಮಾಂಟೆಸ್ಟರಿ ಮತ್ತು ಹೈಸ್ಕೂಲ್‌ನ ೧೦ನೇ ತರಗತಿ ವಿದ್ಯಾರ್ಥಿ. ಪ್ರಗುಣ್‌ನ ಸಾಧನೆಯ ಪುಟ್ಟ ಪರಿಚಯ ನಿಮಗಾಗಿ… […]

Continue Reading

ವಿಜ್ಞಾನ ಲೋಕದ ಕಣ್ಮಣಿ ಸ್ವಸ್ತಿಕ್ ಪದ್ಮ

ಈತನ ವಯಸ್ಸು ೧೯. ಆದರೆ ಈತನ ಸಾಧನೆ ಮಾತ್ರ ನೂರೆಂಟು. ಹೆಸರು ಸ್ವಸ್ತಿಕ ಪದ್ಮ. ದಕ್ಷಿಣ ಕನ್ನಡದ ಬಂಟ್ವಾಳದ ಮುರ್ಗಜೆಯ ಶ್ರೀರಾಮ ಭಟ್ ಎಂ. ಮತ್ತು ಮಲ್ಲಿಕಾ ದಂಪತಿಯ ಪುತ್ರನಾದ ಈ ಪೋರ ಇಂದು ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಾನೆ. ಬಾಲ್ಯದ ದಿನಗಳಿಂದಲೂ ವಿಜ್ಞಾನದಲ್ಲಿ ಆಸಕ್ತಿ ಬೆಳೆಸಿಕೊಂಡು ಆ ನಿಟ್ಟಿನಲ್ಲಿ ಸಂಶೋಧನೆಗಳನ್ನು ಆರಂಭಿಸಿದ ಸ್ವಸ್ತಿಕ್ ಪದ್ಮ ಸ್ಥಳೀಯ ಮಟ್ಟದಿಂದ ಆರಂಭಿಸಿ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ಸಾಧನೆಯ ಶಿಖರ ಏರುತ್ತಿದ್ದಾನೆ. ಇದು ಸ್ವಸ್ತಿಕ್‌ನ ವಿಜ್ಞಾನ […]

Continue Reading

ಚಂದನ್‌ಗೆ ಒಲಿದ ಯೋಗ

ಇತ್ತೀಚೆಗೆ ಹಲವಾರು ವರ್ಷಗಳಿಂದ ಯೋಗ ವಿಶ್ವದ ಗಮನ ಸೆಳೆದಿದೆ. ಶಾಲಾ-ಕಾಲೇಜುಗಳಲ್ಲಿ ಪ್ರತಿವರ್ಷ ಶಾಲಾ ಮಟ್ಟದಿಂದ ರಾಷ್ಟ್ರಮಟ್ಟದ ತನಕ ವಿವಿಧ ಹಂತಗಳಲ್ಲಿ ಯೋಗ ಸ್ಪರ್ಧೆಯೂ ನಡೆಯುತ್ತಿದೆ. ಹೀಗೆ ಸ್ಪರ್ಧೆಗಳಿಂದ ಆಕರ್ಷಿತನಾದ ಈ ಪ್ರತಿಭೆ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾನೆ. ಹೀಗೆ ಚಿಕ್ಕ ವಯಸ್ಸಿಗೇ ಯೋಗ ಒಲಿಸಿಕೊಂಡ ಸಾಧಕ ಚಂದನ್ ಕೆ.ಆರ್. ಈಗಾಗಲೇ ಜನರಿಂದ ‘ಯೋಗ ಚಂದನ್ ಎಂಬ ಅಭಿದಾನಕ್ಕೂ ಪಾತ್ರನಾಗಿದ್ದಾನೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾನುಗೋಡಿನ ವಕೀಲ ರಾಘವೇಂದ್ರ ಕೆ.ಎಸ್. ಮತ್ತು ವಿಜಯಲಕ್ಷ್ಮೀ ಕೆ.ಆರ್. ದಂಪತಿಯ ಪುತ್ರ […]

Continue Reading

ಗುರುಕಿರಣ್ ಹೆಗಡೆಯ ಹಾಡಿನ ಲಹರಿ

ಪ್ರಪಂಚದಲ್ಲಿ ನಾನಾ ಕಲೆಗಳಿದ್ದರೂ ಸಂಗೀತದ ಆಕರ್ಷಣೆಯೇ ವಿಭಿನ್ನ. ಇಂತಹ ಸಂಗೀತದ ವಿವಿಧ ಪ್ರಕಾರಗಳನ್ನು ಒಲಿಸಿಕೊಂಡಿರುವ ಸರಸ್ವತೀ ಪುತ್ರ ಹೊನ್ನಾವರದ ಗುರುಕಿರಣ್ ಹೆಗಡೆ. ಮನೆಯಲ್ಲಿ ಈತನ ತಾಯಿ ಹಾಡುತ್ತಿದ್ದರು. ಹಾಗಾಗಿ ಚಿಕ್ಕಂದಿನಿಂದಲೇ ತಾಯಿಯ ಮಾರ್ಗದರ್ಶನದಲ್ಲಿ ಸಂಗೀತ ಶಾರದೆಗೆ ಶರಣೆಂದ ಈತ ಇಂದು ಝೀ ಕನ್ನಡ ಸರಿಗಮಪ ಸ್ಪರ್ಧೆಯಲ್ಲಿ ರನ್ನರ್‌ಅಪ್ ಸ್ಥಾನ ಪಡೆಯುವ ಮೂಲಕ ರಾಜ್ಯಾದ್ಯಂತ ಮನೆಮಾತಾಗಿದ್ದಾನೆ. ಪ್ರಾರಂಭದಲ್ಲಿ ತಾಯಿಯ ಬಳಿ ಅಧ್ಯಯನ ನಡೆಸಿದ ಈತ ಬಳಿಕ ಕೆಲಕಾಲ ಹಿಂದೂಸ್ತಾನಿ ಶಾಸ್ತ್ರೀಯ ಮತ್ತು ಸುಗಮ ಸಂಗೀತವನ್ನು ಹೊನ್ನಾವರದ ವಿ.ರಾಜೇಶ್ವರಿ ಭಟ್ […]

Continue Reading