ಮೇವು ಹುಡುಕುವ ಗೋವು, ಕಟುಕರಿಗೆ ಸುಲಭ ಮೇವು

ಬೆಳಗಾಗುತ್ತಿದ್ದಂತೆಯೇ ಮನೆ ನಡೆಸುವ ಅಮ್ಮಂದಿರ ದಿನಚರಿಯ ಮುಖ್ಯ ಕಾರ್ಯವೆಂದರೆ, ಹಟ್ಟಿಯ ಕೆಲಸಗಳು. ಹಟ್ಟಿಯಲ್ಲಿ ಅಂಬಾ ಎಂದು ಅದಾಗಲೇ ಕರೆಯಲು ಆರಂಭಿಸಿ ಮನೆಯೊಡತಿ ಅಮ್ಮನಿಗಾಗಿ ಕಾಯುತ್ತಿರುವ ದನಗಳಿಗೆ ಕಲಗಚ್ಚು, ಮಡ್ಡಿ ಉಣಿಸಿ; ಕರುವಿಗೆ ಕುಡಿಸಿ ಉಳಿದ ಹಾಲು ಕರೆದು, ಕುಡಿಯಲು ನೀರು ಕೊಟ್ಟು, ಹೆಸರಿನಿಂದ ಕರೆದು, ಮಗಳೇ ಎಂದು ಮುದ್ದಿಸಿ…   ಇವೆಲ್ಲ ನಾವುಗಳು ನೋಡಿ ಬೆಳೆದ ನಿತ್ಯಚರ್ಯೆಗಳು. ಅದಾಗಿ ದನಗಳನ್ನು ಮೇಯಲು ಗುಡ್ಡೆಗೆ ಬಿಡುವುದು. ದನಗಳೂ ಈ ದಿನಚರಿಗೆ ಅದೆಷ್ಟು ಒಗ್ಗಿದ್ದವೆಂದರೆ, ನಿತ್ಯವೂ ಬೆಳಗ್ಗೆ ಹಟ್ಟಿಯಿಂದ ಹೊರಟು […]

Continue Reading

ಕಾಯಿಸಿದ ಅಯ್ಯಪ್ಪ ಕಾಯದಿರುವನೇ

ದೇಶದಲ್ಲಿ ಸನಾತನ ಧರ್ಮಕೇಂದ್ರಗಳ ಮೇಲೆ ಆಕ್ರಮಣ ಹೊಸದೇನಲ್ಲ. ಘಜ್ನಿ ನಡೆಸಿದ ಸೋಮನಾಥ ದೇವಾಲಯ ಆಕ್ರಮಣದಿಂದ ತೊಡಗಿ, ನಮ್ಮ ಶ್ರೀಮಠದ ಮೇಲಿನ ಆಕ್ರಮಣಗಳವರೆಗೆ ಸಮಾಜದ ಶ್ರದ್ಧಾಬಿಂದುಗಳ ಮೇಲೆ ಅನೇಕ ಆಕ್ರಮಣಗಳು ನಡೆಯುತ್ತಲೇ ಬಂದಿವೆ.   ಇದೆಲ್ಲ ಆಕ್ರಮಣಗಳನ್ನೂ ಮೆಟ್ಟಿ, ಎದುರಿಸಿ, ಹೊಳಹಿನೊಂದಿಗೆ ಮತ್ತೆ ಬೆಳೆಯುವ ಶಕ್ತಿ ಸಾಮರ್ಥ್ಯಗಳು ಸನಾತನಧರ್ಮಕ್ಕಷ್ಟೇ ಇರಬಲ್ಲುದು. ಆದರೂ ಆಕ್ರಮಣಗಳನ್ನು ಎದುರಿಸುವ ಕಾಲಘಟ್ಟದಲ್ಲಿ ಸಾಮಾಜಿಕ ಆಂದೋಲನ, ಕ್ರಾಂತಿಯೊಂದರ ಅಗತ್ಯವಿರುತ್ತದೆ ಎಂಬುದನ್ನು ನಮ್ಮ ಮಠದ ಶಿಷ್ಯಸಮಾಜವೂ ಸೇರಿದಂತೆ, ಒಟ್ಟಾರೆ ಸಮಾಜವು ಮನಗಂಡಿದೆ.   ಇಂದು, ಅದೇ ರೀತಿಯ […]

Continue Reading

ಸಮಾಜಕ್ಕೆ ವಿಷವುಣಿಸುವವರಷ್ಟೇ ಅಪಾಯಕಾರಿ, ಮನಸ್ಸಿಗೆ ವಿಷವುಣಿಸುವವರೂ

ಕಳೆದೊಂದು ವಾರದಿಂದ ವೃತ್ತಪತ್ರಿಕೆಗಳ ಮುಖಪುಟ ಸುದ್ದಿ – ಚಾಮರಾಜನಗರದ ರಾಮಾಪುರ ಠಾಣೆಯ ಸರಹದ್ದಿನ ಸುಳ್ವಾಡಿ ಎಂಬಲ್ಲಿರುವ ಕಿಚ್ಚುಗತ್ತಿ ಮಾರಮ್ಮ ದೇವಾಲಯದ ಆವರಣದಲ್ಲಿ ನಡೆದ ದುರಂತದ್ದು. ದೇವಾಲಯಕ್ಕೆ ಗೋಪುರ ಹಾಗೂ ಸುತ್ತುಗೋಡೆ ನಿರ್ಮಾಣ ನಡೆಸುವುದೆಂದು ನಿರ್ಣಯಿಸಿದ ವ್ಯವಸ್ಥಾಪಕರು ಶುಭ ಶುಕ್ರವಾರದಂದು ಭೂಮಿಪೂಜೆ ಏರ್ಪಡಿಸಿದ್ದರು. ಕಾರ್ಯಕ್ರಮದ ಕೊನೆಗೆ ನೆರೆದ ಭಕ್ತರಿಗೆ ಚಿತ್ರಾನ್ನ ಸಂತರ್ಪಣೆಯು ಏರ್ಪಾಡಾಗಿತ್ತು.   ಈ ಅನ್ನ ಪ್ರಸಾದಕ್ಕೆ ವಿಷ ಸೇರಿದ್ದುದರಿಂದ ಸೇವಿಸಿದ ಅನೇಕ ಅಮಾಯಕ ಭಕ್ತರು ಸ್ವಾಸ್ಥ್ಯ ಕಳೆದುಕೊಂಡರು, ಕೂಡಲೇ ಚಿಕಿತ್ಸೆಗೆ ದಾಖಲಿಸುವ ವ್ಯವಸ್ಥೆಯಾಯಿತು. ಹಲವರು ತೀವ್ರವಾಗಿ […]

Continue Reading

ರಾಜಧಾನಿಯ ಅರಮನೆ ಮೈದಾನದಲ್ಲಿ ಹವ್ಯಕತ್ವದ ಅನಾವರಣ!

ಇತಿಹಾಸ: ಸುಮಾರು ಸಾವಿರದ ಏಳುನೂರು ವರ್ಷಗಳಷ್ಟು ಹಿಂದೆ ಕದಂಬವಂಶದ ಶ್ರೇಷ್ಠ ರಾಜ ಮಯೂರವರ್ಮನು ಬನವಾಸಿಯನ್ನು ಆಳುತ್ತಿದ್ದ. ದೇಶವು ಸುಭಿಕ್ಷವಾಗಿ, ಪ್ರಜೆಗಳು ಕ್ಷೇಮವಾಗಿ, ಹಲ-ಫಲಗಳು ಯಥೇಷ್ಟವಾಗಿ ಇರುತ್ತಿದ್ದವು. ಇದಕ್ಕೆ ಕಾರಣವೂ ಇತ್ತು. ಸದಾ ರಾಜ್ಯದ ಒಳಿತಿಗಾಗಿ ಚಿಂತಿಸುತ್ತಿದ್ದ ರಾಜನು ಪ್ರಜಾಕೋಟಿಯ ಯೋಗಕ್ಷೇಮಕ್ಕಾಗಿ ಕಾಲಕಾಲಕ್ಕೆ ಸುಕಾರ್ಯಗಳನ್ನು ಕೈಗೊಳ್ಳುತ್ತಿದ್ದ. ಅದರಲ್ಲೊಂದು, ಪ್ರಜಾಹಿತಕ್ಕಾಗಿ, ಲೋಕಕಲ್ಯಾಣಕ್ಕಾಗಿ ಯಜ್ಞಯಾಗಾದಿಗಳನ್ನು ರಾಜ್ಯವಿಡೀ ನಡೆಸಿದ್ದು. ಪ್ರಜಾಹಿತಕ್ಕಾಗಿ ಯಜ್ಞ ನಡೆಸಲು ಅಷ್ಟೇ ಯೋಗ್ಯ, ನಿಸ್ಸ್ವಾರ್ಥ, ಜ್ಞಾನಿಗಳಾದ ಅಧ್ವರ್ಯುಗಳ ಅಗತ್ಯವನ್ನು ಮನಗಂಡ ಮಯೂರವರ್ಮನು ಉತ್ತರದ ಅಹಿಚ್ಛತ್ರವನ್ನು ಸಂಪರ್ಕಿಸಿದನು. ಅಲ್ಲಿಂದ ನೂರಾರು ಕುಟುಂಬಗಳನ್ನು […]

Continue Reading