04.02.2019

ದಿನ ಭವಿಷ್ಯ

         

ವಿಲಂಬನಾಮ ಸಂವತ್ಸರ / ಉತ್ತರಾಯಣ /
ಹೇಮಂತ ಋತು / ಪೌಷ ಮಾಸ /
ಕೃಷ್ಣ ಪಕ್ಷ / ಅಮಾವಾಸ್ಯೆ ತಿಥಿ/

ಸೋಮವಾರ/ ಶ್ರವಣ ನಕ್ಷತ್ರ /

ದಿನಾಂಕ: 04.02.2019

 °~•~°~•~°~•~°~•~°~•~°

ಮೇಷ

        ಕಾರ್ಯ ವೈಖರಿ ಹಾಗೂ ಪ್ರಾಮಾಣಿಕತೆಗೆ  ಉತ್ತಮ ಬೆಲೆ ದೊರಕುವುದು. ಬಂದಿರುವಂತಹ ಆದಾಯದಲ್ಲಿ ದಾನ ಧರ್ಮಗಳನ್ನು ಮಾಡಿ. ಹಣವನ್ನು ದುರ್ವಿನಿಯೋಗ ಮಾಡದಿರಿ. ದಾಂಪತ್ಯ ಸುಖ ಅನುಭವಿಸುವಿರಿ. ಉದರ ಸಂಬಂಧಿ ತೊಂದರೆಗಳು, ಅಲರ್ಜಿಗಳು ಹಾಗೂ ಅಶಾಂತಿ ಕಂಡು ಬರುವ ಲಕ್ಷಣ ಇರುವುದರಿಂದ ಜಾಗರೂಕತೆಯಿಂದ ಇರಬೇಕು. ವಿದ್ಯಾರ್ಥಿಗಳು ತಮ್ಮ ಚಾಕಚಕ್ಯತೆಯಿಂದ  ಮುಂದುವರಿಯಬೇಕಿದೆ. ಆಲಸಿತನ ಬಿಟ್ಟು ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಬೇಕು. ಕುಲದೇವರ ಆರಾಧನೆಯನ್ನು ತಪ್ಪದೇ ಮಾಡಬೇಕು.



ಪರಿಹಾರ:
ಶ್ರೀದುರ್ಗಾಪರಮೇಶ್ವರೀ ಅಮ್ಮನವರ ಆರಾಧನೆ ಹಾಗೂ ಸುಬ್ರಹ್ಮಣ್ಯ ದೇವರ ಆರಾಧನೆಯನ್ನು ಮಾಡಬೇಕು.

ಜಪಿಸಲು:
ನಮಸ್ತೇ ಶರಣ್ಯೇ ಶಿವೇ ಸಾನುಕಮ್ಪೇ

ನಮಸ್ತೇ ಜಗದ್ವ್ಯಾಪಿಕೇ ವಿಶ್ವರೂಪೇ ।
ನಮಸ್ತೇ ಜಗದ್ವನ್ದ್ಯ-ಪಾದಾರವಿನ್ದೇ

ನಮಸ್ತೇ ಜಗತ್ತಾರಿಣಿ ತ್ರಾಹಿ ದುರ್ಗೇ ॥

°~•~°~•~°~•~°~•~°~•~°

    

ವೃಷಭ

         ಚಾಕಚಕ್ಯತೆಯ ವ್ಯವಹಾರ ಹಾಗೂ ಪ್ರಾಮಾಣಿಕತೆ ಉತ್ತಮ ಫಲವನ್ನು ಕೊಡದಿರುವುದು ದುಃಖಕ್ಕೆ ಕಾರಣವಾಗುವುದು.  ದಾಂಪತ್ಯ ಜೀವನದಲ್ಲಿ ಸುಖ, ಶಾಂತಿ ನೆಲೆಸುತ್ತದೆ. ವಿದ್ಯಾರ್ಥಿಗಳು ತಂದೆ, ತಾಯಿ, ಗುರುಹಿರಿಯರ ಮಾರ್ಗದರ್ಶನದಂತೆ ಮುನ್ನಡೆದಲ್ಲಿ ಉತ್ತಮ ಏಳಿಗೆ ಕಂಡುಬರಲಿದೆ.




ಪರಿಹಾರ
ಗೋಮಾತೆಯ ದರ್ಶನ ಹಾಗೂ ಸೇವೆಯನ್ನು ಮಾಡಿ

ಜಪಿಸಲು:
ಸರ್ವದೇವಮಯೇ ದೇವಿ

ಸರ್ವದೇವೈ-ರಲಂಕೃತೇ |
ಮಾತರ್ಮಮಾ-ಭಿಲಷಿತಂ

ಸಫಲಂ ಕುರು ನಂದಿನಿ ||

°~•~°~•~°~•~°~•~°~•~°



ಮಿಥುನ


   ಕೈಗೊಳ್ಳುವ ಕೆಲಸಗಳಲ್ಲಿ ಉದಾಸೀನತೆಯೇ ಅಡೆತಡೆಗಳನ್ನು ಒಡ್ಡುವುದರಿಂದ  ಉದಾಸೀನತೆ ಬಿಟ್ಟು ಶ್ರದ್ಧೆಯಿಂದ ಕೆಲಸ ಮಾಡಿ. ವಿನಾಕಾರಣ ಖರ್ಚುವೆಚ್ಚ ಕಂಡುಬರುವುದರಿಂದ ಮನಶ್ಶಾಂತಿ ಕಳೆದುಕೊಳ್ಳಬೇಕಾಗುತ್ತದೆ. ವಿನಾಕಾರಣ ದಂಪತಿಗಳ ಮಧ್ಯೆ ಗೊಂದಲ ಮೂಡಲಿದ್ದು ಜಾಗರೂಕತೆಯಿಂದ ವ್ಯವಹರಿಸಿ. ಉದರ ಸಂಬಂಧಿ ತೊಂದರೆಗಳು ಹಾಗೂ  ಮೈ ಕೈ ನೋವುಗಳು ಬರುವಂತಹ ಲಕ್ಷಣಗಳು ಕಂಡುಬರುತ್ತದೆ. ಯೋಗಾಭ್ಯಾಸ, ವ್ಯಾಯಾಮ ಮುಂತಾದ ಮೈ ದಂಡಿಸುವ ಕೆಲಸಗಳನ್ನು ಮಾಡಿ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಆಲಸ್ಯ ಮೂಡುವ ಲಕ್ಷಣಗಳಿದ್ದು ಪರಿಶ್ರಮದಿಂದ ಮುನ್ನಡೆಯಬೇಕು.



ಪರಿಹಾರ  
ನರಸಿಂಹನ ಆರಾಧನೆಯನ್ನು ಮಾಡಿ.

ಜಪಿಸಲು:
ದೇವತಾಕಾರ್ಯ-ಸಿದ್ಧ್ಯರ್ಥಂ

ಸಭಾಸ್ತಂಭ-ಸಮುದ್ಭವಮ್ |
ಶ್ರೀನೃಸಿಂಹ ಮಹಾವೀರಂ

ನಮಾಮಿ ಋಣಮುಕ್ತಯೇ ||

  °~•~°~•~°~•~°~•~°~•~°



ಕರ್ಕಾಟಕ

   ಕೈಗೊಂಡು, ಅರ್ಧದಲ್ಲಿ ಬಾಕಿ ಇರುವಂತಹ ಕಾರ್ಯ ಪೂರ್ಣವಾಗುವುದು. ವ್ಯವಹಾರಕ್ಷಮತೆಯು ನಿಮ್ಮನ್ನು ಉತ್ತಮ ಪದವಿಗೆ ಕರೆದೊಯ್ಯುವುದು.  ಮನಶ್ಶಾಂತಿ ದೊರೆಯುವುದು. ವಹಿವಾಟಿನಲ್ಲಿ ಲಾಭ ಗಳಿಸಿ ಉತ್ತಮ ಸ್ಥರವನ್ನು ತಲುಪುವಿರಿ. ದಾಂಪತ್ಯ ಜೀವನದಲ್ಲಿ ಸಣ್ಣಪುಟ್ಟ ಕಲಹಗಳನ್ನು ಎದುರಿಸಬೇಕಾಗುತ್ತದೆ. ಶೀತ ಜ್ವರ, ಉದರ ಸಂಬಂಧಿ, ಮೂತ್ರ ಸಂಬಂಧಿ ತೊಂದರೆಗಳು ಬರುವಂತಹ ಲಕ್ಷಣಗಳಿದ್ದು ಹೆಚ್ಚು ನೀರು ಕುಡಿಯಿರಿ. ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಉತ್ತಮ ನೆಲೆ ತಲುಪುವಿರಿ.



ಪರಿಹಾರ
ಕುಲದೇವತಾ ಆರಾಧನೆ ಅಗತ್ಯ. ದೇವಿಯ ಆರಾಧನೆಯಿಂದ ಶುಭ.

ಜಪಿಸಲು:
ಶ್ರೀದುರ್ಗಾಯೈ ನಮ: / ಶ್ರೀಶಾಂತ್ಯೈ ನಮ: / ಶ್ರೀಶಾಂಭವ್ಯೈ ನಮ: / ಶ್ರೀಭೂತಿದಾಯಿನ್ಯೈ ನಮ: / ಶ್ರೀಶಂಕರಪ್ರಿಯಾಯೈ ನಮ: / ಶ್ರೀನಾರಾಯಣ್ಯೈ ನಮ: / ಶ್ರೀಭದ್ರಕಾಲ್ಯೈ ನಮ: / ಶ್ರೀಶಿವದೂತ್ಯೈ ನಮ: / ಶ್ರೀಮಹಾಲಕ್ಷ್ಮ್ಯೈ ನಮ: / ಶ್ರೀಮಹಾಮಾಯಾಯೈ ನಮ: / ಶ್ರೀಯೋಗನಿದ್ರಾಯೈ ನಮ: / ಶ್ರೀಚಂಡಿಕಾಯೈ ನಮ:

 °~•~°~•~°~•~°~•~°~•~°



ಸಿಂಹ

     ಮಾಡುತ್ತಿರುವಂತಹ ಕಾರ್ಯದಲ್ಲಿ ಸಣ್ಣಪುಟ್ಟ ಅಡೆತಡೆಗಳು ಕಂಡುಬರುವುದರಿಂದ ಜಾಗರೂಕತೆಯಿಂದ ವ್ಯವಹರಿಸಬೇಕು. ವಹಿವಾಟಿನಲ್ಲಿ ತೊಂದರೆ ಕಂಡುಬಂದು ಸಾಲ ಮಾಡಬೇಕಾದ ಪರಿಸ್ಥಿತಿ ಬರುವುದರಿಂದ ಹಣವನ್ನು ಜಾಗರೂಕತೆಯಿಂದ ವಿನಿಯೋಗಿಸಿ. ದಂಪತಿಗಳ ಮಧ್ಯೆ ಸಣ್ಣಪುಟ್ಟ ಜಗಳಗಳು ಕಂಡುಬರುವ ಲಕ್ಷಣಗಳಿವೆ. ಹೊಟ್ಟೆಗೆ ಸಂಬಂಧಿಸಿದ ತೊಂದರೆಗಳು, ಆಹಾರದಲ್ಲಿ ವ್ಯತ್ಯಾಸ, ಅಲರ್ಜಿಗಳು ಕಂಡು ಬರುವ ಲಕ್ಷಣ ಇರುವುದರಿಂದ ಆಹಾರದಲ್ಲಿ ವ್ಯತ್ಯಾಸವಾಗದಂತೆ ಗಮನವಿಡಿ. ಶುದ್ಧವಾದ ಆಹಾರವನ್ನೇ ಸೇವಿಸಿ. ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ಮೀರಿ ಪ್ರಯತ್ನಪಡಬೇಕು.


ಪರಿಹಾರ
ಶಿವನ ಆರಾಧನೆ ಅಗತ್ಯ.

ಜಪಿಸಲು:
ಕರಚರಣಕೃತಂ ವಾಕ್ಕಾಯಜಂ ಕರ್ಮಜಂ ವಾ
ಶ್ರವಣನಯನಜಂ ವಾ ಮಾನಸಂ ವಾಪರಾಧಂ|
ವಿಹಿತಮವಿಹಿತಂ ವಾ ಸರ್ವಮೇತತ್ ಕ್ಷಮಸ್ವ
ಜಯ ಜಯ ಕರುಣಾಬ್ದೇ ಶ್ರೀಮಹಾದೇವ ಶಂಭೋ||

    °~•~°~•~°~•~°~•~°~•~°      


ಕನ್ಯಾ


    ಉತ್ತಮ ಏಳಿಗೆ ಲಭ್ಯವಾಗಲಿದ್ದು ನೀವು ಕೈಗೊಂಡ ಕೆಲಸ ಕಾರ್ಯಗಳು ಮುನ್ನಡೆ ಕಾಣುವುದು. ಹಿರಿಯ ಅಧಿಕಾರಿಗಳಿಂದ ಅಸಮಾಧಾನದ ಮಾತು ಕೇಳಿ ಬರುವುದು. ವಿನಾಕಾರಣ ಖರ್ಚುವೆಚ್ಚ ತೋರಿಬರುವುದು. ಮೋಸಗೊಳಿಸುವ ಸಾಧ್ಯತೆಯಿದ್ದು ಜಾಗರೂಕತೆಯಿಂದ ವ್ಯವಹರಿಸಿ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದ್ದು, ವ್ಯಾಯಾಮ ಯೋಗ ಮುಂತಾದವನ್ನು ಅಭ್ಯಾಸ ಮಾಡಿ. ವಿದ್ಯಾರ್ಥಿಗಳು ತಮ್ಮ ಉದಾಸೀನತೆಯಿಂದ ಹಿನ್ನಡೆಯನ್ನು  ಹೊಂದುತ್ತಾರೆ. ಮಕ್ಕಳು ಓಡಾಡುವಂತಹ ಸಂದರ್ಭದಲ್ಲಿ ಜಾಗರೂಕತೆಯಿಂದ ಇರಬೇಕು.



ಪರಿಹಾರ
ಶ್ರೀಕೃಷ್ಣ ದೇವರ ಆರಾಧನೆಯಿಂದ ಶುಭ

ಜಪಿಸಲು:
ವಸುದೇವಸುತಂ  ದೇವಂ

ಕಂಸಚಾಣೂರ-ಮರ್ದನಮ್  |
ದೇವಕೀ-ಪರಮಾನಂದಂ  

ಕೃಷ್ಣಂ ವಂದೇ  ಜಗದ್ಗುರುಮ್ ||

  °~•~°~•~°~•~°~•~°~•~°       


ತುಲಾ


       ವ್ಯವಹಾರಗಳಲ್ಲಿ ಸಣ್ಣ ಮಟ್ಟಿನ  ಏಳಿಗೆ ಕಂಡು ಬರಲಿದ್ದು, ಮನಶ್ಶಾಂತಿಯನ್ನು ಹೊಂದುವಿರಿ. ವಿನಾಕಾರಣ ಖರ್ಚುವೆಚ್ಚ ಒದಗಿಬರುವುದು. ಭೂಮಿಗೆ  ಸಂಬಂಧಿಸಿದ ತಕರಾರಿನಲ್ಲಿ ಹಣ ವ್ಯಯ ಮಾಡಬೇಕಾಗುತ್ತದೆ. ಕುಟುಂಬದಲ್ಲಿ ಶಾಂತಿ ನೆಲೆಸುವುದು. ಆರೋಗ್ಯದಲ್ಲಿ ಸಣ್ಣಪುಟ್ಟ ತೊಂದರೆಯಾಗುವ ಸಂಭವವಿದ್ದು ಜಾಗರೂಕತೆಯಿಂದ ಇರಬೇಕು. ನಿಮ್ಮ ಕೋಪ ನಿಯಂತ್ರಣದಲ್ಲಿರಲಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಉತ್ತಮ ಅಭಿವೃದ್ಧಿ ಕಂಡುಬರಲಿದ್ದು ಗುರುಹಿರಿಯರ ಮಾತಿನಂತೆ ನಡೆಯಿರಿ.


ಪರಿಹಾರ  
ದುರ್ಗಾದೇವಿಯ ಆರಾಧನೆಯಂದ ಶುಭ.

ಜಪಿಸಲು:
ಸರ್ವರೂಪಮಯೀ ದೇವೀ

ಸರ್ವಂ ದೇವೀಮಯಂ ಜಗತ್ ।
ಅತೋಽಹಂ ವಿಶ್ವರೂಪಾಂ ತ್ವಾಂ

ನಮಾಮಿ ಪರಮೇಶ್ವರೀಮ್ ||


 °~•~°~•~°~•~°~•~°~•~°


ವೃಶ್ಚಿಕ


  
ಕೈಗೊಳ್ಳುತ್ತಿರುವ ಕೆಲಸದಲ್ಲಿ ಹಿನ್ನಡೆ ಕಂಡುಬರುತ್ತಿದ್ದು  ಮೇಲಿನ ಅಧಿಕಾರಿಗಳಿಂದ ತೊಂದರೆಗಳು ಅನುಭವಿಸಬೇಕಾಗುತ್ತದೆ. ದುಂದುವೆಚ್ಚದಿಂದಾಗಿ ಕುಟುಂಬದಲ್ಲಿ ಕಲಹ ಏರ್ಪಡುವುದು. ಜಾಗರೂಕತೆಯಿಂದ ಖರ್ಚು ಮಾಡಿ. ದಾಂಪತ್ಯ ಜೀವನದಲ್ಲಿ ಕಲಹ ಏರ್ಪಡಲಿದೆ. ಮಾತಿನ ಬಗ್ಗೆ ಗಮನ ಇರಲಿ.  ವಿದ್ಯಾರ್ಥಿಗಳು ತಮ್ಮ ಆಲಸಿತನ ಬಿಟ್ಟು ಮುಂದುವರಿಯಬೇಕು. ವಿದ್ಯಾಭ್ಯಾಸದಲ್ಲಿ ಅಡೆತಡೆ ಕಂಡುಬರುವುದು. ಗುರು-ಹಿರಿಯರನ್ನು ಗೌರವಿಸಿ.

ಪರಿಹಾರ
ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆಯಿಂದ ಶುಭವಾಗಲಿದೆ.


ಜಪಿಸಲು:
ಶರಣ್ಯಂ ಸರ್ವಲೋಕಾನಾಮ್

ಅಗ್ರಗಣ್ಯಂ ದಿವೌಕಸಾಮ್ |
ವರೇಣ್ಯಂ ದೇವಸೇನಾಯಾ:

ಸುಬ್ರಮಣ್ಯ-ಮುಪಾಸ್ಮಹೇ ||

°~•~°~•~°~•~°~•~°~•~°


ಧನು


    ಮಾಡುತ್ತಿರುವ ಕೆಲಸದಿಂದ ಉತ್ತಮ ಏಳಿಗೆ ಕಂಡುಬರಲಿದ್ದು ಹಣಕಾಸಿನ ವಿಚಾರದಲ್ಲಿ ಇದ್ದ ತೊಂದರೆ ದೂರವಾಗುವುದು. ಕುಟುಂಬಕ್ಕೋಸ್ಕರ  ಹಣ ವಿನಿಯೋಗ ಮಾಡಬೇಕಾದ ಪರಿಸ್ಥಿತಿ ಒದಗಿ ಬರುತ್ತದೆ. ವಾಹನದಲ್ಲಿ ಪ್ರಯಾಣಿಸುವಾಗ ಜಾಗರೂಕರಾರಬೇಕು. ದಾಂಪತ್ಯ ಜೀವನದಲ್ಲಿ ಮಾತಿನ ಮೂಲಕ ಕಲಹ ಬರುವ ಲಕ್ಷಣಗಳಿದ್ದು ಮಾತಿನ ಬಗ್ಗರ ಗಮನವಿರಲಿ.  ಆರೋಗ್ಯದಲ್ಲಿ ಸಣ್ಣಪುಟ್ಟ ತೊಂದರೆಗಳು ಬರುವ ಸಾಧ್ಯತೆ. ವಿದ್ಯಾರ್ಥಿಗಳಿಗೆ ಉತ್ತಮ ಪ್ರಯತ್ನದಿಂದ ಅಭಿವೃದ್ಧಿ.


ಪರಿಹಾರ
ತಂದೆ ತಾಯಿಯರ ಹಾಗೂ ಗುರುವಿನ ಆಶೀರ್ವಾದವನ್ನು  ಪಡೆಯಿರಿ.

ಜಪಿಸಲು:
ಅಖಂಡಮಂಡಲಾಕಾರಂ

ವ್ಯಾಪ್ತಂ ಯೇನ ಚರಾಚರಮ್ |
ತತ್ಪದಂ ದರ್ಶಿತಂ ಯೇನ

ತಸ್ಮೈ ಶ್ರೀಗುರವೇ ನಮಃ ||

     °~•~°~•~°~•~°~•~°~•~°


ಮಕರ


    ವ್ಯಾವಹಾರಿಕ ಕ್ಷೇತ್ರದಲ್ಲಿ ನಿಧಾನಗತಿಯ ಅಭಿವೃದ್ಧಿ  ಕಂಡುಬರಲಿದ್ದು ಮನಶ್ಶಾಂತಿ ಪಡೆಯುವಿರಿ. ನೀವು ಎದುರಿಸುತ್ತಿರುವ ಆರ್ಥಿಕ ತೊಂದರೆ ದೂರವಾಗಲಿದೆ. ಆರೋಗ್ಯದಲ್ಲಿ ಅಲರ್ಜಿ, ಶ್ವಾಸಸಂಬಂಧಿ ತೊಂದರೆಗಳು ಹಾಗೂ  ಶೀತ ಜ್ವರ ಮುಂತಾದವು ಬರುವ ಲಕ್ಷಣ ಕಂಡುಬರುವುದರಿಂದ ಜಾಗರೂಕತೆಯಿಂದ ಇರಬೇಕು. ದಾಂಪತ್ಯ ಜೀವನದಲ್ಲಿ ಸುಖ. ವಿದ್ಯಾರ್ಥಿಗಳು ಆಲಸಿತನ ಬಿಟ್ಟು, ಸ್ವಪ್ರಯತ್ನದಿಂದ ಮುಂದುವರಿದಲ್ಲಿ ಮಾತ್ರ ಉತ್ತಮ ಫಲಿತಾಂಶ ದೊರೆಯುತ್ತದೆ.



ಪರಿಹಾರ
ಶಿವಾಲಯ ದರ್ಶನ, ರುದ್ರಾಭಿಷೇಕ ಸೇವೆ ಮಾಡುವುದರಿಂದ ಶುಭ ಆಗಲಿದೆ.  

ಜಪಿಸಲು:
ಶುದ್ಧಸ್ಫಟಿಕ-ಸಂಕಾಶಂ
ಶುದ್ಧವಿದ್ಯಾ-ಪ್ರದಾಯಕಮ್ |
ಶುದ್ಧಂ ಪೂರ್ಣಂ ಚಿದಾನಂದಂ
ಸದಾಶಿವಮಹಂ ಭಜೇ ||

   °~•~°~•~°~•~°~•~°~•~°          


ಕುಂಭ  


      ವ್ಯವಹಾರದಲ್ಲಿ  ಏಳಿಗೆ ಇದ್ದರೂ ಮನಶ್ಶಾಂತಿ ಕಳೆದುಕೊಳ್ಳುವಿರಿ. ವಿನಾಕಾರಣ ಕುಟುಂಬದಲ್ಲಿ ಖರ್ಚುವೆಚ್ಚ ತೋರಿಬರುವುದು. ಸಹೋದರರಿಗೆ ಧನಸಹಾಯ ಮಾಡಬೇಕಾದ ಪರಿಸ್ಥಿತಿ ಒದಗಿ ಬಂದೀತು. ಶೀತ ಜ್ವರಗಳು, ತಲೆನೋವು, ಕಣ್ಣು ನೋವು ಮುಂತಾದ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಆದಷ್ಟು ಗದ್ದಲ ಗಲಾಟೆಗಳಿಂದ ದೂರ ಇರಿ. ಮಾತಿನ ಮೂಲಕ ಜಗಳಗಳು ಬರುವ ಸಾಧ್ಯತೆಗಳಿವೆ.  ದಾಂಪತ್ಯದಲ್ಲಿ ಕಲಹ ತೋರಿ ಬರುವುದು. ವಿದ್ಯಾರ್ಥಿಗಳು ಪರಿಶ್ರಮದಿಂದ ಕಷ್ಟಪಟ್ಟು ಓದಿನಲ್ಲಿ ಮಾತ್ರ ಉತ್ತಮ ಅಭಿವೃದ್ಧಿ ಆಗಲಿದೆ.



ಪರಿಹಾರ  
ಶಿವದೇವಸ್ಥಾನ ದರ್ಶನ, ಆಂಜನೇಯ ಸ್ವಾಮಿಯ ಆರಾಧನೆಯಿಂದ ಶುಭವಾಗಲಿದೆ.

ಜಪಿಸಲು:
ಅಂಜನಾಗರ್ಭ-ಸಂಭೂತ
ಕಪೀಂದ್ರ-ಸಚಿವೋತ್ತಮ |
ರಾಮಪ್ರಿಯ ನಮಸ್ತುಭ್ಯಂ
ಹನುಮಾನ್ ರಕ್ಷ ಮಾಂ ಸದಾ ||

°~•~°~•~°~•~°~•~°~•~°


ಮೀನ   


  ಮಾಡುವಂತಹ ಕೆಲಸ ಕಾರ್ಯಗಳಲ್ಲಿ ಶ್ರದ್ಧಾಭಕ್ತಿಯಿಂದ ಮುಂದುವರಿದಲ್ಲಿ ಏಳಿಗೆ ಲಭ್ಯವಾಗಲಿದೆ. ವಿನಾಕಾರಣ ಖರ್ಚುವೆಚ್ಚ ಮಾಡಬೇಡಿ. ದಾಂಪತ್ಯ ಜೀವನದಲ್ಲಿ ಅಭಿವೃದ್ಧಿ ಕಂಡುಬರಲಿದೆ. ಉದರಸಂಬಂಧಿ,  ರಕ್ತಸಂಬಂಧಿ ಹಾಗೂ ಪಿತ್ತಜನಕ ತೊಂದರೆಗಳು ಬರುವ ಲಕ್ಷಣಗಳಿವೆ. ಮನಶ್ಶಾಂತಿ ಕಳೆದುಕೊಳ್ಳಬೇಡಿ. ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಏಳಿಗೆ ಲಭ್ಯ. ವಾಹನದಲ್ಲಿ ಓಡಾಟದ ಸಂದರ್ಭದಲ್ಲಿ ಜಾಗರೂಕತೆಯಿಂದ ಇರಬೇಕು.


ಪರಿಹಾರ
ಶ್ರೀಮಹಾವಿಷ್ಣುದೇವರ ಆರಾಧನೆಯಿಂದ ಶುಭ. ಅಶ್ವತ್ಥ ಮರ ಪ್ರದಕ್ಷಿಣೆ ಬರುವುದರಿಂದ ಶುಭ ಕುಲದೇವತಾ ಆರಾಧನೆಯು ಅತ್ಯಗತ್ಯವಾಗಿದೆ.


ಜಪಿಸಲು:    
ಶ್ರೀಕೇಶವಾಯ ನಮಃ / ಶ್ರೀನಾರಾಯಣಾಯ ನಮಃ / ಶ್ರೀಮಾಧವಾಯ ನಮಃ / ಶ್ರೀಗೋವಿಂದಾಯ ನಮಃ / ಶ್ರೀವಿಷ್ಣವೇ ನಮಃ / ಶ್ರೀಮಧುಸೂದನಾಯ ನಮಃ /  ಶ್ರೀತ್ರಿವಿಕ್ರಮಾಯ ನಮಃ / ಶ್ರೀವಾಮನಾಯ ನಮಃ / ಶ್ರೀಶ್ರೀಧರಾಯ ನಮಃ / ಶ್ರೀಹೃಷಿಕೇಶಾಯ ನಮಃ / ಶ್ರೀಪದ್ಮನಾಭಾಯ ನಮಃ / ಶ್ರೀದಾಮೋದರಾಯ ನಮಃ

°~•~°~•~°~•~°~•~°~•~°



{ವಿ. ಸೂ. : ಮೇಲೆ ಕೊಟ್ಟ ಪರಿಹಾರ ಶ್ಲೋಕ ಮತ್ತು ನಾಮಗಳನ್ನು ಸ್ನಾನದ ಅನಂತರ ಶುಚಿಯಾಗಿ ದೇವರ ಮುಂದೆ ದೀಪ ಹಚ್ಚಿ ನಿರ್ಮಲ ಮನಸ್ಸಿನಿಂದ 48 ಸಲ ಪಠಿಸಬೇಕು.}

Author Details


Srimukha

Leave a Reply

Your email address will not be published. Required fields are marked *