20.01.2019

ದಿನ ಭವಿಷ್ಯ

         

ವಿಲಂಬನಾಮ ಸಂವತ್ಸರ / ಉತ್ತರಾಯಣ /

ಹೇಮಂತ ಋತು / ಪೌಷ ಮಾಸ /

ಶುಕ್ಲ ಪಕ್ಷ / ಚತುರ್ದಶೀ ತಿಥಿ /

ರವಿವಾರ/  ಆರ್ದಾ-ಪುನರ್ವಸು ನಕ್ಷತ್ರ /

ದಿನಾಂಕ:  20.01.2019

 °~•~°~•~°~•~°~•~°~•~°

 

ಮೇಷ

 

ವ್ಯಾವಹಾರಿಕ ಕ್ಷೇತ್ರಗಳಲ್ಲಿ ಹಿನ್ನಡೆ. ಹಣಕಾಸಿನ ವಿಚಾರಗಳಲ್ಲಿ ತೊಂದರೆ. ಕುಟುಂಬದಲ್ಲಿ ಕಲಹ. ಗೆಳೆಯರಿಂದ ಸಹಾಯ. ಆರೋಗ್ಯದಲ್ಲಿ ತೊಂದರೆ. ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಫಲ.





ಪರಿಹಾರ:

ದೇವಿಯ ಆರಾಧನೆಯಿಂದ ಶುಭ.

ಜಪಿಸಲು:

ಸರ್ವಮಂಗಲಮಾಂಗಲ್ಯೇ

ಶಿವೇ ಸರ್ವಾರ್ಥಸಾಧಿಕೇ |

ಶರಣ್ಯೇ ತ್ರ್ಯಂಬಕೇ ಗೌರಿ

ನಾರಾಯಣಿ ನಮೋಸ್ತುತೇ ||

°~•~°~•~°~•~°~•~°~•~°

    

ವೃಷಭ


ವ್ಯಾವಹಾರಿಕ  ಕ್ಷೇತ್ರಗಳಲ್ಲಿ ಮಂದಗತಿಯ ಚೇತರಿಕೆ  ಕಾಣುವುದು. ಹಣಕಾಸಿನ ವಿಚಾರಗಳಲ್ಲಿ, ವ್ಯಾಪಾರದಲ್ಲಿ  ಲಾಭ. ನೂತನ ಆಭರಣ, ವಸ್ತ್ರ ಮುಂತಾದ ಆಲಂಕಾರಿಕ ವಸ್ತುಗಳ ಲಾಭ. ದಾಂಪತ್ಯ ಜೀವನದಲ್ಲಿ ಸುಖ. ವಿದ್ಯಾರ್ಥಿಗಳಿಗೆ ಮುನ್ನಡೆ.




ಪರಿಹಾರ

ದೇವಿಯ ಆರಾಧನೆಯಿಂದ ಶುಭ.

ಜಪಿಸಲು:

ಶ್ರೀದುರ್ಗಾಯೈ ನಮ: / ಶ್ರೀಶಾಂತ್ಯೈ ನಮ: / ಶ್ರೀಶಾಂಭವ್ಯೈ ನಮ: / ಶ್ರೀಭೂತಿದಾಯಿನ್ಯೈ ನಮ: / ಶ್ರೀಶಂಕರಪ್ರಿಯಾಯೈ ನಮ: / ಶ್ರೀನಾರಾಯಣ್ಯೈ ನಮ: / ಶ್ರೀಭದ್ರಕಾಲ್ಯೈ ನಮ: / ಶ್ರೀಶಿವದೂತ್ಯೈ ನಮ: / ಶ್ರೀಮಹಾಲಕ್ಷ್ಮ್ಯೈ ನಮ: / ಶ್ರೀಮಹಾಮಾಯಾಯೈ ನಮ: / ಶ್ರೀಯೋಗನಿದ್ರಾಯೈ ನಮ: / ಶ್ರೀಚಂಡಿಕಾಯೈ ನಮ:

°~•~°~•~°~•~°~•~°~•~°



ಮಿಥುನ


ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಹಿನ್ನಡೆ. ಹಿರಿಯ ಅಧಿಕಾರಿಗಳಿಂದ ಒತ್ತಡ. ವ್ಯವಹಾರ ಕ್ಷೇತ್ರಗಳಲ್ಲಿ ಮಾನಸಿಕ ಕಿರಿಕಿರಿ. ಹಣಕಾಸಿನ ವಿಚಾರಗಳಲ್ಲಿ ಲಾಭ. ಉದಾಸೀನತೆಯಿಂದ ಆಪ್ತರ ಕೋಪಕ್ಕೆ ಗುರಿ. ಪ್ರಯಾಣಗಳಿಗೆ ವಿಘ್ನ. ಪಿತ್ತ ಹಾಗೂ ರಕ್ತಕ್ಕೆ ಸಂಬಂಧಿಸಿದ ಆರೋಗ್ಯದ ತೊಂದರೆಗಳು ಬರುವ ಸಾಧ್ಯತೆ. ವಿದ್ಯಾರ್ಥಿಗಳಿಗೆ ಮುನ್ನಡೆ. ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶ. ದೇಹದಾರ್ಢ್ಯಕ್ಕೆ ಸಂಬಂಧಪಟ್ಟಂತಹ ಹೊಸ ಕ್ರೀಡೆಗಳನ್ನು ಕಲಿಯುವ  ಅವಕಾಶ.



ಪರಿಹಾರ  

ಶ್ರೀಕೃಷ್ಣ ನ ಆರಾಧನೆಯಿಂದ ಶುಭ.

ಜಪಿಸಲು:

ವಸುದೇವಸುತಂ ದೇವಂ

ಕಂಸಚಾಣೂರಮರ್ದನಮ್|

ದೇವಕೀಪರಮಾನನ್ದಂ

ಕೃಷ್ಣಂ ವನ್ದೇ ಜಗದ್ಗುರುಮ್ ||

  °~•~°~•~°~•~°~•~°~•~°



ಕರ್ಕಾಟಕ



ಕೆಲಸಕಾರ್ಯಗಳಲ್ಲಿ ಸಫಲತೆ. ಹಣಕಾಸಿನ ವಿಚಾರವಾಗಿ ಮಂದಗತಿಯ ಮುನ್ನಡೆ. ಶ್ರಮಕ್ಕೆ ತಕ್ಕ ಫಲ. ವೃಥಾ ಆರೋಪಗಳು ಬರುವ ಸಾಧ್ಯತೆ. ನಿಮ್ಮ ಕೆಲಸಕ್ಕೆ ಮಾನ್ಯತೆ ದೊರೆಯಲು ಸುಳ್ಳು ಹೇಳುವುದು ಬೇಡ. ಸ್ನೇಹಿತರಿಂದ ದೂರ ಇರುವುದೊಳಿತು. ಮೋಸ ಹೋಗುವಂತಹ ಸಾಧ್ಯತೆ.  ಮೈ ಕೈ ಗಂಟು ನೋವುಗಳು, ಶೀತ ಜ್ವರಾದಿಗಳು, ತಲೆನೋವು, ಕಣ್ಣು ನೋವು ಬರುವ ಸಾಧ್ಯತೆ. ವೈವಾಹಿಕ ಜೀವನದಲ್ಲಿ ಕಲಹ ಬಂದರೂ ಕೂಡ ನೆಮ್ಮದಿ ಇರಲಿದೆ. ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಸಾಫಲ್ಯ.



ಪರಿಹಾರ

ಕುಲದೇವತಾ ಆರಾಧನೆ ಅಗತ್ಯ. ದೇವಿಯ ಆರಾಧನೆಯಿಂದ ಶುಭ.

ಜಪಿಸಲು:

ಸರ್ವಸ್ವರೂಪೇ ಸರ್ವೇಶಿ

ಸರ್ವಶಕ್ತಿಸಮನ್ವಿತೇ |
ಭಯೇಭ್ಯಸ್ತ್ರಾಹಿ ನೋ ದೇವಿ  

ದುರ್ಗೇದೇವಿ ನಮೋಸ್ತುತೇ ||

 °~•~°~•~°~•~°~•~°~•~°



ಸಿಂಹ

ವ್ಯವಹಾರ, ಕಾರ್ಯಕ್ಷೇತ್ರಗಳಲ್ಲಿ ಅಭಿವೃದ್ಧಿ. ಮಾನಸಿಕ ಹಾಗೂ ಹಣಕಾಸಿನ ವಿಚಾರದಲ್ಲಿ ತೊಂದರೆಗಳು ಬರುವುದು. ಅರ್ಥಿಕ ವಾದಂತಹ ಹಿನ್ನಡೆ. ವಿನಾಕಾರಣ  ಖರ್ಚುವೆಚ್ಚಗಳು ಅಧಿಕ, ಸೂಕ್ಷ್ಮತೆಯಿಂದ ಖರ್ಚು ಮಾಡುವುದೊಳಿತು. ಮಗನೊಂದಿಗೆ ಕಲಹ ವೈಮನಸ್ಸುಗಳು ಬರುವಂತಹ ಸಾಧ್ಯತೆ‌. ಮಾತಿನ ಮೂಲಕ ಜಗಳ ಉಂಟಾಗುವ ಸಾಧ್ಯತೆ ಇರುವುದರಿಂದ  ಮಾತಿನಲ್ಲಿ ನಿಗಾ ಇರಲಿ. ಭೂಲಾಭ, ವಾಹನ ಲಾಭ. ಹೊಸ ಗೆಳೆತನ ಉಂಟಾಗುವ ಸಾಧ್ಯತೆ. ಉದರ ಸಂಬಂಧಿ ಕಾಯಿಲೆಗಳುಂಟಾಗುವ ಸಾಧ್ಯತೆ. ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಮುನ್ನಡೆ.




ಪರಿಹಾರ

ಶಿವನ ಆರಾಧನೆ ಅಗತ್ಯ. ಶಿವದೇವಸ್ಥಾನದಲ್ಲಿ ರುದ್ರಾಭಿಷೇಕ ಸೇವೆ, ಲಿಂಗಾಷ್ಟಕ ಶ್ಲೋಕವನ್ನು ಪಠಿಸುವುದರಿಂದ ಶುಭ.

ಜಪಿಸಲು:

ಶ್ರೀಮಹಾದೇವಾಯ ನಮಃ / ಶ್ರೀಮಹೇಶ್ವರಾಯ ನಮಃ / ಶ್ರೀಶಂಕರಾಯ ನಮಃ / ಶ್ರೀವೃಷಭಧ್ವಜಾಯ ನಮಃ / ಶ್ರೀಕೃತ್ತಿವಾಸಸೇ ನಮಃ / ಶ್ರೀಕಾಮಾಂಗನಾಶನಾಯ ನಮಃ / ಶ್ರೀದೇವದೇವೇಶಾಯ ನಮಃ /  ಶ್ರೀಶ್ರೀಕಂಠಾಯ ನಮಃ / ಶ್ರೀಹರಾಯ ನಮಃ / ಶ್ರೀಪಾರ್ವತೀಪತಯೇ ನಮಃ / ಶ್ರೀರುದ್ರಾಯ ನಮಃ / ಶ್ರೀಶಿವಾಯ ನಮಃ

    °~•~°~•~°~•~°~•~°~•~°      

 


ಕನ್ಯಾ
ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಮುನ್ನಡೆ. ನಿಮ್ಮ ಕಾರ್ಯಕ್ಷಮತೆ ಮೆಚ್ಚಿ ಹಿರಿಯ ಅಧಿಕಾರಿಗಳಿಂದ ಉತ್ತಮ ಪ್ರಶಂಸೆ. ಹಣಕಾಸಿನ ವಿಚಾರದಲ್ಲಿ ಗೆಳೆಯನಿಂದ ಸಹಾಯ. ಆರ್ಥಿಕ ಪರಿಸ್ಥಿತಿಯಲ್ಲಿ ಸಣ್ಣ ಮಟ್ಟಿನ ಮುನ್ನಡೆ. ಮನೆಯಲ್ಲಿ ಅಶಾಂತಿ ಇದ್ದರೂ ಕೂಡ ಮಕ್ಕಳಿಂದ ಮನಃಶಾಂತಿ, ಸಂತೋಷ. ಶತ್ರು ಭಯ. ವಾಹನದಲ್ಲಿ  ತೆರಳುವಾಗ ಜಾಗರೂಕರಾಗಿರಬೇಕು. ದಾಂಪತ್ಯದಲ್ಲಿ ಕಲಹ. ಮೈ ಕೈ ಗಂಟು ನೋವುಗಳು, ಮಲಬದ್ಧತೆ, ಮುಂತಾದ ತೊಂದರೆ. ವಿದ್ಯಾರ್ಥಿಗಳಿಗೆ ಮುನ್ನಡೆ.



ಪರಿಹಾರ

ಶ್ರೀರಾಮದೇವರ ಆರಾಧನೆಯಿಂದ  ಶುಭ.

ಜಪಿಸಲು:

ರಾಮಾಯ ರಾಮಭದ್ರಾಯ

ರಾಮಚಂದ್ರಾಯ ವೇಧಸೇ|  

ರಘುನಾಥಾಯ ನಾಥಾಯ

ಸೀತಾಯಾಃ ಪತಯೇ ನಮಃ ||

  °~•~°~•~°~•~°~•~°~•~°       

 

ತುಲಾ
ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಅಭಿವೃದ್ಧಿ. ನಿಮ್ಮ ಕಾರ್ಯಕ್ಷಮತೆ ಮೆಚ್ಚಿ ಹಿರಿಯ ಅಧಿಕಾರಿಗಳಿಂದ ಉತ್ತಮ ಪ್ರಶಂಸೆ. ಸ್ನೇಹಿತರಿಂದ  ಮೋಸ ಹೋಗುವಂತಹ ಸಾಧ್ಯತೆಗಳಿರುವುದರಿಂದ ಜಾಗರೂಕತೆ ಅಗತ್ಯ. ಹಣಕಾಸಿನ ವಿಚಾರದಲ್ಲಿ ಅಭಿವೃದ್ಧಿ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಮಕ್ಕಳ ಆರೋಗ್ಯದ ಕುರಿತು ನಿಗಾ ಅಗತ್ಯ. ದಾಂಪತ್ಯದಲ್ಲಿ ಸಣ್ಣ ಕಲಹ ಸಾಧ್ಯತೆ. ಆರೋಗ್ಯದಲ್ಲಿ ವಾಯುಸಂಬಂಧಿ, ರಕ್ತ ಸಂಬಂಧಿ, ಪಿತ್ತ ಸಂಬಂಧಿ ತೊಂದರೆಗಳ ಸಾಧ್ಯತೆ ಇರುವುದರಿಂದ  ಆಹಾರದ ಬಗ್ಗೆ ನಿಗಾ ಅಗತ್ಯ. ಆದಷ್ಟು ಪೌಷ್ಟಿಕಯುತವಾದ ಮನೆಯ ಆಹಾರದ ಸೇವನೆ ಒಳ್ಳೆಯದು. ವಿದ್ಯಾರ್ಥಿಗಳಿಗೆ ಮುನ್ನಡೆ. ಸಂಗೀತ, ಕಲಾ, ಸಾಹಿತ್ಯ, ವಿಚಾರವಾಗಿ ಕಲಿಯಲು ಅವಕಾಶ.


ಪರಿಹಾರ  

ದುರ್ಗಾದೇವಿಯ ಶ್ಲೋಕ ಪಠಿಸುವುದರಿಂದ ಶುಭ.

ಜಪಿಸಲು:

ಶ್ರೀದುರ್ಗಾಯೈ ನಮ: / ಶ್ರೀಶಾಂತ್ಯೈ ನಮ: / ಶ್ರೀಶಾಂಭವ್ಯೈ ನಮ: / ಶ್ರೀಭೂತಿದಾಯಿನ್ಯೈ ನಮ: / ಶ್ರೀಶಂಕರಪ್ರಿಯಾಯೈ ನಮ: / ಶ್ರೀನಾರಾಯಣ್ಯೈ ನಮ: / ಶ್ರೀಭದ್ರಕಾಲ್ಯೈ ನಮ: / ಶ್ರೀಶಿವದೂತ್ಯೈ ನಮ: / ಶ್ರೀಮಹಾಲಕ್ಷ್ಮ್ಯೈ ನಮ: / ಶ್ರೀ ಮಹಾಮಾಯಾಯೈ ನಮ: / ಶ್ರೀಯೋಗನಿದ್ರಾಯೈ ನಮ: / ಶ್ರೀಚಂಡಿಕಾಯೈ ನಮ
          

°~•~°~•~°~•~°~•~°~•~°

 


ವೃಶ್ಚಿಕ

 

ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಮುನ್ನಡೆ. ಕೆಲಸ ಕಾರ್ಯಗಳಲ್ಲಿ ಸ್ನೇಹಿತರಿಂದ ಸಹಾಯ. ಮನಶ್ಶಾಂತಿ.  ಹಣಕಾಸಿನ ವಿಚಾರಗಳಲ್ಲಿ ಮೋಸ ಹೋಗುವ ಸಾಧ್ಯತೆ. ಆರ್ಥಿಕ ಪರಿಸ್ಥಿತಿಯಲ್ಲಿ ಹಿನ್ನಡೆ. ಮನೆಯ ದುರಸ್ತಿಗೆ ಹಣ ಹಾಕಬೇಕಾಗಬಹುದು. ಸ್ನೇಹಿತರಿಗೆ ಹಣ ಕೊಡಬೇಕಾದ ಅಂತಹ ಅವಶ್ಯಕತೆಗಳು ಬರುವುದು. ಮಕ್ಕಳು ದಾರಿ ತಪ್ಪುವ ಸಾಧ್ಯತೆ ಇರುವುದರಿಂದ ಮಕ್ಕಳ ಮೇಲೆ ಗಮನ ಅಗತ್ಯ. ತಂದೆತಾಯಿಯ ಆರೋಗ್ಯ ವಿಚಾರದಲ್ಲಿ ನಿಗಾ ಅಗತ್ಯ. ಆರೋಗ್ಯದಲ್ಲಿ ಹಿನ್ನಡೆ. ಆಹಾರದಲ್ಲಿ ವ್ಯತ್ಯಾಸ ಆಗದಿರುವಙತೆ ಗಮನವಿರಲಿ. ಉದರ ಸಂಬಂಧಿ ಹಾಗೂ ರಕ್ತಸಂಬಂಧಿ ತೊಂದರೆಗಳು ಬರುವ ಸಾಧ್ಯತೆ. ವಿದ್ಯಾರ್ಥಿಗಳಿಗೆ ಉದಾಸೀನತೆಯಿಂದ  ಹಿನ್ನಡೆ.




ಪರಿಹಾರ

ದೇವೀ,ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆಯಿಂದ ಶುಭ


ಜಪಿಸಲು:

ಷಡಾನನಂ ಕುಂಕುಮರಕ್ತವರ್ಣಂ

ಮಹಾಮತಿಂ ದಿವ್ಯಮಯೂರವಾಹಮ್ |

ರುದ್ರಸ್ಯ ಸೂನುಂ ಸುರಸೈನ್ಯನಾಥಂ

ಗುಹಂ ಸದಾ ಶರಣಮಹಂ ಪ್ರಪದ್ಯೇ ||

°~•~°~•~°~•~°~•~°~•~°

 


ಧನು

 

ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಮುನ್ನಡೆ. ಉತ್ತಮವಾದ ಕಾರ್ಯಕ್ಷಮತೆಯಿಂದ ಹೊಸ ಅವಕಾಶವಿದ್ದರೂ ಆಲಸ್ಯತನದಿಂದಾಗಿ  ಕಳೆದುಕೊಳ್ಳಬೇಕಾದೀತು. ಮಾನಸಿಕ ಕಿರಿಕಿರಿ. ಭೂಸಂಬಂಧಿ ಕಲಹಗಳನ್ನು ಎದುರಿಸಬೇಕಾದೀತು. ದಾಂಪತ್ಯದಲ್ಲಿ ಸಣ್ಣ ಕಲಹ. ತಾಯಿಯ ಅನಾರೋಗ್ಯದಲ್ಲಿ ವ್ಯತ್ಯಾಸ. ವಾಹನ ಪ್ರಯಾಣದಲ್ಲಿ ಜಾಗರೂಕತೆ ಅಗತ್ಯ. ಕಣ್ಣಿಗೆ ಸಂಬಂಧಿಸಿದ, ವಾತಕ್ಕೆ ಸಂಬಂಧಿಸಿದ ತೊಂದರೆ, ಮೈ ಕೈ ಗಂಟು ನೋವು. ವಿದ್ಯಾರ್ಥಿಗಳಿಗೆ ಆಲಸ್ಯದಿಂದಾಗಿ ಬರಬೇಕಾದ ಪ್ರಶಸ್ತಿಗಳು ದೂರವಾಗುವುದು.  


ಪರಿಹಾರ

ಕುಲದೇವತಾ ಆರಾಧನೆ ಅಗತ್ಯ. ವಿಷ್ಣುಸಹಸ್ರನಾಮ ಪಾರಾಯಣ.

ಜಪಿಸಲು:

ಶ್ರೀಕೇಶವಾಯ ನಮಃ / ಶ್ರೀನಾರಾಯಣಾಯ ನಮಃ / ಶ್ರೀಮಾಧವಾಯ ನಮಃ / ಶ್ರೀಗೋವಿಂದಾಯ ನಮಃ / ಶ್ರೀವಿಷ್ಣವೇ ನಮಃ / ಶ್ರೀಮಧುಸೂದನಾಯ ನಮಃ /  ಶ್ರೀತ್ರಿವಿಕ್ರಮಾಯ ನಮಃ / ಶ್ರೀವಾಮನಾಯ ನಮಃ / ಶ್ರೀಶ್ರೀಧರಾಯ ನಮಃ / ಶ್ರೀಹೃಷಿಕೇಶಾಯ ನಮಃ / ಶ್ರೀಪದ್ಮನಾಭಾಯ ನಮಃ / ಶ್ರೀದಾಮೋದರಾಯ ನಮಃ

     °~•~°~•~°~•~°~•~°~•~°

ಮಕರ
ವ್ಯವಹಾರಕ್ಷೇತ್ರ, ಉದ್ಯೋಗ ಕ್ಷೇತ್ರಗಳಲ್ಲಿ ಸಣ್ಣ ಮುನ್ನಡೆ. ಮಾನಸಿಕ ಶಾಂತಿ. ಸಹೋದರರೊಂದಿಗೆ ಕಲಹ ಸಾಧ್ಯತೆ.  ಆರ್ಥಿಕವಾಗಿ ಹಿನ್ನಡೆ. ವಾಹನ ಪ್ರಯಾಣದಲ್ಲಿ ಜಾಗರೂಕರಾಗಿರಬೇಕು. ಕೃಷಿಯಲ್ಲಿ ಉತ್ತಮವಾದ ಫಲ. ದಾಂಪತ್ಯ ಜೀವನದಲ್ಲಿ ಸಣ್ಣ ಕಲಹವಿದ್ದರೂ ಸುಖ ಲಭಿಸೀತು. ಹಿರಿಯರಿಂದ ಉತ್ತಮ ಹಾರೈಕೆ. ಶ್ವಾಸಕ್ಕೆ,  ಜೀರ್ಣಕ್ಕೆ, ಚರ್ಮಕ್ಕೆ ಸಂಬಂಧಿಸಿದ ತೊಂದರೆಗಳುಂಟಾಗುವ ಸಾಧ್ಯತೆ. ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಉತ್ತಮ ಫಲ.




ಪರಿಹಾರ

ಶಿವ ದೇವಸ್ಥಾನ ದರ್ಶನ, ರುಧ್ರಾಭಿಷೇಕ, ಕುಲದೇವತಾರಾಧನೆಯಿಂದ ಶುಭ.  

ಜಪಿಸಲು:

ಶ್ರೀಮಹಾದೇವಾಯ ನಮಃ / ಶ್ರೀಮಹೇಶ್ವರಾಯ ನಮಃ / ಶ್ರೀಶಂಕರಾಯ ನಮಃ / ಶ್ರೀವೃಷಭಧ್ವಜಾಯ ನಮಃ / ಶ್ರೀಕೃತ್ತಿವಾಸಸೇ ನಮಃ / ಶ್ರೀಕಾಮಾಂಗನಾಶನಾಯ ನಮಃ / ಶ್ರೀದೇವದೇವೇಶಾಯ ನಮಃ /  ಶ್ರೀಶ್ರೀಕಂಠಾಯ ನಮಃ / ಶ್ರೀಹರಾಯ ನಮಃ / ಶ್ರೀಪಾರ್ವತೀಪತಯೇ ನಮಃ / ಶ್ರೀರುದ್ರಾಯ ನಮಃ / ಶ್ರೀಶಿವಾಯ ನಮಃ

   °~•~°~•~°~•~°~•~°~•~°          

 


ಕುಂಭ   

 

ಕಾರ್ಯಕ್ಷೇತ್ರಗಳಲ್ಲಿ ಏಳಿಗೆ. ಹೊಸ ಕೆಲಸ ಕಾರ್ಯಗಳನ್ನು ಮಾಡಲು ಅವಕಾಶಗಳು ದೊರೆಯುವುದು. ಬಡ್ತಿ ದೊರೆಯುವುದು. ಹಣಕಾಸಿನ ವಿಚಾರಗಳಲ್ಲಿ ಉತ್ತಮ ಏಳಿಗೆ ಇದ್ದರೂ ಕೂಡ ಸಣ್ಣ ಪುಟ್ಟ ವಿಘ್ನಗಳು ಬರುವ ಸಾಧ್ಯತೆ. ಬೇರೆಯವರಿಂದ ಬರಬೇಕಾದ ಹಣ ಹಿಂದಿರುಗುವ ಸಾಧ್ಯತೆ. ಕುಟುಂಬದಲ್ಲಿ ಆಗುವ ಕಲಹದಿಂದ ಮನಃಶಾಂತಿಗೆ ಕೊರತೆ. ಬಂಧುಗಳಿಂದ ಸಹಾಯ. ನಿಮ್ಮ ಕೋಪದಿಂದಾಗಿ ದಾಂಪತ್ಯ ಜೀವನದಲ್ಲಿ ಕಲಹ ಸಾಧ್ಯತೆ. ಮಾತಿನಲ್ಲಿ ನಿಗಾ ಇರಲಿ. ಆರೋಗ್ಯದಲ್ಲಿ ಶೀತ ಜ್ವರ ಕೆಮ್ಮು ಮೊದಲಾದ ತೊಂದರೆಗಳು ಬರುವ ಸಾಧ್ಯತೆ. ವಿದ್ಯಾರ್ಥಿಗಳಿಗೆ ಮುನ್ನಡೆ.




ಪರಿಹಾರ  

ಶಿವದೇವಸ್ಥಾನ ದರ್ಶನ, ರುಧ್ರಾಭಿಷೇಕ ಸೇವೆ, ಕುಲದೇವತಾ ಆರಾಧನೆಯಿಂದ ಶುಭ.

ಜಪಿಸಲು:

ರುದ್ರಂ ಪಶುಪತಿಂ ಸ್ಥಾಣುಂ

ನೀಲಕಂಠಮ್ ಉಮಾಪತಿಂ |

ನಮಾಮಿ ಶಿರಸಾ ದೇವಂ

ಕಿಂ ನೋ ಮೃತ್ಯುಃ ಕರಿಷ್ಯತಿ  ||೧||

°~•~°~•~°~•~°~•~°~•~°

 

ಮೀನ   

 

ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಹಿನ್ನಡೆ. ಆಲಸ್ಯದಿಂದಾಗಿ ವ್ಯವಹಾರ ಕ್ಷೇತ್ರದಲ್ಲಿ ಅವಕಾಶ ಕಳೆದುಕೊಳ್ಳುವ ಸಾಧ್ಯತೆ. ಕಾರ್ಯಗಳಲ್ಲಿ  ವಿಘ್ನವುಂಟಾದರೂ ಮನ:ಶಾಂತಿ ಇರಲಿದೆ. ಹಣಕಾಸಿನ ವ್ಯವಸ್ಥೆಯಲ್ಲಿ ವಿಧಾನ ಗತಿಯ ಮುನ್ನಡೆ. ಆರೋಗ್ಯದಲ್ಲಿ ಜ್ವರ ಕೆಮ್ಮು ಮುಂತಾದ ತೊಂದರೆಗಳು ಬರುವ ಸಾಧ್ಯತೆ. ದಾಂಪತ್ಯ ಜೀವನದಲ್ಲಿ ಸುಖ.  ಮಕ್ಕಳಿಂದ ಸಂತಸ. ಹಿರಿಯರಿಂದ ಪ್ರಶಂಸೆ. ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಮುನ್ನಡೆ.


ಪರಿಹಾರ

ಶ್ರೀಮಹಾವಿಷ್ಣುದೇವರ ಆರಾಧನೆಯಿಂದ ಶುಭ. ಕುಲದೇವತಾ ಆರಾಧನೆಯು ಅತ್ಯಗತ್ಯವಾಗಿದೆ



ಜಪಿಸಲು:    

ಶಾಂತಾಕಾರಂ ಭುಜಗಶಯನಂ

ಪದ್ಮನಾಭಂ ಸುರೇಶಂ  

ವಿಶ್ವಾಧಾರಂ ಗಗನಸದೃಶಂ

ಮೇಘವರ್ಣಂ ಶುಭಾಂಗಮ್ |

ಲಕ್ಷ್ಮೀಕಾಂತಂ ಕಮಲನಯನಂ

ಯೋಗಿಹೃದ್ಧ್ಯಾನಗಮ್ಯಂ

ವಂದೇ ವಿಷ್ಣುಂ ಭವಭಯಹರಂ

ಸರ್ವಲೋಕೈಕನಾಥಂಮ್  ||



{ವಿ. ಸೂ. : ಮೇಲೆ ಕೊಟ್ಟ ಪರಿಹಾರ ಶ್ಲೋಕ ಮತ್ತು ನಾಮಗಳನ್ನು ಸ್ನಾನದ ಅನಂತರ ಶುಚಿಯಾಗಿ ದೇವರ ಮುಂದೆ ದೀಪ ಹಚ್ಚಿ ನಿರ್ಮಲ ಮನಸ್ಸಿನಿಂದ 48 ಸಲ ಪಠಿಸಬೇಕು.}

Author Details


Srimukha

Leave a Reply

Your email address will not be published. Required fields are marked *