ಗೋಸ್ವರ್ಗದಿ ಚಿಣ್ಣರ ಕಲರವ

ಗೋಶಾಲಾ

ಗೋಸ್ವರ್ಗ: ಸಿದ್ಧಾಪುರ ತಾಲೂಕಿನ ರಮಾನಂದ ಶಿಕ್ಷಣ ಸಂಸ್ಥೆ, ವಿದ್ಯಾಗಿರಿ, ಕತ್ರಗಾಲ ಇಲ್ಲಿನ ಪುಟಾಣಿ ಮಕ್ಕಳು ಗೋಸ್ವರ್ಗಕ್ಕೆ ಭೇಟಿನೀಡಿದ್ದರು.

ಬೆಳಿಗ್ಗೆ 11ಗಂಟೆಗೆ ಆಗಮಿಸಿದ 120ಮಕ್ಕಳಿಗೆ ಶುದ್ಧದೇಸೀ ಹಾಲನ್ನು ವಿತರಿಸಲಾಯಿತು. ಶ್ರೀರಾಮ ಸನ್ನಿಧಿಯಲ್ಲಿ ಭಜನೆ, ಮಂಗಳಾರತಿ ಸೇವೆಗಳನ್ನು ಪೂರೈಸಿ ಗೋ ದರ್ಶನಕ್ಕೆ ತೆರಳಿದರು. ಗೋಸ್ವರ್ಗದ ಗೋವುಗಳು, ಕರುಗಳೊಡನೆ ಒಡನಾಡಿದರು. ಗೋವೃಂದದ ನಡುವೆ ಭಜನೆ, ಶ್ಲೋಕ ಪಠಣ ಮಾಡಿ ತೀರ್ಥರಾಜ ಮಹಾಸ್ನಾನದಲ್ಲಿ ಪಾಲ್ಗೊಂಡರು. ಮಧ್ಯಾಹ್ನದ ಪ್ರಸಾದ ಭೋಜನ ಸವಿದ ಚಿಣ್ಣರು ಮಠದಂಗಳದಿ ನಲಿದಾಡಿದರು.ಮಕ್ಕಳಿಗೆ ದೇಸೀ ಗೋವುಗಳ ಮಾಹಿತಿ ನೀಡುವ ಉದ್ದೇಶದಿಂದ ಕರೆತಂದ ಶಿಕ್ಷಣ ಸಂಸ್ಥೆಯವರ ಕಾರ್ಯಕ್ಕೆ ಉಚಿತವಾಗಿ ದೇಸಿಹಾಲಿನ ವಿತರಣೆ ಮಾಡುವ ಮೂಲಕ ಗೋಸ್ವರ್ಗ ಅಭಿನಂದನೆ ಸಲ್ಲಿಸಿತು.

Author Details


Srimukha

Leave a Reply

Your email address will not be published. Required fields are marked *