ಮಂಡಲಸಭೆಯಲ್ಲಿ ಶ್ರೀಮಾತಾಪ್ರಶಸ್ತಿಭೂಷಿತೆಗೆ ಮತ್ತು ಪೀಯೂಸೀ ವಾಣಿಜ್ಯ ಪ್ರತಿಭೆಗೆ ಸಮ್ಮಾನದ ಗೌರವ

ಸುದ್ದಿ

ಈ ತಿಂಗಳ ಮುಳ್ಳೇರಿಯಾ ಹವ್ಯಕ ಮಂಡಲದ ಮಾಸಿಕ ಸಭೆಯು ಮಡಿಕೇರಿಯಲ್ಲಿ ನೆರವೇರಿತು. ಕೊಡಗು ಹವ್ಯಕ ವಲಯಾಧ್ಯಕ್ಷ ಡಾ. ರಾಜಾರಾಮ ಭಟ್ಟ ಅವರ ನಿವಾಸದಲ್ಲಿ ಜರುಗಿದ ಮಾಸಿಕ ಸಭೆಯು ದೀಪಜ್ವಲನ, ಧ್ವಜಾರೋಹಣ, ಶಂಖನಾದ, ಗುರುವಂದನೆ, ಗೋಸ್ತುತಿಯೊಂದಿಗೆ ಸಭೆ ಪ್ರಾರಂಭವಾಯಿತು. ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಭಟ್ಟ ಸರ್ಪಮಲೆಯವರು ಪ್ರಾಸ್ತಾವಿಕ ನುಡಿಗಳನ್ನಾಡಿ, ಗತಸಭೆಯ ವರದಿ ನೀಡಿದರು. ವಲಯ ಪದಾಧಿಕಾರಿಗಳು ವಲಯ ವರದಿಗಳನ್ನಿತ್ತರು. ವಿಭಾಗ ಪ್ರಧಾನರು ಆಯಾ ವಿಭಾಗಗಳ ವರದಿ ನೀಡಿ ಮಾಹಿತಿಗಳನ್ನಿತ್ತರು. ಸಭೆಯಲ್ಲಿ ಶ್ರೀಮಠದ ಮಾರ್ಗದರ್ಶನದಲ್ಲಿ ಜರಗಿದ ವಿವಿಧ ಸಮಾರಂಭಗಳ ಕುರಿತು ಅವಲೋಕನೆ ಮಾಡಲಾಯಿತು. ಶ್ರೀಮಠದ ಸಕ್ರಿಯ ಕಾರ್ಯಕರ್ತೆ, ಮಹಿಳಾ ಸಬಲೀಕರಣದತ್ತ ವಿಶೇಷ ಕಾರ್ಯಚಟುವಟಿಕೆ, ಸೀತಾಮಾತೆಯ ಆದರ್ಶಗಳನ್ನು ಪಾಲಿಸುತ್ತಾ ಸಾಮಾಜಿಕವಾಗಿ ವಿಶೇಷ ಸಾಧನೆಗೈದ ಮಾತೆಗೆ ಶ್ರೀರಾಮಚಂದ್ರಾಪುರ ಮಠ ರಾಮೋತ್ಸವದ ಸಂದರ್ಭದಲ್ಲಿ ಶ್ರೀ ಸಂಸ್ಥಾನದವರಿಂದ ಪ್ರದಾನಿಸುವ ಶ್ರೀಮಾತಾ ಪ್ರಶಸ್ತಿ ಅನುಗ್ರಹ ಪಡೆದ ಮಹಾಮಂಡಲಾಧ್ಯಕ್ಷೆ ಶ್ರೀಮತಿ ಈಶ್ವರಿ ಬೇರ್ಕಡವು ಅವರನ್ನು ಶಾಲು ಹೊದೆಸಿ ಪೂರ್ಣಫಲವನ್ನಿತ್ತು ಗೌರವಿಸಲಾಯಿತು. ಗೌರವ ಸ್ವೀಕರಿಸಿ ಮಾತನಾಡಿದ ಶ್ರೀಮತಿ ಈಶ್ವರಿ ಬೇರ್ಕಡವು ‘ಗುರುಗಳ ಆದೇಶವನ್ನನುಸರಿಸಿ ಅದರಂತೆ ನಡೆದರೆ ಉನ್ನತಿ ಪ್ರಾಪ್ತಿಯಾಗುವುದೆಂಬುದಕ್ಕೆ ನಾನೇ ಉದಾಹರಣೆ. ನಮ್ಮ ಗುರುನಿಷ್ಠೆ ನಮ್ಮನ್ನು ಸದಾ ಕಾಪಾಡುತ್ತೆ. ಆದ್ದರಿಂದ ಪೂರ್ಣ ಶರಣಾಗತಿಯೊಂದಿಗೆ ಗುರುಸೇವೆ ಮಾಡಿದಲ್ಲಿ ಗುರುಗಳು ನಮ್ಮನ್ನು ಗುರಿ ತಲುಪಿಸುತ್ತಾರೆ. ಮುಳ್ಳೇರಿಯಾ ಮಂಡಲ ನನ್ನ ಮನೆ. ನನ್ನ ಮನೆ ಮಂದಿಯ ಕಾರ್ಯಕರ್ತರ ಸರ್ವ ಸಹಕಾರದಿಂದ ನನಗೆ ಈ ಪ್ರಶಸ್ತಿ ಬಂದಿದೆ. ಇದು ನಮಗೆಲ್ಲರಿಗೂ ಸಂದ ಪ್ರಶಸ್ತಿ ಎಂಬುದಾಗಿ ಅಭಿಪ್ರಾಯವನ್ನು ಹಂಚಿಕೊಂಡರು.

 

ಸಭೆಯಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಿ ಕೀರ್ತಿಗೆ ಭಾಜನರಾದ ಕಾಸರಗೋಡಿನ ಪೆರಡಾಲ ಕಡಪ್ಪು ಶ್ರೀ ಕೃಷ್ಣ ಶರ್ಮಾ ಇವರನ್ನು ಶಾಲುಹೊದೆಸಿ ಪೂರ್ಣಫಲ ನೀಡಿ ಅಭಿನಂದಿಸಲಾಯಿತು. ಅಭಿನಂದನೆಗೆ ಧನ್ಯತೆಯಿಂದ ಉತ್ತರಿಸುತ್ತಾ ಶ್ರೀ ಕೃಷ್ಣ ಶರ್ಮ ಯಾವುದೇ ಕಟ್ಟಡ ನಿರ್ಮಾಣಕ್ಕೆ ಭದ್ರವಾದ ಅಡಿಪಾಯ ಬೇಕು. ನನ್ನ ಜೀವನದಲ್ಲಿ ಶ್ರೀಭಾರತೀ ವಿದ್ಯಾಪೀಠದ ಮೂಲಕ ನನಗೆ ಈ ಭದ್ರತೆಯು ಲಭಿಸಿದೆ. ಶ್ರೀಸಂಸ್ಥಾನದ ಶ್ರೀರಕ್ಷೆ ನನಗೊದಗಿ ಬಂದುದರಿಂದ ಈ ಸಾಧನೆ ಸಾಧ್ಯವಾಯಿತು. ಮುಂದೆಯೂ ಶ್ರೀಚರಣ ಸೇವಕನಾಗಿರುತ್ತೇನೆ ಎಂದು ನುಡಿದರು. ಮಂಡಲ ಗುರಿಕ್ಕಾರ ಶ್ರೀ ಸತ್ಯನಾರಾಯಣ ಭಟ್ಟ ಮೊಗ್ರ ಅವರು ಮಹಾಪಾದುಕಾಪೂಜೆಯ ಯಶಸ್ವಿಗಾಗಿ ಕಾರ್ಯಕರ್ತರನ್ನು ಅಭಿನಂದಿಸಿ ಮುಂದೆಯೂ ಗುರುಸೇವೆಯಲ್ಲಿ ಮುಂಚೂಣಿಯಲ್ಲಿದ್ದು ಕಾರ್ಯನಿರತರಾಗೋಣ ಎಂದರು. ಮಂಡಲಾಧ್ಯಕ್ಷರಾದ ಪ್ರೊ ಶ್ರೀಕೃಷ್ಣ ಭಟ್ಟ ಇವರು ಅಧ್ಯಕ್ಷೀಯ ಮಾತುಗಳನ್ನಾಡಿದರು. ಸಾಮೂಹಿಕ ರಾಮಜಪ, ಶಾಂತಿಮಂತ್ರ, ಧ್ವಜಾವರೋಹಣ ಶಂಖನಾದವಾಗಿ ಸಭೆ ಮುಕ್ತಾಯವಾಯಿತು.

Author Details


Srimukha

Leave a Reply

Your email address will not be published. Required fields are marked *