ಅಭಿಮಾನಿಗಳ ದೇವರಿಗೆ 90ನೇ ಜಯಂತಿ

ಕೇವಲ ಮೂರನೇ ತರಗತಿಯವರೆಗೆ ಓದಿ ದೇಶ ಹೆಮ್ಮೆ ಪಡುವಂತಹ ನೂರಾರು ಸಾಧನೆ ಮಾಡಿ ಇಂದಿಗೂ ಕೋಟ್ಯಂತರ ಕನ್ನಡಿಗರ ಸ್ಪೂರ್ತಿಯ ಶಕ್ತಿಯಾಗಿರುವ ವರನಟ ಡಾ|| ರಾಜ್‍ಕುಮಾರ್ ಹುಟ್ಟಿದ್ದು ಎಪ್ರಿಲ್ 24, 1929 ನಿನ್ನೆ ಅಂದರೆ ಎಪ್ರಿಲ್ 24, 2019ಕ್ಕೆ ಅವರು ಹುಟ್ಟಿ 90 ವರ್ಷಗಳಾದವು. ಈ ಸಂದರ್ಭದಲ್ಲಿ ಅವರ ಸಾಧನೆಗಳು, ಅವರ ಜೀವ‌ನದ ಕುರಿತು ನಾವು ತಿಳಿಯಲೇಬೇಕಾದ ಕೆಲವು ಅಂಶಗಳನ್ನು ನೋಡೋಣ. ಡಾ|| ರಾಜ್ ಅವರ ಜನ್ಮತಃ ಬಂದ ನಾಮ ಮುತ್ತುರಾಜ್. ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಿ ಗೌಡರು ಗುಬ್ಬಿ […]

Continue Reading

ಸಾವಿರಾರು ಭಾರತೀಯರನ್ನು ಬಲಿ ಪಡೆದ ಬ್ರಿಟೀಷ್ ಕ್ರೌರ್ಯದ ಜಲಿಯನ್ ವಾಲಾಭಾಗ್ ಹತ್ಯಾಕಾಂಡಕ್ಕೆ ನೂರುವರ್ಷಗಳು

ಅಂದು ಸಿಖ್ಖರ ಪವಿತ್ರ ದಿನ ವೈಶಾಕಿ ಹಬ್ಬ, ಅದನ್ನ ಬೈಸಾಕಿ ಎಂದೂ ಕರೆಯುತ್ತಾರೆ. ಅಂದಿನ ಸಂಭ್ರಮದ ದಿನ ಸೂತಕದ ದಿನವಾಗಿ ಪರಿಣಮಿಸಿತ್ತು. ಹಬ್ಬ ಆಚರಿಸುತ್ತಾ, ಬ್ರಿಟೀಷರ ದುರಾಡಳಿತದ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಸಾವಿರಾರು ಭಾರತೀಯರು ಬ್ರೀಟಿಷರ ಕ್ರೌರ್ಯಕ್ಕೆ ಬಲಿಯಾಗಿದ್ದರು. ಬ್ರಿಟೀಷರು ಜಾರಿಗೊಳಿಸಿದ್ದ ರೌಲತ್ ಕಾಯ್ದೆಯ ವಿರುದ್ಧ ಗಾಂಧೀಜಿ ಪ್ರಬಲವಾಗಿ ದನಿ ಎತ್ತಿದ್ದರು. 1919 ಮಾರ್ಚ್ 30 ರಂದು ಗಾಂಧೀಜಿಯವರ ನೇತೃತ್ವದಲ್ಲಿ ಅಹಿಂಸಾತ್ಮಕ ರೀತಿಯಲ್ಲಿ ರೌಲತ್ ಕಾಯ್ದೆಯ ವಿರುದ್ಧ ಹರತಾಳ ಯಶಸ್ವಿಯಾಗಿ ನಡೆಯಿತು. ಆದರೆ ಅತ್ತ ಪಂಜಾಬ್‌‍ನಲ್ಲಿ ದಂಗೆ […]

Continue Reading

ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಮೊದಲ ಕಿಡಿಗೆ 162 ವರ್ಷಗಳು

ಭಾರತ ದೇಶದ‌ ಭವ್ಯ ಸಂಪತ್ತನ್ನು ಲೂಟಿಮಾಡಲೆಂದೆ ಹತ್ತು ಹಲವು ದೇಶದವರು ಪ್ರಾಂತ್ಯದವರು ದಾಳಿ ಮಾಡಿದರು. ಭಾರತದಿಂದ ಅವರೆಲ್ಲರೂ ಸಾಕಷ್ಟು ಲೂಟಿ ಮಾಡಿಕೊಂಡು ಹೋದರು. ಭಾರತದ ಶ್ರೀಮಂತ ಸಂಸ್ಕೃತಿ ಹಾಗೂ ವೈಭವದ ಪರಂಪರೆಯನ್ನು ಧ್ವಂಸ ಮಾಡುವ ಸಾಕಷ್ಟು ಪ್ರಯತ್ನಗಳೂ ನಡೆದಿವೆ. ಕೊನೆಯಲ್ಲಿ ಬ್ರಿಟಿಷರು ಸಂಪತ್ತಿನ ಲೂಟಿಯ ಜೊತೆಗೆ ಭಾರತವನ್ನು ಜೀತದಂತೆ ಆಳುವ ದುರುದ್ದೇಶದೊಂದಿಗೆ ಭಾರತಕ್ಕೆ ಕಾಲಿಟ್ಟಿತು. ಈಸ್ಟ್ ಇಂಡಿಯಾ ಕಂಪನಿಯ ನೆಪದಲ್ಲಿ ಭಾರತವನ್ನು ಬ್ರಿಟೀಷರು ವಶಪಡಿಸಿಕೊಂಡಾಗಿತ್ತು. ಸ್ವಾತಂತ್ರ್ಯಕ್ಕಾಗಿನ ಹೋರಾಟದಲ್ಲೂ ನಮ್ಮ ದೇಶದ್ದು ಅತ್ಯಂತ ಶ್ರೇಷ್ಠ ಇತಿಹಾಸ ಇದೆ. ಕೋಟ್ಯಾಂತರ […]

Continue Reading

ಕೇಳಿದಿರಾ ಸ್ವಾತಂತ್ಯಕ್ಕಾಗಿನ ಮೊದಲ ಹೋರಾಟದ ಯಶೋಗಾಥೆಯನ್ನು

ಸುಮಾರು 25-30 ವರ್ಷದ ಸ್ನಿಗ್ಧ ಸೌಂದರ್ಯದ 20 ಮಹಿಳೆಯರು ತನ್ನತ್ತ ಬರುವುದನ್ನು ಆ ಕಾವಲುಗಾರ ಗಮನಿಸಿದ. ಅವನಿಗೆ ಯಾವ ಅನುಮಾನವೂ ಬರಲಿಲ್ಲ. ಎರಡು ಮಹಿಳೆಯರು ದೊಡ್ಡ ದೊಡ್ಡ ಮಡಿಕೆಗಳನ್ನೂ, ಎರಡು ಮಹಿಳೆಯರು ಹತ್ತಿಯ ಮುದ್ದೆಯನ್ನೂ, ಕೆಲವರು ಹೂವಿನ ಬುಟ್ಟಿಗಳನ್ನು ಮತ್ತು ಕೆಲವರು ದೀಪ ಹಚ್ಚುವ ಹಣತೆಗಳನ್ನು ಹಿಡಿದುಕೊಂಡು ಬಂದಿದ್ದರು. ಹತ್ತಿರ ಬಂದ ಕೂಡಲೇ ಕಣ್ಣಿನಲ್ಲೇ ಅವರ ಸೌಂದರ್ಯವನ್ನು ಸವಿದ ಕಾವಲುಗಾರ, ಅವರನ್ನು ತಡೆಯಲು ಪ್ರಯತ್ನಿಸಿದಾಗ, ಕದ್ದುಮುಚ್ಚಿ ತಂದಿದ್ದ ಶಸ್ತ್ರಾಸ್ತ್ರಗಳಿಂದ ಕಾವಲುಗಾರನನ್ನು ಬಡಿದು ದೇವಸ್ಥಾನದ ಒಳ ಬರುತ್ತಾರೆ. ಆ […]

Continue Reading

ಆಜಾದರ ಅಜೇಯತೆ ಭಾರತದ ಅಜೇಯತೆಗೆ ಪ್ರೇರಣೆಯಾಗಲಿ

ಜವಾಬ್ದಾರಿ ಅರಿತು ನಡೆಯುವ ಕರ್ತವ್ಯ ಪ್ರತಿಯೊಬ್ಬ ನಾಗರಿಕರದ್ದು. ಭಾರತಕ್ಕೆ ಆಜಾದಿಯ ಕಲ್ಪನೆಯನ್ನು ಕೊಟ್ಟು ಅಜೇಯರಾಗಿಯೇ ಬದುಕು ಪೂರೈಸಿದ ಕ್ರಾಂತಿಕಾರಿ ಚಂದ್ರಶೇಖರ ಆಜಾದರು ತಮ್ಮ ಜೀವವನ್ನು ದೇಶಕ್ಕಾಗಿ ಅರ್ಪಿಸಿದ್ದು ನಿನ್ನೆಯ ದಿನ ಅಂದರೆ ಫೆಬ್ರವರಿ 27, 1931ರಲ್ಲಿ. ಅಹಿಂಸಾ ಪರಮೋ ಧರ್ಮಃ’ ಎಂಬ ಮಾತಿನಲ್ಲೇ ಮುಳುಗಿದ್ದ ಭಾರತೀಯರಿಗೆ ಭಾರತದವರೇ ಹೇಳಿದ ‘ಧರ್ಮಹಿಂಸಾ ತಥೈವ ಚ’ ಎಂಬದನ್ನು ನೆನಪಿಸುವ ಮೂಲಕ ಕ್ರಾಂತಿಕಾರಿ ಹೋರಾಟಕ್ಕೆ ಮುನ್ನುಡಿ ಬರೆದವರು ಆಜಾದರು. ಅವರ ತ್ಯಾಗದ ಸ್ಪೂರ್ತಿ ನಮ್ಮೆಲ್ಲರ ಹೃದಯದಲ್ಲಿ ನಿತ್ಯಸತ್ಯವಾಗಿದೆ. ಈ ಸ್ಮರಣೆಯಲ್ಲಿ ಒಂದು […]

Continue Reading

ಸಂತೋಷ ಮತ್ತು ತೃಪ್ತಿ

“ನಾನು ಶ್ರೀಮಂತನಿದ್ದೇನೆ, ನನ್ನ ಬಳಿ ಎಲ್ಲವೂ ಇದೆ, ನನಗೆ ಎಲ್ಲವೂ ಗೊತ್ತಿದೆ.. ಆದರೂ ನನಲ್ಲಿ ಸಂತೋಷ ಮತ್ತು ಸಂತೃಪ್ತಿ ಇಲ್ಲ, ಯಾಕೆ?” ಎಂದು ಪ್ರತಿಷ್ಠಿತ ವೆಬ್ಸೈಟ್ ಕೋರಾದಲ್ಲಿ ಒಬ್ಬರು ಪ್ರಶ್ನೆ ಕೇಳಿದ್ದರು. ಹಾಗಿದ್ದರೆ ಸಂತೋಷ ಮತ್ತು ತೃಪ್ತಿ ಯಾವಾಗ ಆಗುತ್ತದೆ, ಯಾವುದರಿಂದ ಆಗುತ್ತದೆ ಎಂಬುದರ ಕುರಿತು ನಾವು ತಿಳಿಯುವ ಪ್ರಯತ್ನ ಮಾಡೋಣ. ಸಂತೋಷಕ್ಕೂ ತೃಪ್ತಿಗೂ ವ್ಯತ್ಯಾಸ ಇದೆ. ಸಂತೋಷ ಎಂಬುದು ಆಹ್ಲಾದಕರ ಅನುಭವ, ಆನಂದದ‌ ಸ್ಥಿತಿ. ನಾವು ಇಷ್ಟಪಡುವ, ಪ್ರೀತಿಸುವ ವಸ್ತುಗಳು ಸಿಕ್ಕಾಗ, ಕೆಲಸಗಳನ್ನು ಮಾಡಿದಾಗ, ವ್ಯಕ್ತಿಗಳನ್ನು […]

Continue Reading

ನೆನೆಯಲೇಬೇಕು ದೇಶಕೆ ಧೈರ್ಯದ ಪಾಠ ಹೇಳಿಕೊಟ್ಟ ಪಂಜಾಬಿನ ಹುಲಿ

“ಸ್ವಾತಂತ್ರ್ಯವು ಬೇಡಿಕೆ ಅಥವಾ ಪ್ರಾರ್ಥನೆಯಿಂದ ಸಿಕ್ಕುವಂತದ್ದಲ್ಲ, ಅದು ಹೋರಾಟ ಮತ್ತು ಬಲಿದಾನಗಳಿಂದ ಮಾತ್ರ ಸಾಧ್ಯ” ಎಂದು ಗುಡುಗಿ, ಭರತ ಸಂಸ್ಕೃತಿಯಲ್ಲಿ ಹೇಳಲಾದ ಸಾಮ – ದಾನ – ಬೇದ – ದಂಡ ಇವುಗಳಲ್ಲಿ ದುಷ್ಟರಿಗೆ ದಂಡವನ್ನೂ ಪ್ರಯೋಗಿಸಬಹುದು ಎಂಬುದನ್ನು ನೆನಪಿಸಿ ದಾಸ್ಯ ಪದ್ದತಿಯಲ್ಲಿ ಮುಳುಗಿದ್ದ ಭಾರತೀಯರನ್ನು ಸ್ವಾತಂತ್ರ್ಯ ಹೋರಾಟಕ್ಕಾಗಿ ಬಡಿದೆಬ್ಬಿಸಿದ್ದು ಶ್ರೀ ಲಾಲಾ ಲಜಪತ್ ರಾಯ್. ಮೊನ್ನೆ ಜನವರಿ ೨೮ರಂದು ಲಾಲಾ ಅವರ ೧೫೧ನೇ ಜನ್ಮ ಜಯಂತಿಯ ಹಿನ್ನೆಲೆಯಲ್ಲಿ ಅವರ ಪ್ರೇರಣಾದಾಯಿ ಜೀವನಗಾಥೆಯನ್ನು ನೆನಪಿಸಿಕೊಳ್ಳುವ ಪ್ರಯತ್ನ ಮಾಡೋಣ. […]

Continue Reading

ಭವದ ಬಂಧ ಕಳೆಯುವ ಕುಂಭಮೇಳ

ಸನಾತನ ಪರಂಪರೆ ಹಿಂದಿನಿಂದಲೂ ನಿಸರ್ಗವನ್ನು ಆರಾಧಿಸುತ್ತಲೇ ಬಂದಿದೆ. ನೀರು, ಗಾಳಿ, ಅಗ್ನಿ, ಮರಗಿಡಗಳು, ಪರ್ವತ ಶಿಖರಗಳು ಇತ್ಯಾದಿ. ನದಿಗಳು ಪುರಾಣಗಳಲ್ಲಿ ಅತಿ ಮಹತ್ತ್ವದ ಸ್ಥಾನವನ್ನು ಹೊಂದಿದೆ. ಹರಿಯುವ ನದಿಗಳು ಮನುಷ್ಯನ ಜೀವನದ‌ ಮೂಲಾಧಾರವಾಗಿವೆ. ಸನಾತನಧರ್ಮದ ಹಲವಾರು ಆಚರಣೆಗಳು, ಹಬ್ಬಗಳು ನದಿಯನ್ನು ಒಳಗೊಂಡಿದೆ. ಮನುಷ್ಯ ತನ್ನ ಅಸ್ತಿತ್ವವನ್ನು, ಕೃತಜ್ಞತೆಯನ್ನು ನದಿಗಳ ಆರಾಧನೆಯ ಮೂಲಕ ಅನಾದಿಕಾಲದಿಂದಲೂ ಮಾಡುತ್ತಾ ಬಂದಿದ್ದಾನೆ. ತೀರ್ಥಕ್ಷೇತ್ರಗಳು ಬಹುತೇಕ ಜಲಸಂಪನ್ಮೂಲಗಳ ದಂಡೆಯಲ್ಲಿ ಇರುವುದು ಇನ್ನೂ ವಿಶೇಷ. ಇಲ್ಲಿ ನಡೆಯುವ ಯಜ್ಞಯಾಗಾದಿಗಳು, ಮಂತ್ರಾನುಷ್ಠಾನಗಳು, ಸಾಧನೆಗಳು ಇಲ್ಲಿನ ಪವಿತ್ರತೆಯನ್ನು ಹೆಚ್ಚಿಸಿವೆ. […]

Continue Reading

ಮಹಿಳಾ ಶಿಕ್ಷಣದ ‘ಜ್ಯೋತಿ’ಯನ್ನು ಹೊತ್ತಿಸಿದ ಸಾವಿತ್ರಿಬಾಯಿ ಫುಲೆ

ಜ್ಞಾನವೇ ಅರಿವೆಂಬ ಬೆಳಕಿನ ಮೂಲ. ಅಕ್ಷರವೇ ಜ್ಞಾನದ ಮೂಲ. ಕ್ರಾಂತಿಯೇ ಸಾಮಾಜಿಕ ಪರಿವರ್ತನೆಗೆ ಮುನ್ನುಡಿ. ಹೀಗೆ ಮಹಿಳೆಯರಿಗೆ ಅಕ್ಷರದ ಅರಿವು ಮೂಡಿಸುವ ಕ್ರಾಂತಿಯ ಮೂಲಕ ಸಾಮಾಜಿಕ ಪರಿವರ್ತನೆಯ ಬೀಜ ಬಿತ್ತು ಭಾರತದಲ್ಲಿ ಮಹಿಳೆಯರಿಗೆ ಹೊಸ ದಿಕ್ಕು ತೋರಿಸಿದವರು ಸಾವಿತ್ರಿಬಾಯಿ ಫುಲೆ. ನಿನ್ನೆ, ಜನವರಿ 3ನೆಯ ತಾರೀಕು ಅವರ ಜನ್ಮಜಯಂತಿ. ಈ ಸಂದರ್ಭದಲ್ಲಿ ಸಮಾಜದ ಜ್ಯೋತಿಯಾಗಿದ್ದ ಅವರ ಬದುಕಿನ ಕಡೆಗೊಂದು ಬೆಳಕು ಚೆಲ್ಲುವ ಪ್ರಯತ್ನ.   ಬಾಲ್ಯವಿವಾಹ ವ್ಯಾಪಕವಾಗಿ ರೂಢಿಯಲ್ಲಿದ್ದ ಆ ಕಾಲಕ್ಕೆ  ಏನೂ ಅರಿಯದ‌, ಕೇವಲ 8ನೆಯ […]

Continue Reading

ಭಾರತದ ಪ್ರಾಣ ರಕ್ಷಣೆ ~ ನಮ್ಮೆಲ್ಲರ ಹೊಣೆ

ಭಾರತೀಯರು ಬ್ರಿಟೀಷರ ದಾಸ್ಯವನ್ನು ಅನುಭವಿಸುತ್ತಿದ್ದಾಗ ಮೊಟ್ಟ ಮೊದಲು ಬ್ರಿಟೀಷರ ವಿರುದ್ಧ ಸಿಡಿದೇಳುವಂತೆ ಮಾಡಿದ್ದು ಗೋವು. ಅದು ಮೊದಲ ಸ್ವಾತಂತ್ರ್ಯ ಸಂಗ್ರಾಮದ ಕಾಲ,‌ ಹಿಂದೂಗಳನ್ನು ಅವಮಾನಿಸಲು ಕಾಡತೂಸುಗಳಿಗೆ ಗೋವಿನ ಕೊಬ್ಬನ್ನು ಸವರಿ ಕೊಡುತ್ತಿದ್ದ ಬ್ರಿಟೀಷರ ವಿರುದ್ಧ ಮೊದಲಿಗೆ ತಿರುಗಿ ಬಿದಿದ್ದು ಮಂಗಲ್ ಪಾಂಡೆ. ಅದೇ ಬಂದೂಕು ಮೊದಲ ಬಲಿ ಪಡೆದಿದ್ದು ಬ್ರಿಟೀಷರನ್ನೇ. ಹೀಗೆ ಸ್ವಾತಂತ್ರ್ಯದ ಕಿಚ್ಚು ಹೆಚ್ಚಾಗಿ ವ್ಯವಸ್ಥಿತ ಹೋರಾಟ‌ ರೂಪುಗೊಂಡಿತು.   ನಮ್ಮ ದೇಶಕ್ಕೆ ಗೋರಾಷ್ಟ್ರದೇಶ ಎಂದು ಹೇಳುವುದು ಗೋವುಗಳೇ ಭಾರತದ ಸಂಪತ್ತು ಎಂಬ ಕಾರಣದಿಂದಿರಬಹುದು. ಗೋವುಗಳು […]

Continue Reading