ಗೋವಿಗಾಗಿ ಮೇವು- ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡ ಕಾರ್ಯಕರ್ತರು

ಗೋವು ಸುದ್ದಿ

ಕಾಸರಗೋಡು: ಶ್ರೀಸಂಸ್ಥಾನದವರ ದಿಗ್ದರ್ಶನದಲ್ಲಿರುವ ಕಾಸರಗೋಡು ಪೆರ್ಲದ ಬಜಕೂಡ್ಲು ಅಮೃತಧಾರಾ ಗೋಶಾಲೆಗೆ ಪೆರಡಾಲ ವಲಯದ ಮಾಯಿಲಂಕೋಡಿ ಗಣೇಶ ಭಟ್ ಇವರ ಹಿತ್ತಲಲ್ಲಿ ಇದ್ದ ಮೇವಿನ ಹುಲ್ಲನ್ನು ಸಾಗಿಸಿ ತಲುಪಿಸುವ ಶ್ರಮದಾನ ಯಶಸ್ವಿಯಾಗಿ ಜರುಗಿತು.

 

ಮಂಗಳವಾರ ಗಣೇಶ್ ಭಟ್ ಅವರ ಹಿತ್ತಲಿನ ಹಸಿಹುಲ್ಲನ್ನು ಕಾರ್ಯಕರ್ತರ ನೇತೃತ್ವದಲ್ಲಿ ಕತ್ತರಿಸಲಾಯಿತು. ಮಹಾಮಂಡಲ ಅಧ್ಯಕ್ಷರಾದ ಶ್ರೀಮತಿ ಈಶ್ವರಿ ಶ್ಯಾಮ್ ಭಟ್ ಬೇರ್ಕಡವು, ಮುಳ್ಳೇರಿಯ ಮಂಡಲ ಮಾತೃ ವಿಭಾಗದ ಕುಸುಮಾ ಪೆರ್ಮುಖ, ಮುಳ್ಳೇರಿಯಾ ಮಂಡಲ ವಿದ್ಯಾರ್ಥಿವಾಹಿನಿ ಪ್ರಧಾನ ಕೇಶವ ಪ್ರಸಾದ ಎಡಕ್ಕಾನ, ಶ್ಯಾಮ್ ಭಟ್ ಬೇರ್ಕಡವು, ಪೆರಡಾಲ ವಲಯ ಅಧ್ಯಕ್ಷರಾದ‌ ಹರಿಪ್ರಸಾದ್ ಪೆರ್ಮುಖ, ನೀರ್ಚಾಲು ವಲಯ ಶಿಷ್ಯಮಾಧ್ಯಮ ವಿಭಾಗದ ಮಹೇಶ ಕೃಷ್ಣ ತೇಜಸ್ವಿ, ವಿದ್ಯಾರ್ಥಿವಾಹಿನಿ ವಿಭಾಗದ ಈಶ್ವರ ಭಟ್, ಶ್ರೀಕಾರ್ಯಕರ್ತರಾದ ರವಿಶಂಕರ ಕೋಂಬ್ರಾಜೆ, ಕಿರಣಾ ಮೂರ್ತಿ, ಗಾಯತ್ರೀ ಬೇರ್ಕಡವು, ಗಣೇಶ ಭಟ್ ಮಾಯಿಲಂಕೋಡಿ, ಉಷಾ ಜಿ ಭಟ್ ಇವರು ಕಾರ್ಯಕರ್ತರಾಗಿ ಸಹಕರಿಸಿದರು.

 

ಅಜಿತ್ ಏಣಿಯರ್ಪು ಅವರು ತಮ್ಮ ವಾಹನದಲ್ಲಿ ಕಟಾವು ಮಾಡಿದ ಹುಲ್ಲನ್ನು ಸಾಗಿಸಿ ಸಹಕರಿಸಿದರು. ಒಟ್ಟು 11 ಮಂದಿ ಕಾರ್ಯಕರ್ತರು ಭಾಗವಹಿಸಿದ್ದರು. ಹೀಗೆ ಕಾರ್ಯಕರ್ತರು ಸ್ವಯಂಪ್ರೇರಿತರಾಗಿ ಗೋವಿಗೆ ಮೇವು ಒದಗಿಸುವ ಕಾರ್ಯದಲ್ಲಿ‌ ನಿರತರಾಗಿರುವುದಕ್ಕೆ ಎಲ್ಲರೂ ಹರ್ಷ ವ್ಯಕ್ತಪಡಿಸಿದ್ದಾರೆ.

Author Details


Srimukha

Leave a Reply

Your email address will not be published. Required fields are marked *