ಗೋವಿಗಾಗಿ ಮೇವು : ಗುಂಪೆ ವಲಯದ ಕಾರ್ಯಕರ್ತರ ಶ್ರಮದಾನ, ಬಜಕೂಡ್ಲು ಗೋಶಾಲೆಗೆ ಹುಲ್ಲು ಸಾಗಾಟ

ಗೋವು

ಶ್ರೀಸಂಸ್ಥಾನದವರ ದಿಗ್ದರ್ಶನದಲ್ಲಿರುವ ಕಾಸರಗೋಡು ಪೆರ್ಲದ ಬಜಕೂಡ್ಲು ಅಮೃತಧಾರಾ ಗೋಶಾಲೆಗೆ ಗುಂಪೆ ವಲಯ ಪುತ್ತಿಗೆ ಸುಬ್ರಾಯ ದೇವಸ್ಥಾನದ ಹತ್ತಿರದ ಗದ್ದೆಯಲ್ಲಿದ್ದ ಮೇವಿನ ಹುಲ್ಲನ್ನು ಸಾಗಿಸಿ ತಲಪಿಸುವ ಶ್ರಮದಾನ 3.12.2018ರಂದು ನಡೆಯಿತು.

 

ಹವ್ಯಕ ಮಹಾಮಂಡಲದ ಅಧ್ಯಕ್ಷೆ ಶ್ರೀಮತಿ ಈಶ್ವರಿಶ್ಯಾಮ ಭಟ್ ಬೇರ್ಕಡವು, ಮಹಾಮಂಡಲ ಕಾಮದುಘಾ ಕಾರ್ಯದರ್ಶಿ ಡಾ.ವೈ.ವಿ. ಕೃಷ್ಣಮೂರ್ತಿ, ಮುಳ್ಳೇರಿಯಾ ಮಂಡಲದ ವಿದ್ಯಾರ್ಥಿವಾಹಿನಿ ಪ್ರಧಾನ ಶ್ರೀ ಕೇಶವಪ್ರಸಾದ ಎಡಕ್ಕಾನ, ಮಂಡಲ ಮಾತೃ ಪ್ರಧಾನೆ ಶ್ರೀಮತಿ ಕುಸುಮ ಪೆರ್ಮುಖ, ಗುಂಪೆ ವಲಯ ಕಾರ್ಯದರ್ಶಿ ಶ್ರೀ ಸುಬ್ರಹ್ಮಣ್ಯ ಭಟ್ ಬೆಜಪ್ಪೆ, ನೀರ್ಚಾಲು ವಲಯ ಉಪಾಧ್ಯಕ್ಷೆ ಶ್ರೀಮತಿ ಕನಕವಲ್ಲಿ ಬಡಗಮೂಲೆ, ಶ್ರೀ ಶ್ಯಾಮ್ ಭಟ್ ಬೇರ್ಕಡವು, ಶ್ರೀ ಕಾರ್ಯಕರ್ತರಾದ ಶ್ರೀ ಶಂಕರನಾರಾಯಣನ್ ಗುಂಪೆ, ಶ್ರೀ ಅಜಯ್ ಶಂಕರ ಖಂಡಿಗೆ, ಶ್ರೀಮತಿ ಕಿರಣಾ ಮೂರ್ತಿ, ಶ್ರೀಮತಿ ಸಾವಿತ್ರಿ ಈಂದುಗುಳಿ ಕಾರ್ಯಕರ್ತರಾಗಿ ಸಹಕರಿಸಿದರು.

 

ಕಾರ್ಯಕರ್ತರು ಹಸಿಹುಲ್ಲನ್ನು ಕತ್ತರಿಸಿ, ಶ್ರೀ ಅಜಿತ್ ಏಣಿಯರ್ಪು ಅವರ ವಾಹನದಲ್ಲಿ ಸಾಗಿಸಿದರು. ಒಟ್ಟು 11 ಮಂದಿ ಕಾರ್ಯಕರ್ತರು ಭಾಗವಹಿಸಿದ್ದರು.

 

Author Details


Srimukha

Leave a Reply

Your email address will not be published. Required fields are marked *