ಟೆಕ್ಕಿಗಳಿಂದ ಮಾಲೂರು ಗೋಶಾಲೆಯಲ್ಲಿ ಕಾರ್ಯಕ್ರಮ

ಗೋವು

ಬೆಂಗಳೂರು: ಪ್ರತಿದಿನವು ಕಂಪ್ಯೂಟರ್ ಎದುರು ಕುಳಿತು ಏಕತಾನೆತೆಯಿಂದ ಹೊರಬರಲು ಟೆಕ್ಕಿಗಳು ವಾರಾಂತ್ಯದ ಬಿಡುವಿನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದಾರೆ.

 

ಮಾಹಿತಿ ತಂತ್ರಜ್ಞಾನ (ಐಟಿ) ವಿಭಾಗದ ರಾಮಮೂರ್ತಿ ತಂಡ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಹಯೋಗ ದಲ್ಲಿ ದಿನಾಂಕ ೧೩-೦೧-೨೦೧೯ರ ಭಾನುವಾರದಂದು ಮಾಲೂರಿನ ರಾಘವೇಂದ್ರ ಗೋಆಶ್ರಮದಲ್ಲಿ ಒಂದು ದಿನದ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

 

ಭಾನುವಾರ ಬೆಳಗ್ಗೆ ಗೋ ಪೂಜೆಯಿಂದ ಕಾರ್ಯಕ್ರಮಕ್ಕೆ ಚಾಲನೆ ದೊರೆತು ಭಜನೆ, ಪ್ರಾರ್ಥನೆ, ಗಾಳಿಪಟ ಹಾರಿಸುವಿಕೆ ಜತೆಗೆ ಗೋವಿನ ಉತ್ಪನ್ನಗಳ ತಯಾರಿಕಾ ಘಟಕಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಲಿದ್ದಾರೆ.

Author Details


Srimukha

Leave a Reply

Your email address will not be published. Required fields are marked *