ಗವ್ಯೋತ್ವನ್ನ ಮಾರಾಟ ಮಳಿಗೆಯ ಶುಭಾರಂಭ

ಸುದ್ದಿ

ಮಾಣಿ: ಪೆರಾಜೆಯ ಮಾಣಿಯಲ್ಲಿರುವ ಶ್ರೀರಾಮಚಂದ್ರಾಪುರಮಠದಲ್ಲಿ ಗವ್ಯೋತ್ವನ್ನ ಮಾರಾಟ ಮಳಿಗೆಯು ಶುಭಾರಂಭಗೊಂಡಿದೆ. ದಿನಾಂಕ 04-11-2018ರ ಮಂಗಳವಾರದಂದು ಆರಂಭವಾದ ಗವ್ಯೋತ್ವನ್ನ ಮಾರಾಟ ಮಳಿಗೆಯನ್ನು ಸೇವಾ ಸಮಿತಿಯ ಸದಸ್ಯರಾದ ಶ್ರೀ ಗೋವಿಂದ ಭಟ್ ಮುದ್ರಜೆಯವರು ಉದ್ಘಾಟಿಸಿದರು. ಸೇವಾ ಸಮಿತಿಯ ಕೋಶಾಧಿಕಾರಿ ಮೈಕ್ಕೆ ಶ್ರೀ ಗಣೇಶ್ ಭಟ್ ರವರು ಗವ್ಯೋತ್ಪನ್ನಗಳನ್ನು ಖರೀದಿಸುವ ಮೂಲಕ ಮೊದಲ ಗ್ರಾಹಕರಾದರು.

 

ಈ ಸಂದರ್ಭದಲ್ಲಿ ಸೇವಾ ಸಮಿತಿಯ ಅಧ್ಯಕ್ಷರಾದ ಹಾರಕರೆ ಶ್ರೀ ನಾರಾಯಣ ಭಟ್, ಕಾರ್ಯದರ್ಶಿಗಳಾದ ಬಂಗಾರಡ್ಕ ಶ್ರೀ ಜನಾರ್ದನ ಭಟ್, ಸದಸ್ಯರಾದ ಶ್ರೀ ಗಿರಿಶಂಕರ ಕೈಲಾರು, ಕಾರ್ಯಾಲಯ ಕಾರ್ಯದರ್ಶಿ ಶ್ರೀ ಶಿವಪ್ರಸಾದ್, ಶ್ರೀ ಪ್ರಸನ್ನ ಭಟ್, ಶ್ರೀ ವಿಘ್ನೇಶ್ವರ ಭಟ್ ಉಪಸ್ಥಿತರಿದ್ದರು.‌

 

Author Details


Srimukha

Leave a Reply

Your email address will not be published. Required fields are marked *