ಮಾತೃತ್ವಮ್ ವತಿಯಿಂದ ಗೋಆಶ್ರಮಕ್ಕೆ ಒಣಮೇವು ಸಮರ್ಪಣೆ

ಗೋಶಾಲಾ

ಮಾಲೂರು: ಶ್ರೀ ರಾಘವೇಂದ್ರ ಗೋ ಆಶ್ರಮಕ್ಕೆ ಶ್ರೀಮಠದ ಮಾತೃತ್ವಮ್ ವತಿಯಿಂದ ಎರಡು(ಐದು ಲೋಡ್ ನಲ್ಲಿ) ಲೋಡ್ ಒಣಹುಲ್ಲನ್ನು ಸಮರ್ಪಣೆ ಮಾಡಿದರು. ಸುಮಾರು ಇಪ್ಪತ್ತಕ್ಕೂ ಹೆಚ್ಚು ಮಾಸದ ಮಾತೆಯರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು

ಗೋ ಆಶ್ರಮದ ವಿಶೇಷ ಕರ್ತವ್ಯಾಧಿಕಾರಿ ರಾಮಚಂದ್ರ ಅಜ್ಜಕಾನ ಅವರಿಗೆ ಸಾಂಕೇತಿಕವಾಗಿ ಮೇವು ಹಸ್ತಾಂತರಿಸಲಾಯಿತು.

ಇದಕ್ಕೂ ಮೊದಲು ಮಾತೆಯರು ಶ್ರೀ ಸಿದ್ಧಾಂಜನೇಯ ಸ್ವಾಮಿಯ ಸನ್ನಿಧಿಯಲ್ಲಿ ಹನುಮಾನ್ ಚಾಲೀಸಾ ಪಠಿಸಿದರು. ನಂತರ ಗೋಪೂಜೆಯನ್ನು ನೆರವೇರಿಸಿದರು. ಗೋಆಶ್ರಮದ ವತಿಯಿಂದ ಅಮೃತಾನ್ನ ಪ್ರಸಾದ ನೀಡಲಾಯಿತು.

ಮಾತೃತ್ವಮ್ ಅಧ್ಯಕ್ಷೆ ಈಶ್ವರೀ ಬೇರ್ಕಡವು, ಪ್ರಧಾನ ಕಾರ್ಯದರ್ಶಿ ನಾಗರತ್ನ ಜಿ. ಶರ್ಮಾ, ಸಂಘಟನಾ ಕಾರ್ಯದರ್ಶಿ ಶೈಲಜಾ ಪೋಳ್ಯ, ಕೋಶಾಧಿಕಾರಿ ಜಯಶೀಲಾ ಶ್ರೀನಿವಾಸ್, ಬೆಂಗಳೂರು ಪ್ರಾಂತ್ಯ ಅಧ್ಯಕ್ಷೆ ಹೇಮಾ ಶ್ರೀನಿವಾಸ್, ಬೆಂಗಳೂರು ಉತ್ತರ ನಗರ ಪ್ರಧಾನೆ ವೀಣಾ ಗೋಪಾಲಕೃಷ್ಣ, ಬೆಂಗಳೂರು ನಗರ ಕೋಶಾಧಿಕಾರಿ ವಿದ್ಯಾ ಎಸ್. ಹೆಗಡೆ ಸೇರಿ ಮಾಸದ ಮಾತೆಯರು, ಸುರಭಿ ಸೇವಿಕೆಯರು, ದಾನಿಗಳು, ಶ್ರೀಮಠದ ಮಾಧ್ಯಮ ವಿಭಾಗದ ಶ್ರೀಸಂಯೋಜಕ ಉದಯಶಂಕರ ಮಿತ್ತೂರು ಮತ್ತು ಗೋಆಶ್ರಮದ ಕೃಷ್ಣ ಭಟ್, ಲಕ್ಷ್ಮೀಶ, ಅನಂತ ಮತ್ತಿತರರು ಉಪಸ್ಥಿತರಿದ್ದರು.

Author Details


Srimukha

Leave a Reply

Your email address will not be published. Required fields are marked *