ಗೋವಿಗಾಗಿ ಮೇವು ಮೇವಿಗಾಗಿ ನಾವು

ಗೋಶಾಲಾ

ಮುಳ್ಳೇರಿಯಾ ಮಂಡಲ ಪೆರಡಾಲ ವಲಯದ ಸಂಪತಿಲ ಶಿವರಾಮ ಭಟ್ ಹುಲ್ಲಿನ ಪ್ಲಾಟ್ ನಲ್ಲಿದ್ದ ಒಂದು ಪಿಕ್ ಅಪ್ ಸಂಪೂರ್ಣ ಜಾತಿಯ ಹುಲ್ಲನ್ನು ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಅದಿನದಲ್ಲಿ ಇರವ ಬಜಕೂಡ್ಲು ಅಮೃತಧಾರ ಗೋಶಾಲೆಯ ಗೋವುಗಳಿಗೆ ನೀಡಿದ್ದಾರೆ.

ಕಾಮದುಘಾ ಕಾರ್ಯದರ್ಶಿ ವೈ ವಿ ಕೃಷ್ಣ ಮೂರ್ತಿ, ಮಂಡಲ ಸಂಘಟನಾ ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ, ಮಂಡಲ ಕೋಶಾಧಿಕಾರಿ ಹರಿ ಪ್ರಸಾದ ಪೆರ್ಮುಖ, ಪೆರಡಾಲ ವಲಯ ಕಾರ್ಯದರ್ಶಿ ವಿಷ್ಣು ಪ್ರಸಾದ, ಶ್ರಮದಾನದ ಮುಖಾಂತರ ಕಟಾವು, ಕಟ್ಟ ಕಟ್ಟುವುದು, ವಾಹನಕ್ಕೆ ಹೊತ್ತೊಯ್ಯುವ ಕೆಲಸವನ್ನು ಮಾಡಿದರು.

ಸಂಜೆಗೆ ಪಿಕ್ ಅಪ್ ಭರ್ತಿ ಹಸಿ ಹುಲ್ಲು ಗೋಶಾಲೆಗೆ ತಲುಪಿಸಲಾಯಿತು. ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿಯೂ ಗೋಕಿಂಕರರು ಮಾಸ್ಕ್ ಬಳಕೆ ಹಾಗೂ ಅಂತರ ಕಾಯ್ದುಕೊಂಡು ಭಾಗವಹಿಸಿದರು.

Author Details


Srimukha

Leave a Reply

Your email address will not be published. Required fields are marked *