ಮಾತು~ಮುತ್ತು : ಸದಾ ಕ್ರೀಯಾಶೀಲರಾಗೋಣ – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ

ಶ್ರೀಸಂಸ್ಥಾನ

ಒಮ್ಮೆ ಒಂದು ಊರಿನಲ್ಲಿ ಕಪ್ಪೆಗಳ ನಡುವೆ ಒಂದು ಎತ್ತರದ ಕಂಬವನ್ನು ಏರುವ ಸ್ಪರ್ಧೆ ಏರ್ಪಡುತ್ತದೆ. ಈ ಸ್ಪರ್ಧೆಯನ್ನು ನೋಡಲು ಸುತ್ತಮುತ್ತಲಿನ ಪ್ರಾಣಿಗಳೆಲ್ಲವೂ ಬಂದು ಸೇರುತ್ತವೆ. ಸ್ಪರ್ಧೆ ಪ್ರಾರಂಭವಾಗುತ್ತದೆ. ಆಗ ಕೆಲವು ಪ್ರಾಣಿಗಳು-
“ಈ ಕಂಬ ತುಂಬ ಎತ್ತರ ಇರುವುದರಿಂದ ಈ ಪುಟ್ಟ ಪುಟ್ಟ ಕಪ್ಪೆಗಳಿಂದ ಅದನ್ನು ಏರಲು ಸಾಧ್ಯವೇ ಇಲ್ಲ” ಎಂದವು.
ಇನ್ನು ಕೆಲವು ಪ್ರಾಣಿಗಳು-
“ಕಂಬ ತುಂಬ ಜಾರುತ್ತಿರುವುದರಿಂದ ಈ ಕಪ್ಪೆಗಳಿಂದ ಕಂಬ ಏರಲು ಸಾಧ್ಯವಿಲ್ಲ” ಎಂದು ಹೇಳಿಕೊಳ್ಳುತ್ತಿದ್ದವು.

 

ಈ ಮಾತುಗಳನ್ನು ಕೇಳಿದ ಕಪ್ಪೆಗಳು-
“ಸುಮ್ಮನೆ ಶ್ರಮ ಪಡುವುದು ವ್ಯರ್ಥ; ನಮ್ಮಿಂದ ಈ ಕಂಬ ಏರಲು ಸಾಧ್ಯವಿಲ್ಲ” ಎಂದು ತಮ್ಮಲ್ಲಿಯೇ ಮಾತನಾಡಿಕೊಳ್ಳುತ್ತವೆ.

 

ಆದರೆ ಒಂದು ಪುಟ್ಟ ಕಪ್ಪೆ ಮಾತ್ರ ಅತ್ಯಂತ ಶ್ರಮವಹಿಸಿ ಒಂದೇ ಸಮನೆ ಕಂಬ ಏರಲು ಪ್ರಯತ್ನಿಸಿ ತುದಿಯನ್ನು ಮುಟ್ಟಲು ಯಶಸ್ವಿಯಾಗುತ್ತದೆ. ಎಲ್ಲರಿಗೂ ಆಶ್ಚರ್ಯ. ಹಿಂತಿರುಗಿ ಬಂದ ಆ ಕಪ್ಪೆಯನ್ನು ಪ್ರಾಣಿಗಳೆಲ್ಲ
“ಅದು ಹೇಗೆ ನೀನು ಏರಿದೆ?” ಎಂದು ಕೇಳುತ್ತವೆ. “ನನಗೆ ಕಿವಿ ಇಲ್ಲವಾದ್ದರಿಂದ ನೀವು ಹೇಳಿದ ಯಾವ ಮಾತು ನನಗೆ ಕೇಳಿಸಲಿಲ್ಲ” ಎಂದು ಆ ಕಪ್ಪೆಯು ಹೇಳುತ್ತದೆ.

 

ಇದರಲ್ಲಿ ಎರಡು ಸಂದೇಶಗಳಿವೆ. ಒಂದು ಸಮಾಜಕ್ಕೆ, ಇನ್ನೊಂದು ವ್ಯಕ್ತಿಗೆ. ಸಮಾಜಕ್ಕೆ ಸಂದೇಶವೆಂದರೆ ಯಾವ ಸಂದರ್ಭದಲ್ಲಿಯೂ ನಿರುತ್ಸಾಹದ ಮಾತುಗಳನ್ನು ಆಡಬಾರದು. ವ್ಯಕ್ತಿಗಳಿಗೆ ಸಂದೇಶವೆಂದರೆ ಅಂತಹ ಮಾತುಗಳನ್ನು ಯಾರಾದರೂ ಆಡಿದರೆ ಅದನ್ನು ನೀವು ಕೇಳಿಸಿಕೊಳ್ಳಬೇಡಿ, ಸದಾ ಕ್ರಿಯಾಶೀಲರಾಗಿರಿ ಎಂದು.

Author Details


Srimukha

Leave a Reply

Your email address will not be published. Required fields are marked *