ಹೊಸನಗರ: ಶ್ರೀರಾಮಚಂದ್ರಾಪುರಮಠದ
ಶ್ರೀಭಾರತೀಗುರುಕುಲಂನಲ್ಲಿ, ಬಾಹ್ಯಾಕಾಶ ಮತ್ತು ತ್ಯಾಜ್ಯ ನಿರ್ವಹಣೆ ಎಂಬ ವಿಷಯದ ಬಗ್ಗೆ
ನಿವೃತ್ತ ಇಸ್ರೋ ನಿರ್ದೇಶಕರಾದ ಶ್ರೀ ಡಾ. ಪಿ. ಜೆ. ಭಟ್ಟರು ಎರಡು ದಿನಗಳ ಕಾರ್ಯಾಗಾರ ನಡೆಸಿದರು.
ಕಾರ್ಯಾಗಾರದ ಅಂತ್ಯದಲ್ಲಿ ಮಕ್ಕಳ ಸಂಶಯಗಳನ್ನು ನಿವಾರಿಸಿ, ಮಕ್ಕಳಿಗೆ ರಸಪ್ರಶ್ನೆ ನಡೆಸಿ, ಉತ್ತರಿಸಿದವರನ್ನು ಪುರಸ್ಕರಿಸಿದರು. ಬಳಿಕ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಶ್ರೀ ಲಕ್ಷ್ಮಿತಾಂಡವೇಶ್ವರ ಮೈಸೂರು ಅತಿಥಿಯಾಗಿ ಭಾಗವಹಿಸಿದರು.