ಅಕ್ಷಯದ ಅನುಗ್ರಹ – ಮುಷ್ಟಿಭಿಕ್ಷೆ : ಶ್ರೀಮತಿ ಪ್ರಸನ್ನಾ ವಿ. ಚೆಕ್ಕೆಮನೆ ಧರ್ಮತ್ತಡ್ಕ

ಆದಿಶಂಕರರಿಂದ ಸ್ಥಾಪಿಸಲ್ಪಟ್ಟು ಅವಿಚ್ಛಿನ್ನವಾಗಿ ಮುಂದುವರಿದಿರುವ ಶ್ರೀರಾಮಚಂದ್ರಾಪುರಮಠದ ಮೂವತ್ತಾರನೆಯ ಯತಿವರರಾದ ಶ್ರೀರಾಘವೇಶ್ವರಭಾರತೀ ಶ್ರೀಗಳ ಶಿಷ್ಯರು ನಾವು ಎಂಬುದೇ ಮನಸ್ಸಿಗೆ ಪರಮಾಪ್ತವಾದ ವಿಚಾರ.   ಸಮಾಜದ ಅಭಿವೃದ್ಧಿಯನ್ನೇ ಪರಮಗುರಿಯನ್ನಾಗಿಸಿಕೊಂಡ ಶ್ರೀಗಳು ಕೈಗೊಂಡಿರುವ ಯೋಜನೆಗಳು ಹಲವಾರು. ಆ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿರುವ ಮಾರ್ಗ ನಿಜಕ್ಕೂ ವಿಶಿಷ್ಟ ಹಾಗೂ ಅದ್ಭುತ.   ಸವೆದು ಹೋಗುತ್ತಿದ್ದ ಪ್ರೀತಿ, ವಿಶ್ವಾಸ, ಮಾನವೀಯತೆಯ ಸರಪಣಿಗೆ ಹೊಸ ರೂಪುರೇಷೆ ಕೊಟ್ಟು, ಸಮಾಜದ ಎಲ್ಲರನ್ನೂ ಒಂದೇ ರೀತಿಯ ಮಮತೆಯ ಕೊಂಡಿಯಿಂದ ಬೆಸೆದು, ಶಿಷ್ಯಭಕ್ತರಿಗೆ ಸೂಕ್ತ ಮಾರ್ಗದರ್ಶನವಿತ್ತು, ಸಹಜೀವನದ ಮಹತ್ತ್ವವನ್ನು ಮನಗಾಣಿಸಿ ಧರ್ಮಸ್ಥಾಪನೆಗಾಗಿ […]

Continue Reading

‘ಅಶು’ವೆಂಬ ಹಸುವಿಗೊಂದು ಪತ್ರ – ಶ್ರೀಮತಿ ಶುಭಶ್ರೀ ಭಟ್ಟ, ಗುಡಬಳ್ಳಿ ಕುಮಟಾ

‘ಅಶೂ!! ಹೇಗಿದ್ದಿಯಾ ಮರಿ? ಕಾಮಧೇನುವಿನ ಸ್ವರ್ಗದಲ್ಲಿ ಎಲ್ಲರೂ ಚೆನ್ನಾಗಿ ನೋಡ್ಕೊತಾ ಇದಾರಲ್ವಾ?ಹಿಂಡಿ, ಗಂಜಿ, ಅಕ್ಕಚ್ಚು, ನೀರು, ಹಣ್ಣೆಲ್ಲಾ ಚೆಂದ ಇರ್ತದಾ? ಬೇಕಾದಷ್ಟು, ಹೊಟ್ಟೆ ತುಂಬುವಷ್ಟು, ತಿಂದು ತೇಗುವಷ್ಟು ತಿನ್ನಲಿಕ್ಕೆ ಕೊಡ್ತಾರಾ ಅಶೂ? ನನ್ನ ಮೇಲಿನ್ನೂ ಸಿಟ್ಟುಂಟಾ? ನಾನೇನ್ ಮಾಡ್ಲಿ ಹೇಳು ನಾನಾಗ ತುಂಬಾ ಚಿಕ್ಕೋಳು.   ಕುಂದಾಪುರದ ಅತ್ತೆ ಮನೆಯಿಂದ ನಿನ್ನಮ್ಮ ಸರಸ್ವತಿಯ ಜೊತೆ ಪುಟು-ಪುಟುವೆಂದು ತಪ್ಪು ಹೆಜ್ಜೆ ಇಡುತ್ತಾ ಬಂದವಳು ನೀನು. ವಾರವೂ ತುಂಬಿರದ ನೀನು ನಮ್ಮೆಲ್ಲರಿಗೂ ಬಲು ಅಚ್ಚುಮೆಚ್ಚಾಗಿದ್ದೆ. ಕಪ್ಪುರೋಮದ ಮೈಯಿ, ಬಿಳಿ ಹಂಡಾಪಟ್ಟೆ […]

Continue Reading

ಮಾನವೀಯತೆಯ ಸಾಕಾರ ಮಹದೀಶ್ವರ

ಕೇರಳದ ತುತ್ತತುದಿ ಮತ್ತು ಕರ್ನಾಟಕದ ಪಾದಮೂಲದಲ್ಲಿರುವ ಗಡಿನಾಡು ಕಾಸರಗೋಡು. ೧೯೫೬ರಲ್ಲಿ ಕೇರಳದ ತೆಕ್ಕೆಗೆ ಸೇರಿದ ಈ ಊರು ೧೯೮೪ರಲ್ಲಿ ಜಿಲ್ಲಾಕೇಂದ್ರವಾಯ್ತು. ಹೆಚ್ಚುಕಡಿಮೆ ಹದಿಮೂರು ಲಕ್ಷ ಜನಸಂಖ್ಯೆ. ಸಂಖ್ಯಾ ಬಾಹುಳ್ಯದಲ್ಲಿ ಹಿಂದೂಗಳ ಅನಂತರದ ಸ್ಥಾನದಲ್ಲಿ ಮುಸ್ಲಿಮರಿದ್ದಾರೆ. ೩.೪೮ ಕೋಟಿ ಕೇರಳದ ಜನಸಂಖ್ಯೆ. `ಟೈಮ್ಸ್ ಆಫ್ ಇಂಡಿಯಾ’ ಮತ್ತು `ದಿ ಹಿಂದು’ ವರದಿ (೨೦೧೫-೨೦೧೬)ಗಳ ಪ್ರಕಾರ ಭಾರತ ದೇಶದಲ್ಲೇ ಅತ್ಯಧಿಕ ಬೀಫ್ (ಹಸು ಮತ್ತು ಕೋಣಗಳ ಮಾಂಸ) ಬಳಕೆಯಾಗುತ್ತಿರುವ ರಾಜ್ಯ ಕೇರಳ. ಸಂಖ್ಯಾ ಸಮೀಕ್ಷೆ: ೩೫,೩೨೪ ಸಾವಿರ ಮೆಟ್ರಿಕ್ ಟನ್ […]

Continue Reading

ದ್ವೀಪದಲ್ಲೊಂದು ದಿವ್ಯತೆ; ಪ್ರಕೃತಿಯ ಅನುಪಮ ರಮ್ಯತೆ; ಶ್ರೀಕ್ಷೇತ್ರ ಹೈಗುಂದ; ಅಪರೂಪ; ಅತಿವಿಶಿಷ್ಟ

ಶಾಂತಗಂಭೀರವಾಗಿ ಹರಿಯುವ ಸುಂದರ ಶರಾವತಿಯ ಮಡಿಲಲ್ಲಿದೆ ಹೈಗುಂದ. ತಾಯಿ ಶ್ರೀದುರ್ಗಾಂಬಿಕೆಯ ಸಾನ್ನಿಧ್ಯದ ಮಹಿಮೆ ಇದರದ್ದು. ಹವ್ಯಕ ಬ್ರಾಹ್ಮಣರ ಮೂಲನೆಲೆ ಈ ಪ್ರಾಚೀನ ಯಾಗಭೂಮಿ. ವರ್ಷಋತುವಿನ ವರ್ಷಾಧಾರೆಯ ತಂಪಿನಲ್ಲೂ, ಗ್ರೀಷ್ಮದ ಸುಡುಬಿಸಿಲಿನ ತಾಪದಲ್ಲೂ ಹಚ್ಚಹಸುರಾಗಿ ತೋರುವದು ಈ ದ್ವೀಪ.   ಸುಮಾರು ೧೫೦೦ ವರ್ಷಗಳ ಹಿಂದೆ ಕದಂಬರ ದೊರೆ ಬನವಾಸಿಯ ರಾಜ ಮಯೂರವರ್ಮ ಯಾಗಕ್ಕಾಗಿ ಆರಿಸಿದ ಸ್ಥಳ ಹೈಗುಂದ. ಯಾಗರಕ್ಷಣೆಗಾಗಿ ನದಿಯನ್ನು ಎರಡು ಭಾಗವಾಗಿಸಿ ಯಾಗಭೂಮಿಯ ಸುತ್ತಲೂ ನೀರು ಹರಿಯುವಂತೆ ಮಾಡಿದ. ಸರಸ್ವತೀ ನದಿಯ ತೀರದಲ್ಲಿರುವ ಅಹಿಚ್ಛತ್ರವೆಂಬ ನಗರದಿಂದ […]

Continue Reading

ಮಠವೆಂಬ ಮನೆ, ಗುರುವೆಂಬ ತಾಯಿ – ರಮ್ಯಾ ಸುರೇಶ್ ಮಾಬಲಡ್ಕ

ಮಠವೆಂಬ ಮನೆ, ಗುರುವೆಂಬ ತಾಯಿ, ಈ ಶೀರ್ಷಿಕೆ ಯಾಕೆಂದರೆ, ನಮ್ಮ ಮಠದಲ್ಲಿದ್ದರೆ ಮನೆಯದ್ದೇ ಭಾವ, ಮನೆಗಿಂತಲೂ ಹೆಚ್ಚಿನ ನೆಮ್ಮದಿ. ಗುರು ದೃಷ್ಟಿಗೆ ಸಿಲುಕುವಂತ್ತಿದ್ದಲ್ಲಿ, ತಾಯಿಯ ಮಮತೆಯ ಭಾವ, ತಾಯಿಯ ಮಡಿಲಿಗಿಂತಲೂ ಹೆಚ್ಚಿನ ನೆಮ್ಮದಿ. ಯಾವ ಮಠ ಅಂತೀರಾ – ನಮ್ಮ ಪ್ರೀತಿಯ ಶ್ರೀ ರಾಮಚಂದ್ರಾಪುರ ಮಠ. ಯಾವ ಗುರು ಕೇಳ್ತೀರಾ – ನಮ್ಮ ಪ್ರೀತಿಯ ಶ್ರೀ ಸಂಸ್ಥಾನ. ಅಜ್ಞಾನ, ಅಂಧಕಾರಗಳು ಮನೆ ಮಾಡಿತ್ತು. ಸಂಸ್ಕಾರ, ಧರ್ಮವೆಂಬ ಶಬ್ಧಗಳೇ ಹಿಂದೆ ಸರಿಯುತ್ತಾ ಇತ್ತು. ಶಾಲೆ, ಕಾಲೇಜು, ಉದ್ಯೋಗ, foreign […]

Continue Reading