ಮಠದ ಮೂಲ ಕಥೆ – ಮೂಲ ಮಠದ ಕಥೆ – ೩ : ಮಹೇಶ ಎಳ್ಯಡ್ಕ

ಆಚಾರ್ಯ ಶಂಕರರಿಂದ ಪರಂಪರೆಯು ಆರಂಭಗೊಂಡಿತು. ಸುರೇಶ್ವರಾಚಾರ್ಯರ ಮೂಲಕ ವಿದ್ಯಾನಂದಾಚಾರ್ಯರು ಪ್ರಥಮ ಪೀಠಾಧಿಪತಿಗಳಾದರು. ವಿದ್ಯಾನಂದರ ತರುವಾಯ ಚಿದ್ಭೋದಭಾರತೀ ಶ್ರೀಗಳವರು, ಅವರ ಶಿಷ್ಯರು ನಿತ್ಯಾನಂದಭಾರತೀ ಶ್ರೀಗಳು, ಅವರ ಶಿಷ್ಯರು ನಿತ್ಯಬೋಧಘನೇಂದ್ರಭಾರತೀ ಶ್ರೀಗಳು ಹೀಗೇ ಸಾಗುತ್ತದೆ ಶಾಂಕರ ಪರಂಪರೆ.   ಹನ್ನೊಂದನೆಯ ಪೀಠಾಧಿಪತಿಗಳಾದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು (ಪರಂಪರೆಯ ಪ್ರಥಮ ರಾಘವೇಶ್ವರಭಾರತೀ ಶ್ರೀಗಳು, ಶಾ.ಶಕೆ 1386) ಯೋಗ್ಯ ವಟುವನ್ನು ಶಿಷ್ಯರನ್ನಾಗಿ ಸ್ವೀಕರಿಸಿ, ತಮ್ಮ ಆರಾಧ್ಯದೈವ ಶ್ರೀರಾಮಚಂದ್ರನ ಹೆಸರನ್ನೇ ನಾಮಕರಣ ಮಾಡಿ ಯೋಗಪಟ್ಟವನ್ನು ಅನುಗ್ರಹಿಸುತ್ತಾರೆ. ಶ್ರೀಶ್ರೀರಾಮಚಂದ್ರಭಾರತೀ ಶ್ರೀಗಳ ಪ್ರೌಢಿಮೆ ಮತ್ತು ಧರ್ಮಬೋಧೆಗಳು ಕೆಳದಿ ಚೌಡಪ್ಪನಾಯಕನ […]

Continue Reading

ಮಠದ ಮೂಲ ಕಥೆ – ಮೂಲ ಮಠದ ಕಥೆ – ೨ ; ಮಹೇಶ ಎಳ್ಯಡ್ಕ

ವರದಮುನಿಗಳಿಂದ ರಾಮಾದಿ ವಿಗ್ರಹವನ್ನು ಸ್ವೀಕರಿಸಿ, ಆಚಾರ್ಯ ಶಂಕರರು ತಮ್ಮ ಶಿಷ್ಯರೊಂದಿಗೆ ಗೋಕರ್ಣದಿಂದ ಪೂರ್ವಾಭಿಮುಖವಾಗಿ ಹೊರಟರು. ಪ್ರಶಾಂತ ಪರಿಸರವನ್ನು ತಲುಪಿದರು.   ಅರೆ! ಏನಾಶ್ಚರ್ಯ!   ಆಜನ್ಮ ವೈರತ್ವವಿರುವ ಹಾವು-ಕಪ್ಪೆ, ಜಿಂಕೆಮರಿ-ಹುಲಿ ಇತ್ಯಾದಿ ಪ್ರಾಣಿಗಳು ತಮ್ಮ ಸಹಜ ವೈರತ್ವ ಮರೆತು ಸಹಬಾಳ್ವೆಗೈಯುತ್ತಿದ್ದಾರೆ. ಆಚಾರ್ಯ ಶಂಕರರಿಗೆ ಇದು ವಿಶೇಷವೂ ಆಶ್ಚರ್ಯಕರವೂ ಆಗಿ ಕಂಡಿತು. ಧರ್ಮದ ಸಹಜಭೂಮಿಯಿದು. ಕರ್ಮಗಳು ಶಾಶ್ವತವಾಗಿ ಬೆಳೆಯಬೇಕಿರುವುದು ಇಂಥ ಸ್ಥಳದಲ್ಲಿಯೇ ಎಂದು ಆಚಾರ್ಯ ಶಂಕರರು ತಿಳಿದುಕೊಂಡರು.   ಆ ಪುಣ್ಯಭೂಮಿಯೇ – ಅಶೋಕೆ.   ಹೆಸರಿಗೆ ಅನ್ವರ್ಥವಾಗಿ […]

Continue Reading

ಮಠದ ಮೂಲ ಕಥೆ – ಮೂಲ ಮಠದ ಕಥೆ – ೧ ; ಮಹೇಶ್ ಎಳ್ಯಡ್ಕ

  ಸುಮಾರು ಎಂಟನೆಯ ಶತಮಾನದಲ್ಲಿ ಭಾರತದಲ್ಲಿ ಪರಂಪರೆಯ ಬಗೆಗೆ ನಿರುತ್ಸಾಹ, ಅಂಧಶ್ರದ್ಧೆಗಳು ಮೇಳೈಸಿದ್ದವು. ಧರ್ಮದ ಬಗೆಗೆ ಜ್ಞಾನವು ಕಡಿಮೆಯಾಗುತ್ತಾ, ಇತರೇ ಧರ್ಮಗಳ ಪ್ರಭೆಯು ರಾರಾಜಿಸುತ್ತಿದ್ದವು. ಆ ಸಂದರ್ಭದಲ್ಲಿ ಮುದುಡಿ ಹೋಗುತ್ತಿದ್ದ ಸನಾತನ ಪರಂಪರೆಯನ್ನು ಮತ್ತೆ ಚಿಗುರಿಸಿದ ಮಹಾನ್ ಸಂತ – ಶ್ರೀಶಂಕರಾಚಾರ್ಯರು. ಶಂಕರಾಚಾರ್ಯರು ಅವತರಿಸಿದುದರಿಂದ ಏನಾಯಿತು ಎಂದು ತಿಳಿಯಬೇಕಾದರೆ, ಅವರು ಅವತರಿಸಿಲ್ಲದೇ ಇದ್ದಿದ್ದರೆ ಏನಾಗುತ್ತಿತ್ತು ಎಂಬುದನ್ನು ಒಂದು ಕ್ಷಣ ಯೋಚಿಸೋಣ. ಧರ್ಮದ ಬಗ್ಗೆ ತಿಳುವಳಿಕೆಯಿಲ್ಲದ ಜನಸಮೂಹವಿತ್ತು, ಅವೈದಿಕ ಮತಗಳ ಪ್ರಭೆ ಏರುತ್ತಿತ್ತು. ವೇದ-ಉಪನಿಷತ್ತುಗಳು ನಿರುಪಯುಕ್ತವಾಗುತ್ತಿತ್ತು. ಕ್ರಮೇಣ ಈ […]

Continue Reading

ಸೇವಾ ಅರ್ಘ್ಯವೆಂಬ ಯಜ್ಞದ ಸಮಿಧೆಗಳು : ಶ್ರೀಮತಿ ಪ್ರಸನ್ನಾ ವಿ. ಚೆಕ್ಕೆಮನೆ, ಧರ್ಮತ್ತಡ್ಕ

ಯಜ್ಞ ಎಂಬುದು ಅತ್ಯಂತ ಪವಿತ್ರ ಕಾರ್ಯ‌. ಅದರಲ್ಲಿ ಉಪಯೋಗಿಸುವ ಸಮಿಧೆಗಳಿಗೂ ಅಷ್ಟೇ ಮಹತ್ತ್ವವಿದೆ. ಎಲ್ಲ ಸೌದೆಗಳನ್ನೂ ಯಜ್ಞಕ್ಕೆ ಬಳಸಲಾಗುವುದಿಲ್ಲ. ಅರಳಿ, ಹಲಸು ಪಾಲಾಶಗಳಂತಹ ಪವಿತ್ರ ವೃಕ್ಷಗಳ ರೆಂಬೆಕೊಂಬೆಗಳಿಗೆ ಮಾತ್ರ ಅಲ್ಲಿ ಸ್ಥಾನ.   ಆದರೆ ಈ ಸೇವಾಅರ್ಘ್ಯವೆಂಬ ಪುಣ್ಯ ಯಜ್ಞದ ಸಮಿಧೆಗಳಾಗುವ ಸುಯೋಗ ನಮ್ಮದು. ‘ಇದೇನು ಹೊಸ ಯಜ್ಞ? ಯಾವುದು ಈ ಸಮಿಧೆ?’ ಎಂದು ಯೋಚಿಸುತ್ತಿರಬಹುದಲ್ಲವೇ? ಸೇವಾಅರ್ಘ್ಯ ಎಂದರೆ ಸಮಾಜಕ್ಕೆ ಸಲ್ಲಿಸುವುದು ನಮ್ಮಿಂದಾದ ಸೇವೆಯನ್ನು. ಅದರಲ್ಲಿ ಗೋಶಾಲೆಯ ಹಸುಗಳಿಗೆ ಮೇವು ಸಂಗ್ರಹಿಸುವ ಕಾರ್ಯವೂ ಒಂದು. ಅದುವೇ ಒಂದು […]

Continue Reading

ಕತ್ತಲೆಯ ಸಮಾಜಕ್ಕೊಂದು ಗುರುವೆಂಬ ಆಶಾಕಿರಣ (ಭಾಗ -೨) : ಮಹೇಶ ಕೋರಿಕ್ಕಾರ್

ನಾವಿಂದು 21ನೆಯ ಶತಮಾನದಲ್ಲಿ ಜೀವಿಸುತ್ತಿದ್ದೇವೆ. ಕಣ್ಣ ಮುಂದಿರುವ ಯಾವುದೇ ಕಾರ್ಯವಾದರೂ ಸರಿ, ಅದನ್ನು ಆರ್ಥಿಕತೆಯ ತಕ್ಕಡಿಯಲ್ಲಿಟ್ಟು ತೂಗಿ ಲಾಭ-ನಷ್ಟಗಳ ಲೆಕ್ಕಾಚಾರವನ್ನು ಗೈದ ಮೇಲೆಯೇ ಮುಂದುವರಿಯುವುದು ನಮ್ಮ ಅಭ್ಯಾಸ. ಅದೇ ಲೆಕ್ಕಾಚಾರದಲ್ಲಿ ಮುಳುಗಿ, ಆ ಕಾರ್ಯದ ಮುಖ್ಯ ಧ್ಯೇಯವೇನು ಎಂಬುದನ್ನೇ ಅದೆಷ್ಟೋ ಬಾರಿ ನಾವು ಮರೆಯುತ್ತೇವೆ. ಆ ಲೆಕ್ಕಾಚಾರದಿಂದಲಾಗಿಯೇ, ಮಾಡಲೇಬೇಕಾದ ಒಳ್ಳೆಯ ಕಾರ್ಯವನ್ನು ನಾವು ಮಾಡದೇ ಇರುವುದೂ ಇದೆ ಅಲ್ಲವೇ?   ವ್ಯವಹಾರದ ಜ್ಞಾನವನ್ನು ವರ್ಧಿಸಿಕೊಳ್ಳುವುದಕ್ಕೆ ಇಂದು ನಮ್ಮ ಕಣ್ಣ ಮುಂದೆ ಹಲವಾರು ಮಾಧ್ಯಮಗಳಿವೆ. ಶಾಲಾ ಕಾಲೇಜುಗಳಲ್ಲೂ, ವಿವಿಧ […]

Continue Reading

ಕತ್ತಲೆಯ ಸಮಾಜಕ್ಕೊಂದು ಗುರುವೆಂಬ ಆಶಾಕಿರಣ (ಭಾಗ – ೧) : ಮಹೇಶ ಕೋರಿಕ್ಕಾರ್

ತುಂಬು ನಿಸರ್ಗದ ಮಧ್ಯೆ ಹಳೆಯದಾದೊಂದು ಹೆಂಚು ಹಾಸಿನ ಮನೆ. ಮನೆಯ ಮುಂದೆ ಸೆಗಣಿ ಸಾರಿಸಿದ ವಿಶಾಲವಾದೊಂದು ಅಂಗಳ. ಅಂಗಳದ ತುಂಬೆಲ್ಲ ಹರಡಿದ ಅಡಿಕೆ, ಕಾಳುಮೆಣಸುಗಳ ಮಧ್ಯೆಯೊಂದು ತುಳಸೀ ಕಟ್ಟೆ. ಅಂಗಳದ ಆ ಬದಿಗೊಂದು ಆಕಳ ಕೊಟ್ಟಿಗೆ. ಅದರೊಳಗೆ ಹಸಿರು ಹುಲ್ಲನ್ನು ಮೇಯುತ್ತಾ ನಿರ್ಲಿಪ್ತವಾಗಿ ಮಲಗಿರುವ ಒಂದೆರಡು ಹಸುಗಳು. ಇನ್ನೂ ಮುಂದಕ್ಕೆ ದಟ್ಟವಾಗಿ ಹರಡಿರುವ ಅಡಿಕೆ ತೋಟ, ವಿಶಾಲವಾದ ಭತ್ತದ ಗದ್ದೆ. ಆಗೊಮ್ಮೆ ಈಗೊಮ್ಮೆ ಬಂದು ಹರಟೆ ಹೊಡೆದು ಹೋಗುವ ನೆರೆಮನೆಯವರು, ಬಂಧುಗಳು. ಮದುವೆ, ಉಪನಯನ, ಪೂಜೆ, ಪುರಸ್ಕಾರ, […]

Continue Reading

ಗೋಸ್ವರ್ಗ  ನಿರ್ಮಾಣವೆಂಬ ಐತಿಹಾಸಿಕ ಕಾರ್ಯ : ನಮಿತಾ ಹೆಗಡೆ ಹೊನ್ನಾವರ

    ಸ್ವರ್ಗದೆತ್ತರಕ್ಕೆ ಏರಲು ನಮಗೆಲ್ಲ ಸಾಧ್ಯವಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಈಗಿರುವ ಭೂಮಿಯನ್ನೇ ಸ್ವರ್ಗವನ್ನಾಗಿಸಬಹುದೆಂದು  ನಮಗೆಲ್ಲ ತೋರಿಸಿಕೊಟ್ಟವರು ಪರಮಪೂಜ್ಯ ಶ್ರೀಸಂಸ್ಥಾನದವರು. ಸ್ವರ್ಗವನ್ನೂ ನಾಚಿಸುವ ರೀತಿಯಲ್ಲಿ, ಮಲೆನಾಡಿನ ಹಸಿರಿನ ಮಡಿಲಲ್ಲಿ ಸಂಪೂರ್ಣ ಗೋಸೌಖ್ಯಕ್ಕೇ ಕೇಂದ್ರಿತವಾಗಿರುವ ಗೋಸ್ವರ್ಗವೆಂಬ ಅಪೂರ್ವ ಗೋಧಾಮವನ್ನು ನಿರ್ಮಿಸಿದ ಮಹಾನ್ ಚೇತನ ನಮ್ಮ ಶ್ರೀಗುರುಗಳು.    ಯಾಕೆ ಈ ಗೋಸ್ವರ್ಗ ಸ್ವರ್ಗಕ್ಕೂ ಮಿಗಿಲು ಎಂಬುದನ್ನು ಸಂಕ್ಷಿಪ್ತವಾಗಿ  ತಿಳಿದುಕೊಳ್ಳೋಣ.    ಗೋಸ್ವರ್ಗದ ಮಣ್ಣಿನಲ್ಲಿ, ಗಾಳಿಯಲ್ಲಿ, ನೀರಿನಲ್ಲಿ ದೈವದ ಸಾನ್ನಿಧ್ಯವಿದೆ. ಒಂದು ದೃಷ್ಟಿಯಲ್ಲಿ  ನೋಡಿದರೆ ಅದು ವಿಶ್ವದ ಸರ್ವೋತ್ತಮ […]

Continue Reading

ಜ್ಞಾನದ ದೀಪ ‘ಧರ್ಮ ಭಾರತೀ’ : ವಿದ್ಯಾರವಿಶಂಕರ್ ಯೇಳ್ಕಾನ, ಪುತ್ತೂರು

    ಇಡೀ ವಿಶ್ವಕ್ಕೆ ಧಾರ್ಮಿಕತೆ, ಆಧ್ಯಾತ್ಮಿಕತೆ, ಆಚಾರ, ವಿಚಾರ, ಸಂಸ್ಕೃತಿಗಳ ಭೋದಿಸಿದ ಭಾರತ ಇಂದು ದೇವರು – ಧರ್ಮಗಳಿಂದ ದೂರ ಸರಿಯುತ್ತಾ ಇದೆ. ಆಧುನಿಕ ಸಂಸ್ಕೃತಿ, ತಂತ್ರಜ್ಞಾನಗಳ ಬೆನ್ನೆತ್ತಿ, ಸನಾತನ ಧರ್ಮ, ಸಂಸ್ಕೃತಿ, ಕಲೆಗಳ ಮರೆತು ನಾಶದಂಚಿಗೆ ಸಾಗುತ್ತಾ ಇದೆ. ಹೀಗೆ ಕಲಿಯುಗದಲ್ಲಿ ಇಂದು ಧರ್ಮ ಹಂತ ಹಂತವಾಗಿ ಮರೆಯಾಗುತ್ತಾ ಅಧರ್ಮ ತಾಂಡವವಾಡುತ್ತಿದೆ.    ಇಂತಹ ಈ ಸಂದಿಗ್ಧ ಕಾಲದಲ್ಲಿ ನಮ್ಮ ಸನಾತನ ಧರ್ಮ, ಸಂಸ್ಕೃತಿ, ಆಚಾರ ವಿಚಾರ, ಸಂಪ್ರದಾಯಗಳನ್ನು ಜನಮಾನಸಕ್ಕೆ ಪರಿಚಯಿಸುವ ಅಗತ್ಯವನ್ನರಿತ ನಮ್ಮ […]

Continue Reading

ವನಜೀವನ ಯಜ್ಞ : ಎ. ಎಸ್. ಮಹಾಬಲಗಿರಿ. ಶುಂಠಿಮನೆ, ಅರಳಗೋಡು.

  ಕೆಲವು ಶಕ್ತಿಗಳೇ ಹಾಗೆ. ವ್ಯಕ್ತಿಯಾಗಿ ಜನಿಸಿದರೂ ತರುಣ ದಿನಗಳಲ್ಲೇ ಶಕ್ತಿಯಾಗಿ ರೂಪುಗೊಳ್ಳುತ್ತಾ ಹೋಗುತ್ತವೆ. ಅಂತಹ ಶಕ್ತಿಯೊಂದಕ್ಕೆ ಉನ್ನತವಾದ ಸ್ಥಾನ ಸಿಕ್ಕಿದ್ದಾದರೆ ಆ ಸ್ಥಾನಕ್ಕೇ ಒಂದು ಗೌರವವನ್ನು, ಔನ್ನತ್ಯವನ್ನು ತಂದುಕೊಂಡಲ್ಲಿ ಶಕ್ತಿ ಖಂಡಿತಾ ಸಫಲವಾಗುವುದಲ್ಲದೇ, ತನ್ನ ಸುತ್ತಲಿನ ಪರಿಸರವನ್ನು, ಅದು ಅಲಂಕರಿಸಿದ ಸ್ಥಾನದ ಅನುಯಾಯಿ-ಅಭಿಮಾನಿಗಳನ್ನೂ ಸಹ ಆದರ್ಶದ ದಾರಿಯಲ್ಲಿ ನಡೆಯುವಂತೆ ಪ್ರೇರೇಪಿಸುತ್ತದೆ. ಅಲ್ಲದೇ ಸಮಗ್ರ ಸಮಾಜವನ್ನೇ ತಾರತಮ್ಯ, ಜಾತಿ ಭೇದವಿಲ್ಲದೇ ವಿಷಯವಾರು ಸಂಘಟಿಸಿ ಪ್ರಪಂಚ ಪಾವನವಾಗಿಸುವತ್ತ ವೇಗವಾಗಿ ಮುನ್ನಡೆಯುತ್ತ ಮುನ್ನಡೆಸುತ್ತಾ ಸಾಗುತ್ತದೆ.   ಅಂತಹ ಶಕ್ತಿಯೊಂದು ಮೂರ್ತೀಭವಿಸಿ […]

Continue Reading

ರಾಮಪದ – ಪರಮಪದ – ಮೋಕ್ಷಪದ : ಕಾಂಚನ ರೋಹಿಣಿ ಸುಬ್ಬರತ್ನಂ

  ದಿನಾಂಕ 18.12.2018ರಂದು ರಾಮಚಂದ್ರಾಪುರದಮಠದ ಶಾಖೆಯಾದ ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಾಶ್ರಮದಲ್ಲಿ ರಾಮಪದ -ಭಗವದವಲೋಕನ ದಿನ ಅಂದು ವೈಕುಂಠ ಏಕಾದಶೀ. ಮೋಕ್ಷವನ್ನು ಬಯಸುವವರಿಗೆ ವೈಕುಂಠದ ದ್ವಾರವು ತೆರೆದಿರುವ ದಿನ. ಭಗವಂತನಾದ ಶ್ರೀಕೃಷ್ಣನು ಅರ್ಜುನನಿಗೆ ಭಗವದ್ಗೀತೆಯನ್ನು ಬೋಧಿಸಿದ ದಿನ. ಇಂತಹ ಸುದಿನದಲ್ಲಿ ಅನೇಕ ಭಕ್ತರೊಂದಿಗೆ ನನಗೂ ರಾಮಪದವನ್ನು ನೋಡುವ, ಸೇರುವ ಪುಣ್ಯದ ಅವಕಾಶವು ದೊರೆತುದೇ ಭಾಗ್ಯವಿಶೇಷ. ಮುಕ್ತಿಯ ಆಸೆಗಾಗಿ ದೇವಸ್ಥಾನಗಳಿಗೆ ಜನ ಮುತ್ತಿದ್ದರೆ ರಾಮಪದವನ್ನು ಬಯಸಿ ರಾಮಾಶ್ರಮದಲ್ಲಿ ಸೇರಿದ್ದವರಿಗೆ ಅನಾಯಾಸವಾಗಿ ಪುರುಷಾರ್ಥ ಗಳಿಕೆಗೆ ಸುಲಭಹಾದಿಯಾದ ಸಂಗೀತದ ಹಾಗೂ ಸಂಗೀತದಷ್ಟೇ ಸುಮಧುರವಾದ ಪ್ರವಚನದ […]

Continue Reading

ಮತ್ತೆ ಮತ್ತೆ ಪ್ರತಿಧ್ವನಿಸುತ್ತಿದೆ, ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ : ಪ್ರಣವ ಕೆ.ವಿ ಪುತ್ತೂರು

  ಕೆಲವೂಮ್ಮೆ ಪರಿಸ್ಥಿತಿ ಒಳ್ಳೆಯವರನ್ನು ಕೆಟ್ಟವರನ್ನಾಗಿ ಮಾಡುತ್ತದೆ. ಆದರೆ ಕೆಟ್ಟವರಾಗದೆ ಪರಿಸ್ಥಿತಿಯನ್ನು ಒಳ್ಳೆಯ ರೀತಿಯಲ್ಲಿ ಸ್ವಿಕರಿಸುವುದನ್ನು ಬಲ್ಲವರಾದರೆ ಅವರು ನಿಜವಾದ ಗುರು ಆಗುತ್ತಾರೆ. ಅಂತಹ ನಿರ್ಮಲ ಭಾವಕ್ಕೆ ಮಣ್ಣು ಎರಚಿದರೂ ಅವರಿಗೆ ಒಳ್ಳೆಯದಾಗಲಿ ಎಂದು ಬಯಸುವ ಮನಸ್ಸು ದೊಡ್ಡದು. ಆದರೆ ಇದನ್ನೇ ಬಳಸಿ ಇನ್ನಷ್ಟು ಮತ್ತಷ್ಟು ಮೂರ್ಖಬುದ್ಧಿಯಿಂದ ವಿವಿಧ ಬಣ್ಣಗಳ ಮಣ್ಣನ್ನು ಎರಚುತ್ತ ತಾವು ಕೆಸರಿನಲ್ಲಿ ಮುಚ್ಚಿ ಹೋಗುತ್ತಿದ್ದಾರೆ ಎಂಬುದನ್ನು ಮರೆಯುತಿದ್ದಾರೆ.   ದೇವರು ಏನು ಕೊಟ್ಟ? ಏತಕ್ಕೆ ಕೊಟ್ಟ? ನಾವು ಹೇಗೆ ಬಳಸುತ್ತಿದ್ದೇವೆ? ಎಂಬುದನ್ನು ಒಮ್ಮೆ […]

Continue Reading

” ಗೋವಿಲ್ಲದೆ ನಾವಿಲ್ಲ” – ಜನರಿಗಿದರ ಅರಿವಾಗದೇ?

  ಗವತ್ತು ಗೋವಿಗೆ ಚಿತ್ರಹಿಂಸೆ ಕೊಡುವ ವೀಡೀಯೋ ನೋಡಿ, ಅತ್ಯಂತ ಸಂಕಟವಾಗಿ, “ದೇವರೇ ಗೋವಂಶವನ್ನೇ ನಿಲ್ಲಿಸಿಬಿಡು ಎಂದು ಪ್ರಾಥಿಸುತ್ತೇನೆ. ಭಾರತದಲ್ಲಿನ್ನು ಈ ಚಿತ್ರಹಿಂಸೆ ಜಾಸ್ತಿ ಆಗ್ತಾನೇ ಹೋಗತ್ತೆ. ಕರುಳು ಕಿತ್ತು ಬರುವಷ್ಟು ದುಃಖ ಆಗ್ತಾ ಇದೆ” ಎಂದು ನಮ್ಮ ಅತ್ಯಂತ ಕಿರಿಯ ನಿಕಟವರ್ತಿಯೊಬ್ಬರಲ್ಲಿ ತಿಳಿಸಿದೆ.   ಹಾಗಾದರೆ ಮೊದಲು “ಗೋವಿನ ಉತ್ಪನ್ನ ಬಳಸುವುದನ್ನು ಬಿಡ್ತೇನೆ ಎಂಬ ಸಂಕಲ್ಪ ಮಾಡಿ, ಅದನ್ನು ತ್ಯಜಿಸಿಬಿಡಿ. ಆಮೇಲೆ ಪ್ರಾರ್ಥನೆ ಮಾಡುವಿರಂತೆ” ಎಂದರವರು.   “ಗೋವಿನ ಉತ್ಪನ್ನ ಬಳಸುತ್ತಾ, ಗೋವಂಶ ನಿಲ್ಲಿಸುವಂತೆ ದೇವರನ್ನು […]

Continue Reading

ಉತ್ತಮ ವಿದ್ಯಾರ್ಥಿ – ಒಳ್ಳೆಯ ವಿದ್ವಾಂಸ

  ಈ ನಿಲುವೇ ಸೊಗಸು ಈ ನುಡಿಯೇ ಚೆಂದ. ತೀಕ್ಷ್ಣ ನೋಟ. ಅಸಂದಿಗ್ಧ ಭಾವಸ್ಫುರಣೆಯ ಮನೋಧೋರಣೆಯನ್ನು ಸಹಜವಾಗಿ ಹೊರ ಹೊಮ್ಮಿಸುವ ದೇಹಧರ್ಮ, ಒಪ್ಪ ಓರಣವಾದ ವಸನ, ಆರಂಭದಲ್ಲಿ ತುಸು ಹೆಚ್ಚು ಗಂಭೀರವೇನೋ ಎಂದು ಕಾಣುವಂತಿದ್ದರೂ, ಮೃದುವಾದ ಹಾಗೂ ಶೋಧಕತನದ ಮನಸ್ಸು, ಭಾವಶುದ್ಧ ಚರ್ಯೆ, ಸಾಂಘಿಕ ಚಟುವಟಿಕೆಯಲ್ಲಿದ್ದು ಆನಂದ ಅನುಭವಿಸುವ ಸಹಜತೆ, ಹೃದ್ಗತ ಅಭಿಪ್ರಾಯದ ಅಭಿವ್ಯಕ್ತಿಯಲ್ಲಿ ನಿರ್ಮೋಹ ಖಚಿತತೆ – ಈ ರೀತಿಯ ಗುಣಸ್ವಭಾವಗಳಿಂದ ಮೇಳವಿಸಿಕೊಂಡಿರುವ ಸಹೃದಯ ವಿದ್ವದ್ವರ ಕೆರೇಕೈ ಉಮಾಕಾಂತ ಭಟ್ಟರು.   ಜೀವನದಲ್ಲಿ ಆರವತ್ತು ಸಂವತ್ಸರಗಳನ್ನು […]

Continue Reading

ಗುರುಚರಣಕೆ ಶರಣಾಗಲಿ ಹರಣ – ವಿದ್ಯಾ ರವಿಶಂಕರ್ ಯೇಳ್ಕಾನ

ವಿಶ್ವಕೊಬ್ಬನೇ ಒಡೆಯ ಶ್ರೀರಾಮ. ವಿಶ್ವಕ್ಕೊಂದೇ ಅವಿಚ್ಛಿನ್ನ ಗುರುಪರಂಪರೆ. ಅದು ಶ್ರೀರಾಮಚಂದ್ರಾಪುರಮಠ ಗುರು ಪರಂಪರೆ. ಒಂದು ಪೀಠದಲ್ಲಿರುವ ಶ್ರೀಗಳು ತಮ್ಮ ನಂತರ ಪೀಠಾರೋಹಣ ಮಾಡಲು ಶಿಷ್ಯನನ್ನು ಆಯ್ಕೆಮಾಡಿ, ಅವರಿಗೆ ಸಂನ್ಯಾಸದೀಕ್ಷೆ-ಮಂತ್ರೋಪದೇಶ ನೀಡಿ ತಮ್ಮ ಉತ್ತರಾಧಿಕಾರಿಯಾಗಿ ಘೋಷಿಸುವುದೊಂದು ಪದ್ಧತಿ. ಈ ರೀತಿಯ ಪದ್ಧತಿಯು ಮಧ್ಯದಲ್ಲಿ ವಿಚ್ಛಿನ್ನವಾಗದೇ ಮುಂದುವರಿದಲ್ಲಿ ಹಿಂದಿನ ಗುರುಪರಂಪರೆಯಿಂದ ಶಕ್ತಿಯು ಪ್ರವಾಹವಾಗಿ ಹರಿದು ಪೀಠಾಧಿಪತಿಗಳು ಪ್ರಭಾವಿಗಳಾಗುತ್ತಾರೆ. ಈ ರೀತಿ ಯಾವುದೇ ಅಡೆತಡೆಗಳಿಲ್ಲದೆ ಮುಂದುವರಿದ ಪರಂಪರೆಯನ್ನು ಅವಿಚ್ಛಿನ್ನಪರಂಪರೆ ಎನ್ನಲಾಗುತ್ತದೆ. ಹೀಗೆ ಶ್ರೀರಾಮಚಂದ್ರಾಪುರಮಠದ ಗುರುಪರಂಪರೆಯು ಸಹಸ್ರಮಾನಗಳ ಹಿಂದೆ ಶ್ರೀಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟು ಅಂದಿನಿಂದ […]

Continue Reading

ವಿಶ್ವ~ರಾಮ~ಸಂವಾದ (ಭಾಗ-೧) : ಉಂಡೆಮನೆ ವಿೇಶ್ವರ ಭಟ್

             1 ಗೋಮಾತೆ ವೇದದ ಸಾಕಾರ ರೂಪ. ವೇದಗಳ ರಕ್ಷಣೆ ಧರ್ಮಪೀಠಗಳ ಹೊಣೆ. ಗೋಮಾತೆಯ ರಕ್ಷಣೆಯೂ ಧರ್ಮಪೀಠಗಳ ಹೊಣೆ ತಾನೇ? ಗೋಹತ್ಯಾಚಾರದ ವಿರುದ್ಧ ಸರ್ಕಾರ ಧರ್ಮಪೀಠಾಧಿಪತಿಗಳು ಮೌನವಾಗಿದ್ದಾಗ; ಸಮಾಜ ಅಸಹಾಯಕವಾಗಿ ತನಗೆ ತೋರಿದ ರೀತಿಯಲ್ಲಿ ಪ್ರತಿಭಟನೆಗಿಳಿದು ಅಶಾಂತಿ ಹುಟ್ಟತೊಡಗಿದಾಗ; ಗೋರಕ್ಷಣೆಗೆ ಅಹಿಂಸಾತ್ಮಕವಾದ “ಭಾರತೀಯ ಗೋಸಂರಕ್ಷಣಾ ಆಂದೋಲನ” ವನ್ನು ಜನಜಾಗೃತಿ ಯಾತ್ರೆಯನ್ನು ದೇಶದೆಲ್ಲೆಡೆ ಕೈಗೊಂಡು ನಿರಂತರವಾಗಿ ಗೋಜಾಗೃತಿ ಮೂಡಿಸುತ್ತಿರುವ ಶಂಕರಕಿಂಕರ ಶ್ರೀ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿಯವರ ನಡೆ…   ರಾಮ, ಸರಿ […]

Continue Reading

“ನೀನುಪೇಕ್ಷೆಯ ಮಾಡೆ ಬೇರೆ ಗತಿ ಯಾರೆನಗೆ…..!!- ಪ್ರಸನ್ನಾ ವಿ ಚೆಕ್ಕೆಮನೆ

  ಏಕಾದಶಿ ಎಂದರೆ ಹರಿಸ್ಮರಣೆ. ಹರಿಸ್ಮರಣೆ ಎಂದರೆ ರಾಮಪದ. ಶ್ರೀರಾಮ ಪದತಲದಲ್ಲಿ ಶ್ರೀರಾಮ ಧ್ಯಾನ ಮಾಡುವ ದಿನ. ರಾಮನನ್ನೇ ಮೈಮನಗಳಲ್ಲಿ ತುಂಬಿಕೊಂಡು ಸಾರ್ಥಕ ಭಾವ ಪಡೆಯುವ ಪುಣ್ಯಕ್ಷಣ.   ಅದಕ್ಕಾಗಿಯೇ ಪ್ರತಿ ಏಕಾದಶಿಯ ಪವಿತ್ರ ದಿನವನ್ನು ಮನಸು ಕಾಯುತ್ತಲೇ ಇರುತ್ತದೆ. ರಾಮಧ್ಯಾನದಲ್ಲಿ ತಲ್ಲೀನಗೊಂಡು ಚಿಂತೆ, ತಲ್ಲಣಗಳನ್ನು ಮರೆತು ಶ್ರೀಗುರುಗಳ ಅಮೃತ ವಚನಗಳ ಸವಿಯುಂಡು ಒಂದಿಷ್ಟು ನೆಮ್ಮದಿ ಪಡೆಯಲು, ಶಾಂತಿಯನ್ನು ಬಯಸಲು.   ಸಕಲ ವಿದ್ಯಾ ಆದಿಪೂಜಿತ ಶ್ರೀಗಣನಾಥನ ವಂದನೆಯೊಂದಿಗೆ ಆರಂಭವಾದ ಮೊದಲ ಪದ. ಶ್ರೀಗುರುಗಳು ಗಣಪನನ್ನು ಬಣ್ಣಿಸಿದ […]

Continue Reading

ಪರವಶತೆಗೊಯ್ಯುವ ಶ್ರೀಕರಾರ್ಚಿತ ಪೂಜೆ – ಸಂಧ್ಯಾ ಕಾನತ್ತೂರು

ಸರ್ವಶಕ್ತನ ಮುಂದೆ ನಿಜಭಕ್ತ ಹಾಗೂ ಸರ್ವಭಕ್ತರ ಮುಂದೆ ಸರ್ವಶಕ್ತ – ಪರಸ್ಪರರ ದರ್ಶನ ಏಕಕಾಲದಲ್ಲಿ ಲಭ್ಯವಾಗುವ ಸಮಯವೆಂದರೆ ಮಹಾತ್ಮರು ದೇವತಾರ್ಚನೆಯಲ್ಲಿ ನಿರತವಾಗಿರುವ ಹೊತ್ತು!   ಈ ಅಲೌಕಿಕ ಅನುಭವ ಶ್ರೀಮಠದತ್ತ ನಿರಂತರಸೆಳೆಯುತ್ತದೆ ಎನ್ನುವುದು ಶ್ರೀಮಠದಲ್ಲಿ ನಡೆಯುವ ಶ್ರೀಕರಾರ್ಚಿತ ಪೂಜೆಯನ್ನು ಕಣ್ತುಂಬಿಕೊಂಡವರ ಸ್ಪಷ್ಟ ನುಡಿ.   ಸಾವಿರದ‌ ಮುನ್ನೂರು ವರ್ಷಗಳ ಇತಿಹಾಸವುಳ್ಳ ಜಗತ್ತಿನ ಏಕೈಕ ಅವಿಚ್ಛಿನ್ನ ಪರಂಪರೆಯ ಶ್ರೀರಾಮಚಂದ್ರಾಪುರ ಮಠದಲ್ಲಿ ಸಪರಿವಾರ ಶ್ರೀರಾಮ, ಚಂದ್ರಮೌಳೇಶ್ವರ, ರಾಜರಾಜೇಶ್ವರಿಯರ ಪೂಜೆ ದಿನಕ್ಕೆರಡು ಬಾರಿ ನಿರಂತರವಾಗಿ ನಡೆದು ಬಂದಿದೆ. ಅಗಸ್ತ್ಯರಿಂದ ಅನುಗ್ರಹಿತವಾದ, ವರದಮುನಿಗಳಿಂದ […]

Continue Reading

“ಸಂಕಲ್ಪಿತ ಕಾರ್ಯಸಿದ್ಧಿ ಪ್ರವೀಣ” – ರವೀಂದ್ರ ಕೃಷ್ಣ ಭಟ್ಟ ಸೂರಿ

ಅವಿಚ್ಛಿನ್ನ ಪರಂಪರೆಯ ಹಿರಿಮೆ ಗರಿಮೆಯುಳ್ಳ ಶ್ರೀ ರಾಮಚಂದ್ರಾಪುರ ಮಠ ಅತ್ಯಂತ ವಿಶಿಷ್ಟವಾದದ್ದು. ಶ್ರೀ ಶಂಕರ ಭಗವತ್ಪಾದರು ಪೂರ್ವ ಸಂಕಲ್ಪಿತರಾಗಿ ಸ್ಥಾಪಿಸಿದ ಪೀಠವಿದು. ಶ್ರೀಸುರೇಶ್ವರಾಚಾರ್ಯರಿಂದ ಸಂನ್ಯಾಸ ದೀಕ್ಷಿತರಾಗಿದ್ದ ತಮ್ಮ ಜ್ಞಾನ ಶಿಷ್ಯರಾದ ಶ್ರೀ ವಿದ್ಯಾನಂದಾಚಾರ್ಯರನ್ನು  ಮೂರನೆಯ ಪೀಠಾಧಿಪತಿಗಳನ್ನಾಗಿಸಿ ಅಗಸ್ತ್ಯ ಪ್ರಪೂಜಿತ ವರದಮುನಿ ಪ್ರದತ್ತ ಶ್ರೀರಾಮಾದಿ ವಿಗ್ರಹಗಳನ್ನೂ, ಚಂದ್ರಮೌಳೀಶ್ವರ ಲಿಂಗವನ್ನೂ, ಶ್ರೀಪಾದುಕೆಗಳನ್ನೂ ಅವರಿಗೆ ಅನುಗ್ರಹಿಸಿ ಸ್ಥಾಪಿಸಿದ ಪರಂಪರೆಯಿದು. ಅಖಂಡ ಭಾರತವರ್ಷದಲ್ಲಿ ಆದಿಗುರು ಶಂಕರಾಚಾರ್ಯ ಪರಂಪರೆಯಲ್ಲಿ ಮಹೋನ್ನತ ಇತಿಹಾಸವನ್ನು ಹೊಂದಿರುವಂತಹ ಏಕಮೇವ ಅವಿಚ್ಛಿನ್ನ ಪರಂಪರೆಯಿದು. ಈ ಶ್ರೀ ಪೀಠದ 36 ನೇ […]

Continue Reading

ಶ್ರೀ ಜಗದಾತ್ಮಾನಂದಜೀ : ಕಥೆ ಹೇಳಿ ಮಕ್ಕಳ ಬದುಕು ರೂಪಿಸಿದ ಸಂತ

ಶ್ರೀ ಗುರುಭ್ಯೋನ್ನಮ: ಇತ್ತೀಚೆಗೆ ಶ್ರೀ ರಾಮಕೃಷ್ಣಾಶ್ರಮದ  ಹಿರಿಯ ಸಂನ್ಯಾಸಿಗಳಾಗಿದ್ದ ಶ್ರೀ ಜಗದಾತ್ಮಾನಂದಜೀಯವರು ತೊಂಬತ್ತನೇ ವಯಸ್ಸಿನಲ್ಲಿ ಪರಮಗುರು ಶ್ರೀರಾಮಕೃಷ್ಣರ ಚರಣಕಮಲವನ್ನು ಸೇರಿದರು. ಎಂಬತ್ತರ ದಶಕದಲ್ಲಿ ಇವರು ಬರೆದ ‘ಬದುಕಲು ಕಲಿಯಿರಿ’ ಎಂಬ ಸೃಜನಶೀಲ ಸಾಹಿತ್ಯ ಕನ್ನಡನಾಡಿನಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿತ್ತು. ಆಧುನಿಕ ವಿಜ್ಞಾನದ ಹಿನ್ನೆಲೆಯೊಂದಿಗೆ ಆಧ್ಯಾತ್ಮಕ ನೆಲೆಗಟ್ಟಿನಲ್ಲಿ ಬದುಕನ್ನು ಸಕಾರಾತ್ಮಕವಾಗಿ ಎದುರಿಸುವ ಬಗೆಯನ್ನು ಪ್ರಾಯೋಗಿಕ ಉದಾಹರಣೆಗಳೊಂದಿಗೆ ತಿಳಿಸಿದ ಅತ್ಯಂತ ಅಪರೂಪದ ಪುಸ್ತಕ ಅದಾಗಿತ್ತು. ವಿಶೇಷವಾಗಿ ಯುವಜನತೆಗೆ ಅದು ಪ್ರೇರಣಾಗ್ರಂಥವಾಗಿದೆ.   ಸ್ವಾಮಿ ಜಗದಾತ್ಮಾನಂದರು ಅದನ್ನು ರಚಿಸಿದ್ದು 1977-80ರಲ್ಲಿ ಮೈಸೂರಿನ […]

Continue Reading