ಅತಿಯಾದ ಪರಿಚಯವೇ ಅಜ್ಞಾನಕ್ಕೆ ಕಾರಣ : ಲೋಹಿತಶರ್ಮಾ ಇಡುವಾಣಿ

ಹೀಗನಿಸುತ್ತಿತ್ತು ಆಗಾಗ. ಇರಲಿಲ್ಲ ಆದರೆ ಸ್ಪಷ್ಟತೆ. ಸ್ಪಷ್ಟವಾಗಿಸಿತು ಪಾರಿವಾಳ ನನ್ನ ಅಸ್ಪಷ್ಟತೆಯನ್ನು. ಓದುತ್ತಿದ್ದೆ ನನ್ನಷ್ಟಕ್ಕೆ ನಾನು ಒಂದು ರೂಮಿನಲ್ಲಿ ಕುಳಿತು. ಹಾರುತ್ತಿದ್ದವು ಹೊರಗಡೆ ಪಾರಿವಾಳಗಳು. ನೋಡುತ್ತಿದ್ದೆ ಆಗಾಗ ಅವುಗಳನ್ನೂ. ಪ್ರಯತ್ನಿಸುತ್ತಿದ್ದವು ಅವು ಕಿಟಕಿಯ ಮೂಲಕ ಒಳ ಬರಲು. ಬರುತ್ತಿರಲಿಲ್ಲ, ಬರಲಾಗುತ್ತಿರಲಿಲ್ಲ. ಅಲ್ಲಿ ನಾನಿದ್ದೆ ಹಾಗಾಗಿ. ಕುತೂಹಲ ನನಗೆ, ಇವೇಕೆ ಇಲ್ಲಿ ಬರುತ್ತಿವೆ ಎಂದು. ನೋಡಿದೆ ಸ್ವಲ್ಪ ಸಮಯ. ಎಲ್ಲೆ ಮೀರಿತು ಕುತೂಹಲ. ಕಣ್ಣಾಡಿಸಿದೆ ರೂಮಿನ ಸುತ್ತ. ಕಡ್ಡಿಗಳಿದ್ದವು ಮೂಲೆಯಲ್ಲಿ. ಅರ್ಥಮಾಡಿಕೊಂಡೆ ಎಲ್ಲವನ್ನೂ. ಎದ್ದು ಹೋಗಲಿಲ್ಲ. ಬಾರದಂತೆ ತಡೆಯುವುದು […]

Continue Reading

ಕನ್ನಡದ ರಾಜರಾಜೇಶ್ವರಿ ಭುವನಗಿರಿಯ ಭುವನೇಶ್ವರೀ

ರಾಷ್ಟ್ರಕವಿಗಳು ‘ಜೈ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ’ ಎಂದು ಹಾಡಿಹೊಗಳಿದರು.   ಇನ್ನೊಬ್ಬ ಕವಿ, ‘ನಿತ್ಯೋತ್ಸವ ತಾಯೇ ನಿತ್ಯೋತ್ಸವ’ ಎಂದು ಹಾಡಿದರು.   ಹಾಗಾದರೆ ಕನ್ನಡದ ಭುವನೇಶ್ವರಿಗೆ ನಿತ್ಯೋತ್ಸವ ನಡೆಯುವ ಕ್ಷೇತ್ರ ಯಾವುದು? ಕನ್ನಡದ ತಾಯಿ ಭುವನೇಶ್ವರಿಯು ನೆಲೆ ನಿಂತಿರುವುದೆಲ್ಲಿ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಎತ್ತರದ ಭುವನಗಿರಿ. ಹೌದು, ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭುವನಗರಿ ಭುವನೇಶ್ವರೀದೇವಿಯ ಸಿದ್ಧಿಕ್ಷೇತ್ರ. ಇಲ್ಲಿ ದಿನವೂ ತ್ರಿಕಾಲ ಪೂಜೆ, ಅಭಿಷೇಕ, ನೈವೇದ್ಯಗಳು ನಡೆಯುತ್ತವೆ. ಹಚ್ಚ ಹಸುರಿನ […]

Continue Reading

ಭಾರತವನ್ನು ಮನ ಬಂದಂತೆ ಬದಲಾಯಿಸಲು ಅದೇನು ಪಿರ್ತಾರ್ಜಿತವೇ?

ಹೀಗನಿಸಿದ್ದು ನಿಜ. ಕೇಂದ್ರೀಯ ವಿದ್ಯಾಲಯಗಳಲ್ಲಿ ಸಂಸ್ಕೃತ ಮತ್ತು ಹಿಂದಿಯಲ್ಲಿ ಪ್ರಾರ್ಥನೆ ಮಾಡಬಾರದು. ಅದು ವಿದ್ಯಾರ್ಥಿ ಹಾಗು ಪಾಲಕರ ಧಾರ್ಮಿಕ ನಂಬಿಕೆಗೆ ಧಕ್ಕೆ ಬರುತ್ತದೆ ಎನ್ನುತ್ತಾ ಯಾರೋ ಒಬ್ಬ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾನೆ. ಇದನ್ನು ವಿಚಾರಿಸಬೇಕೆಂದು ಕೋರ್ಟ್ ಹೇಳಿದೆ. ಅದಿರಲಿ, ನನಗನಿಸಿದ್ದು ಕೋರ್ಟ್ ನ ಬಗ್ಗೆ ಅಲ್ಲ. ಅರ್ಜಿದಾರನ ಕುರಿತು. ಭಾರತೀಯತೆಯ ಕುರಿತು, ಅದೂ ಭಾರತದಲ್ಲಿ ಇದು ಬೇಕು, ಅದು ಬೇಡ ಎನ್ನುವ ಮಟ್ಟಕ್ಕೆ ಮಾತನಾಡುತ್ತಾರೆ; ವಿರೋಧಿಸುತ್ತಾರೆ; ಪ್ರತಿಭಟಿಸುತ್ತಾರೆ. ನಿಮಗೆ ಬೇಕಾದಂತೆ ಭಾರತವನ್ನು ಬದಲಿಸಲು ಭಾರತ ನಿಮ್ಮ ಸ್ವಂತದ್ದಾ? ಭಾರತಕ್ಕೆ […]

Continue Reading

ದೀಪ ಉರಿಸಬೇಕು : ನಂದಕಿಶೋರ ಬೀರಂತಡ್ಕ

ದೀಪ ಉರಿಸಬೇಕು ಚಿಕ್ಕವರಿದ್ದಾಗ ಒಲೆಯ ಬುಡದಲ್ಲಿ ಕುಳಿತು ಛಳಿ ಕಾಯಿಸಿದ ನೆನಪುಂಟೇ? ಶಾಲಾಕಾಲೇಜಿನ ದಿನಗಳ ಪ್ರವಾಸಗಳಲ್ಲಿ campfire ಹಚ್ಚಿ ಸುತ್ತಲೂ ಕುಳಿತು ಹಾಡಿದ ಹಾಡುಗಳು ಹಾಗೂ ಕೇಳಿದ ಕಥೆಗಳು ನೆನಪಿವೆಯೇ? ಜೀವನದಲ್ಲಿ ಇತ್ತೀಚಿಗೆ ನಡೆದಿರುವ ಹಲವಾರು ಘಟನೆಗಳು ಈಗಾಗಲೇ ಮರೆತಿದ್ದರೂ ಸಹ ಬಹಳ ಹಿಂದೆಯೇ ನಡೆದ ಆ ಘಟನೆಗಳು ಇನ್ನೂ ಮನಸ್ಸಿನ ಪಟಲದಲ್ಲಿ ಉಳಿದಿರಲು ಕಾರಣವೇನು? ಅಗ್ನಿ. ಅದಕ್ಕೆ ಕಾರಣ ಅಗ್ನಿ. ಉರಿಯುತ್ತಿರುವ ಅಗ್ನಿಯ ಮುಂದೆ ನಡೆದ ಘಟನೆಗಳು ಮನದಲ್ಲಿ ಅಚ್ಚೊತ್ತಲ್ಪಡುತ್ತವೆ. ಯಜ್ಞದಲ್ಲಿ ಮಾಡಿದ ಪ್ರಾರ್ಥನೆಗಳು ಫಲಿಸಲು, […]

Continue Reading

ಪ್ರಾತಃಸ್ಮರಣೀಯರಾದ ಶ್ರೀಸಿದ್ಧಗಂಗಾಶ್ರೀಗಳು ಗಂಗಾಸಿದ್ಧಿಯನ್ನು ಪಡೆದು ಗಂಗಾಧರನ ಸಾಯುಜ್ಯವನ್ನು ಪಡೆದರು..!!! ಈ ಪೃಷ್ಠಭೂಮಿಯಲ್ಲಿ ಅವರಿಗೊಂದು ಶ್ರದ್ಧಾಂಜಲಿವಾಕ್ಯ

  ನಮ್ಮ ಭಾರತದ ಭೂಷಣವೇ ಸಂತರು..!! ಸ್ವಂತಕ್ಕಾಗಿ ಏನನ್ನೂ ಇಟ್ಟುಕೊಳ್ಳದೇ ಸಮಾಜಕ್ಕಾಗಿ ಸರ್ವಸ್ವವನ್ನೂ ಧಾರೆಯೆರೆಯುವ ದೈವೀಶಕ್ತಿಯ ಖನಿಗಳು ಸಂತರು…!!! ರಾಮ-ಕೃಷ್ಣರು ನಡೆದಾಡಿದ ಈ ಭೂಮಿಯಲ್ಲಿ ಸಂತರೇ ನಡೆದಾಡಿದರೆ ಚೆಂದ…!!! ಯಾಕೆ..? ಸಂತರಾಗಿ ಮಾರ್ಪಡುವುದೇ ತಮ್ಮ ಆಂತರಂಗಿಕಸಾಧನೆಯಿಂದ..!!! ಆ ಆಂತರಂಗಿಕಸಾಧನೆಯೇ ಲೋಕಕ್ಷೇಮಕ್ಕಾಗಿ ವಿನಿಯೋಗಿಸಲ್ಪಡುತ್ತದೆ..!!! ಭಗವಾನ್ ವೇದವ್ಯಾಸರಿಂದ ಆಚಾರ್ಯಶಂಕರರ ವರೆಗೆ, ಶಂಕರಾದಿಗಳಿಂದ ವಿವೇಕಾನಂದರ ವರೆಗೆ ಅನೇಕ ಸಂತ-ಮಹಾಂತರು ದೇಶಕ್ಕೆ ವಿಶೇಷವಾದ ಶೋಭೆಯನ್ನು ತಂದಿಟ್ಟರು..!!! ತದನಂತರದ ಕಾಲದಲ್ಲಿ ಶಾಂಕರಪರಂಪರೆಯಲ್ಲಿ ಹಾಗೂ ಜಂಗಮಪರಂಪರೆಯಲ್ಲಿ ಬಂದ ಅನೇಕ ಸಂತರು-ಪೀಠಾಧಿಪತಿಗಳು ದೇಶಕ್ಕಾಗಿ ತನುವನ್ನು ತೆತ್ತರು…!!! ಪ್ರಕೃತ […]

Continue Reading

ಹರಿಯಿತು ಮಾನವೀಯತೆಯ ‘ಅಮೃತ ಧಾರೆ’ –  ಆಯಿತು ಬಜಕೂಡ್ಲು ಗೋಶಾಲೆ : ಶೀಲಾಲಕ್ಷ್ಮೀ ಕಾಸರಗೋಡು

1998ರಲ್ಲಿ ನಮ್ಮ ಸಂಸ್ಥಾನ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ಪೀಠಾರೋಹಣ. 2000ದಲ್ಲಿ ಶ್ರೀಗಳಿಂದ ಘೋಷಣೆಯೊಂದು ಹೊರಬಿತ್ತು `ಗೋವಿಗಾಗಿ ನಾವು, ಗೋವಿರುವಲ್ಲಿ ನಾವು, ಗೋವೊಂದೇ ನಮ್ಮ ಗಮ್ಯ, ಗುರಿ’. ಹಿರಿಯರೊಬ್ಬರು ಇದರ ಬಗ್ಗೆ ತಮ್ಮ ಅನಿಸಿಕೆಯನ್ನು ಹೇಳಿದ್ದರು. ಅದು ಇಂದಿಗೂ ನನ್ನ ಕಿವಿಯಲ್ಲಿ ಮಾರ್ದನಿಗೊಳ್ಳುತ್ತಿದೆ, `ಜಗವೆಲ್ಲ ಮಲಗಿರಲು ಇವನೊಬ್ಬನೆದ್ದ. ಅಂಬಿಕಾತನಯದತ್ತರ ಈ ಸಾಲು ಬುದ್ಧನನ್ನು ಉದ್ದೇಶಿಸಿದ್ದಾದರೂ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳಿಗೆ ಬಹಳ ಚೆನ್ನಾಗಿ ಹೊಂದುತ್ತದೆ.’   ಭಾರತಮಾತೆಯ ಪೀತಾಂಬರ ಗೋನೆತ್ತರೋಕುಳಿಯಲ್ಲಿ ಒದ್ದೆಮುದ್ದೆಯಾಗಿ ದುರ್ನಾತ ಬೀರುತ್ತಿದೆ. ಅದನ್ನು ಕಿತ್ತೊಗೆಯಬೇಕು. ಆಕೆ ಶುಭ್ರವಸನಧಾರಿಣಿಯಾಗಬೇಕು.  ಭಾರತಮಾತೆಯ ಸುಪುತ್ರರೊಳಗೆ […]

Continue Reading

ಪ್ರಕೃತಿ ಸುಂದರ ಮುರುಡೇಶ್ವರ : ನೀಲಕಂಠ ಯಾಜೀ,

ಪ್ರಕೃತಿ ಸುಂದರ ಮುರುಡೇಶ್ವರ ಮೂರು ಕಡೆಯಿಂದ ನೀರಿನಿಂದಾವರಿಸಿದ ಕಂದುಕಗಿರಿಯ ಅಂಚಿನಲ್ಲಿ ಮುರುಡು ಮುರುಡಾಗಿದ್ದು ಭಕ್ತರನ್ನು ಹರಸುವವನು ಮೃಡೇಶ. ಮೃಡೇಶನಿಂದ ಪುನೀತವಾದ ಕಡಲತಡಿಯ ಊರು ಮುರ್ಡೇಶ್ವರ ಅಥವಾ ಮುರುಡೇಶ್ವರ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ಪ್ರವಾಸಿಗರನ್ನು ಕೈಬೀಸಿ ಕರೆಯುವ ಬೃಹತ್ ಮಹಾದ್ವಾರ. ದೂರದಿಂದಲೇ ಕಣ್ಮನಗಳನ್ನು ಸೆಳೆಯುವ ರಾಜಗೋಪುರ. ಶಿರವೆತ್ತಿ ನೋಡಿದಷ್ಟೂ ನೋಡುತ್ತಿರಬೇಕೆಂಬ ಮಹಾದೇವನ ಮಹಾಮೂರ್ತಿ. ಜೀವ ಮೈದಳೆದು ಬಾಗಿಲಲ್ಲಿಯೇ ಸ್ವಾಗತಿಸುತ್ತಿರುವ ಎರಡು ದೊಡ್ಡಾನೆಗಳು. ಕೈಲಾಸದಂತೆ ಮೆಟ್ಟಿಲೇರಿ ಮಂದಿರದ ಒಳಹೊಕ್ಕಾಗ ಶಿವನ ಸಾನ್ನಿಧ್ಯವನ್ನು ಸಂಸೂಚಿಸುವ ಬೃಹತ್ ನಂದಿಯ ವಿಗ್ರಹ. ಭಕ್ತಿಯಿಂದ ಕೈಮುಗಿದು […]

Continue Reading

“ನೀನಾರಿಗಾದೆಯೋ ಎಲೆ ಮಾನವ” : ರಾಮಕೃಷ್ಣ ಹೆಗಡೆ ಕಲ್ಲಬ್ಬೆ

  ಗೋವಿನ ಪ್ರಸ್ತುತ ಪರಿಸ್ಥಿತಿ ನೋಡುವಾಗ, ಗೋವಿನ ಜನ್ಮ ಯಾರಿಗೂ ಬಾರದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುವ ದಿನ ಬಂದಿದೆ ಎಂದು ಅನಿಸುತ್ತದೆ. ಭಾರತ ಉದ್ದಗಲಕ್ಕೂ ಎಲ್ಲಿ ನೋಡಿದರೂ, ನಮ್ಮ ಜಗಜ್ಜನನಿ ಗೋಮಾತೆಗೆ ಚಿತ್ರಹಿಂಸೆ ಕೊಡುವಷ್ಟು ಬೇರೆಯಾವ ಜೀವಿಗೂ ಕೊಡುವುದಿಲ್ಲವೇನೋ, ಅಷ್ಟು ಕ್ರೌರ್ಯದಿಂದ ಗೋಮಾತೆಯನ್ನು ನಡೆಸಿಕೊಳ್ಳಲಾಗುತ್ತಿದೆ. ಇದಕ್ಕೆ ಕಾರಣ ಗೋವುಗಳ‌ ಮೇಲಿನ ಕ್ರೌರ್ಯವನ್ನು ನೋಡಿಯೂ ನೋಡದಂತಿರುವ ಬಹುತೇಕ ಭಾರತೀಯರ ಮೌನ. ದಿನದಿಂದ ದಿನಕ್ಕೆ ಗೋಮಾತೆಯನ್ನು ನಿರ್ಲಕ್ಷಿಸಲಾಗುತ್ತಿದೆ. ದುಡ್ಡು ಕೊಟ್ಟರೆ ನಮಗೆ ಏನು ಬೇಕೋ ಅದು ಸಿಗುತ್ತದೆ ಎನ್ನುವ ಪಟ್ಟಣ […]

Continue Reading

ಸ್ವರ್ಣವಲ್ಲಿ ಶ್ರೀಗಳೇ, ನೀವು ಸಮಾಜಕ್ಕೆ ಆದರ್ಶವಾಗಬೇಕಿತ್ತಲ್ಲವೇ??

~ ಮೊಟ್ಟಮೊದಲು ಆದಿಗುರು ಶಂಕರರಿಗೂ, ಏಕೈಕ ಅವಿಚ್ಛಿನ್ನ ಶಂಕರ ಗುರುಪರಂಪರೆಯ ರಾಜಯೋಗ ಪೀಠವನ್ನು ಅಲಂಕರಿಸಿರುವ, ನನ್ನ ಕುಲಗುರುಗಳಾದ ಜಗದ್ಗುರು ಶಂಕರಾಚಾರ್ಯ ಗೋಕರ್ಣ‌ ಮಂಡಲಾಧೀಶ್ವರ ಶ್ರೀಶ್ರೀ ರಾಘವೇಶ್ವರಭಾರತಿ ಮಹಾಸ್ವಾಮಿಗಳವರಿಗೆ ಹೃನ್ಮನಪೂರ್ವಕ ನಮಿಸುತ್ತಾ..   ನಾನು ಹುಟ್ಟಿ ಬೆಳೆದಿದ್ದು ಶಿರಸಿಯಲ್ಲಿ ಆದ್ದರಿಂದ ನನಗೆ ಬುದ್ಧಿ ಬರುವ ಕಾಲದಿಂದಲೂ ಸ್ವರ್ಣವಲ್ಲಿ ಮಠ/ಮಠದವರ ಒಡನಾಟವೇ ಜಾಸ್ತಿ ಇತ್ತು. ಶ್ರೀಗಳ ಬಗ್ಗೆ ಗೌರವವೂ ಇತ್ತು.   ಆದರೆ ಇತ್ತೀಚಿನ ರಾಮಚಂದ್ರಾಪುರ ಮಠ ಹಾಗೂ ರಾಘವೇಶ್ವರಭಾರತಿ ಶ್ರೀಗಳ ಮೇಲಿನ ಮಿಥ್ಯಾರೋಪದ ಪ್ರಕರಣಗಳು ಕಾವೇರುತ್ತಿದ್ದಂತೆ, ಈ ಷಡ್ಯಂತ್ರಗಳ […]

Continue Reading

ಮೌನ ಮುರಿಯಿತು!

ಹವ್ಯಕ ಸಮಾಜದ ಎರಡು ಕಣ್ಣುಗಳು ಎನ್ನುವ ಮಾತಿಗೆ ಪ್ರತಿರೂಪವಾಗಿ ಶೋಭಿಸುತ್ತಿರುವ ಯತಿವರೇಣ್ಯರಾದ ಶ್ರೀರಾಮಚಂದ್ರಾಪುರಮಠದ ಹಾಗೂ ಶ್ರೀಸ್ವರ್ಣವಲ್ಲಿಮಠದ ಗುರುಗಳ ಬಗ್ಗೆ ವಿಶೇಷವಾದ ಗೌರವ ಇಟ್ಟವನು ನಾನು. ಆದರೆ ಇಂದು ನನ್ನ ನಂಬಿಕೆ ಹುಸಿಯಾಯಿತು. ಮೌನದಲ್ಲಿದ್ದರೂ, ಅವರು ನಮ್ಮ ಜೊತೆ ಇದ್ದಾರು ಎನ್ನುವ ನನ್ನ ಅಚಲ ವಿಶ್ವಾಸ ಹುಸಿಯಾಯಿತು.   ಪೀಠಾಧಿಪತಿಗಳು ಸಮಾಜಮುಖಿ ಕೆಲಸಕ್ಕೆ ಹೊರಟಾಗ ಆರೋಪಗಳು ಬರುವದು ಹೊಸತಲ್ಲ. ದುಷ್ಟ ವ್ಯವಸ್ಥೆಯ ವಿರುದ್ಧ ಹೋರಾಟಕ್ಕೆ ನಿಂತಾಗ, ಹೋರಾಟಗಾರರನ್ನು ದಮನಿಸುವ ಪ್ರವೃತ್ತಿ ಈ ದೇಶಕ್ಕೆ ಹೊಸತಲ್ಲ. ಸತ್ಯದ ವಿಜಯ ಕೊನೆಯಲ್ಲಿ […]

Continue Reading

ಮಾತೆಯ ಮಮತೆಯ ಕರೆ : ಸಿಗಂದೂರು ಚೌಡೇಶ್ವರೀದೇವಿಯ ರಥೋತ್ಸವ

ಶ್ರೀಸಿಗಂದೂರುಚೌಡೇಶ್ವರಿ! ‘ನೀನೇ ಎಲ್ಲ’ ಎನ್ನುವ ಭಾವದಲ್ಲಿ ಬೇಡಿ ಬರುವ ಭಕುತರಿಗೆ ಎಂದೂ ‘ಇಲ್ಲ’ ಎನ್ನದ ಕರುಣಾಕರೀ. ಹಾಗೆಯೇ ‘ನೀನೇನಲ್ಲ’ ಎನ್ನುವ ದುರುಳರ ದುರಹಂಕಾರವನ್ನು ‘ಹುಂ’ಕಾರ ಮಾತ್ರದಿಂದಲೇ ಸಂಹರಿಸುವ ದುಷ್ಟಭಯಂಕರಿಯೂ ಹೌದು.   ಮಾತೆಯ ಶಕ್ತಿಯೇ ಅಂತಹದ್ದು. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ನದಿಯ ಹಿನ್ನೀರ ಪ್ರದೇಶದ ಮೂಲೆಯಲ್ಲಿರುವ, ಗೂಗಲ್ಲಿಗೂ ಸಿಗದ ಸಿಗಂದೂರಿನ ಕಾನನದಲ್ಲಿ ತಾನು ಕುಳಿತು, ದೇಶದ ಮೂಲೆ-ಮೂಲೆಯಿಂದ ಸಾಮಾನ್ಯ ಆದ್ಮಿ-ಉದ್ಯಮಿ, ಸಂತ-ಶ್ರೀಮಂತ ಮುಂತಾದ ಯಾವುದೇ ಭೇದವಿಲ್ಲದೇ, ಲಕ್ಷಾಂತರ ಜನರನ್ನು ತನ್ನಲ್ಲಿಗೆ ಕರೆಸಿಕೊಳ್ಳುತ್ತಿರುವುದು ಆಕೆಯ ಪ್ರಭಾವವನ್ನು […]

Continue Reading

!!ಹೇಳಿ!! ತನ್ನಷ್ಟಕ್ಕೆ ತಾನು ಸಮಾಜೋದ್ಧಾರವನ್ನು ಮಾಡುತ್ತಿದ್ದ ನಮ್ಮ ಶ್ರೀರಾಮಚಂದ್ರಾಪುರ ಪೀಠದ ಮೇಲೆ ಆಪಾದನೆ ಹಾಕಿದಿರಿ!ಯಾಕೆ?

ಸದಾ ವ್ಯಷ್ಟಿಯ, ಸಮಷ್ಟಿಯ ಒಳಿತನ್ನಷ್ಟೇ ಬಯಸುವ, ಮೊದಲ ಪ್ರಜೆಯಿಂದ ಹಿಡಿದು ಸಮಾಜದ ಕಟ್ಟಕಡೆಯ ವ್ಯಕ್ತಿಯವರೆಗೂ ಸಮಾಭಾವದಿಂದ- ವಾತ್ಸಲ್ಯದಿಂದ “ಒಳಿತಾಗಲಿ” ಎಂದು ಹರಸುವ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಮೇಲೆ ಅಂಥ ಹೀನಾಯವಾದ, ಕಲ್ಪಿಸಲೂ ಹೇಸುವ, ಅಲ್ಲದ, ನಿಲ್ಲದ, ದಾನವರಿಂದಲೂ ಆಗದ ಮಿಥ್ಯಾಪವಾದ ಹಾಕಿದಿರಿ! ಯಾಕೆ?   ಸಮಾಜೋದ್ಧರಣವೇ ಉಸಿರಾಗಿರುವ ಆ ಶಕ್ತಿಯನ್ನು ನೋಯಿಸಿದ “ದುರ್ಗುಣಿ- ಗುರುದ್ರೋಹಿಗಳೇ”… ಏನು ಸಾಧಿಸಿದಿರಿ? ದುಷ್ಟರಾಗಿಬಿಟ್ಟಿರಿ! ಯಾಕೆ?   ಯಾವುದರಲ್ಲೂ ಗೆಲ್ಲದೇ ಹೆಜ್ಜೆಹೆಜ್ಜೆಗೂ ಸೋಲು ಕಂಡಾಗಲೂ ಅಂತರಾತ್ಮ ಎಚ್ಚರಿಸಲಿಲ್ಲವೇ! ಯಾಕೆ?   ಅದೆಷ್ಟು ಷಡ್ಯಂತ್ರಗಳು!ಕುತಂತ್ರಗಳು!! […]

Continue Reading

ಶಂಕರ ನಮನದ ಉದ್ದೇಶ ಶಾಂಕರ ಪೀಠವನ್ನು, ಅದ್ವೈತಿಗಳನ್ನು ಅವಮಾನಿಸುವುದಾಗಿತ್ತೇ ???

ಸಿರಸಿ ಸಮೀಪದ ಸೋಂದಾ ಸ್ವರ್ಣವಳ್ಳಿಯಲ್ಲಿ ನಡೆದ ‘ಶಂಕರ ನಮನ’ದ ಮುಖ್ಯ ಉದ್ದೇಶ ಶಾಂಕರ ಪೀಠವನ್ನು ಅವಮಾನಿಸುವುದಾಗಿತ್ತೇ ಎಂಬ ಪ್ರಶ್ನೆ , ಅನುಮಾನವನ್ನು ಆ ಸಮಾರಂಭದ ಮಾಧ್ಯಮ ವರದಿಗಳು ಶಾಂಕರ ಅನುಯಾಯಿ ಗಳಲ್ಲಿ ಹುಟ್ಟು ಹಾಕಿದೆ .. ಕಾರಣ ಇಷ್ಟೇ – ಮಾಧ್ಯಮ ವರದಿಗಳ ಪ್ರಕಾರ ಶಂಕರ ನಮನ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಶ್ರೀ ಯತಿಗಳು ಮಾತನಾಡುತ್ತ ಶ್ರೀ ಶಂಕರರೇ ಸ್ಥಾಪಿಸಿದ ಅವಿಚ್ಛಿನ್ನ ಪರಂಪರೆ ಹೊಂದಿರುವ (ಹೆಸರು ಹೇಳದೆಯೇ)”ಶ್ರೀ ರಾಮಚಂದ್ರಾಪುರ ಮಠ ಪತನದತ್ತ ಹೊರಟಿದೆ” ಎಂಬ ಮಾತನ್ನು ಆಡಿರುವುದು […]

Continue Reading

ವಿಧಿಮುನಿಯೆ ಆರನಾವಂಕದಲಿ ಬರಿಸದು!

ಸ್ವರ್ಣವಲ್ಲೀ ಮಠದಲ್ಲಿ ನಿನ್ನೆ ಒಂದು ಕಾರ್ಯಕ್ರಮವಿತ್ತು.. “ಶಂಕರ ನಮನ” ಮತ್ತು “ಶಂಕರ ಭಾಷ್ಯಮೃತ ವಾಹಿನೀ ಪ್ರವಚನಮಾಲಿಕೆಗಳ ಸಮಾರೋಪ” – ಬಹಳ ಗೌರವಯುತವಾದ ಕಾರ್ಯಕ್ರಮಗಳು. ಯತಿತ್ರಯರ ಸಾನ್ನಿಧ್ಯ ಕಾರ್ಯಕ್ರಮದ ಮೆರುಗನ್ನು ಇನ್ನೂ ಹೆಚ್ಚಿಸಬೇಕಿತ್ತು. ನಾಲ್ಕನೆಯ ಶಂಕರಾಚಾರ್ಯರ ಅಧಿಕೃತ ರಾಯಭಾರಿ ಬೇರೆ ಉಪಸ್ಥಿತರಾಗಿದ್ದರು. ಆಮೇಲೆ? ಅಲ್ಲೇ ಇರೋದು.. ರಾಮಚಂದ್ರಾಪುರಮಠದ ಮೇಲೆ, ಶ್ರೀಗಳ ಮೇಲೆ ವ್ಯವಸ್ಥಿತವಾದ ಆಕ್ರಮಣಗಳನ್ನು ಪ್ರತ್ಯಕ್ಷವಾಗಿಯೂ, ಪರೋಕ್ಷವಾಗಿಯೂ ನಡೆಸಿದ್ದ, ನಡೆಸುತ್ತಿರುವ ಪ್ರಮುಖರೆಲ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಯಾರೂ ಭಾಗವಹಿಸಬಹುದು, ಅವರ ಹೆಸರು ಆಮಂತ್ರಣ ಪತ್ರಿಕೆಯಲ್ಲೇ ಬೇಕೆ? ರಾಮಚಂದ್ರಾಪುರ ಮಠದ […]

Continue Reading

ಮಕರಸಂಕ್ರಾಂತಿ :ನೀಲಕಂಠ ಯಾಜೀ, ಬೈಲೂರು

ಸಂಕ್ರಾಂತಿ ಎಂದರೇನು? ‘ಗ್ರಹಾಣಾಂ ಪ್ರಾಗ್ರಾಶಿತಃ ಅಪರರಾಶೌ ಸಂಕ್ರಮಣಂ ಸಂಕ್ರಾಂತಿಃ ಇತಿ.’ ಅಂದರೆ ಗ್ರಹಗಳು ತಾವಿರುವ ರಾಶಿಯನ್ನು ಬಿಟ್ಟು ಮುಂದಿನ ರಾಶಿಗೆ ಪ್ರವೇಶಿಸುವುದನ್ನು ಸಂಕ್ರಾಂತಿ ಎನ್ನುತ್ತಾರೆ. ವಿಶಾಲವಾದ ಆಕಾಶಮಂಡಲದಲ್ಲಿ ತಮ್ಮ ತಮ್ಮ ಕಕ್ಷೆಯಲ್ಲಿ ಚಲಿಸುವ ಗ್ರಹಗಳನ್ನು ಗಣಿತೋಪಕ್ರಮಕ್ಕಾಗಿ ಮೇಷಾದಿ ಹನ್ನೆರಡು ರಾಶಿಗಳಲ್ಲಿ, ಅಶ್ವಿನ್ಯಾದಿ ಇಪ್ಪತ್ತೇಳು ನಕ್ಷತ್ರಸ್ಥಿತರನ್ನಾಗಿ ಗುರುತಿಸುತ್ತಾರೆ. ಒಂದು ರಾಶಿಯಿಂದ ಇನ್ನೊಂದು ರಾಶಿ ಪ್ರವೇಶವೇ ಸಂಕ್ರಾಂತಿ.   ಇದನ್ನು ಎಲ್ಲ ಗ್ರಹಗಳಿಗೆ ಹೇಳಲ್ಪಟ್ಟರೂ ನಾವು ಪರಿಗಣಿಸುವದು ರವಿಯ ಸಂಕ್ರಮಣಗಳನ್ನು ಮಾತ್ರ. ಕಾರಣ ಇಷ್ಟೆ ಜಗತ್ಪ್ರಕಾಶಕ ಸೂರ್ಯನ ಅಪರ ರಾಶಿಪ್ರವೇಶ […]

Continue Reading

ವಿಶ್ವ~ರಾಮ~ಸಂವಾದ (ಭಾಗ-೨) : ಉಂಡೆಮನೆ ವಿಶ್ವೇಶ್ವರ ಭಟ್

                    6   ರಾಮ  ಗೋಸಂರಕ್ಷಣೆ ನಮ್ಮ ದೇಶಕ್ಕೆ ನೀನು ಕೊಟ್ಟ ವರ. ಗೋಹತ್ಯೆ ನಮಗೆ ನಾವೇ ಕೊಟ್ಟುಕೊಂಡ ಮಹಾಶಾಪ. ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಸಕ್ರಮ ಗೋಹತ್ಯಾಚಾರಗಳಿಂದಾಗಿ ದೇಶವೇ ಕಸಾಯಿಖಾನೆಯೋ ಎಂಬಂತಾಗಿದೆ. ಕೈಕಟ್ಟಿ ಕುಳಿತುಕೊಳ್ಳಲರಿಯದ ಒಂದಷ್ಟು ಯುವಪಡೆ ತಡೆಯಲು ಹೋದರೆ ಅವರಿಗೇ ಶಿಕ್ಷೆ. ಇಂತಹ ಸಂದರ್ಭದಲ್ಲಿ ಸಾಮಾಜಿಕ ಶಾಂತಿ ಸಾಮರಸ್ಯ ಕಾಪಾಡಲು ಹುಟ್ಟಿದ ಯೋಜನೆ ‘ಗೋಸಂಜೀವಿನಿ’. ಸರ್ವರ ನೆರವಿನಿಂದ ಕಸಾಯಿಖಾನೆಗೆ ಹೋಗುವ ದೇಸೀ ಹಸುಗಳನ್ನು […]

Continue Reading

ಮಠದ ಮೂಲ ಕಥೆ – ಮೂಲ ಮಠದ ಕಥೆ – ೭ : ಮಹೇಶ ಎಳ್ಯಡ್ಕ

ಅಶೋಕೆಯಲ್ಲಿ ಹದಿನೈದು ಕೋಟಿ ಅಂದಾಜಿನ ಮೂಲಮಠದ ಪ್ರಥಮ ಹಂತದ ಕಾಮಗಾರಿಯು ಭರದಿಂದ ಆರಂಭಗೊಂಡಿತು. ಶಾಸನತಂತ್ರದ ಹೊಸತನದಲ್ಲಿ ಈ ಬಾರಿ ಮೂಲಮಠ ನಿರ್ಮಾಣ ತಂಡವೂ ಹೊಸದಾಗಿದೆ. ಹಳಬರ ಅನುಭವದೊಂದಿಗೆ, ಹೊಸಬರ ಹುರುಪಿನೊಂದಿಗೆ ವೇಗದಿಂದ ನಡೆಯುತ್ತಿದೆ ಮೂಲಮಠ ನಿರ್ಮಾಣ ಕಾರ್ಯ. “ಎಲ್ಲರೂ ಪ್ರಾಮಾಣಿಕ ಸೇವೆ ಸಲ್ಲಿಸಿ, ಧುಮುಕಿ ಕೆಲಸ ಮಾಡಿ, ರಾಮಾನುಗ್ರಹವಿದೆ” ಎಂದು ಶ್ರೀಸಂಸ್ಥಾನದವರು ಆಶೀರ್ವದಿಸಿದ್ದಾರೆ. ಅಂಡಾಕಾರದ ವೃಷಭಾಯ: ಮೂಲಮಠದಲ್ಲಿ ತಲೆಯೆತ್ತಿರುವ ಮಲ್ಲಿಕಾರ್ಜುನ ದೇವಾಲಯವು ಇಡಿಯ ಪ್ರಪಂಚದಲ್ಲೇ ಅದ್ವೈತ, ಅತಿವಿಶಿಷ್ಟ. ಸಾಮಾನ್ಯವಾಗಿ ದೇವಾಲಯದ ಅಡಿಪಾಯವು ಚೌಕ ಅಥವಾ ಆಯತಾಕಾರದಲ್ಲಿರುತ್ತದೆ. ಕೆಲವು […]

Continue Reading

ಮಠದ ಮೂಲ ಕಥೆ – ಮೂಲ ಮಠದ ಕಥೆ – ೬ : ಮಹೇಶ ಎಳ್ಯಡ್ಕ

ಅಶೋಕೆ ಮೂಲಮಠ ಕ್ಷೇತ್ರಕ್ಕೆ ಶ್ರೀಗುರುಗಳು ಭೇಟಿಯಿತ್ತು, ಮುಂದೆ ಆ ಸ್ಥಳದಲ್ಲಿ ತಲೆಯೆತ್ತಲಿರುವ ಭವ್ಯ ಮಂದಿರಗಳ ಚಿಂತನೆ ಕೈಗೊಂಡರು. ಮೊದಲ ಹಂತವಾಗಿ ಮಲ್ಲಿಕಾರ್ಜುನ ಗುಡಿ, ಶ್ರೀರಾಮದೇವಾಲಯ, ಗುರುಭವನ ಹಾಗೂ ಶಿಷ್ಯ-ಭಕ್ತರಿಗೆ ವಸತಿಗೃಹಗಳು ಇದಿಷ್ಟನ್ನು ಅನುಸ್ಥಾಪಿಸುವುದಾಗಿ ಸಂಕಲ್ಪಿಸಿದರು.   ಮೊದಲ ಹಂತದ ನೀಲನಕಾಶೆಯು ಗುರುಗಳ ಮನದಲ್ಲಿದ್ದುದನ್ನು ನುರಿತ ವಾಸ್ತುತಜ್ಞರು, ಪ್ರಸಿದ್ಧ ಜ್ಯೋತಿಷಿಗಳು, ಹೆಸರಾಂತ ಇಂಜಿನಿಯರುಗಳು ಸೇರಿ ಗೆರೆಗಳಿಗಿಳಿಸಿದರು. ಮೊದಲ ಹಂತಕ್ಕೆ ಸುಮಾರು ಹದಿನೈದುಕೋಟಿ ರೂಪಾಯಿಗಳಷ್ಟು ಬೇಕಾದೀತು  ಎಂದು ಅಂದಾಜಿಸಲಾಯಿತು. ಸಮಿತಿಗಳು ರಚನೆಗೊಂಡವು. ಕಾರ್ಯಯೋಜನೆ ಸಿದ್ಧಗೊಂಡಿತು. ಆಗಬೇಕಾದ ಕಾರ್ಯಗಳು ಒಂದೊಂದೇ ಪಟ್ಟಿಮಾಡುತ್ತಾ […]

Continue Reading

ಮಠದ ಮೂಲ ಕಥೆ – ಮೂಲ ಮಠದ ಕಥೆ – ೫ : ಮಹೇಶ ಎಳ್ಯಡ್ಕ

ಅಶೋಕೆಯ ಪುಣ್ಯಭೂಮಿಗೆ ಮೂವತ್ತಾರನೆಯ ಶಂಕರರು ಪಾದಬೆಳೆಸಿದಾಗ, ಮಹರ್ಷಿ ದೈವರಾತರ ಸುಪುತ್ರ ದೇವಶ್ರವಶರ್ಮರು ಅವರ ಪಿತೃವಾಕ್ಯದಂತೆ ಕಾಯುತ್ತಿದ್ದರು.  ಶ್ರೀಶ್ರೀಗಳವರನ್ನು ಆದರದಿಂದ ಸ್ವೀಕರಿಸಿ, ಷೋಡಷೋಪಚಾರಗೈದರು. ಜಗದ್ಗುರುಗಳ ಮನದಿಚ್ಛೆಯನ್ನು ಅದಾಗಲೇ ಅರಿತಿದ್ದರು. ದೇವಶ್ರವಶರ್ಮರ ತೀರ್ಥರೂಪರು ಹೇಳಿದುದರ ನೆನಪೇ ಅವರಿಗೆ ಪ್ರೇರೇಪಣೆ. “ಮಠವು ಸಂಪರ್ಕಿಸಿದಾಗ ಸ್ಥಳವನ್ನು ಕೊಡಬೇಕೆಂಬ” ಪಿತೃವಾಕ್ಯ ಪರಿಪಾಲನೆಯಂತೆ ಮಠದ ನಿರ್ಮಾಣಕ್ಕೆ ಉಚಿತವಾಗಿ ಭೂಮಿಯನ್ನು ಕೊಡುವುದಾಗಿ ನಿವೇದಿಸಿಕೊಂಡರು. ಇದು ಮೂಲಮಠದ ಕಥೆಯ ಪ್ರಥಮ ಮಹಾಸನ್ನಿವೇಶ.   ಸೂಜಿಮೊನೆಯಷ್ಟೂ ಜಾಗವಿಲ್ಲದ ಅಶೋಕೆಯೆಂಬ ಸ್ಥಳದಲ್ಲಿ, ಮಠಸ್ಥಾಪನೆಗೆ ಬೇಕಾದ ಸ್ಥಳವನ್ನು ಕೊಡುವೆನೆಂಬ ಅಮೃತವಾಕ್ಯವು ಶ್ರೀಪೀಠಕ್ಕೆ ಸಮರ್ಪಣೆಯಾಯಿತು. […]

Continue Reading

ಮಠದ ಮೂಲ ಕಥೆ – ಮೂಲ ಮಠದ ಕಥೆ – ೪ : ಮಹೇಶ ಎಳ್ಯಡ್ಕ

ಮೂವತ್ತೈದನೆಯ ಪೀಠಾಚಾರ್ಯರಾದ  ಶ್ರೀಶ್ರೀರಾಘವೇಂದ್ರಭಾರತೀ ಮಹಾಸ್ವಾಮಿಗಳವರು ತಮ್ಮ ಜೀವನಪರ್ಯಂತ ಮಠೋದ್ಧಾರಕಾರ್ಯದಲ್ಲಿ ಶ್ರಮಿಸಿದರು. ಅಪ್ಸರಕೊಂಡ, ತೀರ್ಥಹಳ್ಳಿ, ಪೆರಾಜೆ-ಮಾಣಿ ಮಠಗಳನ್ನು ಕಟ್ಟಿ ಬೆಳೆಸಿದರು.  ಧರ್ಮಶ್ರದ್ಧೆಯನ್ನು ಪುನರುತ್ಥಾನಗೈದರು. ಧ್ಯಾನಾಸಕ್ತರಾಗಿದ್ದಾಗಅಂತಃಸ್ಫುರಣೆಯೊಂದು ಅವರಿಗೆ ಹೀಗಂದಿತು,   ಅಶೋಕೇ ನಾಮಕೇ ಸ್ಥಾನೇ ಶಂಕರಾರ್ಯಸುನಿರ್ಮಿತೇ । ಮಠೇ ಗೋಕರ್ಣನಿಕಟೇ ಮಲ್ಲಿಕಾರ್ಜುನಶೋಭಿತೇ ॥   ‘ಗೋಕರ್ಣ ಬಳಿಯ ಅಶೋಕೆಯೆಂಬ ಮಲ್ಲಿಕಾರ್ಜುನನ ಪುಣ್ಯಸ್ಥಳದಲ್ಲಿ, ಶಂಕರರಿಂದ ನಿರ್ಮಿಸಲ್ಪಟ್ಟ ಮಠವಹುದು’ ಎಂಬುದಾಗಿ. ಇದು, ಸುಮಾರು ಐದಾರು ದಶಕದ ಹಿಂದಿನ ಕತೆ. ಶ್ರೀಶ್ರೀಗಳಿಗೆ ಈ ಬಗ್ಗೆ ಮುಂದಡಿಯಿಡಲು ಸಮಯ ಕೂಡಿಬಂದಿರಲಿಲ್ಲ. ಆದರೆ ಈ ಮಹತ್ಕಾರ್ಯವು ರಾಮಾನುಗ್ರಹಕ್ಕೆ […]

Continue Reading