ಋಷ್ಯಾಶ್ರಮಗಳಿಗೆ ಮತ್ತೆ ಆತಂಕ…
ಕೈಲಾಸದಿಂದ ಮರಳುವಾಗ ಸಾಕಷ್ಟು ಕಾಲವೂ ಕಳೆದಿತ್ತು.ಇತ್ತ ಆಶ್ರಮಗಳ ಪರಿಸ್ಥಿತಿ ಆತಂಕಕಾರಿಯಾಗಿತ್ತು. ಕಾರ್ತವೀರ್ಯನ ಮರಣದಿಂದ ಕುದಿದುಹೋದ ಕ್ಷತ್ರಿಯರು ಮತ್ತೆ ಸಮಸ್ತ ಋಷಿಪರಂಪರೆಯಮೇಲೇ ಮತ್ಸರಿಗಳಾಗಿದ್ದರು.ರಾಮನಮೇಲಿನ ಆಕ್ರೋಶ ಆಗಾಗ ಜಮದಗ್ನಿಗಳ ಆಶ್ರಮದಮೇಲಾಗುತ್ತಿತ್ತು.ಇತರ ಭೃಗುಗಳಮೇಲೂ ಇದರ ಪರಿಣಾಮ ವಿಪರೀತವಾಗಿತ್ತು. ಸ್ವತಃ ದಾಳಿ ಇಡುವುದು ,ದಾಳಿಕೋರರನ್ನು ಪ್ರಚೋದಿಸುವುದು ,ಅರಣ್ಯದ ಬೇಡರುಗಳನ್ನು ಎತ್ತಿಕಟ್ಟಿ ಅಪಹರಣ ದರೋಡೆಗಳಿಗೆ ಪ್ರಚೋದನೆ ನೀಡುವುದು ಹೀಗೆ ಪರೋಕ್ಷ ಹಿಂಸೆ ಅವ್ಯಾಹತವಾಗಿತ್ತು.ಕಾರ್ತವೀರ್ಯನ ಹಂತಕನಾದ ರಾಮನ ಪ್ರಳಯಾಂತಕ ಪರಾಕ್ರಮದ ವಿಚಾರ ತಿಳಿದ ಕಾರಣ ಪ್ರಚ್ಛನ್ನ ಸಮರ ನಿರಂತರವಾಗಿ ಸಾಗಿತ್ತು.ತಮ್ಮ ಕುಲಕ್ಕಾದ ಘೋರ ಅವಮಾನವನ್ನು ಈ […]
Continue Reading