ನಿರಂತರ ಮಠದ ಸಂಪರ್ಕವೇ ಗೋ ಸೇವೆಗೆ ಪ್ರೇರಣೆ: ಜ್ಯೋತಿಲಕ್ಷ್ಮಿ ಅಮೈ

“ಸುಮಾರು ಎರಡು ದಶಕಗಳಿಂದ ಶ್ರೀ ಮಠದ ನಿರಂತರ ಸಂಪರ್ಕವಿದೆ ಮಾತ್ರವಲ್ಲದೆ ಮಹಿಳಾ ಪರಿಷತ್ ಇರುವಾಗಲೇ ವಿವಿಧ ಸೇವಾ ಪ್ರಧಾನೆಯಾಗಿ ಕಾರ್ಯನಿರ್ವಹಿಸಿದ ಅನುಭವವೂ ಇರುವುದರಿಂದ ಶ್ರೀ ಮಠದ ಗೋ ಸೇವಾ ಯೋಜನೆಯಾದ ಮಾತೃತ್ವಮ್ ಮೂಲಕ ಮಾಸದ ಮಾತೆಯಾಗಿ ಸ್ವಯಂ ಇಚ್ಛೆಯಿಂದ ಸೇರಿದೆ” ಎನ್ನುವ ಜ್ಯೋತಿಲಕ್ಷ್ಮಿ ಅಮೈ ಅವರು ಪ್ರಸ್ತುತ ಮಂಗಳೂರು ಮಂಡಲದ ಮಾತೃ ಪ್ರಧಾನೆಯಾಗಿದ್ದಾರೆ. ಮುದ್ರಜೆ ಗೋವಿಂದ ಭಟ್, ಪಾರ್ವತಿ ಅಮ್ಮ ದಂಪತಿಗಳ ಪುತ್ರಿಯಾಗಿರುವ ಇವರು ಕೇಪು ವಲಯದ ಅಡ್ಯನಡ್ಕ ಸಮೀಪದ ಅಮೈ ಯಲ್ಲಿರುವ ಡಾ. ಕೃಷ್ಣಮೂರ್ತಿ ಅವರನ್ನು […]

Continue Reading

ಗೋ ಪ್ರೀತಿಗೆ ಪ್ರೇರಣೆ ನಮ್ಮಪ್ಪ: ಸರಿತಾ ಪ್ರಕಾಶ್

“ಬಾಲ್ಯದಲ್ಲೇ ಗೋವಿನ ಮೇಲೆ ವಿಶೇಷ ಪ್ರೀತಿ ಮೂಡಲು ಕಾರಣ ನಮ್ಮಪ್ಪ ವೆಂಕಟ್ರಮಣ ಭಟ್, ಪ್ರತಿದಿನವೂ ಮುಂಜಾನೆ ಗೋವಿಗೆ ಒಂದು ಹಿಡಿಯಷ್ಟಾದರೂ ಮೇವು ನೀಡದೆ ಇತರ ಕಾರ್ಯಗಳತ್ತ ಗಮನ ಹರಿಸಿದವರಲ್ಲ ನಮ್ಮಪ್ಪ. ಇದುವೇ ಗೋವಿನ ಮೇಲೆ ಮಮತೆ ಮೂಡಲು ಕಾರಣ. ಮುಂದೆ ಶ್ರೀ ರಾಘವೇಶ್ವರ ಭಾರತೀ ಶ್ರೀಗಳವರ ಗೋ ಸಂರಕ್ಷಣಾ ಕಾರ್ಯವು ಮನಸ್ಸಿಗೆ ಹೊಸ ಸ್ಪೂರ್ತಿ ನೀಡಿತು. ಇದರಿಂದ ಪ್ರೇರಣೆಗೊಂಡು ಸಮಾಜದಲ್ಲಿ ಭಾರತೀಯ ಗೋತಳಿಗಳ ಬಗ್ಗೆ ಅರಿವು ಮೂಡಿಸ ಬೇಕು, ಅವುಗಳ ಸಂರಕ್ಷಣೆಗಾಗಿ ಕಿಂಚಿತ್ ಸೇವೆ ಮಾಡಬೇಕು’ ಎಂಬ […]

Continue Reading

ಮನೆಯ ಹಸುಗಳಿಗೂ ಮುಕ್ತ ವಾತಾವರಣ ನೀಡಿದ ಮಾಸದ ಮಾತೆ: ವಿಜಯಲಕ್ಷ್ಮಿ ಕಲ್ಲಕಟ್ಟ

ಗೋಸ್ವರ್ಗಕ್ಕೆ ಹೋಗಿ ಬಂದ ಮೇಲೆ ಅಲ್ಲಿ ಹಸುಗಳಿಗೆ ನೀಡಿದ ಮುಕ್ತ ಸ್ವಾತಂತ್ರ್ಯವನ್ನು ಕಂಡು, ಮೆಚ್ಚಿ ತಮ್ಮ ಮನೆಯಲ್ಲಿರುವ ಹಸುಗಳಿಗೂ ಇಂತಹುದೇ ವಾತಾವರಣ ಕಲ್ಪಿಸಿಕೊಟ್ಟವರು ಮುಳ್ಳೇರಿಯ ಮಂಡಲದ ಪೆರಡಾಲ ವಲಯದಿಂದ ಮಾಸದ ಮಾತೆಯಾಗಿ ಗುರಿ ತಲುಪಿದ ವಿಜಯಲಕ್ಷ್ಮಿ ಕಲ್ಲಕಟ್ಟ. ಕಾಕೆಕೊಚ್ಚಿ ನಾರಾಯಣ ಭಟ್, ಹೊನ್ನಮ್ಮ ದಂಪತಿಗಳ ಪುತ್ರಿಯಾದ ಇವರಿಗೆ ಹೊಲಿಗೆ, ಕಸೂತಿ, ಕರಕುಶಲ ಕಲೆಗಳಲ್ಲಿ ಪರಿಣತಿಯಿದೆ. ಕೃಷಿ, ಹೋದೋಟ ಇಷ್ಟ ಪಡುವ ಅವರ ಮನೆಯ ಮುಂದೆ ಸುಂದರವಾದ ಹೂಗಳು, ತಾವರೆಕೊಳ ಜನಮನ ಸೆಳೆಯುತ್ತಿರುವುದು ಇವರ ಆಸಕ್ತಿಗೆ ಸಾಕ್ಷಿಯಾಗಿದೆ. ಸುಮಾರು […]

Continue Reading

ಗೋಮಾತೆಯ ಶ್ರೀಮಾತೆಯಾಗಿ ಪುಟಾಣಿ ಶ್ರೀರಕ್ಷಾ

ಈಕೆ ಇನ್ನೂ ಆರನೇ ತರಗತಿಯಲ್ಲಿ ಕಲಿಯುತ್ತಿರುವ ಪುಟಾಣಿ. ಗೆಳೆಯ ಗೆಳತಿಯರೊಡನೆ ಸ್ವಚ್ಛಂದವಾಗಿ ಆಟವಾಡುವ ಮುಗ್ಧ ಬಾಲ್ಯ. ಮನೆಯವರ ಜೊತೆಗೆ, ಮುದ್ದು ತಂಗಿಯ ಜೊತೆಗೆ ಬಾಲ್ಯ ಸಹಜವಾದ ತುಂಟಾಟವಾಡುವ ಸಮಯ. ಆದರೂ ಆಕೆ ಇಂದು ಹೊತ್ತುಕೊಂಡಿರುವ ಮಹತ್ತರ ಜವಾಬ್ದಾರಿ ನಿಜಕ್ಕೂ ಅದ್ಬುತ, ಅನುಕರಣೀಯ. ಮಾಸದ ಮಾತೆಯಾಗಿ ಸೇವೆ ಸಲ್ಲಿಸಿ ಸ್ವಯಂ ಒಂದು ಲಕ್ಷಕ್ಕೂ ಅಧಿಕ ಮೊತ್ತ ಸಂಗ್ರಹಿಸಿ ಎರಡು ವರ್ಷಗಳಿಗೆ ಒಂದು ಹಸುವಿನ ನಿರ್ವಹಣಾ ವೆಚ್ಚವನ್ನು ಭರಿಸುವ ಮೂಲಕ ಸಮಾಜದ ಎಲ್ಲರಿಗೂ ಮಾದರಿಯಾಗಿದ್ದಾಳೆ ಈ ಬಾಲೆ. ಮುಳ್ಳೇರಿಯ ಮಂಡಲದ […]

Continue Reading

ಮಕ್ಕಳಿಗೆ ಗೋವಿನ ಮಹತ್ವದ ಅರಿವು ಮೂಡಿಸುವ ಶಿಕ್ಷಕಿ: ವಿಜಯಾ ಶ್ಯಾನುಭಾಗ್

“ಮಕ್ಕಳಿಗೆ ಎಳವೆಯಿಂದಲೇ ಗೋವಿನ ಮೇಲೆ ಮಮತೆ ಮೂಡಿಸಿದರೆ  ಮುಂದಿನ ಪೀಳಿಗೆಯೂ ಗೋ ಸಾಕಣೆಯತ್ತ ಮನಸ್ಸು ಮಾಡ ಬಹುದಷ್ಟೆ. ಅಳಿಯುತ್ತಿರುವ ಗೋತಳಿಗಳ ಪರಿಚಯ ಮಾಡಿಸಿ, ಆ ಹಸುಗಳ ವಿಶೇಷತೆಗಳ ಬಗ್ಗೆ ಮಕ್ಕಳಿಗೆ ತಿಳಿಸಿದರೆ ಮುಂದೊಂದು ದಿನ ನಮ್ಮ ಸಮಾಜ ಭಾರತೀಯ ಗೋತಳಿಗಳ ಮಹತ್ವವನ್ನು ಜಗತ್ತಿಗೇ ಸಾರಬಹುದು” ಎಂಬುದು ಶಿಕ್ಷಕಿಯಾಗಿರುವ ಶಿರಸಿಯ ವಿಜಯಾ ಶ್ಯಾನುಭಾಗ್ ಅವರ ಅಭಿಪ್ರಾಯ. ಸಿದ್ದಾಪುರ ಮಂಡಲದ ಅಂಬಾಗಿರಿ ವಲಯದ ವಿಜಯಾ ಶ್ಯಾನುಭಾಗ್ ಕೆಕ್ಕಾರು ಮಠದಲ್ಲಿ ಶ್ರೀ ಸಂಸ್ಥಾನದವರ ಚಾತುರ್ಮಾಸ್ಯದ ನಂತರ ಶ್ರೀ ಮಠದ ಸಂಪರ್ಕಕ್ಕೆ ಬಂದವರು.  […]

Continue Reading

ರಮ್ಯ-ಗೋಸ್ವರ್ಗ!

ಸಂಕ್ರಾಂತಿಯ ಪುಣ್ಯಪರ್ವದಲ್ಲಿ ಮಿಂದು ಝಗಮಗಿಸಿದ ಗೋಸ್ವರ್ಗ! ಸ್ವರ್ಗವೆಂದರೇನೆಂದು ಭುವಿಯಲ್ಲೇ ಕಂಡ ಗೋಪ್ರೇಮಿಗಳು- ಗುರುಭಕ್ತರು!! ಓ ಅಲ್ಲಿ‌ ಕೆಳಗಿಳಿದು ಹೋಗುವಾಗಲೇ ಕಾಣುವ ಹುಲ್ಲಿನಲ್ಲಿ ಬರೆದ ಹರೇರಾಮ- ಗೋಸ್ವರ್ಗ! ಮತ್ತೆ ಎದುರಿಗೆ ಕಾಣುವುದು ಕಬ್ಬಿನಹಾಲು, ಪುದೀನಾಜ್ಯೂಸ್ ನಂತಹ ವಿವಿಧ ಪಾನೀಯಗಳು! ಹಾಗೆ ಪ್ರೇಕ್ಷಾಪಥ ದಲ್ಲಿ ಕಾಲಿಟ್ಟರೆ ಕರೆಕರೆದು ದೇಶೀಗೋಹಾಲು ಕೊಟ್ಟು ಅರಿಶಿಣ- ಕುಂಕುಮ- ಹೂವು- ಬಳೆ ಕೊಟ್ಟು “ಸುಹಾಸಿನಿಯರ ಪೂಜೆ” ಯ ಸಂತಸದಲಿ ಮಿಂದೇಳುವ ತಾಯಿಯರು!! ಹಾಗೆ ಬಲಕ್ಕೆ ತಿರುಗಿದರೆ ಅಮೃತಫಲ, ತೊಡೆದೇವು, ಮನೋಹರ, ಸಾವಯವ ಪಾನಿಪುರಿ, ದೇಶೀ ಬಟ್ಟೆಗಳ […]

Continue Reading

ಗೋವಿನ ಬಗ್ಗೆ ಸಮಾಜದಲ್ಲಿ ಉತ್ತಮ ಸ್ಪಂದನೆ ಇದೆ: ರಾಜರಾಜೇಶ್ವರಿ ಬೆಂಗಳೂರು

ಕೆದಿಲ ಗ್ರಾಮದ ಬಡೆಕ್ಕಿಲ ಶಂಕರ ಭಟ್,ಶಂಕರಿ ಅಮ್ಮ ಇವರ ಪುತ್ರಿಯಾದ ರಾಜರಾಜೇಶ್ವರಿ ಅವರು ಶಿರಂಕಲ್ಲು ಉಬರು ಮನೆತನದ ಗಣಪತಿ ಭಟ್ ಅವರನ್ನು ವಿವಾಹವಾಗಿ ಪ್ರಸ್ತುತ ಬೆಂಗಳೂರು ದಕ್ಷಿಣ ಮಂಡಲದ ಅನ್ನಪೂರ್ಣೇಶ್ವರಿ ವಲಯದ ಆರೋಗ್ಯ ಬಡಾವಣೆಯಲ್ಲಿ ವಾಸವಾಗಿದ್ದಾರೆ. ಮಾತೃತ್ವಮ್ ಯೋಜನೆಯ ಮೂಲಕ ಎರಡು ವರ್ಷಗಳ ಕಾಲ ಒಂದು ಹಸುವನ್ನು ಸಾಕುವ ಹೊಣೆ ಹೊತ್ತು ಮಾಸದ ಮಾತೆಯ ಗುರಿ ತಲುಪಿದವರು. ಹಲವಾರು ವರ್ಷಗಳಿಂದ ಶ್ರೀ ಮಠದ ನಿರಂತರ ಸಂಪರ್ಕದಿಂದಾಗಿ ಮಠದ ವಿವಿಧ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವ ರಾಜರಾಜೇಶ್ವರಿ ಈ […]

Continue Reading

ಗೋ ಸೇವೆಯಲ್ಲಿ ಸಾರ್ಥಕತೆ ಇದೆ: ಶೋಭಾ ಲಕ್ಷ್ಮಿ ಬಂಗಾರಡ್ಕ

ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಪೀಠವೇರಿದ ನಂತರ ನಿರಂತರ ಮಠದ ಸಂಪರ್ಕದಲ್ಲಿದ್ದ ಕುಟುಂಬ ಬಂಗಾರಡ್ಕದ ಶೋಭಾಲಕ್ಷ್ಮಿ ಇವರದ್ದು. ಉಪ್ಪಿನಂಗಡಿ ಮಂಡಲದ ಕಬಕ ವಲಯದ ಈಗ ಪುತ್ತೂರು ಸಮೀಪದ ಕೊಡಿಪ್ಪಾಡಿಯಲ್ಲಿ ವಾಸಿಸುತ್ತಿರುವ ಬಂಗಾರಡ್ಕ ಜನಾರ್ದನ ಭಟ್ ಅವರ ಪತ್ನಿ ಶೋಭಾಲಕ್ಷ್ಮಿ ಬಂಗಾರಡ್ಕ .ಏಕೈಕ ಪುತ್ರ ಎಂ.ಬಿ.ಬಿ.ಎಸ್.ಮುಗಿಸಿ, ಎಂ.ಎಸ್ ಮಾಡುತ್ತಿದ್ದಾನೆ. ಸಾಹಿತ್ಯ, ಸಂಗೀತ ಸಹಿತ ಎಲ್ಲಾ ಕಲೆಗಳಲ್ಲೂ ಆಸಕ್ತಿ ಇರುವ ಶೋಭಾಲಕ್ಷ್ಮಿ ಗೆ ಆಧ್ಯಾತ್ಮಿಕ ವಿಚಾರದತ್ತ ಹೆಚ್ಚಿನ ಸೆಳೆತ. ತವರುಮನೆ ನಿಡುಗಳದಲ್ಲೂ ಗೋಸಾಕಣೆ ಇದ್ದುದರಿಂದ ಗೋವಿನ ಮೇಲಿನ ಮಮತೆ […]

Continue Reading

ಆರಾಧ್ಯಗುರವೇ…

ಅಂದಿನ ತ್ರೇತಾಯುಗವ ಇಂದಿನ ಕಲಿಯುಗದಲಿ ಪ್ರತ್ಯಕ್ಷ ಕಾಣಿಸಿದ ಓ ಗುರುವೇ,ನಮ್ಮ ಗುರುವೇ,ಆರಾಧ್ಯಗುರವೇ…! ನೂರಾರು- ಜೀವರ ಸೇರಿಸಿ ಗಿರಿನಗರ ಮಠವನ್ನೇ ನವ- ಅಯೋಧ್ಯಾ ಪುರವಾಗಿಸಿದ ಓ ಗುರುವೇ,ನಮ್ಮ ಗುರುವೇ,ಆರಾಧ್ಯಗುರವೇ..! ಧಾರಾ– ರಾಮಾಯಣದ ದೋಣಿಯಲಿ ನಮ್ಮೆಲ್ಲರ ಕುಳ್ಳಿರಿಸಿ ಜೀವನಕ್ಕೆ- ಶಿಕ್ಷಣವ ಕೊಡಿಸಿದಾ ಓ ಗುರುವೇ,ನಮ್ಮ ಗುರುವೇ,ಆರಾಧ್ಯಗುರವೇ..! ಸಮಾಜದ ಮನೆ ಮನೆಗಳಲ್ಲಿ ಗೋಪ್ರೇಮ,ಗೋಭಕ್ತಿಯಾ ಭಿತ್ತಿ ರಾಮಕಥಾ,ಗೋಕಥವ ಮಾಡಿದ ಓ ಗುರುವೇ,ನಮ್ಮ ಗುರುವೇ,ಆರಾಧ್ಯಗುರವೇ..! ಜೀವದ ನಲಿವಿಗೆ ನಲವತ್ತು ಮೆಟ್ಟಿಲ ಸಾಧನಾ- ಪಂಚಕದ ನೂರಾರು ಕಂತಿನಲಿ ಜೀವದಾ ಸಾಧನೆಯ ಮಾಡಿಸುವ, ಓ ಗುರುವೇ,ನಮ್ಮ ಗುರುವೇ,ಆರಾಧ್ಯಗುರವೇ..! […]

Continue Reading

ಗುರು ಕಾರುಣ್ಯದಿಂದ ಗುರಿ ಸೇರಿದೆ: ಎನ್ನುವ ಗೀತಾ ಪ್ರಸಾದ್ ಪೋಳ್ಯ

ಗೀತಾಪ್ರಸಾದ್ ಪೋಳ್ಯ ಇವರು ಗೋ ಸೇವೆಯಲ್ಲಿ ಆಸಕ್ತಿ ಹೊಂದಿ ಗುರು ಸೇವೆಯ ಶ್ರದ್ಧೆಯಿಂದ ಮಾಸದ ಮಾತೆಯಾಗಿ ಸೇರಿ ಗುರಿ ತಲುಪಿದ ಮಾಸದ ಮಾತೆ. “ಪೆರಾಜೆ ಮಾಣಿ ಮಠದಲ್ಲಿ ನಡೆದ ಚಾತುರ್ಮಾಸ್ಯದ ಸಂದರ್ಭದಲ್ಲಿ ಮೊದಲ ಬಾರಿಗೆ ಶ್ರೀ ಸಂಸ್ಥಾನದವರ ಆಶೀರ್ವಚನ, ರಾಮಕಥೆಗಳನ್ನು ಕೇಳಿಸಿಕೊಂಡೆ. ನಂತರ ಆಧ್ಯಾತ್ಮಿಕವಾಗಿ ಬಹಳಷ್ಟು ಸೆಳೆತವುಂಟಾಯಿತು.ಇದು ಅನೇಕ ಮಾನಸಿಕ ಒತ್ತಡಗಳಿಂದ ಮುಕ್ತಿಯನ್ನು ನೀಡಿದಾಗ ಶ್ರೀ ಗುರುಗಳ ನಿರ್ದೇಶಾನುಸಾರವಾಗಿ ನಡೆಯುತ್ತಿರುವ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡೆ” ಎನ್ನುವ ಗೀತಾ ಪೋಳ್ಯ ಅವರು ತಮ್ಮ ಮಾಸದ ಮಾತೆಯಾದ ಅನುಭವವನ್ನು […]

Continue Reading

ಗುರು ಚರಣಕೆ ಶರಣು : ವಿಜಯಲಕ್ಷ್ಮಿ ಅಂಗಡಿ (ಪ್ರತಿಭಾ ಅಂಗಡಿ)

ಶ್ರೀ ಗುರುಗಳ ಗೋವಿನ ಬಗ್ಗೆ ಇರುವ ಕಾಳಜಿಯ ಪ್ರೇರಣೆ, ಶ್ರೀ ಗುರು ವಚನದ ಮೇಲಿನ ಶ್ರದ್ಧೆ, ಬಾಲ್ಯದಿಂದಲೂ ಗೋವಿನ ಮೇಲೆ ಇದ್ದಂತಹ ಪ್ರೀತಿ ಇವುಗಳ ಪ್ರೇರಣೆಯಿಂದ ಮಾಸದ ಮಾತೆಯಾಗಿ ಸೇವೆ ಗೈಯಲು ಮುಂದೆ ಬಂದೆ. ಶ್ರೀ ಗುರುಗಳ ಅನುಗ್ರಹದಿಂದ ನಿರೀಕ್ಷೆಗೂ ಮುನ್ನವೇ ಗುರಿ ಸೇರಿದ ಸಾರ್ಥಕ ಭಾವ ಮನದಲ್ಲಿ ಮೂಡಿದೆ ಎನ್ನುತ್ತಾರೆ ಕರ್ಕಿ ಹೊನ್ನಾವರ ಮೂಲದ ಪ್ರಸ್ತುತ ಶಿರಸಿಯಲ್ಲಿ ವಾಸ್ತವ್ಯವಿರುವ ವಿಜಯಲಕ್ಷ್ಮಿ ಅಂಗಡಿ ಅವರ ಮಾತುಗಳು. ಸಿದ್ಧಾಪುರ ಮಂಡಲದ ಅಂಬಾಗಿರಿ ವಲಯದ ವಿಜಯಲಕ್ಷ್ಮಿ ಅವರು ಮಾಸದ ಮಾತೆಯಾಗಿ […]

Continue Reading

ಸಾವಿರದ ಗುರಿ ಹೊತ್ತ ಮಾಸದ ಮಾತೆ: ಲಕ್ಷ್ಮೀ ಪ್ರಕಾಶ್ ಇಳಂತಿಲ

ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ಮಹತ್ವ ಪೂರ್ಣ ಕಲ್ಪನೆಯ ಸಾಕ್ಷಾತ್ಕಾರವೇ ಮಾತೃತ್ವಮ್ ಯೋಜನೆಯ ಮಾಸದ ಮಾತೆ. ಈಗಾಗಲೇ ಮಾಸದ ಮಾತೆಯರಾಗಿ ಸ್ವ ಇಚ್ಛೆಯಿಂದ ಮುಂದೆ ಬಂದು ತಮ್ಮ ಗುರಿ ತಲುಪಿದ ಮಾತೆಯರಲ್ಲಿ ಮಂಗಳೂರು ನಗರದ ಪ್ರಸ್ತುತ ಕೊಂಚಾಡಿಯಲ್ಲಿ ವಾಸವಿರುವ, ಮಾತೃತ್ವಮ್ ಮಂಗಳೂರು ಸಮಿತಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಲಕ್ಷ್ಮೀ ಪ್ರಕಾಶ್ ಇಳಂತಿಲ ಮೊದಲಿಗರು. ಲಕ್ಷ್ಮೀ ಪ್ರಕಾಶ್ ಅವರು ವಿಟ್ಲ ನೂಜಿ ನಿವಾಸಿಗಳಾದ ಕೆ. ರಾಮಚಂದ್ರ ಭಟ್ ಮತ್ತು ಸರಸ್ವತಿ ಭಟ್ ಅವರ ಪುತ್ರಿ. ಬಿ.ಕಾಂ.ಪದವೀಧರೆಯಾಗಿರುವ ಇವರು ಹೊಸದಿಗಂತ ಪತ್ರಿಕೆಯ ಸ್ಥಾನೀಯ […]

Continue Reading

ವೃದ್ಧಗೋವೆಂದು ತಿರಸ್ಕಾರ ಮಾಡುವ ಮುನ್ನ..

ನಮ್ಮ ಅನೇಕ ಸಂಶೋಧನಾ ಪ್ರಕಾರ ಮಾಂಸಾಹಾರ ಮನುಷ್ಯನ ಆಹಾರ ಪದ್ಧತಿ ಅಲ್ಲವೆಂಬುದನ್ನು ಪ್ರಕೃತಿ ನಮ್ಮ ಶಾರೀರಿಕ ರಚನೆಯಿಂದಲೇ ತೋರಿಸಿಕೊಟ್ಟಿದೆ ಶಾಖಾಹಾರ ಆತನ ದೈಹಿಕ ಮತ್ತು ಸಾಂಸ್ಕೃತಿಕ ಸ್ವಭಾವಗಳನ್ನು ಮೃದುಗೊಳಿಸಿ ಮಿತ್ರ ಭಾವವನ್ನು ಸೂಚಿಸುತ್ತದೆ.   ಗೋವು ಅಂದು ದಾರಿಯಲ್ಲಿ,ಮನೆ ಎದುರು ಎಲ್ಲಾ ಕಡೆ ನೋಡುವ ಅವಕಾಶ ಇತ್ತು ಆದರೆ ಇಂದು ಹುಡುಕಿಕೊಂಡು ಹೋದರು ಸಿಗದು ಹಾಗಾಗಿ ಗೋಗ್ರಾಸ ಕೊಡಲು ನಾವು ಗೋಶಾಲೆಗೆ ಹೋಗಬೇಕಾದ ಪರಿಸ್ಥಿತಿ ಅಥವಾ ರಾತ್ರಿ ಗೋವು ಸಿಗದೆ ಚಲ್ಲುವ ಕೆಟ್ಟ ಸ್ಥಿತಿ.   ಗೋವು […]

Continue Reading

ಋಷ್ಯಾಶ್ರಮಗಳಿಗೆ ಮತ್ತೆ ಆತಂಕ…

ಕೈಲಾಸದಿಂದ ಮರಳುವಾಗ ಸಾಕಷ್ಟು ಕಾಲವೂ ಕಳೆದಿತ್ತು.ಇತ್ತ ಆಶ್ರಮಗಳ ಪರಿಸ್ಥಿತಿ ಆತಂಕಕಾರಿಯಾಗಿತ್ತು. ಕಾರ್ತವೀರ್ಯನ ಮರಣದಿಂದ ಕುದಿದುಹೋದ ಕ್ಷತ್ರಿಯರು ಮತ್ತೆ ಸಮಸ್ತ ಋಷಿಪರಂಪರೆಯಮೇಲೇ ಮತ್ಸರಿಗಳಾಗಿದ್ದರು.ರಾಮನಮೇಲಿನ ಆಕ್ರೋಶ ಆಗಾಗ ಜಮದಗ್ನಿಗಳ ಆಶ್ರಮದಮೇಲಾಗುತ್ತಿತ್ತು.ಇತರ ಭೃಗುಗಳಮೇಲೂ ಇದರ ಪರಿಣಾಮ ವಿಪರೀತವಾಗಿತ್ತು. ಸ್ವತಃ ದಾಳಿ ಇಡುವುದು ,ದಾಳಿಕೋರರನ್ನು ಪ್ರಚೋದಿಸುವುದು ,ಅರಣ್ಯದ ಬೇಡರುಗಳನ್ನು ಎತ್ತಿಕಟ್ಟಿ ಅಪಹರಣ ದರೋಡೆಗಳಿಗೆ ಪ್ರಚೋದನೆ ನೀಡುವುದು ಹೀಗೆ ಪರೋಕ್ಷ ಹಿಂಸೆ ಅವ್ಯಾಹತವಾಗಿತ್ತು.ಕಾರ್ತವೀರ್ಯನ ಹಂತಕನಾದ ರಾಮನ ಪ್ರಳಯಾಂತಕ ಪರಾಕ್ರಮದ ವಿಚಾರ ತಿಳಿದ ಕಾರಣ ಪ್ರಚ್ಛನ್ನ ಸಮರ ನಿರಂತರವಾಗಿ ಸಾಗಿತ್ತು.ತಮ್ಮ ಕುಲಕ್ಕಾದ ಘೋರ ಅವಮಾನವನ್ನು ಈ […]

Continue Reading

ಗ್ರಹಣ

ವಿಕಾರಿ ನಾಮ ಸಂವತ್ಸರ ಆಶಾಢ ಮಾಸ ಶುಕ್ಲ ಪಕ್ಷ ಪೂರ್ಣಿಮಾ ತಿಥಿ 16.7.2019 ಮಂಗಳವಾರ ಉತ್ತರ ಆಷಾಢ ನಕ್ಷತ್ರ ಧನು/ ಮಕರ ರಾಶಿ ಎಲ್ಲಿ ಕೇತುಗ್ರಸ್ತ ಖಂಡಗ್ರಾಸ ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸುವುದರಿಂದ ಆಚರಿಸ ತಕ್ಕದ್ದು   16ನೇ ತಾರೀಕು ರಾತ್ರಿ ಗಂಟೆ 01:32:35 ನಿಮಿಷ ಗ್ರಹಣ ಸ್ಪರ್ಶ ವಾಗುವುದು. 3: 1.12 ಕ್ಕೆ ಮಧ್ಯಕಾಲಮಧ್ಯಕಾಲ 4.29:50 ಕ್ಕೆಮೋಕ್ಷಕಾಲ   ಗ್ರಹಣ ಕಾಲಗಳಲ್ಲಿ ಮಾಡಬೇಕಾದ ಕರ್ತವ್ಯಗಳು   ಭೋಜನ ವಿಚಾರ 16.07.2019 ಮಂಗಳವಾರ ಮಧ್ಯಾಹ್ನ ಗಂಟೆ 03:55 ರಿಂದ […]

Continue Reading

ಏಕದಂತನಾದ ಗಣೇಶ!

ಆಶ್ರಮದ ಕಡೆ ಹೊರಟ ರಾಮನಿಗೆ ಈ ಸಾಹಸಕ್ಕೆ ಕಾರಣವಾದುದು ಹರನ ಅನುಗ್ರಹ.ದರ್ಶನ ಪಡೆದು ಹರಕೆಗೊಂಡೇ ಆಶ್ರಮಕ್ಕೆ ಮರಳೋಣ ಅನ್ನಿಸಿತು .   ಅಕೃತವ್ರಣನೊಂದಿಗೇ ಕೈಲಾಸದತ್ತ ತಿರುಗಿದ.ತನ್ನ ತಪಶ್ಶಕ್ತಿಯ ಒಂದಂಶವನ್ನು ಅವನಿಗೂ ನೀಡಿ ಇಚ್ಛಾಗಮನ ಶಕ್ತಿಯನ್ನು ಆತನಿಗೂ ನೀಡಿದ. ಕೈಲಾಸವನ್ನು ತಲುಪಿ ಅಲ್ಲಿಯ ಯಕ್ಷಗಂಧರ್ವ ಸೇವಾ ನದಿ ಅಲಕನಂದಾದಲ್ಲಿ ಮಿಂದೆದ್ದು ಮುಂದುವರಿದರು.ಭವ್ಯ ಮಂದಿರ ,ಪ್ರಮಥರ ಕಾವಲು …ದಾಟಿ ಮುಂದೆ ಬಂದರೆ ನಂದಿಕೇಶ್ವರ ಎದುರಾದ.ಆತನ ಅಪ್ಪಣೆ ಪಡೆದು ಒಳಕ್ಕೆ ಪ್ರವೇಶಿಸಿದರು.   ಬಾಲಕರಂತೆ ಆಟವಾಡುತ್ತಾ ಪ್ರಮಥರೊಂದಿಗೆ ವಿಹರಿಸುತ್ತಿದ್ದ ಸ್ಕಂಧ – […]

Continue Reading

ಕಾರ್ತವೀರ್ಯನ ಮರಣ

  ಬ್ರಹ್ಮಾಸ್ತ್ರಗಳ ನಿರಸನದಿಂದ ಕಾರ್ತವೀರ್ಯ ಬೆರಗಾಗಿಹೋದ. ಬದುಕಿನುದ್ದಕ್ಕೂ ಕಾಣದ ಪವಾಡವನ್ನು ಕಂಡ. ಕ್ಷಾತ್ರದ ಹುಚ್ಚು ಸಾಹಸ ಸುಮ್ಮನಿರಗೊಡುವುದೆ? ಆವೇಶದಿಂದ ಅಬ್ಬರಿಸಿ ಆಗ್ನೇಯಾಸ್ತ್ರವನ್ನು ಅಭಿಮಂತ್ರಿಸಿದ‌. ರಾಮ ಅದನ್ನು ವಾರುಣಶರದಿಂದ ನಿಷ್ಕ್ರಿಯಗೊಳಿಸಿದಾಗ ತನ್ನಲ್ಲಿರುವ ದಿವ್ಯಮಹಾಮಂತ್ರಾಸ್ತ್ರಗಳನ್ನೆಲ್ಲ ತೆಗೆತೆಗೆದು ಬಿಡಲಾರಂಭಿಸಿದ. ಅವುಗಳನ್ನೆಲ್ಲ ಅಷ್ಟೇ ಲಾಘವದಿಂದ ಪರಿಹರಿಸಿಕೊಂಡು ರಾಮ ನೆಟ್ಟ ಬಾಣ ಸಹಸ್ರಾರ್ಜುನನ ಕಿವಿಯನ್ನೇ ಕತ್ತರಿಸಿತು. ಜೊತೆಗೆ ಅವನ ಕುಂಡಲವೂ ನೆಲಸೇರಿತು. ದತ್ತಾತ್ರೇಯ ದತ್ತ ಕುಂಡಲವದು! ಮತ್ತೆ ಅರಸನಿಗೆ ಗುರುವಿನ ನೆನಪಾಯಿತು. ಅಂತರಂಗದಿಂದಲೇ ಸ್ಮರಿಸಿಕೊಂಡ. ಅನೇಕ ಯುದ್ಧ ಸಂದರ್ಭಗಳಲ್ಲಿ ಆತ ರಣದ ಮಧ್ಯೆಯೇ ಸ್ಮರಿಸಿವುದಿತ್ತು. […]

Continue Reading

ಬ್ರಹ್ಮಾಸ್ತ್ರಗಳೇ ಇಂಗಿಹೋದವು !!!

  ಬಂಗಾರದ ಭವ್ಯ ರಥವೇರಿ ಹೊರಟಿದ್ದ ಅರ್ಜುನ.ಅವನನ್ನು ಬಳಸಿ ಆತನ ನೂರು ಮಕ್ಕಳು ರಣಗರ್ಜನೆಯೊಂದಿಗೆ ಬಳಸಿ ಬರುತ್ತಿದ್ದರು. ದಿವ್ಯ ಧನುಸ್ಸು,ರಥದಲ್ಲಿ ತುಂಬಿಸಿದ ದಿವ್ಯಾಸ್ತ್ರಗಳು,ಬಗೆಬಗೆಯ ಆಯುಧಗಳು.ಜೊತೆಗೆ ವಿಶೇಷವಾದ ಅನುಭವವಿರುವ ಮೂಲಬಲ.ವೈರಿಗಳ ಎದೆ ಬಿರಿಯುವ ಆರ್ಭಟ! ಸೈನ್ಯದ ಶಿಸ್ತುಬದ್ಧ ಚಲನೆ,ಆಯುಧಗಳ ವರಸೆ ಧನುಷ್ಟಂಕಾರ,ಸಿಂಹನಾದ . ಫಕ್ಕನೆ ಕಾರ್ತವೀರ್ಯ ಯಾರೋ ಒಬ್ಬ ಪ್ರಬಲ ವಿರೋಧಿಯಮೇಲೆ ದಾಳಿ ಇಡುತ್ತಾನೋ ಎಂಬ ಸಂದೇಹ ಬರುವಂತಿತ್ತು. ಒಬ್ಬ ಮುನಿಕುಮಾರನನ್ನೆದುರಿಸಲು ಮಾಹಿಷ್ಮತಿಯ ಮಹಾಬಲವೇ ಹೊರಟು ನಿಂತಿತ್ತು. ಇಷ್ಟೆಲ್ಲ ಬಲವಿರುವವ ಮುನಿಯನ್ನಾದರೂ ಏಕೆ ಲಕ್ಷಿಸಬೇಕು ಎಂಬುದಕ್ಕೆ ಪುಷ್ಟಿಕೊಡುವಂತಿತ್ತು ಆ […]

Continue Reading

ಗೋ ಪ್ರೇಮ ;ರಾಮಕೃಷ್ಣ ಹೆಗಡೆ ಕಲ್ಲಬ್ಬೆ

ಇದು ಇತ್ತೀಚಿಗೆ ನಡೆದ ಸಂಭಾಷಣೆ, ಗೋ ಸಂಭಾಷಣೆ ಎನ್ನಬಹುದು. ಯಾವುದೇ ವಿಷಯದ ಬಗ್ಗೆ ಮಾತಾಡಿದರೂ, ವಿಷಯ ಎಲ್ಲೇ ಹೋದರೂ ಮತ್ತೆ ಗೋವಿನ ವಿಷಯಕ್ಕೇ ಬರುತ್ತಿತ್ತು. ಅಷ್ಟರಮಟ್ಟಿಗೆ ಗೋವು ಈ ತಂಗಿಯ ಜೀವನದ ಮೇಲೆ ಪ್ರಭಾವ ಬೀರಿತ್ತು. ಅಕ್ಕ ಪಕ್ಕದ ಮನೆಯ ಮಹಡಿಯ ಮೇಲೆ ನಿಂತು ಮಾತಾಡಿದ ರೀತಿ ನೋಡಿ. ಅಕ್ಕ: ತಂಗಿಮರಿ, ಊರಿಂದ ಯಾವಾಗ್ ಬಂದ್ಯೇ? ತಂಗಿ: ಬೆಳಿಗ್ಗೆ ಬಂದ್ನೇ ಅಕ್ಕಯ್ಯ, ನಾ ಬರಕಾದ್ರೆ ಒಂದು ಆಕ್ಳು ಕರು ಹಾಕ್ತು ಅಕ್ಕ 😀😀 ಅಕ್ಕ: ಊರಲ್ಲಿ ಆಯಿ […]

Continue Reading

ಪ್ರಾಮಾಣಿಕತೆಗೆ ವಿಧಿಯೂ ವಿಲವಿಲನೆ ಒದ್ದಾಡೀತು. ಜಗತ್ತು ಅವರನ್ನು ಕಂಡು ಮುದ್ದಾಡೀತು.; ಲೋಹಿತಶರ್ಮಾ ಇಡುವಾಣಿ

ಪ್ರಾಮಾಣಿಕತೆಗೆ ವಿಧಿಯೂ ವಿಲವಿಲನೆ ಒದ್ದಾಡೀತು. ಜಗತ್ತು ಅವರನ್ನು ಕಂಡು ಮುದ್ದಾಡೀತು. ಓದಬೇಕಿಂದಿಲ್ಲ ದಿನಪತ್ರಿಕೆಗಳಲ್ಲಿ ಬರುವ ಸುದ್ದಿಗಳನ್ನು. ಅದರೆ ನೊಡಲೇಬೇಕು ಅವುಗಳಲ್ಲಿ ಕೆಲವನ್ನು. ದಿನಪತ್ರಿಕೆಗಳಲ್ಲಿ ಇರುತ್ತವೆ ಹೆಚ್ಚು ಇನ್ಪರ್ಮೇಷನ್, ಅಲ್ಲಲ್ಲಿ ಜ್ಞಾನವೂ. ಜ್ಞಾನ ಸೂಚಿಸುತ್ತವವು ಹೊಸತನ್ನು, ಖುಷಿಯಾಗಿಡುತ್ತವೆ ದಿನವನ್ನು. ಅವಕ್ಕಿರುವ ವೈಶಿಷ್ಟ್ಯವದು. ಸುದ್ದಿಯ ನಡುವೆ ಇದ್ದು, ಬುದ್ಧಿಗೆ ಕೆಲಸಕೊಡುವ ಸುದ್ದಿ ಇದು. ಅಮೆರಿಕ ನೈಜ ಘಟನೆ ಇದೊಂದು. ಮೊರಾ ಗ್ರೆಗ್ ಗೆ ಆಗಿನ್ನು ವರ್ಷ ಮೂರು. ಆಕೆಯ ತಾಯಿ 1946ರಲ್ಲಿ ಅಮೆರಿಕದ ಮಾಂಟ್ ಗೊಮೆರಿ ಕೌಂಟಿಯ ಸಿಲ್ವರ್ ಸ್ಟ್ರಿಂಗ್ […]

Continue Reading