ಪ್ರಪಂಚದಲ್ಲಿ ಗುರುವಿಗೆ ಪರ್ಯಾಯವಿಲ್ಲ – ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು 

ಬೆಂಗಳೂರು: ಪ್ರಪಂಚದಲ್ಲಿ ಗುರುವಿಗೆ ಪರ್ಯಾಯವಿಲ್ಲ. ಗುರುವಿಗೆ ಇನ್ನೊಂದು ಗುರು ಪರ್ಯಾಯವಾಗಲು ಸಾಧ್ಯವಿಲ್ಲ. ಹಾಗೆಯೇ ಜೀವನದಲ್ಲಿ ಇಬ್ಬರು ಗುರುವನ್ನು ಆಶ್ರಯಿಸಿದಾಗ ಶಿಷ್ಯನ ಅವನತಿ ಆಗುತ್ತದೆ ಎಂದು ಸನಾತನ ಪರಂಪರೆ ಹೇಳುತ್ತದೆ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಹೇಳಿದರು. ಬೆಂಗಳೂರಿನ ಗಿರಿನಗರದಲ್ಲಿರುವ ಶಾಖಾ ಮಠದಲ್ಲಿ ಬ್ರಹೈಕ್ಯ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮಿಗಳ ಆರಾಧನಾ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಭಗವಂತನಿಗೆ ಗುರು ಪರ್ಯಾಯ. ಆದರೆ ಭಗವಂತ ಗುರುವಿಗೆ ಪರ್ಯಾಯವಲ್ಲ. ಜೀವನದ […]

Continue Reading

ಕೊಲ್ಲೂರಿನಲ್ಲಿ ಧಾರ್ಮಿಕ ಪೂಜಾ ಪದ್ಧತಿಯನ್ನು ಸ್ಥಾಪಿಸಿದವರು ರಾಮಚಂದ್ರಾಪುರ ಮಠದ 33ನೇ ಜಗದ್ಗುರುಗಳು : ರಾಮಚಂದ್ರಾಪುರ ಶ್ರೀ

  ಕೊಲ್ಲೂರಿನ ಮೂಕಾಂಬಿಕಾ ದೇವಾಲಯದಲ್ಲಿ ಧಾರ್ಮಿಕ ಪೂಜಾಪದ್ಧತಿಯನ್ನು ಸ್ಥಾಪಿಸಿದವರು ಶ್ರೀ ರಾಮಚಂದ್ರಾಪುರ ಮಠದ 33ನೇ ಪೀಠಾಧಿಪತಿಗಳಾದ ಬ್ರಹ್ಮೈಕ್ಯ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಎಂದು ಶ್ರೀರಾಮಚಂದ್ರಾಪುರ ಮಠದ 36ನೇ ಪೀಠಾಧಿಪತಿಗಳಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಹೇಳಿದರು. ಬೆಂಗಳೂರಿನ ಗಿರಿನಗರದ ಶಾಖಾ ಮಠದಲ್ಲಿ ನಡೆದ 33ನೇ ಪೀಠಾಧಿಪತಿಗಳ ಸಂಸ್ಮರಣ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, 33 ನೇ ರಾಘವೇಶ್ವರರು ಅಧ್ಯಯನ – ತಪಸ್ಸು ಹಾಗೂ ಗ್ರಂಥ ರಚನೆಗಳಿಗೆ ಪ್ರಸಿದ್ಧರಾಗಿದ್ದು, ಅಂದು ರಾಮಚಂದ್ರಾಪುರ ಮಠದ ಕೀರ್ತಿಯನ್ನು ಹೆಚ್ಚಿಸಿದ […]

Continue Reading

ಗೋದೀಪ ~ ದೀಪಾವಳಿ ಗೋಪೂಜೆ – ಶ್ರೀರಾಮಚಂದ್ರಾಪುರ ಮಠ , ಗಿರಿನಗರ

  ಹಳ್ಳಿಗಳು ಹಾಗೂ ಹಳ್ಳಿಗರು ಬೆಂಗಳೂರನ್ನು ಸೇರುತ್ತಾ ಸಾಗಿದಂತೆ ಬೆಂಗಳೂರು ದೊಡ್ಡದಾಗುತ್ತಾ ಹೋಗಿದೆ. ನಾವು ಹಳ್ಳಿಗಳನ್ನು ಮಾತ್ರ ಬಿಟ್ಟುಬಂದಿಲ್ಲ, ಈ ಮಾಯಾ ನಗರಿಗೆ ಬರುವಾಗ ನಮ್ಮ ಸಂಸ್ಕೃತಿಯನ್ನೂ ಬಿಟ್ಟು ಬಂದಿರುವುದು ದುರಂತ. ಇಂದು ಹಳ್ಳಿಗಳಲ್ಲಿಯೂ ಕೂಡ ನಗರದ ಸಂಸ್ಕೃತಿ ಬೆಳೆಯುತ್ತಿರುವುದು ಆತಂಕಕಾರಿ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಹೇಳಿದರು. ಬೆಂಗಳೂರಿನ ಗಿರಿನಗದಲ್ಲಿರುವ ಶ್ರೀರಾಮಚಂದ್ರಾಪುರಮಠದ ಶಾಖೆಯಲ್ಲಿ ನಡೆದ ‘ಗೋದೀಪ – ದೀಪಾವಳಿ ಗೋಪೂಜೆ’ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಗೋಸಂದೇಶ ನೀಡಿದ ಶ್ರೀಗಳು, ಭಗವಾನ್ ಶ್ರೀಕೃಷ್ಣನು ಗೋಪೂಜೆಯ ಪ್ರವರ್ತಕನಾಗಿದ್ದು, […]

Continue Reading

ಗುರಿಕ್ಕಾರರ ಗುರುಮಾರ್ಗ – ಒಂದು ಸಂವಾದ ಕಾರ್ಯಾಗಾರ

ಸಮಾಜದಲ್ಲಿ ಗುರಿಕ್ಕಾರರ ಮಹತ್ವ, ಗುರಿಕ್ಕಾರರು ಎದುರಿಸುತ್ತಿರುವ ಸಮಸ್ಯೆಗಳು, ವೈದಿಕರು – ಗುರಿಕ್ಕಾರರು – ಶಿಷ್ಯರೊಂದಿಗಿನ ಸಮನ್ವಯತೆ, ಸಂಘಟನೆಯ ಪದಾಧಿಕಾರಿಗಳು – ಗುರಿಕ್ಕಾರ ನಡುವಿನ ಸಮನ್ವಯತೆ ಈ ವಿಷಯಗಳನ್ನು ಆಧರಿಸಿ ಮಂಡಲದ ಎಲ್ಲಾ ವಲಯಗಳ ಎಲ್ಲಾ ಗುರಿಕ್ಕಾರರು ಮತ್ತು ಪದಾಧಿಕಾರಿಗಳು ಭಾಗವಹಿಸಿ ಚರ್ಚಿಸಿ ಒಂದು ಸಂವಾದ ರೂಪದಲ್ಲಿ ಪರಿಹಾರ ಕಂಡುಕೊಳ್ಳುವ ಪ್ರಯತ್ನವೇ  ಈ ಕಾರ್ಯಾಗಾರದ  ಧ್ಯೇಯೋದ್ದೇಶವಾಗಿತ್ತು.   2022ರಲ್ಲಿ ನಡೆಸಿದ ಗುರಿಕ್ಕಾರರ ಸಮಾವೇಶ ನಿರೀಕ್ಷಿತ ಯಶಸ್ಸು ಕಾಣದಿದ್ದುದರಿಂದ  ಈ ಬಾರಿ ಮಂಡಲದ ನಾಲ್ಕು ಕಡೆ 3/4 ವಲಯಗಳನ್ನು ಸೇರಿಸಿ […]

Continue Reading

ಗೋದೀಪ – ದೀಪಾವಳೀ ವಿಶೇಷ ಗೋಪೂಜೆ –  ಗೋಸಂರಕ್ಷಣೆ – ಲೋಕಕಲ್ಯಾಣಕಾಗಿ ವಿಶ್ವಜನನಿಯ ವಿಶಿಷ್ಟ ಪೂಜೆ –  ಶ್ರೀಗಳಿಂದ ಗೋ ಸಂದೇಶ – ಗಣ್ಯ ~ ಮಾನ್ಯರಿಂದ ವಿಶೇಷ ಗೋಪೂಜೆ – ಗೋ ಗಾನಾಮೃತ – ಗೋಸೂಕ್ತ ಪಾರಾಯಣ – ಗೋಸೂಕ್ತ ಹವನ

    ಗೋಸಂರಕ್ಷಣೆ ಹಾಗೂ ಲೋಕಕಲ್ಯಾಣದ ಮಹಾಸಂಕಲ್ಪದೊಂದಿಗೆ ದೀಪಾವಳಿಯ ಪುಣ್ಯಪರ್ವದಲ್ಲಿ ವಿಶ್ವಜನನಿಯ ವಿಶಿಷ್ಟ ಪೂಜಾ ಕಾರ್ಯಕ್ರಮ ‘ಗೋದೀಪ – ದೀಪಾವಳೀ ವಿಶೇಷ ಗೋಪೂಜೆ’ಯು ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಚಂದ್ರಾಪುರ ಮಠದ ಶಾಖೆಯಾದ ಶ್ರೀರಾಮಾಶ್ರಮದಲ್ಲಿ ದಿನಾಂಕ 22.10.2025 ಬುಧವಾರ ಸಂಜೆ 5 ಗಂಟೆಯಿಂದ ನಡೆಯಲಿದೆ. ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದ್ದು, ದೀಪಾವಳಿ ಗೋಪೂಜೆಯ ಗೋಸಂದೇಶವನ್ನು ಶ್ರೀಗಳು ಅನುಗ್ರಹಿಸಲಿದ್ದಾರೆ. ಆಹ್ವಾನಿತ ಗಣ್ಯ-ಮಾನ್ಯ ದಂಪತಿಗಳಿಂದ ಏಕಕಾಲಕ್ಕೆ ವಿಶೇಷರೀತಿಯಲ್ಲಿ ಸಾಲಂಕೃತ ಗೋವುಗಳಿಗೆ ಪೂಜೆ ನಡೆಯಲಿದ್ದು, […]

Continue Reading

ಶ್ರೀಸಂಸ್ಥಾನದವರ ಈ ಬಾರಿಯ ಬೆಂಗಳೂರಿನ ಶ್ರೀರಾಮಾಶ್ರಮದಲ್ಲಿನ ವಸತಿಯ ಸಂದರ್ಭದಲ್ಲಿ ಶ್ರೀಪೂಜೆಯ ಸಮಯ

ಶುಭೋದಯ ಬೆಂಗಳೂರು! ಬೆಂಗಳೂರಿಗರೇ, ಬೆಳಗ್ಗೆ-ಬೆಳಗ್ಗೆಯೇ ವಾಹನ ಶಬ್ದ ಕೇಳಿ ಕೇಳಿ ಸಾಕಾಗಿದೆಯೇ? ಕಛೇರಿಯ ಒತ್ತಡಗಳಿಂದ ಮನಸ್ಸು ಬೇಸತ್ತು ಹೋಗಿದೆಯೇ? ನೆಮ್ಮದಿ, ಸಮಾಧಾನ ಬೇಕು ಅನ್ನಿಸುತ್ತಿದೆಯೇ? ನಿಮಗೊಂದು ಶುಭ ಸುದ್ದಿ. ಪರಮಪೂಜ್ಯ ಶ್ರೀಸಂಸ್ಥಾನದವರ ಗಿರಿನಗರದ ಶ್ರೀರಾಮಾಶ್ರಮದಲ್ಲಿ ವಸತಿಯ ಸಂದರ್ಭದಲ್ಲಿ ಪ್ರತಿದಿನ ಬೆಳಗ್ಗೆ ೬ ಗಂಟೆಗೆ ಶ್ರೀಪೂಜೆಯನ್ನು ಕೈಗೊಳಲಿದ್ದಾರೆ. ನೀವು, ರಾಮದೇವಸ್ಥಾನದ ಆವರಣದಲ್ಲಿ, ಗೋವುಗಳ ‘ಅಂಬಾ’ ಆಲಾಪದ ಮಧ್ಯೆ‌ ಕೂತಿದ್ದೀರಿ, ಕಣ್ಣಲ್ಲಿ ಗುರುಗಳನ್ನು ಹಾಗೂ ರಾಮದೇವರನ್ನು ತುಂಬಿಕೊಂಡಿದ್ದೀರಿ, ಕಿವಿಗಳಿಂದ ವೇದಮಂತ್ರ, ಘಂಟೆ, ಶಂಖ, ನಗಾರಿ ಶುಭವಾದ್ಯಗಳ ಘೋಷ ಕೇಳುತ್ತಿದ್ದೀರಿ, ಮನಸ್ಸಿನಲ್ಲಿ […]

Continue Reading

ರಾಮಚಂದ್ರಾಪುರ-ಶಕಟಪುರ ಶಂಕರಪೀಠಗಳ ಸಮಾಗಮ 

ಶ್ರೀರಾಮಚಂದ್ರಾಪುರ ಮಠ‌ ಹಾಗೂ ಶಕಟಪುರ ಮಠಗಳ ನಡುವೆ ಅದ್ವೈತದ ಬಾಂಧವ್ಯವಿದೆ. ಇದು ರಾಜರಾಜೇಶ್ವರೀ ಅನುಗ್ರಹಿಸಿರುವ ಬಾಂಧವ್ಯ. ಈ ಬಾಂಧವ್ಯಕ್ಕೆ ಅವಳೇ ಸೇತುವೆ. ಎರಡೆಂದು ಕಂಡರೂ ಈ ಪೀಠಗಳು ಒಂದೇ ಎನ್ನುವ ಭಾವವೇರ್ಪಟ್ಟಿದೆ ಎಂದು ಶ್ರೀಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ನುಡಿದರು. ಶಕಟಪುರದ ಶ್ರೀವಿದ್ಯಾಪೀಠದ ಪರಮಪೂಜ್ಯ ಶ್ರೀಜಗದ್ಗುರು ಬದರೀ ಶಂಕರಾಚಾರ್ಯ ಶ್ರೀತೋಟಕಾಚಾರ್ಯ ಶ್ರೀವಿದ್ಯಾಭಿನವ ಶ್ರೀಶ್ರೀಕೃಷ್ಣಾನಂದತೀರ್ಥ ಮಹಾಸ್ವಾಮಿಗಳವರು ಶ್ರೀರಾಮಚಂದ್ರಾಪುರ ಮಠದ ಬೆಂಗಳೂರಿನ ಶಾಖಾ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಆಶೀರ್ವಚನ ನೀಡಿದರು. ಶಕಟಪುರದ […]

Continue Reading

ಶಿಷ್ಯ ಹಿತಮ್ – ಸುವರ್ಣ ಪಾದುಕೆಯ ಸ್ವರ್ಣಿಮಯಾತ್ರೆ

  ಶ್ರೀರಾಮಚಂದ್ರಾಪುರ ಮಠದ ಶಿಷ್ಯತ್ವವನ್ನು ಅಂಗೀಕರಿಸಿದ ಪ್ರತಿಯೊಬ್ಬ ಭಕ್ತನ ಹಿತವನ್ನು ಬಯಸಿ ಅವರ ಹೆಸರು, ನಕ್ಷತ್ರ,.ರಾಶಿಯನ್ನು ಹೇಳಿ, ಸಂಕಲ್ಪ ಮಾಡಿ ಭಗವಂತನಲ್ಲಿ ಸಂಪ್ರಾರ್ಥನೆ ಮಾಡಿ ವಿಹಿತವಾದ ಒಂದು ಉತ್ತಮ ಕರ್ಮವನ್ನು ಮಾಡುವುದು’ ಶಿಷ್ಯ ಹಿತಮ್’ ನ ಉದ್ದೇಶ. ಇದರ ಅಂಗವಾಗಿ ಶ್ರೀಗುರುಪೀಠದ ಆಶೀರ್ವಾದವನ್ನು ಪಡೆದುಕೊಂಡು ಸುವರ್ಣ ಪಾದುಕೆಯು ಶಿಷ್ಯರ ಮನೆ ಮನೆಗಳಿಗೆ ಆಗಮಿಸಲಿದೆ. ‘ ಶ್ರೀಗುರುಗಳು ಶಿಷ್ಯರಿಗೆ ತಾವಾಗಿಯೇ ತಿಳಿದು ಕೊಟ್ಟ ಅನುಗ್ರಹಕ್ಕೆ ತುಂಬಾ ಫಲವಿದೆಯಂತೆ. ಅದೇ ರೀತಿಯಲ್ಲಿ ನಾವು ಕರೆಯದೆ ಗುರುಗಳು ತಾವಾಗಿಯೇ ನಮ್ಮ ಮನೆಗಳಿಗೆ […]

Continue Reading

ಶ್ರೀಮಠದ ಅಂಗ ಸಂಸ್ಥೆಗಳಲ್ಲಿ ನವರಾತ್ರಿ ಉತ್ಸವ

ಸಾಗರದ ಅಗ್ರಹಾರದಲ್ಲಿ ಶ್ರೀ ರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ ದಿವ್ಯಸಾನ್ನಿಧ್ಯದಲ್ಲಿ ಸೆ.22ರಿಂದ ಅ.2ರವರೆಗೆ ನವರಾತ್ರ ನಮಸ್ಯಾ ಕಾರ್ಯಕ್ರಮ ನಡೆಯಿತು. ಪ್ರತಿದಿನ ಮಧ್ಯಾಹ್ನ 3.30 ರಿಂದ 5 ಗಂಟೆಯವರೆಗೆ ಲಲಿತೋಪಾಖ್ಯಾನ ಪ್ರವಚನ, ದೀಪಾಲಂಕಾರ, ದುರ್ಗಾದೀಪ ಪೂಜೆ, ಕುಂಕುಮಾರ್ಚನೆ, ಏಕಾದಶಿ ದಿನ ವಿಶೇಷ ಶ್ರೀಚಕ್ರ ಆರಾಧನೆ ಸಂಪನ್ನಗೊಂಡಿತು. ——— ನವರಾತ್ರಿ ಮಹೋತ್ಸವದ ಅಂಗವಾಗಿ ಬೆಂಗಳೂರು ಶ್ರೀ ಭಾರತೀ ವಿದ್ಯಾಲಯದಲ್ಲಿ 26 ಸೆಪ್ಟೆಂಬರ್ 2025ರಂದು ಭಕ್ತಿಯಿಂದ ಹಾಗೂ ಸಂಭ್ರಮದಿಂದ ಸರಸ್ವತಿ ಪೂಜೆ ಆಚರಿಸಲಾಯಿತು. ವಿದ್ಯೆ ಮತ್ತು ಜ್ಞಾನದ […]

Continue Reading

 ಶಾಸನತಂತ್ರ ~ ಸೇವಾಖಂಡ ಕಾರ್ಯಗಾರ 3

ಸಾಗರ: ಶ್ರೀರಾಮಚಂದ್ರಾಪುರ ಮಠದ ಶಾಸನತಂತ್ರ ~ ಸೇವಾಖಂಡ ಕಾರ್ಯಗಾರ 3 ಸಾಗರ ಬಾಪಟ್ ಸಭಾಭವನದಲ್ಲಿ ಭಾನುವಾರ ನಡೆಯಿತು. ಬೆಳಗ್ಗೆ ಶ್ರೀರಾಮ ದೇವರ ಸನ್ನಿಧಿಯಲ್ಲಿ ಫಲ ಸಮರ್ಪಣೆ ಮಾಡಿ ಪ್ರಾರ್ಥನೆ ಮಾಡಲಾಯಿತು. ಸಾಗರ ರಾಘವೇಶ್ವರ ಭವನ ಸಮಿತಿ ಅಧ್ಯಕ್ಷ ಹರನಾಥ ರಾವ್ ಮತ್ತಿಕೊಪ್ಪ ಕಾರ್ಯಾಗಾರಕ್ಕೆ ಚಾಲನೆ ನೀಡಿದರು. ಶ್ರೀಮಠ ಅಂದಿನಿಂದ ಇಂದಿನವರೆಗೆ ವಿಷಯದ ಕುರಿತು ವಿದ್ವಾನ್ ಗಜಾನನ ರೇವಣಕಟ್ಟ ಮಾತಾಡಿದರು. ಶಾಸನತಂತ್ರ ಅಧ್ಯಕ್ಷ ಮೋಹನ ಹೆಗಡೆ ಅರ್ಹತೆಯ ಅಷ್ಟ ಸೂತ್ರಗಳ ಬಗ್ಗೆ ಸೇವಾ ಬಿಂದುಗಳಿಗೆ ತಿಳಿಸಿಕೊಟ್ಟರು. ಶ್ರೀಮಠದ ಆಡಳಿತ ವ್ಯವಸ್ಥೆಯಾದ […]

Continue Reading

ಶಾಸನತಂತ್ರ ~ ಸೇವಾಖಂಡ ಕಾರ್ಯಗಾರ -೨

  ಮಾಣಿ: ಪೆರಾಜೆ ಶ್ರೀರಾಮಚಂದ್ರಾಪುರ ಮಠದಲ್ಲಿ ಶಾಸನತಂತ್ರ ಸೇವಾಖಂಡ ಕಾರ್ಯಗಾರ – ೨ ೨೧/೦೯/೨೦೨೫ರಂದು ನಡೆಯಿತು. ಬೆಳಗ್ಗೆ ಶ್ರೀರಾಮ ದೇವರ ಸನ್ನಿಧಿ ಮುಂಭಾಗದಲ್ಲಿ ಫಲ ಸಮರ್ಪಣೆ ಮಾಡಿ ಪ್ರಾರ್ಥನೆ ಮಾಡಲಾಯಿತು. ಸಂಪನ್ಮೂಲ ಖಂಡದ ಶ್ರೀಸಂಯೋಜಕ ಹಾರಕರೆ ನಾರಾಯಣ ಭಟ್ ಹಾಗೂ ಮುಳ್ಳೇರಿಯ ಮಂಡಲ ಅಧ್ಯಕ್ಷ ಸರ್ಪಮಲೆ ಬಾಲಸುಬ್ರಹ್ಮಣ್ಯ ಭಟ್ ದೀಪಪ್ರಜ್ವಲಿಸಿ ಕಾರ್ಯಾಗಾರಕ್ಕೆ ಚಾಲನೆ ನೀಡಿದರು. ಶಾಸನ ತಂತ್ರದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಅರ್ಹತೆಯ ಅಷ್ಟ ಸೂತ್ರಗಳ ಬಗ್ಗೆ ಸೇವಾ ಬಿಂದುಗಳಿಗೆ ತಿಳಿಸಿಕೊಟ್ಟರು. ಶಾಸನ ತಂತ್ರದ ಕಾರ್ಯದರ್ಶಿ […]

Continue Reading

ಮಾಹಿತಿ – ಸ್ಫೂರ್ತಿ : ಎರಡನ್ನೂ ನೀಡಿದ ಯೋಜನಾ ಖಂಡದ ಕಾರ್ಯಾಗಾರ

ಬೆಂಗಳೂರು: ಯೋಜನಾ ಖಂಡದ ಉದ್ದೇಶ, ರೂಪುರೇಷೆಗಳನ್ನು ಸದಸ್ಯರಿಗೆ ತಿಳಿಸುವ ಮತ್ತು ಸದಸ್ಯರ ಜವಾಬ್ದಾರಿಯ ಕಾರ್ಯದೀಕ್ಷೆಯನ್ನು ವಿಧಿಸುವ ಕಾರ್ಯಾಗಾರ ಬೆಂಗಳೂರಿನ ರಾಮಚಂದ್ರಾಪುರಮಠದ ಶಾಖೆ ರಾಮಾಶ್ರಮದಲ್ಲಿ ೧೪ ಸೆಪ್ಟೆಂಬರ್ ೨೦೨೫ ರಂದು ನಡೆಯಿತು. ಸಭಾ ಪೂಜೆಯನ್ನು ಯೋಜನಾಖಂಡದ ಸಂಯೋಜಕ ಕೆ ಎನ್ ಭಟ್ ನಡೆಸಿದರು. ಯೋಜನಾಖಂಡದ ಶ್ರೀ ಸಂಯೋಜಕ ವಿದ್ವಾನ್ ಜಗದೀಶ ಶರ್ಮ ಸಂಪ ಸಮಗ್ರವಾಗಿ ಶಾಸನ ತಂತ್ರ, ಅದರ ಕಾರ್ಯವಿಧಾನ, ಯೋಜನಾ ಖಂಡ, ಅದರಲ್ಲಿನ ಉಪಖಂಡ, ಅವುಗಳ ಕಾರ್ಯ ವ್ಯಾಪ್ತಿ ಇದೆಲ್ಲದರ ಕುರಿತು ವಿವರವಾಗಿ ಬಿಡಿಸಿ ತಿಳಿಸಿಕೊಟ್ಟರು. ಶಾಸನತಂತ್ರದ […]

Continue Reading

ಸ್ವಭಾಷಾ ಚಾತುರ್ಮಾಸ್ಯ ಸೀಮೋಲ್ಲಂಘನ ಧರ್ಮಸಭೆಯಲ್ಲಿ ರಾಘವೇಶ್ವರ ಶ್ರೀ ಘೋಷಣೆ – ಶಿಷ್ಯಹಿತಂ ಮಹಾಸಂಕಲ್ಪ: ಪ್ರತಿ ಶಿಷ್ಯರ ಮನೆಗೆ ಸ್ವರ್ಣಯಾತ್ರೆ

ಗೋಕರ್ಣ: ಸಮಸ್ತ ಗುರು ಪರಂಪರೆಯ ಆಶೀರ್ವಾದವನ್ನು ಹೊತ್ತು ಸಮಾಜದ ಪ್ರತಿ ಶಿಷ್ಯರ ಮನೆಗೆ ಸ್ವರ್ಣಪಾದುಕೆ ಚಿತ್ತೈಸುವ ಸ್ವರ್ಣಯಾತ್ರೆ ಈ ವರ್ಷದ ವಿಜಯದಶಮಿಯಿಂದ ಆರಂಭವಾಗಲಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು. ಅಶೋಕೆಯಲ್ಲಿ ಸ್ವಭಾಷಾ ಚಾತುರ್ಮಾಸ್ಯ ವ್ರತ ಕೈಗೊಂಡ ಶ್ರೀಗಳು ಸೀಮೋಲ್ಲಂಘನ ಬಳಿಕ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡುವ ವೇಳೆ ಈ ಉದ್ಘೋಷ ಮಾಡಿದರು. ಶ್ರೀಮಠದ ಶಿಷ್ಯತ್ವ ಹೊಂದಿರುವ ಎಲ್ಲರ ಹೆಸರಲ್ಲಿ ಸಂಕಲ್ಪ ಮಾಡಿ ಶಿಷ್ಯಹಿತಂ ಎಂಬ ಬೃಹತ್ ಕಾರ್ಯಕ್ರಮ ಆಯೋಜಿಸಿದ್ದು, ಇದಕ್ಕೆ ಪೂರ್ವಭಾವಿಯಾಗಿ ಸ್ವರ್ಣಪಾದುಕೆಗಳು ಮನೆ ಮನೆಗೆ […]

Continue Reading

ಆಂಗ್ಲರ ದಾಸ್ಯದಿಂದ ಹೊರಬನ್ನಿ: ರಾಘವೇಶ್ವರ ಶ್ರೀ

ಗೋಕರ್ಣ: ಬ್ರಿಟಿಷರ ಆಳ್ವಿಕೆ ಮುಗಿದು ಮೂರು ತಲೆಮಾರು ಕಳೆದರೂ, ನಾವು ಅವರ ದಾಸ್ಯದಿಂದ ಹೊರಬಂದಿಲ್ಲ. ಇಂಗ್ಲಿಷ್ ಮರೆಯುವ ಬದಲು ನಾವು ನಮ್ಮ ಭಾಷೆ, ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ವಿಷಾದಿಸಿದರು. ಅಶೋಕೆಯಲ್ಲಿ ಸ್ವಭಾಷಾ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು 59ನೇ ದಿನವಾದ ಶನಿವಾರ ಮುಂಬೈ, ಪುಣೆ, ಡೊಂಬಿವಿಲಿ, ಚೆನ್ನೈ, ಹೈದರಾಬಾದ್ ವಲಯಗಳ ಶಿಷ್ಯರಿಂದ ಸರ್ವಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು. ಬರಬರುತ್ತಾ ಇಂಗ್ಲಿಷ್ ಭಾಷೆ ಸಂಸ್ಕೃತಿ ಮರೆಯಾಗಬೇಕಿತ್ತು. ಆದರೆ ಹೆಚ್ಚುತ್ತಿರುವುದು ಆತಂಕಕಾರಿ […]

Continue Reading

ವೇದಾಧ್ಯಯನ ಪರಂಪರೆ ಬೆಳೆಯಲಿ: ರಾಘವೇಶ್ವರ ಶ್ರೀ ಆಶಯ

ಗೋಕರ್ಣ: ವೇದಾಧ್ಯಯನ ಪರಂಪರೆ ಬೆಳೆಯಬೇಕು. ನಿಷ್ಕಾರಣವಾಗಿ, ಫಲಾಪೇಕ್ಷೆ ಇಲ್ಲದೇ ಅಧ್ಯಯನ ಮಾಡಬೇಕು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.   ಅಶೋಕೆಯಲ್ಲಿ ಸ್ವಭಾಷಾ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು 58ನೇ ದಿನವಾದ ಶುಕ್ರವಾರ ಬೆಂಗಳೂರಿನ ಹರ್ಷಕೃಷ್ಣ ಭಟ್ಟ ದಂಪತಿಗಳಿಂದ ಸರ್ವಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು.   ನಮ್ಮ ಶಿವಗುರುಕುಲದಲ್ಲೇ ಘನಪಾಠಿಗಳು ತಯಾರಾಗಬೇಕು. ಆಗ ಗುರುಕುಲ ಸ್ಥಾಪನೆಯ ಉದ್ದೇಶ ಸಾಕಾರವಾಗುತ್ತದೆ. ಸಮಾಜ ಇದರ ಮಹತ್ವ ಅರಿತು ಅಧ್ಯಯನಾರ್ಥವಾಗಿ ಮಕ್ಕಳನ್ನು ಕಳುಹಿಸಿಕೊಡಬೇಕು. ಮುಂದೊಂದು ದಿನ […]

Continue Reading

ಸಮಾಜದ ಉನ್ನತಿಗೆ ಗುರುಪರಂಪರೆಯ ಆಶೀರ್ವಾದ ಅಗತ್ಯ – ರಾಘವೇಶ್ವರಶ್ರೀ

ಗೋಕರ್ಣ: ಗುರು ಪರಂಪರೆಯ ಆಶೀರ್ವಾದ ಸಮಾಜದ ಉನ್ನತಿಗೆ ಅಗತ್ಯ; ಶಂಕರಾಚಾರ್ಯರ ಆದಿಯಾಗಿ ಎಲ್ಲ ಗುರುಗಳ ಕೃಪೆಯಿಂದ ಸಮಾಜ ಪಾಪಮುಕ್ತವಾಗಲಿ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಹಾರೈಸಿದರು. ಅಶೋಕೆಯಲ್ಲಿ ಸ್ವಭಾಷಾ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು 57ನೇ ದಿನವಾದ ಗುರುವಾರ ಮುಂಬೈನ ರಮಣ ಭಟ್ ದಂಪತಿಗಳಿಂದ ಸರ್ವಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು. ಗುರುಪರಂಪರೆಯ ಪ್ರೀತ್ಯರ್ಥವಾಗಿ ಎಂಟು ಗುರುವಾರಗಳಂದು ಲಕ್ಷ ತುಳಸಿ ಅರ್ಚನೆ ನಡೆದಿದೆ. ಸದುದ್ದೇಶಕ್ಕೆ ತುಳಸಿ ಕುಡಿಗಳು ಲಕ್ಷ ಲಕ್ಷ ಸಂಖ್ಯೆಯಲ್ಲಿ ಸೇರಿದಂತೆ ಸಂಘಟನೆಗಾಗಿ […]

Continue Reading

ಸ್ವಭಾಷಾ ಚಾತುರ್ಮಾಸ್ಯಕ್ಕೆ ಸೂರಜ್ ನಾಯ್ಕ್ ಸೋನಿ ಭೇಟಿ

ಗೋಕರ್ಣ: ಅಶೋಕೆಯಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅವರ ಸ್ವಭಾಷಾ ಚಾತುರ್ಮಾಸ್ಯ ವ್ರತದ ಕಾರ್ಯಕ್ರಮಕ್ಕೆ ಕುಮಟಾ ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಚುನಾವಣಾ ಅಭ್ಯರ್ಥಿಯಾಗಿದ್ದ ಸೂರಜ್ ನಾಯ್ಕ್ ಸೋನಿ ಭೇಟಿ ನೀಡಿ, ಶ್ರೀಸಂಸ್ಥಾನದವರ ದರ್ಶನಾಶೀರ್ವಾದ ಪಡೆದರು.      

Continue Reading

ಸ್ವಭಾಷಾ ಚಾತುರ್ಮಾಸ್ಯಕ್ಕೆ ಶಾಸಕ ಶಿವರಾಮ ಹೆಬ್ಬಾರ್ ಭೇಟಿ

  ಗೋಕರ್ಣ: ಅಶೋಕೆಯಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅವರ ಸ್ವಭಾಷಾ ಚಾತುರ್ಮಾಸ್ಯ ವ್ರತದ ಕಾರ್ಯಕ್ರಮಕ್ಕೆ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಭೇಟಿ ನೀಡಿ, ಶ್ರೀಸಂಸ್ಥಾನದವರ ದರ್ಶನಾಶೀರ್ವಾದ ಪಡೆದರು.

Continue Reading

ಸ್ವಭಾಷಾ ಅಭಿಯಾನ ನಿರಂತರ: ರಾಘವೇಶ್ವರ ಶ್ರೀ

ಗೋಕರ್ಣ: ಮಠದ ಕೊನೆಯ ಶಿಷ್ಯರ ಕೊನೆಯ ಆಂಗ್ಲಪದ ನಿವೃತ್ತಿಯಾಗುವವರೆಗೂ ಸ್ವಭಾಷಾ ಅಭಿಯಾನ ನಡೆಯಲಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು. ಅಶೋಕೆಯಲ್ಲಿ ಸ್ವಭಾಷಾ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು 55ನೇ ದಿನವಾದ ಮಂಗಳವಾರ ಬೆಂಗಳೂರಿನ ಕೆ.ಟಿ.ಶ್ರೀರಾಮ್ ದಂಪತಿಗಳಿಂದ ಸರ್ವಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು. ಹೊಸಪೇಟೆಯ ಸುಬ್ರಾಯ ಹೆಗಡೆ ಮಹಾಸೇವೆ ನೆರವೇರಿಸಿದರು. ಇದು ಕೇವಲ ನಮ್ಮ ಸಮಾಜ ಅಥವಾ ಭಾಷೆಗೆ ಮಾತ್ರ ಸೀಮಿತವಲ್ಲ; ಎಲ್ಲ ಭಾರತೀಯ ಭಾಷೆಗಳಿಗೆ ಅನ್ವಯಿಸುವಂಥದ್ದು ಮತ್ತು ಸಮಾಜದ ಎಲ್ಲ ವರ್ಗದಲ್ಲೂ ಇದು […]

Continue Reading

ಆಂಗ್ಲರ ಅಂಧಾನುಕರಣೆ ತೊರೆದು ನಮ್ಮತನ ಉಳಿಸಿಕೊಳ್ಳೋಣ; ರಾಘವೇಶ್ವರ ಶ್ರೀ

ಗೋಕರ್ಣ: ನಮ್ಮ ಹಿರಿಯರು ಬಳಸುತ್ತಿದ್ದ ಪದಗಳನ್ನು ಮತ್ತೆ ಬಳಕೆಗೆ ತರುವ ಮೂಲಕ ನಾವು ನಾವಾಗೋಣ; ಆಂಗ್ಲರ ಅಂಧಾನುಕರಣೆ ತೊರೆದು ನಮ್ಮತನವನ್ನು ಉಳಿಸಿಕೊಳ್ಳೋಣ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಕರೆ ನೀಡಿದರು.   ಅಶೋಕೆಯಲ್ಲಿ ಸ್ವಭಾಷಾ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು 54ನೇ ದಿನವಾದ ಸೋಮವಾರ ಮಂಗಳೂರು ಮಂಡಲದ ಕನ್ಯಾನ, ಬಾಯಾರು, ಕೋಳ್ಯೂರು, ವಿಟ್ಲ, ಕೇಪು ಮತ್ತು ಕಲ್ಲಡ್ಕ ವಲಯಗಳ ಶಿಷ್ಯರಿಂದ ಸರ್ವಸೇವೆ ಸ್ವೀಕರಿಸಿ ಆಶೀರ್ವಚನ ಅನುಗ್ರಹಿಸಿದರು.   ಕನ್ನಡ ಭಾಷೆಯಲ್ಲಿ ಕಲಬೆರಕೆಯಾಗಿರುವ ಆಂಗ್ಲ ಮತ್ತು […]

Continue Reading