ಗುರು ಕಾರುಣ್ಯದಿಂದ ಗುರಿ ಸೇರಿದೆ: ಎನ್ನುವ ಗೀತಾ ಪ್ರಸಾದ್ ಪೋಳ್ಯ

ಗೀತಾಪ್ರಸಾದ್ ಪೋಳ್ಯ ಇವರು ಗೋ ಸೇವೆಯಲ್ಲಿ ಆಸಕ್ತಿ ಹೊಂದಿ ಗುರು ಸೇವೆಯ ಶ್ರದ್ಧೆಯಿಂದ ಮಾಸದ ಮಾತೆಯಾಗಿ ಸೇರಿ ಗುರಿ ತಲುಪಿದ ಮಾಸದ ಮಾತೆ. “ಪೆರಾಜೆ ಮಾಣಿ ಮಠದಲ್ಲಿ ನಡೆದ ಚಾತುರ್ಮಾಸ್ಯದ ಸಂದರ್ಭದಲ್ಲಿ ಮೊದಲ ಬಾರಿಗೆ ಶ್ರೀ ಸಂಸ್ಥಾನದವರ ಆಶೀರ್ವಚನ, ರಾಮಕಥೆಗಳನ್ನು ಕೇಳಿಸಿಕೊಂಡೆ. ನಂತರ ಆಧ್ಯಾತ್ಮಿಕವಾಗಿ ಬಹಳಷ್ಟು ಸೆಳೆತವುಂಟಾಯಿತು.ಇದು ಅನೇಕ ಮಾನಸಿಕ ಒತ್ತಡಗಳಿಂದ ಮುಕ್ತಿಯನ್ನು ನೀಡಿದಾಗ ಶ್ರೀ ಗುರುಗಳ ನಿರ್ದೇಶಾನುಸಾರವಾಗಿ ನಡೆಯುತ್ತಿರುವ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡೆ” ಎನ್ನುವ ಗೀತಾ ಪೋಳ್ಯ ಅವರು ತಮ್ಮ ಮಾಸದ ಮಾತೆಯಾದ ಅನುಭವವನ್ನು […]

Continue Reading

ಗುರು ಚರಣಕೆ ಶರಣು : ವಿಜಯಲಕ್ಷ್ಮಿ ಅಂಗಡಿ (ಪ್ರತಿಭಾ ಅಂಗಡಿ)

ಶ್ರೀ ಗುರುಗಳ ಗೋವಿನ ಬಗ್ಗೆ ಇರುವ ಕಾಳಜಿಯ ಪ್ರೇರಣೆ, ಶ್ರೀ ಗುರು ವಚನದ ಮೇಲಿನ ಶ್ರದ್ಧೆ, ಬಾಲ್ಯದಿಂದಲೂ ಗೋವಿನ ಮೇಲೆ ಇದ್ದಂತಹ ಪ್ರೀತಿ ಇವುಗಳ ಪ್ರೇರಣೆಯಿಂದ ಮಾಸದ ಮಾತೆಯಾಗಿ ಸೇವೆ ಗೈಯಲು ಮುಂದೆ ಬಂದೆ. ಶ್ರೀ ಗುರುಗಳ ಅನುಗ್ರಹದಿಂದ ನಿರೀಕ್ಷೆಗೂ ಮುನ್ನವೇ ಗುರಿ ಸೇರಿದ ಸಾರ್ಥಕ ಭಾವ ಮನದಲ್ಲಿ ಮೂಡಿದೆ ಎನ್ನುತ್ತಾರೆ ಕರ್ಕಿ ಹೊನ್ನಾವರ ಮೂಲದ ಪ್ರಸ್ತುತ ಶಿರಸಿಯಲ್ಲಿ ವಾಸ್ತವ್ಯವಿರುವ ವಿಜಯಲಕ್ಷ್ಮಿ ಅಂಗಡಿ ಅವರ ಮಾತುಗಳು. ಸಿದ್ಧಾಪುರ ಮಂಡಲದ ಅಂಬಾಗಿರಿ ವಲಯದ ವಿಜಯಲಕ್ಷ್ಮಿ ಅವರು ಮಾಸದ ಮಾತೆಯಾಗಿ […]

Continue Reading

ಸಾವಿರದ ಗುರಿ ಹೊತ್ತ ಮಾಸದ ಮಾತೆ: ಲಕ್ಷ್ಮೀ ಪ್ರಕಾಶ್ ಇಳಂತಿಲ

ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ಮಹತ್ವ ಪೂರ್ಣ ಕಲ್ಪನೆಯ ಸಾಕ್ಷಾತ್ಕಾರವೇ ಮಾತೃತ್ವಮ್ ಯೋಜನೆಯ ಮಾಸದ ಮಾತೆ. ಈಗಾಗಲೇ ಮಾಸದ ಮಾತೆಯರಾಗಿ ಸ್ವ ಇಚ್ಛೆಯಿಂದ ಮುಂದೆ ಬಂದು ತಮ್ಮ ಗುರಿ ತಲುಪಿದ ಮಾತೆಯರಲ್ಲಿ ಮಂಗಳೂರು ನಗರದ ಪ್ರಸ್ತುತ ಕೊಂಚಾಡಿಯಲ್ಲಿ ವಾಸವಿರುವ, ಮಾತೃತ್ವಮ್ ಮಂಗಳೂರು ಸಮಿತಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಲಕ್ಷ್ಮೀ ಪ್ರಕಾಶ್ ಇಳಂತಿಲ ಮೊದಲಿಗರು. ಲಕ್ಷ್ಮೀ ಪ್ರಕಾಶ್ ಅವರು ವಿಟ್ಲ ನೂಜಿ ನಿವಾಸಿಗಳಾದ ಕೆ. ರಾಮಚಂದ್ರ ಭಟ್ ಮತ್ತು ಸರಸ್ವತಿ ಭಟ್ ಅವರ ಪುತ್ರಿ. ಬಿ.ಕಾಂ.ಪದವೀಧರೆಯಾಗಿರುವ ಇವರು ಹೊಸದಿಗಂತ ಪತ್ರಿಕೆಯ ಸ್ಥಾನೀಯ […]

Continue Reading