ಶ್ರೀ ಮಠದ ಸೇವೆ ಗೋಸೇವೆ ತಾಯ್ತಂದೆಯರ ಬಳುವಳಿ: ಈಶ್ವರೀ ರಾಮಕೃಷ್ಣ
ಮಾಣಿ ಮಠದ ಶ್ರೀರಾಮದೇವರ ಅರ್ಚಕರಾಗಿ ಸುಮಾರು ೨೪ ವರ್ಷಗಳ ಕಾಲ ಸೇವೆ ಸಲ್ಲಿಸಿ ಪೂಜ್ಯ ಗುರುಗಳಾದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರಿಂದ ‘ಪ್ರಾಮಾಣಿಕ ಸೇವೆಗಾಗಿ ಪುರಸ್ಕೃತಗೊಂಡ ಪಂಜಿಗುಡ್ಡೆ ನಾರಾಯಣ ಭಟ್ಟರ ಪುತ್ರಿಯಾಗಿರುವ ಕುರಿಯದ ಈಶ್ವರೀ ರಾಮಕೃಷ್ಣ ಅವರಿಗೆ ಗುರುಸೇವೆ, ಗೋಸೇವೆ ತಾಯ್ತಂದೆಯರು ತೋರಿದ ಹಾದಿ. ತಾಯಿ ಕಾವೇರಿ ಅವರು ಸಹಾ ಗೋಸಾಕಣಿಗೆಯಲ್ಲಿ ಶ್ರೀ ಸಂಸ್ಥಾನದವರಿಂದ ಸನ್ಮಾನಿಸಲ್ಪಟ್ಟವರು ಎಂಬುದು ಇವರ ಹೆಮ್ಮೆ. “ನನ್ನ ಬಾಲ್ಯವೇ ಮಾಣಿಮಠದಲ್ಲಿ. ಅರ್ಚಕರಾದ ತಂದೆಯ ಕಾರ್ಯಕ್ಕೆ ನೆರವಾಗುವ ತಾಯಿಯ ಜೊತೆಯಲ್ಲಿ ನಾವು ಸಹಾ […]
Continue Reading