ಗುಂಪೆ ವಲಯದ ಸಪ್ಟಂಬರ್ ತಿಂಗಳ ಸಭೆ

ಧರ್ಮತ್ತಡ್ಕ: ಮುಳ್ಳೇರಿಯ ಮಂಡಲಾಂತರ್ಗತ ಗುಂಪೆ ವಲಯದ ಸಪ್ಟಂಬರ್ ತಿಂಗಳ ಸಭೆಯು ಸೆ.3ರಂದು ವಲಯ ಕಛೇರಿಯಲ್ಲಿ ನಡೆಯಿತು. ವಲಯ ಅಧ್ಯಕ್ಷ ಕುಮಾರ ಸುಬ್ರಹ್ಮಣ್ಯ ಕೊಂದಲಕಾಡು ಅಧ್ಯಕ್ಷತೆಯಲ್ಲಿ ವಹಿಸಿದ್ದರು. ವಲಯ ಕಾರ್ಯದರ್ಶಿ ಕೇಶವ ಪ್ರಸಾದ ಎಡಕಾನ ಗತಸಭೆಯ ವರದಿಯನ್ನು ನೀಡಿದರು. ಮುಳ್ಳೇರಿಯ ಮಂಡಲದ ಶಿಷ್ಯ ಮಾಧ್ಯಮ ಪ್ರಧಾನ ಮಹೇಶ್ ಕೃಷ್ಣ ತೇಜಸ್ವಿ ಮಾಹಿತಿಗಳನ್ನು ನೀಡಿದರು. ಸಪ್ಟಂಬರ್ 22 ರಿಂದ ಅಕ್ಟೋಬರ್ 4 ರವರೆಗೆ ಸಾಗರದ ರಾಘವೇಶ್ವರ ಭವನದಲ್ಲಿ ಜರಗುವ ನವರಾತ್ರ ನಮಸ್ಯ ಕಾರ್ಯಕ್ರಮದ ವಿವರವನ್ನು ಸಭೆಯಲ್ಲಿ ನೀಡಲಾಯಿತು ಮತ್ತು ಆಮಂತ್ರಣ […]

Continue Reading

ಸೆಪ್ಟೆಂಬರ್ – ೦೭- ಹುಣ್ಣಿಮೆ – ಭಾನುವಾರ

ಕಾರ್ಯಕ್ರಮದ ವಿವರ ಭಿಕ್ಷಾಸೇವೆ – ಮಂಜುನಾಥ ಸುವರ್ಣಗದ್ದೆ ಮೊಕ್ಕಾಂ – ಸೇವಾಸೌಧ, ಅಶೋಕೆ ೮.೧೫ ಶ್ರೀಪೂಜೆ ೧೨.೧೦ ಪೀಠಕ್ಕೆ, ಭಿಕ್ಷಾಂಗ ಪಾದುಕಾಪೂಜೆ ಮಂಗಳಾರತಿ ಆಶೀರ್ವಾದ ಸವಾರಿಯ ವಾಹನ ಚಾಲಕರಿಗೆ ಆಶೀರ್ವಾದ ೧೨.೩೦ ಸೀಮೋಲ್ಲಂಘನ ೧.೪೫ ಮಲ್ಲಿಕಾರ್ಜುನ ದೇವರದರ್ಶನ ೨.೦೦ ಸ್ವಾಗತ ಸಭೆ ಶತಕಂಠ ಗಾಯನ. ಸಂಗೀತ ಕಾರ್ಯಕ್ರಮ ದೇಣಿಗೆ ಸಮರ್ಪಣೆ ಸಾಮೂಹಿಕ ಫಲಸಮರ್ಪಣೆ ಸ್ವಾಗತ ಪ್ರಸ್ತಾವನೆ ವರದಿ ವಾಚನ ಆಶೀರ್ವನ ಮಂತ್ರಾಕ್ಷತೆ ೬.೪೦ ಶ್ರೀಪೂಜೆ

Continue Reading

ಮಹಿಳೋದಯಕ್ಕೆ ಶ್ರೀರಾಮಚಂದ್ರಾಪುರ ಮಠದ ತಂಡ ಭೇಟಿ

ಬದಿಯಡ್ಕ: ಮುಳ್ಳೇರಿಯಾ ಮಂಡಲದ ಬದಿಯಡ್ಕದಲ್ಲಿ ಕಾರ್ಯಾಚರಿಸುತ್ತಿರುವ ಮಹಿಳೋದಯ ಸಂಸ್ಥೆಗೆ ಶ್ರೀ ಮಠದ ತಂಡ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿತು. ಶ್ರೀರಾಮಚಂದ್ರಾಪುರ ಮಠದ ಪ್ರಶಾಸನಾಧಿಕಾರಿ ಸಂತೋಷ ಹೆಗಡೆ, ವಿತ್ತಾಧ್ಯಕ್ಷ ಗಣೇಶ ಜೆಡ್ಡಿನಮನೆ, ಸುಶಾಸನ ಖಂಡದ ಶ್ರೀಸಂಯೋಜಕ ಪ್ರವೀಣ ಭೀಮನಕೋಣೆ ಭೇಟಿ ನೀಡಿದರು. ಸಂಸ್ಥೆಯ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಉಪಾಧ್ಯಕ್ಷೆ ಕನಕವಲ್ಲಿ ಬಡಗಮೂಲೆ, ಕಾರ್ಯದರ್ಶಿ ಕಿರಣಾ ಮೂರ್ತಿ ಏತಡ್ಕ, ಜತೆ ಕಾರ್ಯದರ್ಶಿ ಕುಸುಮಾ ಪೆರ್ಮುಖ, ಲೆಕ್ಕ ಪರಿಶೋಧಕಿ ಗಾಯತ್ರಿ, ಸ್ಮಿತಾ ಸರಳಿ, ಸಿಬ್ಬಂದಿ ಶಾಂತಿ, ಜಯಪ್ರಕಾಶ ಪಜಿಲ ಜೊತೆಗಿದ್ದರು.  

Continue Reading

ಸಮರಸಭೂಮಿಗೆ ಶ್ರೀಮಠದ ಪದಾಧಿಕಾರಿಗಳು ಭೇಟಿ

  ಮುಳ್ಳೇರಿಯಾ: ಚಂದ್ರಗಿರಿ ವಲಯದ ಸಮರಸಭೂಮಿಗೆ ಶ್ರೀಮಠದ ಪದಾಧಿಕಾರಿಗಳು ಭೇಟಿ ನೀಡಿ ನಿರ್ಮಾಣ ಹಂತದ ಕಟ್ಟಡ ಕಾಮಗಾರಿಯನ್ನು ವೀಕ್ಷಿಸಿ ಮಾಹಿತಿ ಪಡೆದುಕೊಂಡರು. ಶ್ರೀರಾಮಚಂದ್ರಾಪುರ ಮಠದ ಪ್ರಶಾಸನಾಧಿಕಾರಿ ಸಂತೋಷ ಹೆಗಡೆ, ವಿತ್ತಾಧ್ಯಕ್ಷ ಗಣೇಶ ಜೆಡ್ಡಿನಮನೆ, ಸುಶಾಸನ ಖಂಡದ ಶ್ರೀಸಂಯೋಜಕ ಪ್ರವೀಣ ಭೀಮನಕೋಣೆ ತಂಡ ಭೇಟಿಯಿತ್ತು ಸಮರಸ ಕಟ್ಟಡ ನಿರ್ಮಾಣ ಹಂತವನ್ನು – ವ್ಯವಸ್ಥೆಯನ್ನು ಕೂಲಂಕುಶವಾಗಿ ತಿಳಿದುಕೊಂಡರು. ವಾಸ್ತುತಜ್ಞ ಬೆಳ್ಳಿಗೆ ನಾರಾಯಣ ಭಟ್ಟರು ನಕ್ಷೆಯಲ್ಲಿನ ವ್ಯವಸ್ಥೆ, ಗುರುನಿವಾಸದ ವ್ಯವಸ್ಥೆ ಬಗ್ಗೆಯೂ ಸಮಗ್ರ ಮಾಹಿತಿ ನೀಡಿದರು. ಟ್ರಸ್ಟ್ ಕಾರ್ಯದರ್ಶಿ ರಾಜಗೋಪಾಲ ಕೈಪ್ಪಂಗಳ […]

Continue Reading

ನೂತನ ಸಭಾಭವನ ‘ಹವ್ಯಗಂಧ’ದ ನಿರ್ಮಾಣ ಸ್ಥಳಕ್ಕೆ ಧರ್ಮಚಕ್ರ ಟ್ರಸ್ಟ್ ನ ಕೇಂದ್ರ ಪದಾಧಿಕಾರಿಗಳ ಭೇಟಿ

ಕಾಯರಕಟ್ಟೆ: ಬಾಯಾರು ವಲಯದ ಕಾಯರಕಟ್ಟೆಯಲ್ಲಿ ನೂತನ ಸಭಾಭವನ ಹವ್ಯಗಂಧ ನಿರ್ಮಾಣಕ್ಕೆ ಮುಂದಾಗಿರುವ ಸ್ಥಳದ ನೆಲವನ್ನು ಸಮತಟ್ಟುಮಾಡಲು ಭೂಖನನ ಕಾರ್ಯ ಪ್ರಾರಂಭಿಸಲಾಗಿದೆ. ಧರ್ಮಚಕ್ರ ಟ್ರಸ್ಟ್ ನ ಕೇಂದ್ರ ಪದಾಧಿಕಾರಿಗಳಾದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ವಿತ್ತಾಧ್ಯಕ್ಷ ಗಣೇಶ ಜೆಡ್ಡಿನಮನೆ, ಸುಶಾಸನಖಂಡದ ಶ್ರೀಸಂಯೋಜಕ ಪ್ರವೀಣ ಭೀಮನಕೋಣೆ ಹವ್ಯಗಂಧ ನಿವೇಶನಕ್ಕೆ ಭೇಟಿ ಕೊಟ್ಟು ಕೆಲಸದ ಮಾಹಿತಿಗಳನ್ನು ಸಂಗ್ರಹಿಸಿ, ಸಲಹೆ ಸೂಚನೆಗಳನ್ನಿತ್ತರು. ಸ್ಥಾನೀಯ ಸಮಿತಿಯ ಪದಾಧಿಕಾರಿಗಳು ಸ್ವಾಗತಿಸಿದರು.

Continue Reading

ಎಡನೀರು ಮಠಕ್ಕೆ ಶ್ರೀರಾಮಚಂದ್ರಾಪುರ ಮಠದ ನಿಯೋಗ

ಕಾಸರಗೋಡು: ಜಗದ್ಗುರು ಶ್ರೀಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠಕ್ಕೆ ಶ್ರೀರಾಮಚಂದ್ರಾಪುರ ಮಠದ ನಿಯೋಗ ತೆರಳಿ ಪರಮಪೂಜ್ಯರ ಆಶೀರ್ವಾದ ಪಡೆದುಕೊಂಡಿತು. ವಿಶ್ವಾವಸು ಸಂವತ್ಸರ ಚಾತುರ್ಮಾಸ್ಯ ವ್ರತದೀಕ್ಷೆಯಲ್ಲಿರುವ ಜಗದ್ಗುರು ಶ್ರೀಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳವರ ದರ್ಶನವನ್ನು ಪಡೆದ ಶ್ರೀರಾಮಚಂದ್ರಾಪುರ ಮಠದ ನಿಯೋಗ. ಮಠದ ನಿಯೋಗದಲ್ಲಿ ಡಾ. ವೈ ವಿ. ಕೃಷ್ಣ ಮೂರ್ತಿ, ಕೆ. ಎನ್. ಭಟ್, ನವನೀತ ಪ್ರಿಯ, ಬಳ್ಳಮೂಲೆ ಗೋವಿಂದ ಭಟ್, ಶಾಮಪ್ರಸಾದ್ ಮತ್ತಿತರರು ತೆರಳಿದ್ದರು.

Continue Reading

ಶಕಟಪುರದ ಶ್ರೀ ವಿದ್ಯಾ ಪೀಠಕ್ಕೆ ಶ್ರೀರಾಮಚಂದ್ರಾಪುರ ಮಠದ ನಿಯೋಗ

ಕೊಪ್ಪ: ಶ್ರೀ ಕ್ಷೇತ್ರ ಶಕಟಪುರದ ಶ್ರೀ ವಿದ್ಯಾ ಪೀಠಕ್ಕೆ ಶ್ರೀರಾಮಚಂದ್ರಾಪುರ ಮಠದ ನಿಯೋಗ ತೆರಳಿ ಪರಮಪೂಜ್ಯರ ಆಶೀರ್ವಾದ ಪಡೆದುಕೊಂಡಿತು. ವಿಶ್ವಾವಸು ಸಂವತ್ಸರ ಚಾತುರ್ಮಾಸ್ಯ ವ್ರತದೀಕ್ಷೆಯಲ್ಲಿರುವ ಶ್ರೀಕ್ಷೇತ್ರ ಶಕಟಪುರದ ಶ್ರೀವಿದ್ಯಾಪೀಠಾಧೀಶ್ವರರಾದ ಶ್ರೀಜಗದ್ಗುರು ಬದರೀ ಶಂಕರಾಚಾರ್ಯ ಶ್ರೀವಿದ್ಯಾಭಿನವ ಶ್ರೀಶ್ರೀಕೃಷ್ಣಾನಂದತೀರ್ಥ ಮಹಾಸ್ವಾಮಿಗಳವರ ದರ್ಶನ ಹಾಗೂ “ನವರಾತ್ರ ನಮಸ್ಯಾ” ಆಮಂತ್ರಣ ಪ್ರತಿಯನ್ನು ಸಮರ್ಪಿಸಿದ ಶ್ರೀರಾಮಚಂದ್ರಾಪುರ ಮಠದ ನಿಯೋಗ. ಮಠದ ನಿಯೋಗದಲ್ಲಿ ಲೋಕಸಂಪರ್ಕ ತಂಡದ ರಾಮಚಂದ್ರ ಭಟ್ ಕೆಕ್ಕಾರು, ನಾರಾಯಣ ಭಾಗವತ್, ಸೂರ್ಯ ನಾರಾಯಣ, ಶಂಕರ ನಾರಾಯಣ (ಹಿರೇ ಗಂಗೆ) ತೆರಳಿದ್ದರು.    

Continue Reading

ಕಾಂಚಿ ಕಾಮಕೋಟಿಗೆ ಶ್ರೀರಾಮಚಂದ್ರಾಪುರ ಮಠದ ನಿಯೋಗ

ಕಾಂಚಿಪುರಂ: ಶ್ರೀ ಕಾಂಚಿ ಕಾಮಕೋಟಿ ಪೀಠಕ್ಕೆ ಶ್ರೀರಾಮಚಂದ್ರಾಪುರ ಮಠದ ನಿಯೋಗ ತೆರಳಿ ಪರಮಪೂಜ್ಯರ ಆಶೀರ್ವಾದ ಪಡೆದುಕೊಂಡಿತು. ವಿಶ್ವಾವಸು ಸಂವತ್ಸರ ಚಾತುರ್ಮಾಸ್ಯ ವ್ರತದೀಕ್ಷೆಯಲ್ಲಿರುವ ಶ್ರೀಮಠ ಸಂಸ್ಥಾನ ಕಾಂಚಿ ಕಾಮಕೋಟಿ ಪೀಠಾಧೀಶ್ವರರಾದ ಜಗದ್ಗುರು ಶ್ರೀಶಂಕರಾಚಾರ್ಯ ಶ್ರೀಶ್ರೀಶಂಕರ ವಿಜಯೇಂದ್ರ ಸರಸ್ವತೀ ಮಹಾಸ್ವಾಮಿಗಳು ಹಾಗೂ ಜಗದ್ಗುರು ಶ್ರೀಶಂಕರಾಚಾರ್ಯ ಶ್ರೀಶ್ರೀಸತ್ಯ ಚಂದ್ರಶೇಖರೇಂದ್ರ ಸರಸ್ವತೀ ಮಹಾಸ್ವಾಮಿಗಳ ಆಶೀರ್ವಾದ ಪಡೆದುಕೊಂಡಿತು. ಮಠದ ನಿಯೋಗದಲ್ಲಿ ಲೋಕಸಂಪರ್ಕ ತಂಡದ ರಾಮಚಂದ್ರ ಭಟ್ ಕೆಕ್ಕಾರು, ನಾರಾಯಣ ಭಾಗವತ್, ಸೂರ್ಯ ನಾರಾಯಣ, ಶಂಕರ ನಾರಾಯಣ (ಹಿರೇ ಗಂಗೆ) ತೆರಳಿದ್ದರು.    

Continue Reading

ಮಧೂರು ದೇವಸ್ಥಾನದಲ್ಲಿ ಶ್ರೀರಾಮಚಂದ್ರಾಪುರ ಮಠದ ಸೇವೆ – 108 ಕಾಯಿ ಗಣಪತಿ ಹೋಮ, ಮುಡಿ ಅಕ್ಕಿ ಅಪ್ಪ, ಶತರುದ್ರಾಭಿಷೇಕ ಸೇವೆ

ಕುಂಬಳೆ: ಸೀಮಾಕ್ಷೇತ್ರ ಮಧೂರು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಮಂಗಳವಾರ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ದಿವ್ಯ ಅನುಗ್ರಹದೊಂದಿಗೆ ಶ್ರೀಮಠದ ವತಿಯಿಂದ 108 ಕಾಯಿ ಗಣಪತಿ ಹೋಮ, ಮುಡಿ ಅಕ್ಕಿ ಅಪ್ಪಸೇವೆ ಹಾಗೂ ಶತರುದ್ರಾಭಿಷೇಕ ಸೇವೆಗಳು ಜರಗಿತು. ಗೌರಿಹಬ್ಬದ ಪ್ರಯುಕ್ತ ಮಾತೆಯರು ಕುಂಕುಮಾರ್ಚನೆ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಗೌರೀ ಸಂಪ್ರೀತಿಗಾಗಿ ಪ್ರಾರ್ಥಿಸಲಾಯಿತು. ರುದ್ರಪಾರಾಯಣ, ಗಣಪತಿ ಅಥರ್ವಶೀರ್ಷ ಪಾರಾಯಣ, ಶ್ರೀಗಣೇಶ ಪಂಚರತ್ನ ಸ್ತೋತ್ರ ಹಾಗೂ ಶಿವಪಂಚಾಕ್ಷರೀ ಸ್ತೋತ್ರ ಪಠಣ ನಡೆಯಿತು. ವಿವಿಧ ವಲಯಗಳಿಂದ 100ಕ್ಕೂ ಹೆಚ್ಚುಮಂದಿ ರುದ್ರಪಾಠಕರು ಶತರುದ್ರಾಭಿಷೇಕದ […]

Continue Reading

ಸಾಗರ ನವರಾತ್ರ ನಮಸ್ಯಾ ಏಕಿಷ್ಟು ಸಂಭ್ರಮ…?

ನಮ್ಮ ಶ್ರೀಮಠಕ್ಕೆ ಕಾರ್ಯಕ್ರಮ ಎನ್ನುವುದು ಹೊಸತಲ್ಲ, ಜೊತೆಗೆ ನವರಾತ್ರಿಯೂ ಹೊಸತಲ್ಲ. ಅದೆಷ್ಟೋ ಧಾರ್ಮಿಕ ಕಾರ್ಯಕ್ರಮ ಸೇರಿದಂತೆ ವಿಭಿನ್ನವಾದ ಮತ್ತು ವಿಶಿಷ್ಟವಾದ ಕಾರ್ಯಕ್ರಮಗಳ ಆಯೋಜನೆ ಶ್ರೀಸಂಸ್ಥಾನದವರ ಮಾರ್ಗದರ್ಶನದಲ್ಲಿ ನಡೆದಿದೆ. ಒಂದೇ ವೇದಿಕೆಯಲ್ಲಿ ಸಹಸ್ರ ಸಂಖ್ಯೆಗೂ ಮೀರಿದ ಯತಿ ಸಮಾವೇಶದಿಂದ ಮೊದಲ್ಗೊಂಡು ನೂರು ಜನ ಗಣ್ಯರು ಪುಸ್ತಕವೊಂದರ ಲೋಕಾರ್ಪಣೆಯ ವೇದಿಕೆಯಲ್ಲಿ ಸೇರಿದ ವಿಶೇಷ ಕಾರ್ಯಕ್ರಮದವರೆಗೆ… ಹೀಗಿದ್ದೂ ಸಾಗರದ ನವರಾತ್ರ ನಮಸ್ಯಾ ಏಕೋ ಹೊಸತನದ ಕಾರ್ಯಕ್ರಮ ಎನ್ನುವ ಭಾವ ಜತಗೆ ಹರುಷ ಹಾಗೂ ಸಂಭ್ರಮ ಮನೆ ಮಾಡಿರುವುದು ಎದ್ದು ಕಾಣುತ್ತಿದೆ. ಇದಕ್ಕೆ […]

Continue Reading

” ಸ್ವಯಂವರ ” ಕಾದಂಬರಿ ಲೋಕಾರ್ಪಣೆ

  ಗೋಕರ್ಣ : ಗೋಕರ್ಣದ ಅಶೋಕೆಯಲ್ಲಿ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಕರಕಮಲಗಳಿಂದ ಕಾಸರಗೋಡಿನ ಶ್ರೀಮುಖ ಮಾತೃತ್ವಮ್ ಲೇಖಕಿ‌ ಪ್ರಸನ್ನಾ ವಿ ಚೆಕ್ಕೆಮನೆ ಅವರ ಹವ್ಯಕ ಕಾದಂಬರಿ ” ಸ್ವಯಂವರ ” ಅಕ್ಟೋಬರ್ 1 ರಂದು ಲೋಕಾರ್ಪಣೆಗೊಂಡಿತು.   ನವರಾತ್ರಿಯ ಆರನೇ ದಿನ ಬಿಡುಗಡೆಯಾದ ಈ ಕೃತಿಯು ಲೇಖಕಿಯ ಆರನೆಯ ಕೃತಿಯಾಗಿದೆ. ಚಿಕ್ಕಮಗಳೂರಿನ ಅಪರಂಜಿ ಪ್ರಕಾಶನದ ಮೂಲಕ ಪ್ರಕಟವಾದ ಈ ಕಾದಂಬರಿಗೆ ಒಪ್ಪಣ್ಣ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾದ ಮಹೇಶ್ ಎಳ್ಯಡ್ಕ ಮುನ್ನುಡಿ ಬರೆದಿದ್ದಾರೆ.

Continue Reading

ಮಾತೃತ್ವಮ್ ‘ ನ ಮಂಗಳೂರು ನಗರಸಮಿತಿಯ ಸಭೆ

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ‘ ಮಾತೃತ್ವಮ್ ‘ ನ ಮಂಗಳೂರು ನಗರಸಮಿತಿಯ ಸಭೆಯು 18 – 07 – 2022 ರಂದು ಅಂತರ್ಜಾಲದ ಗೂಗಲ್ ಮೀಟ್ ಮೂಲಕ ನೆರವೇರಿತು. ಗುರುವಂದನೆ ಗೋಸ್ತುತಿಯೊಂದಿಗೆ ಆರಂಭವಾದ ಸಭೆಯಲ್ಲಿ ಮಂಗಳೂರು ನಗರಸಮಿತಿ ಅಧ್ಯಕ್ಷೆ ಜ್ಯೋತಿಲಕ್ಷ್ಮಿ ಅಮೈ ಪ್ರಾಸ್ತಾವಿಕ ನುಡಿಗಳನ್ನಾಡಿ ಮಂಗಳೂರು ನಗರದ ಮಾತೃತ್ವಮ್ ಸಮಿತಿಯ ಕಾರ್ಯವೈಖರಿ ಬಗ್ಗೆ ಸಭೆಯಲ್ಲಿ ಸವಿಸ್ತಾರವಾಗಿ ತಿಳಿಸಿದರು. ಕೇಂದ್ರ ಸಮಿತಿ ಅಧ್ಯಕ್ಷರಾದ ಶ್ರೀಮತಿ ಈಶ್ವರಿ ಬೇರ್ಕಡವು ” ಮಂಗಳೂರು ನಗರಸಮಿತಿಯ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ […]

Continue Reading

” ಶ್ರೀಮಠದ ಯೋಜನೆಗಳನ್ನು ಸಮರ್ಥವಾಗಿ ಕಾರ್ಯರೂಪಕ್ಕೆ ತರಲು ಮಾತೆಯರು ಸಂಘಟಿತರಾಗಬೇಕು ” : ಬಾಲಸುಬ್ರಹ್ಮಣ್ಯ ಭಟ್, ಸರ್ಪಮಲೆ

    ” ಶ್ರೀಮಠದ ವಿವಿಧ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ವಲಯದ ಪ್ರತೀ ಮನೆಯ ಮಾತೆಯರೂ ಸಂಘಟಿತರಾಗಬೇಕು.‌ ಮುಷ್ಟಿ ಭಿಕ್ಷಾ ಯೋಜನೆ, ಕುಂಕುಮಾರ್ಚನೆ , ಮಾತೃತ್ವಮ್, ಶ್ರೀರಾಮಭುಜಂಗ ಪ್ರಯಾತ ಸ್ತೋತ್ರ ಪಠಣವೇ ಮೊದಲಾದ ಕಾರ್ಯಗಳನ್ನು ಸಮರ್ಪಕವಾಗಿ ಮುನ್ನಡೆಸುವುದೇ ಮಾತೃ ವಿಭಾಗದ ಮುಖ್ಯ ಉದ್ದೇಶ ” ಎಂದು ಮುಳ್ಳೇರಿಯ ಮಂಡಲ ಅಧ್ಯಕ್ಷರಾದ ಸರ್ಪಮಲೆ ಬಾಲಸುಬ್ರಹ್ಮಣ್ಯ ಭಟ್ ಆಶಯ ವ್ಯಕ್ತಪಡಿಸಿದರು.   ಮುಳ್ಳೇರಿಯ ಮಂಡಲ ಮಾತೃವಿಭಾಗ ಹಾಗೂ ಮಾತೃತ್ವಮ್ ನ ಸಹಯೋಗದಲ್ಲಿ ಜುಲೈ ತಿಂಗಳ ವಿವಿಧ ದಿನಗಳಲ್ಲಿ ‌ನಡೆದ ಮುಳ್ಳೇರಿಯ […]

Continue Reading

ಮಾತೃತ್ವಮ್ ಕಾಸರಗೋಡು ನಗರಸಮಿತಿ ಸಭೆ

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ಮಹತ್ವಾಕಾಂಕ್ಷೆಯ ಯೋಜನೆಯಾದ ‘ ಮಾತೃತ್ವಮ್ ‘ ನ ಕಾಸರಗೋಡು ನಗರಸಮಿತಿಯ ಸಭೆಯು ಜುಲೈ ೨ ರಂದು ಮೊತ್ತಮೊದಲಾಗಿ ಅಂತರ್ಜಾಲದ ಗೂಗಲ್ ಮೀಟ್ ಮೂಲಕ ನೆರವೇರಿತು. ಗುರುವಂದನೆ ಗೋಸ್ತುತಿಯೊಂದಿಗೆ ಆರಂಭವಾದ ಸಭೆಯಲ್ಲಿ ಕಾಸರಗೋಡು ನಗರದ ಅಧ್ಯಕ್ಷೆ ಕುಸುಮ ಪೆರ್ಮುಖ ಇವರು ಪ್ರಾಸ್ತಾವಿಕ ನುಡಿಗಳನ್ನಾಡಿ ಕಾಸರಗೋಡು ನಗರದ ಮಾತೃತ್ವಮ್ ಸಮಿತಿಯ ಕಾರ್ಯವೈಖರಿ ಬಗ್ಗೆ ಸಭೆಯಲ್ಲಿ ಸವಿಸ್ತಾರವಾಗಿ ತಿಳಿಸಿದರು. ಕೇಂದ್ರ ಸಮಿತಿ ಅಧ್ಯಕ್ಷರಾದ ಶ್ರೀಮತಿ ಈಶ್ವರಿ ಬೇರ್ಕಡವು ” ಕಾಸರಗೋಡು ನಗರಸಮಿತಿಯ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಪ್ರಸ್ತುತ […]

Continue Reading

ಶ್ರೀ ಅಖಿಲ ಹವ್ಯಕ ಮಹಾಸಭೆಯ  79 ನೇ ವರ್ಷದ ಹವ್ಯಕ ಸಂಸ್ಥಾಪನೋತ್ಸವ

ಗಡ್ಡಬಿಟ್ಟವರು ಮಾತ್ರ ಋಷಿಗಳಲ್ಲ, ಸಾಧನೆ ಮಾಡಿ ಇಂದು ಇಲ್ಲಿ ಪುರಸ್ಕೃತರಾದ ಎಲ್ಲರೂ ಋಷಿ ಸಮಾನರೇ ಆಗಿದ್ದಾರೆ. ಆದರೆ ಸಾಧನೆಯ ವಿಧಾನಗಳು ಬೇರೆ ಬೇರೆ ಎಂದು  ಡಾ.ಜಿ.ಎಲ್ ಹೆಗಡೆ ಹೇಳಿದರು. ಶ್ರೀ ಅಖಿಲ ಹವ್ಯಕ ಮಹಾಸಭೆಯ  79 ನೇ ವರ್ಷದ ಹವ್ಯಕ ಸಂಸ್ಥಾಪನೋತ್ಸವ ಹಾಗೂ  ಹವ್ಯಕ ವಿಶೇಷ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಭ್ಯಾಗತರಾಗಿ ಮಾತನಾಡಿದ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಡಾ.ಜಿ.ಎಲ್ ಹೆಗಡೆ, ನಾವು ಭವ್ಯವಾದ ಸಂಸ್ಕೃತಿ ಹೊಂದಿದ್ದೇವೆ. ದಿವ್ಯವಾದ ಇತಿಹಾಸ ಹೊಂದಿದ್ದೇವೆ. ಆದರೆ ನಮ್ಮ ಪಠ್ಯಗಳಲ್ಲಿ ರಾಬರ್ಟ್ ಕ್ಲೈವ್ ಹಾಗೂ ಅವನ ಸಂಸಾರದ ಕುರಿತು ಓದುವಂತಹ ಸ್ಥಿತಿ […]

Continue Reading

ಜೂನ್‍ನಿಂದ ವಿವಿವಿಯಲ್ಲಿ ಪರಂಪರಾ ಗುರುಕುಲ ಆರಂಭ: ರಾಘವೇಶ್ವರ ಶ್ರೀ

ಮೆಕಾಲೆ ಪ್ರಣೀತವಲ್ಲದ, ಶುದ್ಧ ಭಾರತೀಯ ಪಾರಂಪರಿಕ ಶಿಕ್ಷಣ ನೀಡುವ ಪರಂಪರಾ ಗುರುಕುಲ ಈ ವರ್ಷದ ಜೂನ್‍ನಿಂದ ಗೋಕರ್ಣ ಸಮೀಪದ ಅಶೋಕೆಯಲ್ಲಿ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವತಿಯಿಂದ ಆರಂಭವಾಗಲಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಪ್ರಕಟಿಸಿದರು. ಜಾಲ್ಸೂರು ಸಮೀಪದ ಮುರೂರು ಮೀನಗದ್ದೆಯಲ್ಲಿ ನಡೆದ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಸಂವಾದ ಕಾರ್ಯದಲ್ಲಿ ಪರಮಪೂಜ್ಯರು ಆಶೀರ್ವಚನ ನೀಡಿದರು. ದೇಶದ ಶಿಕ್ಷಣ ವ್ಯವಸ್ಥೆಗಿಂತ ಭಿನ್ನವಾದ ಹೆಜ್ಜೆ ಇದಾಗಿರುತ್ತದೆ. ಮೆಕಾಲೆ ಶಿಕ್ಷಣ ಜಾರಿಗೆ ಬರುವ ಮುನ್ನ ಇದ್ದ ಶಿಕ್ಷಣವನ್ನು ಮರಳಿ ತರುವ […]

Continue Reading

ಕಪ್ಪು ಚಿನ್ನದಿಂದ ರೈತರಿಗೆ ಆರ್ಥಿಕ ಭದ್ರತೆ: ಕೃಷಿವಿಜ್ಞಾನಿ ಸಲಹೆ

ಗೋಕರ್ಣ: ಕಪ್ಪು ಚಿನ್ನ ಎಂದೇ ಪರಿಗಣಿಸಲಾಗುವ ಕಾಳುಮೆಣಸು ಕೃಷಿಗೆ ಆದ್ಯತೆ ನೀಡುವ ಮೂಲಕ ರೈತರು ಆರ್ಥಿಕ ಭದ್ರತೆ ಕಂಡುಕೊಳ್ಳಲು ಸಾಧ್ಯ ಎಂದು ಕಲ್ಲಿಕೋಟೆಯ ಭಾರತೀಯ ಸಾಂಬಾರ ಬೆಳೆಗಳ ಸಂಶೋಧನಾ ಸಂಸ್ಥೆಯ ನಿವೃತ್ತ ಪ್ರಧಾನ ವಿಜ್ಞಾನಿ ಡಾ,ಎಂ.ಎನ್.ಆರ್.ವೇಣುಪಾಲ್ ಅಭಿಪ್ರಾಯಪಟ್ಟರು. ಶ್ರೀ ರಾಮಚಂದ್ರಾಪುರ ಮಠದ ಗೋಫಲ ಟ್ರಸ್ಟ್, ಶಿರಸಿಯ ತೋಟಗಾರಿಕಾ ಮಹಾವಿದ್ಯಾಲಯ, ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಹವ್ಯಕ ಮಹಾಮಂಡಲ, ಕಾಮದುಘಾ ಟ್ರಸ್ಟ್ ಹಾಗೂ ಭಾರತೀಯ ಗೋ ಪರಿವಾರ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ‘ಕಾಳುಮೆಣಸು […]

Continue Reading

ತಮ್ಮತನ ಕಾಯ್ದುಕೊಂಡು ಸಮಗ್ರ ಹಿಂದೂ ಸಮಾಜಕ್ಕೆ ಕೊಡುಗೆ ನೀಡಿ: ರಾಘವೇಶ್ವರ ಶ್ರೀ ಹಿತವಚನ

ಪುತ್ತೂರು: ಹಿಂದೂ ಸಮಾಜದ ಪ್ರತಿಯೊಂದು ಸಮುದಾಯಗಳು ತಮ್ಮ ವೈಶಿಷ್ಯವನ್ನು ಕಾಪಾಡಿಕೊಂಡು ಸಮಗ್ರ ಹಿಂದೂ ಸಮಾಜ ಬೆಳೆಯಲು ಕೊಡುಗೆ ನೀಡಬೇಕು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಸ್ವಾಮೀಜಿ ನುಡಿದರು. ಪುತ್ತೂರಿನ ಹವ್ಯಕ ಸಭಾಭವನ ಸಮರ್ಪಣಮ್ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಪರಮಪೂಜ್ಯರು, “ಸಮಾಜದ ಯಾವುದೇ ಸಮುದಾಯಗಳು ತಮ್ಮತನವನ್ನು ಮರೆತರೆ ಹಿಂದೂ ಸಮಾಜಕ್ಕೆ ಅಸ್ತಿತ್ವ ಇಲ್ಲ. ಆಯಾ ಸಮಾಜ ತನ್ನ ವೈಶಿಷ್ಟ್ಯಗಳನ್ನು, ನಡೆ, ನುಡಿ, ಆಚಾರ ವಿಚಾರಗಳನ್ನು ಕಾಪಾಡಿಕೊಂಡು ಬಂದರೆ ಮಾತ್ರ ಹಿಂದೂ ಸಮಾಜ ಎದ್ದು ನಿಲ್ಲಲು ಸಾಧ್ಯ. […]

Continue Reading

ಹವ್ಯಕ ಸಭಾಭವನ ಉದ್ಘಾಟನೆ

ಶ್ರೀ ಅಖಿಲ ಹವ್ಯಕ ಮಹಾಸಭೆಯಿಂದ ಪುತ್ತೂರಿನಲ್ಲಿ ನೂತನವಾಗಿ ನಿರ್ಮಿಸಿರುವ ‘ಹವ್ಯಕ ಸಭಾಭವನ’ ದ ಉದ್ಘಾಟನಾ ಕಾರ್ಯಕ್ರಮ ಜನವರಿ 2 ಭಾನುವಾರ 11.30 ಕ್ಕೆ ನಡೆಯಲಿದೆ. ಶ್ರೀರಾಮಚಂದ್ರಾಪುರಮಠದ ಗೋಕರ್ಣಮಂಡಲಾಧೀಶ್ವರ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯವಹಿಸಲಿದ್ದು, ಕೇಂದ್ರ ಮಾಜಿ ಸಚಿವರಾದ ಡಿ.ವಿ ಸದಾನಂದ ಗೌಡ ಸಭಾಭವನವನ್ನು ಉದ್ಘಾಟಿಸಲಿದ್ದಾರೆ. ಅಭ್ಯಾಗತರಾಗಿ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರಹೆಗಡೆ ಕಾಗೇರಿ, ಸಚಿವರಾದ ಎಸ್ ಅಂಗಾರ, ಸುನಿಲ್ ಕುಮಾರ್, ಸಂಸದ ಹಾಗು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ […]

Continue Reading

ಶಾಲೆಗಳು ಪ್ರತೀ ವಿದ್ಯಾರ್ಥಿಯ ಅಂತರಂಗವನ್ನು ನಿರ್ಮಾಣ ಮಾಡುತ್ತದೆ – ರಾಘವೇಶ್ವರಶ್ರೀ

ಧರ್ಮಪರ ಸರಕಾರಗಳು ಎಷ್ಟು ಮುಖ್ಯವೋ ಧರ್ಮಪರ ಶಿಕ್ಷಣ ಸಂಸ್ಥೆಗಳೂ ಅಷ್ಟೇ ಮುಖ್ಯ. ಧರ್ಮ-ಸಂಸ್ಕೃತಿ ಆಧಾರಿತ ಶಿಕ್ಷಣ ದೇಶಕ್ಕೆ ಅಗತ್ಯ.ಸರಕಾರಗಳು ರಸ್ತೆ ಸಹಿತ ಮೂಲಭೂತ ಸೌಕರ್ಯಗಳ ಕುರಿತಂತೆ ಬಹಿರಂಗ ಕಾರ್ಯಗಳನ್ನು ಮಾಡಿದರೆ ಶಾಲೆಗಳು ಪ್ರತೀ ವಿದ್ಯಾರ್ಥಿಯ ಅಂತರಂಗವನ್ನು ನಿರ್ಮಾಣ ಮಾಡುವ ಕೆಲಸವನ್ನು ಮಾಡುತ್ತಿವೆ ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಹೇಳಿದರು. ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಆಶ್ರಯದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ (ಸಿಬಿಎಸ್‌ಇ) ಇದರ ನೂತನ ಕಟ್ಟಡ ಉದ್ಘಾಟಿಸಿ ಆಶೀರ್ವಚನ ನೀಡಿದರು. […]

Continue Reading