ಸಚಿವ ಶಿವರಾಮ ಹೆಬ್ಬಾರ್ ಗೆ ಹವ್ಯಕ ಮಹಾಸಭೆಯಿಂದ ಸನ್ಮಾನ 

ರಾಜ್ಯ ಸರ್ಕಾರದ ನೂತನ ಮಂತ್ರಿಗಳಾಗಿ ಆಯ್ಕೆಯಾಗಿ, ಕಾರ್ಮಿಕ ಮತ್ತು ಸಕ್ಕರೆ ಖಾತೆಯ ಹೊಣೆಯೊಂದಿಗೆ ಸೇವೆಸಲ್ಲಿಸುತ್ತಿರುವ ಹೆಮ್ಮೆಯ ಹವ್ಯಕ ಶ್ರೀ ಶಿವರಾಮ ಹೆಬ್ಬಾರ್ ಅವರಿಗೆ ಹವ್ಯಕ ಸಮಾಜದ ಪ್ರಾತಿನಿಧಿಕ ಸಂಸ್ಥೆ ಶ್ರೀ ಅಖಿಲ ಹವ್ಯಕ ಮಹಾಸಭೆಯಿಂದ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿದ್ದು, 10.03.2020   ಮಂಗಳವಾರ ಸಂಜೆ 6.00  ಗಂಟೆಗೆ ಮಲ್ಲೇಶ್ವರದಲ್ಲಿರುವ ಶ್ರೀ ಅಖಿಲ ಹವ್ಯಕ ಮಹಾಸಭೆಯ ಪ್ರಾಂಗಣದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಚಿವ ಶ್ರೀ ಶಿವರಾಮ ಹೆಬ್ಬಾರ್ ಮಹಾಸಭೆಯ ಗೌರವವನ್ನು ಸ್ವೀಕರಿಸಲಿದ್ದು, ಮಹಾಸಭೆಯ ಅಧ್ಯಕ್ಷ ಡಾ.ಗಿರಿಧರ ಕಜೆ ಕಾರ್ಯಕ್ರಮದ ಅಧ್ಯಕ್ಷತೆ […]

Continue Reading

ವ್ಯಕ್ತಿಯ ಸಾಧನೆಗೆ ತಾಯಿಯ ಆಶೀರ್ವಾದದ ಬಲ ಬೇಕು: ಜಶೋದಾ ಬೆನ್ ಮೋದಿ

ಹೊಸನಗರ: ಜಗತ್ತಿಗೆ ಜ್ಞಾನದ ಬೆಳಕು ನೀಡಿದ ಶಂಕರಾಚಾರ್ಯರಿಗೆ ತಾಯಿಯ ಆಶೀರ್ವಾದ ಬಲ ವಿಶೇಷವಾಗಿತ್ತು. ಪ್ರತಿಯೊಬ್ಬರೂ ಇದನ್ನು ಗಮನಿಸಬೇಕಿದೆ, ಎಲ್ಲಿ ಆಧ್ಮಾತ್ಮಿಕ ಒಲವು ಇದೆಯೋ ಅಲ್ಲಿ ದೈವೀ ಬಲ ಇರಲಿದೆ ಎಂದು ಜಶೋದಾ ಬೆನ್ ಮೋದಿ ಹೇಳಿದರು. ರಾಮಚಂದ್ರಾಪುರಮಠದ ಮಹಾನಂದಿ ಗೋಲೋಕದ ಆವರಣದಲ್ಲಿರುವ ಗೋವರ್ಧನಗಿರಿಧಾರಿ ಗೋಪಾಲಕೃಷ್ಣ ದೇವಾಲಯದಲ್ಲಿ ಬುಧವಾರ ನಡೆದ ಕೋಟಿ ವಿಷ್ಣು ಸಹಸ್ರನಾಮ ಪಠಣ ಸಮರ್ಪಣೆ, ಸಹಸ್ರ ಛತ್ರ ಮೆರವಣಿಗೆ, ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಛತ್ರ ಸಮರ್ಪಣೆ, ಸೋಪಾನಮಾಲೆ ನಿರ್ಮಾಣಕ್ಕೆ ಶಿಲಾನ್ಯಾಸ, ಗೋ ಬಂಧಮುಕ್ತಿ, […]

Continue Reading

ನಿಷ್ಠೆ ಮತ್ತು ಜ್ಞಾನದ ಜತೆಗೆ ರಾಷ್ಟ್ರ ನಿರ್ಮಾಣ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಗುರಿ

ಮಂಗಳೂರು: ಸಮಸ್ತ ಭಾರತೀಯ ವಿದ್ಯೆ- ಕಲೆಗಳ ಸಂರಕ್ಷಣೆ- ಸಂವರ್ಧನೆ- ಸಂಶೋಧನೆ ಮತ್ತು ಸಂಯೋಜನೆಯ ಮೂಲಕ ದೇಶಭಕ್ತ, ಧರ್ಮನಿಷ್ಠ, ಸಂಸ್ಕೃತಿ ಪ್ರೇಮಿ, ವಿಶ್ವಹಿತೈಷಿ ಸತ್ಪ್ರಜೆಗಳ ನಿರ್ಮಾಣದ ಮಹದುದ್ದೇಶದಿಂದ ವಿಷ್ಣುಗುಪ್ತ ವಿಶ್ವವಿದ್ಯಾಪೀಠವನ್ನು ಸ್ಥಾಪಿಸಲಾಗುತ್ತಿದೆ. ಇದು ಇತರ ವಿಶ್ವವಿದ್ಯಾಲಯಗಳಂತಲ್ಲ ಎಂದು ಶ್ರೀರಾಮಚಂದ್ರಾಪುರ ಮಠದ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ದರ ಭಾರತೀ ಸ್ವಾಮೀಜಿ ಹೇಳಿದರು. ಮಂಗಳೂರಿನ ಪುರಭವನದಲ್ಲಿ ಭಾನುವಾರ ಆಯೋಜಿಸಲಾದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಕುರಿತ ಬೃಹತ್ ಸಂವಾದ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡುತ್ತ ಅವರು ಈ ವಿಷಯ ತಿಳಿಸಿದರು. ಸಾಮಾನ್ಯ ವಿಶ್ವವಿದ್ಯಾಲಯಗಳು ತಲೆಮಾರಿಗೆ […]

Continue Reading

“ನಾ ಗೋವಾದರೆ”…..!!!!

ಮಾನವಾ..ಮಾನವಾ.ಓ ಮಾನವಾ..! ನೀ ಆರಿಗಾದೆಯೋ ಎಲೆ ಹುಲು ಮಾನವಾ, ‘ಗೋಸಂತತಿ’ಯ ಉಳಿಸದೇ.. ನನ್ನ ಹತ್ಯೆಯಾ ಮಾಡಿ ಸಿಗುವ ಫಲವೇನು ಮಾನವಾ..|1| ಎಳ್ಳ ಪ್ರೀತಿಯ ನೀ ಇತ್ತರೇ ಎನಗೆ ಬೆಟ್ಟದಾ ಮಮತೆಯ ನಾ ಕೊಡುವೆ ನಿನಗೆ.. ಹಳಸಿ- ಪುಂಟಿಸಿದ ಹಿಂಡಿ ಯನಿತ್ತರೆ… ‘ಅಮೃತಧಾರೆ’ಯನೇ ನಾ ಸುರಿವೆ ನಿನಗೆ.. ಅದರೂ ನಿನ್ನ ನಾಲಿಗೆಯ ಕ್ಷಣ ಚಪಲಕೆ.. ಎನ್ನ ಹತ್ಯೆಯ ಮಾಡಿ ಸಿಗುವ ಫಲವೇನು ಓ ಮಾನವಾ.|2| ಕರೆದರೆ ಹಾಲಾಗಿ,ಹೆಪ್ಪಿಸಿದರೆ ಮೊಸರಾಗಿ.. ಮಥಿಸಿದರೆ ಮಜ್ಜಿಗೆಯೊಳಗೆ ಬೆಣ್ಣೆಯಾಗಿ.. ತುಸು ಕಾಯಿಸಿದರೆ ತುಪ್ಪವಾಗಿ ನಿನ್ನ […]

Continue Reading

ಗಾಯತ್ರಿ ಮಹೋತ್ಸವ

ವರವನ್ನು ಬೇಡುವಾಗ, ಆ ವರದಿಂದ ಪ್ರಾಪ್ತವಾಗುವುದನ್ನು ಧರಿಸಲು, ನಿರ್ವಹಿಸಲು ನಾವು ಶಕ್ತರೇ ಎಂಬುದನ್ನು ಮೊದಲು ಆಲೋಚಿಸಬೇಕು. ನಮ್ಮ ಯೋಗ್ಯತೆಗೆ ಮೀರಿದ್ದನ್ನು ಕೇಳಬಾರದು. ಯೋಗ್ಯತೆಯನ್ನು ಮೀರಿದ ವರವೂ ಶಾಪವಾಗುತ್ತದೆ ಎಂದು ಶತಾವಧಾನಿ ರಾ. ಗಣೇಶ್ ಹೇಳಿದರು. ಶ್ರೀ ಅಖಿಲ ಹವ್ಯಕ ಮಹಾಸಭೆಯಲ್ಲಿ ನಡೆದ “ಗಾಯತ್ರಿ ಮಹೋತ್ಸವ” ಕಾರ್ಯಕ್ರಮದಲ್ಲಿ,  ‘ಗಾಯತ್ರಿ ತತ್ವ’ ಎಂಬ ವಿಷಯದ ಕುರಿತಾಗಿ ಉಪನ್ಯಾಸ ನೀಡಿದ  ಶತಾವಧಾನಿ ರಾ. ಗಣೇಶ್, ಯಾರು ಗಾಯತ್ರಿ ಮಂತ್ರವನ್ನು ಜಪಿಸುತ್ತಾರೋ ಅವರನ್ನು ಕಾಪಾಡುತ್ತಾಳೇ ಎಂಬ ಅರ್ಥದಲ್ಲಿ ಗಾಯತ್ರಿ ಎಂಬುದಾಗಿ ಹೇಳುತ್ತಾರೆ.  ಬೇರೆಬೇರೆ […]

Continue Reading

ವಿನೂತನ ಪುಣ್ಯಪರ್ವ “ಗಾಯತ್ರಿ ಮಹೋತ್ಸವ”

ಗಾಯತ್ರಿ ಮಂತ್ರದ ಮಹಿಮೆಯನ್ನು ತಿಳಿಸುವ ಸಲುವಾಗಿ ಶ್ರೀ ಅಖಿಲ ಹವ್ಯಕ ಮಹಾಸಭೆಯ ಹವ್ಯಕ ಭವನದಲ್ಲಿ 09.02.2020 ಭಾನುವಾರ “ಗಾಯತ್ರಿ ಮಹೋತ್ಸವ” ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮಂತ್ರಾರ್ಥವನ್ನು ತಜ್ಞ ವಿದ್ವಾಂಸರು ವಿಭಿನ್ನ ದೃಷ್ಟಿಕೋನದಿಂದ ವಿಶ್ಲೇಷಿಸುವ , ಸಂಧ್ಯಾವಂದನೆಯ ಮಹತ್ವವನ್ನು ತಿಳಿಸುವ ವಿವಿಧ ವಿಚಾರ ಗೋಷ್ಠಿಗಳು ಈ ಕಾರ್ಯಕ್ರಮದಲ್ಲಿ ನಡೆಯಲಿದೆ. ಗಾಯತ್ರಿ ದೇವಿಯ ಮೆರವಣಿಗೆ, ಜ್ಯೋತಿ ಜ್ವಾಲನದೊಂದಿಗೆ ಕಾರ್ಯಕ್ರಮ ಆರಂಭವಾಗಲಿದ್ದು, ಗೌರವಾನ್ವಿತ ಸಂಸದರಾದ ಶ್ರೀ ತೇಜಸ್ವಿ ಸೂರ್ಯ ಹಾಗೂ ಮಾನ್ಯ ಶಾಸಕರಾದ ಶ್ರೀ ರವಿಸುಬ್ರಹ್ಮಣ್ಯ […]

Continue Reading

ಭಾಗವತರಿಗೆ ಭಾವಾರ್ಪಣೆ ~ ಹೊಸ್ತೋಟ ಭಾಗವತರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

ಯಕ್ಷ ಋಷಿ ದಿ. ಹೊಸ್ತೋಟ ಮಂಜುನಾಥ ಭಾಗವತರಿಗೆ ಶ್ರದ್ಧಾಂಜಲಿ ಸಲ್ಲಿಸುವ “ಭಾಗವತರಿಗೆ  ಭಾವಾರ್ಪಣ” ಕಾರ್ಯಕ್ರಮ ಫೆಬ್ರವರಿ 01 ರಂದು ಮಧ್ಯಾಹ್ನ 3.30 ರಿಂದ ಮಲ್ಲೇಶ್ವರದ ಹವ್ಯಕ ಭವನದಲ್ಲಿ ನಡೆಯಲಿದೆ. ಭಾಗವತರ ವ್ಯಕ್ತಿತ್ವ ದರ್ಶನ ಹಾಗೂ ನಾಡಿನ ಗಣ್ಯರು, ವಿದ್ವಾಂಸರು ಹಾಗೂ ಕಲಾವಿದರ ಸಂವಾದ ಮುಂತಾದ ವಿಶೇಷ “ಗುಣ ~ ಗಾನ ~ ಗೌರವ” ಕಾರ್ಯಕ್ರಮಗಳು ನಡೆಯಲಿದ್ದು, ಎಂ.ಕೆ ಭಾಸ್ಕರ್ ರಾವ್ ಹಾಗೂ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಪ್ರೊ ಎಂ. ಎ ಹೆಗಡೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಹವ್ಯಕ ಮಹಾಸಭೆಯ […]

Continue Reading

ಪೊಸಡಿಗುಂಪೆ ಶಂಕರ ಧ್ಯಾನ ಮಂದಿರದಲ್ಲಿ ಸೇವಾ ಅರ್ಘ್ಯ ಕಾರ್ಯಕ್ರಮ

ಗುಂಪೆ: ಶ್ರೀಮದ್ ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಕಾರ್ಯಾಚರಿಸುತ್ತಿರುವ ಪೊಸಡಿ ಗುಂಪೆಯ ಶ್ರೀ ಶಂಕರ ಧ್ಯಾನ ಮಂದಿರದ ಪರಿಸರದಲ್ಲಿ ಜ.೧೮ ರಂದು ಬಜಕೂಡ್ಳು ಅಮೃತಧಾರಾ ಗೋ ಶಾಲೆಯ ಗೋಮಾತೆಗಳಿಗಾಗಿ ’ಗೋವಿಗಾಗಿ ಮೇವು’ ಸೇವಾ ಅರ್ಘ್ಯ ಕಾರ್ಯಕ್ರಮ ನೆರವೇರಿತು. ಗುಂಪೆ ವಲಯ ಬಿಂದು-ಸಿಂಧು ಪ್ರಧಾನರಾದ ಶಂಕರನಾರಾಯಣನ್ ಗುಂಪೆ ಧ್ವಜಾರೋಹಣಗೈದರು. ಗುರುವಂದನೆ, ಗೋವಂದನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಮುಳ್ಳೇರಿಯಾ ಮಂಡಲ ವಿದ್ಯಾರ್ಥಿ ವಾಹಿನಿ ಪ್ರಮುಖ ಗುರುಮೂರ್ತಿ ಮೇಣ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. […]

Continue Reading

ಗುಂಪೆ ವಲಯದ ಶಿಷ್ಯ ಬಾಂಧವರ ಭಜನಾ ಕಾರ್ಯಕ್ರಮ

ಮುಳ್ಳೇರಿಯ: ಶ್ರೀ ಮಜ್ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ದಿವ್ಯ ಮಾರ್ಗದರ್ಶನದಲ್ಲಿ ಕಾರ್ಯಾಚರಿಸುತ್ತಿರುವ ಪೊಸಡಿ ಗುಂಪೆಯ ಶ್ರೀ ಶಂಕರ ಧ್ಯಾನ ಮಂದಿರದಲ್ಲಿ ಪ್ರತೀ ತಿಂಗಳ ಪರ್ವ ದಿನಗಳಲ್ಲಿ ನಡೆಸುವ ಭಜನಾ ಕಾರ್ಯಕ್ರಮವನ್ನು ಗೋ ದಿನದ ಅಂಗವಾಗಿ ಜ.೧೪ ರಂದು ಗುಂಪೆ ವಲಯದ ಶಿಷ್ಯ ಬಾಂಧವರ ನೇತೃತ್ವದಲ್ಲಿ ನಡೆಸಲಾಯಿತು. ಮುಳ್ಳೇರಿಯ ಮಂಡಲ ಸಂಘಟನಾ ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ ಧ್ವಜಾರೋಹಣ ಗೈದರು. ಗುರುವಂದನೆ,  ರಾಮತಾರಕ ಜಪದೊಂದಿಗೆ ಆರಂಭವಾದ ಭಜನಾ ಕಾರ್ಯಕ್ರಮವನ್ನು ಶಾಂತಿ ಮಂತ್ರದೊಂದಿಗೆ ಕೊನೆಗೊಳಿಸಲಾಯಿತು. […]

Continue Reading

ಶ್ರೀರಾಮಚಂದ್ರಾಪುರ ಮಠದಿಂದ ವಿದ್ಯಾ ಸಹಾಯನಿಧಿ ವಿತರಣೆ

ಹೊನ್ನಾವರ: ಹೊನ್ನಾವರ ಮಂಡಲದ ವಿದ್ಯಾರ್ಥಿ ವಾಹಿನಿಯಿಂದ ವಿದ್ಯಾರ್ಥಿ ಸಹಾಯನಿಧಿ ವಿತರಣಾ ಕಾರ್ಯಕ್ರಮ ತಾಲೂಕಿನ ಮುಗ್ವಾದ ಶ್ರೀರಾಘವೇಂದ್ರ ಭಾರತೀ ಸವೇದ ಸಂಸ್ಕೃತ ಪಾಠಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ‘ಕೃತಜ್ಞತೆ’ ವಿಷಯದ ಕುರಿತು ಉಪನ್ಯಾಸ ನೀಡಿದ ಶಿಕ್ಷಕ ಸಂದೀಪ ಭಟ್ಟ ಮಾತನಾಡಿ, ‘ವಿದ್ಯಾರ್ಥಿಗಳು ಜೀವನದಲ್ಲಿ ಸಮಾಜದ ಹಾಗೂ ಗುರುಗಳ ಋಣವನ್ನು ಎಂದಿಗೂ ಮರೆಯದೆ ಭವಿಷ್ಯದಲ್ಲಿ ವಿವಿಧ ಸಂಘಟನೆಗಳಲ್ಲಿ ತೊಡಗಿಸಿಕೊಳ್ಳಿ’ ಎಂದು ಕರೆ ನೀಡಿದರು. ಮಹಾಮಂಡಲದ ವೈದಿಕ ವಿಭಾಗದ ನೀಲಕಂಠ ಯಾಜಿ ಮಾತನಾಡಿ, ಇಂದು ನೀಡಿರುವ ವಿದ್ಯಾರ್ಥಿ ಸಹಾಯನಿಧಿ ವಿದ್ಯಾರ್ಥಿಗಳಿಗೆ ಶ್ರೀಸಂಸ್ಥಾನದವರು ಆಶೀರ್ವದಿಸಿ […]

Continue Reading

ಕೋಲ್ಪೆ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಗವ್ಯ ಉತ್ಪನ್ನ ಮಾರಾಟ ಮಳಿಗೆ ಉದ್ಘಾಟನೆ

ವಿಟ್ಲ: ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜಾತ್ರೆ ಪ್ರಯುಕ್ತ ಶ್ರೀರಾಮಚಂದ್ರಾಪುರ ಮಠದ ಮಾತೃತ್ವಮ್ ಆಯೋಜಿಸಿದ ದೇಸೀ ಗವ್ಯ ಉತ್ಪನ್ನ ಮಾರಾಟ ಮಳಿಗೆಯನ್ನು ಮಂಗಳವಾರ ಉದ್ಘಾಟಿಸಲಾಯಿತು. ದೇವಸ್ಥಾನದ ಆಡಳಿತ ಸಮಿತಿಯ ಗೌರವಾಧ್ಯಕ್ಷ ಪ್ರಕಾಶ್ ಬಡಜ ಉದ್ಘಾಟಿಸಿ, ಮಾತನಾಡಿ, ಗವ್ಯ ಉತ್ಪನ್ನದ ಪ್ರಯೋಜನವನ್ನು ಎಲ್ಲರೂ ಪಡೆಯಬೇಕು ಎಂದರು. ಮುಖ್ಯ ಅತಿಥಿಗಳಾಗಿ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು ಅವರು ಮಾತನಾಡಿ, ಸ್ವದೇಶೀ ಗೋವುಗಳನ್ನು ಉಳಿಸಿ, ಬೆಳೆಸುವುದು ಮುಖ್ಯ. ಸ್ವಸ್ಥ ಸಮಾಜದ ನಿರ್ಮಾಣಕ್ಕಾಗಿ ಶ್ರೀರಾಮಚಂದ್ರಾಪುರ ಮಠದ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ […]

Continue Reading

ಮುಳ್ಳೇರಿಯ ಮಂಡಲದಿಂದ ಸಂತತಿ ಮಂಗಲ ಕಾರ್ಯಕ್ರಮ

ಮುಳ್ಳೇರಿಯ: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿ ಗಳವರ ನಿರ್ದೇಶಾನುಸಾರ ಹವ್ಯಕ ಮಹಾಮಂಡಲಾಂತರ್ಗತ ಮುಳ್ಳೇರಿಯ ಮಂಡಲದ ಆಶ್ರಯದಲ್ಲಿ ಪಳ್ಳತ್ತಡ್ಕ ವಲಯದ ಮುದ್ದು ಮಂದಿರದಲ್ಲಿ ವಿಶಿಷ್ಟ ಕಲ್ಪನೆಯ ಸಪ್ತ ಮಂಗಲಗಳಲ್ಲಿ ಒಂದಾದ, ನಮ್ಮ ಮುಂದಿನ ಪೀಳಿಗೆಯ ಶೇಯಸ್ಸಿಗಾಗಿ ನಾವು ಕೈಗೊಳ್ಳುವ ಕ್ರಮಗಳ ಕುರಿತು ತಿಳಿದು ಕೊಳ್ಳುವ ಸಂತತಿ ಮಂಗಲ ಕಾರ್ಯಕ್ರಮ ಮುಳ್ಳೆರಿಯ ಮಂಡಲ ಮಾತೃ ಪ್ರಧಾನರ ನೇತೃತ್ವದಲ್ಲಿ ಜರಗಿತು. ಕಾರ್ಯಕ್ರಮವನ್ನು ಮಹಾಮಂಡಲ ಮಾತೃತ್ವಮ್ ಅಧ್ಯಕ್ಷೆ ಶ್ರೀಮತಿ ಈಶ್ವರಿ ಬೇಕ೯ಡವು ಉದ್ಘಾಟಿಸಿದರು. ಮಂಡಲ ಅಧ್ಯಕ್ಷರಾದ ಬಾಲಸುಬ್ರಹ್ಮಣ್ಯ ಸರ್ಪಮಲೆ ಸಮಾರಂಭದಲ್ಲಿ ಅಧ್ಯಕ್ಷತೆ […]

Continue Reading

ಒಗ್ಗಟ್ಟಿನ ಸಂದೇಶ ಸಾರಿದ 76 ನೇ ವರ್ಷದ ಸರ್ವಸದಸ್ಯರ ಮಹಾಸಭೆ

ಬೆಂಗಳೂರು: ಶ್ರೀ ಅಖಿಲ ಹವ್ಯಕ ಮಹಾಸಭೆ(ರಿ) ಯ 76ನೇ ವರ್ಷದ ಸರ್ವಸದಸ್ಯರ ಮಹಾಸಭೆ ಮಲ್ಲೇಶ್ವರಂನ ಹವ್ಯಕ ಭವನದಲ್ಲಿ ನಡೆಯಿತು. ಉತ್ತರಕನ್ನಡ, ಬೆಂಗಳೂರು, ಶಿವಮೊಗ್ಗ , ಕೊಡಗು, ಕಾಸರಗೋಡು ವ್ಯಾಪ್ತಿಯ 15 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿತ್ತು. ಆದರೆ ಎಲ್ಲಾ 15 ಸ್ಥಾನಗಳಿಗೂ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಹವ್ಯಕ ಸಮಾಜದ ಸಂಘಟನೆಯ ಒಗ್ಗಟ್ಟು ಪ್ರದರ್ಶಿತವಾಯಿತು. ಚುನಾವಣಾಧಿಕಾರಿ ರಾಮಭಟ್ ಅವಿರೋಧ ಆಯ್ಕೆಯನ್ನು ಹಾಗೂ ನೂತನ ನಿರ್ದೇಶಕರನ್ನು ಉದ್ಘೋಷಿಸಿದರು. ಸರ್ವಸದಸ್ಯರ ಮಹಾಸಭೆಯ ಅಧ್ಯಕ್ಷತೆಯನ್ನುವಹಿಸಿ ಮಾತನಾಡಿದ ಡಾ. ಗಿರಿಧರ ಕಜೆ, ಮಹಾಸಭೆಯ […]

Continue Reading

ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ

ಕೇಪು: ಬಾಲ್ಯದಲ್ಲಿ ಹಲ್ಲಿನ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಹಲ್ಲಿನ ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾಗಿದೆ. ಹಳ್ಳಿ ಪ್ರದೇಶಕ್ಕೆ ವೈದ್ಯರು ಬಂದು ನೀಡುತ್ತಿರುವ ಸೇವೆಯನ್ನು ಸದುಪಡಿಸಿಕೊಳ್ಳಬೇಕು ಎಂದು ವಿಟ್ಲ ರೋಟರಿ ಕ್ಲಬ್ ಅಧ್ಯಕ್ಷ ಜಯರಾಮ ರೈ ಹೇಳಿದರು. ಅವರು ಪುಣಚ ಶ್ರೀದೇವಿನಗರ ಶ್ರೀದೇವಿ ಪ್ರೌಢಶಾಲೆಯಲ್ಲಿ ಕೇಪು ಹವ್ಯಕ ವಲಯದ ಆಶ್ರಯದಲ್ಲಿ ವಿಟ್ಲ ಲಯನ್ಸ್ ಕ್ಲಬ್, ರೋಟರಿ ಕ್ಲಬ್ ವಿಟ್ಲ, ಶ್ರೀದೇವಿ ಪ್ರೌಢಶಾಲೆಯಲ್ಲಿ ನಿಟ್ಟೆ ಎಬಿ ಶೆಟ್ಟಿ ಮೆಮೋರಿಯಲ್ ಇನ್ ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ಸಮುದಾಯ ದಂತ […]

Continue Reading

ರುದ್ರ ಮಂತ್ರ ತರಬೇತಿ ಕಾರ್ಯಕ್ರಮ

ಮುಳ್ಳೇರಿಯ: ಧರ್ಮಕರ್ಮ ವಿಭಾಗದ ನೇತೃತ್ವದಲ್ಲಿ ಮುಳ್ಳೇರಿಯ ಮಂಡಲಾಂತರ್ಗತ ಗುಂಪೆ ವಲಯದ ವೈದಿಕ ವಿಭಾಗದ ವತಿಯಿಂದ ಪೆರ್ಮುದೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ ನ.೨೩ನೇ ಶನಿವಾರ ಸಾಯಂಕಾಲ ವೆ.ಮೂ.ಗೋಪಾಲಕೃಷ್ಣ ಭಟ್ ನಾಯರ್ಪಳ್ಳ ಇವರಿಂದ ಆಸಕ್ತ ವೇದ ವಿದ್ಯಾರ್ಥಿಗಳಿಗೆ ರುದ್ರ ಮಂತ್ರ ತರಬೇತಿ ಕಾರ್ಯಕ್ರಮ ಆರಂಭವಾಯಿತು. ರುದ್ರ ತರಬೇತಿಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಉದಯಕುಮಾರ್ ನೂಜಿ ಪುತ್ತೂರು ಇವರು ಉಚಿತವಾಗಿ ನೀಡಿದ ಮಂತ್ರ ಗುಚ್ಚ ಪುಸ್ತಕಗಳನ್ನು ವಿತರಿಸಲಾಯಿತು. ಶಂಖನಾದ, ಗುರುವಂದನೆ, ಗೋ ವಂದನೆಗಳೊಂದಿಗೆ ಪ್ರಾರಂಭಗೊಂಡ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಲಯಾಧ್ಯಕ್ಷರಾದ ಅಮ್ಮಂಕಲ್ಲು […]

Continue Reading

ಸಾಧನಾ ಸಂಕಲ್ಪ ಪ್ರತಿಜ್ಞಾ ಸಮಾರಂಭ ಹಾಗೂ ಕಾಗೇರಿಯವರಿಗೆ ಸನ್ಮಾನ

ಬೆಂಗಳೂರು: ಇಂದು ಜನನಾಯಕರ ಕುರಿತಾಗಿ ಬಹಳಷ್ಟು ಮಾತನಾಡಲಾಗುತ್ತದೆ. ಆದರೆ ಜನರು ಹೇಗಿರುತ್ತಾರೋ ಅದೇ ರೀತಿಯ ಜನಪ್ರತಿನಿಧಿಗಳು ಆಯ್ಕೆಯಾಗುತ್ತಾರೆ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ವಿಧಾನಸಭಾಧ್ಯಕ್ಷರಾದ ಮಾನ್ಯ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಮಲ್ಲೇಶ್ವರದಲ್ಲಿರುವ ಶ್ರೀಅಖಿಲ ಹವ್ಯಕ ಮಹಾಸಭೆಯಲ್ಲಿ ನ.18ರಂದು ನಡೆದ ‘ಅಭಿನಂದನಾ ಸಮಾರಂಭ’ ಹಾಗೂ ‘ಸಾಧನಾ ಸಂಕಲ್ಪ’ ಕಾರ್ಯಕ್ರಮದಲ್ಲಿ ಹವ್ಯಕ ಮಹಾಸಭೆಯ ಗೌರವವನ್ನು ಸ್ವೀಕರಿಸಿ ಮಾತನಾಡಿದ ಕಾಗೇರಿಯವರು, ಸಮಷ್ಟಿ ಸಮಾಜದ ಎಲ್ಲಾ ವಿಭಾಗಗಳಲ್ಲಿ ಹವ್ಯಕರು ತಮ್ಮ ಪ್ರತಿಭಿಯಿಂದ ನಮ್ಮ ಸಮಾಜವನ್ನು ನಾಡು ಗುರುತಿಸುವಂತೆ ಆಗಿದೆ. ಸಮಾಜದ ಸಂಘಟನೆ […]

Continue Reading

ಗುಂಪೆ ಹವ್ಯಕ ವಲಯ ಸಭೆ

ಗುಂಪೆ: ಮುಳ್ಳೇರಿಯಾ ಮಂಡಲಾಂತರ್ಗತ ಗುಂಪೆ ವಲಯದ ಸಭೆ ಹಳಕೋಡ್ಲು ಘಟಕದ ಅಧ್ಯಕ್ಷರಾದ ಗಣಪತಿ ಭಟ್ ಅವರ ನಿವಾಸದಲ್ಲಿ ನ.೩ರಂದು ಜರಗಿತು. ಅಧ್ಯಕ್ಷತೆಯನ್ನು ವಲಯಾಧ್ಯಕ್ಷರಾದ ಅಮ್ಮಂಕಲ್ಲು ರಾಮ ಭಟ್ ವಹಿಸಿದರು. ವಲಯ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಬೆಜಪ್ಪೆ ಗತ ಸಭೆಯ ವರದಿ, ಮಹಾಮಂಡಲ ಸುತ್ತೋಲೆ,ಮಂಡಲ ವರದಿಗಳನ್ನು ಮಂಡಿಸಿದರು. ಪದಾಧಿಕಾರಿಗಳು ವಹಿಸಿಕೊಂಡಿರುವ ಜವಾಬ್ದಾರಿಗಳನ್ನು ನಿರ್ವಹಿಸಲು ವಿಭಾಗವಾರು ಮಾಹಿತಿಗಳನ್ನು ನೀಡಿದರು. ಜನವರಿ ತಿಂಗಳಿನಲ್ಲಿ ಸಮರ್ಪಿಸುವ ದೀಪಕಾಣಿಕೆ,ಗುರುಕುಲ ಕಾಣಿಕೆ, ಹಾಗೂ ಬೆಳೆ ಸಮರ್ಪಣೆ, ಉತ್ಸವ ಕಾಣಿಕೆಯ ಬಗ್ಗೆ ಮಾಹಿತಿ ನೀಡಿ ಮಾಹಿತಿ ನೀಡಿ, […]

Continue Reading

ಪ್ರತಿಭಾ ಪುರಸ್ಕಾರ – ಸನ್ಮಾನ ಕಾರ್ಯಕ್ರಮ

ವಿಟ್ಲ: ಮಂಗಳೂರು ಹವ್ಯಕ ಮಂಡಲಾಂತರ್ಗತ ವಿಟ್ಲ ಹವ್ಯಕ ವಲಯದ ೨೧ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಪದೋನ್ನತಿ ಹೊಂದಿದ ವಲಯ ಕೋಶಾಧಿಕಾರಿಯವರ ಸಮ್ಮಾನ ಸಮಾರಂಭ ವಿಟ್ಲ ಬೊಬ್ಬೆಕೇರಿ ಸೌಪರ್ಣಿಕಾ ಸಭಾಭವನದಲ್ಲಿ ಭಾನುವಾರ ನಡೆಯಿತು. ಮಂಗಳೂರು ಹವ್ಯಕ ಮಂಡಲ ಅಧ್ಯಕ್ಷ ಗಣೇಶಮೋಹನ ಕಾಶಿಮಠ ಅಧ್ಯಕ್ಷತೆ ವಹಿಸಿ, ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಸಂಘಟನೆ ಬಲಿಷ್ಠವಾಗಿದೆ. ಪರಂಪರೆಯ ಮಹತ್ವವನ್ನು ಸಾರುತ್ತ, ಆಧ್ಯಾತ್ಮಿಕ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸಾಧನೆಯನ್ನು ಸಮಾಜಕ್ಕೆ ಅರ್ಪಿಸಿದ ಅವರು ದೇಸೀ ಗೋಸಂರಕ್ಷಣೆಗೆ ಮಹತ್ವದ […]

Continue Reading

ಕನ್ಯಾನದಲ್ಲಿ ರಾಮಾಯಣ ಪಾರಾಯಣ

ಕನ್ಯಾನ: ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ಸಂಕಲ್ಪದಂತೆ ಅ.೨೧ರಂದು ಪ್ರಾರಂಭಿಸಿ ಅ.೨೯ g ವರೆಗೆ ಕನ್ಯಾನ ಹವ್ಯಕ ವಲಯದಲ್ಲಿ ರಾಮಾಯಣ ಪಾರಾಯಣ ನಡೆಯಿತು.   ದೇಲಂತಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಮಂಗಳವಾರ ಪ್ರತಿ ರುದ್ರ ಪಾರಾಯಣ ಮತ್ತು ವಿಷ್ಣು ಸಹಸ್ರನಾಮ ಪಠಣದೊಂದಿಗೆ ಸಮಾಪನಗೊಂಡಿದೆ. ರಾಮಾಯಣದ ಅರ್ಥವಿವರಣೆಯನ್ನು ವೇದಮೂರ್ತಿ ಶಂಕರ ಭಟ್ಟರು ನೆರವೇರಿಸಿದರು.   ಸಮಾರೋಪ ಸಮಾರಂಭದಲ್ಲಿ ಕನ್ಯಾನ ಹವ್ಯಕ ವಲಯ ಅಧ್ಯಕ್ಷ ಈಶ್ವರಪ್ರಸಾದ್, ಕಾರ್ಯದರ್ಶಿ ರವಿಶಂಕರ ಪನೆಯಡ್ಕ ಮತ್ತು ಪದಾಧಿಕಾರಿಗಳು, ಗುರಿಕ್ಕಾರರು ಹಾಗೂ ಸರ್ವ ಸದಸ್ಯರು […]

Continue Reading

ವಾಲ್ಮೀಕಿ ರಾಮಾಯಣ ಪಾರಾಯಣ

ಸಾಗರ: ಜೀವನ ಅರ್ಥವಾಗಲು, ಸಾರ್ಥಕವಾಗಲು ರಾಮಾಯಣ ಮಹಾಕಾವ್ಯ ಮಾರ್ಗದರ್ಶಕ ಎಂದು ಮಹಾಮಂಡಲ ವೈದಿಕ ಪ್ರಧಾನ ವೇದಮೂರ್ತಿ ನೀಲಕಂಠಯಾಜಿ ಹೇಳಿದರು. ಇಲ್ಲಿನ ಬನ್ನಿಕಟ್ಟೆ ರಸ್ತೆಯ ಶ್ರೀರಾಘವೇಶ್ವರ ಸಭಾಭವನದಲ್ಲಿಹೊಸನಗರದ ಶ್ರೀರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತಿಯವರ 1008 ವಾಲ್ಮೀಕಿ ರಾಮಾಯಣ ಪಾರಾಯಣ ಸಂಕಲ್ಪದ ಅಂಗವಾಗಿ ಹಮ್ಮಿಕೊಂಡ 21 ವೈದಿಕರಿಂದ ಪಾರಾಯಣ ಮಹಾಪರ್ವದ ಮಂಗಲೋತ್ಸವ ಅಂಗವಾಗಿ ಶನಿವಾರ ಹಮ್ಮಿಕೊಂಡ ಕಾರ‍್ಯಕ್ರಮದಲ್ಲಿಅವರು ಸಮಾರೋಪ ಭಾಷಣ ಮಾಡಿದರು. ವಿದ್ವಾನ್‌ ಎನ್‌.ಎಸ್‌.ಗಣಪತಿಭಟ್‌ ಮಾತನಾಡಿದರು. ವಾಲ್ಮೀಕಿ ಮಹಾಗ್ರಂಥಕ್ಕೆ ಸಾಮೂಹಿಕ ಮಂಗಳಾರತಿ ಮಾಡಲಾಯಿತು. ಸಭಾಭವನದ ಅಧ್ಯಕ್ಷ ಹರನಾಥ್‌ ರಾವ್‌ ಮತ್ತಿಕೊಪ್ಪ ಅಧ್ಯಕ್ಷತೆ […]

Continue Reading