ಚೂಡಾಮಣಿ ಸೂರ್ಯಗ್ರಹಣ ಪ್ರಯುಕ್ತ ದೇವರ ದರ್ಶನಕ್ಕೆ ವ್ಯವಸ್ಥೆ

ಶ್ರೀಕ್ಷೇತ್ರ ಗೋಕರ್ಣದ ಶ್ರೀಮಹಾಬಲೇಶ್ವರ ದೇವಾಲಯದಲ್ಲಿ ರವಿವಾರದ ಚೂಡಾಮಣಿ ಸೂರ್ಯಗ್ರಹಣದ ಸಮಯದಲ್ಲಿ ಗೋಕರ್ಣದ ಊರಿನವರಿಗೆ ನಿಯಮಗಳ ಪ್ರಕಾರ ನಂದಿ ಮಂಟಪದವರೆಗೆ ಹೋಗಿ ದರ್ಶನ ಪಡೆದು ನಮಸ್ಕಾರ ಮಾಡಿ ಬರಲು ಅವಕಾಶ ನೀಡಲಾಗಿತ್ತು. ಬಹಳಷ್ಟು ಜನ ಊರಿನವರು ದೇವರ ದರ್ಶನ ಪಡೆದರು. ಈ ಕ್ಷೇತ್ರದಲ್ಲಿ ಭಕ್ತಾದಿಗಳು ಗ್ರಹಣದ ವೇಳೆಯಲ್ಲಿ ಈಶ್ವರನ ದರ್ಶನ ಪಡೆದು ಸಮುದ್ರಕ್ಕೆ ಹೋಗಿ ಸ್ನಾನ ಮಾಡಿ, ಜಪ-ತಪಗಳನ್ನು ಮಾಡುವ ರೂಢಿಗತ ಪರಂಪರೆಗೆ ಅನುಕೂಲವಾಗಲೆಂದು “ಪರಮಪೂಜ್ಯ ಜಗದ್ಗುರುಶಂಕರಾಚಾರ್ಯ ಗೋಕರ್ಣಮಂಡಲಾಧೀಶ್ವರ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ” ಮಾರ್ಗದರ್ಶನದಲ್ಲಿ ಈ ಅವಕಾಶಗಳನ್ನು ನೀಡಲಾಯಿತು. […]

Continue Reading

ಗೋವಿಗಾಗಿ ಮೇವು ಮೇವಿಗಾಗಿ ನಾವು

ಮುಳ್ಳೇರಿಯಾ ಮಂಡಲ ಪೆರಡಾಲ ವಲಯದ ಸಂಪತಿಲ ಶಿವರಾಮ ಭಟ್ ಹುಲ್ಲಿನ ಪ್ಲಾಟ್ ನಲ್ಲಿದ್ದ ಒಂದು ಪಿಕ್ ಅಪ್ ಸಂಪೂರ್ಣ ಜಾತಿಯ ಹುಲ್ಲನ್ನು ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಅದಿನದಲ್ಲಿ ಇರವ ಬಜಕೂಡ್ಲು ಅಮೃತಧಾರ ಗೋಶಾಲೆಯ ಗೋವುಗಳಿಗೆ ನೀಡಿದ್ದಾರೆ. ಕಾಮದುಘಾ ಕಾರ್ಯದರ್ಶಿ ವೈ ವಿ ಕೃಷ್ಣ ಮೂರ್ತಿ, ಮಂಡಲ ಸಂಘಟನಾ ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ, ಮಂಡಲ ಕೋಶಾಧಿಕಾರಿ ಹರಿ ಪ್ರಸಾದ ಪೆರ್ಮುಖ, ಪೆರಡಾಲ ವಲಯ ಕಾರ್ಯದರ್ಶಿ ವಿಷ್ಣು ಪ್ರಸಾದ, ಶ್ರಮದಾನದ ಮುಖಾಂತರ ಕಟಾವು, ಕಟ್ಟ […]

Continue Reading

ಕರೊನಾ ನಡುವೆಯೂ ಗೋಶಾಲೆಯ ಕಾಮಗಾರಿ

ಮಾಲೂರು ಶ್ರೀ ರಾಘವೇಂದ್ರ ಗೋ ಆಶ್ರಮದ ಜನವರಿಯಲ್ಲಿ ಮಳೆಯ ಸಮಯದಲ್ಲಿ ಗೋಶಾಲೆಯ ಗೋಡೆಯೊಂದು ಕುಸಿದು ಗೋವುಗಳಿಗೆ ಛಾವಣಿ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ದಾನಿಗಳ ಸಹಾಯದಿಂದ ಕರೊನಾ ಸಂಕಷ್ಟದ ನಡುವೆಯೂ ಕಾಮಗಾರಿಗಳು ಭರದಿಂದ ಸಾಗುತ್ತಿದೆ. ಹಳೆ ಎರಡು ಗೋಶಾಲೆಗಳ ರಿಪೇರಿ ಹಾಗೂ ಹೊಸ ಎರಡು ಗೋಶಾಲೆಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ನೀರಿನ ತೀವ್ರ ಅಭಾವ ಉಂಟಾಗುತ್ತಿದ್ದ ಹಿನ್ನಲೆಯಲ್ಲಿ ಹೊಸ ಬೋರ್ ವೆಲ್ ನಿರ್ಮಾಣದ ಕಾರ್ಯ ಯಶಸ್ವಿಯಾಗಿ ನಡೆದಿದೆ. ಗೋಆಶ್ರಮದ ಅಭಿಮಾನಿ ಗೋಪ್ರೇಮಿಗಳು ಸದಾ ಸಹಕಾರವನ್ನು ನೀಡುತ್ತಿದ್ದು, ಮುಂದಿನ ಕೆಲಸಕಾರ್ಯಗಳಿಗೆ […]

Continue Reading

ಗೋವುಗಳಿಗೆ ಗೋಗ್ರಾಸ

ಸಿದ್ದಾಪುರ ನಿವಾಸಿ ಗುರುಮನೆಯ ಗುರುಭಕ್ತ ನಾಗರಾಜಭಟ್ ಕೆಕ್ಕಾರು ಇವರು ಗೋಸ್ವರ್ಗದ ಗೋವುಗಳಿಗೆ ಗೋಗ್ರಾಸರೂಪದಲ್ಲಿ ಒಂದು ಲೋಡು ಕಲ್ಲಂಗಡಿ ಹಣ್ಣನ್ನು ನೀಡಿದರು.

Continue Reading

ಶ್ರೀ ಭಾರತೀ ಸಮೂಹ ಸಂಸ್ಥೆಗಳು, ನಂತೂರು

ಶ್ರೀ ಭಾರತೀ ಸಮೂಹ ಸಂಸ್ಥೆಗಳು, ನಂತೂರು ವಿವೇಕಾನಂದ ರಸ್ತೆ 6ನೇ ಕ್ರಾಸ್, ನಂತೂರು ಪದವು, ಮಂಗಳೂರು ಫೋನ್ : 0824-2214062, 0824-2216464 ಮೊಬೈಲ್ : 9448622674, 6360519232, 9844936701 Email : info@shreebharathicollege.com ಆತ್ಮೀಯ ಹೆತ್ತವರೇ, ಪೋಷಕರೇ, ವಿದ್ಯಾಭಿಮಾನಿಗಳೇ, ನಮಸ್ಕಾರ, ಹರೇ ರಾಮ : ನಮ್ಮ ಸಂಸ್ಥೆಯ ವಿಶೇಷತೆ ಬಗ್ಗೆ, ಇರುವ ಅವಕಾಶಗಳ ಬಗ್ಗೆ ಒಂದಿಷ್ಟು ಮಾಹಿತಿ ಹಂಚಿಕೊಳ್ಳಲು ಬಯಸುತ್ತಿದ್ದೇವೆ. ದಯವಿಟ್ಟು ಪೂರ್ತಿಯಾಗಿ ಗಮನವಿಟ್ಟು ಓದಬೇಕಾಗಿ ವಿನಂತಿ. ಶ್ರೀಗುರುಗಳ ಆಶೀರ್ವಾದವಿದೆ : ಶ್ರೀರಾಮಚಂದ್ರಾಪುರ ಮಠದ ಪರಮಪೂಜ್ಯ ಶ್ರೀಮಜ್ಜಗದ್ಗುರು […]

Continue Reading

ಗೋವಾಲಯಕ್ಕೆ ಸಹಾಯ ಹಸ್ತ ನೀಡಿದ ಹೆಗಡೆ ಶಾಂತಿಕಾ ಪರಮೇಶ್ವರಿ ದೇವಾಲಯ

ಕೋವಿಡ್ – ೧೯ ಹಿನ್ನೆಲೆಯಲ್ಲಿ ಜಾರಿಯಾದ ಲಾಕ್ ಡೌನ್ ನ ಬಿಸಿ ಜನಸಾಮಾನ್ಯರಿಗಷ್ಟೇ ಅಲ್ಲದೇ ಭಾರತೀಯ ಗೋ ತಳಿಸಂರಕ್ಷಣೆ ಯಲ್ಲಿ ತೊಡಗಿಕೊಂಡಿರುವ ಕರಾವಳಿ ಭಾಗದ ಏಕೈಕ ಗೋಶಾಲೆ ಯಾದ ಹೊಸಾಡ ಗೋಶಾಲೆಯ ಗೋವುಗಳಿಗೂ ತಟ್ಟಿದೆ. ಗೋಪ್ರೇಮಿಗಳ ಸಹಕಾರದಿಂದಲೇ ನಡೆಯಬೇಕಿದ್ದ ಗೋಶಾಲೆಗೆ ಲಾಕ್ ಡೌನ್ ಪರಿಸ್ಥಿತಿಯಿಂದ ಸಹಜವಾಗಿ ಎಲ್ಲಾ ಆದಾಯದ ಬಾಗಿಲುಗಳೂ ಮುಚ್ಚಿದ್ದು ಹಿಂದೆಂದೂ ಎದುರಿಸದ ಕಷ್ಟ ಎದುರಾಗಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಬಡಗೋವುಗಳ ವೇದನೆಯ ಕೂಗು ಉತ್ತರ ಕನ್ನಡದ ಕುಮಟಾ ತಾಲೂಕಿನ ಹೆಗಡೆ ಗ್ರಾಮದ ಐತಿಹಾಸಿಕ , […]

Continue Reading

ಗೋಶಾಲೆಗಳಿಗೆ ಅನುದಾನಕ್ಕೆ ವಿನಂತಿ

ಕೈರಂಗಳ ಪುಣ್ಯಕೋಟಿನಗರ ಅಮೃತಧಾರಾ ಗೋಶಾಲೆ ಸೇವಾ ಸಮಿತಿಯ ಅಧ್ಯಕ್ಷರಾದ ರಾಜಾರಾಮ ಭಟ್ ರವರು ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರನ್ನು ಭೇಟಿ ಮಾಡಿ ಕೊರೋನಾ ಕರ್ಫ್ಯೂನಿಂದಾಗಿ ಹಸುಗಳ ಮೇವಿನ ಸಮಸ್ಯೆ ಬಂದಿರುವ ವಿಷಯವನ್ನು ಮಾನ್ಯ ಸಚಿವರಿಗೆ ಮನವರಿಕೆ ಮಾಡಿ ಅನುದಾನ ಮಂಜೂರು ಮಾಡಬೇಕೆಂದು ವಿನಂತಿಸಿದರು. ಸಮಸ್ಯೆಯನ್ನು ಆಲಿಸಿದ ಸಚಿವರು ಮುಂದೆ ಈ ಬಗ್ಗೆ ತಿರ್ಮಾನ ಕೈಗೊಳ್ಳುವ ಭರವಸೆ ನೀಡಿದರು. ಈ ಸಂದರ್ಭ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸುದರ್ಶನ್ ಮೂಡಬಿದಿರೆ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಮೋನಪ್ಪ […]

Continue Reading

೧೦೦ ಚೀಲ ಹಿಂಡಿಯನ್ನು ಗೋಶಾಲೆಗೆ ಕೊಡುಗೆ

ಕೋವಿಡ್ – ೧೯ ಹಿನ್ನೆಲೆಯಲ್ಲಿ ಜಾರಿಯಾದ ಲಾಕ್ ಡೌನ್ ಪರಿಸ್ಥತಿಯಿಂದ ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿದ್ದ ಭಾರತೀಯ ಗ್ಯೋಬ್ಯಾಂಕ್ ಹೋಸಾಡ ಗೋಶಾಲೆ ೩೦೦ ಗೋವುಗಳಿಗೆ ಕೆನರಾ ಆಟೋಮೊಬೈಲ್ ಕುಮಟಾ ಆಡಳಿತ ಮಂಡಳಿಯ ಸದಸ್ಯರಾದ ಭರತ ಭಂಡಾರಕರ್ ಅವರು ೧ ಲಕ್ಷಕ್ಕೂ ಹೆಚ್ಚಿನ ಮೌಲ್ಯದ ೧೦೦ ಚೀಲ ಹಿಂಡಿಯನ್ನು ಗೋಶಾಲೆಗೆ ದೇಣಿಗೆಯಾಗಿ ನೀಡಿದ್ದಾರೆ. ಹುಲ್ಲು ಹಿಂಡಿಯ ದರ ಮುಗಿಲು ಮುಟ್ಟಿದೆ. ಅಲ್ಪ ಸ್ವಲ್ಪ ಆದಾಯ ಬರುತ್ತಿದ್ದ ಗೊಬ್ಬರ ಮಾರಾಟ, ಗವ್ಯೋತ್ಪನ್ನ ಮಾರಾಟದಲ್ಲೂ ಇಳಿಮುಖವಾಗಿದೆ. ವರ್ಷಂಪ್ರತಿ ಗೋಸೇವೆ ಪ್ರಯುಕ್ತ ಈ ಸಮಯದಲ್ಲಿ […]

Continue Reading

ರಾಮಚಂದ್ರಾಪುರ ಮಠದಿಂದ ಬಾಲಕ, ಬಾಲಕಿಯರಿಗೆ ಗುರುಕುಲ

ಬೆಂಗಳೂರು: ಸನಾತನ ಸಂಸ್ಕøತಿಯ ಉಳಿವಿಗಾಗಿ ಮತ್ತು ಮುಂದಿನ ಪೀಳೀಗೆಯ ಅಭ್ಯುದಯಕ್ಕಾಗಿ ಶ್ರೀರಾಮಚಂದ್ರಾಪುರ ಮಠ ವತಿಯಿಂದ ಗೋಕರ್ಣ ಬಳಿ ಆರಂಭಿಸುತ್ತಿರುವ ಸಾರ್ವಭೌಮ ಗುರುಕುಲ (ಬಾಲಕರಿಗೆ) ಮತ್ತು ರಾಜರಾಜೇಶ್ವರಿ ಗುರುಕುಲ (ಬಾಲಕಿಯರಿಗೆ)ಗಳಿಗೆ ಪ್ರವೇಶ ಪಡೆಯಲು ಸರ್ವ ಸಮಾಜದ ಆಸಕ್ತ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಋಷಿಯುಗ ಮತ್ತು ನವಯುಗ ಶಿಕ್ಷಣಗಳ ಸಮ್ಮಿಲನ ಇದಾಗಿದ್ದು, ನಾಲ್ಕನೇ ತರಗತಿಯಿಂದ ಪಿಯುಸಿ ವರೆಗಿನ ಔಪಚಾರಿಕ ಶಿಕ್ಷಣದ ಜತೆಗೆ ವೇದಮೂಲವಾದ ಸಮಗ್ರ ಭಾರತೀಯ ವಿದ್ಯೆ ಕಲೆಗಳ ಪರಿಚಯ, ಸಂಸ್ಕøತ, ಭಗವದ್ಗೀತೆ, ಯೋಗ, ವ್ಯಾಯಾಮಕೀ, ಆಯುರ್ವೇದ, ಸದಾಚಾರ, […]

Continue Reading

ಕೊರೋನಾ ಸಂಕಷ್ಟಕ್ಕೆ ಶ್ರೀರಾಮಚಂದ್ರಾಪುರಮಠ ಸ್ಪಂದನೆ

ಬೆಂಗಳೂರು: ಶ್ರೀರಾಮಚಂದ್ರಾಪುರ ಮಠದ ವತಿಯಿಂದ ಗುರುವಾರ ಕೋವಿಡ್-19 ಪರಿಹಾರ ನಿಧಿಗೆ 2 ಲಕ್ಷ ರೂಪಾಯಿಗಳ ದೇಣಿಗೆ ನೀಡಲಾಯಿತು. ಶ್ರೀಮಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜಿ.ಭಟ್ ಮತ್ತು ಸಂದೇಶ ತಲಕಾಲಕೊಪ್ಪ ಶ್ರೀಮಠದ ಪರವಾಗಿ ದೇಣಿಕೆ ಚೆಕ್ಕನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಹಸ್ತಾಂತರಿಸಿದರು. ಶ್ರೀಮಠದ ವಿವಿಧ ಅಂಗಸಂಸ್ಥೆಗಳು ಈಗಾಗಲೇ ವಲಸೆ ಕಾರ್ಮಿಕರು ಮತ್ತು ಬಡವರಿಗೆ ಆಹಾರ ಕಿಟ್‍ಗಳನ್ನು ಮತ್ತು ಅಗತ್ಯ ಸಾಮಗ್ರಿಗಳನ್ನು ವಿತರಿಸಿವೆ. ಶ್ರೀಮಠದ ಭಾರತೀಯ ಗೋ ಪರಿವಾರ ಟ್ರಸ್ಟ್ ವತಿಯಿಂದ ಅಧ್ಯಕ್ಷ ಆರ್.ಕೆ.ಬೆಳ್ಳಾರೆಯವರ ನೇತೃತ್ವದಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ […]

Continue Reading

ಶ್ರೀ ರಾಮಚಂದ್ರಾಪುರ ಮಠದಿಂದ ಕಿಟ್ ವಿತರಣೆ

ಶ್ರೀ ರಾಮಚಂದ್ರಾಪುರ ಮಠ ಹೊಸನಗರ ವತಿಯಿಂದ ಕೊರೋನಾ ಲಾಕ್ ಡೌನ್ ಹಿನ್ನಲೆಯಲ್ಲಿ ಸಂಕಷ್ಟಕ್ಕೊಳಗಾದ ದಿನಗೂಲಿಯಿಂದ ಜೀವನ ನಡೆಸುವ ೪೮ ಕುಟುಂಬಗಳಿಗೆ ಅಕ್ಕಿ, ಬೇಳೆಕಾಳು, ಬೆಲ್ಲ, ಉಪ್ಪು ಸೇರಿದ ಕಿಟ್ ವಿತರಣೆಯನ್ನು ರಾಮಚಂದ್ರಾಪುರ ಗ್ರಾಮಪಂಚಾಯತಿ ಮುಖಾಂತರ ಶಾಸಕ ಆರಗ ಜ್ಞಾನೇಂದ್ರ ಅವರು ಮಾಡಿದರು. ನಿರ್ವಹಣಾ ಸಮಿತಿ ಅಧ್ಯಕ್ಷ ಜಟ್ಟಿಮನೆ ಗಣಪತಿ, ವ್ಯವಸ್ಥಾಪಕ ರಾಘವೇಂದ್ರಮಧ್ಯಸ್ಥ, ಮಾಧ್ಯಮ ಸಂಚಾಲಕ ಒಡ್ಡಿನಭೈಲು ವೆಂಟೇಶ, ಜಿಲ್ಲಾ ಪಂಚಾಯತಿ ಸದಸ್ಯ ಸುರೇಶಸ್ವಾಮಿರಾವ್, ತಾಲೂಕು ಪಂಚಾಯಿತಿ ಸದಸ್ಯ ಚಂದ್ರಮೌಳಿ, ಗ್ರಾಮಪಂಚಾಯತಿ ಅಧ್ಯಕ್ಷರು, ಸದಸ್ಯರು, ಪಿ ಡಿ ಓ […]

Continue Reading

ಅಕ್ಷಯ ತೃತೀಯೆಯ ಶುಭ ದಿನದಂದು ಸುವರ್ಣ ನಾಣ್ಯಾಭಿಷೇಕ

ಸಂಸ್ಥಾನ ಶ್ರೀಮಹಾಬಲೇಶ್ವರ ದೇವಾಲಯದಲ್ಲಿ ಅಕ್ಷಯ ತೃತೀಯೆಯ ಶುಭ ದಿನದಂದು ಲೋಕಕಲ್ಯಾಣದ ಸಂಕಲ್ಪದಿಂದ ಪರಮಪೂಜ್ಯ ಜಗದ್ಗುರುಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ಮಾರ್ಗದರ್ಶನದಂತೆ ಸುವರ್ಣ ನಾಣ್ಯಾಭಿಷೇಕ ಮಾಡಲಾಯಿತು. ಶ್ರೀಕ್ಷೇತ್ರ ಗೋಕರ್ಣದ ಉಪಾಧಿವಂತ ಮಂಡಲದವರು ಶತರುದ್ರ ಹೋಮವನ್ನು ನೆರೆವೇರಿಸಿದರು. ವೇ. ವಿ. ಸಾಂಬಾ ಭಟ್ ಷಡಕ್ಷರಿ ಪೂಜಾ ಕೈಂಕರ್ಯ ನೆರವೇರಿಸಿದರು. ಜಗತ್ತಿಗೆ ಬಂದ ಅತ್ಯಂತ ಹೆಮ್ಮಾರಿ ರೋಗವಾದ ಕರೋನಾ ನಿವಾರಣೆಯಾಗಲೆಂದು ಜಗದೀಶ್ವರನಲ್ಲಿ ಪ್ರಾರ್ಥಿಸಿಲಾಯಿತು.

Continue Reading

ಮಂಗನಕಾಯಿಲೆ ಶಾಶ್ವತ ಪರಿಹಾರಕ್ಕೆ ರಾಘವೇಶ್ವರ ಶ್ರೀ ಒತ್ತಾಯ

ಗೋಕರ್ಣ: ವಿಶ್ವದಲ್ಲಿ ಕೊರೋನಾ ಅಟ್ಟಹಾಸದ ನಡುವೆಯೇ ರಾಜ್ಯದ ಮಲೆನಾಡು ಭಾಗದಲ್ಲಿ ಹಾಗೂ ನೆರೆ ರಾಜ್ಯಗಳ ಕೆಲವೆಡೆ ಮಂಗನ ಕಾಯಿಲೆ ವ್ಯಾಪಕವಾಗಿ ಹರಡಿದ್ದು, ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಶ್ರೀ ರಾಮಚಂದ್ರಾಪುರ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಸ್ವಾಮೀಜಿಯವರು ಒತ್ತಾಯಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ, ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ, ಕೊಪ್ಪ ತಾಲೂಕುಗಳಲ್ಲಿ ಈ ಸಾಂಕ್ರಾಮಿಕ ವ್ಯಾಪಕವಾಗಿ ಹರಡಿದ್ದು, 250ಕ್ಕೂ ಹೆಚ್ಚು ಮಂದಿಗೆ ಸೊಂಕು ತಗುಲಿದೆ. […]

Continue Reading

ಧರ್ಮಭಾರತೀ ಎಪ್ರಿಲ್ 2020 ಪತ್ರಿಕೆ

      ಸಸ್ನೇಹ ವಂದನೆಗಳು ದೇಶದೆಲ್ಲೆಡೆ ಹರಡುತ್ತಿರುವ ಕೊರೊನಾ ಮಹಾಮಾರಿಯ ತಡೆಗಟ್ಟುವಿಕೆಗೆ ಮಾನ್ಯ ಪ್ರಧಾನಮಂತ್ರಿಯವರ ಆದೇಶದಂತೆ ದೇಶದಲ್ಲಿ 21 ದಿನ lockdown ಮಾಡಿರುವುದು ನಮಗೆಲ್ಲ ಗೊತ್ತಿರುವ ವಿಚಾರ. ಈ ಸಂದರ್ಭದಲ್ಲಿ ಧರ್ಮಭಾರತೀ ಎಪ್ರಿಲ್ 2020 ಸಂಚಿಕೆಯು ತಮ್ಮ ಮನೆಗಳಿಗೆ ತಲುಪುವಲ್ಲಿ ವಿಳಂಬವಾದೀತೆಂಬ ಎಂಬ ವಿಚಾರ ಈಗಾಗಲೇ ನಮಗೆಲ್ಲ ತಿಳಿದಿದೆ. ಅಂದರೂ, ಸಕ್ರಿಯ ಓದುಗರನ್ನು ಸಕಾಲದಲ್ಲಿ ತಲುಪುವ ಉದ್ದೇಶದಲ್ಲಿ ಧರ್ಮಭಾರತೀ ಎಪ್ರಿಲ್ ಸಂಚಿಕೆಯ ಲೇಖನಗಳನ್ನು ಮೃದುಪ್ರತಿ (soft copy) ರೂಪದಲ್ಲಿ ಹಂಚಲಿದ್ದೇವೆ. ಅಂಚೆ ವ್ಯವಸ್ಥೆ ಪುನಃ ಕಾರ್ಯಾಚರಿಸಲು […]

Continue Reading

ರಾಮನವಮಿಯ ಚಿತ್ರಗಳು

ಮಹಾಮಾರಿ ಕರೊನಾ ಹಿನ್ನಲೆಯಲ್ಲಿ ಮನೆಯಲ್ಲಿ ಇರಬೇಕಾದ ಪರಿಸ್ಥಿತಿಯಲ್ಲಿ ರಾಮನವಮಿಯನ್ನು ಚಿತ್ರ ಬಿಡಿಸುವ ಮೂಲಕ ವಿಭಿನ್ನವಾಗಿ ಆಚರಿಸಿದರು. ಸಿದ್ದಾಪುರ ನಿವಾಸಿ ರಾಮಕೃಷ್ಣ ಹೆಗಡೆ ಮತ್ತು ರೇಖ ಆರ್ ಹೆಗಡೆ ದಂಪತಿಗಳ ಪುತ್ರ ರವೀಂದ್ರ ಆರ್. ಹೆಗಡೆ ರಾಮಸೇತು ನಿರ್ಮಾಣದ ಸಮಯ ಅಳಿಲು ಜೊತೆಗೆ ಶ್ರೀರಾಮನ ಚಿತ್ರ ಬಿಡಿಸಿದರು. ಪೆಲತ್ತಡಿ ನಿವಾಸಿ ಗೋಪಾಲಕೃಷ್ಣ ಭಟ್ ಮತ್ತು ಸೌಮ್ಯ ಪ್ರಭಾ ದಂಪತಿಗಳ ಪುತ್ರಿ ೯ನೇ ತರಗತಿಯ ಶ್ರೀಲಕ್ಷ್ಮೀ ರಾಮನ ಚಿತ್ರ ಹಾಗೂ ಶ್ರೀರಾಮ ಹನುಮನ ಚಿತ್ರವನ್ನು ಬಿಡಿಸಿದರು.

Continue Reading

ಬಜಕೂಡ್ಲು ಅಮೃತಧಾರಾ ಗೋಶಾಲೆಯಲ್ಲಿ ಶ್ರೀ ಗೋಪಾಲಕೃಷ್ಣ ಪೂಜೆ, ಗೋಪೂಜೆ, ಭಜನೆ

ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಪುಣ್ಯ ಯೋಜನೆ ಕಾಮದುಘಾದಡಿಯಲ್ಲಿ ಕಾರ್ಯಚರಿಸುತ್ತಿರುವ ಬಜಕೂಡ್ಲು ಅಮೃತಧಾರಾ ಗೋಶಾಲೆಯ ಶ್ರೀ ಗೋವರ್ಧನ ಧರ್ಮಮಂದಿರದಲ್ಲಿ ಪ್ರತಿ ತಿಂಗಳ ಕೃಷ್ಣ ಪಕ್ಷದ ಅಷ್ಟಮಿಯಂದು ಜರಗುವ ಗೋಪೂಜೆ, ಗೋಪಾಲಕೃಷ್ಣ ಪೂಜೆ ಹಾಗೂ ಭಜನೆ ಸೋಮವಾರ ಸಾಯಂಕಾಲ ೬ ರಿಂದ ವೇ. ಮೂ. ಕೃಷ್ಣ ಭಟ್ಟ ಗುಂಡ್ಯಡ್ಕ ಇವರ ನೇತೃತ್ವದಲ್ಲಿ ಜರಗಿತು. ಮಹಾಲಿಂಗೇಶ್ವರ ಭಜನಾ ಮಂಡಳಿ ಬಜಕೂಡ್ಲು ಇವರಿಂದ ಭಜನಾ ಸೇವೆಯು ಈ ಸಂಧರ್ಭದಲ್ಲಿ ಜರಗಿತು.

Continue Reading

ವಿಜಾಪುರದ ಗೋರಕ್ಷಾ ಕೇಂದ್ರ ಗೋಶಾಲೆಯ ಹಿರಿಯ ಮುಖಂಡರ ಬೇಟಿ

ಹೊಸಾಡ ಅಮೃತಧಾರಾ ಗೋಶಾಲೆಗೆ ವಿಜಾಪುರದ ಗೋರಕ್ಷಾ ಕೇಂದ್ರ ಗೋಶಾಲೆಯ ಹಿರಿಯ ಮುಖಂಡರು ಆಗಮಿಸಿ ಗೋಶಾಲೆಯನ್ನು ವೀಕ್ಷಿಸಿದರು. ಅಪಘಾತಕ್ಕೊಳಗಾದ, ಮುದಿ ವಯಸ್ಸಿನ ಮತ್ತು ಕಸಾಯಿಖಾನೆಗೆ ಹೋಗುವ ಗೋವುಗಳನ್ನು ಸಂರಕ್ಷಿಸುತ್ತಿರುವ ಗೋಪಾಲಕರನ್ನು ಮತ್ತು ನಿರ್ವಹಿಸುತ್ತಿರುವ ಸಂಸ್ಥೆಯ ಸೇವೆಯನ್ನು ಶ್ಲಾಘಿಸಿದರು. ವಿಜಾಪುರದ ಗೋ ರಕ್ಷಾ ಕೇಂದ್ರ ಗೋಶಾಲೆಯಲ್ಲಿ ೬೫೦ ಕ್ಕೂ ಹೆಚ್ಚಿನ ಗೋವುಗಳನ್ನು ಸಂರಕ್ಷಿಸಲಾಗುತ್ತಿದ್ದು, ನಾಲ್ಕೈದು ಸಂಸ್ಥೆಗಳು ಸೇರಿ ಈ ಗೋಶಾಲೆಯನ್ನು ನಡೆಸುತ್ತಿದ್ದೇವೆ ರಾಮನ ಗೌಡ ಬಾಪು ಗೌಡ ಪಾಟೀಲ್ ಯತ್ನಾಳ ಅವರಿಂದ ಈ ಸಂಸ್ಥೆ ಸ್ಥಾಪನೆಯಾಗಿದೆ. ಪ್ರತಿ ತಿಂಗಳು ೭ […]

Continue Reading

ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ

ಮಹಾನಂದಿ ಗೋಲೋಕದಲ್ಲಿ ವಿರಾಜಮಾನನಾಗಿರುವ ಗೋವರ್ಧನಗಿರಿಧಾರಿ ಶ್ರೀಗೋಪಾಲಕೃಷ್ಣನ ಸನ್ನಿಧಿಯಲ್ಲಿ ಪ್ರತೀ ಹುಣ್ಣಿಮೆಯಂದು ಸಂಪನ್ನಗೊಳ್ಳುವ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ ಕಥಾವಾಚನ ನಡೆದಿರುತ್ತದೆ. ೬ನೇ ತಿಂಗಳಿನ ಈ ಪೂಜಾ ಕಾರ್ಯಕ್ರಮವನ್ನು ಪ್ರಧಾನ ಅರ್ಚಕರಾದ ವೇದಮೂರ್ತಿ ಸತೀಶ್ ಭಟ್ ರವರು ವಿಧ್ಯಾರ್ಥಿಗಳಾದ ಭರತ ಹಾಗೂ ಶ್ರೀಹರ್ಷ ಇವರೊಂದಿಗೆ ಸಾಂಗವಾಗಿ ನೆರವೇರಿಸಿಕೊಟ್ಟರು. ಶಿವಮೊಗ್ಗದ ಗುರುರಾಜ್ (ನೆಪ್ಚೂನ್) ದಂಪತಿಗಳ ಯಾಜಮಾನತ್ವದಲ್ಲಿ ನಡೆದಿರುತ್ತದೆ. ಸಮಿತಿಯ ಸದಸ್ಯರುಗಳಾದ ಮಳಲಿ ಅನಂತ ಭಟ್, ಶಂಕರನಾರಾಯಣ ಮಾಗಲು, ಶಂಕರ್ ಭಟ್ ಕಣಿವೆಬಾಗಿಲು, ನೆಲ್ಲುಂಡೆ ನಾಗೇಂದ್ರರಾಯರು ಇವರುಗಳೊಂದಿಗೆ ಗೋಲೋಕದ ಸಿಬ್ಬಂದಿಗಳು, ಗೋಪಾಲಕರು, ಶ್ರೀಮಠದ […]

Continue Reading