ಡಿ.15ರಿಂದ ಡಿ.21 : ಕಂಬಳಬೆಟ್ಟು ಶಾಲೆಯಲ್ಲಿ ವಾರ್ಷಿಕ ವಿಶೇಷ ಶಿಬಿರ

ನಂತೂರು : ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆ ಆಡಳಿತಕ್ಕೊಳಪಟ್ಟಿರುವ ಶ್ರೀ ಭಾರತೀ ಪದವಿ ಕಾಲೇಜು ಎನ್ನೆಸ್ಸೆಸ್ ಘಟಕದ ವಾರ್ಷಿಕ ವಿಶೇಷ ಶಿಬಿರವು ವಿಟ್ಲ ಸಮೀಪದ ಕಂಬಳಬೆಟ್ಟು ದ.ಕ.ಜಿ.ಪಂ.ಉ.ಹಿ. ಪ್ರಾ. ಶಾಲೆಯಲ್ಲಿ ಡಿ.15ರಿಂದ ಡಿ.21ರ ವರೆಗೆ ನಡೆಯಲಿದೆ. ಡಿ.15ರಂದು ಸಂಜೆ ಗಂಟೆ 4.30ಕ್ಕೆ ಧರ್ಮನಗರ ಸೇವಾ ವಿಶ್ವಸ್ಥ ಮಂಡಳಿಯ ಸಂಚಾಲಕ ಕೆ.ಟಿ.ವೆಂಕಟೇಶ್ವರ ಭಟ್ ನೂಜಿ ಉದ್ಘಾಟಿಸುತ್ತಾರೆ. ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆ ಅಧ್ಯಕ್ಷ ಹಾರಕರೆ ನಾರಾಯಣ […]

Continue Reading

ಹೊಸಾಡ ಗೋಶಾಲೆಗೆ ಕೆಂಗೇರಿ ಶ್ರೀ ಬೇಟಿ

ಹೊಸಾಡ: ಬೆಳಗಾವಿ ಸೌಬತ್ತಿ ಮುರಗೋಡ ಶ್ರೀ ಕ್ಷೇತ್ರ ಕೆಂಗೇರಿ ಶ್ರೀ ಪೂಜ್ಯ ದಿವಾಕರ ದೀಕ್ಷಿತ ಗುರುಮಹಾರಾಜರು ಗುರುವಾರ ಹೊಸಾಡ ಅಮೃತಧಾರ ಗೋಶಾಲೆಗೆ ಭೇಟಿ ನೀಡಿದರು. ಸಾವಿನ ಮನೆಯ ಕದ ತಟ್ಟಿ ಬಂದ, ಅನಾಥವಾದ, ವೃದ್ಧ ಹಾಗೂ ಅಪಘಾತಕ್ಕೀಡಾದ ಗೋವುಗಳನ್ನು ಸಲಹುತ್ತಿರುವ ಹೊಸಾಡ ಗೋಶಾಲೆಯು ಗಾವೋ ವಿಶ್ವಸ್ಯ ಮಾತರಃ ಎಂಬ ವಾಕ್ಯಕ್ಕೆ ಸೂಕ್ತವಾದ ಸ್ಥಳ ಎಂದು ಹೇಳಿದಾಗ ನಿಜಕ್ಕೂ ಭಾವುಕರಾದೆವು. ಗೋಶಾಲೆಯನ್ನು ಮಾಡಲು ಬೇಕಾದ ಉಪಯುಕ್ತ ಮಾಹಿತಿಯನ್ನು ಕೇಳಿದರು. ಮೊದಲಿಗೆ ಕಾಮಧೇನುವಿಗೆ ಪೂಜೆಯನ್ನು ಅರ್ಪಿಸಿ, ಗೋವುಗಳಿಗೆ ಗೋಗ್ರಾಸವನ್ನು ನೀಡಿ […]

Continue Reading

ಗೋಲೋಕಕ್ಕೆ ಪ್ರಮಾಣ ಪತ್ರ

ಗೋಲೋಕ: ಕರ್ನಾಟಕ ಸರಕಾರದಿಂದ ಮಾಹಾನಂದಿ ಗೋಲೋಕಕ್ಕೆ ದೊರೆತಂತಹ ಪ್ರಮಾಣ ಪತ್ರವನ್ನು ಪಶು ಸಂಗೋಪನಾ ಸಚಿವರಾದ ಪ್ರಭು ಚೌಹಾಣ್ ಇವರಿಂದ ಗೋಲೋಕದ ಅಧ್ಯಕ್ಷರಾದ ಡಾಕ್ಟರ್ ಸೀತಾರಾಮ ಪ್ರಸಾದ್ ಹಾಗೂ ಕಾರ್ಯದರ್ಶಿ ಕೃಷ್ಣ ಪ್ರಸಾದ್ ಎಡಪ್ಪಾಡಿ ಅವರು ಸ್ವೀಕರಿಸಿದರು.

Continue Reading

ಹೊಸಾಡಕ್ಕೆ ಪ್ರಮಾಣ ಪತ್ರ

ಹೊಸಾಡ: ಕರ್ನಾಟಕ ಸರ್ಕಾರದಿಂದ ಹೊಸಾಡ ಅಮ್ರತಧಾರಾ ಗೋಶಾಲೆಗೆ ಪಶುಸಂಗೋಪನಾ ಸಚಿವರಾದ ಪ್ರಭು ಚಹ್ವಾಣ್ ಅವರಿಂದ ಗೋಶಾಲೆಯ ಪರವಾಗಿ ವಿನಾಯಕ ಎಸ್. ಭಟ್ ಅವರು ಪ್ರಮಾಣ ಪತ್ರ ವನ್ನು ಸ್ವೀಕರಿಸಿದರು.

Continue Reading

ಮಾತೃತ್ವಮ್ ಒಣಹುಲ್ಲು ಸಮರ್ಪಣೆ

ಜೇಡ್ಲ: ಗೋಪಾಲಕೃಷ್ಣ ದೇವಕಿ ಪಶುಸಂಗೋಪನಾ ಕೇಂದ್ರಕ್ಕೆ ಮಾತೃತ್ವಮ್ ವತಿಯಿಂದ ಒಣಹುಲ್ಲು ಸಮರ್ಪಣೆ ಮಾಡಲಾಗಿದೆ. ಬೆಲ್ಲ, ಹಿಂಡಿ ನೀಡಿ ಅರಸಿನ ಕುಂಕುಮ ಹಚ್ಚಿ ಆರತಿಯೊಂದಿಗೆ ಗೋಪೂಜೆ ಮಾಡಿ ಮಾತೆಯರು ಸಂಭ್ರಮಿಸಿದರು. ಕಾಮದುಘಾ ಸಂಚಾಲಕ ಡಾ.ವೈ.ವಿ.ಕೃಷ್ಣಮೂರ್ತಿ, ಗೋಶಾಲೆ ಶ್ರೀಸಂಯೋಜಕ ತಿರುಮಲ ಪ್ರಸನ್ನ, ಗೋಶಾಲೆ ಸಮಿತಿಯ ಅಧ್ಯಕ್ಷರಾದ ಪ್ರೊಫೆಸರ್ ಶ್ರೀಕೃಷ್ಣ ಭಟ್ ತೆಕ್ಕೆಕೆರೆ, ಮಂಗಳೂರು ಪ್ರಾಂತ ಮಾತೃತ್ವಮ್ ಅಧಕ್ಷೆ ಸುಮಾ ರಮೇಶ್, ಕಾಸರಗೋಡು ನಗರ ಮಾತೃತ್ವಮ್ ಅಧಕ್ಷೆ ಕುಸುಮಾ ಪೆರುಮುಖ,ಕಾರ್ಯದರ್ಶಿ ಗೀತಾ ಅನಘ ಮತ್ತು ಮಾಸದ ಮಾತೆಯರು ಹಾಜರಿದ್ದರು.

Continue Reading

ಮಾತೃತ್ತಮ್ ನಿಂದ ಮೇವು ವಿತರಣೆ

ಹೊಸಾಡ: ಶ್ರೀರಾಮಚಂದ್ರಾಪುರ ಮಠದ ಮಾತೃತ್ತಮ್ ಮಹಿಳಾ ಸಂಘಟನೆಯಿಂದ ಬುಧವಾರ ಹೊಸಾಡಿನ ಅಮೃತಧಾರ ಗೋಶಾಲೆ ಗೋವುಗಳಿಗೆ ೫ ಲೋಡ್ ಮೇವನ್ನು ವಿತರಿಸಲಾಯಿತು. ಸಂಜೆ ಕಾಮಧೇನುವಿಗೆ ಪೂಜೆಯನ್ನು ಅರ್ಪಸಿದ ಮಾತೆಯರು ನಂತರ ಗೋಮಾತೆಗೆ ಮೇವನ್ನು ನೀಡಿದರು. ಗೋಮಾತೆಯೊಂದಿಗೆ ನಾವೀದ್ದೇವೆ ಎನ್ನುವ ಸ್ಪಷ್ಟ ಸಂದೇಶವನ್ನು ಸಮಾಜಕ್ಕೆ ನೀಡಿದರು. ಈಸಂದರ್ಭದಲ್ಲಿ ಗೋಶಾಲೆಯ ಆಡಳಿತ ಮಂಡಳಿಯವರು ಮತ್ತು ಹೋನ್ನವರ ಕುಮಟಾದ ಮಂಡಲದ ಮಾತೃತ್ತಮ್ ವಿಭಾಗ ಪದಾಧಿಕಾರಿಗಳು ಉಪಸ್ಥಿತರಿದ್ದರು.

Continue Reading

ಗೋಸ್ವರ್ಗಕ್ಕೆ ಭೇಟಿ

ಗೋಸ್ವರ್ಗ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಶ್ರೀ ಕೆ.ಎನ್ ವೆಂಕಟನಾರಾಯಣ ಮತ್ತು ಪದಾಧಿಕಾರಿಗಳು ಗೋಸ್ವರ್ಗಕ್ಕೆ ಭೇಟಿ ನೀಡಿದ್ದರು. ಗೋವುಗಳ ವೀಕ್ಷಣೆ ಮಾಡಿ ಸಂಪೂರ್ಣ ಮಾಹಿತಿ ಪಡೆದರು. ಗೋಸ್ವರ್ಗದ ಪರಿಕಲ್ಪನೆ ಹಾಗೂ ಇಲ್ಲಿನ ವ್ಯವಸ್ಥೆಗಳ ಕುರಿತು ಹರ್ಷ ವ್ಯಕ್ತಪಡಿಸಿದರು. ಗೋಸ್ವಾದು ಮಳಿಗೆಯಲ್ಲಿ ಹಾಲಿನ ಉತ್ಪನ್ನಗಳನ್ನು ಸವಿದು ಸಂತಸಗೊಂಡರು. ಗೋಸ್ವರ್ಗಕ್ಕೆ ಮಹಾಸಭಾದಿಂದ ಹೆಚ್ಚಿನ ಸಹಕಾರ, ದಾನಿಗಳಿಂದ ಸಹಾಯ ಕೊಡಿಸುವ ಮೂಲಕ ಗೋರಕ್ಷಣಾಕಾರ್ಯದಲ್ಲಿ ಕೈಜೋಡಿಸುವ ಭರವಸೆ ನೀಡಿದರು.

Continue Reading

ಮಾತೃತ್ವಮ್ ವತಿಯಿಂದ ಗೋಆಶ್ರಮಕ್ಕೆ ಒಣಮೇವು ಸಮರ್ಪಣೆ

ಮಾಲೂರು: ಶ್ರೀ ರಾಘವೇಂದ್ರ ಗೋ ಆಶ್ರಮಕ್ಕೆ ಶ್ರೀಮಠದ ಮಾತೃತ್ವಮ್ ವತಿಯಿಂದ ಎರಡು(ಐದು ಲೋಡ್ ನಲ್ಲಿ) ಲೋಡ್ ಒಣಹುಲ್ಲನ್ನು ಸಮರ್ಪಣೆ ಮಾಡಿದರು. ಸುಮಾರು ಇಪ್ಪತ್ತಕ್ಕೂ ಹೆಚ್ಚು ಮಾಸದ ಮಾತೆಯರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು ಗೋ ಆಶ್ರಮದ ವಿಶೇಷ ಕರ್ತವ್ಯಾಧಿಕಾರಿ ರಾಮಚಂದ್ರ ಅಜ್ಜಕಾನ ಅವರಿಗೆ ಸಾಂಕೇತಿಕವಾಗಿ ಮೇವು ಹಸ್ತಾಂತರಿಸಲಾಯಿತು. ಇದಕ್ಕೂ ಮೊದಲು ಮಾತೆಯರು ಶ್ರೀ ಸಿದ್ಧಾಂಜನೇಯ ಸ್ವಾಮಿಯ ಸನ್ನಿಧಿಯಲ್ಲಿ ಹನುಮಾನ್ ಚಾಲೀಸಾ ಪಠಿಸಿದರು. ನಂತರ ಗೋಪೂಜೆಯನ್ನು ನೆರವೇರಿಸಿದರು. ಗೋಆಶ್ರಮದ ವತಿಯಿಂದ ಅಮೃತಾನ್ನ ಪ್ರಸಾದ ನೀಡಲಾಯಿತು. ಮಾತೃತ್ವಮ್ ಅಧ್ಯಕ್ಷೆ ಈಶ್ವರೀ ಬೇರ್ಕಡವು, […]

Continue Reading

ಸಾಮೂಹಿಕ ಭಗವದ್ಗೀತೆ ಪಾರಾಯಣ

ಗೋಲೋಕ: ಹೊಸನಗರ ಮಹಾನಂದಿ ಗೋಲೋಕದಲ್ಲಿ ಡಿ.೭ರಂದು ಗೀತಾಜಯಂತಿಯ ಅಂಗವಾಗಿ ಗೋವರ್ಧನಗಿರಿಧಾರಿ ಶ್ರೀಗೋಪಾಲಕೃಷ್ಣನ ಸನ್ನಿಧಿಯಲ್ಲಿ ಸಾಮೂಹಿಕ ಭಗವದ್ಗೀತೆ ಪಾರಾಯಣ ಸಂಪನ್ನಗೊಂಡಿದೆ. ಬೆಳಿಗ್ಗೆ ೯-೩೦ಕ್ಕೆ ಪ್ರಾರಂಭವಾದ ಪಾರಾಯಣ ಅಪರಾಹ್ನ ೧೨-೩೦ ರವರೆಗೆ ನೆರವೇರಿದೆ. ಪುರುಷ ಮತ್ತು ಮಹಿಳೆಯರು ಭಾಗವಹಿಸಿದ್ದ ಈ ಕಾರ್ಯಕ್ರಮದ ನೇತೃತ್ವವನ್ನು ವಿದ್ವಾನ್ ಶೇಷಗಿರಿ ಭಟ್ ರವರು ವಹಿಸಿದ್ದರು. ನಂತರ ಶ್ರೀಕೃಷ್ಣನಿಗೆ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ಶ್ರೀಮಠದಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಬ್ರಾಹ್ಮಣಸಭಾ ಅಧ್ಯಕ್ಷರಾದ ಡಾ. ರಾಮಚಂದ್ರರಾವ್ ಹಿರಿಯರಾದ ಶ್ರೀಧರ ಉಡುಪ ಮುಂತಾದವರು ಉಪಸ್ಥಿತರಿದ್ದರು.

Continue Reading

ಮಣ್ಣಿನ ಸವಕಳಿ ತಪ್ಪಿಸುವ ಕಾರ್ಯವಾಗಬೇಕು – ಉಪಕುಲಪತಿ ಡಾ. ಇಂದ್ರೇಶ್

ಗೋಸ್ವರ್ಗ: ಮಣ್ಣಿನ ಸಂರಕ್ಷಣೆಯ ಬಗ್ಗೆ ರೈತರು ಹೆಚ್ಚಿನ ಮಹತ್ವ ನೀಡಿದಾಗ ಕೃಷಿಯಲ್ಲಿ ಯಶಸ್ಸು ಪಡೆಯಬಹುದು. ಅನಾವೃಷ್ಠಿ ಅತೀವೃಷ್ಠಿಯಿಂದ ಮಣ್ಣಿನ ಫಲವತ್ತತೆ ಹಾಳಾಗುತ್ತಿದೆ. ಮಣ್ಣಿನ ಸವಕಳಿ ತಪ್ಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳು ನಡೆಯಬೇಕಾಗಿದೆ. ಹಿಂದೆ ಪ್ರತಿ ಗ್ರಾಮಗಳಲ್ಲಿ ಗೋಮಾಳಗಳಿತ್ತು. ಬೆಳೆಯುತ್ತಿರುವ ಪಟ್ಟಣ – ಕಾರ್ಖಾನೆಗಳಿಂದ ವಾತಾವರಣ ಹಾಳಾಗುತ್ತಿದೆ. ಪರಿಸರ ಸಂರಕ್ಷಣೆಯ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸುವ ಅನಿವಾರ್ಯತೆ ಇದೆ ಎಂದು ಬಾಗಲಕೋಟೆ ತೋಟಗಾರಿಕೆ ವಿಶ್ವ ವಿದ್ಯಾಲಯದ ಉಪಕುಲಪತಿ ಡಾ. ಇಂದ್ರೇಶ್ ಹೇಳಿದರು. ಗೋಸ್ವರ್ಗದಲ್ಲಿ ಶ್ರೀರಾಮಚಂದ್ರಾಪುರಮಠ, ಶಿರಸಿ ತೋಟಗಾರಿಕೆ ಮಹಾವಿದ್ಯಾಲಯ, ಬಾಗಲಕೋಟೆ […]

Continue Reading

ಹಣವಂತರು ರೈತರನ್ನು ದತ್ತು ತೆಗೆದುಕೊಳ್ಳುವ ಕಾರ್ಯ ಮಾಡಲಿ – ಸಾವಯವ ಕೃಷಿಕ ವಿಶ್ವೇಶ್ವರ ಸಜ್ಜನ್

ಗೋಸ್ವರ್ಗ: ಪ್ರಕೃತಿಯನ್ನು ಅರ್ಥಮಾಡಿಕೊಂಡು ಕೃಷಿ ಮಾಡುವ ಕಾರ್ಯ ಮಾಡಬೇಕು. ವಿದ್ಯಾರ್ಥಿಗಳಿಗೆ ದೇಸಿ ಮಣ್ಣಿನ ಸೊಗಡನ್ನು ಅರಿತುಕೊಳ್ಳಬೇಕು. ಪ್ರಶ್ನೆಯ ಜತೆಗೆ ಕ್ರಿಯೆ ಇದ್ದಾಗ ಕೃಷಿಯಲ್ಲಿ ಯಶಸ್ಸು ಕಾಣಬಹುದು. ಜ್ಞಾನಿಗಳು ಕೃಷಿ ಕ್ಷೇತ್ರದ ಕಡೆಗೆ ಒಲವು ತೋರಿಸಬೇಕು. ವಾರಾಂತ್ಯದ ಕಾರ್ಯಕ್ರಮಗಳನ್ನು ರೆಸಾರ್ಟ್ ನಲ್ಲಿ ಕಳೆಯುವ ಬದಲು ರೈತರ ಮನೆಗಳಲ್ಲಿ ಆಚರಣೆ ಮಾಡುವಂತಾಗಲಿ. ಹಣವಂತರು ರೈತರನ್ನು ದತ್ತು ತೆಗೆದುಕೊಳ್ಳುವ ಕಾರ್ಯವಾದಾಗ ಕೃಷಿ ಮುಂದೆ ಬರಲು ಸಾಧ್ಯ ಎಂದು ಸಾವಯವ ಕೃಷಿಕ ವಿಶ್ವೇಶ್ವರ ಸಜ್ಜನ್ ಹೇಳಿದರು. ಗೋಸ್ವರ್ಗದಲ್ಲಿ ಶ್ರೀರಾಮಚಂದ್ರಾಪುರಮಠ, ಶಿರಸಿ ತೋಟಗಾರಿಕೆ ಮಹಾವಿದ್ಯಾಲಯ, […]

Continue Reading

ರಾಸಾಯನಿಕಗಳಿಂದ ಮಣ್ಣಿನ ಅಗತ್ಯ ಗುಣಗಳು ನಾಶ – ಡಾ. ಎ. ಬಿ. ಪಾಟೀಲ್

ಗೋಸ್ವರ್ಗ: ರೈತರು ಸ್ಪರ್ಶದ ಮೂಲಕವೇ ಫಲವತ್ತೆಯನ್ನು ಅಳೆಯುತ್ತಿದ್ದರು. ರಾಸಾಯನಿಕಗಳಿಂದ ಮಣ್ಣಿನ ಅಗತ್ಯ ಗುಣಗಳು ನಾಶವಾಗುತ್ತಿದೆ. ಸಾವಯವ ಕೃಷಿಯನ್ನು ಬಲವರ್ಧನೆ ಮಾಡುವ ನಿಟ್ಟಿನಲ್ಲಿ ಗೋಆಧಾರಿತ ಕೃಷಿ ಸಹಕಾರಿ ಯಾಗಿದೆ. ಕೈಗಾರಿಕೀಕರಣಗಳಿಂದ ಕೃಷಿ ಕಾರ್ಯಗಳು ಕಡಿಮೆಯಾಗುತ್ತಿದೆ. ಪಕೃತಿ ವಿಕೋಪಗಳನ್ನು ತಡೆಯುವ ನಿಟ್ಟಿನಲ್ಲಿ ಮಣ್ಣಿನ ಫಲವತ್ತತೆಯನ್ನು ಕಾಪಾಡಬೇಕಾಗಿದೆ. ಆಧ್ಯಾತ್ಮಿಕ ಕೃಷಿಯ ಜತೆಗೆ ಎಲ್ಲಾ ವಿಜ್ಞಾನಿಗಳು ಕೈಜೋಡಿಸಬೇಕು ಎಂದು ಡಾ. ಎ. ಬಿ. ಪಾಟೀಲ್ ಹೇಳಿದರು. ವಿಶ್ವಮಣ್ಣಿನ ದಿನಾಚರಣೆ ಅಂಗವಾಗಿ ಶ್ರೀ ರಾಮಚಂದ್ರಾಪುರ ಮಠ, ಬಾಗಲಕೋಟೆ ತೋಟಗಾರಿಕೆ ವಿವಿ ಮತ್ತು ಶಿರಸಿ ಕೃಷಿ […]

Continue Reading

ಗೋ ಆಧರಿತ ಪದ್ಧತಿಯಿಂದಷ್ಟೇ ಕೃಷಿ ಪುನರುತ್ಥಾನ – ಕೃಷಿತಜ್ಞ ಎಸ್.ಎ.ಪಾಟೀಲ

ಗೋಸ್ವರ್ಗ (ಸಿದ್ದಾಪುರ): ದೇಶದಲ್ಲಿ ಕೃಷಿಯ ಪುನರುತ್ಥಾನಕ್ಕೆ ಗೋ ಆಧರಿತ ಕೃಷಿ ಅಗತ್ಯ. ಇದಕ್ಕೆ ಮಾನಸಿಕವಾಗಿ ವಿಜ್ಞಾನಿಗಳಲ್ಲೇ ಪರಿವರ್ತನೆ ಬರಬೇಕು ಎಂದು ನವದೆಹಲಿಯ ರಾಷ್ಟ್ರೀಯ ಕೃಷಿ ಸಂಶೋಧನಾ ಸಂಸ್ಥೆಯ ಮಾಜಿ ಮುಖ್ಯಸ್ಥ ಡಾ.ಎಸ್.ಎ.ಪಾಟೀಲ್ ಅಭಿಪ್ರಾಯಪಟ್ಟರು. ವಿಶ್ವಮಣ್ಣಿನ ದಿನಾಚರಣೆ ಅಂಗವಾಗಿ ಶ್ರೀ ರಾಮಚಂದ್ರಾಪುರ ಮಠ, ಬಾಗಲಕೋಟೆ ತೋಟಗಾರಿಕೆ ವಿವಿ ಮತ್ತು ಶಿರಸಿ ಕೃಷಿ ಮಹಾವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಭಾರತದ ಮಣ್ಣಿನಲ್ಲೂ ವೈವಿಧ್ಯವಿದೆ. ಸೂಕ್ಷ್ಮಾಣು ಜೀವಿ, ಸಸ್ಯಸಂಕುಲ, ಗೋವು ಹಾಗೂ ಮನುಷ್ಯನಿಗೆ […]

Continue Reading

ಪ್ರತಿಭೆಯೊಂದಿಗೆ ಗುರು ಹಿರಿಯರ ಆಶೀರ್ವಾದ ಇದ್ದಾಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧ್ಯ : ಚಿತ್ರ ನಟ ನಿರ್ದೇಶಕ ದಿನೇಶ್ ಅತ್ತಾವರ

ನಂತೂರು: ಸಿಯಾರ ಗಾಯ್ಸ್ ನಂತೂರು ಅವರ ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಶ್ರೀ ಭಾರತೀ ಸಮೂಹ ಸಂಸ್ಥೆಯ ಶ್ರೀ ಬಾರತೀ ಪದವಿ ಪೂರ್ವ ಕಾಲೇಜು ಸಹಭಾಗಿತ್ವದಲ್ಲಿ ನಡೆದ ಸಿಂಚನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ಚಿತ್ರನಟ ದಿನೇಶ್ ಅತ್ತಾವರ ಅವರು ಭಾಗವಹಿಸಿ, ಮಾತನಾಡಿ ಗುರುಹಿರಿಯರು ತಂದೆ ತಾಯಿಯರನ್ನು ಗೌರವದಿಂದ ಕಾಣಬೇಕು ಎಂದರು. ತಮ್ಮ ಬಾಲ್ಯದ ನೆನಪನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಕೆಲವು ನಾಟಕದ ಸಂಭಾಷಣೆಯನ್ನು ಹೇಲಿ ಎಲ್ಲರನ್ನು ರಂಜಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪದವಿ […]

Continue Reading

ಗೋ-ಮಯ ಪರಿಸರದ ಸವಿಯನುಂಡ ಸಂತರು

ಗೋಸ್ವರ್ಗ: ಬೆಂಗಳೂರು ಕೆ.ಆರ್ ಪುರದ ರಾಮಕೃಷ್ಣಾಶ್ರಮದ ಮುಖ್ಯಸ್ಥರಾದ ಸ್ವಾಮಿ ಚಂದ್ರೇಶಾನಂದಜೀ ರವರು ಗೋಸ್ವರ್ಗಕ್ಕೆ ಚಿತ್ತೈಸಿದ್ದರು. ಗೋಸ್ವರ್ಗವನ್ನು ವೀಕ್ಷಿಸಿ, ಮಾಹಿತಿ ಪಡೆದರು. ಗವ್ಯೋತ್ಪನ್ನಗಳ ಬಗೆಗೆ ವಿವರ ಪಡೆದರು. ಶ್ರೀಸಂಸ್ಥಾನದವರ ದೂರದರ್ಶಿತ್ವ, ಸಂಕಲ್ಪ ಸಿದ್ಧಿ, ಗೋಸಂರಕ್ಷಣಾ ಕಾರ್ಯ ಹಾಗೂ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಕಲ್ಪನೆಗಳ ಕುರಿತು ಅತೀವ ಹರ್ಷ ವ್ಯಕ್ತಪಡಿಸಿದರು. ಬೆಂಗಳೂರಿನ ಇನ್ನೂ ಹಲವು ಭಕ್ತರೊಡಗೂಡಿ ಮತ್ತೊಮ್ಮೆ ಬಂದು ಗೋಸ್ವರ್ಗದಲ್ಲಿಯೇ ದಿನಪೂರ್ತಿ ಕಳೆವುದಾಗಿ ತಿಳಿಸಿದ್ದಾರೆ. ನಾಲ್ಕೈದು ಜನ ಭಕ್ತರೊಡನೆ ಆಗಮಿಸಿದ್ದ ಶ್ರೀಗಳು ರಾಮಸನ್ನಿಧಿ, ಸಪ್ತಸನ್ನಿಧಿ, ಗೋಸನ್ನಿಧಿಯ ದರ್ಶನ ಮಾಡಿ ಪ್ರಸಾದ ಸ್ವೀಕರಿಸಿದರು.

Continue Reading

ಯುವ ಸಮೂಹಕೆ ಗೋದರ್ಶನ

ಗೋಸ್ವರ್ಗ: ಉಡುಪಿ ಜಿಲ್ಲೆಯ ಕಾರ್ಕಳ ಸಮೀಪದ ಸಣೂರಿನ ಪ್ರಕೃತಿ ಕಾಲೇಜಿನ ವಿದ್ಯಾರ್ಥಿಗಳು ಗೋಸ್ವರ್ಗಕ್ಕೆ ಭೇಟಿ ನೀಡಿದ್ದರು. ರಾತ್ರಿ ಆಗಿದ್ದರೂ ಕೂಡ ಉತ್ಸುಕತೆಯಿಂದ ಗೋಸ್ವರ್ಗವನ್ನು ವೀಕ್ಷಿಸಿ ಸಂಪೂರ್ಣ ಮಾಹಿತಿ ಪಡೆದರು. ಗೋಸ್ವರ್ಗದ ಪ್ರಶಾಂತ ಪರಿಸರದಲ್ಲಿ ರಾತ್ರಿ ವಿಶ್ರಾಂತಿ ಮಾಡಿ ಬೆಳಿಗ್ಗೆ ಪುನಹ ಗೋಸ್ವರ್ಗಕ್ಕೆ ತೆರಳಿ ಇನ್ನಷ್ಟು ಮಾಹಿತಿಗಳನ್ನು ಪಡೆದರು. ಯುವ ಸಮೂಹದ ಈ ಉತ್ಸುಕತೆ, ದೇಸೀ ಗೋವುಗಳ ಕುರಿತು ಇರುವ ಕಾಳಜಿ ನಿಜಕ್ಕೂ ಶ್ಲಾಘನೀಯ. ಯುವ ಸಮುದಾಯಕ್ಕೆ ದೇಸೀ ಗೋವುಗಳ ಬಗೆಗೆ ಮಾಹಿತಿ ನೀಡುವ ಸದುದ್ದೇಶದಿಂದ ಗೋಸ್ವರ್ಗಕ್ಕೆ ಕರೆತಂದ […]

Continue Reading

ಗೋಆಶ್ರಮದಲ್ಲಿ ಗೋಪೂಜೆ

ಮಾಲೂರು: ಹೊಸಕೋಟೆ ತಾಲೂಕು ಈ ಮುತ್ಸಂದ್ರ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಶ್ರೀಮತಿ ಜಲಜಾಕ್ಷಿಯವರು ತಮ್ಮ ಜನ್ಮದಿನಾಚರಣೆಯನ್ನು ಮಾಲೂರು ಗಂಗಾಪುರದ ಶ್ರೀ ರಾಘವೇಂದ್ರ ಗೋಆಶ್ರಮದಲ್ಲಿ ಗೋಪೂಜೆಯೊಂದಿಗೆ ವಿಶೇಷವಾಗಿ ಆಚರಿಸಿದರು. ಇದೇ ಸಂದರ್ಭದಲ್ಲಿ ಸಂಸ್ಕೃತಿ ಕಲಾ ಸಂಘ ಹೊಸಕೋಟೆ ಇವರ ವತಿಯಿಂದ ಕನ್ನಡ ರಾಜ್ಯೋತ್ಸವವನ್ನೂ ಆಚರಿಸಲಾಯಿತು. ಗೋಆಶ್ರಮದ ಕೃಷ್ಣ ಭಟ್ ಇವರು ರಾಜ್ಯೋತ್ಸವದ ಬಗ್ಗೆ ಮಾತಾನಾಡುವ ಜೊತೆಗೆ, ಗೋಆಶ್ರಮದ ಬಗ್ಗೆ ಹಾಗೂ ಭಾರತೀಯ ಗೋವಂಶದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಶಿಕ್ಷಕರಾದ ರಾಜಮ್ಮ, ಕರುಣಾ, ರವಿಪ್ರಕಾಶ್, ಗೋಆಶ್ರಮದ […]

Continue Reading

ಗೋಸ್ವರ್ಗದಲ್ಲಿ ಡಿ. ೫ರಂದು ರಾಷ್ಟ್ರಮಟ್ಟದ ವಿಚಾರ ಸಂಕಿರಣ

ಬೆಂಗಳೂರು: ಮಣ್ಣಿನ ಸಂರಕ್ಷಣೆಯೇ ಮನುಕುಲದ ಸಂರಕ್ಷಣೆ ಎಂಬ ಧ್ಯೇಯವಾಕ್ಯದೊಂದಿಗೆ ವಿಶ್ವ ಮಣ್ಣಿನ ದಿನಾಚರಣೆ ಅಂಗವಾಗಿ ಶ್ರೀರಾಮಚಂದ್ರಾಪುರ ಮಠದ ಸಂಶೋಧನಾ ಖಂಡ, ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಡಿಸೆಂಬರ್ ೫ರಂದು ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ಬಳಿಯ ಗೋಸ್ವರ್ಗದಲ್ಲಿ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಆಯೋಜಿಸಿದೆ. ಕಾಮದುಘಾ ಟ್ರಸ್ಟ್, ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯ ಮತ್ತು ಶಿರಸಿ ತೋಟಗಾರಿಕಾ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಡೆಯುವ ಒಂದು ದಿನದ ವಿಚಾರ ಸಂಕಿರಣದಲ್ಲಿ ದೇಶದ ವಿವಿಧೆಡೆಗಳಿಂದ ಆಗಮಿಸು ಸಾವಿರಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸುವರು. ಅಂತರರಾಷ್ಟ್ರೀಯ […]

Continue Reading

ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ

ಕೇಪು: ಬಾಲ್ಯದಲ್ಲಿ ಹಲ್ಲಿನ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಹಲ್ಲಿನ ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾಗಿದೆ. ಹಳ್ಳಿ ಪ್ರದೇಶಕ್ಕೆ ವೈದ್ಯರು ಬಂದು ನೀಡುತ್ತಿರುವ ಸೇವೆಯನ್ನು ಸದುಪಡಿಸಿಕೊಳ್ಳಬೇಕು ಎಂದು ವಿಟ್ಲ ರೋಟರಿ ಕ್ಲಬ್ ಅಧ್ಯಕ್ಷ ಜಯರಾಮ ರೈ ಹೇಳಿದರು. ಅವರು ಪುಣಚ ಶ್ರೀದೇವಿನಗರ ಶ್ರೀದೇವಿ ಪ್ರೌಢಶಾಲೆಯಲ್ಲಿ ಕೇಪು ಹವ್ಯಕ ವಲಯದ ಆಶ್ರಯದಲ್ಲಿ ವಿಟ್ಲ ಲಯನ್ಸ್ ಕ್ಲಬ್, ರೋಟರಿ ಕ್ಲಬ್ ವಿಟ್ಲ, ಶ್ರೀದೇವಿ ಪ್ರೌಢಶಾಲೆಯಲ್ಲಿ ನಿಟ್ಟೆ ಎಬಿ ಶೆಟ್ಟಿ ಮೆಮೋರಿಯಲ್ ಇನ್ ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ಸಮುದಾಯ ದಂತ […]

Continue Reading