ಗೋವುಗಳಿಗೆ ಗೋಗ್ರಾಸ
ಸಿದ್ದಾಪುರ ನಿವಾಸಿ ಗುರುಮನೆಯ ಗುರುಭಕ್ತ ನಾಗರಾಜಭಟ್ ಕೆಕ್ಕಾರು ಇವರು ಗೋಸ್ವರ್ಗದ ಗೋವುಗಳಿಗೆ ಗೋಗ್ರಾಸರೂಪದಲ್ಲಿ ಒಂದು ಲೋಡು ಕಲ್ಲಂಗಡಿ ಹಣ್ಣನ್ನು ನೀಡಿದರು.
Continue Readingಸಿದ್ದಾಪುರ ನಿವಾಸಿ ಗುರುಮನೆಯ ಗುರುಭಕ್ತ ನಾಗರಾಜಭಟ್ ಕೆಕ್ಕಾರು ಇವರು ಗೋಸ್ವರ್ಗದ ಗೋವುಗಳಿಗೆ ಗೋಗ್ರಾಸರೂಪದಲ್ಲಿ ಒಂದು ಲೋಡು ಕಲ್ಲಂಗಡಿ ಹಣ್ಣನ್ನು ನೀಡಿದರು.
Continue Readingಶ್ರೀ ಭಾರತೀ ಸಮೂಹ ಸಂಸ್ಥೆಗಳು, ನಂತೂರು ವಿವೇಕಾನಂದ ರಸ್ತೆ 6ನೇ ಕ್ರಾಸ್, ನಂತೂರು ಪದವು, ಮಂಗಳೂರು ಫೋನ್ : 0824-2214062, 0824-2216464 ಮೊಬೈಲ್ : 9448622674, 6360519232, 9844936701 Email : info@shreebharathicollege.com ಆತ್ಮೀಯ ಹೆತ್ತವರೇ, ಪೋಷಕರೇ, ವಿದ್ಯಾಭಿಮಾನಿಗಳೇ, ನಮಸ್ಕಾರ, ಹರೇ ರಾಮ : ನಮ್ಮ ಸಂಸ್ಥೆಯ ವಿಶೇಷತೆ ಬಗ್ಗೆ, ಇರುವ ಅವಕಾಶಗಳ ಬಗ್ಗೆ ಒಂದಿಷ್ಟು ಮಾಹಿತಿ ಹಂಚಿಕೊಳ್ಳಲು ಬಯಸುತ್ತಿದ್ದೇವೆ. ದಯವಿಟ್ಟು ಪೂರ್ತಿಯಾಗಿ ಗಮನವಿಟ್ಟು ಓದಬೇಕಾಗಿ ವಿನಂತಿ. ಶ್ರೀಗುರುಗಳ ಆಶೀರ್ವಾದವಿದೆ : ಶ್ರೀರಾಮಚಂದ್ರಾಪುರ ಮಠದ ಪರಮಪೂಜ್ಯ ಶ್ರೀಮಜ್ಜಗದ್ಗುರು […]
Continue Readingಕೋವಿಡ್ – ೧೯ ಹಿನ್ನೆಲೆಯಲ್ಲಿ ಜಾರಿಯಾದ ಲಾಕ್ ಡೌನ್ ನ ಬಿಸಿ ಜನಸಾಮಾನ್ಯರಿಗಷ್ಟೇ ಅಲ್ಲದೇ ಭಾರತೀಯ ಗೋ ತಳಿಸಂರಕ್ಷಣೆ ಯಲ್ಲಿ ತೊಡಗಿಕೊಂಡಿರುವ ಕರಾವಳಿ ಭಾಗದ ಏಕೈಕ ಗೋಶಾಲೆ ಯಾದ ಹೊಸಾಡ ಗೋಶಾಲೆಯ ಗೋವುಗಳಿಗೂ ತಟ್ಟಿದೆ. ಗೋಪ್ರೇಮಿಗಳ ಸಹಕಾರದಿಂದಲೇ ನಡೆಯಬೇಕಿದ್ದ ಗೋಶಾಲೆಗೆ ಲಾಕ್ ಡೌನ್ ಪರಿಸ್ಥಿತಿಯಿಂದ ಸಹಜವಾಗಿ ಎಲ್ಲಾ ಆದಾಯದ ಬಾಗಿಲುಗಳೂ ಮುಚ್ಚಿದ್ದು ಹಿಂದೆಂದೂ ಎದುರಿಸದ ಕಷ್ಟ ಎದುರಾಗಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಬಡಗೋವುಗಳ ವೇದನೆಯ ಕೂಗು ಉತ್ತರ ಕನ್ನಡದ ಕುಮಟಾ ತಾಲೂಕಿನ ಹೆಗಡೆ ಗ್ರಾಮದ ಐತಿಹಾಸಿಕ , […]
Continue Readingಕೈರಂಗಳ ಪುಣ್ಯಕೋಟಿನಗರ ಅಮೃತಧಾರಾ ಗೋಶಾಲೆ ಸೇವಾ ಸಮಿತಿಯ ಅಧ್ಯಕ್ಷರಾದ ರಾಜಾರಾಮ ಭಟ್ ರವರು ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರನ್ನು ಭೇಟಿ ಮಾಡಿ ಕೊರೋನಾ ಕರ್ಫ್ಯೂನಿಂದಾಗಿ ಹಸುಗಳ ಮೇವಿನ ಸಮಸ್ಯೆ ಬಂದಿರುವ ವಿಷಯವನ್ನು ಮಾನ್ಯ ಸಚಿವರಿಗೆ ಮನವರಿಕೆ ಮಾಡಿ ಅನುದಾನ ಮಂಜೂರು ಮಾಡಬೇಕೆಂದು ವಿನಂತಿಸಿದರು. ಸಮಸ್ಯೆಯನ್ನು ಆಲಿಸಿದ ಸಚಿವರು ಮುಂದೆ ಈ ಬಗ್ಗೆ ತಿರ್ಮಾನ ಕೈಗೊಳ್ಳುವ ಭರವಸೆ ನೀಡಿದರು. ಈ ಸಂದರ್ಭ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸುದರ್ಶನ್ ಮೂಡಬಿದಿರೆ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಮೋನಪ್ಪ […]
Continue Readingಕೋವಿಡ್ – ೧೯ ಹಿನ್ನೆಲೆಯಲ್ಲಿ ಜಾರಿಯಾದ ಲಾಕ್ ಡೌನ್ ಪರಿಸ್ಥತಿಯಿಂದ ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿದ್ದ ಭಾರತೀಯ ಗ್ಯೋಬ್ಯಾಂಕ್ ಹೋಸಾಡ ಗೋಶಾಲೆ ೩೦೦ ಗೋವುಗಳಿಗೆ ಕೆನರಾ ಆಟೋಮೊಬೈಲ್ ಕುಮಟಾ ಆಡಳಿತ ಮಂಡಳಿಯ ಸದಸ್ಯರಾದ ಭರತ ಭಂಡಾರಕರ್ ಅವರು ೧ ಲಕ್ಷಕ್ಕೂ ಹೆಚ್ಚಿನ ಮೌಲ್ಯದ ೧೦೦ ಚೀಲ ಹಿಂಡಿಯನ್ನು ಗೋಶಾಲೆಗೆ ದೇಣಿಗೆಯಾಗಿ ನೀಡಿದ್ದಾರೆ. ಹುಲ್ಲು ಹಿಂಡಿಯ ದರ ಮುಗಿಲು ಮುಟ್ಟಿದೆ. ಅಲ್ಪ ಸ್ವಲ್ಪ ಆದಾಯ ಬರುತ್ತಿದ್ದ ಗೊಬ್ಬರ ಮಾರಾಟ, ಗವ್ಯೋತ್ಪನ್ನ ಮಾರಾಟದಲ್ಲೂ ಇಳಿಮುಖವಾಗಿದೆ. ವರ್ಷಂಪ್ರತಿ ಗೋಸೇವೆ ಪ್ರಯುಕ್ತ ಈ ಸಮಯದಲ್ಲಿ […]
Continue Readingಬೆಂಗಳೂರು: ಸನಾತನ ಸಂಸ್ಕøತಿಯ ಉಳಿವಿಗಾಗಿ ಮತ್ತು ಮುಂದಿನ ಪೀಳೀಗೆಯ ಅಭ್ಯುದಯಕ್ಕಾಗಿ ಶ್ರೀರಾಮಚಂದ್ರಾಪುರ ಮಠ ವತಿಯಿಂದ ಗೋಕರ್ಣ ಬಳಿ ಆರಂಭಿಸುತ್ತಿರುವ ಸಾರ್ವಭೌಮ ಗುರುಕುಲ (ಬಾಲಕರಿಗೆ) ಮತ್ತು ರಾಜರಾಜೇಶ್ವರಿ ಗುರುಕುಲ (ಬಾಲಕಿಯರಿಗೆ)ಗಳಿಗೆ ಪ್ರವೇಶ ಪಡೆಯಲು ಸರ್ವ ಸಮಾಜದ ಆಸಕ್ತ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಋಷಿಯುಗ ಮತ್ತು ನವಯುಗ ಶಿಕ್ಷಣಗಳ ಸಮ್ಮಿಲನ ಇದಾಗಿದ್ದು, ನಾಲ್ಕನೇ ತರಗತಿಯಿಂದ ಪಿಯುಸಿ ವರೆಗಿನ ಔಪಚಾರಿಕ ಶಿಕ್ಷಣದ ಜತೆಗೆ ವೇದಮೂಲವಾದ ಸಮಗ್ರ ಭಾರತೀಯ ವಿದ್ಯೆ ಕಲೆಗಳ ಪರಿಚಯ, ಸಂಸ್ಕøತ, ಭಗವದ್ಗೀತೆ, ಯೋಗ, ವ್ಯಾಯಾಮಕೀ, ಆಯುರ್ವೇದ, ಸದಾಚಾರ, […]
Continue Readingಬೆಂಗಳೂರು: ಶ್ರೀರಾಮಚಂದ್ರಾಪುರ ಮಠದ ವತಿಯಿಂದ ಗುರುವಾರ ಕೋವಿಡ್-19 ಪರಿಹಾರ ನಿಧಿಗೆ 2 ಲಕ್ಷ ರೂಪಾಯಿಗಳ ದೇಣಿಗೆ ನೀಡಲಾಯಿತು. ಶ್ರೀಮಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜಿ.ಭಟ್ ಮತ್ತು ಸಂದೇಶ ತಲಕಾಲಕೊಪ್ಪ ಶ್ರೀಮಠದ ಪರವಾಗಿ ದೇಣಿಕೆ ಚೆಕ್ಕನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಹಸ್ತಾಂತರಿಸಿದರು. ಶ್ರೀಮಠದ ವಿವಿಧ ಅಂಗಸಂಸ್ಥೆಗಳು ಈಗಾಗಲೇ ವಲಸೆ ಕಾರ್ಮಿಕರು ಮತ್ತು ಬಡವರಿಗೆ ಆಹಾರ ಕಿಟ್ಗಳನ್ನು ಮತ್ತು ಅಗತ್ಯ ಸಾಮಗ್ರಿಗಳನ್ನು ವಿತರಿಸಿವೆ. ಶ್ರೀಮಠದ ಭಾರತೀಯ ಗೋ ಪರಿವಾರ ಟ್ರಸ್ಟ್ ವತಿಯಿಂದ ಅಧ್ಯಕ್ಷ ಆರ್.ಕೆ.ಬೆಳ್ಳಾರೆಯವರ ನೇತೃತ್ವದಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ […]
Continue Readingಶ್ರೀ ರಾಮಚಂದ್ರಾಪುರ ಮಠ ಹೊಸನಗರ ವತಿಯಿಂದ ಕೊರೋನಾ ಲಾಕ್ ಡೌನ್ ಹಿನ್ನಲೆಯಲ್ಲಿ ಸಂಕಷ್ಟಕ್ಕೊಳಗಾದ ದಿನಗೂಲಿಯಿಂದ ಜೀವನ ನಡೆಸುವ ೪೮ ಕುಟುಂಬಗಳಿಗೆ ಅಕ್ಕಿ, ಬೇಳೆಕಾಳು, ಬೆಲ್ಲ, ಉಪ್ಪು ಸೇರಿದ ಕಿಟ್ ವಿತರಣೆಯನ್ನು ರಾಮಚಂದ್ರಾಪುರ ಗ್ರಾಮಪಂಚಾಯತಿ ಮುಖಾಂತರ ಶಾಸಕ ಆರಗ ಜ್ಞಾನೇಂದ್ರ ಅವರು ಮಾಡಿದರು. ನಿರ್ವಹಣಾ ಸಮಿತಿ ಅಧ್ಯಕ್ಷ ಜಟ್ಟಿಮನೆ ಗಣಪತಿ, ವ್ಯವಸ್ಥಾಪಕ ರಾಘವೇಂದ್ರಮಧ್ಯಸ್ಥ, ಮಾಧ್ಯಮ ಸಂಚಾಲಕ ಒಡ್ಡಿನಭೈಲು ವೆಂಟೇಶ, ಜಿಲ್ಲಾ ಪಂಚಾಯತಿ ಸದಸ್ಯ ಸುರೇಶಸ್ವಾಮಿರಾವ್, ತಾಲೂಕು ಪಂಚಾಯಿತಿ ಸದಸ್ಯ ಚಂದ್ರಮೌಳಿ, ಗ್ರಾಮಪಂಚಾಯತಿ ಅಧ್ಯಕ್ಷರು, ಸದಸ್ಯರು, ಪಿ ಡಿ ಓ […]
Continue Readingಸಂಸ್ಥಾನ ಶ್ರೀಮಹಾಬಲೇಶ್ವರ ದೇವಾಲಯದಲ್ಲಿ ಅಕ್ಷಯ ತೃತೀಯೆಯ ಶುಭ ದಿನದಂದು ಲೋಕಕಲ್ಯಾಣದ ಸಂಕಲ್ಪದಿಂದ ಪರಮಪೂಜ್ಯ ಜಗದ್ಗುರುಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ಮಾರ್ಗದರ್ಶನದಂತೆ ಸುವರ್ಣ ನಾಣ್ಯಾಭಿಷೇಕ ಮಾಡಲಾಯಿತು. ಶ್ರೀಕ್ಷೇತ್ರ ಗೋಕರ್ಣದ ಉಪಾಧಿವಂತ ಮಂಡಲದವರು ಶತರುದ್ರ ಹೋಮವನ್ನು ನೆರೆವೇರಿಸಿದರು. ವೇ. ವಿ. ಸಾಂಬಾ ಭಟ್ ಷಡಕ್ಷರಿ ಪೂಜಾ ಕೈಂಕರ್ಯ ನೆರವೇರಿಸಿದರು. ಜಗತ್ತಿಗೆ ಬಂದ ಅತ್ಯಂತ ಹೆಮ್ಮಾರಿ ರೋಗವಾದ ಕರೋನಾ ನಿವಾರಣೆಯಾಗಲೆಂದು ಜಗದೀಶ್ವರನಲ್ಲಿ ಪ್ರಾರ್ಥಿಸಿಲಾಯಿತು.
Continue Readingಗೋಕರ್ಣ: ವಿಶ್ವದಲ್ಲಿ ಕೊರೋನಾ ಅಟ್ಟಹಾಸದ ನಡುವೆಯೇ ರಾಜ್ಯದ ಮಲೆನಾಡು ಭಾಗದಲ್ಲಿ ಹಾಗೂ ನೆರೆ ರಾಜ್ಯಗಳ ಕೆಲವೆಡೆ ಮಂಗನ ಕಾಯಿಲೆ ವ್ಯಾಪಕವಾಗಿ ಹರಡಿದ್ದು, ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಶ್ರೀ ರಾಮಚಂದ್ರಾಪುರ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಸ್ವಾಮೀಜಿಯವರು ಒತ್ತಾಯಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ, ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ, ಕೊಪ್ಪ ತಾಲೂಕುಗಳಲ್ಲಿ ಈ ಸಾಂಕ್ರಾಮಿಕ ವ್ಯಾಪಕವಾಗಿ ಹರಡಿದ್ದು, 250ಕ್ಕೂ ಹೆಚ್ಚು ಮಂದಿಗೆ ಸೊಂಕು ತಗುಲಿದೆ. […]
Continue Readingಸಸ್ನೇಹ ವಂದನೆಗಳು ದೇಶದೆಲ್ಲೆಡೆ ಹರಡುತ್ತಿರುವ ಕೊರೊನಾ ಮಹಾಮಾರಿಯ ತಡೆಗಟ್ಟುವಿಕೆಗೆ ಮಾನ್ಯ ಪ್ರಧಾನಮಂತ್ರಿಯವರ ಆದೇಶದಂತೆ ದೇಶದಲ್ಲಿ 21 ದಿನ lockdown ಮಾಡಿರುವುದು ನಮಗೆಲ್ಲ ಗೊತ್ತಿರುವ ವಿಚಾರ. ಈ ಸಂದರ್ಭದಲ್ಲಿ ಧರ್ಮಭಾರತೀ ಎಪ್ರಿಲ್ 2020 ಸಂಚಿಕೆಯು ತಮ್ಮ ಮನೆಗಳಿಗೆ ತಲುಪುವಲ್ಲಿ ವಿಳಂಬವಾದೀತೆಂಬ ಎಂಬ ವಿಚಾರ ಈಗಾಗಲೇ ನಮಗೆಲ್ಲ ತಿಳಿದಿದೆ. ಅಂದರೂ, ಸಕ್ರಿಯ ಓದುಗರನ್ನು ಸಕಾಲದಲ್ಲಿ ತಲುಪುವ ಉದ್ದೇಶದಲ್ಲಿ ಧರ್ಮಭಾರತೀ ಎಪ್ರಿಲ್ ಸಂಚಿಕೆಯ ಲೇಖನಗಳನ್ನು ಮೃದುಪ್ರತಿ (soft copy) ರೂಪದಲ್ಲಿ ಹಂಚಲಿದ್ದೇವೆ. ಅಂಚೆ ವ್ಯವಸ್ಥೆ ಪುನಃ ಕಾರ್ಯಾಚರಿಸಲು […]
Continue Readingಮಹಾಮಾರಿ ಕರೊನಾ ಹಿನ್ನಲೆಯಲ್ಲಿ ಮನೆಯಲ್ಲಿ ಇರಬೇಕಾದ ಪರಿಸ್ಥಿತಿಯಲ್ಲಿ ರಾಮನವಮಿಯನ್ನು ಚಿತ್ರ ಬಿಡಿಸುವ ಮೂಲಕ ವಿಭಿನ್ನವಾಗಿ ಆಚರಿಸಿದರು. ಸಿದ್ದಾಪುರ ನಿವಾಸಿ ರಾಮಕೃಷ್ಣ ಹೆಗಡೆ ಮತ್ತು ರೇಖ ಆರ್ ಹೆಗಡೆ ದಂಪತಿಗಳ ಪುತ್ರ ರವೀಂದ್ರ ಆರ್. ಹೆಗಡೆ ರಾಮಸೇತು ನಿರ್ಮಾಣದ ಸಮಯ ಅಳಿಲು ಜೊತೆಗೆ ಶ್ರೀರಾಮನ ಚಿತ್ರ ಬಿಡಿಸಿದರು. ಪೆಲತ್ತಡಿ ನಿವಾಸಿ ಗೋಪಾಲಕೃಷ್ಣ ಭಟ್ ಮತ್ತು ಸೌಮ್ಯ ಪ್ರಭಾ ದಂಪತಿಗಳ ಪುತ್ರಿ ೯ನೇ ತರಗತಿಯ ಶ್ರೀಲಕ್ಷ್ಮೀ ರಾಮನ ಚಿತ್ರ ಹಾಗೂ ಶ್ರೀರಾಮ ಹನುಮನ ಚಿತ್ರವನ್ನು ಬಿಡಿಸಿದರು.
Continue Readingಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಪುಣ್ಯ ಯೋಜನೆ ಕಾಮದುಘಾದಡಿಯಲ್ಲಿ ಕಾರ್ಯಚರಿಸುತ್ತಿರುವ ಬಜಕೂಡ್ಲು ಅಮೃತಧಾರಾ ಗೋಶಾಲೆಯ ಶ್ರೀ ಗೋವರ್ಧನ ಧರ್ಮಮಂದಿರದಲ್ಲಿ ಪ್ರತಿ ತಿಂಗಳ ಕೃಷ್ಣ ಪಕ್ಷದ ಅಷ್ಟಮಿಯಂದು ಜರಗುವ ಗೋಪೂಜೆ, ಗೋಪಾಲಕೃಷ್ಣ ಪೂಜೆ ಹಾಗೂ ಭಜನೆ ಸೋಮವಾರ ಸಾಯಂಕಾಲ ೬ ರಿಂದ ವೇ. ಮೂ. ಕೃಷ್ಣ ಭಟ್ಟ ಗುಂಡ್ಯಡ್ಕ ಇವರ ನೇತೃತ್ವದಲ್ಲಿ ಜರಗಿತು. ಮಹಾಲಿಂಗೇಶ್ವರ ಭಜನಾ ಮಂಡಳಿ ಬಜಕೂಡ್ಲು ಇವರಿಂದ ಭಜನಾ ಸೇವೆಯು ಈ ಸಂಧರ್ಭದಲ್ಲಿ ಜರಗಿತು.
Continue Readingಹೊಸಾಡ ಅಮೃತಧಾರಾ ಗೋಶಾಲೆಗೆ ವಿಜಾಪುರದ ಗೋರಕ್ಷಾ ಕೇಂದ್ರ ಗೋಶಾಲೆಯ ಹಿರಿಯ ಮುಖಂಡರು ಆಗಮಿಸಿ ಗೋಶಾಲೆಯನ್ನು ವೀಕ್ಷಿಸಿದರು. ಅಪಘಾತಕ್ಕೊಳಗಾದ, ಮುದಿ ವಯಸ್ಸಿನ ಮತ್ತು ಕಸಾಯಿಖಾನೆಗೆ ಹೋಗುವ ಗೋವುಗಳನ್ನು ಸಂರಕ್ಷಿಸುತ್ತಿರುವ ಗೋಪಾಲಕರನ್ನು ಮತ್ತು ನಿರ್ವಹಿಸುತ್ತಿರುವ ಸಂಸ್ಥೆಯ ಸೇವೆಯನ್ನು ಶ್ಲಾಘಿಸಿದರು. ವಿಜಾಪುರದ ಗೋ ರಕ್ಷಾ ಕೇಂದ್ರ ಗೋಶಾಲೆಯಲ್ಲಿ ೬೫೦ ಕ್ಕೂ ಹೆಚ್ಚಿನ ಗೋವುಗಳನ್ನು ಸಂರಕ್ಷಿಸಲಾಗುತ್ತಿದ್ದು, ನಾಲ್ಕೈದು ಸಂಸ್ಥೆಗಳು ಸೇರಿ ಈ ಗೋಶಾಲೆಯನ್ನು ನಡೆಸುತ್ತಿದ್ದೇವೆ ರಾಮನ ಗೌಡ ಬಾಪು ಗೌಡ ಪಾಟೀಲ್ ಯತ್ನಾಳ ಅವರಿಂದ ಈ ಸಂಸ್ಥೆ ಸ್ಥಾಪನೆಯಾಗಿದೆ. ಪ್ರತಿ ತಿಂಗಳು ೭ […]
Continue Readingಮಹಾನಂದಿ ಗೋಲೋಕದಲ್ಲಿ ವಿರಾಜಮಾನನಾಗಿರುವ ಗೋವರ್ಧನಗಿರಿಧಾರಿ ಶ್ರೀಗೋಪಾಲಕೃಷ್ಣನ ಸನ್ನಿಧಿಯಲ್ಲಿ ಪ್ರತೀ ಹುಣ್ಣಿಮೆಯಂದು ಸಂಪನ್ನಗೊಳ್ಳುವ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ ಕಥಾವಾಚನ ನಡೆದಿರುತ್ತದೆ. ೬ನೇ ತಿಂಗಳಿನ ಈ ಪೂಜಾ ಕಾರ್ಯಕ್ರಮವನ್ನು ಪ್ರಧಾನ ಅರ್ಚಕರಾದ ವೇದಮೂರ್ತಿ ಸತೀಶ್ ಭಟ್ ರವರು ವಿಧ್ಯಾರ್ಥಿಗಳಾದ ಭರತ ಹಾಗೂ ಶ್ರೀಹರ್ಷ ಇವರೊಂದಿಗೆ ಸಾಂಗವಾಗಿ ನೆರವೇರಿಸಿಕೊಟ್ಟರು. ಶಿವಮೊಗ್ಗದ ಗುರುರಾಜ್ (ನೆಪ್ಚೂನ್) ದಂಪತಿಗಳ ಯಾಜಮಾನತ್ವದಲ್ಲಿ ನಡೆದಿರುತ್ತದೆ. ಸಮಿತಿಯ ಸದಸ್ಯರುಗಳಾದ ಮಳಲಿ ಅನಂತ ಭಟ್, ಶಂಕರನಾರಾಯಣ ಮಾಗಲು, ಶಂಕರ್ ಭಟ್ ಕಣಿವೆಬಾಗಿಲು, ನೆಲ್ಲುಂಡೆ ನಾಗೇಂದ್ರರಾಯರು ಇವರುಗಳೊಂದಿಗೆ ಗೋಲೋಕದ ಸಿಬ್ಬಂದಿಗಳು, ಗೋಪಾಲಕರು, ಶ್ರೀಮಠದ […]
Continue Readingಬಜಕೂಡ್ಲು ಅಮೃತಧಾರಾ ಗೋಶಾಲೆಯಲ್ಲಿ ವೆಂಕಟ್ರಮಣ ಕೋಡುಮಾಡು ಅವರು ವೈವಾಹಿಕ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಈ ಸಂದರ್ಭ ೪೦ ಕಿಲೋ ಹಿಂಡಿಯನ್ನು ಗೋಗ್ರಾಸವಾಗಿ ಸಮರ್ಪಿಸಿದರು.
Continue Readingಹೊಸಾಡಿನ ಅಮೃತಧಾರಾ ಗೋಶಾಲೆಯಲ್ಲಿ ಹೋಳಿ ಹಬ್ಬದ ಸೂರ್ಯಾಸ್ತದ ಸಂದರ್ಭದಲ್ಲಿ ಗೋಲಾಕೃಷ್ಣ ವಿಗ್ರಹದ ಮುಂಭಾಗದಲ್ಲಿ ಮನಕ್ಕೆ ಮುದ ನೀಡುವ ಮುರಳಿ ಗಾಯನ ಹಾಗೂ ಗೋವುಗಳ ವೀಕ್ಷಣೆ ನಡೆಯಿತು.
Continue Readingನಂತೂರು ಮಾ.೮ : ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಶಂಕರಶ್ರೀಸಭಾಭವನದಲ್ಲಿ ಶ್ರೀ ಭಾರತೀ ಪದವಿ ಕಾಲೇಜಿನ ಸಾಂಸ್ಕೃತಿಕ ಸಂಘದ ವತಿಯಿಂದ ಸಾಂಸ್ಕೃತಿಕ ದಿನಾಚರಣೆಯನ್ನು ಆಯೋಜಿಸಲಾಯಿತು. ಪುಣೆ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ ರೈ ಅರ್ಪಿಣಿಗುತ್ತು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ ಶ್ರೀ ಭಾರತೀ ವಿದ್ಯಾ ಸಂಸ್ಥೆಯು ಸಂಸ್ಕೃತಿಯನ್ನು ಉಳಿಸುವ ಕಾರ್ಯಕ್ರಮ ಆಯೋಜಿಸುವುದು ಸೂಕ್ತವಾಗಿದೆ. ಇದು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೂರಕ ವಾತಾವರಣವನ್ನು ನೀಡುತ್ತದೆ. ತುಳುನಾಡಿನ ಸಂಸ್ಕೃತಿ ಅತ್ಯಂತ ಶ್ರೇಷ್ಠ. ನಾಡಿನ ಅನೇಕ ಕಡೆಗಳಿಗೆ ತೆರಳಿದಾಗ […]
Continue Readingರಾಜ್ಯ ಸರ್ಕಾರದ ನೂತನ ಮಂತ್ರಿಗಳಾಗಿ ಆಯ್ಕೆಯಾಗಿ, ಕಾರ್ಮಿಕ ಮತ್ತು ಸಕ್ಕರೆ ಖಾತೆಯ ಹೊಣೆಯೊಂದಿಗೆ ಸೇವೆಸಲ್ಲಿಸುತ್ತಿರುವ ಹೆಮ್ಮೆಯ ಹವ್ಯಕ ಶ್ರೀ ಶಿವರಾಮ ಹೆಬ್ಬಾರ್ ಅವರಿಗೆ ಹವ್ಯಕ ಸಮಾಜದ ಪ್ರಾತಿನಿಧಿಕ ಸಂಸ್ಥೆ ಶ್ರೀ ಅಖಿಲ ಹವ್ಯಕ ಮಹಾಸಭೆಯಿಂದ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿದ್ದು, 10.03.2020 ಮಂಗಳವಾರ ಸಂಜೆ 6.00 ಗಂಟೆಗೆ ಮಲ್ಲೇಶ್ವರದಲ್ಲಿರುವ ಶ್ರೀ ಅಖಿಲ ಹವ್ಯಕ ಮಹಾಸಭೆಯ ಪ್ರಾಂಗಣದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಚಿವ ಶ್ರೀ ಶಿವರಾಮ ಹೆಬ್ಬಾರ್ ಮಹಾಸಭೆಯ ಗೌರವವನ್ನು ಸ್ವೀಕರಿಸಲಿದ್ದು, ಮಹಾಸಭೆಯ ಅಧ್ಯಕ್ಷ ಡಾ.ಗಿರಿಧರ ಕಜೆ ಕಾರ್ಯಕ್ರಮದ ಅಧ್ಯಕ್ಷತೆ […]
Continue Reading