ತೇಜೋವಧೆ ಮಾಡುತ್ತಿದ್ದವರಿಗೆ ನ್ಯಾಯಾಲಯ ಮಾಡಿದ್ದೇನು !

ಬೆಂಗಳೂರು: ಶ್ರೀರಾಮಚಂದ್ರಾಪುರಮಠ ಹಾಗೂ ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳ ಕುರಿತು ಆಧಾರರಹಿತವಾದ ವದಂತಿಗಳನ್ನು ಹಬ್ಬಿಸಿ, ತೇಜೋವಧೆ ಮಾಡುವ ಹಾಗೂ ಸಮಾಜದ ಧಾರ್ಮಿಕ ನಂಬಿಕೆಗಳನ್ನು ಘಾಸಿಗೊಳಿಸುವ ಪ್ರಯತ್ನಗಳನ್ನು ಪ್ರತಿಬಂಧಿಸಿ ಹೊಳೆನರಸಿಪುರ ಸಿವಿಲ್ ಜಡ್ಜ್ ಮತ್ತು ಜೆ. ಎಂ. ಎಫ್. ಸಿ. ನ್ಯಾಯಾಲಯ ಆದೇಶ ನೀಡಿದೆ.   ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಶ್ರೀರಾಮಚಂದ್ರಾಪುರಮಠ ಹಾಗೂ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀಮಹಾಸ್ವಾಮಿಗಳು ಸಮಾಜದಲ್ಲಿ ಧಾರ್ಮಿಕತೆಯನ್ನು ಬೆಳೆಸುವ ಜೊತೆಗೆ ಸರ್ವಸಮಾಜದ ಉನ್ನತಿಗೆ ಶ್ರಮಿಸುತ್ತಿದ್ದಾರೆ. ಮಠದ ವ್ಯವಹಾರಗಳನ್ನು ಪಾರದರ್ಶಕವಾಗಿ ಇಟ್ಟಿರುವ ಜೊತೆಗೆ ಸುವ್ಯವಸ್ಥಿತ ಆಡಳಿತವನ್ನು ನೀಡಿದ್ದಾರೆ. […]

Continue Reading

ಭಾರತೀಯ ಗೋ ಪರಿವಾರದಿಂದ ಮುಂದುವರಿದ ನೆರವು ವಿತರಣೆ

ಬೆಂಗಳೂರು: ಶ್ರೀರಾಮಚಂದ್ರಾಪುರ ಮಠದ ಭಾರತೀಯ ಗೋಪರಿವಾರದ ವತಿಯಿಂದ ೧ಲೋಡ್ ಮೇವು ಚಿಕ್ಕಬಳ್ಳಾಪುರ ಭಾಗದಿಂದ ಸಂಗ್ರಹಿಸಿ ಹೊಸನಗರ, ನಗರ ಪ್ರದೇಶದ ನೆರೆ ಸಂತ್ರಸ್ತರಿಗೆ ವಿತರಣೆ ಮಾಡಲಾಯಿತು. ಮೇವಿನ ಪ್ರಾಯೋಜಕತ್ವವನ್ನು ಭಾರತೀಯ ಗೋ ಪರಿವಾರ ಚಿಕ್ಕಬಳ್ಳಾಪುರ ಸಂಚಾಲಕ ನಾರಾಯಣಪ್ಪ ಮತ್ತು ತಂಡ ಮಾಡಿದರು. ಶ್ರೀರಾಮಚಂದ್ರಾಪುರ ಮಠ ಸಾಗಾಣಿಕೆಯ ಜಾವಾಬ್ದಾರಿ ವಹಿಸಿದ್ದು, ಭಾರತೀಯ ಗೋಪರಿವಾರದ ಶ್ರೀಸಂಯೋಜಕ ಆರ್ ಕೆ ಭಟ್ ಸಂಯೋಜನೆ ಮಾಡಿದ್ದಾರೆ. ಭಾರತೀಯ ಗೋಪರಿವಾರ ಮಾರ್ಗದರ್ಶಕ ವಿ ಡಿ ಭಟ್ ಮತ್ತು ತಂಡದ ಸಂಯೋಜನೆಯಲ್ಲಿ ಅಂಕೋಲ, ಗುಂಡಬಾಳ, ಹಿಲ್ಲೂರು ಭಾಗದ […]

Continue Reading

ಬಜಕೂಡ್ಲು ಗೋಶಾಲೆಯಲ್ಲಿ ಗಣೇಶ ಚತುರ್ಥಿ

ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳ ಕಾಮದುಘಾ ಯೋಜನೆಯಲ್ಲಿ ಕಾರ್ಯಾಚರಿಸುತ್ತಿರುವ ಬಜಕೋಡ್ಲು ಅಮೃತಧಾರಾ ಗೋಶಾಲೆಯಲ್ಲಿ ಎಣ್ಮಕಜೆ ವಲಯ ವೈದಿಕ ವಿಭಾಗದ ನೇತೃತ್ವದಲ್ಲಿ ಸೆ.೨ರಂದು ಬೆಳಗ್ಗೆ ಗಣಪತಿ ಹವನ, ಗೋಪಾಲಕೃಷ್ಣ ಪೂಜೆ, ಗೋಪೂಜೆಯೊಂದಿಗೆ ಗಣೇಶ ಚತುರ್ಥಿ ಸಮಾರಂಭ ನಡೆಯಿತು. ಮಹಾಮಂಡಲ ಧರ್ಮಕರ್ಮ ಸಹಕಾರ್ಯದರ್ಶಿ ವೇ. ಮೂ. ಕೇಶವಪ್ರಸಾದ ಕೂಟೇಲು ಅವರ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆದವು.

Continue Reading

ನೆರೆಯಿಂದ ಸಂತ್ರಸ್ತ ಜನತೆಗೆ ಭಾರತೀಯ ಗೋಪರಿವಾರದ ನೆರವು

ಬೆಂಗಳೂರು: ಶ್ರೀರಾಮಚಂದ್ರಾಪುರಮಠ ಭಾರತೀಯ ಗೋಪರಿವಾರ ತಂಡದಿಂದ ಕಳೆದ ಒಂದು ತಿಂಗಳ ಅವಧಿಯಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳ ನೆರೆ ಸಂತ್ರಸ್ತ ಪ್ರದೇಶಗಳಿಗೆ ಸುಮಾರು 25ಲೋಡ್ ಮೇವು, ಸುಮಾರು 4ಲಕ್ಷ ಮೌಲ್ಯದ ಅಗತ್ಯ ವಸ್ತುಗಳು, 1ಟನ್ ಅಕ್ಕಿ, 18ಟನ್ ಪಶು ಆಹಾರ ಸಂಗ್ರಹಿಸಿ ವಿತರಣೆ ಮಾಡುವ ಮಹಾ ಕಾರ್ಯವನ್ನು ಮಾಡಲಾಯಿತು. ದಾವಣಗೆರೆ ಜಿಲ್ಲೆಯಿಂದ 2ಲೋಡ್ ಒಣಹುಲ್ಲನ್ನು ಜಿಲ್ಲಾ ಗೋ ಸಂಚಾಲಕ ಶ್ರೀಕಾಂತ್ ಮತ್ತು ಗೋಪರಿವಾರದ ಸದಸ್ಯರು ದಾನಿಗಳಿಂದ ಸಂಗ್ರಹಿಸಿ ಹಾನಗಲ್‌ನ ತಿಳುವಳ್ಳಿಯ ವಿಶ್ವಹಿಂದೂ ಪರಿಷತ್, ಭಜರಂಗ ದಳ ಸಂಚಾಲಿತ ಗೋಶಾಲೆಗೆ […]

Continue Reading

ಶ್ರೀರಾಮಾಶ್ರಮದಲ್ಲಿ ಬೆಣ್ಣೆ ಸವಿದರಾ ಕೃಷ್ಣ – ರಾಧೆಯರು ?

ಬೆಂಗಳೂರು: ಗಿರಿನಗರದ ಶ್ರೀರಾಮಾಶ್ರಮದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ವೈವಿಧ್ಯಮಯವಾದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.   ಶ್ರೀರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಉಪಸ್ಥಿತಿಯಲ್ಲಿ ಜರುಗಿದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮಗಳಲ್ಲಿ ಬೆಳಗ್ಗೆ ಕೃಷ್ಣ-ರಾಧೆ ವೇಷಭೂಷಣ ತೊಟ್ಟು ಬಂದ ಪುಟಾಣಿಗಳಿಗೆ ಕೃಷ್ಣನ ಕುರಿತಾದ ರಸಪ್ರಶ್ನೆಗಳನ್ನು ಕೇಳಲಾಯಿತು. ಆ ಬಳಿಕ ಯಶೋಧೆ ಮಾತೆಯರು ಕೃಷ್ಣನನ್ನು ಮಡಿಲಲ್ಲಿ ಕೂರಿಸಿಕೊಂಡು ಮೊಸರನ್ನು ಕಡೆದು ಬೆಣ್ಣೆ ತೆಗೆದ ಸಂದರ್ಭವು ಸಂತಸವನ್ನು ಹೆಚ್ಚಿಸಿತು. ಈ ಬೆಣ್ಣೆಯನ್ನು ಕೃಷ್ಣ-ರಾಧೆ ವೇಷ ತೊಟ್ಟ ಮಕ್ಕಳಿಗೆ ಶ್ರೀ ರಾಘವೇಶ್ವರ […]

Continue Reading

ಗೋ ಆಶ್ರಮದಲ್ಲಿ ತಂತ್ರಜ್ಞರಿಂದ ಶ್ರಮ ಸೇವೆ.

ಮಾಲೂರು: ತಾಲೂಕಿನ ಗಂಗಾಪುರ ಶ್ರೀ ರಾಘವೇಂದ್ರ ಗೋ ಆಶ್ರಮದಲ್ಲಿ ಅಂತರಾಷ್ಟ್ರೀಯ ಸಂಸ್ಥೆ ಡೆಲ್ – ಇಎಂಸಿ ಗೋಪಾಲ್ಸ್ ಸ್ವಯಂಸೇವಕರು ಗುರುವಾರ ಶ್ರಮ ಸೇವೆ ನಡೆಸಿದರು.   ಸೋಮವಾರ ಸುರಿದ ಬಾರಿ ಮಳೆಯಿಂದ ಗೋಆಶ್ರಮದ ಕೊಟ್ಟಿಗೆಯೊಂದರ ಗೋಡೆ ಭಾಗಶಃ ಕುಸಿದಿದ್ದು, ಇದರ ಕಲ್ಲುಗಳ ಸ್ಥಳಾಂತರಿಸಿ, ಸ್ವಚ್ಛ ಮಾಡಿದರು.   ಗೋಶಾಲೆಯಲ್ಲಿರುವ ಸುಮಾರು ಎಂಟು ಗೋತಳಿಗಳ ವಿಶೇಷತೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಗೋಶಾಲೆಯ ಆವರಣದಲ್ಲಿ ವರ್ಷದ ಹಿಂದೆ ತಾವು ನೆಟ್ಟ ಗಿಡಗಳ ನಡುವೆ ಬೆಳೆದ ಕಳೆಗಳನ್ನು ಕಿತ್ತು ಸ್ವಚ್ಛ ಗೊಳಿಸಿದರು. […]

Continue Reading

ಮಕ್ಕಳು ಮನಸ್ಸನ್ನು ಅರಳಿಸುವ ಸಾಹಿತ್ಯ ಓದಬೇಕು. ಕೆರಳಿಸುವುದನ್ನಲ್ಲ : ಹರಿಕೃಷ್ಣ ಪುನರೂರು

ನಂತೂರು: ಕರ್ನಾಟಕದಲ್ಲಿ ಶೇ.35ರಷ್ಟು ಮಂದಿ ಮಾತ್ರ ಕನ್ನಡ ಮಾತನಾಡುತ್ತಿದ್ದಾರೆ. ಬೇರೆ ರಾಜ್ಯದವರು ಕರ್ನಾಟಕಕ್ಕೆ ಬಂದು ಕನ್ನಡವನ್ನು ಕಲಿಯುತ್ತಿಲ್ಲ. ಇಂಗ್ಲಿಷ್ ಮಾಧ್ಯಮಕ್ಕೆ ವಿರೋಧವಲ್ಲ. ಆದರೆ ಕನ್ನಡ ಮತ್ತು ತುಳುವನ್ನು ಮರೆಯಬಾರದು. ಎಲ್ಲ ಭಾಷೆ ಕಲಿಯಬಹುದು. ಮಕ್ಕಳು ಮನಸ್ಸನ್ನು ಅರಳಿಸುವ ಸಾಹಿತ್ಯ ಓದಬೇಕು. ಕೆರಳಿಸುವುದನ್ನಲ್ಲ ಎಂದು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಹೇಳಿದರು.   ಅವರು ಬುಧವಾರ ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ಶ್ರೀ ಭಾರತೀ ಪದವಿ ಕಾಲೇಜಿನ ಕನ್ನಡ […]

Continue Reading

ಹವ್ಯಕ ಮಹಾಸಭಾದಿಂದ ಗುರುಭಿಕ್ಷಾಸೇವೆ.

ಹವ್ಯಕ ಮಹಾಸಭೆಯು ಸಮಾಜಮುಖೀ ಕಾರ್ಯದಲ್ಲಿ ನಿರತವಾಗಿದ್ದು, ಸಮಾಜಕ್ಕೆ ಶಕ್ತಿ ತುಂಬುವ; ಸಮಾಜದ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡುತ್ತಿದೆ. ಮಹಾಸಭೆಯ ಕಾರ್ಯಗಳ ಬಗ್ಗೆ ಹೆಮ್ಮೆಯಿದೆ ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು. ಗಿರಿನಗರದ ಶಾಖಾಮಠದಲ್ಲಿ ಚಾತುರ್ಮಾಸ್ಯವ್ರತವನ್ನು ನಡೆಸುತ್ತಿರುವ ಪೂಜ್ಯ ಶ್ರೀಗಳು, ಹವ್ಯಕ ಸಮಾಜದ ಪ್ರಾತಿನಿಧಿಕ ಸಂಸ್ಥೆಯಾದ ಶ್ರೀ ಅಖಿಲ ಹವ್ಯಕ ಮಹಾಸಭೆಯಿಂದ ಶ್ರೀಗುರುಭಿಕ್ಷಾ ಸೇವೆ ಸ್ವೀಕರಿಸಿ ಮಹಾಸಭೆಯ ಕಾರ್ಯಗಳ ಬಗ್ಗೆ ಪದಾಧಿಕಾರಿಗಳಿಂದ ಮಾಹಿತಿಪಡೆದು, ಮಹಾಸಭೆಗೆ ಗುರುಪೀಠದ ಆಶೀರ್ವಾದ ಹಾಗೂ ಮಾರ್ಗದರ್ಶನ ಸದಾ ಇರಲಿದೆ ಎಂದರು. ಮಹಾಸಭೆಯ […]

Continue Reading

ಮನೆ ಮನೆಯಲ್ಲಿ ರುದ್ರಪಠಣ

ನಮ್ಮ ಮನೆ ಮನೆಗಳಲ್ಲಿ ರುದ್ರಪಠಣವಾಗಬೇಕು ಎನ್ನುವ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ಮಹಾಸಂಕಲ್ಪದಂತೆ ಅದರಂತೆ ಇಂದು ಗುರುವಂದನೆಯೊಂದಿಗೆ ಮಂಗಳೂರು ಮಂಡಲ-ವಿಟ್ಲ ವಲಯದ ಕೋಡಪದವಿನ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪ್ರಥಮ ರುದ್ರಪಠಣವು ನಡೆಯಿತು.   ಮಂಡಲದ ವೈದಿಕ ಪ್ರಧಾನರಾದ ವೇ. ಮೂ. ಅಮೈ ಶಿವಪ್ರಸಾದ ಭಟ್ಟರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ವೈದಿಕರು, ವಲಯ ಪದಾಧಿಕಾರಿಗಳು ಮತ್ತು ಶಿಷ್ಯ ಭಕ್ತರು ಇದರಲ್ಲಿ ಭಾಗವಹಿಸಿದ್ದರು.

Continue Reading

ಗೋಆಶ್ರಮಕ್ಕೆ ಹಸಿಹುಲ್ಲು

ಮಾಲೂರು ತಾಲೂಕು ಗಂಗಾಪುರದ ಶ್ರೀ ರಾಘವೇಂದ್ರ ಗೋಆಶ್ರಮಕ್ಕೆ ಬೆಂಗಳೂರಿನ ವಾಸುಪೂಜ್ಯ ಸೇವಾ ಮಂಡಲ್ ನ ಸದಸ್ಯರು ಒಂದು ಲೋಡ್ ಹಸಿಹುಲ್ಲನ್ನು ಕಳುಹಿಸಿ ಕೊಟ್ಟರು. ದಾನಿಗಳ ಪರವಾಗಿ ಜಗದೀಶ್ ಅವರು ಗೋಆಶ್ರಮಕ್ಕೆ ನೀಡಿದರು. ಈ ಸಂದರ್ಭದಲ್ಲಿ ರಾಮಚಂದ್ರ ಅಜ್ಜಕಾನ, ಅನಂತ ಹೆಗಡೆ ಉಪಸ್ಥಿತರಿದ್ದರು.

Continue Reading

ಪ್ರತಿಭಾ ಪುರಸ್ಕಾರ

ಬೆಂಗಳೂರು: ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿ ಆತ್ರೇಯ ಮಂಜುಳಗಿರಿ ವೆಂಕಟೇಶನಿಗೆ ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರಿಂದ ಪ್ರತಿಭಾ ಪುರಸ್ಕಾರವನ್ನು ಅನುಗ್ರಹಿಸಿದರು.   ಕುಮಟಾ ಹವ್ಯಕ ಮಂಡಲಾಂತರ್ಗತ ಕಾರವಾರ – ಅಂಕೋಲಾ ವಲಯದ ಯಶೋದಾ ಗಿರಿ ಹಾಗೂ ಡಾ| ವೆಂಕಟೇಶ ಮಂಜುಳಗಿರಿ ಇವರ ಪುತ್ರ ಆತ್ರೇಯ ಮಂಜುಳಗಿರಿ ವೆಂಕಟೇಶ, ಯುರೋಪಿಯನ್ ಒಕ್ಕೂಟದ ಮೇಡಂ ಮೇರಿ ಕ್ಯೂರಿ ಫೆಲೋಶಿಪ್ ಗೆ ಆಯ್ಕೆಯಾಗುವ ಮೂಲಕ ವಿಶೇಷ ಸಾಧನೆಗೈದು ಶ್ರೀಗುರುಗಳ ಅನುಗ್ರಹಕ್ಕೆ ಪಾತ್ರನಾಗಿದ್ದಾನೆ. ಪ್ರಪಂಚದಾದ್ಯಂತ ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು […]

Continue Reading

ಗೋಆಶ್ರಮದ ವತಿಯಿಂದ ಶ್ರೀಗುರುಪಾದುಕಾಪೂಜಾ

ಮಾಲೂರು: ಗಂಗಾಪುರದ ಶ್ರೀ ರಾಘವೇಂದ್ರ ಗೋಆಶ್ರಮದ ವತಿಯಿಂದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ರಾಮಾಯಣ ಚಾತುರ್ಮಾಸ್ಯ ಸಂದರ್ಭದಲ್ಲಿ ಬೆಂಗಳೂರು ಗಿರಿನಗರದ ಶ್ರೀರಾಮಚಂದ್ರಾಪುರದಲ್ಲಿ ಶ್ರೀಗುರುಪಾದುಕಾಪೂಜಾ ಕಾರ್ಯಕ್ರಮ ನಡೆಯಿತು.   ಮಂಜುನಾಥ ಭಟ್ ದಂಪತಿಗಳ ಪೂಜಾ ಸೇವೆ ನಡೆಸಿದರು. ಸಂದರ್ಭದಲ್ಲಿ ಗೋಆಶ್ರಮ ಅಭಿವೃದ್ಧಿ ಮತ್ತು ನಿರ್ವಹಣಾ ಸಮಿತಿ ಕಾರ್ಯದರ್ಶಿ ಶ್ರೀಕಾಂತ ಹಗಡೆ, ಕೃಷ್ಣ ಭಟ್, ಲಕ್ಷ್ಮೀಶ ಹಾಗೂ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

Continue Reading

ಪಾದುಕಾರಾಜ್ಯವು ರಾಮರಾಜ್ಯಕ್ಕಿಂತ ಶ್ರೇಷ್ಠವಾದುದು – ಶ್ರೀಸಂಸ್ಥಾನ

ಪಾದ ಎಲ್ಲಕ್ಕಿಂತ ಕೆಳಗೆ, ರಾಮನ ಪಾದುಕೆ ಎಲ್ಲಕ್ಕಿಂತ ಮೇಲೆ. ’ರಾಮನ ಕಾಲಕೆಳಗಿರುವುದನ್ನು ತನ್ನ ತಲೆಯ ಮೇಲಿಟ್ಟುಕೊಂಡಾಗ ರಾಮನೆಷ್ಟು ಮೇಲೆ, ತಾನೆಷ್ಟು ಕೆಳಗೆ ’. ಭರತನಲ್ಲಿ ರಾಮನ ಭಾವ.   ನಾನು ದೊರೆಯಾಗಲಾರೆ. ನನ್ನಣ್ಣನಾಗಬೇಕು. ರಾಮನಿಗೆ ಭರತನಾಗಬೇಕು ಎನ್ನುವ ಆಸೆ. ಇಬ್ಬರೂ ದೊರೆಯಾಗಲಿಲ್ಲ. ಸಿಂಹಾಸನದ ಮೇಲೆ ಪಾದುಕೆಯನ್ನಿಟ್ಟ. ಪಾದುಕಾರಾಜ್ಯಕ್ಕೆ ರಾಮನ ಒಪ್ಪಿಗೆ. ಪಾದುಕಾ ಸ್ಪರ್ಶಕ್ಕೆ ಚೈತನ್ಯ.   ಶ್ರೀ ಶಂಕರಾಚಾರ್ಯರ ಸಂಕಲ್ಪ ನಮ್ಮ ಮಠ. ರಾಮ ಪಾದುಕೆಯನ್ನು ಕೊಟ್ಟು, ತನ್ನನ್ನಿಟ್ಟು ಕಳುಹಿಸಿದ. ಭರತ ಪಟ್ಟದಾನೆಯ ಮೇಲೆ ನೆತ್ತಿಯನಿಟ್ಟು, ಅದರ […]

Continue Reading

ಹೊಸಾಡ ಸಮಿತಿಯಿಂದ ಪದುಕಾ ಪೂಜೆ

ಬೆಂಗಳೂರು: ಶ್ರೀ ಸಂಸ್ಥಾನ ಗೋಕರ್ಣ ಶ್ರೀರಾಮಚಂದ್ರಾಪುರ ಮಠದ ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ರಾಮಾಯಣ ಚಾತುರ್ಮಾಸದಲ್ಲಿ ಗೋ ಸಹಸಂಸ್ಥೆಗಳ ಪರವಾಗಿ ಹೊಸಾಡ ಅಮೃತಧಾರಾ ಗೋ ಬ್ಯಾಂಕ್ ಪರವಾಗಿ ಪಾದುಕಾಪೂಜೆ ನಡೆಯಿತು.   ಗೋ ಬ್ಯಾಂಕ್ ವ್ಯವಸ್ಥಾಪಕ ಗಣಪತಿ ಹೆಗಡೆ ಪಾದುಕಾ ಪೂಜೆ ನೆರವೇರಿಸಿದರು. ಗೋಬ್ಯಾಂಕ್ ಸಮಿತಿಯ ಸದಸ್ಯರು ಹಾಜರಿದ್ದರು. ಶ್ರೀ ಸಂಸ್ಥಾನದವರ ಆಶೀರ್ವಾದ ಮಂತ್ರಾಕ್ಷತೆಯನ್ನು ಪಡೆದುಕೊಂಡರು.

Continue Reading

ಭರತ, ರಾಮರಿಗೆ ಅವರೇ ಸಾಟಿ..

ಸತ್ಪುರುಷರಿಗೆ ಕೋಪ ಯಾವಾಗ ಬರುತ್ತದೆ? ಧರ್ಮಕ್ಕೆ ಚ್ಯುತಿಯಾದಾಗ. ಧರ್ಮಕ್ಕೆ ಚ್ಯುತಿ ಮಾಡುವ ಕಾರ್ಯ ನಡೆದರೆ, ಚ್ಯುತಿಯ ಮಾತು ಕೇಳಿ ಬಂದರೆ ಸತ್ಪುರುಷರಿಗೆ ಕೋಪ ಬರುವುದುಂಟು. ಆಗಾಗ ಕೋಪ ಬರುವವವನಲ್ಲ ರಾಮ. ಜಾಬಾಲಿಗಳ ಮಾತು ನಂಬಿಕೆಗೆ ಚ್ಯುತಿ ಬರುವಂತಿತ್ತು. ಹಾಗಾಗಿ ಅವರ ಮಾತು ಕೇಳಿದಾಗ ರಾಮನಿಗೆ ಕೋಪ ಬಂತು.   ವಸಿಷ್ಠರು ರಾಮನಲ್ಲಿ “ದಶರಥನ ಹಿರಿಯ ಮಗ ನೀನು. ನಿನ್ನ ರಾಜ್ಯವನ್ನು ನೀನು ತೆಗೆದುಕೋ, ಸ್ವೀಕರಿಸು. ಇಕ್ಷ್ವಾಕು ವಂಶದಲ್ಲಿ ಹಿರಿಯವನೇ ರಾಜನಾದದ್ದು. ಹಾಗಾಗಿ ಇದು ನಿನಗೆ ಬರುವುದು ಸಹಜ. […]

Continue Reading

ರಾಮಚಂದ್ರಾಪುರ ಮಠದಲ್ಲಿ ತ್ಯಾಗ ಪರ್ವ: ಸಾವಿರ ಭಕ್ತರಿಂದ ಸರಳ ಜೀವನ ಪ್ರತಿಜ್ಞೆ

ಬೆಂಗಳೂರು: ಶ್ರೀರಾಮಚಂದ್ರಾಪುರಮಠದ ಸಾವಿರಕ್ಕೂ ಹೆಚ್ಚು ಶಿಷ್ಯಭಕ್ತರು ಅದ್ದೂರಿ- ಆಡಂಬರದ ಜೀವನಕ್ಕೆ ವಿದಾಯ ಹೇಳಿ ಭಾನುವಾರ ಸರಳ ಜೀವನದ ಪ್ರತಿಜ್ಞೆ ಕೈಗೊಂಡರು. ತಕ್ಷಶಿಲಾ ವಿಶ್ವವಿದ್ಯಾನಿಲಯದ ಪುನರವತರಣದ ಮಹಾಸಂಕಲ್ಪವಾಗಿ ಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿಯವರು ಅನುಗ್ರಹಿಸುತ್ತಿರುವ ಧಾರಾ ರಾಮಾಯಣದ ಅಂಗವಾಗಿ ಇಲ್ಲಿನ ಗಿರಿನಗರ ರಾಮಾಶ್ರಮದಲ್ಲಿ ನಡೆದ ತ್ಯಾಗ ಪರ್ವದಲ್ಲಿ ನೂರಾರು ಮಂದಿ ದುಶ್ಚಟ- ವ್ಯಸನ, ಜೀವನಕ್ಕೆ ಅನಿವಾರ್ಯವಲ್ಲ ಎನ್ನುವ ವಸ್ತುಗಳನ್ನು ತ್ಯಜಿಸಿದರು. ಹಲವು ಮಂದಿ ಚಿನ್ನ, ವಜ್ರಾಭರಣಗಳನ್ನು ಉದ್ದೇಶಿತ ವಿಶ್ವವಿದ್ಯಾಪೀಠಕ್ಕೆ ದೇಣಿಗೆಯಾಗಿ ಸಮರ್ಪಿಸಿದರು. ಧಾರಾ ರಾಮಾಯಣ ಪ್ರವಚನವು ಪಾದುಕಾ ಪಟ್ಟಾಭಿಷೇಕ ಘಟ್ಟ ತಲುಪಿದ ಹಿನ್ನೆಲೆಯಲ್ಲಿ, […]

Continue Reading

ಪ್ರಿಯದರ್ಶಿನಿ ಶಾಲಾ ವಠಾರದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಬೆಟ್ಟಂಪಾಡಿ: ಜಗದ್ಗುರುಶಂಕರಾಚಾರ್ಯ ಮಹಾಸಂಸ್ಥಾನಂ ಶ್ರೀ ಸಂಸ್ಥಾನ ಗೋಕರ್ಣ ಶ್ರೀರಾಮಚಂದ್ರಾಪುರ ಮಠದ ಶ್ರೀ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಆಶಯದಂತೆ ಉಪ್ಪಿನಂಗಡಿ ಮಂಡಲ ಬೆಟ್ಟಂಪಾಡಿ ವಲಯದ ನೇತೃತ್ವದಲ್ಲಿ ಪ್ರಿಯದರ್ಶಿನಿ ಶಾಲಾ ವಠಾರದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು.   ಕಾರ್ಯಕ್ರಮವನ್ನು ಪ್ರಿಯದರ್ಶಿನಿ ವಿದ್ಯಾಲಯದ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಸದಾಶಿವ ರೈ ಗುಮ್ಮಟೆಗದ್ದೆ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಬೆಟ್ಟಂಪಾಡಿ ವಲಯ ಅಧ್ಯಕ್ಷ ಶ್ರೀಹರಿ ದರ್ಬೆ ವಹಿದ್ದರು. ಪುತ್ತೂರು ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ಬೆಟ್ಟಂಪಾಡಿ ಪ್ರಿಯದರ್ಶಿನಿ ವಿದ್ಯಾಸಂಸ್ಥೆ, ನಿಡ್ಪಳ್ಳಿ ಗ್ರಾಮ […]

Continue Reading

ಅಮೃತಧಾರಾ ಗೋಶಾಲೆಯಲ್ಲಿ ಗಾಯತ್ರಿ ಹವನ

ಬಜಕೂಡ್ಲು: ಬಜಕೂಡ್ಲುವಿನ ಶ್ರೀ ಅಮೃತಧಾರಾ ಗೋಶಾಲೆ, ಗೋಲೋಕದ ಗೋವರ್ಧನ ಧರ್ಮ ಮಂದಿರದಲ್ಲಿ ಪ್ರಾಕೃತಿಕ ವೈಪರೀತ್ಯಶಮನ, ದುರಿತನಿವಾರಣೆ, ಆರೋಗ್ಯಪ್ರಾಪ್ತಿ ಹಾಗೂ ಶ್ರದ್ಧಾ-ಮೇಧಾ-ಪ್ರಜ್ಞಾಪ್ರಾಪ್ತಿಯ ಉದ್ದೇಶದಿಂದ ಗಾಯತ್ರೀಹವನವನ್ನು ಆ.೧೬ರಂದು ಹಮ್ಮಿಕೊಳ್ಳಲಾಗಿತ್ತು.   ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯಾನುಗ್ರಹದ ಮುಳ್ಳೇರಿಯಾ ಮಂಡಲಾತರ್ಗತ ಎಣ್ಮಕಜೆ ಹವ್ಯಕ ವಲಯದ ವೈದಿಕ-ಸಂಸ್ಕಾರ ವಿಭಾಗ ವತಿಯಿಂದ ಪರಮಪವಿತ್ರವಾದ ಗಾಯತ್ರೀ ಪ್ರತಿಪತ್ (ಶ್ರಾವಣ ಕೃಷ್ಣ ಪ್ರತಿಪತ್) ನಂದು ಮಹಾಮಂಡಲ ಧರ್ಮ ಕರ್ಮ ಸಹಕಾರ್ಯದರ್ಶಿ ವೇ. ಮೂ. ಕೇಶವ ಪ್ರಸಾದ ಕೂಟೇಲು ಅವರ ನೇತೃತ್ವದಲ್ಲಿ ಮುಳ್ಳೇರಿಯಾ ಮಂಡಲ ಸಂಸ್ಕಾರ […]

Continue Reading

ಗೋಆಶ್ರಮದಲ್ಲಿ ಬರ ಗೋಶಾಲೆ ಉದ್ಘಾಟನೆ

ಮಾಲೂರು: ಕೋಲಾರ ಪಶುಸಂಗೋಪನಾ ಇಲಾಖೆ ವತಿಯಿಂದ ಮಾಲೂರು ಪಶುವೈದ್ಯಕೀಯ ಚಿಕಿತ್ಸಾಲಯದ ಸಹೋಯೋಗದಲ್ಲಿ ಮಾಲೂರು ತಾಲೂಕು ಬರ ಗೋಶಾಲೆಯನ್ನು ಮಾಲೂರು ಗಂಗಾಪುರದ ಶ್ರೀ ರಾಘವೇಂದ್ರ ಗೋಆಶ್ರಮದಲ್ಲಿ ತೆರೆಯಲಾಗಿದೆ.   ಮಾಲೂರು ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಜಗದೀಶ್ ಗೋಶಾಲೆಯನ್ನು ಉದ್ಘಾಟಿಸಿದರು. ಸಂಚಾರಿ ಗೋಶಾಲೆಯ ಪಶು ವೈದ್ಯಾಧಿಕಾರಿ ಡಾ. ರೆಡ್ಡಪ್ಪ, ಗೋಆಶ್ರಮದ ವಿಶೇಷ ಕರ್ತವ್ಯ ಅಧಿಕಾರಿ ರಾಮಚಂದ್ರ ಅಜ್ಜಕಾನ, ಗೋಶಾಲೆಯ ಕೃಷ್ಣ ಭಟ್, ಅನಂತ ಹೆಗಡೆ ಹಾಜರಿದ್ದರು. ಮಾಲೂರು ತಾಲೂಕಿನಲ್ಲಿ ತೀವ್ರ ಬರದ ಹಿನ್ನಲೆಯಲ್ಲಿ ಸರ್ಕಾರ ಈ ಗೋಶಾಲೆಯನ್ನು ಇಲ್ಲಿ […]

Continue Reading

ಅಂಕೋಲಾ ನೆರೆ ಸಂತ್ರಸ್ತರಿಗೆ ಶ್ರೀರಾಮಚಂದ್ರಾಪುರ ಮಠ ನೆರವು

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಪ್ರವಾಹಪೀಡಿತ ಗ್ರಾಮಗಳ ಸಂತ್ರಸ್ತರಿಗೆ ಶ್ರೀರಾಮಚಂದ್ರಾಪುರ ಮಠದ ವತಿಯಿಂದ ಸುಮಾರು ಮೂರು ಲಕ್ಷ ರೂಪಾಯಿ ಮೌಲ್ಯದ ಪರಿಹಾರ ಸಾಮಗ್ರಿ ವಿತರಿಸಲಾಯಿತು.   ಹುಬ್ಬಳ್ಳಿಯ ಪ್ರಸಾದ ಪಾಟೀಲ ಸಹಯೋಗದಲ್ಲಿ ರಾಮಚಂದ್ರಾಪುರ ಮಠದ ಕಾರ್ಯಕರ್ತರು ಡೋಂಗ್ರಿ ಪಂಚಾಯತ್ ವ್ಯಾಪ್ತಿಯ ಹೆಗ್ಗಗಣೆ, ನೇರಳೆಬೈಲ್, ಹೊಸಗದ್ದೆ, ಡೋಂಗ್ರಿ, ಬಿದರಳ್ಳಿ, ಸುಂಕನಾಳ ಪಂಚಾಯತ್ ವ್ಯಾಪ್ತಿಯ ರಾಜನಗುಳಿ, ಹೊಳೆಗದ್ದೆ, ಸುಂಕದಗುಳಿ, ಹಿಲ್ಲೂರು ಪಂಚಾಯ್ತಿ ವ್ಯಾಪ್ತಿಯ ತೊಗಸೆ, ಹೊಸಕಂಬಿ, ಹೊಳೆಮಕ್ಕಿ, ಹಡಿನಗದ್ದೆ, ಎಕ್ಕೆಗುಳಿ, ಮಾಸ್ತಿಕಟ್ಟೆ, ಆಚಾರಿಮನೆಕೇರಿ, ಮೊಗಟಾ ಪಂಚಾಯ್ತಿಯ ಮಂಗನಖಾನ, […]

Continue Reading