ಹಲಸು ಮೇಳ ಸಿದ್ಧತಾ ಚಿಂತನೆ ಸಂಪನ್ನ

ಬದಿಯಡ್ಕ, 15.05.2019 : ಶ್ರೀಸಂಸ್ಥಾನದವರ ಮಾರ್ಗದರ್ಶನದಲ್ಲಿ ನಡೆದಯುತ್ತಿರುವ ಅನನ್ಯ ವಿಶಿಷ್ಟ ಯೋಜನೆಯಾದ ಕಾಮದುಘಾದ ಅಡಿಯಲ್ಲಿ ಮುನ್ನಡೆಯುತ್ತಿರುವ ಬಜಕೂಡ್ಲುವಿನ ಅಮೃತಧಾರಾ ಗೋಶಾಲೆಗೆ ನಿರಂತರ ಆಹಾರ ವ್ಯವಸ್ಥೆಯನ್ನು ಪೂರೈಸುವ ಯೋಜನೆಗೆ ಪೂರಕವಾಗಿ ಹಲಸುಮೇಳವನ್ನು ಆಯೋಜಿಸಲಾಗುತ್ತಿದೆ. ಜೂನ್ 8 ರಂದು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಮುಳ್ಳೇರಿಯಾ ಹವ್ಯಕ ಮಂಡಲ, ಅಮೃತಧಾರಾ ಗೋಶಾಲೆ ಬಜಕ್ಕೂಡ್ಲು ಪೆರ್ಲ, ಮತ್ತು ಮಹಿಳೋದಯ ಬದಿಯಡ್ಕ ಇವುಗಳ ಸಂಯುಕ್ತ ಆಶ್ರಯದಲ್ಲಿ “ಹಲಸು ಬೆಳೆಸಿ ಗೋವು ಉಳಿಸಿ” ಎಂಬ ಧ್ಯೇಯ ವಾಕ್ಯದೊಂದಿಗೆ ಜರಗಲಿರುವ ಈ ಹಲಸು ಮೇಳದ ಯಶಸ್ಸಿಗಾಗಿ […]

Continue Reading

ಆಲಕ್ಕೋಡ್ನಲ್ಲಿ ಶ್ರೀಮದ್ಭಾಗವತ ಸಪ್ತಾಹಯಜ್ಞ

ಆಲಕ್ಕೋಡ್ ಗೋಕುಲದ ವಿಷ್ಣುಪ್ರಸಾದ್ ಹೆಬ್ಬಾರ್ ಇವರ ‘ ಪರಂಪರಾ ‘ ಎಂಬ ಹೊಸ ಮನೆಯಲ್ಲಿ 17.05. 2019 ಸಾಯಂ 6 ಗಂಟೆಗೆ : ಶೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರಿಗೆ ಪೂರ್ಣಕುಂಭ ಸ್ವಾಗತ 18.05.2019   ಮಧ್ಯಾಹ್ನ 12 ಗಂಟೆ ಆಶೀರ್ವಚನ : ಶೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು , ಶ್ರೀ ರಾಮಚಂದ್ರಾಪುರ ಮಠ ಹೊಸನಗ.   ಗೋಕುಲಂ, ಆಲಕ್ಕೋಡ್, P.O. ಪಾಕ್ಕಂ. ಬೇಕಲ ಕೋಟೆ, ಕಾಸರಗೋಡು 9446423641 9447413641 9495703296

Continue Reading

ಮಂಡಲಸಭೆಯಲ್ಲಿ ಶ್ರೀಮಾತಾಪ್ರಶಸ್ತಿಭೂಷಿತೆಗೆ ಮತ್ತು ಪೀಯೂಸೀ ವಾಣಿಜ್ಯ ಪ್ರತಿಭೆಗೆ ಸಮ್ಮಾನದ ಗೌರವ

ಈ ತಿಂಗಳ ಮುಳ್ಳೇರಿಯಾ ಹವ್ಯಕ ಮಂಡಲದ ಮಾಸಿಕ ಸಭೆಯು ಮಡಿಕೇರಿಯಲ್ಲಿ ನೆರವೇರಿತು. ಕೊಡಗು ಹವ್ಯಕ ವಲಯಾಧ್ಯಕ್ಷ ಡಾ. ರಾಜಾರಾಮ ಭಟ್ಟ ಅವರ ನಿವಾಸದಲ್ಲಿ ಜರುಗಿದ ಮಾಸಿಕ ಸಭೆಯು ದೀಪಜ್ವಲನ, ಧ್ವಜಾರೋಹಣ, ಶಂಖನಾದ, ಗುರುವಂದನೆ, ಗೋಸ್ತುತಿಯೊಂದಿಗೆ ಸಭೆ ಪ್ರಾರಂಭವಾಯಿತು. ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಭಟ್ಟ ಸರ್ಪಮಲೆಯವರು ಪ್ರಾಸ್ತಾವಿಕ ನುಡಿಗಳನ್ನಾಡಿ, ಗತಸಭೆಯ ವರದಿ ನೀಡಿದರು. ವಲಯ ಪದಾಧಿಕಾರಿಗಳು ವಲಯ ವರದಿಗಳನ್ನಿತ್ತರು. ವಿಭಾಗ ಪ್ರಧಾನರು ಆಯಾ ವಿಭಾಗಗಳ ವರದಿ ನೀಡಿ ಮಾಹಿತಿಗಳನ್ನಿತ್ತರು. ಸಭೆಯಲ್ಲಿ ಶ್ರೀಮಠದ ಮಾರ್ಗದರ್ಶನದಲ್ಲಿ ಜರಗಿದ ವಿವಿಧ ಸಮಾರಂಭಗಳ ಕುರಿತು ಅವಲೋಕನೆ […]

Continue Reading

ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ ಆಯೋಜಿಸಿದ್ದ ವಿಷು-ವಿಶೇಷ ಸ್ಪರ್ಧೆ -೨೦೧೯ರ ಫಲಿತಾಂಶ

ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ) ಆಯೋಜಿಸಿದ್ದ ವಿಷು-ವಿಶೇಷ ಸ್ಪರ್ಧೆ -೨೦೧೯ರ ಫಲಿತಾಂಶವು ಪ್ರಕಟಗೊಂಡಿದ್ದು, ಮೇ-೫ರಂದು ಕಾವು ಜನಮಂಗಲ ಸಭಾಭವನದಲ್ಲಿ ಜರುಗುವ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಣೆ ಮಾಡಲಾಗುವುದು. ಫಲಿತಾಂಶದ ವಿವರವನ್ನು ಮಾಧ್ಯಮ ಪ್ರಕಟಣೆಗಾಗಿ ಲಗತ್ತಿಸಿದೆ.

Continue Reading

ಈಶಾವಾಸ್ಯಂ ನಿವಾಸದಲ್ಲಿ ಪ್ರತಿರುದ್ರ ಭಜನ ರಾಮಾಯಣ ಮತ್ತು ಕುಂಕುಮಾರ್ಚನೆ ಸಂಪನ್ನ

ನೀರ್ಚಾಲು: ಶ್ರೀಸಂಸ್ಥಾನದವರ ಅನುಗ್ರಹ ಆಶೀರ್ವಾದಗಳೊಂದಿಗೆ ಮಂಗಳೂರು ಹೋಬಳಿಯ ಮುಳ್ಳೇರಿಯಾ ಮಂಡಲಾಂತರ್ಗತ ಪೆರಡಾಲ ವಲಯದ ನೀರ್ಚಾಲು ಸಮೀಪದ ಏಣಿಯರ್ಪಿನಲ್ಲಿರುವ ಕಿಳಿಂಗಾರು ವೇ.ಮೂ. ಬಾಲಕೃಷ್ಣ ಪ್ರಸಾದರ ನಿವಾಸ ಈಶಾವಾಸ್ಯಂ ನಲ್ಲಿ 02.04.2019ರಂದು ಶ್ರೀಮಠ ರಕ್ಷಾತ್ಮಕವಾದ ಧಾರ್ಮಿಕ ಕಾರ್ಯಕ್ರಮವು ಸಂಪನ್ನವಾಯಿತು. ಮಹಾಮಂಡಲಾಧ್ಯಕ್ಷೆ ಶ್ರೀಮತಿ ಈಶ್ವರಿ ಬೇರ್ಕಡವು ಧ್ವಜಾರೋಹಣ ಮಾಡಿ, ಶಂಖನಾದ ಗುರುವಂದನೆಯೊಂದಿಗೆ ಸಮಾರಂಭ ಪ್ರಾರಂಭವಾಯಿತು. ಮಂಗಳೂರು ಉಪ್ಪಿನಂಗಡಿ ಮುಳ್ಳೇರಿಯಾ ಹವ್ಯಕ ಮಂಡಲಗಳಿಂದ ಬಂದು ಸೇರಿದ ರುದ್ರಾಧ್ಯಾಯಿಗಳಿಂದ ಪ್ರದೋಷ ಪ್ರತಿರುದ್ರ ಪಠಣವು ಜರಗಿತು. ಮಾತೃ ವಿಭಾಗದವರಿಂದ ಭಜನ ರಾಮಾಯಣ ಮತ್ತು ಕುಂಕುಮಾರ್ಚನೆಯು ಜರಗಿತು. […]

Continue Reading

ನಕಲಿ ಅಶ್ಲೀಲ ಸಿಡಿ ಕೇಸ್ – ಚಾರ್ಜ್’ಶೀಟ್ ರದ್ಧತಿಗೆ ನಕಾರ ; ತನಿಖೆ ಮುಂದುವರಿಸಲು ಆದೇಶ

ನಕಲಿ ಅಶ್ಲೀಲ ಸಿಡಿ ತಯಾರಿಸಿ; ಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ತೇಜೋವಧೆಯ ಹುನ್ನಾರ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿ, ಕುಮಟಾದ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ಚಾರ್ಜ್’ಶೀಟ್ ರದ್ಧತಿಗೆ ಆರೋಪಿಗಳು ಮಾಡಿದ್ದ ಮೇಲ್ಮನವಿಯನ್ನು ಕಾರವಾರದ ಜಿಲ್ಲಾ ಸತ್ರ ನ್ಯಾಯಾಲಯ ವಜಾಗೊಳಿಸಿದ್ದು, ಪ್ರಕರಣದ ವಿಚಾರಣೆಯನ್ನು ಮುಂದುವರಿಸುವಂತೆ ಆದೇಶ ಹೊರಡಿಸಿದೆ.   2010 ರಲ್ಲಿ ಪೂಜ್ಯ ಶ್ರೀಗಳನ್ನು ಹೋಲುವ ವ್ಯಕ್ತಿಗೆ ಶ್ರೀಗಳಂತೆ ಉಡುಗೆತೊಡುಗೆಯನ್ನು ತೊಡೆಸಿ, ಶ್ರೀಗಳಂತೆ ಹಾವ-ಭಾವಗಳ ಅಭ್ಯಾಸ ಮಾಡಿಸಿ; ಚಿತ್ರೀಕರಣ ಮಾಡಲಾಗಿತ್ತು. ವೈದಿಕ ವೃತ್ತಿಯಲ್ಲಿರುವ ಆರೋಪಿಗಳು, ತಮ್ಮ ಮಧ್ಯೆ ನಡೆಸಿದ ಸಂಭಾಷಣೆಗಳು, […]

Continue Reading

ಸಾರ್ಥಕವಾಯುತು ಶ್ರೀ ಅಖಿಲಹವ್ಯಕ ಮಹಾಸಭೆಯ ಸಂಸ್ಥಾಪನೋತ್ಸವ

ಬೆಂಗಳೂರು: ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಹವ್ಯಕ ಭವನದಲ್ಲಿ ಸಂಸ್ಥಾಪನೋತ್ಸವ, ಹವ್ಯಕ ವಿಶೇಷ ಪ್ರಶಸ್ತಿ, ಪಲ್ಲವ ಪುರಸ್ಕಾರ ಪ್ರದಾ‌ನ ಸಮಾರಂಭವು ಸಂಭ್ರಮದಿಂದ ಜರುಗಿತು. ಸಮಾರಂಭದ ಅಭ್ಯಾಗತರಲ್ಲಿ ಒಬ್ಬರಾದ ಸಾಹಿತಿ ಶ್ರೀಮತಿ ಎ.ಪಿ.ಮಾಲತಿ, ಇಂದಿನ ಮೊಬೈಲ್ ಕಾಲದಲ್ಲೂ ನಮ್ಮ ಸಮಾಜದಲ್ಲಿನ ಪ್ರತಿಭೆಗಳು ಹೊರ ಬರುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದರು. ಹವ್ಯಕ ಮಹಾಸಭೆಯು ಎಲೆಮರೆಕಾಯಿಯಂತಿದ್ದ ಪ್ರತಿಭೆಗಳನ್ನು ಗುರುತಿಸಿ ಇಂದು ಸನ್ಮಾನಿಸುತ್ತಿರುವುದು ಶ್ಲಾಘನೀಯ. ಯುವ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಪುರಸ್ಕರಿಸಲಾಗುತ್ತಿದೆ. ಇದು ಅವರ ಸಾಧನೆಯ ಶಿಖರಕ್ಕೆ ಮತ್ತಷ್ಟು ಸ್ಫೂರ್ತಿಯಾಗಿದೆ ಎಂದು ಅಭಿಪ್ರಾಯವನ್ನು ಹಂಚಿಕೊಂಡರು. […]

Continue Reading

ಕಾಂಚೀ – ರಾಮಚಂದ್ರಾಪುರಮಠ ; ಶಂಕರಪೀಠಗಳ ಸಮಾಗಮ

ಕಾಂಚೀ ಕಾಮಕೋಟಿ ಮಠದ ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ವಿಜಯೇಂದ್ರ ಸರಸ್ವತಿ ಮಹಾಸ್ವಾಮಿಗಳು ಹಾಗೂ ಶ್ರೀಗೋಕರ್ಣ ಸಂಸ್ಥಾನ ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಕಾಂಚೀಮಠದಲ್ಲಿ ಭೇಟಿಮಾಡಿ ಮಾತುಕತೆ ನಡೆಸಿದರು.   ಕಾಂಚೀ ಶಂಕರಾಚಾರ್ಯರ ವಿಶೇಷ ನಿಮಂತ್ರಣದ ಮೇರೆಗೆ ಕಾಂಚೀಪುರಂನಲ್ಲಿರುವ ಮಠಕ್ಕೆ ಭೇಟಿನೀಡಿದ ಶ್ರೀರಾಮಚಂದ್ರಾಪುರಮಠದ ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳನ್ನು ಕಾಂಚೀ ಮಠದಿಂದ ವಿಶೇಷವಾಗಿ ಗೌರವಿಸಿ ಸ್ವಾಗತಿಸಿದರು. ಆನಂತರ ಪೂಜ್ಯ ಶ್ರೀಗಳು ಕಾಂಚೀ ಮೀನಾಕ್ಷಿ ದೇವಿಗೆ ವಿಶೇಷ ಫಲಪಂಚಾಂಮೃತಾಭಿಷೇಕವನ್ನು ನೆರವೇರಿಸಿ, ಕಂಚಿಯ ಬ್ರಹ್ಮೈಕ್ಯ ಪರಮಾಚಾರ್ಯರು ಹಾಗೂ ಬ್ರಹ್ಮೈಕ್ಯ ಜಯೇಂದ್ರ ಸರಸ್ವತಿಗಳ ವೃಂದಾವನವನ್ನು […]

Continue Reading

ಕಾಂಚೀ – ರಾಮಚಂದ್ರಾಪುರಮಠ ; ಶಂಕರಪೀಠಗಳ ಸಮಾಗಮ

  ಕಾಂಚೀ ಕಾಮಕೋಟಿ ಮಠದ ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ವಿಜಯೇಂದ್ರ ಸರಸ್ವತಿ ಮಹಾಸ್ವಾಮಿಗಳು ಹಾಗೂ ಶ್ರೀಗೋಕರ್ಣ ಸಂಸ್ಥಾನ ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಕಾಂಚೀಮಠದಲ್ಲಿ ಭೇಟಿಮಾಡಿ ಮಾತುಕತೆ ನಡೆಸಿದರು.   ಕಾಂಚೀ ಶಂಕರಾಚಾರ್ಯರ ವಿಶೇಷ ನಿಮಂತ್ರಣದ ಮೇರೆಗೆ ಕಾಂಚೀಪುರಂನಲ್ಲಿರುವ ಮಠಕ್ಕೆ ಭೇಟಿನೀಡಿದ ಶ್ರೀರಾಮಚಂದ್ರಾಪುರಮಠದ ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳನ್ನು ಕಾಂಚೀ ಮಠದಿಂದ ವಿಶೇಷವಾಗಿ ಗೌರವಿಸಿ ಸ್ವಾಗತಿಸಿದರು. ಆನಂತರ ಪೂಜ್ಯ ಶ್ರೀಗಳು ಕಾಂಚೀ ಮೀನಾಕ್ಷಿ ದೇವಿಗೆ ವಿಶೇಷ ಫಲಪಂಚಾಂಮೃತಾಭಿಷೇಕವನ್ನು ನೆರವೇರಿಸಿ, ಕಂಚಿಯ ಬ್ರಹ್ಮೈಕ್ಯ ಪರಮಾಚಾರ್ಯರು ಹಾಗೂ ಬ್ರಹ್ಮೈಕ್ಯ ಜಯೇಂದ್ರ ಸರಸ್ವತಿಗಳ […]

Continue Reading

ಗೋವಾದಲ್ಲಿ ಶ್ರೀಧರಪಾದುಕಾ ಪೂಜೆ

ಶ್ರೀ ಕ್ಷೇತ್ರ ವರದಹಳ್ಳಿಯ ಭಗವಾನ್ ಸದ್ಗುರು ಶ್ರೀ ಶ್ರೀಧರ ಮಹಾಸ್ವಾಮಿಗಳ ದಿವ್ಯ ಪಾದುಕೆ ದಿನಾಂಕ13/03/2019ರಿಂದ17/03/2019_ರವರೆಗೆ ಗೋವಾದಲ್ಲಿ ಮೊಕ್ಕಾಂ ಮಾಡಿ ವಿವಿಧ ಭಕ್ತರ ಮನೆಗೆ ತೆರಳಿ ಪಾದಪೂಜಾ ಹಾಗೂ ಭಿಕ್ಷಾ ಸೇವೆಯನ್ನು ಸ್ವೀಕರಿಸಿ ಅನುಗ್ರಹ ಮಾಡಿತು.   ಅಂತೆಯೇ ದಿನಾಂಕ 17/03/2019 ಭಾನುವಾರದ ಏಕಾದಶಿಯ ದಿನ ಪಾದಪೂಜೆ ಮಾಡುವ ಭಾಗ್ಯ ನಮ್ಮ ಗೋವಾ ಹವ್ಯಕ ವಲಯಕ್ಕೆ ಲಭಿಸಿದ್ದು ನಮ್ಮ ಪುಣ್ಯ. ಪಾದುಕಾ ಸವಾರಿಯು ಮೊಕ್ಕಾಂ ಇದ್ದ ಮಡಗಾಂವಿನ ಶ್ರೀಮತಿ ರೇಖಾ ಮತ್ತು ಶ್ರೀ ಎಂ.ಕೆ ಹೆಗಡೆಯವರ ಮನೆಯಲ್ಲಿ ಪಾದಪೂಜೆಯ […]

Continue Reading

ಯೋಗಪಟ್ಟಾಭಿಷೇಕ ಮಹೋತ್ಸವ ಮತ್ತು ಮಹಾಪಾದುಕಾಪೂಜೆ ; ಮುಳ್ಳೇರಿಯಾ ಮಂಡಲ ಚಿಂತನಸಭೆ

ಪರಮಪೂಜ್ಯ ಶ್ರೀಸಂಸ್ಥಾನದವರ ಸಂನ್ಯಾಸದೀಕ್ಷೆಯ 26ನೆಯ ವರ್ಷದ ಆಚರಣೆಯ ಅಂಗವಾಗಿ ಯೋಗಪಟ್ಟಾಭಿಷೇಕ ಮಹೋತ್ಸವ ಮತ್ತು ಮಹಾಪಾದುಕಾಪೂಜೆ‌ಗಳು ಉಪ್ಪಿನಂಗಡಿ ಮಂಡಲದ ಮಾಣಿಯ ರಾಮಚಂದ್ರಾಪುರಮಠ ಪೆರಾಜೆಯಲ್ಲಿ 9 ಏಪ್ರಿಲ್ 2019 ಮತ್ತು 11 ಏಪ್ರಿಲ್ 2019 ಎರಡು ದಿನಗಳಲ್ಲಿ ಸಂಪನ್ನಗೊಳ್ಳಲಿವೆ. ಈ ಬಗ್ಗೆ ಮುಳ್ಳೇರಿಯಾ ಹವ್ಯಕ ಮಂಡಲದ ನೇತೃತ್ವದಲ್ಲಿ ಸಮಾಲೋಚನಾ ಸಭೆಯು ಶ್ರೀ ಭಾರತೀ ವಿದ್ಯಾಪೀಠ ಬದಿಯಡ್ಕದಲ್ಲಿ 10.03.2019 ರಂದು ಜರಗಿತು. ಧ್ವಜಾರೋಹಣ ಶಂಖನಾದ ಗುರುವಂದನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಮಂಡಲ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಭಟ್ಟ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಹಾ ಮಂಡಲ […]

Continue Reading

ಸಂಭ್ರಮದ ಕಾನುಗೋಡು ವಲಯೋತ್ಸವ

ಕಾನುಗೋಡು : ಶ್ರೀರಾಮಚಂದ್ರಾಪುರ ಮಂಡಲ ವ್ಯಾಪ್ತಿಯಲ್ಲಿ ವೈಭವದಿಂದ ಕಾನುಗೋಡು ವಲಯೋತ್ಸವ ಜರುಗಿತು. ವಲಯೋತ್ಸವದ ಬೆಳಗಿನ ಅವಧಿಯಲ್ಲಿ ಕಾರ್ಯಕ್ರಮದ ಉದ್ಘಾಟನೆಯನ್ನು ಮಹಾಮಂಡಲದ ರುಕ್ಮಾವತಿ ಅವರು ನೆರವೇರಿಸಿದರು. ಎಲ್ಲಾ ವಿಭಾಗದಿಂದ ೧೧೦ ಕ್ಕೂ ಹೆಚ್ಚು ಮಂದಿ ಭಾಗವಹಿಸಿ ಸಂಪ್ರದಾಯದ ಹಾಡು, ಕನ್ಯಾವರ್ತನೆ ಕಾಯಿ ಅಲಂಕಾರ, ಹೂವಿನ ಮಾಲೆ ಸ್ಪರ್ಧೆಗಳು ನಡೆದವು. ಎಲ್ಲ ವಿಭಾಗದಿಂದ ಸ್ಪರ್ಧೆಯಲ್ಲಿ ಜನರಿಂದ ಉತ್ತಮ ಪ್ರತಿಸ್ಪಂದನೆ ಕಂಡು ಬಂತು.   ಸಂಜೆಯ ಕಾರ್ಯಕ್ರಮದಲ್ಲಿ ಮಹಾಮಂಡಲ ಮಾತೃಪ್ರಧಾನೆ ಕಲ್ಪನಾ ತಲವಾಟ ಅವರು ಸಾಧಕರನ್ನು ಸನ್ಮಾನಿಸಿ ಮಾತನಾಡಿದರು. ಇಂತಹ ಕಾರ್ಯಕ್ರಮದ […]

Continue Reading

ಲಕ್ಷಭಾಗಿನಿಯರಿಗೆ ಬಾಗಿನ : ಧನ್ಯರಾದ ಸುರಭಿಸೇವಿಕೆಯರು

  ಬೆಂಗಳೂರು: 22.02.2019ರಂದು ಬೆಂಗಳೂರಿನ ಗಿರಿನಗರದ ರಾಮಾಶ್ರಮದಲ್ಲಿ ಮಾತೆಯರ ಸಂಭ್ರಮ. ಶ್ರೀಮಠದ ಸಮವಸ್ತ್ರ ಧರಿಸಿದ 150ಕ್ಕೂ ಹೆಚ್ಚು ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು. ಅನಂತರ ಶ್ರೀಮಠದ ಒಳಿತಿಗಾಗಿ 4 ವರ್ಷಗಳಿಂದ ಚಾಚೂ ತಪ್ಪದೆ ಪ್ರತಿದಿನವೂ ನಡೆದ ಬನಶಂಕರಿ ದೀಪದ ಸೇವೆ ಮತ್ತು ಶ್ರೀಕರಾರ್ಚಿತ ರಾಮನ ಮುಂದೆ ಪ್ರತಿ ದಿನ ಸಂಜೆ ಪೂಜೆಯ ಸಮಯದಲ್ಲಿ ಬೆಳಗುವ ರಾಮತಾರಕದ ಅಕ್ಷರರೂಪದ ದೀಪದ ಸೇವೆ, ಇವೆರಡರಲ್ಲೂ ಭಾಗಿಗಳಾದ ಮಾತೆಯರನ್ನು ‘ದೀಪ ದೇವಿಯರು’ ಎಂದು ಹೆಸರಿಸಿ ಶ್ರೀಸಂಸ್ಥಾನದವರು ಹಾರೈಸಿದ ಕ್ಷಣ, ಎಲ್ಲ ಮಾತೆಯರಲ್ಲೂ ಧನ್ಯತೆಯ […]

Continue Reading

ಗ್ರಾಮರಾಜ್ಯ – ಆರೋಗ್ಯಪೂರ್ಣ ಜೀವನಕ್ಕಾಗಿ ಪರಿಶುದ್ಧ ಆಹಾರ : ಈಗ ಮುಳ್ಳೇರಿಯಾದಲ್ಲಿ

  ಮುಳ್ಳೇರಿಯ: ಶ್ರೀಸಂಸ್ಥಾನದವರ ದಿವ್ಯ ಸಂಕಲ್ಪ ‘ವಿಷಮುಕ್ತ ಅಡುಗೆ ಮನೆ – ಅಮೃತ ಸತ್ತ್ವ ಆಹಾರ ‘. ಇದಕ್ಕೆಂದೇ ರೂಪಿಸಿದ ಶ್ರೀಮಠದ ಅಧೀನ ಸಂಸ್ಥೆ ಯೋಜನೆ ‘ಗ್ರಾಮರಾಜ್ಯ’ ಈಗಾಗಲೇ ಬೆಂಗಳೂರು ಮತ್ತು ಕರ್ನಾಟಕದ ಹಲವೆಡೆ ಮನೆಮಾತಾಗಿ ಹೆಸರು ಮಾಡಿದೆ. ಇದರ ಮೂಲಕ ಪರಿಶುದ್ದ, ನೈಸರ್ಗಿಕ ಮತ್ತು ರಾಸಾಯನಿಕ ಮುಕ್ತ ಆಹಾರ ಪದಾರ್ಥಗಳು, ಮನೆಬಳಕೆ ವಸ್ತುಗಳು ಮತ್ತು ಗವ್ಯೋತ್ಪನ್ನಗಳು ಇದೀಗ ದಕ್ಷಿಣ ಕನ್ನಡದಲ್ಲಿಯೂ ಲಭ್ಯ. ಮುಳ್ಳೇರಿಯಾ ಪೇಟೆಯ ಹೃದಯ ಭಾಗದಲ್ಲಿ ಜಿ. ಕೆ. ಎಂಟರ್ಪ್ರೈಸಸ್ ಎಂಬ ಹೆಸರಿನಲ್ಲಿ ಈ […]

Continue Reading

ಅಡಿಕೆ ವರ್ತಕ ಸಂಘಗಳ ಒಕ್ಕೂಟದ ನೂತನ ಅಧ್ಯಕ್ಷರಾಗಿ ಶ್ರೀ ಆರ್. ಎಸ್. ಹೆಗಡೆ ಹರಗಿ ಆಯ್ಕೆ

  ಸಾಗರ: ದಿನಾಂಕ 23.02.2019ರಂದು ಸಾಗರದ ಬಾಪಟ್ ಸಭಾಂಗಣದಲ್ಲಿ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ, ಉತ್ತರಕನ್ನಡ ಜಿಲ್ಲೆಗಳ ಅಡಿಕೆ ವರ್ತಕ ಸಂಘಗಳ ಒಕ್ಕೂಟ ‘ಕರ್ನಾಟಕ ಅರೇಕಾ ಛೇಂಬರ್ ಆಪ್ ಕಾಮರ್ಸ್(ರಿ)’ನ ವಾರ್ಷಿಕ ಮಹಾಸಭೆ ನಡೆಯಿತು. ಸಭೆಯಲ್ಲಿ ಮುಂದಿನ ಎರಡು ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಶ್ರೀ ಆರ್.ಎಸ್. ಹೆಗಡೆ ಹರಗಿಯವರು ಸರ್ವಾನುಮತದಿಂದ ನಿಯೋಜಿತರಾದರು. ವೇದಿಕೆಯಲ್ಲಿ ಅಧ್ಯಕ್ಷರಾದ ಶ್ರೀ ಎಂ.ಎನ್. ಹೆಗಡೆ ಸಾಗರ, ನಿಕಟಪೂರ್ವ ಅಧ್ಯಕ್ಷ ಶ್ರೀ ಹೆಚ್. ಓಂಕಾರಪ್ಪ ಶಿವಮೊಗ್ಗ, ಉಪಾಧ್ಯಕ್ಷ ಶ್ರೀ ಜಿ.ಎಂ. ಪ್ರಸನ್ನಕುಮಾರ್ ಭೀಮಸಮುದ್ರ, […]

Continue Reading

ದೇಶ ಕಂಡ ಪ್ರತಿಭಾನ್ವಿತ ಹಿರಿಯ ಸಂಸ್ಕೃತ ವಿದ್ವಾಂಸ ಡಾ|| ಕೆ.ಎಸ್. ಕಣ್ಣನ್ ರವರಿಗೆ ಡಿ. ಲಿಟ್ (‘ವಾಚಸ್ಪತಿ’) ಪದವಿ ಪ್ರದಾನ

ದೇಶ ಕಂಡ ಪ್ರತಿಭಾನ್ವಿತ ಹಿರಿಯ ಸಂಸ್ಕೃತ ವಿದ್ವಾಂಸ ಡಾ|| ಕೆ.ಎಸ್ ಕಣ್ಣನ್ ರವರಿಗೆ ತಿರುಪತಿಯ ರಾಷ್ಟ್ರಿಯ ಸಂಸ್ಕೃತ ವಿದ್ಯಾಪೀಠವು 9.2.2019 ರಂದು ನಡೆದ ತನ್ನ 22ನೇ ದೀಕ್ಷಾಂತ (convocation) ಸಮಾರಂಭದಲ್ಲಿ ಅವರ ಒಟ್ಟಿನ ಶೈಕ್ಷಣಿಕ ಸಾಧನೆಯನ್ನು ಪರಿಗಣಿಸಿ ( Honoris causa ) ಡಿ. ಲಿಟ್ (‘ ವಾಚಸ್ಪತಿ ‘) ಪದವಿಯನ್ನು ಪ್ರದಾನ ಮಾಡಿದೆ. ಶ್ರೀಮಠದಿಂದ ‘ಶ್ರೀರಾಘವೇಂದ್ರಭಾರತೀ ಪಾಂಡಿತ್ಯ ಪುರಸ್ಕಾರ’ಕ್ಕೆ ಪಾತ್ರರಾದ ಡಾ ಕಣ್ಣನ್ ಅವರು ಧರ್ಮಭಾರತಿಯ ಲೇಖಕ ಬಳಗಕ್ಕೆ ಸೇರಿದವರು. ಅವರ ಹಲವು ಲೇಖನಗಳು ಧರ್ಮಭಾರತಿಯಲ್ಲಿ […]

Continue Reading

ಹೊನ್ನಾವರ ಮಂಡಲ ಸಭೆಯಲ್ಲಿ ಹಲವು ವಿಚಾರಗಳ ಚರ್ಚೆ

ಹೊನ್ನಾವರ: ವಲಯದ ಜಿ ಜಿ ಭಟ್ ಚೌಕಿ ಅವರ ಮನೆಯಲ್ಲಿ ಭಾನುವಾರ ನಡೆದ ಹೊನ್ನಾವರ ಮಂಡಲ ಸಭೆಯಲ್ಲಿ ಹಲವಾರು ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಚರ್ಚಿಸಲ್ಪಟ್ಟ ಪ್ರಮುಖ ವಿಷಯಗಳು: 1. ಅಪ್ಸರ ಕೊಂಡ ಶಾಖಾಮಠದ ಕಾರ್ಯಕ್ರಮ ನಿಮಿತ್ತ ಕುಂಕುಮಾರ್ಚನೆ ಕಾಣಿಕೆ ಉಪಾಸನಾ ಖಾತೆಗೆ ಜಮಾ ಮಾಡುವುದು. 2. ಲಕ್ಷ್ಮೀಲಕ್ಷಣ ತಂತ್ರಾಂಶದ ವಿಚಾರ. 3. ಶಿವರಾತ್ರಿ ಮಹೋತ್ಸವ. 4.ವಾಲ್ಮೀಕೀ ರಾಮಾಯಣ. 5. ಜೀವನದಾನ. 6. ಹೈಗುಂದದಲ್ಲಿ ವರ್ಷಾವಧಿ ತಾಂತ್ರಿಕೋತ್ಸವ. 7. ಕಿತ್ರೆಯಲ್ಲಿ ವರ್ಧಂತಿ ಮಹೋತ್ಸವ ಹಾಗೂ ರಥೋತ್ಸವಗಳ ಸಭೆ ಹಾಗೂ […]

Continue Reading

ನೂತನ ಕೋರ್ಸ್ ಆರಂಭ : ಕಲೆ – ಸಮರಕಲೆಗಳ ಕಲಿಕೆಗೆ ಅವಕಾಶ

ನಂತೂರು: ಮಂಗಳೂರಿನ ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ವಠಾರದಲ್ಲಿ ಸಂಗೀತ, ಭರತನಾಟ್ಯ, ಕರಾಟೆ, ಯೋಗ ತರಗತಿಗಳು ಮತ್ತು ಪೈಥಾನ್ ಕಂಪ್ಯೂಟರ್ ಕೋರ್ಸ್‌ಗಳು ಆರಂಭವಾಗಲಿದೆ. ಫೆಬ್ರವರಿ 3ರಂದು ಬೆಳಗ್ಗೆ 10 ಗಂಟೆಗೆ ಸಂಸ್ಥೆಯ ಶಂಕರಶ್ರೀ ಸಭಾಭವನದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಯೋಗಗುರು ಶ್ರೀ ಗೋಪಾಲಕೃಷ್ಣ ಭಟ್ ದೇಲಂಪಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ರವಿ ಅಲೆವೂರಾಯ ವರ್ಕಾಡಿ, ಶ್ರೀಮತಿ ಮಲ್ಲಿಕಾ ಶೆಟ್ಟಿ ಸಿದ್ಧಕಟ್ಟೆ, ಶ್ರೀ ಸಂತೋಷ್ ಪಣಪಿಲ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.  

Continue Reading

ಹೊಸನಗರದ ಶ್ರೀರಾಮಚಂದ್ರಾಪುರ ಮಠದ ಆವರಣದಲ್ಲಿ ಅಂತರಾಷ್ಟ್ರೀಯ ಸಂಸ್ಥೆ ಜೆಸಿಐನ ಕಾರ್ಯಕ್ರಮ

ಬೆಂಗಳೂರು: ಅಂತರಾಷ್ಟ್ರೀಯ ಸಂಸ್ಥೆ ಜೆಸಿಐ ನವರ ವಲಯ 24ರ ಘಟಕ “ಜೆಐಸಿ ಹೊಸನಗರ ಡೈಮಂಡ್”.   ಜೆಸಿಐ ಪ್ರತಿವರ್ಷ ಲಾಟ್ಸ್ ಎನ್ನುವ ಹೆಸರಿನಲ್ಲಿ ವಿಭಿನ್ನವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಲೇ ಬಂದಿದೆ. ಈ ಕಾರ್ಯಕ್ರಮದ ಮೂಲಕ ಎರಡು ದಿನಗಳ ಕಾಲ, ಆ ವರ್ಷದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳಿಗೆ ತರಬೇತಿ ಕೊಡಿಸುವ ಉದ್ದೇಶನವನ್ನು ಸಂಸ್ಥೆ ಹೊಂದಿದೆ.   ಈವರೆಗೆ ಈ ಕಾರ್ಯಕ್ರಮವನ್ನು ಸ್ಟಾರ್ ಹೋಟೆಲ್ ಗಳ ಹವಾನಿಯಂತ್ರಿತ ಹಾಲ್ಗಳಲ್ಲಿ ನಡೆಸಲಾಗುತ್ತಿತ್ತು. ಈ ಬಾರಿ ನಮ್ಮ ಘಟಕ ಈ ಕಾರ್ಯಕ್ರಮವನ್ನು ಹೊಸನಗರದ ಶ್ರೀರಾಮಚಂದ್ರಾಪುರ […]

Continue Reading

ಶ್ರೀಕರಾರ್ಚಿತ ದೇವರಿಗೆ 81 ಕೆ.ಜಿ ಸಾವಯವ ಅಕ್ಕಿ ಸಮರ್ಪಣೆ

ಬೆಂಗಳೂರು: ಶ್ರೀಕರಾರ್ಚಿತ ದೇವರಿಗೆ ಭಕ್ತವೃಂದ ತಮ್ಮ ಅನುಕೂಲಕ್ಕೆ ತಕ್ಕಂತೆ ಇಲ್ಲವೇ ನಂಬಿಕೊಂಡಂತೆ ಅನೇಕ ಸೇವೆಗಳನ್ನು ಮಾಡುತ್ತಾರೆ. ಅದೇ ರೀತಿ 81 ಕೆ.ಜಿ.ಯಷ್ಟು ಸಾವಯವ ಅಕ್ಕಿ, ಸೇವೆಯ ರೂಪದಲ್ಲಿ ಸಮರ್ಪಣೆಯಾಗಿದೆ. ಹೊಲ್ಲನಗದ್ದೆ ಶ್ರೀ ಸುದರ್ಶನ ರಾಮ ಹೆಗಡೆಯವರು ಶ್ರೀರಾಮ ದೇವರಿಗೆ ಸೇವೆಯ ರೂಪದಲ್ಲಿ 81 ಕೆ.ಜಿ.ಯಷ್ಟು ಸಾವಯವ ಅಕ್ಕಿ ನೀಡಿ ಶ್ರೀರಾಮ ದೇವರ ಪ್ರೀತಿಗೆ ಪಾತ್ರರಾಗಿದ್ದಾರೆ.

Continue Reading