ಈಶ್ವರಮಂಗಲದಲ್ಲಿ ಜನಮಂಗಲ ಸಭಾಭವನ : ಹವ್ಯಕ ಬ್ರಾಹ್ಮಣ ಮಹಾಸಭಾದ ಸಭಾಭವನ ಉದ್ಘಾಟನೆ

ಈಶ್ವರಮಂಗಲ: ಈಶ್ವರಮಂಗಲ ಪ್ರಾಂತ್ಯ ಹವ್ಯಕ ಬ್ರಾಹ್ಮಣ ಮಹಾಸಭಾ ನಿರ್ಮಿಸಿರುವ ‘ಜನಮಂಗಲ ಸಭಾಭವನ’ದ ಉದ್ಘಾಟನೆಯು ಶುಕ್ರವಾರ ನಡೆಯಿತು‌.   ಹವ್ಯಕ ಮಹಾಮಂಡಲದ ಅಧ್ಯಕ್ಷೆ ಶ್ರೀಮತಿ ಈಶ್ವರೀ ಬೇರ್ಕಡವು ಸಭಾಭವನವನ್ನು ಉದ್ಘಾಟಿಸಿ ಮಾತನಾಡಿ, ಯಾವುದೇ ಒಂದು ಕಾರ್ಯ ಸಮರ್ಪಕವಾಗಿ, ವ್ಯವಸ್ಥಿತ ರೀತಿಯಲ್ಲಿ ನಡೆಯಬೇಕಾದರೆ ಇಚ್ಛಾಶಕ್ತಿ, ಪ್ರೇರಣಾಶಕ್ತಿ ಹಾಗೂ ಸಂಘಟನಾಶಕ್ತಿ ಅಗತ್ಯ. ಇಲ್ಲಿ ಆ ಶಕ್ತಿಗಳಿಂದ ಇಂತಹದೊಂದು ವ್ಯವಸ್ಥಿತವಾದ ಸಭಾಭವನ ಲೋಕಾರ್ಪಣೆಗೊಂಡಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ   ಈಶ್ವರಮಂಗಲ ಪ್ರಾಂತ್ಯದ ಹವ್ಯಕ ಮಹಾಸಭಾ ಅಧ್ಯಕ್ಷ ಶ್ರೀ ಶಿವಪ್ರಸಾದ್ ಪಟ್ಟೆ ಮಾತನಾಡಿ, […]

Continue Reading

ಶ್ರೀಭಾರತೀ ಸಮೂಹ ಸಂಸ್ಥೆಯಲ್ಲಿ ಉಚಿತ ವೈದ್ಯಕೀಯ ಶಿಬಿರ : ಪ್ರಯೋಜನ ಪಡೆದ ನೂರಾರು ಸಾರ್ವಜನಿಕರು

ಮಂಗಳೂರು: ನಿಟ್ಟೆ ವಿಶ್ವವಿದ್ಯಾನಿಲಯ, ಜಸ್ಟಿಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ, ಎ. ಬಿ. ಶೆಟ್ಟಿ ದಂತ ವಿದ್ಯಾಲಯ, ಮುಜುಂಗಾವು ಶ್ರೀಭಾರತೀ ನೇತ್ರ ಚಿಕಿತ್ಸಾಲಯಗಳ ಸಹಯೋಗದಲ್ಲಿ ನಂತೂರಿನ ಶ್ರೀಭಾರತೀ ಸಮೂಹ ಸಂಸ್ಥೆಯ ಆವರಣದಲ್ಲಿ, ಜನವರಿ 20ರಂದು ವೈದ್ಯಕೀಯ, ದಂತ, ನೇತ್ರ ತಪಾಸಣೆ ಶಿಬಿರ ನಡೆಸಲಾಯಿತು. ಅದರೊಂದಿಗೆ, ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಮತ್ತು ಮಂಗಳೂರಿನ ಸರಕಾರಿ ವೆನ್ಲಾಕ್ ಆಸ್ಪತ್ರೆಯ ರಕ್ತನಿಧಿ ವಿಭಾಗಗಳ ವತಿಯಿಂದ ರಕ್ತದಾನ ಶಿಬಿರವನ್ನೂ‌ ಆಯೋಜಿಸಲಾಗಿತ್ತು.   ಸುವರ್ಣ ಮಹೋತ್ಸವ ಆಚರಿಸುತ್ತಿರುವ ವಿಟ್ಲ ಬೆನಕ ಕ್ಲಿನಿಕ್‌ನ ಡಾ. […]

Continue Reading

ನಡೆದಾಡುವ ದೇವರೆಂದೇ ನಾಡಿನಾದ್ಯಂತ ಖ್ಯಾತರಾದ ತ್ರಿವಿಧ ದಾಸೋಹಿ, ಶತಾಯುಷಿ ಸಂತ ಸಿದ್ದಗಂಗಾಮಠದ ಡಾ. ಶ್ರೀಶ್ರೀಶ್ರೀ ಶಿವಕುಮಾರ ಸ್ವಾಮಿಗಳು ಇಂದು ಲಿಂಗೈಕ್ಯರಾಗಿರುವುದು ನಾಡಿಗೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಲಿಂಗೈಕ್ಯರಾದ ಪರಮಪೂಜ್ಯರ ಆತ್ಮಕ್ಕೆ ಪರಮಶಾಂತಿ ಲಭಿಸಲಿ ಎಂದು ಶ್ರೀರಾಮಚಂದ್ರಾಪುರಮಠ ಹಾರೈಸುತ್ತದೆ.

ಸಿದ್ದಗಂಗಾ ಮಠದ ಪೂಜ್ಯ ಶ್ರೀಗಳು ಶ್ರೀರಾಮಚಂದ್ರಾಪುರಮಠ ಹಾಗೂ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಜೊತೆಗೆ ಆತ್ಮೀಯವಾದ ಒಡನಾಟ ಹೊಂದಿದ್ದರು. ಶ್ರೀಮಠದ ಗೋಸಂರಕ್ಷಣೆಯ ಕಾರ್ಯಗಳಿಗೆ ಸದಾ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದ ಸಿದ್ದಗಂಗಾ ಶ್ರೀಗಳು, ರಾಮಚಂದ್ರಾಪುರಮಠದ ಗೋಸಂರಕ್ಷಣಾ ಕಾರ್ಯಗಳಿಗೆ ತಮ್ಮ ಬೆಂಬಲವನ್ನು ಸೂಚಿಸಿದ್ದರು.   · ಸಿದ್ದಗಂಗಾ ಶ್ರೀಗಳಿಗೆ ಗೋಕರ್ಣದ “ಸಾರ್ವಭೌಮ” ಪ್ರಶಸ್ತಿ:   ಗೋಕರ್ಣದ ಸಾರ್ವಭೌಮ ಮಹಾಬಲೇಶ್ವರ ದೇವರ ಅನುಗ್ರಹ ರೂಪದಲ್ಲಿ ಪ್ರತಿವರ್ಷ ಕೊಡಮಾಡುವ “ಸಾರ್ವಭೌಮ” ಪ್ರಶಸ್ತಿಯನ್ನು ಕಳೆದ ವರ್ಷ ಪೂಜ್ಯ ಶ್ರೀಶ್ರೀ ಶಿವಕುಮಾರ ಸ್ವಾಮಿಗಳಿಗೆ […]

Continue Reading

ಸಮಾಜಕ್ಕೆ ಬೆಳಕಿತ್ತ ಜ್ಯೋತಿ ಮತ್ತೆ ಬೆಳಕಿನತ್ತ : ಶ್ರೀಶಿವಕುಮಾರ ಸ್ವಾಮೀಜಿ ಶಿವೈಕ್ಯ

ಬೆಂಗಳೂರು: ನಡೆದಾಡುವೆ ದೇವರೆಂದೇ ಪ್ರಸಿದ್ಧರಾದ, ತ್ರಿವಿಧ ದಾಸೋಹದಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ, ಸಮಾಜಕ್ಕೆ ಬೆಳಕಾದ, ನೂರಾಹನ್ನೊಂದು ಸುದೀರ್ಘ ವರ್ಷಗಳ‌‌ ಕಾಲ ಬಾಳಿದ ಮಹಾನ್ ಚೇತನ ಶ್ರೀಸಿದ್ಧಗಂಗಾಮಠದ   ಶ್ರೀಶಿವಕುಮಾರ ಸ್ವಾಮೀಜಿ ಇಂದು ಶಿವೈಕ್ಯರಾದದ್ದು ರಾಜ್ಯವನ್ನು ಶೋಕದಲ್ಲಿ ಮುಳುಗಿಸಿದೆ. ಈ ಸಂದರ್ಭದಲ್ಲಿ ಬೆಂಗಳೂರಿನ ಗಿರಿನಗರದ ಶ್ರೀರಾಮಚಂದ್ರಾಪುರಮಠದಲ್ಲಿ, ಅವರ ಸತ್ಕಾರ್ಯ-ಆದರ್ಶಗಳನ್ನು ನೆನೆದು ರಾಮತಾರಕ, ಶಿವಪಂಚಾಕ್ಷರಿ ಜಪದೊಂದಿಗೆ, ಪುಷ್ಪಾರ್ಚನೆ ಮಾಡಿ, ಮೌನಶ್ರದ್ಧಾಂಜಲಿ ಅರ್ಪಣೆ ಮಾಡಲಾಯಿತು. ವಿದ್ವಾನ್ ಶ್ರೀ ಜಗದೀಶಶರ್ಮಾ, ಡಾ. ಶಾರದಾ ಜಯಗೋವಿಂದ, ಡಾ. ವೈ. ವಿ. ಕೃಷ್ಣಮೂರ್ತಿ ಮಾತನಾಡಿ ಶ್ರೀಶಿವಕುಮಾರ ಸ್ವಾಮಿಗಳ ಸಮಾಜಮುಖಿ […]

Continue Reading

ಬೆನ್ನುನೋವು – ಏನದು? ಯಾಕದು? ಮುಕ್ತಿ ಹೇಗೆ ಅದರಿಂದ? ತಿಳಿದುಕೊಳ್ಳಲು ಬನ್ನಿ, ಜನವರಿ 26 ಮತ್ತು 27ರಂದು ಬೆಂಗಳೂರಿನ ಸೋಹಂ ಅರ್ಪಣಕ್ಕೆ

Continue Reading

ಅವರು ಅವರ ಶಿಷ್ಯರಿಗೆ ಮಾರ್ಗದರ್ಶನ ಮಾಡಲಿ, ಇನ್ನೊಂದು ಮಠಾಧೀಶರ ಬಗ್ಗೆ ಮಾತು ಬೇಡ : ಹರಿಕೃಷ್ಣ ಪುನರೂರು

  ಮಂಗಳೂರು, ಜ.14: ‘ಧರ್ಮ ಹಾಗೂ ಸಮಾಜವನ್ನು ರಕ್ಷಿಸಲು ರಾಘವೇಶ್ವರ ಸ್ವಾಮೀಜಿ ಪ್ರಕರಣದಲ್ಲಿ ನ್ಯಾಯಾಲಯವು ಶೀಘ್ರ ನಿರ್ಣಯ ಪ್ರಕಟಿಸಲಿ’ ಎಂದಿರುವ ಸ್ವರ್ಣವಲ್ಲಿ ಮಠಾಧೀಶರ ಹೇಳಿಕೆಗೆ ಪ್ರತಿಕ್ರಿಯಿಸಿದ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಈ ದೇಶದಲ್ಲಿ ಧರ್ಮರಕ್ಷಣೆ ಸ್ವರ್ಣವಲ್ಲಿ ಹಾಗೂ ಯಡತೊರೆ ಸ್ವಾಮಿಗಳಿಂದ ಮಾತ್ರವೇ? ಅವರು ಶಿಷ್ಯರಿಗೆ ಮಾರ್ಗದರ್ಶನ ಮಾಡಲಿ, ಇನ್ನೊಂದು ಮಠಾಧೀಶರ ಬಗ್ಗೆ ಮಾತು ಬೇಡ. ರಾಘವೇಶ್ವರ ಸ್ವಾಮಿಗಳ ಬಗ್ಗೆ ಮಾತನಾಡಲು ಇವರು ಯಾರು? ಈ ರೀತಿ ಸಮಾಜವನ್ನು ಎತ್ತಿಕಟ್ಟಿ ಹಿಂದೂ ಸಮಾಜವನ್ನು ಒಡೆಯುವ ಕಾರ್ಯ ಮಾಡಬಾರದು […]

Continue Reading

ಷಡ್ಯಂತ್ರದ ಒಕ್ಕೂಟ

ಸಾವಿರಾರು ವರ್ಷಗಳಿಂದ ದಕ್ಷಿಣದ ಸರ್ವಶ್ರೇಷ್ಠ ಶ್ರದ್ಧಾಕೇಂದ್ರಗಳಲ್ಲಿ ಒಂದಾಗಿರುವ ಶಬರಿಮಲೆಯಲ್ಲಿ ಏನಾಗುತ್ತಿದೆ? ಇದಕ್ಕೆ ಉತ್ತರ ಪ್ರಾಯಶಃ ಎಲ್ಲರಿಗೂ ಗೊತ್ತಿರುವುದೇ ಆಗಿದೆ. ಹಾಗೆ ನೋಡಿದರೆ..ಶಬರಿಮಲೆ ಮಾತ್ರವಲ್ಲ, ಅದು ಅಮರನಾಥ ಯಾತ್ರೆಯಿರಬಹುದು, ಕುಂಭಮೇಳವಿರಬಹುದು, ಕಾವೇರಿಯ ತೀರ್ಥೋದ್ಭವವಿರಬಹುದು, ವರುಷಕ್ಕೊಮ್ಮೆ ನಡೆವ ನಮ್ಮ ನಾಡಿನ ಹೆಮ್ಮೆಯ ದಸರಾ ಮಹೋತ್ಸವವಿರಬಹುದು..ಹೀಗೇ ಸನಾತನದ ಧರ್ಮದ ಆಸ್ಥೆ, ಶ್ರದ್ಧೆಗಳು ಎಲ್ಲೆಲ್ಲಿ ಕೇಂದ್ರೀಕೃತವಾಗುತ್ತವೆಯೋ, ಅಲ್ಲೆಲ್ಲಾ ಒಂದಲ್ಲ ಒಂದು ರೀತಿಯ ಒಡಕು, ಅಶ್ರದ್ಧೆ, ಅನುಮಾನಗಳನ್ನು ಸೃಷ್ಟಿ ಮಾಡುವ ವ್ಯವಸ್ಥಿತವಾದ ಸಂಚು ಈ ಭರತ ಭೂಮಿಯಲ್ಲಿ ಬಹಳ ಕಾಲಗಳಿಂದ ನಡೆಯುತ್ತಲೇ ಇದೆ. ಅತಿ […]

Continue Reading

ಸರಘ್ ಸಾಫ್ಟ್‌ ಟೆಕ್ನಾಲಜೀಸ್ ಗೆ ನ್ಯಾಷನಲ್ ಎಂಟರ್ಪ್ರೆನರ್ಶಿಪ್ ಅವಾರ್ಡ್

ದೆಹಲಿ: ಭಾರತ ಸರ್ಕಾರದ ಕೌಶಲ್ಯಾಭಿವೃದ್ಧಿ ಹಾಗು ಉದ್ಯಮಶೀಲತಾ ಸಚಿವಾಲಯವು (Ministry of Skill Development and Entrepreneurship – MSDE) ವಿವಿಧ ವಿಭಾಗದ ಉದ್ಯಮಗಳಿಗೆ ಸಂಬಂಧಿಸಿ ನೀಡುವ ಪ್ರತಿಷ್ಠಿತ ‘ನ್ಯಾಷನಲ್ ಎಂಟರ್ಪ್ರೆನರ್ಶಿಪ್ ಅವಾರ್ಡ್’ನ ಈ 2018ರ ಸಾಲಿನ ವಿಜೇತರನ್ನು ಘೋಷಿಸಿದೆ. ಶ್ರೀಮಠದ ಶಿಷ್ಯರ ಸಂಸ್ಥೆಯಾದ Saragh Soft Technologies Pvt. Ltd ಈ ಪ್ರಶಸ್ತಿಗೆ ಭಾಜನವಾಗಿದೆ. ಪ್ರಶಸ್ತಿ ಸ್ವೀಕರಿಸಿದ ಸಂಸ್ಥೆಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಪ್ರಮೋದ್ ಕುಮಾರ್ ಎಂ. ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಪ್ರದೀಪ್ ಶಂಕರ್ […]

Continue Reading

ಶ್ರೀಉದನೇಶ್ವರನಿಗೆ ರಜತ ಛತ್ರ

ಪೆರಡಾಲ: ಪೆರಡಾಲ ವಲಯದ ಈಳಂತೋಡಿ ಘಟಕದ ಪಂಜಿತಡ್ಕ ಶ್ರೀ. ಟಿ.ಕೆ. ನಾರಾಯಣ ಭಟ್ ಮತ್ತು ಮನೆಯವರು ಪೆರಡಾಲ ಶ್ರೀ ಉದನೇಶ್ವರ ದೇವರ ಸನ್ನಿಧಿಯಲ್ಲಿ ದಿನಾಂಕ 16.12.2018, ಬುಧವಾರದಂದು ಧನು ಸಂಕ್ರಮಣ ಜಾತ್ರಾ ಸಂದರ್ಭದಲ್ಲಿ ಬೆಳ್ಳಿಯ ಸತ್ತಿಗೆ ತುದಿಯಲ್ಲಿ ಅಲಂಕರಿಸಲಿರುವ ರಜತ ಛತ್ರವನ್ನು ಸಮರ್ಪಿಸಿದ್ದಾರೆ.   ಶ್ರೀಗುರುಪೀಠಕ್ಕೆ ಬಂದ ಗೊಂದಲ ನಿವಾರಣೆ, ಮಠ ಸಂರಕ್ಷಣೆಗಾಗಿ ಮತ್ತು ಗುರುಪೀಠವು ಪ್ರಕಾಶಮಾನವಾಗಿ ಬೆಳಗಲು, ಸರ್ವರಿಗೂ ಒಳಿತನ್ನು ಅಪೇಕ್ಷಿಸಿ ವಿಶೇಷ ಸಂಕಲ್ಪ ಕೈಗೊಂಡು ಈ ಸೇವೆಯನ್ನು ಅವರು ಸಮರ್ಪಿಸಿದ್ದಾರೆ.   ಮೂಲಕ ಗುರುಸೇವೆಗೈದಿದ್ದಾರೆ. […]

Continue Reading

ಸಂತೋಷವಾಗಿ ಸಾತ್ತ್ವಿಕವಾಗಿ ಸಕಾರಾತ್ಮಕವಾಗಿ ಅಮೃತಮಹೋತ್ಸವದಲ್ಲಿ ಭಾಗವಹಿಸೋಣ – ಶ್ರೀಸಂಸ್ಥಾನ

ಬೆಂಗಳೂರು : ಸಮಾಜಪುರುಷ ಮೈಕೊಡವಿ ಮೇಲೇಳುವ ಕಾಲ ಈ ಹವ್ಯಕ ವಿಶ್ವಸಮ್ಮೇಳನ. ಹನೂಮಂತನ ಹನೂಮತ್ತ್ವವೂ ಪ್ರಕಟವಾಗಿದ್ದು ಒಮ್ಮೆ ಮಾತ್ರ ಅದು ಸಾಗರೋಲ್ಲಂಘನದ ಸಮಯ. ಹಾಗೆಯೇ ಹವ್ಯಕ ಸಮಾಜವು ತನ್ನ ಮಹತ್ತನನ್ನು ಪ್ರಕಟಿಸುವ ಕಾಲ ಸನ್ನಿಹಿತವಾಗಿದೆ. ಅದು ಮೂರುದಿನಗಳ ಮಹೋನ್ನತ ಹಬ್ಬ. ಆ ಐತಿಹಾಸಿಕ ಕಾರ್ಯಕ್ರಮಕ್ಕೆ ನಾವು ಸಾಕ್ಷಿಯೂ ಭಾಗಿಯೂ ಆಗಬೇಕು. ಮಹಾನಗರದ ಮೂಲೆಮೂಲೆಯಿಂದ ಗುರಿಕ್ಕಾರರು ಬಂದು ಸೇರಿದ್ದೀರಿ. ನಿವೆಲ್ಲರೂ ತಮ್ಮ ವ್ಯಾಪ್ತಿಯ ಮನೆಗಳಿಗೆ ನಿಮಂತ್ರಣವನ್ನು ನೀಡಿ ಎಲ್ಲ ಆಪ್ತರಿಗೂ ಪ್ರೀತಿಯ ಆಮಂತ್ರಣವನ್ನು ಕೊಡಿ. ಎಂದು ಶ್ರೀಪೀಠದ ನೇರಪ್ರತಿನಿಧಿಗಳಾದ […]

Continue Reading

ವಿಶ್ವ ಹವ್ಯಕ ಸಮ್ಮೇಳನದ ಪ್ರಚಾರಾರ್ಥವಾಗಿ “ಜಾಗೃತಿ ನಡಿಗೆ”

ಡಿಸೆಂಬರ್ 28,29,30 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಐತಿಹಾಸಿಕ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ ಹಾಗೂ ಅಖಿಲ ಹವ್ಯಕ ಮಹಾಸಭೆಯ ಅಮೃತಮಹೋತ್ಸವ ಕಾರ್ಯಕ್ರಮಗಳ ಪ್ರಚಾರಾರ್ಥವಾಗಿ ಮಲ್ಲೇಶ್ವರಂನಲ್ಲಿ ಜಾಗೃತಿ ನಡಿಗೆ (ವಾಕಾಥಾನ್) ನಡೆಯಿತು. ಖ್ಯಾತ ನಾಯಕನಟ ಅಜೇಯ್ ರಾವ್  ಜಾಗೃತಿಯನ್ನು ನಡಿಗೆಗೆ ಚಾಲನೆ ನೀಡಿ ಮಾತನಾಡಿ ; ಹವ್ಯಕ ಸಂಸ್ಕೃತಿ ವಿಶೇಷವಾಗಿದ್ದು, ಆ ಸಂಸ್ಕೃತಿಯ ಆಚಾರ ವಿಚಾರಗಳನ್ನು ಹಾಗೂ ವೈಶಿಷ್ಟ್ಯಗಳನ್ನು ಜಗತ್ತಿಗೆ ಪರಿಚಯಿಸಲು 28 ರಿಂದ 30 ವರೆಗೆ ವಿಶ್ವ ಹವ್ಯಕ ಸಮ್ಮೇಳನ ಆಯೋಜಿಸಿದ್ದಾರೆ. ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಲು […]

Continue Reading

ವಿವಾಹದಲ್ಲಿ ಮಂಗಲ ವಿದ್ಯಾನಿಧಿ ಸಮರ್ಪಣೆ : ಅನುಕರಣಾರ್ಹ ಹೆಜ್ಜೆ ಇಟ್ಟ ಕುಕ್ಕಿಲ ದಂಪತಿ

  ಮಾಣಿ: ಬಾಲ್ಯ ಶಂಕರ ಭಟ್ ಮತ್ತು ಪರಮೇಶ್ವರಿ ದಂಪತಿಯ ಪುತ್ರಿ ಅರ್ಚನಾಳೊಂದಿಗೆ ತಮ್ಮ ಪುತ್ರ ಶ್ರೀನಿಧಿಯ ವಿವಾಹ ಮಹೋತ್ಸವವು ನಡೆದ ಸಂದರ್ಭದಲ್ಲಿ, ಭಾರತೀಯ ಸೈನ್ಯದ ನಿವೃತ್ತ ಸೈನಿಕರಾದ ಶ್ರೀ ಶ್ರೀಪ್ರಕಾಶ ಕುಕ್ಕಿಲ ಮತ್ತು ಶ್ರೀಮತಿ ಜಯಲಕ್ಷ್ಮಿ ಕುಕ್ಕಿಲ ದಂಪತಿಯು ಮಂಗಲ ವಿದ್ಯಾನಿಧಿಯನ್ನು ಶ್ರೀಭಾರತೀ ಗುರುಕುಲಂ ಹೊಸನಗರ, ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ, ವಿಠಲ ವಿದ್ಯಾಸಂಘ ವಿಟ್ಲ, ಶ್ರೀ ಭಾರತೀ ಸಮೂಹ ಸಂಸ್ಥೆ ನಂತೂರು, ಶ್ರೀರಾಮಚಂದ್ರಾಪುರಮಠ ಸಂರಕ್ಷಣಾ ಸಮಿತಿ ಮತ್ತು ಮಿತ್ತೂರು ಪುರೋಹಿತ ತಿಮ್ಮಯ್ಯ ಪ್ರತಿಷ್ಠಾನ ಈ ಆರು […]

Continue Reading

ಶ್ರೀಸಂಸ್ಥಾನದವರಿಗೆ ‘ಸಮರಸ’ ಟ್ರಸ್ಟಿನ ಯೋಜನೆಯ ರೇಖಾಪ್ರತಿ ಸಮರ್ಪಣೆ

  ಬೆಂಗಳೂರು: ಶ್ರೀಸಂಸ್ಥಾನದವರ ಮಾರ್ಗದರ್ಶನದಲ್ಲಿ ಮುಳ್ಳೇರಿಯ ಹವ್ಯಕಮಂಡಲದ ಕೇಂದ್ರಬಿಂದುವಾಗಿ ಮುಳ್ಳೇರಿಯ – ಬದಿಯಡ್ಕ ರಾಜಮಾರ್ಗದ ಬದಿಯಲ್ಲಿ ದೇಲಂಪಾಡಿ ಸಮೀಪ ಶ್ರೀಮಠದ ಅಂಗಸಂಸ್ಥೆಯಾಗಿ ಸಮರಸ ನಿರ್ಮಾಣವಾಗಲಿದೆ.   ಶ್ರೀಮಠದ ಅಂಗಸಂಸ್ಥೆಯಾದ ‘ಸಮರಸ’ ಯೋಜನೆಯ ಭೂಮಿಯ ರೇಖಾಪ್ರತಿಯನ್ನು ಈ‌ ಭಾನುವಾರ, 16.12.2018ರಂದು ಶ್ರೀರಾಮಾಶ್ರಮದಲ್ಲಿ ಶ್ರೀಸಂಸ್ಥಾನದವರಿಗೆ ಸಮರ್ಪಿಸಲಾಯಿತು.   ಈ ಸಂದರ್ಭದಲ್ಲಿ ಹವ್ಯಕ ಮಹಾಮಂಡಲದ ಕಾರ್ಯದರ್ಶಿ ಶ್ರೀ ಹರಿಪ್ರಸಾದ್ ಪೆರಿಯಾಪ್ಪು, ಟ್ರಸ್ಟಿನ ಪದಾಧಿಕಾರಿಗಳು ಉಪಸ್ಥಿತರಿದ್ದು ಶ್ರೀಸಂಸ್ಥಾನದವರ ಆಶೀರ್ವಾದ ಪಡೆದುಕೊಂಡರು.   ಶ್ರೀಸಂಸ್ಥಾನದವರು ಯೋಜನೆಯ ಬಗ್ಗೆ ಹರ್ಷವನ್ನು ವ್ಯಕ್ತಪಡಿಸಿ, ಕಾರ್ಯಸಿದ್ಧಿಯಾಗಲೆಂದು ಅನುಗ್ರಹಿಸಿ ಮಂತ್ರಾಕ್ಷತೆಯನ್ನಿತ್ತು […]

Continue Reading

ಗವ್ಯೋತ್ವನ್ನ ಮಾರಾಟ ಮಳಿಗೆಯ ಶುಭಾರಂಭ

ಮಾಣಿ: ಪೆರಾಜೆಯ ಮಾಣಿಯಲ್ಲಿರುವ ಶ್ರೀರಾಮಚಂದ್ರಾಪುರಮಠದಲ್ಲಿ ಗವ್ಯೋತ್ವನ್ನ ಮಾರಾಟ ಮಳಿಗೆಯು ಶುಭಾರಂಭಗೊಂಡಿದೆ. ದಿನಾಂಕ 04-11-2018ರ ಮಂಗಳವಾರದಂದು ಆರಂಭವಾದ ಗವ್ಯೋತ್ವನ್ನ ಮಾರಾಟ ಮಳಿಗೆಯನ್ನು ಸೇವಾ ಸಮಿತಿಯ ಸದಸ್ಯರಾದ ಶ್ರೀ ಗೋವಿಂದ ಭಟ್ ಮುದ್ರಜೆಯವರು ಉದ್ಘಾಟಿಸಿದರು. ಸೇವಾ ಸಮಿತಿಯ ಕೋಶಾಧಿಕಾರಿ ಮೈಕ್ಕೆ ಶ್ರೀ ಗಣೇಶ್ ಭಟ್ ರವರು ಗವ್ಯೋತ್ಪನ್ನಗಳನ್ನು ಖರೀದಿಸುವ ಮೂಲಕ ಮೊದಲ ಗ್ರಾಹಕರಾದರು.   ಈ ಸಂದರ್ಭದಲ್ಲಿ ಸೇವಾ ಸಮಿತಿಯ ಅಧ್ಯಕ್ಷರಾದ ಹಾರಕರೆ ಶ್ರೀ ನಾರಾಯಣ ಭಟ್, ಕಾರ್ಯದರ್ಶಿಗಳಾದ ಬಂಗಾರಡ್ಕ ಶ್ರೀ ಜನಾರ್ದನ ಭಟ್, ಸದಸ್ಯರಾದ ಶ್ರೀ ಗಿರಿಶಂಕರ ಕೈಲಾರು, […]

Continue Reading

ಶ್ರೀಮಠದ ನೂತನ ಕ್ಯಾಲೆಂಡರ್ ಲೋಕಾರ್ಪಣೆ

ಬೆಂಗಳೂರು: ಶ್ರೀಭಾರತೀ ಪ್ರಕಾಶನ ಸಿದ್ಧಪಡಿಸಿದ 2019ನೆಯ ವರ್ಷದ ಕ್ಯಾಲೆಂಡರ್ ಶ್ರೀಸಂಸ್ಥಾನದವರ ಅಮೃತಹಸ್ತದಿಂದ ಲೋಕಾರ್ಪಣೆಗೊಂಡಿತು.   ಈ ಸಂದರ್ಭದಲ್ಲಿ ಶ್ರೀಮಠದ ಸಮ್ಮುಖಸರ್ವಾಧಿಕಾರಿ ಶ್ರೀ ಟಿ. ಮಡಿಯಾಲ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಕೆ. ಜಿ. ಭಟ್, ವಿದ್ವಾನ್ ಜಗದೀಶಶರ್ಮಾ, ಶ್ರೀ ಜಯಗೋವಿಂದ್ ಹಾಗೂ ಶ್ರೀಮತಿಅನುರಾಧಾ ಪಾರ್ವತಿ ಉಪಸ್ಥಿತರಿದ್ದರು.

Continue Reading

ವಿಶ್ವ ಹವ್ಯಕ ಸಮ್ಮೇಳನ – ಅಮೃತಮಹೋತ್ಸವ ಕಾರ್ಯಕ್ರಮ – ಮಹಾಸಮಿತಿ ರಚನೆ

ವಿಶಿಷ್ಟ ಸಂಸ್ಕೃತಿಯನ್ನು ವಿಶ್ವಮಟ್ಟದಲ್ಲಿ ಅನಾವರಣಗೊಳಿಸುವ ಐತಿಹಾಸಿಕ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ ಹಾಗೂ ಶ್ರೀ ಅಖಿಲ ಹವ್ಯಕ ಮಹಾಸಭೆಯ ಅಮೃತಮಹೋತ್ಸವ ಕಾರ್ಯಕ್ರಮಗಳನ್ನು ಹವ್ಯಕ ಮಹಾಸಭೆಯಿಂದ ಆಯೋಜಿಸಲಾಗಿದ್ದು, ಡಿಸೆಂಬರ್ 28, 29 ಮತ್ತು 30 ರಂದು ಅರಮನೆ ಮೈದಾನದ ರಾಯಲ್ ಸೆನೆಟ್ ಹಾಗೂ ಗ್ರಾಂಡ್ ಕ್ಯಾಸೆಲ್ ಸಭಾಂಗಣದಲ್ಲಿ ಸಂಪನ್ನವಾಗಲಿದೆ.   ಹವ್ಯಕ ಸಮಾಜ ತನ್ನದೇ ಆದ ವಿಶಿಷ್ಟ ಸಂಸ್ಕೃತಿ ಹಾಗೂ ಸಂಸ್ಕಾರಗಳೊಂದಿಗೆ ನಾಡಿಗೆ ವೈಶಿಷ್ಟ್ಯಪೂರ್ಣ ಕೊಡುಗೆಗಳನ್ನು ನೀಡುತ್ತಾ ಬಂದಿದ್ದು, ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ ಹಾಗೂ ಅಮೃತಮಹೋತ್ಸವ ಕಾರ್ಯಕ್ರಮಗಳನ್ನು […]

Continue Reading

ಕಾಸರಗೋಡು ವಲಯದಲ್ಲಿ ಅಮೃತಪಥ-ಅರ್ಘ್ಯ ಕಾರ್ಯಕ್ರಮ

ಮುಳ್ಳೇರಿಯಾ: ಕಾಸರಗೋಡು ವಲಯದಲ್ಲಿ ಅಮೃತಪಥ, ಅರ್ಘ್ಯ ಕಾರ್ಯಕ್ರಮಗಳು ಗುಡ್ಡೆ ಮಹಾಲಿಂಗೇಶ್ವರ ದೇಗುಲದ ಪರಿಸರದಲ್ಲಿ ದಿನಾಂಕ 02.12.2018ರಂದು ನಡೆದವು. ದೇವಾಲಯದ ಪರಿಸರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಿ ಪರಿಕ್ರಮಪಥವನ್ನು ಶುಚಿಗೊಳಿಸಲಾಯಿತು. ವಲಯದ 15 ಮಂದಿ ಗುರುಭಕ್ತರು ಈ ಶ್ರಮದಾನದಲ್ಲಿ ಪಾಲ್ಗೊಂಡರು.  

Continue Reading

ಕೊಡಗು ಅತಿವೃಷ್ಟಿ ಸಂತ್ರಸ್ತರಿಗೆ ಸಹಾಯಧನ ವಿತರಣೆ

ಮುಳ್ಳೇರಿಯ: ಗುತ್ತಿಗಾರು ವಲಯದಿಂದ ಕೊಡಗು ಅತಿವೃಷ್ಟಿ ಸಂತ್ರಸ್ತರಿಗಾಗಿ ಧನಸಂಗ್ರಹ ಮಾಡಲಾಗಿತ್ತು. ಹೀಗೆ ಸಂಗ್ರಹವಾದ ₹ 10,250/-ನ್ನು ಕೊಡಗು ಹವ್ಯಕ ವಲಯದ ಮಾಸಿಕ ಸಭೆಯಲ್ಲಿ, ಶ್ರೀಗುರುಗಳ ಆಶೀರ್ವಾದ ರೂಪದಲ್ಲಿ, ದಿ.ಗಣಪತಿ ಭಟ್ಟರ ಮಗ ಶ್ರೀ ಶಶಾಂಕ ಮತ್ತು ಶ್ರೀ ಕೊಲ್ಚರು ವೆಂಕಟ್ರಮಣ ಭಟ್ ಅವರಿಗೆ ಹಸ್ತಾಂತರಿಸಲಾಯಿತು.

Continue Reading

ಅಮೃತಪಥಕ್ಕೆ ಚಾಲನೆ : ಸರ್ವಧಾರಿ-ಸೋಮೇಶ್ವರ-ವಿದ್ಯಾರಣ್ಯ ವಲಯಗಳಲ್ಲಿ ಪ್ಲಾಸ್ಟಿಕ್ ಮುಕ್ತ ಪಥ

ಬೆಂಗಳೂರು: ಗೋವುಗಳು ಸಂಚರಿಸುವ ಮಾರ್ಗ ಪ್ಲಾಸ್ಟಿಕ್ ಮುಕ್ತವಾಗಿರಬೇಕು ಎಂಬ ಉದ್ದೇಶದಿಂದ ಶ್ರೀಸಂಸ್ಥಾನದವರು ಸಂಕಲ್ಪಿಸಿದ ‘ಅಮೃತಪಥ ‘ ಕಾರ್ಯಕ್ರಮಕ್ಕೆ ಸರ್ವಧಾರಿ, ಸೋಮೇಶ್ವರ, ವಿದ್ಯಾರಣ್ಯ ವಲಯಗಳಲ್ಲಿ ಚಾಲನೆ ನೀಡಲಾಯಿತು.   ಮೂವತ್ತಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗಿ ಭಾನುವಾರ ಬೆಳಗ್ಗೆ 7ರಿಂದ 9ಗಂಟೆವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಪ್ಲಾಸ್ಟಿಕ್ ಕಸ ಎಸೆಯದಂತೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಹಾಗೂ ಪ್ಲಾಸ್ಟಿಕ್ ಮುಕ್ತ ಮಾಡುವ ಮೂಲಕ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಬಿಬಿಎಂಪಿ ಸದಸ್ಯ ಶ್ರೀ ಸೋಮಶೇಖರ್ ಕಾರ್ಯಕರ್ತರ ತಂಡದೊಂದಿಗೆ ಸಂವಾದ ನಡೆಸಿದರು.

Continue Reading