Category: ಸುದ್ದಿ
ಮೂರೂರು ಪ್ರಗತಿ ವಿದ್ಯಾಲಯದಲ್ಲಿ ಕ್ರೀಡೋತ್ಸವ
ಮೂರೂರು: ಪ್ರಗತಿ ವಿದ್ಯಾಲಯದಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ನವೆಂಬರ್ 27 ಮತ್ತು 28ರಂದು ಎರಡು ದಿನಗಳ ಕ್ರೀಡೋತ್ಸವ ಜರುಗಿತು. 27ರಂದು ಆಡಳಿತ ಮಂಡಳಿಯ ಸದಸ್ಯ ಶ್ರೀ ಟಿ. ಆರ್. ಜೋಷಿ ಕ್ರೀಡೋತ್ಸವವನ್ನು ಉದ್ಘಾಟಿಸಿ, ಮಾತನಾಡಿ, ಮಕ್ಕಳೆಲ್ಲರೂ ಸ್ಪರ್ಧಾತ್ಮಕ ಮನೋಭಾವ ಮತ್ತು ಸಂಭ್ರಮದಿಂದ ಭಾಗವಹಿಸಬೇಕು ಎಂದು ಹೇಳಿದರು. ಕ್ರೀಡೋತ್ಸವದಲ್ಲಿ ಓಟ, ಚಕ್ರ ಎಸೆತ, ಗುಂಡೆಸೆತ, ಎತ್ತರ ಜಿಗಿತ, ಉದ್ದ ಜಿಗಿತ ಹಾಗೂ ಕಬಡ್ಡಿಗಳನ್ನು ಆಯೋಜಿಸಲಾಗಿತ್ತು. ಪ್ರಾಥಮಿಕ ಶಾಲೆ, ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರೌಢಶಾಲೆ ಹಾಗೂ […]
Continue Readingಪ್ರತಿಭಾ ಪುರಸ್ಕಾರ : ಜರ್ಮನಿಯಲ್ಲಿ ಪ್ರಬಂಧ ಮಂಡಿಸಿದ ಮೈತ್ರೇಯ ಹೆಗಡೆಗೆ ಶ್ರೀಸಂಸ್ಥಾನದವರಿಂದ ಆಶೀರ್ವಾದ
ಬೆಂಗಳೂರು: ಶ್ರೀಗಿರಿನಗರ ವಲಯದ ಕುಮಾರ ಮೈತ್ರೇಯ ಹೆಗಡೆ ಜರ್ಮನಿಯಲ್ಲಿ ನಡೆದ ಇಂಟರ್ ನ್ಯಾಷನಲ್ ಆಸ್ಟ್ರೋನಾಟಿಕಲ್ ಕಾಂಗ್ರೆಸ್ ನಲ್ಲಿ ಭಾಗವಹಿಸಿ ‘ಬಿಹೆವಿಯರ್ ಆಫ್ ಬ್ಯಾಕ್ಟೀರಿಯಾ ಇನ್ ಸ್ಪೇಸ್’ ಎಂಬ ವಿಷಯದ ಕುರಿತು ಪ್ರಬಂಧ ಮಂಡಿಸಿದ್ದಾರೆ. ಈ ಸಾಧನೆಗಾಗಿ ಶ್ರೀಸಂಸ್ಥಾನದವರರ ವಿಶೇಷ ಆಶೀರ್ವಾದಕ್ಕೆ ಕುಮಾರ ಮೈತ್ರೇಯ ಪಾತ್ರರಾದರು. ಕುಮಾರ ಮೈತ್ರೇಯ ಹೆಗಡೆ, ಹವ್ಯಕ ಮಾಸಪತ್ರಿಕೆ ಸಂಪಾದಕ ಶ್ರೀಕಾಂತ ಹೆಗಡೆ ಅಂತ್ರವಳ್ಳಿ ಹಾಗೂ ಶ್ರೀಮತಿ ಕಮಲಿನಿ ಹೆಗಡೆ ಅಂತ್ರವಳ್ಳಿ ದಂಪತಿ ಪುತ್ರ.
Continue Readingಶ್ರೀರಾಮಚಂದ್ರಾಪುರಮಠದ ನೂತನ ಅಂಗಸಂಸ್ಥೆ ‘ಸಮರಸ’ದಲ್ಲಿ ಗಣಪತಿ ಹವನ ಸಂಪನ್ನ
ಮುಳ್ಳೇರಿಯಾ: ಮುಳ್ಳೇರಿಯ ಹವ್ಯಕ ಮಂಡಲ ಚಂದ್ರಗಿರಿ ವಲಯದಲ್ಲಿ ಮುಳ್ಳೇರಿಯದ ದೇಲಂಪಾಡಿ ಪರಿಸರದಲ್ಲಿ ನಿರ್ಮಾಣವಾಗಲಿರುವ ‘ಸಮರಸ’ ಭೂಮಿಯಲ್ಲಿ 24.11.2018ರಂದು ಗಣಪತಿ ಹವನ ಸಂಪನ್ನವಾಯಿತು. ವಲಯ ವೈದಿಕ ಪ್ರಧಾನರಾದ ಶ್ರೀ ನರಸಿಂಹರಾಜ ಪಯ ಅವರು ಗಣಪತಿ ಹವನದ ನೇತೃತ್ವ ವಹಿಸಿದರು. ಸಮರಸ ಟ್ರಸ್ಟಿನ ಅಧ್ಯಕ್ಷರಾದ ಡಾ. ವಿ ವಿ. ರಮಣ ಧ್ವಜಾರೋಹಣ ನೆರವೇರಿಸಿದರು. ಆ ಬಳಿಕ ಭಜನ ರಾಮಾಯಣ ಪಠಣ ನಡೆಯಿತು. ಈ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸಮರಸ ಟ್ರಸ್ಟ್ ನ ಕಾರ್ಯದರ್ಶಿ ಶ್ರೀ ರಾಜಗೋಪಾಲ […]
Continue Readingಮಕ್ಕಳಿಂದ ಮಾತಾಪಿತರಿಗೆ ಪೂಜೆ : ಶ್ರೀಭಾರತೀ ವಿದ್ಯಾಪೀಠದಲ್ಲಿ ಮಾದರಿ ಕಾರ್ಯಕ್ರಮ
ಮುಜುಂಗಾವು: ಇಲ್ಲಿನ ಶ್ರೀಭಾರತೀ ವಿದ್ಯಾಪೀಠದ ಮಕ್ಕಳಿಂದ ಮಾತಾಪಿತೃ ಪೂಜೆ ನೆರವೇರಿತು. ವಿದ್ಯಾಪೀಠ ಶಾಲೆಯಲ್ಲಿ 26.11.2018ರ ಸೋಮವಾರರಂದು ನಡೆದ ಕಾರ್ಯಕ್ರಮವು ದೀಪಪ್ರಜ್ವಲನ, ಗಣಪತಿ ಸ್ತುತಿ, ಗುರುವಂದನೆಗಳೊಂದಿಗೆ ಆರಂಭವಾಯಿತು. ಬಳಿಕ ಮಕ್ಕಳು ಅವರವರ ಮಾತಾಪಿತೃಗಳಿಗೆ ಆರತಿ ಅಕ್ಷತೆಯೊಂದಿಗೆ ಪೂಜೆ ನೆರವೇರಿಸಿದರು. ಅನಂತರ ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಬಳಿಕ ಮಾತನಾಡಿದ ಆಡಳಿತಾಧಿಕಾರಿ ಶ್ರೀ ಶ್ಯಾಮ ಭಟ್ ದರ್ಬೆಮಾರ್ಗ, ‘ಇಳೆಗೆ ಇಳಿಸಿದ ನಮ್ಮ ಮಾತಾಪಿತರು ಜಗತ್ತಿನ ತಂದೆತಾಯಿಯರಾದ ಪಾರ್ವತಿಪರಮೇಶ್ವರರಿಗೆ ಸಮಾನರು. ವೃದ್ಧಾಪ್ಯದಲ್ಲಿ ಅವರ ಬೇಕುಬೇಡಗಳನ್ನು ನಾವು ಪೂರೈಸಿ ಸೇವೆಯನ್ನು ಮಾಡಬೇಕು’ ಎಂದು ಕಿವಿಮಾತು […]
Continue Readingಪ್ರತಿಬಿಂಬ ಸಮಾರೋಪ ಸಮಾರಂಭ ಸಂಪನ್ನ- ಅಖಿಲ ಹವ್ಯಕ ಮಹಾಸಭಾದ ಅಧ್ಯಕ್ಷ ಡಾ. ಗಿರಿಧರ ಕಜೆ ಭಾಗಿ
ಸಿದ್ದಾಪುರ: ಹವ್ಯಕರಿಗೆ ಹುಟ್ಟಿನಿಂದಲೇ ಸಂಸ್ಕಾರ ಬರುತ್ತದೆ. ಇಲ್ಲಿಯ ಪ್ರತಿಭೆಗಳು ಶಾಲೆಗೆ ಹೋಗಿ ಬುದ್ಧಿವಂತಿಕೆ ಕಲಿತು ಬಂದಿದ್ದಲ್ಲ. ಹವ್ಯಕರ ವಂಶವಾಹಿನಿಯಲ್ಲಿಯೇ ಪ್ರತಿಭೆ ನೀರಿನಂತೆ ಹರಿಯುತ್ತಿರುತ್ತದೆ. ಅದಕ್ಕೆ ಆಣೆಕಟ್ಟು ಕಟ್ಟಿದರೂ ಅವಕಾಶ ಮಾಡಿಕೊಂಡು ಬೇರೆಡೆ ಹರಿಯುತ್ತದೆ ಎಂದು ಶ್ರೀಅಖಿಲ ಹವ್ಯಕ ಮಹಾಸಭಾದ ಅಧ್ಯಕ್ಷ ಡಾ. ಗಿರಿಧರ ಕಜೆ ಹೇಳಿದರು. ಅಖಿಲ ಹವ್ಯಕ ಮಹಾಸಭಾ (ರಿ) ಬೆಂಗಳೂರು ವತಿಯಿಂದ ಉತ್ತರ ಕನ್ನಡ ಪ್ರಾಂತದ ಹವ್ಯಕರಿಗಾಗಿ ಗೋಸ್ವರ್ಗಸಂಸ್ಥಾನ ಶ್ರೀ ರಾಮದೇವ ಭಾನ್ಕುಳಿ ಮಠದಲ್ಲಿ ಆಯೋಜಿಸಲಾಗಿದ್ದ “ಪ್ರತಿಬಿಂಬ” (ಉತ್ತರ) ಸ್ಪರ್ಧಾ ಕಾರ್ಯಕ್ರಮದ ಸಮಾರೋಪ […]
Continue Readingಯಲ್ಲಾಪುರದಲ್ಲಿ ವಿಶ್ವಹವ್ಯಕ ಸಮ್ಮೇಳನಕ್ಕೆ ಪೂರ್ವಭಾವಿ ಸಿದ್ಧತಾ ಸಭೆ
ಯಲ್ಲಾಪುರ: ಯಲ್ಲಾಪುರ ಪಟ್ಟಣದ ಟಿಎಂಸಿ ಸಭಾಭವನದಲ್ಲಿ ವಿಶ್ವಹವ್ಯಕ ಸಮ್ಮೇಳನದ ಪೂರ್ವಭಾವಿ ಸಿದ್ಧತಾ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಅಖಿಲ ಹವ್ಯಕ ಮಹಾಸಭೆಯ ಅಧ್ಯಕ್ಷರಾದ ಶ್ರೀ ಡಾ. ಗಿರಿಧರ ಕಜೆ ಮಾತನಾಡಿ, ಹವ್ಯಕ ಸಮಾಜವನ್ನು ಒಗ್ಗೂಡಿಸಲು ಮತ್ತು ಹವ್ಯಕರ ಏಳಿಗೆಗೆ ಚಿಂತನೆ ನಡೆಸಲು ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನವನ್ನು ಡಿಸೆಂಬರ್ ೨೮ ರಿಂದ ೩೦ ರವರೆಗೆ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು. ಅಲ್ಲದೇ ಎಲ್ಲ ಹವ್ಯಕ ಬಂಧುಗಳು ಸಮಾರಂಭದಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕೆಂದು ಅವರು ಮನವಿ […]
Continue Readingಮುಂಬೈ ಹವ್ಯಕವಲಯದಲ್ಲಿ ರಕ್ತದಾನ ಶಿಬಿರ ಆಯೋಜನೆ
ಮುಂಬೈ: ಮಹಾನಗರ ಮುಂಬೈ ವಲಯ ವ್ಯಾಪ್ತಿಯಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ೬೧ ಬಾಟಲ್ ರಕ್ತ ಸಂಗ್ರಹವಾಯಿತು. ನಗರದ ಪೇಜಾವರ ಮಠ ಹಾಗೂ ಸಂತ ಕ್ರೂಜ್ ಪ್ರದೇಶದಲ್ಲಿ 26-11-2018 ರಂದು ಜೆ.ಜೆ. ಪಥಪೆಧಿ, ಥಾಣೆ ರಕ್ತನಿಧಿಯವರ ಸಹಯೋಗದಲ್ಲಿ ಮುಂಬೈ ಹವ್ಯಕವಲಯವು ಆಯೋಜಿಸಿದ್ದ ಶಿಬಿರದಲ್ಲಿ ನೂರಕ್ಕೂ ಅಧಿಕ ಜನರು ಭಾಗವಹಿಸಿದ್ದರು. ಪೆನ್ ಉಡುಗೊರೆ : ಶಿಬಿರದಲ್ಲಿ ರಕ್ತದಾನ ಮಾಡಿದವರಿಗೆ ಹಾಗೂ ರಕ್ತನಿಧಿ ಸಿಬ್ಬಂದಿಗೆ ಮುಂಬೈ ವಲಯ ಅಧ್ಯಕ್ಷ ಶ್ರೀ ಕೃಷ್ಣ ಭಟ್ ಗುಡ್ಡೆಬಾಳ್ ಅವರು ಪ್ರತಿಯೊಬ್ಬರಿಗೆ ಕಾಣಿಕೆಯಾಗಿ […]
Continue Readingಗೋವಾ ಹವ್ಯಕ ವಲಯದಲ್ಲಿ ಕಾರ್ತಿಕ ದೀಪೋತ್ಸವ; ಕುಂಕುಮಾರ್ಚನೆ, ಅಷ್ಟಾವಧಾನ ಸೇವೆಯ ಜೊತೆಗೆ ಆಹಾರೋತ್ಸವದ ಸಡಗರ
ಗೋವಾ: ಗೋವಾ ಹವ್ಯಕವಲಯವು ಕಾರ್ತಿಕ ದೀಪೋತ್ಸವವನ್ನು ಬಹಳ ವಿಶೇಷವಾಗಿ ಆಚರಿಸಿದೆ. ದಿನಾಂಕ 24.11.2018ರ ಶನಿವಾರ ಮಡಗಾಂವ್ ನ ಗಜಾನನ ಮಹಾರಾಜರ ಮಠದಲ್ಲಿ ಹಮ್ಮಿಕೊಂಡಿದ್ದ ಕಾರ್ತಿಕ ದೀಪೋತ್ಸವದ ಪ್ರಯುಕ್ತ ಕುಂಕುಮಾರ್ಚನೆ, ಅಷ್ಟಾವಧಾನ ಸೇವೆ, ದೀಪಾರಾಧನೆ ಹಾಗೂ ಆಹಾರೋತ್ಸವಗಳನ್ನು ಏರ್ಪಡಿಸಲಾಗಿತ್ತು. ಗುರುವಂದನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ವಲಯದ ಮಾತೃ ವಿಭಾಗ ಪ್ರಧಾನೆ ಶ್ರೀಮತಿ ಮಮತಾ ಹೆಗಡೆ ಹಾಗೂ ಕಾರ್ಯದರ್ಶಿ ಶ್ರೀಮತಿ ರೇಖಾ ಹೆಗಡೆ ಇವರ ನೇತೃತ್ವದಲ್ಲಿ ಹದಿನೈದು ಮಹಿಳೆಯರು ಕುಂಕುಮಾರ್ಚನೆ ನಡೆಸಿದರು. ವಲಯದ ಸಂಸ್ಕಾರ ಪ್ರಧಾನ ಶ್ರೀ ಮಹಾಬಲ ಭಟ್ […]
Continue Readingಪ್ರಧಾನಮಠದಲ್ಲಿ ವಿದ್ಯಾಸಹಾಯನಿಧಿ ವಿತರಣೆ ಕಾರ್ಯಕ್ರಮ
ರಾಮಚಂದ್ರಾಪುರ (ಹೊಸನಗರ) : ಶ್ರೀಮಠವು ಧಾರ್ಮಿಕಕಾರ್ಯಗಳಿಗೆ ಮಾತ್ರ ಸೀಮಿತವಾಗಿರದೇ ವಿದ್ಯಾರ್ಥಿಗಳ ಶೈಕ್ಷಣಿಕ ಉದ್ದೇಶಕ್ಕೆಆರ್ಥಿಕ ನೆರವು ನೀಡುವುದರಲ್ಲೂ ಯಾವಾಗಲೂ ಮುಂದು ಎಂದು ಮಂಡಲ ಅಧ್ಯಕ್ಷ ರಮೇಶ ಗುಂಡೂಮನೆ ಹೇಳಿದರು. ಹೊಸನಗರದ ಪ್ರಧಾನ ಮಠದಲ್ಲಿ ೨೫-೧೧-೨೦೧೮ (ಭಾನುವಾರ)ರಂದು ನಡೆದ ವಿದ್ಯಾಸಹಾಯ ನಿಧಿ 2018- 19ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ‘ವಿದ್ಯಾಸಹಾಯ ನಿಧಿಯು ಹಣಕಾಸಿನ ನೆರವು ಮಾತ್ರವಲ್ಲದೇ ಬದುಕಿಗೆ ಬೆಳಕು ನೀಡುವ ಅನುಗ್ರಹವೂ ಆಗಿದೆ’ ಎಂದರು. ವಿದ್ಯಾರ್ಥಿಗಳು ಸಮಾಜ ಗೌರವಿಸುವ ಸ್ಥಾನವನ್ನು ಸಂಪಾದಿಸಿ ಬದುಕನ್ನು ಹಸನಾಗಿಸಿಕೊಳ್ಳಬೇಕು ಎಂದು ಕಿವಿಮಾತು […]
Continue Readingಉಪ್ಪಿನಪಟ್ಟಣ-ಸಾಗರಗಳಲ್ಲಿ ಅಮೃತಪಥ
ಶ್ರೀಸಂಸ್ಥಾನದವರು ನಿರ್ದೇಶಿಸಿದಂತೆ ಗೋವುಗಳ ಪಥವನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವ ಅಮೃತಪಥ ಕಾರ್ಯಕ್ರಮ ಸಾಗರ ಮತ್ತು ಕುಮಟ ಮಂಡಲಗಳಲ್ಲಿ ನಡೆಯಿತು. ಸಾಗರ ನಗರದ ಪೂರ್ವ ಮತ್ತು ಪಶ್ಚಿಮ ವಲಯಗಳ ನೇತೃತ್ವದಲ್ಲಿ ಶನಿವಾರ ನಗರದ ಅಗ್ರಹಾರದಲ್ಲಿ ಹಾಗೂ ಕುಮಟ ಮಂಡಲದ ಉಪ್ಪಿನಪಟ್ಟಣ ವಲಯದಲ್ಲಿ ಅಮೃತಪಥ ಕಾರ್ಯಕ್ರಮ ನಡೆಯಿತು. ಹಲವು ಮಂದಿ ಶಿಷ್ಯಭಕ್ತರು ಭಾಗವಹಿಸಿದ್ದರು.
Continue Readingಮೂರೂರು ಶಾಲೆ ವಿದ್ಯಾರ್ಥಿಯ ಸಾಧನೆ : ಚಕ್ರ ಎಸೆತ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ – ರಾಷ್ಟ್ರಮಟ್ಟಕ್ಕೆ ಆಯ್ಕೆ
ಕುಮಟಾ : ಮೂರೂರಿನ ಪ್ರಗತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಕುಮಾರ ಅಭಿ ಆರ್. ಅಡಿಗುಂಡಿ ರಾಜ್ಯಮಟ್ಟದ ಚಕ್ರ ಎಸೆತ (ಡಿಸ್ಕಸ್ ಥ್ರೋ) ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗೆದ್ದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ನ.21, 22ರಂದು ನಡೆದ ರಾಜ್ಯಮಟ್ಟದ ಪ್ರೌಢಶಾಲೆಗಳ ಇಲಾಖಾ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಕು. ಅಭಿ 39.75 ಮೀಟರ್ ದೂರ ಚಕ್ರ ಎಸೆಯುವುದರೊಂದಿಗೆ ಪ್ರಥಮ ಸ್ಥಾನ ಪಡೆದು ದೆಹಲಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಗೊಂಡಿದ್ದಾನೆ. […]
Continue Readingಈ ಸಲದ ಧರ್ಮಭಾರತಿಯಲ್ಲಿ…
ಅಯ್ಯಪ್ಪ, ಅಯ್ಯನಾರ್, ಅಯ್ಯನ್, ಬೇಟೆ ಅಯ್ಯಪ್ಪ ಎಂದೆಲ್ಲ ಗುರುತಿಸಿಕೊಳ್ಳುವ; ವೈದಿಕಕ್ಕೂ ಜನಪದಕ್ಕೂ ಸಲ್ಲುವ ದೈವ ಶಾಸ್ತಾರನ ಕುರಿತು ಡಾ. ಮನೋರಮಾ ಬಿ. ಎನ್. ಅವರ ಮಾಹಿತಿಪೂರ್ಣ ಬರಹ. ಆಧುನಿಕ ಕಾಲದಲ್ಲಿ, ಮಹಿಳೆಯರ ಆರೋಗ್ಯ ಸಮಸ್ಯೆಗಳಲ್ಲಿ ಮುಂಚೂಣಿಯಲ್ಲಿರುವ PCOS ಬಗ್ಗೆ ಡಾ.ಸುವರ್ಣಿನೀ ಕೊಣಲೆಯವರ ಲೇಖನ. ಪ್ರಜೆ ಹೊರಟ. ಮಾರಾಪು ಕಟ್ಟಿಕೊಂಡು. ರಾಜನನ್ನು ಕಾಣಲು. ಗೊತ್ತಿಲ್ಲದ ದಾರಿಯಲ್ಲಿ ಹದಿಮೂರು ದಿನದ ಪಯಣ. ನಡೆದೇ ನಡೆದನವ. ಮುಂದೇನಾಯಿತು? ಶ್ರೀಗೋಪಾಲಕೃಷ್ಣ ಕುಂಟಿನಿಯವರ ಕಥೆಯಲ್ಲಿ. ದಿವ್ಯಸನ್ನಿಧಿಯಲ್ಲಿ ಶ್ರೀಸಂಸ್ಥಾನದವರ ಪ್ರವಚನಾಮೃತ – ನಲಿವಿನ […]
Continue Readingವರ್ಕಾಡಿಯ ಶ್ರೀನಾರಾಯಣಗುರು ಮಂದಿರದಲ್ಲಿ ಯಶಸ್ವಿಯಾದ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರ
ವರ್ಕಾಡಿ: ‘ಪರಮಪೂಜ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿರುವ ಮುಜುಂಗಾವು ಶ್ರೀಭಾರತೀ ನೇತ್ರ ಚಿಕಿತ್ಸಾಲಯವು ಹಳ್ಳಿ ಹಳ್ಳಿಗಳಲ್ಲಿ ಉಚಿತವಾಗಿ ನೇತ್ರಚಿಕಿತ್ಸಾ ಶಿಬಿರಗಳನ್ನು ನಡೆಸುವ ಮೂಲಕ ಅನೇಕ ಜನರ ದೃಷ್ಟಿದೋಷ ನಿವಾರಣೆಗೆ ಸಹಕಾರಿಯಾಗಿದೆ. ನಾವೂ ಕೂಡ ಶ್ರೀಭಾರತೀ ನೇತ್ರ ಚಿಕಿತ್ಸಾಲಯದ ಜೊತೆ ಸೇರಿ ಈಗಾಗಲೇ ಎರಡು ಶಿಬಿರಗಳನ್ನು ನಡೆಸಿದ್ದೇವೆ. ಇನ್ನು ಮುಂದೆಯೂ ಇಂತಹ ನೂರಾರು ಶಿಬಿರಗಳನ್ನು ನಡೆಸುವ ಮೂಲಕ ಜನರಿಗೆ ಇನ್ನಷ್ಟು ಸೇವೆ ಮಾಡುವ ಉದ್ದೇಶವನ್ನು ಹೊಂದಿಕೊಂಡಿದ್ದೇವೆ’ ಎಂದು ವರ್ಕಾಡಿ ಶ್ರೀನಾರಾಯಣಗುರು ಮಂದಿರದ ಅಧ್ಯಕ್ಷರೂ, ಯಕ್ಷಗಾನ ಕಲಾವಿದರೂ ಆಗಿರುವ ಶ್ರೀ ನಾರಾಯಣ […]
Continue Readingಬದಿಯಡ್ಕದ ಶ್ರೀಭಾರತೀ ವಿದ್ಯಾಪೀಠದಲ್ಲಿ ಮಾತಾಪಿತೃ ಪೂಜೆ : ಹೆತ್ತವರ ಸೇವೆಗೆ ಪ್ರತಿಜ್ಞಾಬದ್ಧರಾದ ಮಕ್ಕಳು – ಭಾವುಕರಾದ ಹೆತ್ತವರು
ಬದಿಯಡ್ಕ: ನವೆಂಬರ್ 23ರಂದು ಇಲ್ಲಿನ ಶ್ರೀಭಾರತೀ ವಿದ್ಯಾಪೀಠ ಶಾಲೆಯಲ್ಲಿ ಮಾತಾಪಿತೃ ಪೂಜೆಯು ಭಕ್ತಿ-ಶ್ರದ್ಧೆಗಳಿಂದ ನೆರವೇರಿತು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಪೂಜಾ ವಿಧಾನಗಳ ಬಗ್ಗೆ ತಿಳಿಸಿ ಮಕ್ಕಳಿಂದ ಪಾಲಕರ ಪಾದ ಪೂಜೆ ನೆರವೇರಿಸಿ, ಪ್ರತಿಜ್ಞಾವಿಧಿ ಬೋಧಿಸಿದರು. ಪ್ರತಿಜ್ಞಾವಿಧಿಯಲ್ಲಿ ಮಕ್ಕಳು ‘ತಂದೆ-ತಾಯಿ ನಮ್ಮ ಕಣ್ಣಿಗೆ ಕಾಣುವ ದೇವರು. ಅವರ ಆಶೀರ್ವಾದದಿಂದ ಜೀವನದಲ್ಲಿ ಏನು ಬೇಕಾದರೂ ಸಾಧಿಸಲು ಸಾಧ್ಯ. ನಾವು ಹೆತ್ತವರನ್ನು ವೃದ್ಧಾಪ್ಯದಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತೇವೆ.’ ಎಂದು ಹೆತ್ತವರ ಪಾದಸ್ಪರ್ಶಿಸಿ ಪ್ರತಿಜ್ಞೆಗೈದರು. ಈ ಸಂದರ್ಭದಲ್ಲಿ ಹೆತ್ತವರು […]
Continue Readingಪ್ರಾಯ-ಅಭಿಪ್ರಾಯಗಳಲ್ಲಿ ಆದರ್ಶಪ್ರಾಯರಾದ ಪಕ್ವಜೀವಿಗಳಿಗೆ ಪರಿಪಕ್ವವಾದ ಕಾರ್ಯ ‘ಸಂಧ್ಯಾಮಂಗಲ’ : ಶ್ರೀಸಂಸ್ಥಾನದವರಿಂದ ವಿಶೇಷ ಆಶೀರ್ವಾದ
ಬೆಂಗಳೂರು: ಜೀವನದ ಸಂಧ್ಯಾಕಾಲದಲ್ಲಿರುವ ಹಿರಿಯ ಜೀವಗಳ ಶೇಷಾಯುಷ್ಯವು ಮಂಗಲಕರವಾಗಿರಲಿ ಎಂಬ ಸದುದ್ದೇಶದೊಂದಿಗೆ ಬೆಂಗಳೂರಿನ ಶ್ರೀರಾಮಾಶ್ರಮದಲ್ಲಿ 21.11.2018ರ ಬುಧವಾರದಂದು ಸಂಧ್ಯಾಮಂಗಲ ಎಂಬ ವಿಶೇಷ ಕಾರ್ಯಕ್ರಮವನ್ನು ನಡೆಸಲಾಯಿತು. ಹವ್ಯಕ ಮಹಾಮಂಡಲದ ನೇತೃತ್ವದಲ್ಲಿ ನಡೆದ ಸಂಧ್ಯಾಮಂಗಲದಲ್ಲಿ 60 ವರ್ಷ, 70 ವರ್ಷ, 80 ವರ್ಷಗಳನ್ನು ಪೂರೈಸಿದ ಒಟ್ಟು 70 ಹಿರಿಯ ದಂಪತಿಗಳು ಪಾಲ್ಗೊಂಡು, ಶ್ರೀಸಂಸ್ಥಾನದವರ ಅಮೃತಹಸ್ತಗಳಿಂದ ವಿಶೇಷ ದಿವ್ಯಾಶೀರ್ವಾದಗಳನ್ನು ಪಡೆದರು. ಸಂಧ್ಯಾಮಂಗಲ ಕಾರ್ಯಕ್ರಮದ ಧರ್ಮಸಭೆಯ ದಿವ್ಯಸಾನ್ನಿಧ್ಯವನ್ನು ವಹಿಸಿದ್ದ ಶ್ರೀಸಂಸ್ಥಾನದವರು, ಬಹುಕಾಲ ಬದುಕಿ ಬಾಳಿ ಸಮಾಜವನ್ನು ಬೆಳಗಿದ, ಪ್ರಾಯ-ಅಭಿಪ್ರಾಯಗಳೆರಡರಲ್ಲಿಯೂ ಪಕ್ವರಾಗಿ ಸಮಾಜಕ್ಕೆ […]
Continue Readingಶ್ರೀರಾಮಾಶ್ರಮದಲ್ಲಿ ಸಹಸ್ರ ದೀಪೋತ್ಸವ
ಸಪರಿವಾರ ಶ್ರೀರಾಮದೇವರ, ಶ್ರೀಗುರುದೇವರ ಹಾಗೂ ಕಾಮಧೇನುವಿನ ದಿವ್ಯಸನ್ನಿದಿಯಲ್ಲಿ, ಚಂಪಾಷಷ್ಠಿಯ ಪರ್ವದಿನದಲ್ಲಿ, ಸಹಸ್ರದೀಪೋತ್ಸವ ಸೇವೆ ನಡೆಯಲಿದೆ. ಕಾಲ: 13.12.2018, ಗುರುವಾರ ಸಂಜೆ 7 ರಿಂದ ಸರ್ವರಿಗೂ ಆದರದ ಸ್ವಾಗತ.
Continue Readingಶ್ರೀಕ್ಷೇತ್ರ ಗೋಕರ್ಣದ ಸಂಸ್ಥಾನ ಶ್ರೀಮಹಾಬಲೇಶ್ವರ ದೇವಾಲಯದಲ್ಲಿ ತುಳಸಿ ವಿವಾಹ ಸಂಪನ್ನ.
ಗೋಕರ್ಣ: ಶ್ರೀಕ್ಷೇತ್ರ ಗೋಕರ್ಣದ ಸಂಸ್ಥಾನ ಶ್ರೀಮಹಾಬಲೇಶ್ವರ ದೇವಾಲಯದಲ್ಲಿ ನ.20ರಂದು, ಮಂಗಳವಾರ ತುಳಸಿ ವಿವಾಹ ಸಂಪನ್ನಗೊಂಡಿತು. ವೇದಮೂರ್ತಿ ಶ್ರೀ ಶಿತಿಕಂಠ ಹಿರೇಭಟ್ ಪೂಜೆ ನೆರವೇರಿಸಿದರು. ಆಡಳಿತಾಧಿಕಾರಿ ಶ್ರೀ ಜಿ.ಕೆ. ಹೆಗಡೆ ಮತ್ತು ಉಪಾಧಿವಂತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
Continue Readingಶ್ರೀರಾಜರಾಜೇಶ್ವರಿ ನಗರದಲ್ಲಿ ಅಮೃತಪಥ : ಎಲ್ಲರೂ ಭಾಗವಹಿಸಿ – ಗೋಕೃಪೆಗೆ ಪಾತ್ರರಾಗಿ
ಬೆಂಗಳೂರು: ಶ್ರೀರಾಜರಾಜೇಶ್ವರೀ ನಗರದ ಬಾಲಕೃಷ್ಣ ರಂಗಮಂದಿರದಲ್ಲಿ ರವಿವಾರ, ನ.25ರಂದು ಬೆಳಿಗ್ಗೆ 8.30 ರಿಂದ 11ಗಂಟೆಯ ವರೆಗೆ ‘ಅಮೃತ ಪಥ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗೋಮಾತೆಯು ಓಡಾಡುವ ಸ್ಥಳವನ್ನು ಕಸ ಮತ್ತು ಪ್ಲಾಸ್ಟಿಕ್ ಮುಕ್ತ ಪಥವನ್ನಾಗಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಶ್ರೀಮಠದ ಎಲ್ಲಾ ಗೋ ಭಕ್ತರೂ ಭಾಗವಹಿಸಲು ವಿನಂತಿಸಲಾಗಿದೆ.
Continue Reading