ಮಾಲೂರಿನಲ್ಲಿ ದೀಪಾವಳಿ ಗೋಪೂಜೆ

ಮಾಲೂರು: ಗಂಗಾಪುರದ ಶ್ರೀ ರಾಘವೇಂದ್ರ ಗೋಆಶ್ರಮದಲ್ಲಿ ದೀಪಾವಳಿ ಗೋಪೂಜೆ ಕಾರ್ಯಕ್ರಮ ವೇ.‌ಮೂ. ಗೋಪಾಲಕೃಷ್ಣ ಕಾಕತ್ಕರ್ ಅವರ ನೇತೃತ್ವದಲ್ಲಿ ವಿಜ್ರಂಭಣೆಯಿಂದ ನಡೆಸಲಾಯಿತು.   ಬೆಳಗ್ಗೆ ಶ್ರೀ ಸಿದ್ಧಾಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಪಂಚಾಮೃತಾಭಿಷೇಕ ಸಹಿತ ಪೂಜೆ ನಡೆಯಿತು. ನಂತರ ಸುಮಾರು ಇನ್ನೂರಕ್ಕೂ ಹೆಚ್ಚು ಗೋಭಕ್ತರ ಸಮ್ಮುಖದಲ್ಲಿ ದೀಪಾವಳಿ ಗೋಪೂಜೆ ನಡೆಯಿತು.   ಮೂವತ್ಮೂರು ಕೋಟಿ ದೇವತೆಗಳ ಆವಾಸಸ್ಥಾನ ಸವತ್ಸ ಗೋವನ್ನು ಅಲಂಕೃತ ಮಂಟಪದಲ್ಲಿ ಪೂಜಿಸಲಾಯಿತು. ಗೋಪೂಜೆಯ ಮಹತ್ವವನ್ನು ಗೋಪಾಲಕೃಷ್ಣ ಕಾಕತ್ಕರ್ ವಿವರಿಸಿದರು.   ಗೋಆಶ್ರಮದ ಸಮಸ್ತ ಗೋವುಗಳಿಗೆ ಸೇವಾಕರ್ತರಾದ ಪರ್ತಜೆ […]

Continue Reading

ವಾಲ್ಮೀಕಿ ರಾಮಾಯಣ ಪಾರಾಯಣ

ಸಾಗರ: ಜೀವನ ಅರ್ಥವಾಗಲು, ಸಾರ್ಥಕವಾಗಲು ರಾಮಾಯಣ ಮಹಾಕಾವ್ಯ ಮಾರ್ಗದರ್ಶಕ ಎಂದು ಮಹಾಮಂಡಲ ವೈದಿಕ ಪ್ರಧಾನ ವೇದಮೂರ್ತಿ ನೀಲಕಂಠಯಾಜಿ ಹೇಳಿದರು. ಇಲ್ಲಿನ ಬನ್ನಿಕಟ್ಟೆ ರಸ್ತೆಯ ಶ್ರೀರಾಘವೇಶ್ವರ ಸಭಾಭವನದಲ್ಲಿಹೊಸನಗರದ ಶ್ರೀರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತಿಯವರ 1008 ವಾಲ್ಮೀಕಿ ರಾಮಾಯಣ ಪಾರಾಯಣ ಸಂಕಲ್ಪದ ಅಂಗವಾಗಿ ಹಮ್ಮಿಕೊಂಡ 21 ವೈದಿಕರಿಂದ ಪಾರಾಯಣ ಮಹಾಪರ್ವದ ಮಂಗಲೋತ್ಸವ ಅಂಗವಾಗಿ ಶನಿವಾರ ಹಮ್ಮಿಕೊಂಡ ಕಾರ‍್ಯಕ್ರಮದಲ್ಲಿಅವರು ಸಮಾರೋಪ ಭಾಷಣ ಮಾಡಿದರು. ವಿದ್ವಾನ್‌ ಎನ್‌.ಎಸ್‌.ಗಣಪತಿಭಟ್‌ ಮಾತನಾಡಿದರು. ವಾಲ್ಮೀಕಿ ಮಹಾಗ್ರಂಥಕ್ಕೆ ಸಾಮೂಹಿಕ ಮಂಗಳಾರತಿ ಮಾಡಲಾಯಿತು. ಸಭಾಭವನದ ಅಧ್ಯಕ್ಷ ಹರನಾಥ್‌ ರಾವ್‌ ಮತ್ತಿಕೊಪ್ಪ ಅಧ್ಯಕ್ಷತೆ […]

Continue Reading

ಗೋವಿಗಾಗಿ ಮೇವು – ಮೇವಿಗಾಗಿ ನಾವು

ಬಜಕೂಡ್ಲು: ಬಜಕೂಡ್ಲು ಅಮೃತಧಾರಾ ಗೋಶಾಲೆಯ ಗೋವುಗಳಿಗಾಗಿ ಹರಿಹರಭಜನಾಮಂದಿರ ಮಾಡತ್ತಡ್ಕದ ಪರಿಸರದಲ್ಲಿ ಹಿರಿಯರಾದ ಮಿಂಚಿನಡ್ಕ ಗೋವಿಂದ ಭಟ್ಟರ ನೇತೃತ್ವದಲ್ಲಿ ಅ.೨೭ರಂದು ಮೂರನೆಯ ಗೋವಿಗೆಮೇವು ಕಾರ್ಯಕ್ರಮ ನಡೆಯಿತು.   ಹರಿಹರ ಭಜನಾ ಸದಸ್ಯರರಾದ ಮಾಡತಡ್ಕ ಪ್ರವೀಣ ಕುಮಾರ ಯಂ, ಸಂತೋಷ ಆಣಬೈಲು, ಶಿವಪ್ರಸಾದ ಎ, ವೇಣುಗೋಪಾಲ ಮತ್ತು ವಾಹನ ಚಾಲಕ ಸತೀಶ ಯಂ. ಕಾಮದುಘಾ ಕಾರ್ಯದರ್ಶಿ ಡಾ.ವೈ.ವಿ.ಕೃಷ್ಣಮೂರ್ತಿ, ಮಂಡಲ ಸಂಘಟನಾ ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ, ಸಹಾಯ ಪ್ರಧಾನ ಮಹೇಶ ಸರಳಿ, ಪೆರಡಾಲ ವಲಯ ಅಧ್ಯಕ್ಷ ಪದ್ಮರಾಜ ಪಟ್ಟಾಜೆ, ಉಪಾಧ್ಯಕ್ಷ […]

Continue Reading

ಎಸ್‌ಎಪಿ ಲ್ಯಾಬ್‌ನ ಸಿಎಸ್ ಆರ್ ಯೋಜನೆಯ ಮೂಲಕ ಪಶು ಆಹಾರ

ಮಾಲೂರು: ಬೆಂಗಳೂರು ಎಸ್‌ಎಪಿ ಲ್ಯಾಬ್‌ನ ತಂತ್ರಜ್ಞರು ಸಂಸ್ಥೆಗಳ ಸಾಮಾಜಿಕ ಜವಾಬ್ದಾರಿಯಡಿಯಲ್ಲಿ ಶ್ರೀರಾಘವೇಂದ್ರ ಗೋಆಶ್ರಮಕ್ಕೆ 1.25 ಲಕ್ಷಕ್ಕೂ ಅಧಿಕ ಮೊತ್ತದ ಪಶು ಆಹಾರವನ್ನು ನೀಡಿದರು.   ಕಾಮದುಘಾ ಟ್ರಸ್ಟ್ ಅಧ್ಯಕ್ಷ ಡಾ. ವೈ. ವಿ. ಕೃಷ್ಣಮೂರ್ತಿ ಮಾತನಾಡಿ ಭಾರತೀಯ ಗೋ ತಳಿಗಳನ್ನು ಉಳಿಸುವ ಕಾರ್ಯ ನಮ್ಮೆಲ್ಲರಿಂದ ನಡೆಯಬೇಕಾಗಿದೆ. ದೇಶೀಯ ತಳಿಯಲ್ಲಿ ಸಿಗುವ ಎ2 ಹಾಲಿನಲ್ಲಿ ಔಷಧೀಯ ಗುಣಗಳಿದ್ದು, ಸೇವನೆಯಿಂದ ಆರೋಗ್ಯಕ್ಕೆ ಉತ್ತಮ ಎಂದರು.   ಸುಮಾರು 40ಕ್ಕೂ ಅಧಿಕ ತಂತ್ರಜ್ಞರು ಗೋಶಾಲೆಯ ಸ್ವಚ್ಛತೆ, ಆವರಣದ ಕಳೆ ಕೀಳುವ ಶ್ರಮ […]

Continue Reading

ನೂತನ ಘಟಕ ಸಮಿತಿ ರಚನೆ

ಮುಳ್ಳೇರಿಯಾ: ಚಂದ್ರಗಿರಿ ವಲಯದ ತಂಡ್ರಪಾರೆ ಘಟಕ ಸಭೆಯು ಘಟಕಾಧ್ಯಕ್ಷ ಕಾಕುಂಜೆ ಶಂಕರನಾರಾಯಣ ಭಟ್ಟರ ನಿವಾಸದಲ್ಲಿ ಅ.೨೦ರಂದು ಸಂಜೆ ನಡೆಯಿತು.   ವಲಯ ಅಧ್ಯಕ್ಷರಾದ ಸುಬ್ರಹ್ಮಣ್ಯ ಭಟ್ ಮೀನಗದ್ದೆ ಇವರು ಆಗಮಿಸಿ ಘಟಕ ಸಭೆಯ ರೂಪೀಕರಣದ ಮಾಹಿತಿ ನೀಡಿ, ನೂತನ ಘಟಕ ಸಮಿತಿ ರೂಪೀಕರಿಸಲಾಯಿತು. ಶ್ರೀ ಮಠದ ಯೋಜನೆಗಳು, ವಲಯದ ವ್ಯಾಟ್ಸಪ್ ಗಳ ರಚನೆ, ಮೂಲಮಠಗಳ ಕುರಿತಾದ ಮಾಹಿತಿ ನೀಡಲಾಯಿತು.   ಘಟಕ ಸಂಯೋಜಕರಾಗಿ ನರಸಿಂಹ ರಾಜ ಪಯ, ನಿರ್ದೇಶಕರಾಗಿ ಕಾಮಲ ಸುಬ್ರಹ್ಮಣ್ಯ ಭಟ್, ಶ್ರೀ ಕಾರ್ಯಕರ್ತರಾಗಿ ವೆಂಕಟ್ರಮಣ […]

Continue Reading

ಮಾತೃವಿಭಾಗದಿಂದ ಕುಂಕುಮಾರ್ಚನೆ, ವೈದಿಕವಿಭಾಗದಿಂದ ವೇದಪಠನ

ಭಾರತ: ಗೋವಾ ವಲಯದ ಮಾತೃವಿಭಾಗ ಹಾಗೂ ವೈದಿಕ ವಿಭಾಗಗಳ ಸಂಯೋಜನೆಯಲ್ಲಿ ಕುಂಕುಮಾರ್ಚನೆ ಹಾಗೂ ಮಂತ್ರಪಠನೆ ಕಾರ್ಯಕ್ರಮ ಅ.೨೦ರಂದು ಸುಕೂರಿನ ಶ್ರೀ ಮೋಹನ ಬರ್ವೆ ಅವರ ನಿವಾಸದಲ್ಲಿ ನಡೆಯಿತು.   ೧೬ ಮಾತೆಯರು ಲಲಿತಾಸಹಸ್ರನಾಮಪೂರ್ವಕ ಕುಂಕುಮಾರ್ಚನೆಯನ್ನು ನೆರವೇರಿಸಿದರು. ಶ್ರೀ ಲಕ್ಷ್ಮೀ ನೃಸಿಂಹ ಕರಾವಲಂಬ ಸ್ತೋತ್ರ ಇತ್ಯಾದಿ ಸ್ತೋತ್ರಗಳನ್ನು ಪಠಿಸಲಾಯಿತು. ಹನ್ನೊಂದು ಪುರುಷರು ವೇದಪಠನೆ ನೆರವೇರಿಸಿದರು.   ಕಾರ್ಯಕ್ರಮದ ನೇತೃತ್ವ ವಹಿಸಿದ್ದ ವೇ.ಮೂ. ಕೃಷ್ಣ ಭಟ್ಟರನ್ನು ಹಾಗೂ ಯಾಜಮಾನ್ಯ ವಹಿಸಿದ್ದ ಮೋಹನ ಬರ್ವೆ ಅವರನ್ನು ಗೋವಾ ಹವ್ಯಕ ವಲಯದ ಪರವಾಗಿ […]

Continue Reading

ಕಣ್ಣಿನ ಪೊರೆ ತಪಾಸಣಾ ಉಚಿತ ಶಿಬಿರ

ಮುಳ್ಳೇರಿಯಾ: ಶ್ರೀ ಭಾರತೀ ನೇತ್ರ ಚಿಕಿತ್ಸಾಲಯ ಮುಜುಂಗಾವು, ಶ್ರೀ ಮುಳಿಯಾರು ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರ, ಕಾಸರಗೋಡು ಜಿಲ್ಲಾಅಂಧತ್ವ ನಿವಾರಣಾಸಮಿತಿ ಇವರ ಆಶ್ರಯದಲ್ಲಿ ಚಂದ್ರಗಿರಿ ಹವ್ಯಕ ವಲಯದ ವತಿಯಿಂದ ಕಣ್ಣಿನ ಪೊರೆ ತಪಾಸಣಾ ಉಚಿತ ಶಿಬಿರವು ಮುಳಿಯಾರು ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಅ.೨೦ರಂದು ನಡೆಯಿತು.   ಶಿಬಿರದ ಉದ್ಘಾಟನೆಯನ್ನು ಮುಳಿಯಾರು ಶ್ರೀಸುಬ್ರಹ್ಹಣ್ಯ ಕ್ಷೇತ್ರದ ಮೊಕ್ತೇಸರರಾದ ಸೀತಾರಾಮ ಬಳ್ಳುಳ್ಳಾಯ ನಡೆಸಿದರು. ಶಿಬಿರದಲ್ಲಿ ನೇತ್ರತಜ್ಞರಾಗಿ ಡಾ ಉನೈಸ ಸಹಕರಿಸಿದರು. ಸಾರ್ವಜನಿಕರು ಶಿಬಿರದ ಸದುಪಯೋಗವನ್ನು ಪಡೆದರು. ಅರ್ಜುನಗುಳಿ ಯಸ್.ಯನ್.ಭಟ್ ಶುಭ ಹಾರೈಸಿದರು. ಶ್ರೀ […]

Continue Reading

ಮುಳ್ಳೇರಿಯಾ ಮಂಡಲದಿಂದ ಮುಂದುವರಿದ ಗೋವಿಗಾಗಿ ಮೇವು ಕಾರ್ಯಕ್ರಮ

ಬಜಕೂಡ್ಲು: ಬಜಕೂಡ್ಲು ಅಮೃತಧಾರಾ ಗೋಶಾಲೆಯಲ್ಲಿರುವ ಗೋವುಗಳ ಉದರಂಭರಣಕ್ಕಾಗಿ ಸಾರ್ವಜನಿಕ ಸ್ಥಳದಲ್ಲಿ ಹಾಳಾಗಿ ಹೋಗುವ ಹಸಿ ಹುಲ್ಲನ್ನು ಶ್ರಮಸೇವೆಯ ಮೂಲ ಕತ್ತರಿಸಿ ಕೊಡುವ ಮಹಾ ಕಾರ್ಯ ಅ.೨೦ರ ಭಾನುವಾರ ವಿದ್ಯಾನಗರ ಕುರುಡರಶಾಲೆಯ ಮುಂಭಾಗದ ಮಹಾತ್ಮಗಾಂಧಿ ಕಾಲೊನಿಯಲ್ಲಿ ನಡೆಯಿತು.   ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಕಾರ್ಯಾಚರಿಸುತ್ತಿರುವ ವಿವಿಧ ಸಾಮಾಜಮುಖೀ ಕಾರ್ಯಕ್ರಮಗಳಲ್ಲಿ ಒಂದಾದ ಗೋವಿಗಾಗಿ ಮೇವು ಮೇವಿಗಾಗಿ ನಾವು ಎರಡನೇ ಕಾರ್ಯಕ್ರಮ ಕಾಸರಗೋಡು ವಲಯಾಧ್ಯಕ್ಷ ಅರ್ಜುನಗುಳಿ ಶಂಕರನಾರಾಯಣ ಭಟ್ ನೇತೃತ್ವದಲ್ಲಿ ಗೋಪ್ರೇಮಿಗಳಿಂದ ನಡೆಯಿತು. ಬಜಕೂಡ್ಲು ಗೋಶಾಲೆಯ ಗಣರಾಜ ಕಡಪ್ಪು ನೇತೃತ್ವದಲ್ಲಿ […]

Continue Reading

ಸತ್ಯ ಶೋಧ ಮಿತ್ರ ಮಂಡಳಿ ಪೇಜ್ ಅಸತ್ಯ ಎಂದು ನಿಷ್ಕ್ರೀಯಗೊಳಿಸಿದ ಎಫ್. ಬಿ.

ಬೆಂಗಳೂರು: ಸತ್ಯ ಶೋಧ ಮಿತ್ರ ಮಂಡಳಿ ಎನ್ನುವ ಹೆಸರಿನಲ್ಲಿ ಸಮಾಜದ ಶಾಂತಿ ನೆಮ್ಮದಿಗೆ ಮಾರಕವಾಗಿದ್ದ ಹಾಗೂ ಶ್ರೀಮಠದ ಕುರಿತಾಗಿ ನಿರಂತರವಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸಿ, ತೇಜೋವಧೆ ಮಾಡಿ; ಕೋಟ್ಯಾಂತರ ಶಿಷ್ಯ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟುಮಾಡುತ್ತಿದ್ದ, ಸಾಮಾಜಿಕ ಜಾಲತಾಣದಲ್ಲಿನ ಫೇಸ್ ಬುಕ್ ನ ದುಷ್ಟಕೂಟವೊಂದನ್ನು ಫೇಸ್ ಬುಕ್ ಸಂಸ್ಥೆ ನಿಯಮಾನುಸಾರವಾಗಿ ಮುಕ್ತಾಯ ಮಾಡಿದೆ. ಹಲವು ದಿನಗಳಿಂದ ಕುಕೃತ್ಯದಲ್ಲಿ ಭಾಗಿಯಾಗಿದ್ದ ಈ ತಂಡದ ವಿರುದ್ಧ ಶ್ರೀಮಠದ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಗಿರಿನಗರ ಆರಕ್ಷಕ ಠಾಣೆಗೆ ದೂರು ನೀಡಿದ್ದರು. ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರು, […]

Continue Reading

ನಕಲಿ ಅಶ್ಲೀಲ ಸಿಡಿ ಪ್ರಕರಣ; ಜಾಮೀನು ರಹಿತ ವಾರೆಂಟ್

ಬೆಂಗಳೂರು: ನಕಲಿ ಅಶ್ಲೀಲ ಸಿಡಿ ತಯಾರಿಸಿ, ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ಮಾನಹಾನಿಗೆ ಪ್ರಯತ್ನಿಸಿದ್ದ ಪ್ರಕರಣದಲ್ಲಿ ವಿಚಾರಣೆ ನಡೆಸುತ್ತಿರುವ ಕುಮಟಾದ ಜೆ.ಎಂ.ಎಫ್.ಸಿ ನ್ಯಾಯಾಲಯವು ೫ ಜನ ಆರೋಪಿಗಳಿಗೆ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿ ಆದೇಶ ಹೊರಡಿಸಿದೆ.   ಶ್ರೀಸಂಸ್ಥಾನದವರ ತೇಜೋವಧೆ ಮಾಡುವ ದುರುದ್ದೇಶದಿಂದ ೨೦೧೦ ರಲ್ಲಿ ದುಷ್ಟಕೂಟವನ್ನು ಕಟ್ಟಿಕೊಂಡು ನಕಲಿ ಅಶ್ಲೀಲ ಸಿಡಿ ತಯಾರಿಸಿ, ಶ್ರೀಗಳ ಮಾನಹರಣವನ್ನು ಮಾಡುವ ಕುಪ್ರಯತ್ನ ನಡೆದಿತ್ತು. ಶ್ರೀಗಳನ್ನು ಹೋಲುವ ವ್ಯಕ್ತಿಯನ್ನು ಬಳಸಿ; ಶ್ರೀಗಳ ಹಾವ ಭಾವ ಗಳನ್ನು ಆತನಿಗೆ ಕಲಿಸಿ […]

Continue Reading

ಪ್ರತಿಷ್ಠಾ ವಾರ್ಷಿಕೋತ್ಸವ

ಗಿರಿನಗರ: ರಾಮಶ್ರಮದಲ್ಲಿ ಸಪರಿವಾರ ಸೀತಾರಾಮಚಂದ್ರದೇವರ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಅ.೨೧ ಮತ್ತು ೨೨ರಂದು ನಡೆಯಲಿದೆ.   ಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿಯವರು ಸಾನ್ನಿಧ್ಯ ವಹಿಸುವರು. ಅ.೨೧ರಂದು ಬೆಳಿಗ್ಗೆ ೯ರಿಂದ ವಾರ್ಷಿಕೋತ್ಸವ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಗುರುದೇವತಾ ಪ್ರಾರ್ಥನೆ, ಗಣಪತಿ ಪೂಜೆ, ಪುಣ್ಯಾಹ, ದೇವನಾಂದಿ, ಸಂಕಲ್ಪ, ಋತ್ವಿಗ್ವರಣ, ಕೌತುಕ ಬಂಧನ, ಧ್ವಜಾರೋಹಣ, ಬಲಿ ಸೇವೆಗಳು ನಡೆಯಲಿವೆ.   ಸಂಜೆ ರಾಕ್ಷೋಘ್ನಹೋಮ, ವಾಸ್ತುಪೂಜೆ, ಕಲಶಸ್ಥಾಪನೆ, ಕುಂಡಮಂಟಪ ಸಂಸ್ಕಾರ, ಅಗ್ನಿಜನನ, ಅಧಿವಾಸ ಹೋಮ, ಭೇರಿತಾಡನ, ರಂಗಪೂಜೆ, ಉತ್ಸವಾಂಗ ಬಲಿ, ನಗರ ಪ್ರದಕ್ಷಿಣೆ ನಡೆಯಲಿದೆ ಎಂದು […]

Continue Reading

ಮಾಸದ ಮಾತೆಯರ ಸಮಾವೇಶ

ಪೆರಾಜೆ: ಮಾಣಿ ಶ್ರೀರಾಮಚಂದ್ರಾಪುರಮಠದಲ್ಲಿ ಮಂಗಳೂರು ಪ್ರಾಂತ್ಯದ ಮಾಸದ ಮಾತೆಯರ ಸಮಾವೇಶ ಅ.೧೭ರಂದು ನಡೆಯಿತು.   ಮಾತೃತ್ವಮ್ ಅಧ್ಯಕ್ಷರಾದ ಈಶ್ವರಿಬೇರ್ಕಡವು ಮಾತನಾಡಿ ಸಂಘಟನೆಯ ಗುರಿಯನ್ನು ತಲುಪಲು ನಾವು ಇನ್ನೂ ಕ್ರಮಿಸಬೇಕಾಗಿರುವ ದೂರ, ಅದಕ್ಕಾಗಿ ಮಾಸದಮಾತೆಯರನ್ನು ಗುರುತಿಸುವಲ್ಲಿ ಪ್ರತಿಯೊಬ್ಬರ ಪಾತ್ರ ಈ ಕುರಿತು ಮಾಹಿತಿ ನೀಡಿದರು. ಜೊತೆಗೆ ಮಾಸದಮಾತೆಯರನ್ನು ಗುರುತಿಸಲು ಎಲ್ಲರಲ್ಲೂ ವಿನಂತಿಸಿಕೊಂಡರು.   ಮಹಾಮಂಡಲ ಸಂಯೋಜಕಿ ದೇವಿಕಾ ಶಾಸ್ತ್ರಿ ಮಾತನಾಡುತ್ತಾ, ನಾವೆಲ್ಲರೂ ನಮ್ಮ ನಮ್ಮ ಸಂಶಯಗಳನ್ನು ನಮ್ಮ ಸಂಘಟನೆಯ ಪದಾಧಿಕಾರಿಗಳಲ್ಲಿ ಕೇಳಿ ಪರಿಹರಿಸಿಕೊಳ್ಳೋಣ. ಸಲಹೆಗಳಿದ್ದಲ್ಲಿ ಸಂಬಂಧಪಟ್ಟ ಪದಾಧಿಕಾರಿಗಳ ಗಮನಕ್ಕೆ […]

Continue Reading

ಗೋಆಶ್ರಮದಲ್ಲಿ ಪ್ರಾಯಸ್ತರಿಗೆ ಅನುಕೂಲ!

ಮಾಲೂರು: ಶ್ರೀರಾಘವೇಂದ್ರ ಗೋಆಶ್ರಮದಲ್ಲಿ ಎಲ್ಲಾ ಗೋಶಾಲೆಗಳಿಗೆ ಪ್ರಾಯಸ್ತರಿಗೆ ಓಡಾಡಲು ಅಸಾಧ್ಯವಾಗಿತ್ತು. ಇದಕ್ಕಾಗಿ ಸಾಮಾಜ ಸೇವಕರೊಬ್ಬರು ಒಡಾಡಲು ಬೇಕಾದ ವ್ಯವಸ್ಥೆ ಕಲ್ಪಿಸಲು ಮುಂದಾಗಿದ್ದಾರೆ.   ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯಕರ್ತರು ಮತ್ತು ಸಮಾಜ ಸೇವಕರಾದ ಎಚ್ ಬಿ ಆರ್ ಲೇಔಟ್ ನಿವಾಸಿ ವೆಂಕಟ್ರಾಮ ಇವರು ಗೋಶಾಲೆಗೆ ವೀಲ್ ಚಯರ್ ಹಾಗೂ ವಾಕಿಂಗ್ ಸ್ಟಿಕ್ ಅನ್ನು ಡಾ.ಶ್ಯಾಮಪ್ರಸಾದ್ ಅವರ ಮೂಲಕ ನೀಡಿದ್ದಾರೆ.

Continue Reading

ಬಿಜೆಪಿ ಮುಖಂಡರು ಗೋಶಾಲೆಯಲ್ಲಿ ಮಾಡಿದ್ದೇನು?

ಮಾಲೂರು: ಶ್ರೀ ರಾಘವೇಂದ್ರ ಗೋಆಶ್ರಮದಲ್ಲಿ ಗೋವುಗಳ ಮಧ್ಯದಲ್ಲಿ ಬಿಜೆಪಿ ಮುಖಂಡರೊಬ್ಬರು ತಮ್ಮ ಹುಟ್ಟು ಹಬ್ಬವನ್ನು ಮಂಗಳವಾರ ವಿಶೇಷವಾಗಿ ಆಚರಿಸಿಕೊಂಡಿದ್ದಾರೆ.   ಮಾಲೂರು ಬಿಜೆಪಿ ಮುಖಂಡರಾದ ಹೂಡಿ ವಿಜಯಕುಮಾರ್ ಅವರು ಜನ್ಮದಿನದ ಅಂಗವಾಗಿ ಶ್ರೀ ರಾಘವೇಂದ್ರ ಗೋಆಶ್ರಮಕ್ಕೆ ಮೂವತ್ತಕ್ಕೂ ಹೆಚ್ಚು ತಮ್ಮ ಬೆಂಬಲಿಗರೊಂದಿಗೆ ಬೇಟಿ ನೀಡಿದರು. ವಿಶೇಷವಾಗಿ ಜನ್ಮದಿನ ಆಚರಿಸಿಕೊಳ್ಳುವ ಹಂಬಲ ವ್ಯಕ್ತ ಪಡಿಸಿದ ಇವರು ಗೋಪೂಜೆ ಹಾಗೂ ಶ್ರೀ ಸಿದ್ಧಾಂಜನೇಯ ಸ್ವಾಮಿಗೆ ಪೂಜೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಗೋವುಗಳಿಗೆ ಮೇವು ನೀಡುವ ಕಾರ್ಯಕ್ಕೆ ಮುಂದಾಗಿರುವ ಇವರು ಲಕ್ಷಕೂ […]

Continue Reading

ಕುಟುಂಬದ ಕ್ಷೇಮಕ್ಕಾಗಿ ಗೋವಿಗೆ ಮೇವು!

ಮಾಲೂರು: ಕುಟುಂಬದ ಕ್ಷೇಮಕ್ಕಾಗಿ ಗೋಪ್ರೇಮಿಯೊಬ್ಬರು ಗೋವುಗಳಿಗೆ ಮೇವು ನೀಡಿದ ವಿಶಿಷ್ಠ ಕಾರ್ಯಕ್ರಮವೊಂದು ಮಾಲೂರು ಶ್ರೀರಾಘವೇಂದ್ರ ಗೋಆಶ್ರಮದಲ್ಲಿ ಅ.೧೫ರಂದು ನಡೆದಿದೆ. ಮಾಲೂರು ಇರುಬನಹಳ್ಳಿ ನಿವಾಸಿಯಾಗಿರುವ ನಾರಾಯಣ ರೆಡ್ಡಿ ಈ ವಿಶಿಷ್ಠ ಕಾರ್ಯಕ್ರಮವನ್ನು ನಡೆಸಿದವರಾಗಿದ್ದಾರೆ. ಒಂದು ಟ್ರಾಕ್ಟರ್ ಲೋಡ್ ಜೋಳದ ಕಡ್ಡಿ ಮೇವನ್ನು ಗೋಆಶ್ರಮಕ್ಕೆ ನೀಡಿದರು. ಸ್ವತಃ ತಾವೇ ಗೋವುಗಳಿಗೆ ನೀಡುವ ಮೂಲಕ ಗೋಪ್ರೇಮವನ್ನು ಮೆರೆದಿದ್ದಾರೆ.

Continue Reading

ಹೊಂದಾಣಿಕೆ ಮಾಡದೆ ಜನರ ಒಳಿತಿಗೆ ಕೆಲಸ ಮಾಡಬೇಕು.!

ಬೆಂಗಳೂರು: ಹೊಂದಾಣಿಕೆ ರಾಜಕೀಯ ಮಾಡದೇ, ಯಾವ ಕೆಲಸವನ್ನು ಮಾಡಿದರೆ ನಾಡಿಗೆ ಒಳಿತಾಗುತ್ತದೆಯೋ ಅಂತಹ ಕೆಲಸಗಳನ್ನು ನಾಯಕರಾದವರು ಮಾಡಬೇಕು. ನಮಗೆ ಕೊಟ್ಟ ಜವಾಬ್ದಾರಿಯಲ್ಲಿ ಅತ್ಯುತ್ತಮ ಕೆಲಸವನ್ನು ನಿರ್ವಹಿಸಿ ಜನಸೇವೆ ಮಾಡಬೇಕು ಎಂದು ಉಪಮುಖ್ಯಮಂತ್ರಿಗಳಾದ ಡಾ. ಅಶ್ವತ್ಥನಾರಾಯಣ ಹೇಳಿದರು. ಮಲ್ಲೇಶ್ವರದ ಹವ್ಯಕ ಸಭಾಭವನದಲ್ಲಿ ಶ್ರೀಅಖಿಲ ಹವ್ಯಕ ಮಹಾಸಭೆ ಹಾಗೂ ಡಾ. ಅಶ್ವತ್ಥನಾರಾಯಣ್ ಅಭಿಮಾನಿ  ಬಳಗದ ಸನ್ಮಾನವನ್ನು ಹಾಗೂ ಹವ್ಯಕ ಮಹಾಸಭೆಯ ಗೌರವವನ್ನು ಸ್ವೀಕರಿಸಿ ಮಾತನಾಡಿದ ಘನ ಸರ್ಕಾರದ ಉಪಮುಖ್ಯಮಂತ್ರಿಗಳಾದ ಡಾ. ಅಶ್ವತ್ಥನಾರಾಯಣ್ ಅವರು, ನಾವು ನೀಡುತ್ತಿರುವ ಶಿಕ್ಷಣದ ಕಾರಣದಿಂದಾಗಿ ಸಮಾಜದಲ್ಲಿ […]

Continue Reading

ಗೋಸ್ವರ್ಗದಲ್ಲಿ ನಡೆದ ಅಚ್ಚರಿಯೇನು?

ಗೋಸ್ವರ್ಗ: ಸಹಸ್ರ ಗೋವುಗಳ ಆಶ್ರಯ ತಾಣವಾದ ಗೋಸ್ವರ್ಗದಲ್ಲಿ ಕಪಿಲೆ ಗೋವು ಅವಳಿ ಜವಳಿ ಕರು ಹಾಕುವ ಮೂಲಕ ಅಚ್ಚರಿ ನಡೆದಿದೆ.   ಸುಮಾರು 16 ವರ್ಷ ಮಲೆನಾಡುಗಿಡ್ಡ ತಳಿಯ ಕಪಿಲೆ ಗೋವು ಈ ರೀತಿಯ ಅಚ್ಚರಿಗೆ ಕಾರಣವಾಗಿದೆ. 12 ಕರು ಹಾಕಿರುವ ಈ ದನ ಪ್ರಸ್ತುತ 13ನೇ ಕರುವಿಗೆ ಜನ್ಮನೀಡಿದೆ.   ಎರಡೂ ಹೆಣ್ಣು ಕರುಗಳಾಗಿದ್ದು, ತಾಯಿ ಹಾಗೂ ಕರುಗಳು ಆರೋಗ್ಯ ದಿಂದ ಇವೆ. ಇದರಿಂದ ಗೋಸ್ವರ್ಗ ಎಲ್ಲರ ಆಕರ್ಷಣೆಯ ಕೇಂದ್ರವಾಗಿದೆ.

Continue Reading

ಗೋವಿನ ಮೇವಿಗಾಗಿ ಗೋಪ್ರೇಮಿಗಳು ಮಾಡಿದ್ದೇನು?

ಬಜಕೂಡ್ಲು: ಬಜಕೂಡ್ಲು ಅಮೃತಧಾರಾ ಗೋಶಾಲೆಯಲ್ಲಿರುವ ಗೋವುಗಳ ಉದರಂಭರಣಕ್ಕಾಗಿ ಸಾರ್ವಜನಿಕ ಸ್ಥಳದಲ್ಲಿ ಹಾಳಾಗಿ ಹೋಗುವ ಹಸಿ ಹುಲ್ಲನ್ನು ಶ್ರಮಸೇವೆಯ ಮೂಲ ಕತ್ತರಿಸಿ ಕೊಡುವ ಮಹಾ ಕಾರ್ಯ ಅ.13ರ ಭಾನುವಾರ ವಿದ್ಯಾನಗರ ಕುರುಡರಶಾಲೆಯ ಮುಂಭಾಗದ ಮಹಾತ್ಮಗಾಂಧಿ ಕಾಲೊನಿಯಲ್ಲಿ ನಡೆಯಿತು.   ಕಾಸರಗೋಡು ವಲಯಾಧ್ಯಕ್ಷ ಅರ್ಜುನಗುಳಿ ಶಂಕರನಾರಾಯಣ ಭಟ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಕಾಮದುಘಾ ವಿಭಾಗದ ಡಾ. ವೈ.ವಿ.ಕೃಷ್ಣಮೂರ್ತಿ ಮತ್ತು ಕಿರಣಮೂರ್ತಿ ದಂಪತಿಗಳ ಪುತ್ರ ಅಶ್ವಿನಿರಮಣ ಅವರು ಸಾಗಾಟದ ಖರ್ಚು ನೀಡುವ ಮೂಲಕ ಜನ್ಮದಿನವನ್ನು ಆಚರಿಸಿದರು. ಕಾಸರಗೋಡು ಸೇವಾ ಪಧಾನ ಮುರಳಿ […]

Continue Reading

ಸಂಪಾದಕರ ಜತೆ ಶ್ರೀಸಂವಾದ

ಗಿರಿನಗರ: ಶ್ರೀಮಜ್ಜಗದ್ಗುರುಶಂಕರಾಚಾರ್ಯಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿಯವರ ಪೀಠಾರೋಹಣಕ್ಕೆ 25 ಸಂವತ್ಸರಗಳು ತುಂಬಿರುವ ಹಿನ್ನೆಲೆಯಲ್ಲಿ ಶ್ರೀಮಠದ ಕಾಲು ಶತಮಾನದ ಕಾರ್ಯಚಟುವಟಿಕೆಗಳ ಸಿಂಹಾವಲೋಕನ, ಮುಂದಿನ ಕಾರ್ಯಯೋಜನೆಗಳ ಬಗ್ಗೆ ಚಿಂತನ-ಮಂಥನಕ್ಕೆ ವೇದಿಕೆ ಕಲ್ಪಿಸುವ ಸಲುವಾಗಿ ನಾಡಿನ ಪ್ರಮುಖ ಪತ್ರಿಕೆಗಳ ಸಂಪಾದಕರು, ಮಾಧ್ಯಮಸಂಸ್ಥೆಗಳ ಮುಖ್ಯಸ್ಥರ ಜತೆಗೆ ಶ್ರೀಗಳ ಸಂವಾದ ಕಾರ್ಯಕ್ರಮವನ್ನು ಪುನರ್ವಸು ಭವನದಲ್ಲಿ ಗುರುವಾರ (ಅಕ್ಟೋಬರ್ 10) ಹಮ್ಮಿಕೊಳ್ಳಲಾಗಿತ್ತು.   ಇದುವರೆಗೆ ಶ್ರೀಮಠ ರಾಮಾಯಣ ಮಹಾಸತ್ರ, ವಿಶ್ವ ಗೋಸಮ್ಮೇಳನ, ಗೋಯಾತ್ರೆಯಂಥ ಬೃಹತ್ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೆ, ಇನ್ನು ಮುಂದೆ ಸಮಾಜದ ಸರ್ವಾಂಗೀಣ ಪ್ರಗತಿಯ ಉದ್ದೇಶದ ಬೃಹತ್ ಯೋಜನೆಗಳನ್ನು ಕಾಲಮಿತಿಯಲ್ಲಿ […]

Continue Reading

ಗೋಗಳಿಗೆ ಸ್ವರ್ಗಸಂಗೀತ !

ಗೋಸ್ವರ್ಗ: ಗೋಸ್ವರ್ಗದ ಪುಣ್ಯ ಪರಿಸರದಲ್ಲಿನ ಗೋಪದ ವೇದಿಕೆಯಲ್ಲಿ ಸ್ವರ್ಗಸಂಗೀತವೆಂಬ ವಿಶಿಷ್ಟ ಕಾರ್ಯಕ್ರಮ ವಿಜಯದಶಮಿಯ ಪರ್ವಕಾಲದಲ್ಲಿ ಶುಭಾರಂಭಗೊಂಡಿತು.   ಪ್ರತಿಫಲಾಪೇಕ್ಷೆ ಇಲ್ಲದೇ, ಸಭೀಕರ ನಿರೀಕ್ಷೆಯೂ ಇಲ್ಲದೆ ಕೇವಲ ಗೋವುಗಳ ಸಂತೋಷಕ್ಕಾಗಿ ಸಹಸ್ರಗೋವುಗಳ ಆಲಯದಲ್ಲಿ ಕಲಾವಿದರು ಸಂಗೀತ ಸೇವೆಗೈಯುತ್ತಾರೆ. ಗೋವುಗಳ ಸಂತೋಷಕ್ಕಾಗಿ ನಡೆಯುವ ಸಂಗೀತ ಸೇವೆಯೇ ಸ್ವರ್ಗಸಂಗೀತ. ಮಾಸಿಕವಾಗಿ ನಡೆಯುವ ಈ ಸ್ವರ್ಗಸಂಗೀತದಲ್ಲಿ ನಾಡಿನ ಕಲಾವಿದರಿಗೆ ಗೋಮಾತೆಯ ಪದತಲದಲ್ಲಿ ಕಲಾಸೇವೆಯನ್ನು ಸಮರ್ಪಿಸಲು ಸುವರ್ಣಾವಕಾಶ ಇದಾಗಿದೆ.   ವಿಜಯದಶಮಿಯಂದು ನಡೆದ ಪ್ರಥಮ ಸ್ವರ್ಗಸಂಗೀತ ಕಾರ್ಯಕ್ರಮದಲ್ಲಿ ಹಿಂದೂಸ್ಥಾನಿ ಗಾಯಕ ರಾಜೇಂದ್ರ ಬಾಳೇಹಳ್ಳಿಯವರ ಸಂಗೀತ […]

Continue Reading