ಗುಂಪೆ ಹವ್ಯಕ ವಲಯ ಸಭೆ

ಗುಂಪೆ: ಮುಳ್ಳೇರಿಯಾ ಮಂಡಲಾಂತರ್ಗತ ಗುಂಪೆ ವಲಯದ ಸಭೆ ಹಳಕೋಡ್ಲು ಘಟಕದ ಅಧ್ಯಕ್ಷರಾದ ಗಣಪತಿ ಭಟ್ ಅವರ ನಿವಾಸದಲ್ಲಿ ನ.೩ರಂದು ಜರಗಿತು. ಅಧ್ಯಕ್ಷತೆಯನ್ನು ವಲಯಾಧ್ಯಕ್ಷರಾದ ಅಮ್ಮಂಕಲ್ಲು ರಾಮ ಭಟ್ ವಹಿಸಿದರು. ವಲಯ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಬೆಜಪ್ಪೆ ಗತ ಸಭೆಯ ವರದಿ, ಮಹಾಮಂಡಲ ಸುತ್ತೋಲೆ,ಮಂಡಲ ವರದಿಗಳನ್ನು ಮಂಡಿಸಿದರು. ಪದಾಧಿಕಾರಿಗಳು ವಹಿಸಿಕೊಂಡಿರುವ ಜವಾಬ್ದಾರಿಗಳನ್ನು ನಿರ್ವಹಿಸಲು ವಿಭಾಗವಾರು ಮಾಹಿತಿಗಳನ್ನು ನೀಡಿದರು. ಜನವರಿ ತಿಂಗಳಿನಲ್ಲಿ ಸಮರ್ಪಿಸುವ ದೀಪಕಾಣಿಕೆ,ಗುರುಕುಲ ಕಾಣಿಕೆ, ಹಾಗೂ ಬೆಳೆ ಸಮರ್ಪಣೆ, ಉತ್ಸವ ಕಾಣಿಕೆಯ ಬಗ್ಗೆ ಮಾಹಿತಿ ನೀಡಿ ಮಾಹಿತಿ ನೀಡಿ, […]

Continue Reading

ಪ್ರತಿಭಾ ಪುರಸ್ಕಾರ – ಸನ್ಮಾನ ಕಾರ್ಯಕ್ರಮ

ವಿಟ್ಲ: ಮಂಗಳೂರು ಹವ್ಯಕ ಮಂಡಲಾಂತರ್ಗತ ವಿಟ್ಲ ಹವ್ಯಕ ವಲಯದ ೨೧ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಪದೋನ್ನತಿ ಹೊಂದಿದ ವಲಯ ಕೋಶಾಧಿಕಾರಿಯವರ ಸಮ್ಮಾನ ಸಮಾರಂಭ ವಿಟ್ಲ ಬೊಬ್ಬೆಕೇರಿ ಸೌಪರ್ಣಿಕಾ ಸಭಾಭವನದಲ್ಲಿ ಭಾನುವಾರ ನಡೆಯಿತು. ಮಂಗಳೂರು ಹವ್ಯಕ ಮಂಡಲ ಅಧ್ಯಕ್ಷ ಗಣೇಶಮೋಹನ ಕಾಶಿಮಠ ಅಧ್ಯಕ್ಷತೆ ವಹಿಸಿ, ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಸಂಘಟನೆ ಬಲಿಷ್ಠವಾಗಿದೆ. ಪರಂಪರೆಯ ಮಹತ್ವವನ್ನು ಸಾರುತ್ತ, ಆಧ್ಯಾತ್ಮಿಕ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸಾಧನೆಯನ್ನು ಸಮಾಜಕ್ಕೆ ಅರ್ಪಿಸಿದ ಅವರು ದೇಸೀ ಗೋಸಂರಕ್ಷಣೆಗೆ ಮಹತ್ವದ […]

Continue Reading

ಬಜಕೂಡ್ಲು ಗೋಪಾಷ್ಟಮೀ ಮಹೋತ್ಸವ

ಬಜಕೂಡ್ಲು: ಅಮೃತಧಾರಾ ಗೋಶಾಲೆಯಲ್ಲಿ ಕಾರ್ತಿಕ ಶು.ಪಾಡ್ಯದಿಂದ ಅಷ್ಟಮೀವರೆಗೆ ನಡೆಯುವ ಗೋಮಾತಾಸಪರ್ಯಾ ಹಾಗೂ ಗೋಪಾಷ್ಟಮೀ ಮಹೋತ್ಸವ ದ ಏಳನೆಯ ದಿನದ ವಿವಿಧ ಕಾರ್ಯಕ್ರಮ ನಡೆಯಿತು. ನ.೩ರ ಆದಿತ್ಯವಾರದಂದು ಸಾಯಂಕಾಲ ೪.೩೦ ರಿಂದ ಗುರುವಂದನೆ, ದೇಶೀ ಹಸುವಿನ ಗೋಮಯನಿರ್ಮಿತ ಭವ್ಯ ಗೋವರ್ಧನ ಪರ್ವತದಲ್ಲಿ ಗೋಪಾಲಕೃಷ್ಣ ಪೂಜೆ, ಭಕ್ತರಿಂದ ವಿಷ್ಣುಸಹಸ್ರನಾಮ ಪಾರಾಯಣ, ಲಕ್ಷ್ಮೀನೃಸಿಂಹಕರಾವಲಂಬಸ್ತೋತ್ರ ಪಠಣ, ಗೋಪೂಜೆ, ತುಳಸೀಪೂಜೆ ಹಾಗೂ ದೀಪೋತ್ಸವ ಗಳನ್ನು ನಡೆಸುವ ಮೂಲಕ ಸಂಪನ್ನಗೊಂಡಿತು. ವಿಶೇಷವಾಗಿ ಶ್ರೀ ಲಕ್ಷ್ಮೀನೃಸಿಂಹಪೂಜೆ ಯನ್ನು ನೆರವೇರಿಸಲಾಯಿತು. ಪೆರ್ಲದ ಶ್ರೀದುರ್ಗಾ ಬಂಟ ಮಹಿಳಾ ಭಜನಾ ಸಂಘದವರು […]

Continue Reading

ವಿದ್ಯಾರ್ಥಿವಾಹಿನಿಯಿಂದ ವಿಕಸನ ಕಾರ್ಯಾಗಾರ

ಗಿರಿನಗರ: ಶ್ರೀರಾಮಚಂದ್ರಾಪುರಮಠದ ವಿದ್ಯಾರ್ಥಿವಾಹಿನಿಯಿಂದ ಹೊನ್ನಾವರ ಹಾಗೂ ಮುಳ್ಳೇರಿಯಾ ಮಂಡಲಗಳಲ್ಲಿ ವಿಕಸನ ಕಾರ್ಯಾಗಾರಗಳು ಭಾನುವಾರ ನಡೆಯಿತು. ಹೊನ್ನಾವರ ಮಂಡಲದ ಕಾರ್ಯಾಗಾರದಲ್ಲಿ ೭೭ ವಿದ್ಯಾರ್ಥಿ – ವಿದ್ಯಾರ್ಥಿನಿಯರು ಭಾಗವಹಿಸಿ ಕಾರ್ಯಾಗಾರದ ಸದುಪಯೋಗ ಪಡೆದುಕೊಂಡರು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಮಾಲತಿ ಪ್ರಕಾಶ, ವೇ. ಮೂ. ನೀಲಕಂಠ ಯಾಜಿ ಅವರು ಕಾರ್ಯಾಗಾರವನ್ನು ನಡೆಸಿಕೊಟ್ಟರು. ಮುಳ್ಳೇರಿಯಾ ಮಂಡಲದಲ್ಲಿ ೫೮ ವಿದ್ಯಾರ್ಥಿ – ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಉಂಡೇಮನೆ ವಿಶ್ವೇಶ್ವರ ಭಟ್, ವಿದ್ಯಾ. ಎಸ್. ಅವರು ಕಾರ್ಯಾಗಾರವನ್ನು ನಡೆಸಿಕೊಟ್ಟರು. ಹೊನ್ನಾವರ ಮಂಡಲದ ಕಾರ್ಯಾಗಾರದಲ್ಲಿ ೮೦ […]

Continue Reading

ಗೋವಿಗಾಗಿ ಮೇವು ಮೇವಿಗಾಗಿ ನಾವು

ಬಜಕೂಡ್ಲು: ಅಮೃತಧಾರಾ ಗೋಶಾಲೆಯಲ್ಲಿರುವ ಗೋವುಗಳ ಉದರಂಭರಣಕ್ಕಾಗಿ ಹಸಿಹುಲ್ಲನ್ನು ಕತ್ತರಿಸಿ ಕೊಡುವ ಕಾರ್ಯಕ್ರಮ ಕಾಸರಗೋಡು ವಲಯಾಧ್ಯಕ್ಷ ಅರ್ಜುನಗುಳಿ ಶಂಕರನಾರಾಯಣ ಭಟ್ ನೇತೃತ್ವದಲ್ಲಿ ನ.೩ರಂದು ಕಾಸರಗೋಡು ವಿದ್ಯಾನಗರ ಕುರುಡರಶಾಲೆಯ ಎದುರಿರುವ ಮಹಾತ್ಮಗಾಂಧಿ ಕಾಲೊನಿ ಯಲ್ಲಿ ನಡೆಯಿತು. ಕಾಸರಗೋಡು ವಲಯಾಧ್ಯಕ್ಷ ಯಸ್ ಯನ್ ಭಟ್ ಅರ್ಜುನಗುಳಿ, ವಲಯ ಕಾರ್ಯದರ್ಶಿ ಮಹಾಲಿಂಗೇಶ್ವರ ಭಟ್ ಮನ್ನಿಪ್ಪಾಡಿ, ಸಂಘಟನಾ ಕಾರ್ಯದರ್ಶಿ ಮಹೇಶ ಮನ್ನಿಪ್ಪಾಡಿ, ಶಿಷ್ಯ ಮಾಧ್ಯಮ ಪ್ರಧಾನ ಈಶ್ವರ ಭಟ್ ಕಿಳಿಂಗಾರು, ಗುಂಪೆ ವಲಯದ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಬೆಜಪ್ಪೆ, ವೈ.ಕೆ.ಗೋವಿಂದ ಭಟ್, ಸುಲೋಚನಾ ಕಾರಿಂಜ […]

Continue Reading

ಗೋವಿಗೆ ಮೇವು ಪೂರೈಕೆ

ಜೇಡ್ಲ: ಜಮೀನಲ್ಲಿ ವ್ಯರ್ಥವಾಗಿ ಹೋಗುತ್ತಿದ್ದ ಹಸಿ ಹುಲ್ಲನ್ನು ಜೇಡ್ಲ ಗೋಶಾಲೆಗೆ ನೀಡುವ ಕಾರ್ಯ ಸುಳ್ಯದಲ್ಲಿ ಶನಿವಾರ ನಡೆಯಿತು. ಸುಳ್ಯದ ಡಾ.ರಾಜಾರಾಮ ಅವರು ಇಬ್ಬರು ಕಾರ್ಮಿಕರಿಂದ ಕಟಾಯಿಸಿ ೯ ಕಟ್ಟ ಹುಲ್ಲನ್ನು ಉಬರಡ್ಕ ಸತ್ಯಶಂಕರ ಪರ್ತಜೆ ಇವರ ಓಮ್ನಿಯಲ್ಲಿ ಜೇಡ್ಲಕ್ಕೆ ಸಾಗಾಟ ಮಾಡಲಾಯಿತು. ಭಾನುವಾರವೂ ಇನ್ನಷ್ಟು ಕಟಾಯಿಸಿದ ಹುಲ್ಲು ಸಾಗಾಟಮಾಡಲಾಗಿವುದು. ಶಂಕರಿರಾಜ್ ಸುಳ್ಯ ಕಾರ್ಮಿಕರಿಗೆ ಊಟೋಪಚಾರ ವ್ಯವಸ್ಥೆಯನ್ನು ಮಾಡಿದ್ದರು.

Continue Reading

ಮಾತೃ ಭಾಷೆಯನ್ನು ಗೌರವಿಸಿ ಉಳಿಸಿ – ದೇವು ಹನೆಹಳ್ಳಿ

ನಂತೂರು: ನಾವು ನಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಗೌರವಿಸಬೇಕು. ಆಗ ನಾವು ಮತ್ತು ಭಾಷೆಯ ಅಭಿವೃದ್ದಿ ಸಾಧ್ಯ ಎಂದು ಮಂಗಳೂರು ಆಕಾಶವಾಣಿ ಕಾರ್ಯಕ್ರಮ ನಿರ್ದೇಶಕ ದೇವು ಹನೆಹಳ್ಳಿ ಹೇಳಿದರು.   ಅವರು ನ.೨ರಂದು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಆಶ್ರಯ ದಲ್ಲಿ ಶ್ರೀ ಭಾರತೀ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.   ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಸೇವಾ ಸಮಿತಿ ಕಾರ್ಯದರ್ಶಿ ಶ್ರೀಕೃಷ್ಣ ನೀರಮೂಲೆ ಮಾತನಾಡಿ, ನಮ್ಮ ಕಾಲೇಜಿನಲ್ಲಿ ಎಲ್ಲಾ ಆಚರಣೆಗಳು […]

Continue Reading

ಕನ್ಯಾನದಲ್ಲಿ ರಾಮಾಯಣ ಪಾರಾಯಣ

ಕನ್ಯಾನ: ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ಸಂಕಲ್ಪದಂತೆ ಅ.೨೧ರಂದು ಪ್ರಾರಂಭಿಸಿ ಅ.೨೯ g ವರೆಗೆ ಕನ್ಯಾನ ಹವ್ಯಕ ವಲಯದಲ್ಲಿ ರಾಮಾಯಣ ಪಾರಾಯಣ ನಡೆಯಿತು.   ದೇಲಂತಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಮಂಗಳವಾರ ಪ್ರತಿ ರುದ್ರ ಪಾರಾಯಣ ಮತ್ತು ವಿಷ್ಣು ಸಹಸ್ರನಾಮ ಪಠಣದೊಂದಿಗೆ ಸಮಾಪನಗೊಂಡಿದೆ. ರಾಮಾಯಣದ ಅರ್ಥವಿವರಣೆಯನ್ನು ವೇದಮೂರ್ತಿ ಶಂಕರ ಭಟ್ಟರು ನೆರವೇರಿಸಿದರು.   ಸಮಾರೋಪ ಸಮಾರಂಭದಲ್ಲಿ ಕನ್ಯಾನ ಹವ್ಯಕ ವಲಯ ಅಧ್ಯಕ್ಷ ಈಶ್ವರಪ್ರಸಾದ್, ಕಾರ್ಯದರ್ಶಿ ರವಿಶಂಕರ ಪನೆಯಡ್ಕ ಮತ್ತು ಪದಾಧಿಕಾರಿಗಳು, ಗುರಿಕ್ಕಾರರು ಹಾಗೂ ಸರ್ವ ಸದಸ್ಯರು […]

Continue Reading

ಶ್ರೀಭಾರತೀ ವಿದ್ಯಾಲಯದಲ್ಲಿ ಮಾತಾ ಪಿತೃಪೂಜೆ

ಹಂಪಿನಗರ: ಶ್ರೀರಾಮಚಂದ್ರಾಪುರಮಠದ ಅಂಗಸಂಸ್ಥೆಯಾದ ಶ್ರೀಭಾರತೀ ವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ನೂರಾರು ವಿದ್ಯಾರ್ಥಿಗಳು ತಮ್ಮ ಜನ್ಮದಾತರಿಗೆ ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದರು.   ಕಣ್ಮರೆಯಾಗುತ್ತಿರುವ ಭಾರತೀಯ ಸಂಸ್ಕೃತಿಯನ್ನು ನೆನಪಿಸುವ ಉದ್ದೇಶದಿಂದ ಪರಮಪೂಜ್ಯ ಶ್ರೀಮಜ್ಜಗದ್ಗುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ದಿವ್ಯ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಜಗತ್ಪಾಲಕರಾದ ಪಾರ್ವತಿ ಪರಮೇಶ್ವರರಿಗೆ ಷೋಡಶೋಪಚಾರ ಪೂಜೆಯನ್ನು ಸಲ್ಲಿಸಲಾಯಿತು. ವಿದ್ಯಾರ್ಥಿಗಳು ತಾವು ಪಾಲಕರನ್ನು ನೋಡಿಕೊಳ್ಳುವುದಾಗಿ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು. ಸಂಸ್ಕಾರದ ಬೆಳಕಿನಲ್ಲಿ ಸಾಧನೆಯ ಹೆಜ್ಜೆಯನ್ನಿಡುವಂತೆ ಸಹಕರಿಸುವ ತಾಯಿ ತಂದೆಯರನ್ನು ಬದುಕಿಡೀ ಸಲಹುವ ಶಪಥವನ್ನು […]

Continue Reading

ಬಜಕೂಡ್ಲುವಿನಲ್ಲಿ ಗೋಪಾಷ್ಟಮೀ ಮಹೋತ್ಸವ

ಬಜಕೂಡ್ಲು: ಅಮೃತಧಾರಾ ಗೋಶಾಲೆಯಲ್ಲಿ ಅ.೨೮ರಿಂದ ನ.೪ರವರೆಗೆ ನಡೆಯುವ ಗೋಮಾತಾಸಪರ್ಯಾ ಹಾಗೂ ಗೋಪಾಷ್ಟಮೀ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.   ಗುರುವಂದನೆ, ದೇಶೀ ಹಸುವಿನ ಗೋಮಯನಿರ್ಮಿತ ಭವ್ಯ ಗೋವರ್ಧನ ಪರ್ವತದಲ್ಲಿ ಗೋಪಾಲಕೃಷ್ಣ ಪೂಜೆ, ವಿಷ್ಣುಸಹಸ್ರನಾಮ ಪಾರಾಯಣ, ಲಕ್ಷ್ಮೀನೃಸಿಂಹಕರಾವಲಂಬಸ್ತೋತ್ರ ಪಠಣ, ಗೋಪೂಜೆ, ತುಳಸೀಪೂಜೆ ಹಾಗೂ ದೀಪೋತ್ಸವ ಮಹಾಮಂಡಲ ಧರ್ಮಕರ್ಮ ಖಂಡದ ಸಂಯೋಜಕರಾದ ವೇ. ಮೂ. ಕೇಶವಪ್ರಸಾದ ಕೂಟೇಲು ಇವರ ನೇತೃತ್ವದಲ್ಲಿ ವಲಯ, ಮಂಡಲ ಮತ್ತು ಗೋಶಾಲಾ ಪದಾಧಿಕಾರಿಗಳು ಹಾಗೂ ಗೋಭಕ್ತರ ಸಹಭಾಗಿತ್ವದಲ್ಲಿ ಸಂಪನ್ನಗೊಂಡಿತು.   ಕಾರ್ಯಕ್ರಮಗಳು ನ.೩ರವರೆಗೆ ಪ್ರತಿದಿನ ಸಾಯಂಕಾಲ […]

Continue Reading

ಬಜಕೂಡ್ಲು ಅಮೃತಧಾರಾ ಗೋಶಾಲೆ ಗೋವಿಗೆ ಮೇವು

ಬಜಕೂಡ್ಲು: ಗೋವಿನ ಮೇವಿಗಾಗಿ ಕಾರ್ಯಕ್ರಮದಡಿಯಲ್ಲಿ ಪಡಿಯಡ್ಪು ಮಹೇಶ ಭಟ್ ರ ಹಿತ್ತಲಿನ ಹಸಿ ಹುಲ್ಲನ್ನು ಕಟಾವು ಮಾಡಿ ಬಜಕೂಡ್ಲು ಅಮೃತಧಾರಾ ಗೋಶಾಲೆಗೆ ನೀಡಲಾಯಿತು.   ಪೆರಡಾಲ ವಲಯ ಅಧ್ಯಕ್ಷ ಪದ್ಮರಾಜ ಪಟ್ಟಾಜೆ ನೇತೃತ್ವದಲ್ಲಿ ಗುರುವಂದನೆ, ಗೋವಂದನೆ ಯೊಂದಿಗೆ ಸೇವಾ ಅರ್ಘ್ಯ ನಡೆಯಿತು. ಮಹೇಶ ಭಟ್ ದಂಪತಿಗಳು ಕಾರ್ಯಕರ್ತರಿಗೆ ಉಪಾಹಾರದವ್ಯವಸ್ಥೆ ಮಾಡಿದರು. ಅಜಿತ್ ಅವರ ವಾಹನದಲ್ಲಿ ಬಜಕೂಡ್ಲು ಗೋಶಾಲೆಗೆ ಮೇವನ್ನು ಸಾಗಿಸಲಾಯಿತು.   ಗೋವಿನ ಮೇವಿನ ರೂವಾರಿ ರಾಮಚಂದ್ರಾಪುರ ಮಠದ ಕಾಮದುಘ ಕಾರ್ಯದರ್ಶಿ ವೈ ವಿ ಕೃಷ್ಣ ಮೂರ್ತಿ, […]

Continue Reading

ಗೋಸ್ವರ್ಗ ದೀಪಾವಳಿ ವಿಶೇಷ ಗೋಪೂಜಾ ಕಾರ್ಯಕ್ರಮ

ಗೋಸ್ವರ್ಗ: ಶ್ರೀರಾಮದೇವ ಭಾನ್ಕುಳಿ ಮಠದ ಸಹಸ್ರ ಗೋವುಗಳ ಆಶ್ರಯ ತಾಣದಲ್ಲಿ ದೀಪಾವಳಿಯ ಅಂಗವಾಗಿ ವಿವಿಧ ಕಾರ್ಯಕ್ರಗಳು ನಡೆಯಿತು.   ಗೋಪೂಜೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಾಮೂಹಿಕ ಗೋಪೂಜೆ ಮೂಲಕ ನೂರಾರು ಭಕ್ತರು ಗೋಸೇವೆಗೈದರು. ತೀರ್ಥರಾಜ ಮಹಾಸ್ನಾನ ನೆರವೇರಿತು. ಗೋತುಲಾಭಾರ ಸೇವೆಯಲ್ಲಿ ಗೋವುಗಳ ಆಹಾರವಾದ ಹಿಂಡಿಯಿಂದ ತುಲಾಭಾರ ನಡೆಯಿತು.   ಗೋಸ್ವರ್ಗಕ್ಕೆ ಆಗಮಿಸುವ ಪ್ರವಾಸಿಗರಿಗೆ ದೇಸೀ ಗೋವಿನ ಉತ್ಪನ್ನಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಸ್ವರ್ಗಸುಧಾ ತಾಜಾ ಆಹಾರ ಮಳಿಗೆ ಚಾಲನೆ ನೀಡಲಾಯಿತು. ಸಿದ್ಧಾಪುರದ ತಹಸೀಲ್ದಾರರಾದ ಮಂಜುಳಾ ಭಜಂತ್ರಿ ಅವರು ಗೋಸ್ವರ್ಗಕ್ಕೆ […]

Continue Reading

ಪೆರಾಜೆ ಅಮೃತಾಧಾರ ಗೋಶಾಲೆಯಲ್ಲಿ ದೀಪಾವಳಿ ಆಚರಣೆ

ಪೆರಾಜೆ: ಮಾಣಿ ಪೆರಾಜೆ ಅಮೃತಾಧಾರ ಗೋಶಾಲೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಗೋ ಪೂಜಾ ಕಾರ್ಯಕ್ರಮ ಶ್ರೀರಾಮಚಂದ್ರಾಪುರಮಠದ ಅರ್ಚಕರಾದ ವಿಘ್ನೇಶ್ವರ ಭಟ್ ಅವರ ನೇತೃತ್ವದಲ್ಲಿ ಜರಗಿತು.   ಗೋಮಾತೆಗೆ ವಿಶೇಷ ಗೋಪೂಜೆ,ಗೋಗ್ರಾಸ ಸೇವೆಗಳು ಜರಗಿತು. ಗೋಶಾಲೆಯ ಸೇವಾಸಮಿತಿಯ ಅಧ್ಯಕ್ಷರಾದ ಹಾರಕರೆ ನಾರಾಯಣ ಭಟ್, ಕಾರ್ಯದರ್ಶಿಗಳಾದ ಬಂಗಾರಡ್ಕ ಜನಾರ್ಧನ ಭಟ್, ಸಮಿತಿಯ ಸದಸ್ಯರಾದ ಮುದ್ರಜೆ ಗೋವಿಂದ ಭಟ್ ಮತ್ತು ಉಪ್ಪಿನಂಗಡಿ ಮಂಡಲದ ಸಹಾಯ ವಿಭಾಗದ ಮುಖ್ಯಸ್ಥರಾದ ಜಯಾನಂದ ಕೆ., ಪುತ್ತೂರಿನ ರಾಘವೇಂದ್ರ ಸ್ಟೋರ್ ನ ಮಾಲಕರಾದ ಸತ್ಯಶಂಕರ ಭಟ್ ಸಾಮೆತ್ತಡ್ಕ, […]

Continue Reading

ಮಾಲೂರಿನಲ್ಲಿ ದೀಪಾವಳಿ ಗೋಪೂಜೆ

ಮಾಲೂರು: ಗಂಗಾಪುರದ ಶ್ರೀ ರಾಘವೇಂದ್ರ ಗೋಆಶ್ರಮದಲ್ಲಿ ದೀಪಾವಳಿ ಗೋಪೂಜೆ ಕಾರ್ಯಕ್ರಮ ವೇ.‌ಮೂ. ಗೋಪಾಲಕೃಷ್ಣ ಕಾಕತ್ಕರ್ ಅವರ ನೇತೃತ್ವದಲ್ಲಿ ವಿಜ್ರಂಭಣೆಯಿಂದ ನಡೆಸಲಾಯಿತು.   ಬೆಳಗ್ಗೆ ಶ್ರೀ ಸಿದ್ಧಾಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಪಂಚಾಮೃತಾಭಿಷೇಕ ಸಹಿತ ಪೂಜೆ ನಡೆಯಿತು. ನಂತರ ಸುಮಾರು ಇನ್ನೂರಕ್ಕೂ ಹೆಚ್ಚು ಗೋಭಕ್ತರ ಸಮ್ಮುಖದಲ್ಲಿ ದೀಪಾವಳಿ ಗೋಪೂಜೆ ನಡೆಯಿತು.   ಮೂವತ್ಮೂರು ಕೋಟಿ ದೇವತೆಗಳ ಆವಾಸಸ್ಥಾನ ಸವತ್ಸ ಗೋವನ್ನು ಅಲಂಕೃತ ಮಂಟಪದಲ್ಲಿ ಪೂಜಿಸಲಾಯಿತು. ಗೋಪೂಜೆಯ ಮಹತ್ವವನ್ನು ಗೋಪಾಲಕೃಷ್ಣ ಕಾಕತ್ಕರ್ ವಿವರಿಸಿದರು.   ಗೋಆಶ್ರಮದ ಸಮಸ್ತ ಗೋವುಗಳಿಗೆ ಸೇವಾಕರ್ತರಾದ ಪರ್ತಜೆ […]

Continue Reading

ವಾಲ್ಮೀಕಿ ರಾಮಾಯಣ ಪಾರಾಯಣ

ಸಾಗರ: ಜೀವನ ಅರ್ಥವಾಗಲು, ಸಾರ್ಥಕವಾಗಲು ರಾಮಾಯಣ ಮಹಾಕಾವ್ಯ ಮಾರ್ಗದರ್ಶಕ ಎಂದು ಮಹಾಮಂಡಲ ವೈದಿಕ ಪ್ರಧಾನ ವೇದಮೂರ್ತಿ ನೀಲಕಂಠಯಾಜಿ ಹೇಳಿದರು. ಇಲ್ಲಿನ ಬನ್ನಿಕಟ್ಟೆ ರಸ್ತೆಯ ಶ್ರೀರಾಘವೇಶ್ವರ ಸಭಾಭವನದಲ್ಲಿಹೊಸನಗರದ ಶ್ರೀರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತಿಯವರ 1008 ವಾಲ್ಮೀಕಿ ರಾಮಾಯಣ ಪಾರಾಯಣ ಸಂಕಲ್ಪದ ಅಂಗವಾಗಿ ಹಮ್ಮಿಕೊಂಡ 21 ವೈದಿಕರಿಂದ ಪಾರಾಯಣ ಮಹಾಪರ್ವದ ಮಂಗಲೋತ್ಸವ ಅಂಗವಾಗಿ ಶನಿವಾರ ಹಮ್ಮಿಕೊಂಡ ಕಾರ‍್ಯಕ್ರಮದಲ್ಲಿಅವರು ಸಮಾರೋಪ ಭಾಷಣ ಮಾಡಿದರು. ವಿದ್ವಾನ್‌ ಎನ್‌.ಎಸ್‌.ಗಣಪತಿಭಟ್‌ ಮಾತನಾಡಿದರು. ವಾಲ್ಮೀಕಿ ಮಹಾಗ್ರಂಥಕ್ಕೆ ಸಾಮೂಹಿಕ ಮಂಗಳಾರತಿ ಮಾಡಲಾಯಿತು. ಸಭಾಭವನದ ಅಧ್ಯಕ್ಷ ಹರನಾಥ್‌ ರಾವ್‌ ಮತ್ತಿಕೊಪ್ಪ ಅಧ್ಯಕ್ಷತೆ […]

Continue Reading

ಗೋವಿಗಾಗಿ ಮೇವು – ಮೇವಿಗಾಗಿ ನಾವು

ಬಜಕೂಡ್ಲು: ಬಜಕೂಡ್ಲು ಅಮೃತಧಾರಾ ಗೋಶಾಲೆಯ ಗೋವುಗಳಿಗಾಗಿ ಹರಿಹರಭಜನಾಮಂದಿರ ಮಾಡತ್ತಡ್ಕದ ಪರಿಸರದಲ್ಲಿ ಹಿರಿಯರಾದ ಮಿಂಚಿನಡ್ಕ ಗೋವಿಂದ ಭಟ್ಟರ ನೇತೃತ್ವದಲ್ಲಿ ಅ.೨೭ರಂದು ಮೂರನೆಯ ಗೋವಿಗೆಮೇವು ಕಾರ್ಯಕ್ರಮ ನಡೆಯಿತು.   ಹರಿಹರ ಭಜನಾ ಸದಸ್ಯರರಾದ ಮಾಡತಡ್ಕ ಪ್ರವೀಣ ಕುಮಾರ ಯಂ, ಸಂತೋಷ ಆಣಬೈಲು, ಶಿವಪ್ರಸಾದ ಎ, ವೇಣುಗೋಪಾಲ ಮತ್ತು ವಾಹನ ಚಾಲಕ ಸತೀಶ ಯಂ. ಕಾಮದುಘಾ ಕಾರ್ಯದರ್ಶಿ ಡಾ.ವೈ.ವಿ.ಕೃಷ್ಣಮೂರ್ತಿ, ಮಂಡಲ ಸಂಘಟನಾ ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ, ಸಹಾಯ ಪ್ರಧಾನ ಮಹೇಶ ಸರಳಿ, ಪೆರಡಾಲ ವಲಯ ಅಧ್ಯಕ್ಷ ಪದ್ಮರಾಜ ಪಟ್ಟಾಜೆ, ಉಪಾಧ್ಯಕ್ಷ […]

Continue Reading

ಎಸ್‌ಎಪಿ ಲ್ಯಾಬ್‌ನ ಸಿಎಸ್ ಆರ್ ಯೋಜನೆಯ ಮೂಲಕ ಪಶು ಆಹಾರ

ಮಾಲೂರು: ಬೆಂಗಳೂರು ಎಸ್‌ಎಪಿ ಲ್ಯಾಬ್‌ನ ತಂತ್ರಜ್ಞರು ಸಂಸ್ಥೆಗಳ ಸಾಮಾಜಿಕ ಜವಾಬ್ದಾರಿಯಡಿಯಲ್ಲಿ ಶ್ರೀರಾಘವೇಂದ್ರ ಗೋಆಶ್ರಮಕ್ಕೆ 1.25 ಲಕ್ಷಕ್ಕೂ ಅಧಿಕ ಮೊತ್ತದ ಪಶು ಆಹಾರವನ್ನು ನೀಡಿದರು.   ಕಾಮದುಘಾ ಟ್ರಸ್ಟ್ ಅಧ್ಯಕ್ಷ ಡಾ. ವೈ. ವಿ. ಕೃಷ್ಣಮೂರ್ತಿ ಮಾತನಾಡಿ ಭಾರತೀಯ ಗೋ ತಳಿಗಳನ್ನು ಉಳಿಸುವ ಕಾರ್ಯ ನಮ್ಮೆಲ್ಲರಿಂದ ನಡೆಯಬೇಕಾಗಿದೆ. ದೇಶೀಯ ತಳಿಯಲ್ಲಿ ಸಿಗುವ ಎ2 ಹಾಲಿನಲ್ಲಿ ಔಷಧೀಯ ಗುಣಗಳಿದ್ದು, ಸೇವನೆಯಿಂದ ಆರೋಗ್ಯಕ್ಕೆ ಉತ್ತಮ ಎಂದರು.   ಸುಮಾರು 40ಕ್ಕೂ ಅಧಿಕ ತಂತ್ರಜ್ಞರು ಗೋಶಾಲೆಯ ಸ್ವಚ್ಛತೆ, ಆವರಣದ ಕಳೆ ಕೀಳುವ ಶ್ರಮ […]

Continue Reading

ನೂತನ ಘಟಕ ಸಮಿತಿ ರಚನೆ

ಮುಳ್ಳೇರಿಯಾ: ಚಂದ್ರಗಿರಿ ವಲಯದ ತಂಡ್ರಪಾರೆ ಘಟಕ ಸಭೆಯು ಘಟಕಾಧ್ಯಕ್ಷ ಕಾಕುಂಜೆ ಶಂಕರನಾರಾಯಣ ಭಟ್ಟರ ನಿವಾಸದಲ್ಲಿ ಅ.೨೦ರಂದು ಸಂಜೆ ನಡೆಯಿತು.   ವಲಯ ಅಧ್ಯಕ್ಷರಾದ ಸುಬ್ರಹ್ಮಣ್ಯ ಭಟ್ ಮೀನಗದ್ದೆ ಇವರು ಆಗಮಿಸಿ ಘಟಕ ಸಭೆಯ ರೂಪೀಕರಣದ ಮಾಹಿತಿ ನೀಡಿ, ನೂತನ ಘಟಕ ಸಮಿತಿ ರೂಪೀಕರಿಸಲಾಯಿತು. ಶ್ರೀ ಮಠದ ಯೋಜನೆಗಳು, ವಲಯದ ವ್ಯಾಟ್ಸಪ್ ಗಳ ರಚನೆ, ಮೂಲಮಠಗಳ ಕುರಿತಾದ ಮಾಹಿತಿ ನೀಡಲಾಯಿತು.   ಘಟಕ ಸಂಯೋಜಕರಾಗಿ ನರಸಿಂಹ ರಾಜ ಪಯ, ನಿರ್ದೇಶಕರಾಗಿ ಕಾಮಲ ಸುಬ್ರಹ್ಮಣ್ಯ ಭಟ್, ಶ್ರೀ ಕಾರ್ಯಕರ್ತರಾಗಿ ವೆಂಕಟ್ರಮಣ […]

Continue Reading

ಮಾತೃವಿಭಾಗದಿಂದ ಕುಂಕುಮಾರ್ಚನೆ, ವೈದಿಕವಿಭಾಗದಿಂದ ವೇದಪಠನ

ಭಾರತ: ಗೋವಾ ವಲಯದ ಮಾತೃವಿಭಾಗ ಹಾಗೂ ವೈದಿಕ ವಿಭಾಗಗಳ ಸಂಯೋಜನೆಯಲ್ಲಿ ಕುಂಕುಮಾರ್ಚನೆ ಹಾಗೂ ಮಂತ್ರಪಠನೆ ಕಾರ್ಯಕ್ರಮ ಅ.೨೦ರಂದು ಸುಕೂರಿನ ಶ್ರೀ ಮೋಹನ ಬರ್ವೆ ಅವರ ನಿವಾಸದಲ್ಲಿ ನಡೆಯಿತು.   ೧೬ ಮಾತೆಯರು ಲಲಿತಾಸಹಸ್ರನಾಮಪೂರ್ವಕ ಕುಂಕುಮಾರ್ಚನೆಯನ್ನು ನೆರವೇರಿಸಿದರು. ಶ್ರೀ ಲಕ್ಷ್ಮೀ ನೃಸಿಂಹ ಕರಾವಲಂಬ ಸ್ತೋತ್ರ ಇತ್ಯಾದಿ ಸ್ತೋತ್ರಗಳನ್ನು ಪಠಿಸಲಾಯಿತು. ಹನ್ನೊಂದು ಪುರುಷರು ವೇದಪಠನೆ ನೆರವೇರಿಸಿದರು.   ಕಾರ್ಯಕ್ರಮದ ನೇತೃತ್ವ ವಹಿಸಿದ್ದ ವೇ.ಮೂ. ಕೃಷ್ಣ ಭಟ್ಟರನ್ನು ಹಾಗೂ ಯಾಜಮಾನ್ಯ ವಹಿಸಿದ್ದ ಮೋಹನ ಬರ್ವೆ ಅವರನ್ನು ಗೋವಾ ಹವ್ಯಕ ವಲಯದ ಪರವಾಗಿ […]

Continue Reading

ಕಣ್ಣಿನ ಪೊರೆ ತಪಾಸಣಾ ಉಚಿತ ಶಿಬಿರ

ಮುಳ್ಳೇರಿಯಾ: ಶ್ರೀ ಭಾರತೀ ನೇತ್ರ ಚಿಕಿತ್ಸಾಲಯ ಮುಜುಂಗಾವು, ಶ್ರೀ ಮುಳಿಯಾರು ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರ, ಕಾಸರಗೋಡು ಜಿಲ್ಲಾಅಂಧತ್ವ ನಿವಾರಣಾಸಮಿತಿ ಇವರ ಆಶ್ರಯದಲ್ಲಿ ಚಂದ್ರಗಿರಿ ಹವ್ಯಕ ವಲಯದ ವತಿಯಿಂದ ಕಣ್ಣಿನ ಪೊರೆ ತಪಾಸಣಾ ಉಚಿತ ಶಿಬಿರವು ಮುಳಿಯಾರು ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಅ.೨೦ರಂದು ನಡೆಯಿತು.   ಶಿಬಿರದ ಉದ್ಘಾಟನೆಯನ್ನು ಮುಳಿಯಾರು ಶ್ರೀಸುಬ್ರಹ್ಹಣ್ಯ ಕ್ಷೇತ್ರದ ಮೊಕ್ತೇಸರರಾದ ಸೀತಾರಾಮ ಬಳ್ಳುಳ್ಳಾಯ ನಡೆಸಿದರು. ಶಿಬಿರದಲ್ಲಿ ನೇತ್ರತಜ್ಞರಾಗಿ ಡಾ ಉನೈಸ ಸಹಕರಿಸಿದರು. ಸಾರ್ವಜನಿಕರು ಶಿಬಿರದ ಸದುಪಯೋಗವನ್ನು ಪಡೆದರು. ಅರ್ಜುನಗುಳಿ ಯಸ್.ಯನ್.ಭಟ್ ಶುಭ ಹಾರೈಸಿದರು. ಶ್ರೀ […]

Continue Reading