ಇಸ್ಕಾನಿನ ಶ್ರೀ ಕಮಲಲೋಚನಜೀ ಬೇಟಿ
ಗೋಸ್ವರ್ಗ: ಮುಂಬಯಿ ಜುಹೂನಲ್ಲಿರುವ ಇಸ್ಕಾನಿನ ಶ್ರೀ ಕಮಲಲೋಚನಜೀ ಅವರು ಗೋಸ್ವರ್ಗಕ್ಕೆ ಭೇಟಿ ನೀಡಿದ್ದರು. ಕೇರಳದಿಂದ ಮುಂಬಯಿಗೆ ಹೊರಟಿದ್ದವರು ಗೋಸ್ವರ್ಗದ ಬಗ್ಗೆ ಮಾಹಿತಿ ಸಿಕ್ಕು ಶಿರಸಿಯಿಂದ ಬಂದು ಗೋಸ್ವರ್ಗವನ್ನು ವೀಕ್ಷಿಸಿ ಸಂಪೂರ್ಣ ಮಾಹಿತಿಗಳನ್ನು ಪಡೆದರು. ಶ್ರೀಸಂಸ್ಥಾನದವರ ಗೋರಕ್ಷಣಾ ಕಾರ್ಯದ ಕುರಿತು, ಗೋಸ್ವರ್ಗದ ಕಲ್ಪನೆಯ ಕುರಿತು ಹರ್ಷ ವ್ಯಕ್ತಪಡಿಸಿದರು. ಗೋವು ಉಳಿದರೆ ಮಾತ್ರ ಧರ್ಮದ ಉಳಿವು ಹಾಗಾಗಿ ಗೋಸಂರಕ್ಷಣಾ ಕಾರ್ಯ ಇನ್ನೂ ಚನ್ನಾಗಿ ನಡೆಯಲಿ ಎಂದು ತಿಳಿಸಿದರು.
Continue Reading